Homeಮುಖಪುಟಘೋಷಣೆ ಮಾತ್ರ ಸಾಲದು, ಕಾರ್ಯಗತದ ಹಾಗೂ ರೈತರ ಬಗ್ಗೆ ಅಷ್ಟೇ ಮುತುವರ್ಜಿ ಅಗತ್ಯ

ಘೋಷಣೆ ಮಾತ್ರ ಸಾಲದು, ಕಾರ್ಯಗತದ ಹಾಗೂ ರೈತರ ಬಗ್ಗೆ ಅಷ್ಟೇ ಮುತುವರ್ಜಿ ಅಗತ್ಯ

ಇಂದು ದೇಶದಲ್ಲಿ ಹಸಿವು, ಅಪೌಷ್ಟಿಕತೆಗಳು ಒಂದು ಕಡೆ ತಾಂಡವಾಡುತ್ತಿದ್ದರೆ ಇನ್ನೊಂದೆಡೆ ಆಹಾರ ಉತ್ಪನ್ನಗಳು ಬೇಡಿಕೆ ಇಲ್ಲದೆ ಕೊಳೆಯುವಂತಾಗಿದೆ. ಬೆಲೆ ಇಲ್ಲದೆ ರೈತರು ಹಣ್ಣು-ತರಕಾರಿ, ಹಾಲನ್ನು ರಸ್ತೆಗೆ ತಂದು ಸುರಿಯುವ ಪರಿಸ್ಥಿತಿ ಬಂದಿದೆ. ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿರುವ ಈ ವೈರುಧ್ಯ ಹಂಚಿಕೆ ಬಗೆಗಿನ ನಿರ್ಲಕ್ಷವನ್ನು ಮರುಚಿಂತನೆಗೆ ಒಳಪಡಿಸಬೇಕಾಗಿತ್ತು.

- Advertisement -
- Advertisement -

ಪ್ರಧಾನಮಂತ್ರಿಗಳ ಬೃಹತ್ 20 ಲಕ್ಷ ಕೋಟಿ “ಆತ್ಮ ನಿರ್ಭರ ಭಾರತ” ನಿರ್ಮಾಣ ಕಾರ್ಯಕ್ರಮದ ಅಂಗವಾಗಿ ಮೂರನೇ ಹಂತದ ಪ್ಯಾಕೇಜ್ ಮೂಲಕ ವಿತ್ತಸಚಿವೆ ನಿರ್ಮಲಾ ಸೀತಾರಾಮ್ ಕೃಷಿ ವಲಯಕ್ಕೆ ನೀಡಿರುವ ನೆರವು, ಮಾಡಿರುವ ಘೋಷಣೆ ದೊಡ್ಡ ಪ್ರಮಾಣದಲ್ಲಿದೆ.

ಹಾಗಿದ್ದರೂ ಈ ಬಗ್ಗೆ ಪರಸ್ಪರ ಪ್ರಬಲ ವಿರೋಧಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಒಂದು ಉತ್ಪಾದನಾ ವಲಯವಾಗಿ ಕೃಷಿ ಹಾಗೆ ಅದರಲ್ಲಿ ತೊಡಗಿರುವ ರೈತಾಪಿ ವರ್ಗ ಈ ಎರಡನ್ನು ಪ್ರತ್ಯೇಕವಾಗಿ ನೋಡಿ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸದಿರುವುದು ಇದಕ್ಕೆ ಕಾರಣವಾಗಿದೆ.

ಕೃಷಿ ವಲಯಕ್ಕೆ ಮೂಲ ಸೌಕರ್ಯ ಕಲ್ಪಿಸುವುದು, ಕರ್ನಾಟಕದ ರಾಗಿ, ಕಾಶ್ಮೀರದ ಕೇಸರಿವರೆಗೆ ಆಯಾ ರಾಜ್ಯದ ಹೆಗ್ಗಳಿಕೆಯ ಕಿರುಉತ್ಪನ್ನಗಳ ಪ್ರೋತ್ಸಾಹದಿಂದ ಜೇನು, ಗಿಡಮೂಲಿಕೆ ಕೃಷಿಗೆ ಪ್ರೋತ್ಸಾಹಿಸುವ ಸುಮಾರು 1.5 ಲಕ್ಷ ಕೋಟಿ ರೂಗಳ ಮೂರನೇ ಹಂತದ ಪ್ಯಾಕೇಜು ಹೊರ ಬಂದಿರುತ್ತದೆ. ಜೊತೆಗೆ 53 ಕೋಟಿ ಜಾನುವಾರುಗಳ ಆರೋಗ್ಯ ರಕ್ಷಣೆ, ಮತ್ಸ್ಯೋದ್ಯಮ ಸದೃಢಗೊಳಿಸುವ ಹಾಗೂ ಕ್ಷೀರ ವಲಯ ಎದುರಿಸುತ್ತಿರುವ ಪ್ರಮುಖ ಮೇವಿನ ಸಮಸ್ಯೆ ಪರಿಹಾರಕ್ಕೂ ಸಹಸ್ರಾರು ಕೋಟಿರೂಗಳನ್ನು ಘೋಷಿಸಲಾಗಿದೆ.

ಕೃಷಿ ವಲಯದ ಪುನಶ್ಚೇತನಕ್ಕೆ ಈ ಕಾರ್ಯಕ್ರಮಗಳು ಉಪಯುಕ್ತ ಎಂದು ತಜ್ಞರು ಸಂತಸ ವ್ಯಕ್ತಪಡಿಸಿದ್ದರೆ, 50 ದಿನಗಳಿಂದ ಸಂಪೂರ್ಣ ಬಳಲಿ ಬೆಂದು ಬೇಸತ್ತಿರುವ ರೈತಾಪಿ ವರ್ಗದ ನೆರವಿಗೆ ಧಾವಿಸಿ ಆತ್ಮಸ್ಥೈರ್ಯ ತುಂಬಲು ಪ್ರಾಮಾಣಿಕ ಪ್ರಯತ್ನವಿಲ್ಲ ಎಂಬ ತೀವ್ರ ಅಸಮಧಾನ ಇನ್ನೊಂದೆಡೆಯೆಂದ ಕೇಳಿಬಂದಿದೆ.

ಕಳೆದ ಸಾಲಿನಲ್ಲಿ ರೈತರು ಮಾಡಿರುವ ಉತ್ಪಾದನೆಯಲ್ಲಿ ಅಬ್ಬಬ್ಬಾ ಅಂದರೆ ಅರ್ಧಭಾಗ ಸದುಪಯೋಗವಾಗಿರಬಹುದು. ಒಂದು ಲೆಕ್ಕಚಾರದ ಪ್ರಕಾರ ತರಕಾರಿ ಬೆಳೆಗಾರರು ಕನಿಷ್ಠ 25 ಸಾವಿರ ಕೋಟಿ ರೂಪಾಯಿ, ಹಾಲು ಉತ್ಪಾದಕರು 10 ಸಾವಿರ ಕೋಟಿ ರೂಪಾಯಿಗಳು, ಕುಕ್ಕುಟ ಉದ್ದಿಮೆಯಲ್ಲಿ ತೊಡಗಿರುವವರು 20 ಸಾವಿರ ಕೋಟಿ ರೂ ನಷ್ಟ ಅನುಭವಿಸಿರುವುಗಾಗಿ ಹಾಗೂ ಕಬ್ಬಿನ ಬೆಳೆಗಾರರಿಗೆ ಕೊಡಬೇಕಾಗಿರುವ ಹಣದಲ್ಲಿ 18 ಸಾವಿರ ಕೋಟಿ ರೂಪಾಯಿ ಇನ್ನೂ ಬಾಕಿ ಇರುವುದಾಗಿ ತಿಳಿದು ಬಂದಿರುತ್ತದೆ.

ಇನ್ನು ಹಣ್ಣು, ಹೂವು ಬೆಳೆದಂತ ರೈತರು, ಮೀನುಗಾರರು ಅನುಭವಿಸಿರುವ ನಷ್ಟದ ಪ್ರಮಾಣವೂ ಅತಿಯಾಗಿರುತ್ತದೆ. ರೈತ ಕಷ್ಟಪಟ್ಟು ಬೆಳದು ಹಾಳಾದ ಪ್ರತಿ ಕಾಳು ಆಹಾರ, ಹಣ್ಣು, ತರಕಾರಿ ದೇಶಕ್ಕಾದ ನಷ್ಟ. ಈ ನಷ್ಟಕ್ಕೆ ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದ ಪರಿಹಾರ ಹಣ ತಕ್ಷಣ ರೈತನ ಜೇಬು ತಲುಪಬೇಕಿತ್ತು. ಜೊತೆಗೆ, ಮುಂದಿನ ಮುಂಗಾರಿಗೆ ಬಿತ್ತನೆಗೆ ಮಾಡಲು ಬೀಜ, ಗೊಬ್ಬರ ಹಣಕಾಸು ನೀಡಿ ರೈತನಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ನೇರ ಹಣ ಪಾವತಿ ಪ್ರಥಮ ಆದ್ಯತೆಯಾಗಬೇಕಾಗಿತ್ತು.

ಉತ್ಪಾದನೆಯ ಹೊರತಾಗಿ ಬೇರೇನು ಮಾಡಲು ಅಶಕ್ತನಾಗಿರುವ ರೈತನಿಗಿಂದು ಖರೀದಿ, ಮಾರುಕಟ್ಟೆ, ಶೇಖರಣೆ, ಸಂಸ್ಕರಣೆ ಹೀಗೆ ಎಲ್ಲಾ “ಕೊಯಿಲೋತ್ತರ ಸೇವೆ’’ಗಳನ್ನು ಸರ್ಕಾರವೇ ನೇರವಾಗಿ ಒದಗಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮಗಳನ್ನೂ ನೀರೀಕ್ಷಿಸಲಾಗಿತ್ತು. ಸ್ವಾಮಿನಾಥನ್ ವರದಿ ಪ್ರಕಾರ ರೈತನಿಗೆ ಕನಿಷ್ಠ ಶೇಕಡ 50ರಷ್ಟು ಲಾಭ ನೀಡುವ ಬೆಂಬಲ ಬೆಲೆ ಘೋಷಣೆ ಇದು ಅತ್ಯಂತ ಸಕಾಲವಾಗಿದೆ. ಆ ಮೂಲಕವಾದರೂ ಆತನ ಜೇಬಿಗೆ ಸ್ವಲ್ಪ ಹಣ ತುಂಬುತ್ತಿತ್ತು. ಬದಲಿಗೆ ಎರಡನೇ ಕಂತಿನಲ್ಲಿ ಖರೀದಿಗೆ ನೀಡಿರುವ ರೂ 6,000 ಕೋಟಿ ಅತ್ಯಲ್ಪವಾಗಿದೆ.

ಕರ್ನಾಟಕ ರಾಜ್ಯ ಒಂದೇ ತೊಗರಿ ಖರೀದಿಗೆ ಸಾವಿರ ಕೋಟಿ ಕೇಳುತ್ತದೆ. ಹಾಗೆ ಬೇಗನೆ ಹಾಳಾಗುವ ಟೊಮೋಟೊ ಈರುಳ್ಳಿ ಆಲೂಗೆಡ್ಡೆ ಮುಂತಾದವುಗಳ ಖರೀದಿ, ಸರಬರಾಜಿಗೆ ರಾಷ್ಟ್ರಮಟ್ಟದಲ್ಲಿ 500ಕೋಟಿ ರೂಗಳು ನೀಡುತ್ತಿರುವುದು ಮೂಸಿ ನೋಡಲು ಸಾಲದು. ರೈತಾಪಿ ವರ್ಗಕ್ಕೆ ಆರ್ಥಿಕ ಭರವಸೆ ನೀಡುವ ಬಗ್ಗೆ ಗಮನ ಇಲ್ಲದಿರುವುದು ಸ್ಪಷ್ಟವಾಗಿದೆ.

ರೈತರ ಉತ್ಪನ್ನವನ್ನು ಆಕರ್ಷಕ ಧಾರಣೆಯಲ್ಲಿ ಮಾರಾಟಮಾಡಲು ಕೇಂದ್ರ ಮಟ್ಟದಲ್ಲಿ ಕಾನೂನು ರೂಪಿಸಲಾಗುವುದು ಎಂಬ ಆಶ್ಚರ್ಯಕರ ಪ್ರಸ್ತಾವನೆ ಹೊರ ಬಂದಿರುತ್ತವೆ. ಇದು ‘ಕೃಷಿ ಬೆಲೆ ಆಯೋಗ’ ಪ್ರಸ್ತಾಪಿಸಿರುವಂತೆ ರೈತರ ಉತ್ಪನ್ನಗಳ ಧಾರಣೆ ಮತ್ತು ಖರೀದಿ ಪ್ರಕ್ರಿಯೆಗಳನ್ನು ಕಾಯಿದೆ ವ್ಯಾಪ್ತಿಗೆ ತಂದು ಯೋಗ್ಯ ಧಾರಣೆಯನ್ನು ಖಾತರಿಗೊಳಿಸುವ ದಿಕ್ಕಿನಲ್ಲಿದೆಯೇ ಎಂದು ಕಾದು ನೋಡಬೇಕಾಗಿದೆ. ಹಾಗೆ, ಸಂಪೂರ್ಣ ರಾಜ್ಯಗಳ ಹಿಡಿತದಲ್ಲಿರುವ ಕೃಷಿ ಮಾರುಕಟ್ಟೆಯನ್ನು ಕೇಂದ್ರದ ಹತೋಟಿಗೆ ತಂದು ಉತ್ಪನ್ನಗಳ ದೇಶದಾದ್ಯಂತ ಸುಗಮ ಸಾಗಾಣಿಕೆಗೆ ಅನುವುಮಾಡಿಕೊಡುವ ವಿಚಾರವನ್ನು ವಿರೋಧ ಪಕ್ಷಗಳ ಹಿಡಿತದಲ್ಲಿರುವ ರಾಜ್ಯ ಸರ್ಕಾರಗಳು ಹೇಗೆ ನೋಡುತ್ತವೆಂದು ತಿಳಿಯದಾಗಿದೆ.

ವಲಸೆ ಕಾರ್ಮಿಕರಲ್ಲಿ ಬಹುತೇಕ ಸಣ್ಣ, ಅತಿಸಣ್ಣ ಬಡ ರೈತರಾಗಿದ್ದು ಹಳ್ಳಿಗಳ ಕಡೆ ಮುಖ ಮಾಡಿರುತ್ತಾರೆ. ಈಗ ಹಿಂತಿರುಗಿದ ವಲಸೆ ಕಾರ್ಮಿಕರನ್ನು ಹಳ್ಳಿಯಲ್ಲಿ ಕೃಷಿ ಯಾಂತ್ರೀಕರಣ, ಸಂಸ್ಕರಣೆಯಿಂದ, ಗ್ರಾಮೀಣ ಕೈಗಾರಿಕೆಗಳಲ್ಲಿ ಬಳಸಿಕೊಳ್ಳಲು ಇದು ಸದಾವಕಾಶ. ಈ ನಿಟ್ಟಿನಲ್ಲಿ ಗ್ರಾಮೀಣ ಉದ್ಯೋಗ ಸೃಷ್ಟಿ “ನರೇಗ” ಯೋಜನೆಗೆ ಅಧಿಕವಾಗಿ 40 ಸಾವಿರ ಕೋಟಿ ನೀಡಿರುವುದು ಸಮಯೋಚಿತ.

‘ಕರ್ನಾಟಕ ಜನಶಕ್ತಿ ಸಂಘಟನೆ’ ನಡೆಸಿರುವ ಅಧ್ಯಯನದಂತೆ ದಿನಗೂಲಿಯನ್ನು ರೂ 375 ಏರಿಸಬೇಕು ಹಾಗೂ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು. ಹಾಗೆ, ಪಟ್ಟಣಗಳಲ್ಲಿ ಉನ್ನತ ಹುದ್ದೆಯಲ್ಲಿದ ಕೆಲ ಯುವಕರಾದರೂ ಹಳ್ಳಿಗಳಲ್ಲಿ ವಾಸಿಸಿ ಅರ್ಥಪೂರ್ಣ ಬದುಕು ಕಂಡುಕೊಳ್ಳಲು ಸಿದ್ಧರಿದ್ದು ಗ್ರಾಮೀಣ ಪುನಶ್ಚೇತನಕ್ಕೆ ಪೂರಕವಾದ ನವೋದ್ಯಮದಲ್ಲಿ ಇವರನ್ನು ತೊಡಗಿಸಿಕೊಳ್ಳಲು ಇದು ಒಳ್ಳೆಯ ಅವಕಾಶ. ರೈತರ ಹೊಲದ ಸಮೀಪ ಮತ್ತು ಉತ್ಪನ್ನಗಳ ಸಂಗ್ರಹಿಸುವ ಸ್ಥಳಗಳಲ್ಲಿ ಹಣವನ್ನು ಕೃಷಿ ಸಹಕಾರಿ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ಮತ್ತು ಆ ರೀತಿಯ ನವೋದ್ಯಮಿಗಳ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ಬಳಸುವ ಯೋಜನೆ ತುಸು ಸ್ವಾಗತಾರ್ಹ.

ಸಾಧಾರಣ ಸಮಯದಲ್ಲೂ ಸರ್ಕಾರದ ಘೋಷಣೆ ಮತ್ತು ನೆರವು ಕಾರ್ಯರೂಪಕ್ಕೆ ಬಂದು ತೃಪ್ತಿದಾಯಕವಾಗಿ ಉಪಯೋಗವಾಗಿರುವುದು ಅಪರೂಪ. ಆಡಳಿತ ಯಂತ್ರ ನಿಷ್ಕ್ರಿಯವಾಗಿರುವ ಈಗಿನ ಲಾಕ್‌ಡೌನ್ ಸಂದರ್ಭದಲ್ಲಂತೂ ದೊಡ್ಡ ಘೋಷಣೆ, ಬೃಹತ್ ನೆರವುಗಳಿಗೆ ಅರ್ಥವೇ ಇಲ್ಲ. ನೀತಿ, ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ಕೊಡುವುದು ಸೂಕ್ತವಾಗಿದ್ದರೂ ಇದು ದೀರ್ಘಾವದಿಯದ್ದು. ಘೋಷಿಸಿರುವ ಹಣ ಶೀಘ್ರ ಬಳಕೆಯಾಗಿ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ‘ನೀಲಿ ನಕ್ಷೆ’, ಸ್ಪಷ್ಟ ಕಾರ್ಯಯೋಜನೆ ಕಂಡು ಬಂದಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಇಂದು ದೇಶದಲ್ಲಿ ಹಸಿವು, ಅಪೌಷ್ಟಿಕತೆಗಳು ಒಂದು ಕಡೆ ತಾಂಡವಾಡುತ್ತಿದ್ದರೆ ಇನ್ನೊಂದೆಡೆ ಆಹಾರ ಉತ್ಪನ್ನಗಳು ಬೇಡಿಕೆ ಇಲ್ಲದೆ ಕೊಳೆಯುವಂತಾಗಿದೆ. ಬೆಲೆ ಇಲ್ಲದೆ ರೈತರು ಹಣ್ಣು-ತರಕಾರಿ, ಹಾಲನ್ನು ರಸ್ತೆಗೆ ತಂದು ಸುರಿಯುವ ಪರಿಸ್ಥಿತಿ ಬಂದಿದೆ. ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿರುವ ಈ ವೈರುಧ್ಯ ಹಂಚಿಕೆ ಬಗೆಗಿನ ನಿರ್ಲಕ್ಷವನ್ನು ಮರುಚಿಂತನೆಗೆ ಒಳಪಡಿಸಬೇಕಾಗಿತ್ತು.

ಈಗಂತೂ ಕರೋನ ಮಹಾಮಾರಿಗೆ ಜಗತ್ತೇ ನಡುಗಿ ಜನ ಬದುಕುಳಿಯಲು ಹರಸಾಹಸ ಪಡುತ್ತಿರುವಾಗ ಆಹಾರ ಉತ್ಪನ್ನಗಳ ಸಮರ್ಪಕ ವಿತರಣೆ ಮಾಡಿ ಆ ಮೂಲಕ ಜನಸಾಮಾನ್ಯರ, ಬಡಬಗ್ಗರ ಆರೋಗ್ಯದ ಜವಾಬ್ದಾರಿ ಪೂರ್ತಿ ಸರ್ಕಾರದ ಮೇಲಿದ್ದು, ಇದು ದೇಶದ ಪ್ರಥಮ ಆದ್ಯತೆಯಾಗಬೇಕಾಗಿತ್ತು. ಹಂಚಿಕೆಯನ್ನು ಒಂದು ಸಮಗ್ರ ಆಶಯವಾಗಿ ಅನುಷ್ಠಾನಗೊಳಿಸಲು ಕಾಲ ಈಗ ಪಕ್ವವಾಗಿದ್ದರೂ ಈನಿಟ್ಟಿನಲ್ಲಿ ಚಿಂತನಯೇ ಇಲ್ಲವಾಗಿರುವುದು ಅತ್ಯಂತ ದುರದೃಷ್ಟಕರ.

ಮುಕ್ತ ಮಾರುಕಟ್ಟೆ ಅರ್ಥವ್ಯವಸ್ಥೆಯಾಗಲಿ ಅಥವಾ ಖಾಸಗಿ ವಲಯವಾಗಲಿ ರೈತ ಬೆಳೆದ ಆಹಾರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಸಮಾನ ಹಂಚಿಕೆಯ ಬಗ್ಗೆ ಗಮನಹರಿಸಲು ಅಸಾಧ್ಯ ಎಂಬುದನ್ನು ಸದ್ಯದ ಪರಿಸ್ಥಿತಿ ಸಾಬೀತುಪಡಿಸುತ್ತಿದೆ. ಇಂದಿನ ನಿಯಂತ್ರಿತ ಮಾರುಕಟ್ಟೆ (ಎಪಿಎಂಸಿ) ವ್ಯವಸ್ಥೆಯನ್ನು ಪಟ್ಟಭದ್ರ ಹಿತಾಸಕ್ತಿಗಳಿಂದ ಬಿಡಿಸಿ ಮತ್ತಷ್ಟು ಸ್ಪರ್ಧಾತ್ಮಕವೂ ರೈತಪರವು ಮಾಡುವ ಬದಲಿಗೆ ಸರ್ಕಾರದ ವ್ಯಾಪ್ತಿಯ ಈ ಜನಪ್ರತಿನಿಧಿ ಸಂಸ್ಥೆಗೆ ತಿಲಾಂಜಲಿ ಕೊಡ ಹೊರಟಿರುವುದು ಮೂರ್ಖತನವಾಗಿರುತ್ತದೆ.

ರೈತಾಪಿ ವರ್ಗ ಆಹಾರ ಉತ್ಪಾದನೆಯ ಮಹತ್ಕಾರ್ಯದಿಂದ ಹಿಂಜರಿಯದಂತೆ ನೋಡಿಕೊಳ್ಳುವ ಗಂಭೀರ ಸವಾಲು ಈಗ ಸರ್ಕಾರದ ಮುಂದಿದೆ. ಈ ಬಗ್ಗೆ ಸಮರೋಪಾದಿಯಲ್ಲಿ ಸ್ಪಷ್ಟ ಕಾರ್ಯಯೋಜನೆ ಕೃಷಿ ವಲಯಕ್ಕೆ ಅತ್ಯಗತ್ಯವಾಗಿದ್ದು ಕೇಂದ್ರದ ಘೋಷಣೆ ನಿರಾಶಾದಾಯಕವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...

‘ಪಂಕ್ಚರ್-ತಲಾ ಬನಾನೆ ವಾಲೆಗಳೇ ಹೆಚ್ಚು’: ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ರಮೇಶ್ ಬಿಧು

ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ, ಈಗ ಅವರ ವಿರುದ್ಧವೇ ಅತ್ಯಂತ ಕೀಳುಮಟ್ಟದ ಇಸ್ಲಾಮೋಫೋಬಿಕ್ ಮತ್ತು...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ : ಇಡೀ ವ್ಯವಸ್ಥೆಯೇ ಬ್ರಿಜ್ ಭೂಷಣ್‌ರನ್ನು ರಕ್ಷಿಸಿತು ಎಂದ ವಿನೇಶ್ ಫೋಗಟ್; ಮೇಲ್ಮನವಿ ಸಲ್ಲಿಸಲು ಮಹಿಳಾ ಕುಸ್ತಿಪಟುಗಳ ನಿರ್ಧಾರ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ರೋಸ್...

ಕರ್ನಾಟಕದಲ್ಲಿ SIR ಬಿಹಾರ-ಬಂಗಾಳಕ್ಕಿಂತ ಭೀಕರ: ಆಗಸ್ಟ್ 4 ರಂದು ಜನಪರ ಸಂಘಟನೆಗಳಿಂದ ಮಹತ್ವದ ಮಾಧ್ಯಮಗೋಷ್ಠಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗಿಂತಲೂ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ ಎಂದು 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ'...

“ನೈರ್ಮಲ್ಯ ಕಾರ್ಮಿಕರು ಕೆಲಸ ಬಿಡಲು ಸಾಧ್ಯವಿಲ್ಲ”: ದೇಶಾದ್ಯಂತ ಪ್ರತಿಭಟನೆಗೆ DASAM ಬೆಂಬಲ, ಉದ್ಯೋಗ ಖಾಯಂಗೊಳಿಸಲು ತೀವ್ರ ಒತ್ತಾಯ

ನವದೆಹಲಿ: ಉದ್ಯೋಗ ಕ್ರಮಬದ್ಧಗೊಳಿಸುವಿಕೆ (ಖಾಯಂಗೊಳಿಸುವುದು), ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕೆಲಸದ ಸ್ಥಳದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿ ದೇಶದ ನಾನಾ ಭಾಗಗಳಲ್ಲಿ ನೈರ್ಮಲ್ಯ ಕಾರ್ಮಿಕರು ನಡೆಸುತ್ತಿರುವ...

ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್‌...

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...