Homeಮುಖಪುಟಜಾರ್ಖಂಡ್‌ನಲ್ಲಿ ಹುಲ್ ಜೋಹಾರ್! ಬಿರ್ಸಾ ನೆಲ ಆಯ್ದುಕೊಂಡಿದ್ದು ಜಲ್ ಜಂಗಲ್ ಜಮೀನ್..

ಜಾರ್ಖಂಡ್‌ನಲ್ಲಿ ಹುಲ್ ಜೋಹಾರ್! ಬಿರ್ಸಾ ನೆಲ ಆಯ್ದುಕೊಂಡಿದ್ದು ಜಲ್ ಜಂಗಲ್ ಜಮೀನ್..

ದೇಶಾದ್ಯಂತ ಪೌರತ್ವ ಕಾಯಿದೆ(ಸಿಏಏ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ವಿರುದ್ಧ ಆಗುತ್ತಿರುವ ಪ್ರತಿಭಟನೆಗಳ ನಡುವೆಯೇ ಈ ಫಲಿತಾಂಶಗಳು ಬಂದಿವೆ. ಹಾಗಾಗಿ ಈ ಪ್ರಯೋಗದ ರೂವಾರಿಗಳಾದ ಮೋದಿ-ಶಾ ಜೋಡಿಗೆ ಇದು ಡಬಲ್ ಹಿನ್ನಡೆಯಾಗಿದೆ

- Advertisement -
- Advertisement -

ರಘುಬರ್ ದಾಸ್ ನೇತೃತ್ವದ ಬಿಜೆಪಿ ಸರಕಾರವು ಜಾರ್ಖಂಡ್‌ನಲ್ಲಿ ಸೋಲು ಕಂಡಿದೆ. ಇದನ್ನು ಆರ್‌ಎಸ್‌ಎಸ್‌ನ ಹಿಂದುತ್ವ ಪ್ರಯೋಗಶಾಲೆಗಳಲ್ಲಿ ಒಂದೆಂದೂ ಕರೆಯಲಾಗಿತ್ತು. ಹಾಗಾಗಿ ಈ ಚುನಾವಣೆ ಕೇವಲ ರಾಜ್ಯದ ಆದಿವಾಸಿ ವರ್ಗಕ್ಕೆ ಸೇರದ ಮೊದಲ ಮುಖ್ಯಮಂತ್ರಿಯ ನಿರ್ಗಮನವಷ್ಟೇ ಅಲ್ಲದೇ, ಬಿಜೆಪಿಯ ಸಾಮಾಜಿಕ ಸಮೀಕರಣದ ವಿನ್ಯಾಸಗಳಿಗೂ ಸೋಲು ಎನ್ನಬಹುದಾಗಿದೆ. ಇದು ಕೇವಲ ಬಿಜೆಪಿಯ ಬೆಂಬಲಿಗರಿಗೆ ಮಾತ್ರವಲ್ಲ, ಮೋದಿ ಮತ್ತು ಅಮಿತ್ ಶಾರ ಚಾಣಕ್ಯ ನೀತಿ ಮತ್ತು ಅವರ ಸೋಲಲಾರರು ಎಂದು ನಂಬಿದವರಿಗೂ ಆಘಾತ ತಂದುಕೊಟ್ಟಿದೆ.

ಆಡಳಿತವಿರೋಧಿ ಅಲೆ, ಆದಿವಾಸಿ ಸಮುದಾಯಕ್ಕೆ ಸೇರದ ಮುಖ್ಯಮಂತ್ರಿ ಮತ್ತು ಬುಡಕಟ್ಟು ನೀತಿಗಳು

ಜಾರ್ಖಂಡ್‌ನಲ್ಲಿ ಬುಡಕಟ್ಟು ಸಮುದಾಯಗಳ ಅನುಪಾತ 26-30%ರಷ್ಟು. ಪರಿಶಿಷ್ಟ ಸಮುದಾಯಗಳಿಗೆ ಮೀಸಲಾದ 28 ಕ್ಷೇತ್ರಗಳಲ್ಲಿ ಜೆಎಮ್‌ಎಮ್-ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಯು 25ರಲ್ಲಿ ಗೆಲುವು ಸಾಧಿಸಿದೆ. 2014ರಲ್ಲಿ ಬಿಜೆಪಿಯು 11 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.

ಅಲ್ಲಿ ಆಗಿದ್ದೇನು?

ಆದಿವಾಸಿಗಳ ಭೂಮಿಯನ್ನು ಕಬಳಿಸಲು ಸುಲಭವಾಗುವಂತೆ ಮಾಡಿದ ರಘುಬರ್ ದಾಸ್ ಅವರ ಕ್ರಮಗಳಿಂದ ಸಿಟ್ಟು ಮತ್ತು ತೀವ್ರ ಅಸಮಾಧಾನ ಉಂಟಾಗಿತ್ತು. ಪರಿಶಿಷ್ಟ ಸಮುದಾಯಗಳ ಭೂಕಬಳಿಕೆಯನ್ನು ತಡೆಯಲು ಇದ್ದ ಬುಡಕಟ್ಟು ಟೆನನ್ಸಿ ಕಾಯಿದೆಗೆ 2017ರಲ್ಲಿ ತಿದ್ದುಪಡಿ ತರಲು ಪ್ರಯತ್ನಿಸಿದರು. ಇದರಿಂದ ಬುಡಕಟ್ಟು ಸಮುದಾಯಗಳ ವಿಶ್ವಾಸವನ್ನು ಕಳೆದುಕೊಳ್ಳವಂತಾಯಿತು. ಈ ಕಾಯಿದೆಯನ್ನು ಬದಲಿಸಿ, ಆದಿವಾಸಿ ಭೂಮಿಯ ವಾಣಿಜ್ಯ ಬಳಕೆಗಾಗಿ ಛೋಟಾನಾಗಪುರ್ ಟೆನನ್ಸಿ ಕಾಯಿದೆ (ಸಿಎನ್‌ಟಿಏ) ಮತ್ತು ಸಂಥಲ್ ಪರಗನಾಸ್ ಟೆನನ್ಸಿ ಕಾಯಿದೆ (ಎಸ್‌ಪಿಟಿಏ)ಗಳಿಗೆ ತಿದ್ದುಪಡಿ ತರಲು ಪ್ರಯತ್ನಿಸಿದರು. ಈ ಕ್ರಮವನ್ನು ಕಾರ್ಪೋರೇಟ್ ಪರ ಮತ್ತು ಆದಿವಾಸಿ ವಿರೋಧಿ ಎಂದು ನೋಡಲಾಯಿತು. ಕಾಂಗ್ರೆಸ್-ಜೆಮ್‌ಎಮ್ಎಮ್‌ ಪಕ್ಷಗಳು ಅಲ್ಲಿಯ ಚರ್ಚಿನೊಂದಿಗೆ ಸೇರಿಕೊಂಡು ಈ ತಿದ್ದುಪಡಿಗಳನ್ನು ವಿರೋಧಿಸಿದವು. ಆದಿವಾಸಿ ಸಮುದಾಯಗಳ ವಿರೋಧ ಮತ್ತು ಸಿಟ್ಟನ್ನು ನೋಡಿ ಲೋಕಸಭೆ ಚುನಾವಣೆಗೆ ಮುನ್ನ ಈ ತಿದ್ದುಪಡಿಗಳನ್ನು ಕೈಬಿಡಲಾಯಿತು. ಆದರೆ ಅಷ್ಟರಲ್ಲಿ ಅಲೆ ತಿರುಗಿತ್ತು.

ಹೇಮಂತ್‌ ಸೊರೆನ್‌ ಮತ್ತು ಶಿಬು ಸೊರೆನ್‌

ಈ ತಿದ್ದುಪಡಿಗಳು ಸೃಷ್ಟಿಸಿದ ಆತಂಕಗಳು ‘ಪಥಾಲ್‌ರ‍್ಹಿ ಆಂದೋಲನ’ ಎಂಬ ಚಳವಳಿ (ಹುಲ್ ಜೋಹಾರ್ ಎಂಬುದು ಅವರ ಘೋಷವಾಕ್ಯ) ಹುಟ್ಟಲು ಕಾರಣವಾದವು. ಈ ಚಳವಳಿಯನ್ನು ಹತ್ತಿಕ್ಕಲು ದಾಸ್ ಸರಕಾರವು ಕನಿಷ್ಠ 10,000 ಜನರ ಮೇಲೆ ಪ್ರಕರಣ ದಾಖಲಿಸಿತು; ಅವರಲ್ಲಿ ಅನೇಕರು ಇನ್ನೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಹೋರಾಟಗಾರ್ತಿ ದಯಾಮಣಿ ಬಾರ್ಲಾ ಚುನಾವಣೆಗೆ ಸ್ಪರ್ಧಿಸಿದ ಕ್ಷೇತ್ರದ ಜಿಲ್ಲೆ ಖುಂಟಿಯಲ್ಲಿಯೇ 26 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ ದೇಶದ್ರೋಹ, ಅಪಹರಣ, ಬಲಾತ್ಕಾರ ಮತ್ತು ಇತರ ಗಂಭೀರ ಆರೋಪಗಳನ್ನು ಆದಿವಾಸಿ ಮುಖಂಡರ ವಿರುದ್ಧ ದಾಖಲಿಸಲಾಗಿದೆ. ಪೊಲೀಸ್ ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸುತ್ತ ತಮ್ಮ ಆಧಾರ್ ಕಾರ್ಡಗಳನ್ನು ನೆಲದಲ್ಲಿ ಹೂತು, ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಮೀಸಲು ಕ್ಷೇತ್ರದಿಂದಲೇ ಬಿಜೆಪಿಯ ರಾಜ್ಯ ಅಧ್ಯಕ್ಷ ಲಕ್ಷ್ಮಣ ಗಿಲುವಾ ಸೋತಿರುವುದು ಆದಿವಾಸಿಗಳ ಸಿಟ್ಟಿನ ಪ್ರಮಾಣವನ್ನು ತೋರಿಸುತ್ತದೆ. ಪಥಾಲ್‌ರ‍್ಹಿ ಆಂದೋಲನದಲ್ಲಿ ಪಾಲ್ಗೊಂಡ ಜನರ ಮೇಲೆ ಪೊಲೀಸರು ಕೈಗೊಂಡ ಕ್ರಮಕ್ಕೆ ಅವರು ಗಟ್ಟಿಯಾಗಿ ಸಮರ್ಥಕರಾಗಿದ್ದರು.

ದಯಾಮಣಿ ಬಾರ್ಲಾ

ದೇಶದಲ್ಲೇ ಅತಿ ಹೆಚ್ಚು ಗುಂಪು ಹಲ್ಲೆ (ಮಾಬ್ ಲಿಂಚಿಂಗ್)ಗಳು ಆದ ರಾಜ್ಯ ಝಾರ್ಖಂಡ್; 20 ಇಂತಹ ಪ್ರಕರಣಗಳು ದಾಖಲಾಗಿವೆ. ಮತಾಂತರ ಮತ್ತು ಗೋ ಸಂಬಂಧಿತ ವಿಷಯಗಳ ಬಗ್ಗೆ ಮುಖ್ಯಮಂತ್ರಿ ತೋರಿದ ಸೈದ್ಧಾಂತಿಕ ಪ್ರತಿಪಾದನೆಯೂ ಅಲ್ಲಿಯ ಹಿಂದು, ಕ್ರಿಶ್ಚಿಯನ್ ಮತ್ತು ಆದಿವಾಸಿ ಸಮುದಾಯಗಳಿಗೆ ಒಪ್ಪಿಗೆಯಾಗಲಿಲ್ಲ.

ಮೋದಿ ಅಲೆ ಕಣ್ಮರೆಯಾಗುತ್ತಿದೆಯೇ?

ಇದು ಕೇವಲ ಜನಪ್ರಿಯತೆ ಕಳೆದುಕೊಂಡ ಮುಖ್ಯಮಂತ್ರಿಯ ಸೋಲೇ ಹೊರತು ಮೋದಿ ಅಲೆಯ ಬಗ್ಗೆ ಇದು ಏನನ್ನೂ ಹೇಳುವುದಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಪ್ರಚಾರವನ್ನು ನೋಡಿದಾಗ, ಮೋದಿ ಮತ್ತು ಶಾ ಇಬ್ಬರೂ ಪ್ರತ್ಯೇಕವಾಗಿ 9 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ರಾಮ ಮಂದಿರದ ಬಗ್ಗೆ, ಆರ್ಟಿಕಲ್ 370ಅನ್ನು ಹಿಂಪಡೆದ ಬಗ್ಗೆ ತಮ್ಮ ಸಾಧನೆಗಳ ಬಗ್ಗೆ ಮತ್ತು ಕಾಂಗ್ರೆಸ್‌ನ ವಿಫಲತೆಗಳ ಬಗ್ಗೆ ಭಾಷಣ ಬಿಗಿದರು. ಪೌರತ್ವ ಕಾನೂನಿನ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದಾಗಲೇ ಕೆಲವು ರ‍್ಯಾಲಿಗಳಾದವು. ‘ಗಲಭೆ ಮಾಡುವವರನ್ನು ಅವರ ಬಟ್ಟೆ ನೋಡಿ ಗುರುತಿಸಬಹುದು’ ಎಂದು ಮೋದಿ ಧಾರ್ಮಿಕ ನೆಲೆಯ ಮೇಲೆ ವಿಭಜನಾ ತಂತ್ರವನ್ನೂ ಬಳಸಿದರು. ಈ ರ‍್ಯಾಲಿಗಳಲ್ಲಿ ಇವರು ತಲುಪಿದ 16 ಕ್ಷೇತ್ರಗಳಲ್ಲಿ 11 ಕ್ಷೇತ್ರಗಳಲ್ಲಿ ಸೋಲನ್ನು ಕಂಡಿದ್ದಾರೆ.

ಇದರೊಂದಿಗೆ ದೇಶಾದ್ಯಂತ ಪೌರತ್ವ ಕಾಯಿದೆ(ಸಿಏಏ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ವಿರುದ್ಧ ಆಗುತ್ತಿರುವ ಪ್ರತಿಭಟನೆಗಳ ನಡುವೆಯೇ ಈ ಫಲಿತಾಂಶಗಳು ಬಂದಿವೆ. ಹಾಗಾಗಿ ಈ ಪ್ರಯೋಗದ ರೂವಾರಿಗಳಾದ ಮೋದಿ-ಶಾ ಜೋಡಿಗೆ ಇದು ಡಬಲ್ ಹಿನ್ನಡೆಯಾಗಿದೆ.

ಇದರೊಂದಿಗೆ, ಅಸೆಂಬ್ಲಿ ಚುನಾವಣೆಗಳಲ್ಲಿ ಸ್ಥಳೀಯ ವಿಷಯಗಳ ಮೇಲೆಯೇ ಜನರು ಮತ ಚಲಾಯಿಸುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಭೂಮಿ ಹಕ್ಕುಗಳು ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ನಿರ್ಲಕ್ಷಿಸಿ ಆರ್ಟಿಕಲ್ 370, ರಾಮಮಂದಿರದಂತಹ ವಿಷಯಗಳನ್ನಿಟ್ಟುಕೊಂಡು ಪ್ರಚಾರ ಮಾಡಿದ ಬಿಜೆಪಿಗೆ ಇದು ಉತ್ತರವೇ ಎಂಬ ಪ್ರಶ್ನೆಯೂ ಎದ್ದಿದೆ. ಅಂತಿಮವಾಗಿ ಒಂದಂತೂ ಸತ್ಯ; ರಾಜ್ಯಗಳಿಗೆ ಒಂದು ರೀತಿಯಲ್ಲಿ, ಲೋಕಸಭೆಗೆ ಇನ್ನೊಂದು ರೀತಿಯಲ್ಲಿ ಮತದಾರರು ಮತ ಚಲಾಯಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...