Homeಮುಖಪುಟನ್ಯಾಯ ಮತ್ತು ರಾಜದ್ರೋಹ ಜೊತೆಜೊತೆಗೆ ಹೋಗಲು ಸಾಧ್ಯವಿಲ್ಲ್ಲ

ನ್ಯಾಯ ಮತ್ತು ರಾಜದ್ರೋಹ ಜೊತೆಜೊತೆಗೆ ಹೋಗಲು ಸಾಧ್ಯವಿಲ್ಲ್ಲ

- Advertisement -
- Advertisement -

ದೇಶದ್ರೋಹ, ರಾಷ್ಟ್ರದ್ರೋಹ ಇದು ನಿತ್ಯ ಕೇಳುತ್ತಿರುವಂತಹ ಸುದ್ದಿ. ದೇಶದ್ರೋಹ ಅಂದರೇನು? ದೇಶದ್ರೋಹ ಎನ್ನುವಂತಹದ್ದು ಮೊದಲು ರಾಜದ್ರೋಹ ಎಂದಿತ್ತು. ದೇಶದೆಲ್ಲೆಡೆ ವ್ಯತಿರಿಕ್ತವಾಗಿ ಬೆಳೆಯುತ್ತಿದ್ದ ಚಳವಳಿಗಳನ್ನು ಹತ್ತಿಕ್ಕಲು ಬ್ರಿಟಿಷರು 1879ರಲ್ಲಿ ತಂದ ಕಾನೂನೇ ರಾಜದ್ರೋಹದ ಕಾನೂನು. ಅದರಡಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಎಲ್ಲಾ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರನ್ನು ಜೈಲಿಗೆ ಹಾಕಿದರು.. ಬ್ರಿಟಿಷರ ರಾಜದ್ರೋಹದ ಕಾನೂನಿನಡಿಯಲ್ಲಿ ಚರ್ಚಿತವಾದ 2 ಪ್ರಕರಣಗಳೆಂದರೆ ಒಂದು ಬಾಲಗಂಗಾಧರ ತಿಲಕರ ಪ್ರಕರಣ, ಇನ್ನೊಂದು ಮಹಾತ್ಮ ಗಾಂಧಿಯವರ ಪ್ರಕರಣಗಳು.

ಮಹಾತ್ಮ ಗಾಂಧೀಜಿಯವರ ಪ್ರಕರಣ, ಅವರು ಬರೆದು ಪ್ರಕಟಿಸಿದ ಮೂರು ಲೇಖನಗಳ ವಿರುದ್ಧ ಬ್ರಿಟಿಷ್ ಸರ್ಕಾರ ರಾಜದ್ರೋಹದ ಪ್ರಕರಣ ದಾಖಲಿಸಿತ್ತು. ನ್ಯಾಯಾಲಯದಲ್ಲಿ ವಾದ ಮಂಡಿಸಿದ ಗಾಂಧೀಜಿ, ನ್ಯಾಯಾಧೀಶರಾಗಿ ನಿಮಗೆ 2 ಅವಕಾಶವಿದೆ. ನೀವು ನ್ಯಾಯ ನೀಡುತ್ತೀರೋ, ಕಾನೂನು ಮಾತನಾಡುತ್ತೀರೋ? ನೀವು ಕಾನೂನು ಬಗ್ಗೆ ಮಾತನಾಡುತ್ತೀರಿ ಅಂತಾದರೆ ನಿಮ್ಮ ಕಾನೂನಿನ ಕೆಳಗೆ ನಾನು ಅಪರಾಧಿ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಬ್ರಿಟಿಷ್ ಸರ್ಕಾರ ತೊಲಗಲೇಬೇಕು ಎಂದು ನಾನು ಬರೆದ ಪ್ರತಿಯೊಂದು ಅಕ್ಷರ ಸಹ ಸತ್ಯ. ಅದನ್ನು ತಪ್ಪು ಎಂದು ಹೇಳಲು ನಾನು ತಯಾರಿಲ್ಲ. ನೀವು ಅದಕ್ಕೆ ಅತ್ಯುಗ್ರವಾದ ಶಿಕ್ಷೆ ನೀಡಿ. ನೀವು ನ್ಯಾಯದ ಬಗ್ಗೆ ಮಾತನಾಡುತ್ತೀರಿ ಎಂದಾದರೆ ನೀವು ಈ ಕೆಲಸಕ್ಕೆ ರಾಜಿನಾಮೆ ಕೊಟ್ಟು ಹೋಗಿ. ಯಾಕೆಂದರೆ ನ್ಯಾಯ ಮತ್ತು ರಾಜದ್ರೋಹ ಜೊತೆಜೊತೆಗೆ ಹೋಗಲು ಸಾಧ್ಯವಿಲ್ಲ್ಲ ಎಂದು ಹೇಳುತ್ತಾರೆ.. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಕಾನೂನೇ ರಾಜದ್ರೋಹದ ಕಾನೂನು..

ನಮಗೆ ಸ್ವಾತಂತ್ರ್ಯ ಸಿಕ್ಕಮೇಲೆ, ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಮೇಲೆ ರಾಜದ್ರೋಹ ಉಳಿಯಲು ಸಾಧ್ಯವಿಲ್ಲ ಎನ್ನುವ ಚರ್ಚೆ ಬಂತು. ಇಂತಹ ಘಟನೆಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮೊದಲುಗೊಂಡು ಬಾಂಬೆ ಹೈಕೋರ್ಟ್ ಆದಿಯಾಗಿ ಎಲ್ಲಾ ಕೋರ್ಟ್‍ಗಳು ಕೂಡಾ ರಾಜದ್ರೋಹದ ಕಾನೂನು ಉಳಿಯಲು ಸಾಧ್ಯವಿಲ್ಲ, ಅದು ಹೋಗಲೇಬೇಕು. ಯಾಕೆಂದರೆ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದಲ್ಲಿ ರಾಜದ್ರೋಹದ ಕಾನೂನಿಗೆ ಅವಕಾಶ ಇಲ್ಲ ಎಂದು ಅಭಿಪ್ರಾಯಪಟ್ಟವು.. ಎಲ್ಲಾ ತೀರ್ಪುಗಳ ನಡುವೆಯೂ ಸೆಡಿಷನ್ ಕಾನೂನು ಉಳಿದುಕೊಂಡುಬರಲು ಕಾರಣವೇನೆಂದರೆ ಆಗಿದ್ದಂತಹ ರಾಜಕೀಯ ತಳಮಳದ ಸ್ಥಿತಿ, ವಿಭಜನೆ. ದೇಶದಲ್ಲಿ ಇದ್ದ ಅತಂತ್ರ ಸ್ಥಿತಿಯಿಂದ ಅದನ್ನು ಹಾಗೆಯೇ ಉಳಿಸಿಕೊಳ್ಳಲಾಯಿತು.

ದೇಶದ್ರೋಹ ಕಾನೂನಿನಲ್ಲಿ ಎರಡು ಭಾಗವಿದೆ. ಒಂದು ರಾಷ್ಟ್ರದ ಬಗ್ಗೆ ದ್ವೇಷ ಇರುವಂತಹದ್ದು ಎರಡನೇಯದ್ದು ರಾಷ್ಟ್ರದ ಸರ್ಕಾರದ ನೀತಿಯನ್ನು ವಿರೋಧಿಸುವಂತಹದ್ದು. ಈ ಕಾನೂನಿಗೆ ಸಂಬಂಧಿಸಿದಂತೆ ಮುಖ್ಯವಾದ ತೀರ್ಪು ಬಂದಿದ್ದು ಕೇದಾರನಾಥ ಪ್ರಕರಣದಲ್ಲಿ. 1962 ರಲ್ಲಿ ಬಂದ ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‍ನ ಸಂವಿಧಾನ ಪೀಠ ಹೇಳಿದ್ದು ‘ಸರ್ಕಾರವನ್ನು ಇಲ್ಲದಾಗಿಸುವಾಗ, ಈ ದೇಶದ ಐಕ್ಯತೆ ಮತ್ತು ಸಾರ್ವಭೌಮತೆಯ ಪ್ರಶ್ನೆ ಬಂದಾಗ ಅದು ದೇಶದ್ರೋಹ ಆಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ಒಂದು ಮಿತಿಯಿದೆ. ಈ ಸಂದರ್ಭದಲ್ಲಿ ರಾಷ್ಟ್ರದ್ರೋಹದ ಕಾನೂನು ಸಿಂಧುವಾಗುತ್ತದೆ’.

2ನೇ ಭಾಗದಲ್ಲಿ ಸರ್ಕಾರದ ನೀತಿಯ ವಿರುದ್ಧ ಯಾವುದೇ ಪ್ರತಿರೋಧ, ವಿಮರ್ಶೆ, ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ದೇಶದ್ರೋಹ ಆಗುವುದಿಲ್ಲ. ದೇಶದ ವ್ಯವಸ್ಥೆಯನ್ನೇ ಕಿತ್ತೊಗೆಯುವ ಹೇಳಿಕೆ ಬಂದಾಗ ಮಾತ್ರ ದೇಶದ್ರೋಹ ಆಗುತ್ತದೆ. ಇದರ ನಂತರ ಸಾಕಷ್ಟು ತೀರ್ಪುಗಳು ಬಂದಿದೆ. ಅದರಲ್ಲಿ ಮುಖ್ಯವಾದುದು “ಬಲವಂತ್ ಸಿಂಗ್” ತೀರ್ಪು. ಇದರಲ್ಲಿ ಖಾಲಿಸ್ಥಾನ್ ಜಿಂದಾಬಾದ್ ಎನ್ನುವ ಹೇಳಿಕೆಯನ್ನಿಟ್ಟುಕೊಂಡು ಹೊಸ ರಾಷ್ಟ್ರದ ಬಗ್ಗೆ ಮಾತನಾಡುತ್ತಾರೆ ಎಂದು ಆರೋಪಿಸಲಾಯಿತು. ಆದರೆ ಸುಪ್ರೀಂ ಇದು ದೇಶದ್ರೋಹ ಆಗುವುದಿಲ್ಲ ಎಂದು ತೀರ್ಪು ನೀಡಿತು.

ದೇಶದ ವ್ಯವಸ್ಥೆ ಬದಲಾಯಿಸುವ ಬಗ್ಗೆ ಹೇಳುವುದಿಲ್ಲವೊ ಅದು ದೇಶದ್ರೋಹವಲ್ಲ. ದುರಂತವೆಂದರೆ 1962ರ ನಂತರ ಬಂದ ಎಲ್ಲಾ ರಾಜಕೀಯ ಪಕ್ಷಗಳು ಈ ಕಾನೂನನ್ನು ದುರುಪಯೋಗಪಡಿಸಿಕೊಂಡಿವೆ. ತಮ್ಮ ವಿರುದ್ಧ ಯಾರು ಮಾತನಾಡಿದರೂ ದೇಶದ್ರೋಹದ ಕಾನೂನು ಉಪಯೋಗಿಸಿ ಮೊಕದ್ದಮೆ ದಾಖಲುಮಾಡಿ ಅವರನ್ನು ಜೈಲಿಗೆ ಹಾಕಲಾಗುತ್ತಿದೆ. ಈ ಪ್ರವೃತ್ತಿ ಈಗ ಇನ್ನು ಹೆಚ್ಚಾಗಿದೆ.

ದುರಂತವೆಂದರೆ ಒಂದು ಚಿಕ್ಕ ನಾಟಕದಲ್ಲಿ ಬರೆದ “ಚಪ್ಪಲಿಯಲ್ಲಿ ಹೊಡೆಯಿರಿ” ಎಂಬ ವಾಕ್ಯದ ಕಾರಣಕ್ಕೆ ದೇಶದ್ರೋಹದ ಪ್ರಕರಣ ಬೀದರಿನಲ್ಲಿ ತಾಯಿ ಮತ್ತು ಶಿಕ್ಷಕಿಯ ಮೇಲೆ ದಾಖಲಾಗಿರುತ್ತದೆ. “ಫ್ರೀ ಕಾಶ್ಮೀರ” ಎಂಬ ಪೋಸ್ಟರ್ ಹಿಡಿದ ಹುಡುಗಿಯ ಮೇಲೆ ಮೊಕದ್ದಮೆ ದಾಖಲಾಗುತ್ತದೆ. ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದಾರೆ ಎಂದು ಹುಡುಗಿಯನ್ನು ದೇಶದ್ರೋಹದ ಮೇಲೆ ಜೈಲಿಗೆ ಅಟ್ಟಲಾಗುತ್ತದೆ. ಈ ದೇಶದ್ರೋಹದ ಕಲ್ಪನೆಯನ್ನು ತುಂಬಾ ಜಾಳಾಗಿ ಸರ್ಕಾರ ತನ್ನ ವಿರುದ್ಧ ಮಾತನಾಡುವ ಪ್ರತಿಯೊಬ್ಬರ ವಿರುದ್ಧ ಪ್ರಯೋಗ ಮಾಡುತ್ತಿದೆ. ಇದು ಕಳೆದ ಐವತ್ತೇಳು ವರ್ಷದ ಇತಿಹಾಸದಲ್ಲಿ ಬಂದಿರುವ ತೀರ್ಪುಗಳಿಗೆ ತೀರಾ ವ್ಯತಿರಿಕ್ತವಾಗಿದೆ.

ದೇಶದ್ರೋಹದ ಕಾನೂನನ್ನು ವಿಮರ್ಶೆ ಅಂದರೆ ಪ್ರಸ್ತುತತೆಯನ್ನು ನೋಡಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಜೊತೆಗೆ ಪ್ರಪಂಚದ ಸಾಕಷ್ಟು ದೇಶಗಳಲ್ಲಿ ದೇಶದ್ರೋಹದ ಕಾನೂನನ್ನು ತೆಗೆದುಹಾಕಲಾಗಿದೆ ಅನ್ನುವುದನ್ನು ನಾವು ಮರೆಯಬಾರದು..
ನಮಗೆ ಎಪ್ಪತ್ತು ವರ್ಷದಲ್ಲಿ ಪ್ರಜಾಪ್ರಭುತ್ವದ ಭದ್ರವಾದ ತಳಹದಿಯನ್ನು ಪಡೆಯಲು ಸಾಧ್ಯವಾಗಿದೆ. ಈ ಬಗ್ಗೆ ಅನುಮಾನಗಳು ಇಲ್ಲ. ನಮ್ಮಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ, ನಮ್ಮಲ್ಲಿ ಪ್ರತಿರೋಧ ಇದೆ. ಚುನಾಯಿತ ಸರ್ಕಾರಗಳೇ ಅಧಿಕಾರ ನಡೆಸುತ್ತಿವೆ ಇದು ಇರಬೇಕಾದರೆ ಅಭಿವ್ಯಕ್ತಿ ಸ್ವಾತಂತ್ರ್ಯ ತುಂಬಾ ಪ್ರಮುಖವಾಗಿದೆ. ಸರ್ಕಾರದ ಕಾನೂನನ್ನು ಪ್ರಜಾಪ್ರಭುತ್ವದ ರೀತಿಯಲ್ಲಿ ವಿರೋಧಿಸುವ ಹಕ್ಕಿರುತ್ತದೆ ಅಲ್ಲಿ ದೇಶದ್ರೋಹದ ಕಾನೂನಿಗೆ ಅವಕಾಶ ಇರುವುದಿಲ್ಲ. ದೇಶದ್ರೋಹವನ್ನು ಹೊರತುಪಡಿಸಿ ಸಾಕಷ್ಟು ಕಾನೂನು ನಮ್ಮ ಭಾರತೀಯ ದಂಡ ಸಂಹಿತೆಯಲ್ಲಿ ಇದೆ ಅದರ್ರ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ಕೊಡಬಹುದು.

ನಮ್ಮಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಂಡಿದೆ ಎಂದು ಒಪ್ಪುವುದೇ ಆದರೆ ಅಲ್ಲಿ ದೇಶದ್ರೋಹದ ಕಾನೂನು ಇರಲು ಅವಕಾಶವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...