Homeಮುಖಪುಟನ್ಯಾಯ ಮತ್ತು ರಾಜದ್ರೋಹ ಜೊತೆಜೊತೆಗೆ ಹೋಗಲು ಸಾಧ್ಯವಿಲ್ಲ್ಲ

ನ್ಯಾಯ ಮತ್ತು ರಾಜದ್ರೋಹ ಜೊತೆಜೊತೆಗೆ ಹೋಗಲು ಸಾಧ್ಯವಿಲ್ಲ್ಲ

- Advertisement -
- Advertisement -

ದೇಶದ್ರೋಹ, ರಾಷ್ಟ್ರದ್ರೋಹ ಇದು ನಿತ್ಯ ಕೇಳುತ್ತಿರುವಂತಹ ಸುದ್ದಿ. ದೇಶದ್ರೋಹ ಅಂದರೇನು? ದೇಶದ್ರೋಹ ಎನ್ನುವಂತಹದ್ದು ಮೊದಲು ರಾಜದ್ರೋಹ ಎಂದಿತ್ತು. ದೇಶದೆಲ್ಲೆಡೆ ವ್ಯತಿರಿಕ್ತವಾಗಿ ಬೆಳೆಯುತ್ತಿದ್ದ ಚಳವಳಿಗಳನ್ನು ಹತ್ತಿಕ್ಕಲು ಬ್ರಿಟಿಷರು 1879ರಲ್ಲಿ ತಂದ ಕಾನೂನೇ ರಾಜದ್ರೋಹದ ಕಾನೂನು. ಅದರಡಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಎಲ್ಲಾ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರನ್ನು ಜೈಲಿಗೆ ಹಾಕಿದರು.. ಬ್ರಿಟಿಷರ ರಾಜದ್ರೋಹದ ಕಾನೂನಿನಡಿಯಲ್ಲಿ ಚರ್ಚಿತವಾದ 2 ಪ್ರಕರಣಗಳೆಂದರೆ ಒಂದು ಬಾಲಗಂಗಾಧರ ತಿಲಕರ ಪ್ರಕರಣ, ಇನ್ನೊಂದು ಮಹಾತ್ಮ ಗಾಂಧಿಯವರ ಪ್ರಕರಣಗಳು.

ಮಹಾತ್ಮ ಗಾಂಧೀಜಿಯವರ ಪ್ರಕರಣ, ಅವರು ಬರೆದು ಪ್ರಕಟಿಸಿದ ಮೂರು ಲೇಖನಗಳ ವಿರುದ್ಧ ಬ್ರಿಟಿಷ್ ಸರ್ಕಾರ ರಾಜದ್ರೋಹದ ಪ್ರಕರಣ ದಾಖಲಿಸಿತ್ತು. ನ್ಯಾಯಾಲಯದಲ್ಲಿ ವಾದ ಮಂಡಿಸಿದ ಗಾಂಧೀಜಿ, ನ್ಯಾಯಾಧೀಶರಾಗಿ ನಿಮಗೆ 2 ಅವಕಾಶವಿದೆ. ನೀವು ನ್ಯಾಯ ನೀಡುತ್ತೀರೋ, ಕಾನೂನು ಮಾತನಾಡುತ್ತೀರೋ? ನೀವು ಕಾನೂನು ಬಗ್ಗೆ ಮಾತನಾಡುತ್ತೀರಿ ಅಂತಾದರೆ ನಿಮ್ಮ ಕಾನೂನಿನ ಕೆಳಗೆ ನಾನು ಅಪರಾಧಿ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಬ್ರಿಟಿಷ್ ಸರ್ಕಾರ ತೊಲಗಲೇಬೇಕು ಎಂದು ನಾನು ಬರೆದ ಪ್ರತಿಯೊಂದು ಅಕ್ಷರ ಸಹ ಸತ್ಯ. ಅದನ್ನು ತಪ್ಪು ಎಂದು ಹೇಳಲು ನಾನು ತಯಾರಿಲ್ಲ. ನೀವು ಅದಕ್ಕೆ ಅತ್ಯುಗ್ರವಾದ ಶಿಕ್ಷೆ ನೀಡಿ. ನೀವು ನ್ಯಾಯದ ಬಗ್ಗೆ ಮಾತನಾಡುತ್ತೀರಿ ಎಂದಾದರೆ ನೀವು ಈ ಕೆಲಸಕ್ಕೆ ರಾಜಿನಾಮೆ ಕೊಟ್ಟು ಹೋಗಿ. ಯಾಕೆಂದರೆ ನ್ಯಾಯ ಮತ್ತು ರಾಜದ್ರೋಹ ಜೊತೆಜೊತೆಗೆ ಹೋಗಲು ಸಾಧ್ಯವಿಲ್ಲ್ಲ ಎಂದು ಹೇಳುತ್ತಾರೆ.. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಕಾನೂನೇ ರಾಜದ್ರೋಹದ ಕಾನೂನು..

ನಮಗೆ ಸ್ವಾತಂತ್ರ್ಯ ಸಿಕ್ಕಮೇಲೆ, ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಮೇಲೆ ರಾಜದ್ರೋಹ ಉಳಿಯಲು ಸಾಧ್ಯವಿಲ್ಲ ಎನ್ನುವ ಚರ್ಚೆ ಬಂತು. ಇಂತಹ ಘಟನೆಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮೊದಲುಗೊಂಡು ಬಾಂಬೆ ಹೈಕೋರ್ಟ್ ಆದಿಯಾಗಿ ಎಲ್ಲಾ ಕೋರ್ಟ್‍ಗಳು ಕೂಡಾ ರಾಜದ್ರೋಹದ ಕಾನೂನು ಉಳಿಯಲು ಸಾಧ್ಯವಿಲ್ಲ, ಅದು ಹೋಗಲೇಬೇಕು. ಯಾಕೆಂದರೆ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದಲ್ಲಿ ರಾಜದ್ರೋಹದ ಕಾನೂನಿಗೆ ಅವಕಾಶ ಇಲ್ಲ ಎಂದು ಅಭಿಪ್ರಾಯಪಟ್ಟವು.. ಎಲ್ಲಾ ತೀರ್ಪುಗಳ ನಡುವೆಯೂ ಸೆಡಿಷನ್ ಕಾನೂನು ಉಳಿದುಕೊಂಡುಬರಲು ಕಾರಣವೇನೆಂದರೆ ಆಗಿದ್ದಂತಹ ರಾಜಕೀಯ ತಳಮಳದ ಸ್ಥಿತಿ, ವಿಭಜನೆ. ದೇಶದಲ್ಲಿ ಇದ್ದ ಅತಂತ್ರ ಸ್ಥಿತಿಯಿಂದ ಅದನ್ನು ಹಾಗೆಯೇ ಉಳಿಸಿಕೊಳ್ಳಲಾಯಿತು.

ದೇಶದ್ರೋಹ ಕಾನೂನಿನಲ್ಲಿ ಎರಡು ಭಾಗವಿದೆ. ಒಂದು ರಾಷ್ಟ್ರದ ಬಗ್ಗೆ ದ್ವೇಷ ಇರುವಂತಹದ್ದು ಎರಡನೇಯದ್ದು ರಾಷ್ಟ್ರದ ಸರ್ಕಾರದ ನೀತಿಯನ್ನು ವಿರೋಧಿಸುವಂತಹದ್ದು. ಈ ಕಾನೂನಿಗೆ ಸಂಬಂಧಿಸಿದಂತೆ ಮುಖ್ಯವಾದ ತೀರ್ಪು ಬಂದಿದ್ದು ಕೇದಾರನಾಥ ಪ್ರಕರಣದಲ್ಲಿ. 1962 ರಲ್ಲಿ ಬಂದ ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‍ನ ಸಂವಿಧಾನ ಪೀಠ ಹೇಳಿದ್ದು ‘ಸರ್ಕಾರವನ್ನು ಇಲ್ಲದಾಗಿಸುವಾಗ, ಈ ದೇಶದ ಐಕ್ಯತೆ ಮತ್ತು ಸಾರ್ವಭೌಮತೆಯ ಪ್ರಶ್ನೆ ಬಂದಾಗ ಅದು ದೇಶದ್ರೋಹ ಆಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ಒಂದು ಮಿತಿಯಿದೆ. ಈ ಸಂದರ್ಭದಲ್ಲಿ ರಾಷ್ಟ್ರದ್ರೋಹದ ಕಾನೂನು ಸಿಂಧುವಾಗುತ್ತದೆ’.

2ನೇ ಭಾಗದಲ್ಲಿ ಸರ್ಕಾರದ ನೀತಿಯ ವಿರುದ್ಧ ಯಾವುದೇ ಪ್ರತಿರೋಧ, ವಿಮರ್ಶೆ, ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ದೇಶದ್ರೋಹ ಆಗುವುದಿಲ್ಲ. ದೇಶದ ವ್ಯವಸ್ಥೆಯನ್ನೇ ಕಿತ್ತೊಗೆಯುವ ಹೇಳಿಕೆ ಬಂದಾಗ ಮಾತ್ರ ದೇಶದ್ರೋಹ ಆಗುತ್ತದೆ. ಇದರ ನಂತರ ಸಾಕಷ್ಟು ತೀರ್ಪುಗಳು ಬಂದಿದೆ. ಅದರಲ್ಲಿ ಮುಖ್ಯವಾದುದು “ಬಲವಂತ್ ಸಿಂಗ್” ತೀರ್ಪು. ಇದರಲ್ಲಿ ಖಾಲಿಸ್ಥಾನ್ ಜಿಂದಾಬಾದ್ ಎನ್ನುವ ಹೇಳಿಕೆಯನ್ನಿಟ್ಟುಕೊಂಡು ಹೊಸ ರಾಷ್ಟ್ರದ ಬಗ್ಗೆ ಮಾತನಾಡುತ್ತಾರೆ ಎಂದು ಆರೋಪಿಸಲಾಯಿತು. ಆದರೆ ಸುಪ್ರೀಂ ಇದು ದೇಶದ್ರೋಹ ಆಗುವುದಿಲ್ಲ ಎಂದು ತೀರ್ಪು ನೀಡಿತು.

ದೇಶದ ವ್ಯವಸ್ಥೆ ಬದಲಾಯಿಸುವ ಬಗ್ಗೆ ಹೇಳುವುದಿಲ್ಲವೊ ಅದು ದೇಶದ್ರೋಹವಲ್ಲ. ದುರಂತವೆಂದರೆ 1962ರ ನಂತರ ಬಂದ ಎಲ್ಲಾ ರಾಜಕೀಯ ಪಕ್ಷಗಳು ಈ ಕಾನೂನನ್ನು ದುರುಪಯೋಗಪಡಿಸಿಕೊಂಡಿವೆ. ತಮ್ಮ ವಿರುದ್ಧ ಯಾರು ಮಾತನಾಡಿದರೂ ದೇಶದ್ರೋಹದ ಕಾನೂನು ಉಪಯೋಗಿಸಿ ಮೊಕದ್ದಮೆ ದಾಖಲುಮಾಡಿ ಅವರನ್ನು ಜೈಲಿಗೆ ಹಾಕಲಾಗುತ್ತಿದೆ. ಈ ಪ್ರವೃತ್ತಿ ಈಗ ಇನ್ನು ಹೆಚ್ಚಾಗಿದೆ.

ದುರಂತವೆಂದರೆ ಒಂದು ಚಿಕ್ಕ ನಾಟಕದಲ್ಲಿ ಬರೆದ “ಚಪ್ಪಲಿಯಲ್ಲಿ ಹೊಡೆಯಿರಿ” ಎಂಬ ವಾಕ್ಯದ ಕಾರಣಕ್ಕೆ ದೇಶದ್ರೋಹದ ಪ್ರಕರಣ ಬೀದರಿನಲ್ಲಿ ತಾಯಿ ಮತ್ತು ಶಿಕ್ಷಕಿಯ ಮೇಲೆ ದಾಖಲಾಗಿರುತ್ತದೆ. “ಫ್ರೀ ಕಾಶ್ಮೀರ” ಎಂಬ ಪೋಸ್ಟರ್ ಹಿಡಿದ ಹುಡುಗಿಯ ಮೇಲೆ ಮೊಕದ್ದಮೆ ದಾಖಲಾಗುತ್ತದೆ. ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದಾರೆ ಎಂದು ಹುಡುಗಿಯನ್ನು ದೇಶದ್ರೋಹದ ಮೇಲೆ ಜೈಲಿಗೆ ಅಟ್ಟಲಾಗುತ್ತದೆ. ಈ ದೇಶದ್ರೋಹದ ಕಲ್ಪನೆಯನ್ನು ತುಂಬಾ ಜಾಳಾಗಿ ಸರ್ಕಾರ ತನ್ನ ವಿರುದ್ಧ ಮಾತನಾಡುವ ಪ್ರತಿಯೊಬ್ಬರ ವಿರುದ್ಧ ಪ್ರಯೋಗ ಮಾಡುತ್ತಿದೆ. ಇದು ಕಳೆದ ಐವತ್ತೇಳು ವರ್ಷದ ಇತಿಹಾಸದಲ್ಲಿ ಬಂದಿರುವ ತೀರ್ಪುಗಳಿಗೆ ತೀರಾ ವ್ಯತಿರಿಕ್ತವಾಗಿದೆ.

ದೇಶದ್ರೋಹದ ಕಾನೂನನ್ನು ವಿಮರ್ಶೆ ಅಂದರೆ ಪ್ರಸ್ತುತತೆಯನ್ನು ನೋಡಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಜೊತೆಗೆ ಪ್ರಪಂಚದ ಸಾಕಷ್ಟು ದೇಶಗಳಲ್ಲಿ ದೇಶದ್ರೋಹದ ಕಾನೂನನ್ನು ತೆಗೆದುಹಾಕಲಾಗಿದೆ ಅನ್ನುವುದನ್ನು ನಾವು ಮರೆಯಬಾರದು..
ನಮಗೆ ಎಪ್ಪತ್ತು ವರ್ಷದಲ್ಲಿ ಪ್ರಜಾಪ್ರಭುತ್ವದ ಭದ್ರವಾದ ತಳಹದಿಯನ್ನು ಪಡೆಯಲು ಸಾಧ್ಯವಾಗಿದೆ. ಈ ಬಗ್ಗೆ ಅನುಮಾನಗಳು ಇಲ್ಲ. ನಮ್ಮಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ, ನಮ್ಮಲ್ಲಿ ಪ್ರತಿರೋಧ ಇದೆ. ಚುನಾಯಿತ ಸರ್ಕಾರಗಳೇ ಅಧಿಕಾರ ನಡೆಸುತ್ತಿವೆ ಇದು ಇರಬೇಕಾದರೆ ಅಭಿವ್ಯಕ್ತಿ ಸ್ವಾತಂತ್ರ್ಯ ತುಂಬಾ ಪ್ರಮುಖವಾಗಿದೆ. ಸರ್ಕಾರದ ಕಾನೂನನ್ನು ಪ್ರಜಾಪ್ರಭುತ್ವದ ರೀತಿಯಲ್ಲಿ ವಿರೋಧಿಸುವ ಹಕ್ಕಿರುತ್ತದೆ ಅಲ್ಲಿ ದೇಶದ್ರೋಹದ ಕಾನೂನಿಗೆ ಅವಕಾಶ ಇರುವುದಿಲ್ಲ. ದೇಶದ್ರೋಹವನ್ನು ಹೊರತುಪಡಿಸಿ ಸಾಕಷ್ಟು ಕಾನೂನು ನಮ್ಮ ಭಾರತೀಯ ದಂಡ ಸಂಹಿತೆಯಲ್ಲಿ ಇದೆ ಅದರ್ರ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ಕೊಡಬಹುದು.

ನಮ್ಮಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಂಡಿದೆ ಎಂದು ಒಪ್ಪುವುದೇ ಆದರೆ ಅಲ್ಲಿ ದೇಶದ್ರೋಹದ ಕಾನೂನು ಇರಲು ಅವಕಾಶವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...