Homeಮುಖಪುಟಘೋಷಣೆ ಮಾತ್ರ ಸಾಲದು, ಕಾರ್ಯಗತದ ಹಾಗೂ ರೈತರ ಬಗ್ಗೆ ಅಷ್ಟೇ ಮುತುವರ್ಜಿ ಅಗತ್ಯ

ಘೋಷಣೆ ಮಾತ್ರ ಸಾಲದು, ಕಾರ್ಯಗತದ ಹಾಗೂ ರೈತರ ಬಗ್ಗೆ ಅಷ್ಟೇ ಮುತುವರ್ಜಿ ಅಗತ್ಯ

ಇಂದು ದೇಶದಲ್ಲಿ ಹಸಿವು, ಅಪೌಷ್ಟಿಕತೆಗಳು ಒಂದು ಕಡೆ ತಾಂಡವಾಡುತ್ತಿದ್ದರೆ ಇನ್ನೊಂದೆಡೆ ಆಹಾರ ಉತ್ಪನ್ನಗಳು ಬೇಡಿಕೆ ಇಲ್ಲದೆ ಕೊಳೆಯುವಂತಾಗಿದೆ. ಬೆಲೆ ಇಲ್ಲದೆ ರೈತರು ಹಣ್ಣು-ತರಕಾರಿ, ಹಾಲನ್ನು ರಸ್ತೆಗೆ ತಂದು ಸುರಿಯುವ ಪರಿಸ್ಥಿತಿ ಬಂದಿದೆ. ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿರುವ ಈ ವೈರುಧ್ಯ ಹಂಚಿಕೆ ಬಗೆಗಿನ ನಿರ್ಲಕ್ಷವನ್ನು ಮರುಚಿಂತನೆಗೆ ಒಳಪಡಿಸಬೇಕಾಗಿತ್ತು.

- Advertisement -
- Advertisement -

ಪ್ರಧಾನಮಂತ್ರಿಗಳ ಬೃಹತ್ 20 ಲಕ್ಷ ಕೋಟಿ “ಆತ್ಮ ನಿರ್ಭರ ಭಾರತ” ನಿರ್ಮಾಣ ಕಾರ್ಯಕ್ರಮದ ಅಂಗವಾಗಿ ಮೂರನೇ ಹಂತದ ಪ್ಯಾಕೇಜ್ ಮೂಲಕ ವಿತ್ತಸಚಿವೆ ನಿರ್ಮಲಾ ಸೀತಾರಾಮ್ ಕೃಷಿ ವಲಯಕ್ಕೆ ನೀಡಿರುವ ನೆರವು, ಮಾಡಿರುವ ಘೋಷಣೆ ದೊಡ್ಡ ಪ್ರಮಾಣದಲ್ಲಿದೆ.

ಹಾಗಿದ್ದರೂ ಈ ಬಗ್ಗೆ ಪರಸ್ಪರ ಪ್ರಬಲ ವಿರೋಧಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಒಂದು ಉತ್ಪಾದನಾ ವಲಯವಾಗಿ ಕೃಷಿ ಹಾಗೆ ಅದರಲ್ಲಿ ತೊಡಗಿರುವ ರೈತಾಪಿ ವರ್ಗ ಈ ಎರಡನ್ನು ಪ್ರತ್ಯೇಕವಾಗಿ ನೋಡಿ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸದಿರುವುದು ಇದಕ್ಕೆ ಕಾರಣವಾಗಿದೆ.

ಕೃಷಿ ವಲಯಕ್ಕೆ ಮೂಲ ಸೌಕರ್ಯ ಕಲ್ಪಿಸುವುದು, ಕರ್ನಾಟಕದ ರಾಗಿ, ಕಾಶ್ಮೀರದ ಕೇಸರಿವರೆಗೆ ಆಯಾ ರಾಜ್ಯದ ಹೆಗ್ಗಳಿಕೆಯ ಕಿರುಉತ್ಪನ್ನಗಳ ಪ್ರೋತ್ಸಾಹದಿಂದ ಜೇನು, ಗಿಡಮೂಲಿಕೆ ಕೃಷಿಗೆ ಪ್ರೋತ್ಸಾಹಿಸುವ ಸುಮಾರು 1.5 ಲಕ್ಷ ಕೋಟಿ ರೂಗಳ ಮೂರನೇ ಹಂತದ ಪ್ಯಾಕೇಜು ಹೊರ ಬಂದಿರುತ್ತದೆ. ಜೊತೆಗೆ 53 ಕೋಟಿ ಜಾನುವಾರುಗಳ ಆರೋಗ್ಯ ರಕ್ಷಣೆ, ಮತ್ಸ್ಯೋದ್ಯಮ ಸದೃಢಗೊಳಿಸುವ ಹಾಗೂ ಕ್ಷೀರ ವಲಯ ಎದುರಿಸುತ್ತಿರುವ ಪ್ರಮುಖ ಮೇವಿನ ಸಮಸ್ಯೆ ಪರಿಹಾರಕ್ಕೂ ಸಹಸ್ರಾರು ಕೋಟಿರೂಗಳನ್ನು ಘೋಷಿಸಲಾಗಿದೆ.

ಕೃಷಿ ವಲಯದ ಪುನಶ್ಚೇತನಕ್ಕೆ ಈ ಕಾರ್ಯಕ್ರಮಗಳು ಉಪಯುಕ್ತ ಎಂದು ತಜ್ಞರು ಸಂತಸ ವ್ಯಕ್ತಪಡಿಸಿದ್ದರೆ, 50 ದಿನಗಳಿಂದ ಸಂಪೂರ್ಣ ಬಳಲಿ ಬೆಂದು ಬೇಸತ್ತಿರುವ ರೈತಾಪಿ ವರ್ಗದ ನೆರವಿಗೆ ಧಾವಿಸಿ ಆತ್ಮಸ್ಥೈರ್ಯ ತುಂಬಲು ಪ್ರಾಮಾಣಿಕ ಪ್ರಯತ್ನವಿಲ್ಲ ಎಂಬ ತೀವ್ರ ಅಸಮಧಾನ ಇನ್ನೊಂದೆಡೆಯೆಂದ ಕೇಳಿಬಂದಿದೆ.

ಕಳೆದ ಸಾಲಿನಲ್ಲಿ ರೈತರು ಮಾಡಿರುವ ಉತ್ಪಾದನೆಯಲ್ಲಿ ಅಬ್ಬಬ್ಬಾ ಅಂದರೆ ಅರ್ಧಭಾಗ ಸದುಪಯೋಗವಾಗಿರಬಹುದು. ಒಂದು ಲೆಕ್ಕಚಾರದ ಪ್ರಕಾರ ತರಕಾರಿ ಬೆಳೆಗಾರರು ಕನಿಷ್ಠ 25 ಸಾವಿರ ಕೋಟಿ ರೂಪಾಯಿ, ಹಾಲು ಉತ್ಪಾದಕರು 10 ಸಾವಿರ ಕೋಟಿ ರೂಪಾಯಿಗಳು, ಕುಕ್ಕುಟ ಉದ್ದಿಮೆಯಲ್ಲಿ ತೊಡಗಿರುವವರು 20 ಸಾವಿರ ಕೋಟಿ ರೂ ನಷ್ಟ ಅನುಭವಿಸಿರುವುಗಾಗಿ ಹಾಗೂ ಕಬ್ಬಿನ ಬೆಳೆಗಾರರಿಗೆ ಕೊಡಬೇಕಾಗಿರುವ ಹಣದಲ್ಲಿ 18 ಸಾವಿರ ಕೋಟಿ ರೂಪಾಯಿ ಇನ್ನೂ ಬಾಕಿ ಇರುವುದಾಗಿ ತಿಳಿದು ಬಂದಿರುತ್ತದೆ.

ಇನ್ನು ಹಣ್ಣು, ಹೂವು ಬೆಳೆದಂತ ರೈತರು, ಮೀನುಗಾರರು ಅನುಭವಿಸಿರುವ ನಷ್ಟದ ಪ್ರಮಾಣವೂ ಅತಿಯಾಗಿರುತ್ತದೆ. ರೈತ ಕಷ್ಟಪಟ್ಟು ಬೆಳದು ಹಾಳಾದ ಪ್ರತಿ ಕಾಳು ಆಹಾರ, ಹಣ್ಣು, ತರಕಾರಿ ದೇಶಕ್ಕಾದ ನಷ್ಟ. ಈ ನಷ್ಟಕ್ಕೆ ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದ ಪರಿಹಾರ ಹಣ ತಕ್ಷಣ ರೈತನ ಜೇಬು ತಲುಪಬೇಕಿತ್ತು. ಜೊತೆಗೆ, ಮುಂದಿನ ಮುಂಗಾರಿಗೆ ಬಿತ್ತನೆಗೆ ಮಾಡಲು ಬೀಜ, ಗೊಬ್ಬರ ಹಣಕಾಸು ನೀಡಿ ರೈತನಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ನೇರ ಹಣ ಪಾವತಿ ಪ್ರಥಮ ಆದ್ಯತೆಯಾಗಬೇಕಾಗಿತ್ತು.

ಉತ್ಪಾದನೆಯ ಹೊರತಾಗಿ ಬೇರೇನು ಮಾಡಲು ಅಶಕ್ತನಾಗಿರುವ ರೈತನಿಗಿಂದು ಖರೀದಿ, ಮಾರುಕಟ್ಟೆ, ಶೇಖರಣೆ, ಸಂಸ್ಕರಣೆ ಹೀಗೆ ಎಲ್ಲಾ “ಕೊಯಿಲೋತ್ತರ ಸೇವೆ’’ಗಳನ್ನು ಸರ್ಕಾರವೇ ನೇರವಾಗಿ ಒದಗಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮಗಳನ್ನೂ ನೀರೀಕ್ಷಿಸಲಾಗಿತ್ತು. ಸ್ವಾಮಿನಾಥನ್ ವರದಿ ಪ್ರಕಾರ ರೈತನಿಗೆ ಕನಿಷ್ಠ ಶೇಕಡ 50ರಷ್ಟು ಲಾಭ ನೀಡುವ ಬೆಂಬಲ ಬೆಲೆ ಘೋಷಣೆ ಇದು ಅತ್ಯಂತ ಸಕಾಲವಾಗಿದೆ. ಆ ಮೂಲಕವಾದರೂ ಆತನ ಜೇಬಿಗೆ ಸ್ವಲ್ಪ ಹಣ ತುಂಬುತ್ತಿತ್ತು. ಬದಲಿಗೆ ಎರಡನೇ ಕಂತಿನಲ್ಲಿ ಖರೀದಿಗೆ ನೀಡಿರುವ ರೂ 6,000 ಕೋಟಿ ಅತ್ಯಲ್ಪವಾಗಿದೆ.

ಕರ್ನಾಟಕ ರಾಜ್ಯ ಒಂದೇ ತೊಗರಿ ಖರೀದಿಗೆ ಸಾವಿರ ಕೋಟಿ ಕೇಳುತ್ತದೆ. ಹಾಗೆ ಬೇಗನೆ ಹಾಳಾಗುವ ಟೊಮೋಟೊ ಈರುಳ್ಳಿ ಆಲೂಗೆಡ್ಡೆ ಮುಂತಾದವುಗಳ ಖರೀದಿ, ಸರಬರಾಜಿಗೆ ರಾಷ್ಟ್ರಮಟ್ಟದಲ್ಲಿ 500ಕೋಟಿ ರೂಗಳು ನೀಡುತ್ತಿರುವುದು ಮೂಸಿ ನೋಡಲು ಸಾಲದು. ರೈತಾಪಿ ವರ್ಗಕ್ಕೆ ಆರ್ಥಿಕ ಭರವಸೆ ನೀಡುವ ಬಗ್ಗೆ ಗಮನ ಇಲ್ಲದಿರುವುದು ಸ್ಪಷ್ಟವಾಗಿದೆ.

ರೈತರ ಉತ್ಪನ್ನವನ್ನು ಆಕರ್ಷಕ ಧಾರಣೆಯಲ್ಲಿ ಮಾರಾಟಮಾಡಲು ಕೇಂದ್ರ ಮಟ್ಟದಲ್ಲಿ ಕಾನೂನು ರೂಪಿಸಲಾಗುವುದು ಎಂಬ ಆಶ್ಚರ್ಯಕರ ಪ್ರಸ್ತಾವನೆ ಹೊರ ಬಂದಿರುತ್ತವೆ. ಇದು ‘ಕೃಷಿ ಬೆಲೆ ಆಯೋಗ’ ಪ್ರಸ್ತಾಪಿಸಿರುವಂತೆ ರೈತರ ಉತ್ಪನ್ನಗಳ ಧಾರಣೆ ಮತ್ತು ಖರೀದಿ ಪ್ರಕ್ರಿಯೆಗಳನ್ನು ಕಾಯಿದೆ ವ್ಯಾಪ್ತಿಗೆ ತಂದು ಯೋಗ್ಯ ಧಾರಣೆಯನ್ನು ಖಾತರಿಗೊಳಿಸುವ ದಿಕ್ಕಿನಲ್ಲಿದೆಯೇ ಎಂದು ಕಾದು ನೋಡಬೇಕಾಗಿದೆ. ಹಾಗೆ, ಸಂಪೂರ್ಣ ರಾಜ್ಯಗಳ ಹಿಡಿತದಲ್ಲಿರುವ ಕೃಷಿ ಮಾರುಕಟ್ಟೆಯನ್ನು ಕೇಂದ್ರದ ಹತೋಟಿಗೆ ತಂದು ಉತ್ಪನ್ನಗಳ ದೇಶದಾದ್ಯಂತ ಸುಗಮ ಸಾಗಾಣಿಕೆಗೆ ಅನುವುಮಾಡಿಕೊಡುವ ವಿಚಾರವನ್ನು ವಿರೋಧ ಪಕ್ಷಗಳ ಹಿಡಿತದಲ್ಲಿರುವ ರಾಜ್ಯ ಸರ್ಕಾರಗಳು ಹೇಗೆ ನೋಡುತ್ತವೆಂದು ತಿಳಿಯದಾಗಿದೆ.

ವಲಸೆ ಕಾರ್ಮಿಕರಲ್ಲಿ ಬಹುತೇಕ ಸಣ್ಣ, ಅತಿಸಣ್ಣ ಬಡ ರೈತರಾಗಿದ್ದು ಹಳ್ಳಿಗಳ ಕಡೆ ಮುಖ ಮಾಡಿರುತ್ತಾರೆ. ಈಗ ಹಿಂತಿರುಗಿದ ವಲಸೆ ಕಾರ್ಮಿಕರನ್ನು ಹಳ್ಳಿಯಲ್ಲಿ ಕೃಷಿ ಯಾಂತ್ರೀಕರಣ, ಸಂಸ್ಕರಣೆಯಿಂದ, ಗ್ರಾಮೀಣ ಕೈಗಾರಿಕೆಗಳಲ್ಲಿ ಬಳಸಿಕೊಳ್ಳಲು ಇದು ಸದಾವಕಾಶ. ಈ ನಿಟ್ಟಿನಲ್ಲಿ ಗ್ರಾಮೀಣ ಉದ್ಯೋಗ ಸೃಷ್ಟಿ “ನರೇಗ” ಯೋಜನೆಗೆ ಅಧಿಕವಾಗಿ 40 ಸಾವಿರ ಕೋಟಿ ನೀಡಿರುವುದು ಸಮಯೋಚಿತ.

‘ಕರ್ನಾಟಕ ಜನಶಕ್ತಿ ಸಂಘಟನೆ’ ನಡೆಸಿರುವ ಅಧ್ಯಯನದಂತೆ ದಿನಗೂಲಿಯನ್ನು ರೂ 375 ಏರಿಸಬೇಕು ಹಾಗೂ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು. ಹಾಗೆ, ಪಟ್ಟಣಗಳಲ್ಲಿ ಉನ್ನತ ಹುದ್ದೆಯಲ್ಲಿದ ಕೆಲ ಯುವಕರಾದರೂ ಹಳ್ಳಿಗಳಲ್ಲಿ ವಾಸಿಸಿ ಅರ್ಥಪೂರ್ಣ ಬದುಕು ಕಂಡುಕೊಳ್ಳಲು ಸಿದ್ಧರಿದ್ದು ಗ್ರಾಮೀಣ ಪುನಶ್ಚೇತನಕ್ಕೆ ಪೂರಕವಾದ ನವೋದ್ಯಮದಲ್ಲಿ ಇವರನ್ನು ತೊಡಗಿಸಿಕೊಳ್ಳಲು ಇದು ಒಳ್ಳೆಯ ಅವಕಾಶ. ರೈತರ ಹೊಲದ ಸಮೀಪ ಮತ್ತು ಉತ್ಪನ್ನಗಳ ಸಂಗ್ರಹಿಸುವ ಸ್ಥಳಗಳಲ್ಲಿ ಹಣವನ್ನು ಕೃಷಿ ಸಹಕಾರಿ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ಮತ್ತು ಆ ರೀತಿಯ ನವೋದ್ಯಮಿಗಳ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ಬಳಸುವ ಯೋಜನೆ ತುಸು ಸ್ವಾಗತಾರ್ಹ.

ಸಾಧಾರಣ ಸಮಯದಲ್ಲೂ ಸರ್ಕಾರದ ಘೋಷಣೆ ಮತ್ತು ನೆರವು ಕಾರ್ಯರೂಪಕ್ಕೆ ಬಂದು ತೃಪ್ತಿದಾಯಕವಾಗಿ ಉಪಯೋಗವಾಗಿರುವುದು ಅಪರೂಪ. ಆಡಳಿತ ಯಂತ್ರ ನಿಷ್ಕ್ರಿಯವಾಗಿರುವ ಈಗಿನ ಲಾಕ್‌ಡೌನ್ ಸಂದರ್ಭದಲ್ಲಂತೂ ದೊಡ್ಡ ಘೋಷಣೆ, ಬೃಹತ್ ನೆರವುಗಳಿಗೆ ಅರ್ಥವೇ ಇಲ್ಲ. ನೀತಿ, ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ಕೊಡುವುದು ಸೂಕ್ತವಾಗಿದ್ದರೂ ಇದು ದೀರ್ಘಾವದಿಯದ್ದು. ಘೋಷಿಸಿರುವ ಹಣ ಶೀಘ್ರ ಬಳಕೆಯಾಗಿ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ‘ನೀಲಿ ನಕ್ಷೆ’, ಸ್ಪಷ್ಟ ಕಾರ್ಯಯೋಜನೆ ಕಂಡು ಬಂದಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಇಂದು ದೇಶದಲ್ಲಿ ಹಸಿವು, ಅಪೌಷ್ಟಿಕತೆಗಳು ಒಂದು ಕಡೆ ತಾಂಡವಾಡುತ್ತಿದ್ದರೆ ಇನ್ನೊಂದೆಡೆ ಆಹಾರ ಉತ್ಪನ್ನಗಳು ಬೇಡಿಕೆ ಇಲ್ಲದೆ ಕೊಳೆಯುವಂತಾಗಿದೆ. ಬೆಲೆ ಇಲ್ಲದೆ ರೈತರು ಹಣ್ಣು-ತರಕಾರಿ, ಹಾಲನ್ನು ರಸ್ತೆಗೆ ತಂದು ಸುರಿಯುವ ಪರಿಸ್ಥಿತಿ ಬಂದಿದೆ. ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿರುವ ಈ ವೈರುಧ್ಯ ಹಂಚಿಕೆ ಬಗೆಗಿನ ನಿರ್ಲಕ್ಷವನ್ನು ಮರುಚಿಂತನೆಗೆ ಒಳಪಡಿಸಬೇಕಾಗಿತ್ತು.

ಈಗಂತೂ ಕರೋನ ಮಹಾಮಾರಿಗೆ ಜಗತ್ತೇ ನಡುಗಿ ಜನ ಬದುಕುಳಿಯಲು ಹರಸಾಹಸ ಪಡುತ್ತಿರುವಾಗ ಆಹಾರ ಉತ್ಪನ್ನಗಳ ಸಮರ್ಪಕ ವಿತರಣೆ ಮಾಡಿ ಆ ಮೂಲಕ ಜನಸಾಮಾನ್ಯರ, ಬಡಬಗ್ಗರ ಆರೋಗ್ಯದ ಜವಾಬ್ದಾರಿ ಪೂರ್ತಿ ಸರ್ಕಾರದ ಮೇಲಿದ್ದು, ಇದು ದೇಶದ ಪ್ರಥಮ ಆದ್ಯತೆಯಾಗಬೇಕಾಗಿತ್ತು. ಹಂಚಿಕೆಯನ್ನು ಒಂದು ಸಮಗ್ರ ಆಶಯವಾಗಿ ಅನುಷ್ಠಾನಗೊಳಿಸಲು ಕಾಲ ಈಗ ಪಕ್ವವಾಗಿದ್ದರೂ ಈನಿಟ್ಟಿನಲ್ಲಿ ಚಿಂತನಯೇ ಇಲ್ಲವಾಗಿರುವುದು ಅತ್ಯಂತ ದುರದೃಷ್ಟಕರ.

ಮುಕ್ತ ಮಾರುಕಟ್ಟೆ ಅರ್ಥವ್ಯವಸ್ಥೆಯಾಗಲಿ ಅಥವಾ ಖಾಸಗಿ ವಲಯವಾಗಲಿ ರೈತ ಬೆಳೆದ ಆಹಾರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಸಮಾನ ಹಂಚಿಕೆಯ ಬಗ್ಗೆ ಗಮನಹರಿಸಲು ಅಸಾಧ್ಯ ಎಂಬುದನ್ನು ಸದ್ಯದ ಪರಿಸ್ಥಿತಿ ಸಾಬೀತುಪಡಿಸುತ್ತಿದೆ. ಇಂದಿನ ನಿಯಂತ್ರಿತ ಮಾರುಕಟ್ಟೆ (ಎಪಿಎಂಸಿ) ವ್ಯವಸ್ಥೆಯನ್ನು ಪಟ್ಟಭದ್ರ ಹಿತಾಸಕ್ತಿಗಳಿಂದ ಬಿಡಿಸಿ ಮತ್ತಷ್ಟು ಸ್ಪರ್ಧಾತ್ಮಕವೂ ರೈತಪರವು ಮಾಡುವ ಬದಲಿಗೆ ಸರ್ಕಾರದ ವ್ಯಾಪ್ತಿಯ ಈ ಜನಪ್ರತಿನಿಧಿ ಸಂಸ್ಥೆಗೆ ತಿಲಾಂಜಲಿ ಕೊಡ ಹೊರಟಿರುವುದು ಮೂರ್ಖತನವಾಗಿರುತ್ತದೆ.

ರೈತಾಪಿ ವರ್ಗ ಆಹಾರ ಉತ್ಪಾದನೆಯ ಮಹತ್ಕಾರ್ಯದಿಂದ ಹಿಂಜರಿಯದಂತೆ ನೋಡಿಕೊಳ್ಳುವ ಗಂಭೀರ ಸವಾಲು ಈಗ ಸರ್ಕಾರದ ಮುಂದಿದೆ. ಈ ಬಗ್ಗೆ ಸಮರೋಪಾದಿಯಲ್ಲಿ ಸ್ಪಷ್ಟ ಕಾರ್ಯಯೋಜನೆ ಕೃಷಿ ವಲಯಕ್ಕೆ ಅತ್ಯಗತ್ಯವಾಗಿದ್ದು ಕೇಂದ್ರದ ಘೋಷಣೆ ನಿರಾಶಾದಾಯಕವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...