Homeಅಂತರಾಷ್ಟ್ರೀಯಇರಾನ್‌ನ ದಾಳಿಗೂ ಮೊದಲು ದೇಶ ತೊರೆದ ಇಸ್ರೇಲ್ ಪ್ರಧಾನಿಯ ಅಧಿಕೃತ ವಿಮಾನ!

ಇರಾನ್‌ನ ದಾಳಿಗೂ ಮೊದಲು ದೇಶ ತೊರೆದ ಇಸ್ರೇಲ್ ಪ್ರಧಾನಿಯ ಅಧಿಕೃತ ವಿಮಾನ!

- Advertisement -
- Advertisement -

ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ನಂತರ ‘ವಿಂಗ್ ಆಫ್ ಝಿಯಾನ್’ ಎಂದು ಕರೆಯಲ್ಪಡುವ ಪ್ರಧಾನಿ ನೆತನ್ಯಾಹು ಅವರ ಸರ್ಕಾರಿ ವಿಮಾನವು ಶುಕ್ರವಾರ ಮಧ್ಯಾಹ್ನ ಅಥೆನ್ಸ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದೆ ಎಂದು ಟಿಆರ್‌ಟಿ ವಲ್ಡ್‌ ವರದಿ ಮಾಡಿದೆ. ಇಸ್ರೇಲ್ ಮೇಲೆ ಇರಾನ್‌ ಪ್ರತಿಕಾರದ ದಾಳಿ ನಡೆಸಲಿದೆ ಎಂಬ ಸುದ್ದಿಗಳ ನಡುವೆ ‘ವಿಂಗ್ ಆಫ್ ಝಿಯಾನ್’ ದೇಶದಿಂದ ಹೊರಗೆ ಹೋಗಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ದೇಶ ತೊರೆದಿದ್ದಾರೆ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಇರಾನ್‌ನ ದಾಳಿಗೂ ಮೊದಲು

ಅಂತಾರಾಷ್ಟ್ರೀಯ ಭೇಟಿಗಳ ಸಮಯದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರ ಸರ್ಕಾರಿ ವಿಮಾನವಾಗಿ ಸೇವೆ ಸಲ್ಲಿಸುವ ಈ ವಿಮಾನವು “ಇರಾನಿನ ಪ್ರತೀಕಾರದ ದಾಳಿಯ ಭಯದ ನಡುವೆ” ಶುಕ್ರವಾರ ಬೆಳಿಗ್ಗೆ ಅಥೆನ್ಸ್‌ಗೆ ಹೊರಟಿದೆ ಎಂದು ದಿ ಜೆರುಸಲೆಂ ಪೋಸ್ಟ್ ವರದಿ ಹೇಳಿದೆ. ಏಪ್ರಿಲ್ 2024 ರಲ್ಲಿ ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿಯ ಸಮಯದಲ್ಲಿ, ಈ ವಿಮಾನವನ್ನು ಉತ್ತರ ನೆಗೆವ್‌ನಲ್ಲಿರುವ ನೆವಾಟಿಮ್ ವಾಯುನೆಲೆಯಿಂದ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ವಿಂಗ್ ಆಫ್ ಝಿಯಾನ್ ಗ್ರೀಸ್‌ಗೆ ತೆರಳಿದ ಸ್ವಲ್ಪ ಸಮಯದ ನಂತರ, ಇಸ್ರೇಲ್ ಸೇನಾ ವಕ್ತಾರ ಬ್ರಿಗೇಡಿಯರ್-ಜನರಲ್ ಎಫೀ ಡೆಫ್ರಿನ್ ಶುಕ್ರವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇರಾನ್ ಇಸ್ರೇಲ್ ಕಡೆಗೆ 100ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹಾರಿಸಿದೆ ಎಂದು ಹೇಳಿದ್ದರು.

ಅದಾಗ್ಯೂ, ವಿಂಗ್ ಆಫ್ ಜಿಯಾನ್ ವಿಮಾನದಲ್ಲಿ ಶುಕ್ರವಾರ ಗ್ರೀಸ್‌ನ ಇಸ್ರೇಲಿ ರಾಯಭಾರಿ ನೋಮ್ ಕಾಟ್ಜ್ ಅವರನ್ನು ಕರೆದೊಯ್ಯಲಾಗಿದ್ದು, ನಂತರ ಅಥೆನ್ಸ್‌ನಲ್ಲಿರುವ ವಿಮಾನ ಮಾಹಿತಿ ಪ್ರದೇಶದಲ್ಲಿ (ಎಫ್‌ಐಆರ್) ಇರಿಸಲಾಗಿದೆ ಎಂದು ಸುದ್ದಿ ಏಜನ್ಸಿ ಅನಡೋಲು ಹೇಳಿದೆ. ಈ ರಾಯಭಾರಿ ವಿಮಾನದಲ್ಲಿದ್ದ ಏಕೈಕ ಪ್ರಯಾಣಿಕ ಎಂದು ವರದಿ ಹೇಳಿದೆ.

ಇರಾನ್ ಮೇಲೆ ನಡೆಸಿದ ಬೃಹತ್ ದಾಳಿಯ ನಂತರ ಇಸ್ರೇಲ್ ತನ್ನ ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ವಾಣಿಜ್ಯ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಇದರ ನಂತರ ಝಿಯಾನ್ ವಿಮಾನವು ನೋಮ್ ಕಾಟ್ಜ್ ಅವರನ್ನು ಅಥೆನ್ಸ್‌ಗೆ ಕರೆತಂದಿತು ಎಂದು ವಿದೇಶಾಂಗ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್ ಗ್ರೀಸ್ ವರದಿ ಮಾಡಿದೆ.

ಗ್ರೀಸ್-ಇಸ್ರೇಲ್ ಮಿಲಿಟರಿ ಸಹಕಾರ ಒಪ್ಪಂದದ ಪ್ರಕಾರ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎರಡೂ ದೇಶಗಳ ವಿಮಾನಗಳನ್ನು ಆಯಾ ಮಿಲಿಟರಿ ವಿಮಾನ ನಿಲ್ದಾಣಗಳಲ್ಲಿ ಅಗತ್ಯವಿರುವಷ್ಟು ಕಾಲ ಸ್ಥಳಾಂತರಿಸಲು ಮತ್ತು ಉಳಿಯಲು ಅನುಮತಿಸುತ್ತದೆ ಎಂದು ವರದಿ ಹೇಳಿದೆ.

ಅದಾಗ್ಯೂ, ಇರಾನಿನ ಪ್ರದೇಶದೊಳಗೆ ಇಸ್ರೇಲ್ ಮಿಲಿಟರಿ ದಾಳಿಗಳನ್ನು ಪ್ರಾರಂಭಿಸಿದ ಕೆಲವೇ ಗಂಟೆಗಳ ನಂತರ ‘ವಿಂಗ್ ಆಫ್ ಝಿಯಾನ್’ ಬಗ್ಗೆ ಊಹಾಪೋಹಗಳು ಹರಡಿದವು. ಎಕ್ಸ್‌ನಲ್ಲಿರುವ ಬಳಕೆದಾರರು ವಿಮಾನಯಾನ ಮೇಲ್ವಿಚಾರಣಾ ಸೇವೆ FlightRadar24 ನಿಂದ ಸಾರ್ವಜನಿಕವಾಗಿ ಲಭ್ಯವಿರುವ ಡೇಟಾವನ್ನು ಬಳಸಿಕೊಂಡು ಗ್ರೀಸ್‌ನಲ್ಲಿ ವಿಮಾನದ ಮಾರ್ಗ, ಸಮಯ ಮತ್ತು ಅಂತಿಮವಾಗಿ ಇಳಿದ ಮಾರ್ಗಗಳನ್ನು ಟ್ರ್ಯಾಕ್ ಮಾಡಿದ್ದಾರೆ.

ಆದಾಗ್ಯೂ, ಈ ವಿಮಾನದಲ್ಲಿ ನೆತನ್ಯಾಹು ಅಥವಾ ಅವರ ಕುಟುಂಬದ ಯಾರಾದರೂ ಇದ್ದರೊ, ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಟಿಆರ್‌ಟಿ ವರದಿ ಹೇಳಿದೆ. ಭದ್ರತಾ ಪ್ರೋಟೋಕಾಲ್‌ಗಳು ಮತ್ತು ಸಂಭಾವ್ಯ ರಾಜತಾಂತ್ರಿಕ ಅಥವಾ ಮಿಲಿಟರಿ ಯೋಜನೆ ಸೇರಿದಂತೆ ಕ್ರಮದ ಹಿಂದಿನ ಹಲವಾರು ಸಂಭಾವ್ಯ ಕಾರ್ಯತಂತ್ರದ ಉದ್ದೇಶಗಳು ಇದರಲ್ಲಿ ಇರಬಹುದು ಎಂದು ಕೂಡಾ ವಿಶ್ಲೇಷಿಸಲಾಗುತ್ತಿದೆ.

ಜೊತೆಗೆ ಪೂರ್ವಭಾವಿ ಸುರಕ್ಷತಾ ಕ್ರಮವಾಗಿ ಹೀಗೆ ಮಾಡಲಾಗಿದೆ ಎಂದೂ ಕೂಡಾ ಹೇಳಲಾಗುತ್ತಿದ್ದು, ಇರಾನಿನ ಪ್ರತೀಕಾರದ ಅಪಾಯ ಹೆಚ್ಚಾದ ಕಾರಣ, ಇಸ್ರೇಲಿ ಅಧಿಕಾರಿಗಳು ಹಿರಿಯ ನಾಯಕತ್ವವನ್ನು ರಕ್ಷಿಸಲು ಈ ಭದ್ರತಾ ಪ್ರೋಟೋಕಾಲ್‌ಗಳನ್ನು ಜಾರಿಗೆ ತರುತ್ತಿರಬಹುದು ಎಂದೂ ಕೂಡಾ ಹೇಳಲಾಗಿದೆ.

ಅಥೆನ್ಸ್‌ನಲ್ಲಿ ನೆತನ್ಯಾಹು ಅವರ ವಿಮಾನವನ್ನು ಇರಿಸುವುದು ಇಸ್ರೇಲ್‌ನ ವಾಯು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುವ ಸಂಭಾವ್ಯ ಕ್ಷಿಪಣಿ ಅಥವಾ ಡ್ರೋನ್ ದಾಳಿ ವಲಯಗಳಿಂದ ಅದನ್ನು ತೆಗೆದುಹಾಕುವ ಲೆಕ್ಕಾಚಾರದ ಭಾಗವಾಗಿ ಇದನ್ನು ಮಾಡಿರಬಹುದು ಎಂದೂ ಕೂಡಾ ಹೇಳಲಾಗುತ್ತಿದೆ.

ಜೊತೆಗೆ, ಮುನ್ನೆಚ್ಚರಿಕೆ ಕ್ರಮವಾಗಿ ನೆತನ್ಯಾಹು ಅವರ ಕುಟುಂಬದ ಸದಸ್ಯರೊಂದಿಗೆ ಅಥೆನ್ಸ್‌ಗೆ ಪ್ರಯಾಣಿಸಿರಬಹುದು ಎಂಬ ಊಹಾಪೋಹವೂ ಇದೆ. ಪ್ರತೀಕಾರದ ಬೆದರಿಕೆ ಇರುವ ಸಂದರ್ಭಗಳಲ್ಲಿ, ರಾಷ್ಟ್ರೀಯ ನಾಯಕರು ಪ್ರಮುಖ ವ್ಯಕ್ತಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸುವುದು ಇದು ಮೊದಲೇನಲ್ಲ, ವಿಶೇಷವಾಗಿ ಗುಪ್ತಚರವು ಅಪಾಯವನ್ನು ಗುರುತಿಸಿದ್ದರೆ ಇದನ್ನು ಮಾಡಲಾಗುತ್ತದೆ ಎಂದು ಟಿಅರ್‌ಟಿ ವಲ್ಡ್‌ ಹೇಳಿದೆ.

ಇಸ್ರೇಲಿ ಅಧಿಕಾರಿಗಳು ವಿಮಾನದಲ್ಲಿ ಪ್ರಧಾನಿ ಮತ್ತು ಅವರ ಆಂತರಿಕ ವಲಯದ ಅವರ ಇರುವಿಕೆಯನ್ನು ದೃಢೀಕರಿಸದಿದ್ದರೂ, ಹಾರಾಟದ ಸಮಯ ಮತ್ತು ಈಗ ವಿಮಾನ ಇರುವ ಸ್ಥಳವು ಪ್ರಧಾನ ಮಂತ್ರಿ ಮತ್ತು ಅವರ ಆಂತರಿಕ ವಲಯವನ್ನು ರಕ್ಷಿಸುವ ಭದ್ರತಾ ಕಾರ್ಯತಂತ್ರದ ಭಾಗವಾಗಿ ಇದನ್ನು ಮಾಡಲಾಗಿದೆ ಎಂಬ ಊಹಾಪೋಹಗಳು ಹರಡಿವೆ.

ಇಸ್ರೇಲ್ ಮೇಲೆ ಇರಾನ್‌ನ ಪ್ರತಿದಾಳಿ ನಡೆಯಲಿದೆ ಎಂದು ಖಚಿತವಾದ್ದರಿಂದ ಪ್ರಧಾನಿ ನೆತನ್ಯಾಹು ಮತ್ತು ಅಮೇರಿಕನ್ ಮಿಲಿಟರಿ ಅಥವಾ ಗುಪ್ತಚರ ಅಧಿಕಾರಿಗಳ ನಡುವೆ ಉನ್ನತ ಮಟ್ಟದ, ವೈಯಕ್ತಿಕ ಸಮನ್ವಯಕ್ಕಾಗಿ ಅಥೆನ್ಸ್ ಅನ್ನು ತಟಸ್ಥ ಮತ್ತು ಸುರಕ್ಷಿತ ಸ್ಥಳವಾಗಿ ಆಯ್ಕೆ ಮಾಡಿರಬಹುದು ಎಂಬ ಊಹಾಪೋಹಗಳೂ ಹರಡಿವೆ. ಪ್ರಧಾನಿ ನೆತನ್ಯಾಹು ಅವರ ಸ್ಥಳ ಅಥವಾ ಹಾರಾಟದ ಉದ್ದೇಶವನ್ನು ದೃಢೀಕರಿಸುವ ಯಾವುದೇ ಅಧಿಕೃತ ಹೇಳಿಕೆಯಿಲ್ಲದೆ, ಅಥೆನ್ಸ್‌ನಲ್ಲಿ ಪ್ರಧಾನಿಯ ವಿಮಾನ ನಿಲುಗಡೆಯಾಗಿದ್ದರ ಹಿಂದಿನ ನಿಜವಾದ ಉದ್ದೇಶದ ಬಗ್ಗೆ ಪ್ರಶ್ನೆಗಳು ಮುಂದುವರೆದಿವೆ. ಇರಾನ್‌ನ ದಾಳಿಗೂ ಮೊದಲು

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಗಾಝಾ ಸಂಘರ್ಷದಲ್ಲಿ ಭಾರತ ಒಂಟಿಯಾಗಿ ನಿಂತಿದೆ: ಮಲ್ಲಿಕಾರ್ಜುನ ಖರ್ಗೆ

ಗಾಝಾ ಸಂಘರ್ಷದಲ್ಲಿ ಭಾರತ ಒಂಟಿಯಾಗಿ ನಿಂತಿದೆ: ಮಲ್ಲಿಕಾರ್ಜುನ ಖರ್ಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...