Homeಎಂಟರ್ತೈನ್ಮೆಂಟ್ಚಾ ಮತ್ತು ಪಂಕ್ಚರ್‌: ಬೆಕ್ಕಣ್ಣನಿಗೂ ದಾಖಲೆಗಳ ಚಿಂತೆ!

ಚಾ ಮತ್ತು ಪಂಕ್ಚರ್‌: ಬೆಕ್ಕಣ್ಣನಿಗೂ ದಾಖಲೆಗಳ ಚಿಂತೆ!

2011 ಸೆನ್ಸಸ್ ಪ್ರಕಾರ ಬೆಂಗಳೂರು ದಕ್ಷಿಣದಾಗೆ 63 ಸಾವಿರ ಮಂದಿ ಅನಕ್ಷರಸ್ಥರು ಅದಾರ... ಅವನಿಗೆ ವೋಟು ಹಾಕಿದವ್ರಲ್ಲಿ ಒಂದ್ ಹತ್ ಪರ್ಸೆಂಟಾದ್ರೂ ಎದೆ ಸೀಳಿದ್ರ ಒಂದ್ ಅಕ್ಸರ ಇಲ್ಲದೋರೆ ಅದಾರ. ಅಂವ ಮಂಗ್ಯಾನಂಥಂವ ಹೇಳ್ತಾನ ಅಂತ ನೀನೂ ಅಳ್ತೀಯಲ್ಲಲ್ಲೇ..

- Advertisement -
- Advertisement -

ಬೆಕ್ಕಣ್ಣ ಯಾಕೋ ಬಲು ಬೇಜಾರಿನ ಮುಖ ಹೊತ್ತು ಮನೆಗೆ ಬಂದಿತು.

“ಏನಾತಲೇ… ಈರುಳ್ಳಿ ಇನ್ನೂ ಆಕಾಶದಾಗೆ ತೇಲಾಡಕಹತ್ತೈತಿ ಅಂತ ಬೇಜಾರಾಗಿಯೇನ್” ಅಂತ ಕೇಳಿದೆ.

‘ಅದಕ್ಯಾಕ್ ನಾ ಬೇಜಾರಾಗ್ಲಿ… ನಾ ಏನ್ ಈರುಳ್ಳಿ ತಿನ್ನಾಂವ ಅಲ್ಲ, ಹಾಲು ಕುಡಿಯಾಂವ. ಈರುಳ್ಳಿ ತಿನ್ನಾಕಿ ನೀ ಅಳಬಕು, ನಾ ಅಲ್ಲ’ ಎಂದು ಮುಗುಮ್ಮಾಗಿ ಉತ್ತರಿಸಿತು.

“ಮತ್ಯಾಕ ಹಿಂಗ ಗಡಗಿ ಮಾರಿ ಮಾಡೀ” ಎಂದು ತುಸು ಅನುನಯಿಸಿದೆ.

“ನಾ ಎಷ್ಟ್ ಬಡಕಂಡೆ… ನನ್ನೂ ಸಾಲಿಗಿ ಹಚ್ಚು, ನಾಕ್ ಅಕ್ಸರ ಕಲೀತೀನಿ ಅಂತ. ನೀ ಕೇಳಲಿಲ್ಲ…. ಪಂಕ್ಚರ್ ಅಂಗಡ್ಯಾಗ ಇಲಿ ಹಿಡಿಯೂ ಕೆಲಸಕ್ಕೆ ಹಚ್ಚಿದಿ. ಸಾಲಿ ಕಲಿತು ಏನ್ ಕಡಿತಿ, ದಗದ ಮಾಡಬಕು ಅಂತ್ಹೇಳಿ ನಾ ಮರಿ ಇದ್ದಾಗೇ ಕೆಲಸಕ್ಕೆ ಹಚ್ಚಿದಿ…ಈಗ ನೋಡು” ಎಂದು ಅಳುಮುಖ ಮಾಡಿತು.

“ಏನಾತಲೇ ಈಗ… ಮತ್ತ ಎಲ್ಲಾರೂ ಸಾಲಿ ಕಲಿತು ಶಾಣೇ ಆಗಿ, ಕಂಪ್ಯೂಟರ್ ಮುಂದ ಕುಂತ್ರ, ಪಂಕ್ಚರ್ ತಿದ್ದೋರು ಯಾರಲೇ… ಬೆಳಗ್ಗಿ ಬೆಳಗ್ಗಿ ಏನ್ ಗೋಳು ಹಚ್ಚಿ ಹೋಗಲೇ” ಎಂದು ಜಬರಿಸಿದೆ.

“ಎದೆ ಸೀಳಿದರೆ ನಾಕ್ ಅಕ್ಸರ ಇಲ್ಲದೋರು, ಪಂಕ್ಚರ್ ಅಂಗಡ್ಯಾಗ ಕೆಲಸ ಮಾಡೋರೆಲ್ಲ ಬೀದೀ ಬದಿ ಪ್ರತಿಭಟನೆ ನಡೆಸ್ಯಾರ ಅಂತ ತೇಜಣ್ಣ ವದರಾಕ ಹತ್ತಿದ್ದ…” ಸುಂಬಳ ಮೇಲೇರಿಸುತ್ತಲೇ ವಿವರಿಸಿತು.

“ಅಂವನ ಕಾರು ಪಂಕ್ಚರ್ ಆದಾಗ ಐಟಿ ಸೆಲ್‍ ವಳಗ ಕುತ್ತೋರು ಬಂದು ತಿದ್ದತಾರೇನು… ಮತ್ತ ಅವನಿಗೆ ವೋಟು ಹಾಕಿದೋರು ಬರೀ ಪಿಎಚ್‍ಡಿ ಮಂದಿ, ಕಂಪ್ಯೂಟರ್ ಕಲಿತ ಮಂದಿ ಅಷ್ಟೇ ಏನು…ನಿನಗ ಗೊತೈತಿಲ್ಲೋ, 2011 ಸೆನ್ಸಸ್ ಪ್ರಕಾರ ಬೆಂಗಳೂರು ದಕ್ಷಿಣದಾಗೆ 63 ಸಾವಿರ ಮಂದಿ ಅನಕ್ಷರಸ್ಥರು ಅದಾರ… ಅವನಿಗೆ ವೋಟು ಹಾಕಿದವ್ರಲ್ಲಿ ಒಂದ್ ಹತ್ ಪರ್ಸೆಂಟಾದ್ರೂ ಎದೆ ಸೀಳಿದ್ರ ಒಂದ್ ಅಕ್ಸರ ಇಲ್ಲದೋರೆ ಅದಾರ. ಅಂವ ಮಂಗ್ಯಾನಂಥಂವ ಹೇಳ್ತಾನ ಅಂತ ನೀನೂ ಅಳ್ತೀಯಲ್ಲಲ್ಲೇ… ಚಾ ಮಾರೂದು ಎಷ್ಟ್ ವಳ್ಳೆ ಕೆಲಸನೋ ಪಂಕ್ಚರ್ ತಿದ್ದೂದೂ ಅಷ್ಟೇ ವಳ್ಳೆ ಕೆಲಸ” ನಾನು ಇಷ್ಟುದ್ದ ಹೇಳಿ ಸಮಾಧಾನಿಸಲು ಯತ್ನಿಸಿದೆ.

“ಆದ್ರ ಚಾ ಮಾರೂ ಮಂದೀನೆ ಬ್ಯಾರೆ ಅಂತ, ಪಂಕ್ಚರ್ ತಿದ್ದೂ ಮಂದೀನೆ ಬ್ಯಾರೆ ಅಂತ. ನನಗೇನ್ ಅಷ್ಟ್ ತಿಳಿಯಂಗಿಲ್ಲ  ಅಂತ ಮಾಡೀಯೇನ್. ಹೋಗ್ಲಿ, ನನ್ನುವು ಎಲ್ಲಾ ಡಾಕ್ಯುಮೆಂಟ್ಸ್ ಸರಿ ಇಟ್ಟೀಯಿಲ್ಲೋ… ಆಮ್ಯಾಗೆ ನಿನ್ ಮುತ್ತಜ್ಜಿ ಎಲ್ಲಿಂದ ಬಂದಾಳ ಅಂತ್ಲೇ ಗೊತ್ತಿಲ್ಲ, ನೀ  ಬ್ಯಾರೆ ಪಂಕ್ಚರ್ ಅಂಗಡಿ ಮಂದಿ ಜೋಡಿ ಕೆಲಸ ಮಾಡಾಂವ, ನೀ ಹಿಂದೂಸ್ಥಾನದಂವ ಅಲ್ಲ ಅಂತೆಲ್ಲ ಹೇಳಿ ಕ್ಯಾಂಪಿಗೆ ಕಳಿಸಬ್ಯಾಡ್ರಿ” ಎನ್ನುತ್ತ ಮನೆಯಲ್ಲಿ ತನ್ನ ಡಾಕ್ಯುಮೆಂಟ್ಸ್ ಹುಡುಕತೊಡಗಿತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...