Homeಮುಖಪುಟಜಾರ್ಖಂಡ್‌ನಲ್ಲಿ ಹುಲ್ ಜೋಹಾರ್! ಬಿರ್ಸಾ ನೆಲ ಆಯ್ದುಕೊಂಡಿದ್ದು ಜಲ್ ಜಂಗಲ್ ಜಮೀನ್..

ಜಾರ್ಖಂಡ್‌ನಲ್ಲಿ ಹುಲ್ ಜೋಹಾರ್! ಬಿರ್ಸಾ ನೆಲ ಆಯ್ದುಕೊಂಡಿದ್ದು ಜಲ್ ಜಂಗಲ್ ಜಮೀನ್..

ದೇಶಾದ್ಯಂತ ಪೌರತ್ವ ಕಾಯಿದೆ(ಸಿಏಏ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ವಿರುದ್ಧ ಆಗುತ್ತಿರುವ ಪ್ರತಿಭಟನೆಗಳ ನಡುವೆಯೇ ಈ ಫಲಿತಾಂಶಗಳು ಬಂದಿವೆ. ಹಾಗಾಗಿ ಈ ಪ್ರಯೋಗದ ರೂವಾರಿಗಳಾದ ಮೋದಿ-ಶಾ ಜೋಡಿಗೆ ಇದು ಡಬಲ್ ಹಿನ್ನಡೆಯಾಗಿದೆ

- Advertisement -
- Advertisement -

ರಘುಬರ್ ದಾಸ್ ನೇತೃತ್ವದ ಬಿಜೆಪಿ ಸರಕಾರವು ಜಾರ್ಖಂಡ್‌ನಲ್ಲಿ ಸೋಲು ಕಂಡಿದೆ. ಇದನ್ನು ಆರ್‌ಎಸ್‌ಎಸ್‌ನ ಹಿಂದುತ್ವ ಪ್ರಯೋಗಶಾಲೆಗಳಲ್ಲಿ ಒಂದೆಂದೂ ಕರೆಯಲಾಗಿತ್ತು. ಹಾಗಾಗಿ ಈ ಚುನಾವಣೆ ಕೇವಲ ರಾಜ್ಯದ ಆದಿವಾಸಿ ವರ್ಗಕ್ಕೆ ಸೇರದ ಮೊದಲ ಮುಖ್ಯಮಂತ್ರಿಯ ನಿರ್ಗಮನವಷ್ಟೇ ಅಲ್ಲದೇ, ಬಿಜೆಪಿಯ ಸಾಮಾಜಿಕ ಸಮೀಕರಣದ ವಿನ್ಯಾಸಗಳಿಗೂ ಸೋಲು ಎನ್ನಬಹುದಾಗಿದೆ. ಇದು ಕೇವಲ ಬಿಜೆಪಿಯ ಬೆಂಬಲಿಗರಿಗೆ ಮಾತ್ರವಲ್ಲ, ಮೋದಿ ಮತ್ತು ಅಮಿತ್ ಶಾರ ಚಾಣಕ್ಯ ನೀತಿ ಮತ್ತು ಅವರ ಸೋಲಲಾರರು ಎಂದು ನಂಬಿದವರಿಗೂ ಆಘಾತ ತಂದುಕೊಟ್ಟಿದೆ.

ಆಡಳಿತವಿರೋಧಿ ಅಲೆ, ಆದಿವಾಸಿ ಸಮುದಾಯಕ್ಕೆ ಸೇರದ ಮುಖ್ಯಮಂತ್ರಿ ಮತ್ತು ಬುಡಕಟ್ಟು ನೀತಿಗಳು

ಜಾರ್ಖಂಡ್‌ನಲ್ಲಿ ಬುಡಕಟ್ಟು ಸಮುದಾಯಗಳ ಅನುಪಾತ 26-30%ರಷ್ಟು. ಪರಿಶಿಷ್ಟ ಸಮುದಾಯಗಳಿಗೆ ಮೀಸಲಾದ 28 ಕ್ಷೇತ್ರಗಳಲ್ಲಿ ಜೆಎಮ್‌ಎಮ್-ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಯು 25ರಲ್ಲಿ ಗೆಲುವು ಸಾಧಿಸಿದೆ. 2014ರಲ್ಲಿ ಬಿಜೆಪಿಯು 11 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.

ಅಲ್ಲಿ ಆಗಿದ್ದೇನು?

ಆದಿವಾಸಿಗಳ ಭೂಮಿಯನ್ನು ಕಬಳಿಸಲು ಸುಲಭವಾಗುವಂತೆ ಮಾಡಿದ ರಘುಬರ್ ದಾಸ್ ಅವರ ಕ್ರಮಗಳಿಂದ ಸಿಟ್ಟು ಮತ್ತು ತೀವ್ರ ಅಸಮಾಧಾನ ಉಂಟಾಗಿತ್ತು. ಪರಿಶಿಷ್ಟ ಸಮುದಾಯಗಳ ಭೂಕಬಳಿಕೆಯನ್ನು ತಡೆಯಲು ಇದ್ದ ಬುಡಕಟ್ಟು ಟೆನನ್ಸಿ ಕಾಯಿದೆಗೆ 2017ರಲ್ಲಿ ತಿದ್ದುಪಡಿ ತರಲು ಪ್ರಯತ್ನಿಸಿದರು. ಇದರಿಂದ ಬುಡಕಟ್ಟು ಸಮುದಾಯಗಳ ವಿಶ್ವಾಸವನ್ನು ಕಳೆದುಕೊಳ್ಳವಂತಾಯಿತು. ಈ ಕಾಯಿದೆಯನ್ನು ಬದಲಿಸಿ, ಆದಿವಾಸಿ ಭೂಮಿಯ ವಾಣಿಜ್ಯ ಬಳಕೆಗಾಗಿ ಛೋಟಾನಾಗಪುರ್ ಟೆನನ್ಸಿ ಕಾಯಿದೆ (ಸಿಎನ್‌ಟಿಏ) ಮತ್ತು ಸಂಥಲ್ ಪರಗನಾಸ್ ಟೆನನ್ಸಿ ಕಾಯಿದೆ (ಎಸ್‌ಪಿಟಿಏ)ಗಳಿಗೆ ತಿದ್ದುಪಡಿ ತರಲು ಪ್ರಯತ್ನಿಸಿದರು. ಈ ಕ್ರಮವನ್ನು ಕಾರ್ಪೋರೇಟ್ ಪರ ಮತ್ತು ಆದಿವಾಸಿ ವಿರೋಧಿ ಎಂದು ನೋಡಲಾಯಿತು. ಕಾಂಗ್ರೆಸ್-ಜೆಮ್‌ಎಮ್ಎಮ್‌ ಪಕ್ಷಗಳು ಅಲ್ಲಿಯ ಚರ್ಚಿನೊಂದಿಗೆ ಸೇರಿಕೊಂಡು ಈ ತಿದ್ದುಪಡಿಗಳನ್ನು ವಿರೋಧಿಸಿದವು. ಆದಿವಾಸಿ ಸಮುದಾಯಗಳ ವಿರೋಧ ಮತ್ತು ಸಿಟ್ಟನ್ನು ನೋಡಿ ಲೋಕಸಭೆ ಚುನಾವಣೆಗೆ ಮುನ್ನ ಈ ತಿದ್ದುಪಡಿಗಳನ್ನು ಕೈಬಿಡಲಾಯಿತು. ಆದರೆ ಅಷ್ಟರಲ್ಲಿ ಅಲೆ ತಿರುಗಿತ್ತು.

ಹೇಮಂತ್‌ ಸೊರೆನ್‌ ಮತ್ತು ಶಿಬು ಸೊರೆನ್‌

ಈ ತಿದ್ದುಪಡಿಗಳು ಸೃಷ್ಟಿಸಿದ ಆತಂಕಗಳು ‘ಪಥಾಲ್‌ರ‍್ಹಿ ಆಂದೋಲನ’ ಎಂಬ ಚಳವಳಿ (ಹುಲ್ ಜೋಹಾರ್ ಎಂಬುದು ಅವರ ಘೋಷವಾಕ್ಯ) ಹುಟ್ಟಲು ಕಾರಣವಾದವು. ಈ ಚಳವಳಿಯನ್ನು ಹತ್ತಿಕ್ಕಲು ದಾಸ್ ಸರಕಾರವು ಕನಿಷ್ಠ 10,000 ಜನರ ಮೇಲೆ ಪ್ರಕರಣ ದಾಖಲಿಸಿತು; ಅವರಲ್ಲಿ ಅನೇಕರು ಇನ್ನೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಹೋರಾಟಗಾರ್ತಿ ದಯಾಮಣಿ ಬಾರ್ಲಾ ಚುನಾವಣೆಗೆ ಸ್ಪರ್ಧಿಸಿದ ಕ್ಷೇತ್ರದ ಜಿಲ್ಲೆ ಖುಂಟಿಯಲ್ಲಿಯೇ 26 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ ದೇಶದ್ರೋಹ, ಅಪಹರಣ, ಬಲಾತ್ಕಾರ ಮತ್ತು ಇತರ ಗಂಭೀರ ಆರೋಪಗಳನ್ನು ಆದಿವಾಸಿ ಮುಖಂಡರ ವಿರುದ್ಧ ದಾಖಲಿಸಲಾಗಿದೆ. ಪೊಲೀಸ್ ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸುತ್ತ ತಮ್ಮ ಆಧಾರ್ ಕಾರ್ಡಗಳನ್ನು ನೆಲದಲ್ಲಿ ಹೂತು, ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಮೀಸಲು ಕ್ಷೇತ್ರದಿಂದಲೇ ಬಿಜೆಪಿಯ ರಾಜ್ಯ ಅಧ್ಯಕ್ಷ ಲಕ್ಷ್ಮಣ ಗಿಲುವಾ ಸೋತಿರುವುದು ಆದಿವಾಸಿಗಳ ಸಿಟ್ಟಿನ ಪ್ರಮಾಣವನ್ನು ತೋರಿಸುತ್ತದೆ. ಪಥಾಲ್‌ರ‍್ಹಿ ಆಂದೋಲನದಲ್ಲಿ ಪಾಲ್ಗೊಂಡ ಜನರ ಮೇಲೆ ಪೊಲೀಸರು ಕೈಗೊಂಡ ಕ್ರಮಕ್ಕೆ ಅವರು ಗಟ್ಟಿಯಾಗಿ ಸಮರ್ಥಕರಾಗಿದ್ದರು.

ದಯಾಮಣಿ ಬಾರ್ಲಾ

ದೇಶದಲ್ಲೇ ಅತಿ ಹೆಚ್ಚು ಗುಂಪು ಹಲ್ಲೆ (ಮಾಬ್ ಲಿಂಚಿಂಗ್)ಗಳು ಆದ ರಾಜ್ಯ ಝಾರ್ಖಂಡ್; 20 ಇಂತಹ ಪ್ರಕರಣಗಳು ದಾಖಲಾಗಿವೆ. ಮತಾಂತರ ಮತ್ತು ಗೋ ಸಂಬಂಧಿತ ವಿಷಯಗಳ ಬಗ್ಗೆ ಮುಖ್ಯಮಂತ್ರಿ ತೋರಿದ ಸೈದ್ಧಾಂತಿಕ ಪ್ರತಿಪಾದನೆಯೂ ಅಲ್ಲಿಯ ಹಿಂದು, ಕ್ರಿಶ್ಚಿಯನ್ ಮತ್ತು ಆದಿವಾಸಿ ಸಮುದಾಯಗಳಿಗೆ ಒಪ್ಪಿಗೆಯಾಗಲಿಲ್ಲ.

ಮೋದಿ ಅಲೆ ಕಣ್ಮರೆಯಾಗುತ್ತಿದೆಯೇ?

ಇದು ಕೇವಲ ಜನಪ್ರಿಯತೆ ಕಳೆದುಕೊಂಡ ಮುಖ್ಯಮಂತ್ರಿಯ ಸೋಲೇ ಹೊರತು ಮೋದಿ ಅಲೆಯ ಬಗ್ಗೆ ಇದು ಏನನ್ನೂ ಹೇಳುವುದಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಪ್ರಚಾರವನ್ನು ನೋಡಿದಾಗ, ಮೋದಿ ಮತ್ತು ಶಾ ಇಬ್ಬರೂ ಪ್ರತ್ಯೇಕವಾಗಿ 9 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ರಾಮ ಮಂದಿರದ ಬಗ್ಗೆ, ಆರ್ಟಿಕಲ್ 370ಅನ್ನು ಹಿಂಪಡೆದ ಬಗ್ಗೆ ತಮ್ಮ ಸಾಧನೆಗಳ ಬಗ್ಗೆ ಮತ್ತು ಕಾಂಗ್ರೆಸ್‌ನ ವಿಫಲತೆಗಳ ಬಗ್ಗೆ ಭಾಷಣ ಬಿಗಿದರು. ಪೌರತ್ವ ಕಾನೂನಿನ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದಾಗಲೇ ಕೆಲವು ರ‍್ಯಾಲಿಗಳಾದವು. ‘ಗಲಭೆ ಮಾಡುವವರನ್ನು ಅವರ ಬಟ್ಟೆ ನೋಡಿ ಗುರುತಿಸಬಹುದು’ ಎಂದು ಮೋದಿ ಧಾರ್ಮಿಕ ನೆಲೆಯ ಮೇಲೆ ವಿಭಜನಾ ತಂತ್ರವನ್ನೂ ಬಳಸಿದರು. ಈ ರ‍್ಯಾಲಿಗಳಲ್ಲಿ ಇವರು ತಲುಪಿದ 16 ಕ್ಷೇತ್ರಗಳಲ್ಲಿ 11 ಕ್ಷೇತ್ರಗಳಲ್ಲಿ ಸೋಲನ್ನು ಕಂಡಿದ್ದಾರೆ.

ಇದರೊಂದಿಗೆ ದೇಶಾದ್ಯಂತ ಪೌರತ್ವ ಕಾಯಿದೆ(ಸಿಏಏ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ವಿರುದ್ಧ ಆಗುತ್ತಿರುವ ಪ್ರತಿಭಟನೆಗಳ ನಡುವೆಯೇ ಈ ಫಲಿತಾಂಶಗಳು ಬಂದಿವೆ. ಹಾಗಾಗಿ ಈ ಪ್ರಯೋಗದ ರೂವಾರಿಗಳಾದ ಮೋದಿ-ಶಾ ಜೋಡಿಗೆ ಇದು ಡಬಲ್ ಹಿನ್ನಡೆಯಾಗಿದೆ.

ಇದರೊಂದಿಗೆ, ಅಸೆಂಬ್ಲಿ ಚುನಾವಣೆಗಳಲ್ಲಿ ಸ್ಥಳೀಯ ವಿಷಯಗಳ ಮೇಲೆಯೇ ಜನರು ಮತ ಚಲಾಯಿಸುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಭೂಮಿ ಹಕ್ಕುಗಳು ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ನಿರ್ಲಕ್ಷಿಸಿ ಆರ್ಟಿಕಲ್ 370, ರಾಮಮಂದಿರದಂತಹ ವಿಷಯಗಳನ್ನಿಟ್ಟುಕೊಂಡು ಪ್ರಚಾರ ಮಾಡಿದ ಬಿಜೆಪಿಗೆ ಇದು ಉತ್ತರವೇ ಎಂಬ ಪ್ರಶ್ನೆಯೂ ಎದ್ದಿದೆ. ಅಂತಿಮವಾಗಿ ಒಂದಂತೂ ಸತ್ಯ; ರಾಜ್ಯಗಳಿಗೆ ಒಂದು ರೀತಿಯಲ್ಲಿ, ಲೋಕಸಭೆಗೆ ಇನ್ನೊಂದು ರೀತಿಯಲ್ಲಿ ಮತದಾರರು ಮತ ಚಲಾಯಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...