HomeUncategorizedಜೆಎನ್‌ಯು ಹಿಂಸೆ: ಪ್ರಜಾತಂತ್ರದ ಸೌಂದರ್ಯದ ಮೇಲಿನ ದಾಳಿ - ಸರೋವರ್‌ ಬೆಂಕಿಕೆರೆ

ಜೆಎನ್‌ಯು ಹಿಂಸೆ: ಪ್ರಜಾತಂತ್ರದ ಸೌಂದರ್ಯದ ಮೇಲಿನ ದಾಳಿ – ಸರೋವರ್‌ ಬೆಂಕಿಕೆರೆ

ಪ್ರತಿ ದಮನದ ನಂತರವೂ ಧೂಳಿನಿಂದ ಎದ್ದುಬರುವ ಫೀನಿಕ್ಸ್ ಪಕ್ಷಿಯಂತೆ ಪ್ರತಿಬಾರಿ ಜೆಎನ್‌ಯು ವಿದ್ಯಾರ್ಥಿ ಹೋರಾಟವೂ ಎದ್ದು ಬರುತ್ತಿದೆ..

- Advertisement -
- Advertisement -

ಬ್ರಾಹ್ಮಣ ಸಮುದಾಯಕ್ಕೆ ಹೊರತುಪಡಿಸಿ ಇತರೆ ಸಮುದಾಯಗಳಿಗೆ ಬಹುತೇಕ ನಾಗರಿಕ ಹಕ್ಕುಗಳು ಸಹಸ್ರಾರು ವರ್ಷಗಳ ಕಾಲ ನಿರಾಕರಣೆ ಆಗಿದ್ದ ದೇಶದಲ್ಲಿ ಅದರಲ್ಲೂ ಶಿಕ್ಷಣದ ಹತ್ತಿರಕ್ಕೂ ಬಿಟ್ಟುಕೊಳ್ಳದೇ ಜಾತಿ ಪದ್ಧತಿಯನ್ನು ಆಳವಾಗಿ ಬೇರುಬಿಟ್ಟುಕೊಂಡಿರುವ ದೇಶವೊಂದರಲ್ಲಿ ಜೆಎನ್‌ಯು ಅಂಥ ವಿಶ್ವವಿದ್ಯಾಲಯವು ವಿಶೇಷವಾಗಿ ನಿಲ್ಲುತ್ತದೆ. ಸ್ವಾತಂತ್ರ್ಯ ದ 70 ವರ್ಷಗಳ ನಂತರವೂ ಸಾಕ್ಷರತೆಯನ್ನೂ ಗುಣಾತ್ಮಕವಾಗಿ ಸಾಧಿಸಲೂ ಈವರೆಗೂ ಸಾಧ್ಯವಿಲ್ಲದಿರುವಾಗ ದಲಿತರು, ಅಲ್ಪ ಸಂಖ್ಯಾತರು, ಆದಿವಾಸಿ, ಮಹಿಳೆಯರು, ಆರ್ಥಿಕವಾಗಿ ಹಿಂದುಳಿದ ಸಮುದಾಯವದರು ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆಯುವಂತಾಗಲು ಸಾಧ್ಯ ಮಾಡಿದ್ದು ಜೆಎನ್‌ಯು ಆಗಿದೆ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರಾತಿನಿಧ್ಯವೂ ಇದೆ. ಅಲ್ಲದೆ ಇಲ್ಲಿ ಶಿಕ್ಷಣ ಪಡೆದ ಅನೇಕ ತಳಸಮುದಾಯದ ಯುವತಿಯುವಕರು ಹೊರದೇಶಗಳಲ್ಲಿ, ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರುಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಆಳುವ ಮನುವಾದಿ ಸರ್ಕಾರಗಳಿಗೆ ಹಾಗೂ ಮೇಲ್ವರ್ಗದ ಜನರಿಗೆ ಜೆಎನ್‌ಯು ಎಂದರೆ ‘ಸಹಜವಾಗಿ’ ಅಸಹನೆ ಇದ್ದೇಯಿದೆ!

ಜೆಎನ್ಯು ಮೇಲೆ ಸರ್ಕಾರಕ್ಕೆ ದ್ವೇಷ ಯಾಕೆ?

ಹೈದರಾಬಾದ್‌ನ ಹೆಚ್‌ಸಿಯುನ ಪ್ರತಿಭಾವಂತ ವಿದ್ಯಾರ್ಥಿ ರೋಹಿತ್ ವೇಮುಲನ ಸಾಂಸ್ಥಿಕ ಕೊಲೆಯ ನಂತರದಲ್ಲಿ ದೇಶದಾದ್ಯಂತ ನಡೆದ ವಿದ್ಯಾರ್ಥಿ ಯುವಜನರ ಹೋರಾಟದಲ್ಲಿ ಜೆಎನ್‌ಯು ಕೇಂದ್ರ ಸರ್ಕಾರದ ವೈಫಲ್ಯವನ್ನು ಗಮನ ಸೆಳೆಯುವಂತೆ ಎತ್ತಿಹಿಡಿದಿತ್ತು. ಇತ್ತೀಚೆಗಷ್ಟೆ ವಿಶ್ವವಿದ್ಯಾನಿಲಯದ ಶುಲ್ಕ ಹೆಚ್ಚಳದ ವಿರುದ್ಧ ವಿದ್ಯಾರ್ಥಿಗಳು ‘ಒಂದಿಂಚೂ ಹಿಂದೆ ಸರಿಯುವುದಿಲ್ಲ’ ಎನ್ನುವ ಘೋಷಣೆಯೊಂದಿಗೆ ಧೀರೋದ್ಧಾತ ಪ್ರತಿಭಟನೆಗಳನ್ನು ನಡೆಸಿದ್ದರು. ಇದನ್ನು ಕೇಂದ್ರ ನಿರೀಕ್ಷೆ ಮಾಡಿರಲಿಲ್ಲ.

ಇನ್ನು ಸಿಎಎ, ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯು ಕೇಂದ್ರ ಸರ್ಕಾರಕ್ಕೆ ದಂಗು ಬಡಿದಂತಾಗಿತ್ತು. ತಮ್ಮ ಬಹುಮತದಿಂದ ಏನು ಬೇಕಾದರೂ ಮಾಡಬಹುದು ಎಂದು ಅಂದುಕೊಂಡಿದ್ದ ಬಿಜೆಪಿಗೆ ದೇಶದ ವಿದ್ಯಾರ್ಥಿ ಯುವಜನರು ದೊಡ್ಡ ಶಾಕ್ ನೀಡಿದ್ದರು. ಅದರಲ್ಲೂ ಜೆಎನ್‌ಯು ವಿದ್ಯಾರ್ಥಿಗಳು ಬಹುಮುಖ್ಯ ಪಾತ್ರವನ್ನು ವಹಿಸಿದ್ದರು. ಅಲ್ಲದೆ ನಿರಂತರವಾಗಿ ಬರುತ್ತಿದ್ದ ಜನವಿರೋಧಿ ನೀತಿಗಳು, ಆರ್ಥಿಕ ಕುಸಿತ, ನಿರುದ್ಯೋಗ ಏರಿಕೆ ಇತ್ಯಾದಿ ಸೇರಿ ಹತ್ತಾರು ಜನರ ನಿಜವಾದ ವಿಚಾರಗಳು ಮುನ್ನಲೆಗೆ ಬರುವಂತೆ ಕಾರ್ಯಕ್ರಮಗಳು, ಪ್ರತಿಭಟನೆಗಳನ್ನು ಜೆಎನ್‌ಯು ವಿದ್ಯಾರ್ಥಿಗಳು ನಡೆಸಿಕೊಂಡು ಬರುತ್ತಿದ್ದಾರೆ. ಕೇಂದ್ರ ಉತ್ತರ ಕೊಡಲಾಗದ ಪ್ರಶ್ನೆಗಳನ್ನು ಎತ್ತಿದ್ದಾರೆ. ತಳ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣದ ಜ್ಞಾನ ಪಡೆದಾಗ ಜನಪರವಾದ ಪ್ರಶ್ನೆಗಳು ಕೇಳುವುದು ಸಾಮಾನ್ಯವಾಗಿ ಬರುವ ಗುಣವಾಗಿದೆ. ಮೇಲಿನ ಈ ಎಲ್ಲಾ ಕಾರಣಗಳಿಗಾಗಿ ತಮ್ಮ ವೈಫಲ್ಯವನ್ನು ಸರಿಮಾಡಿಕೊಳ್ಳುವ ಬದಲಾಗಿ ಸರ್ಕಾರವು ದ್ವೇಷವನ್ನು ಬೆಳೆಸಿಕೊಂಡಿದೆ.

ಜೆಎನ್‌ಯು ಕೇವಲ ಎಡಪಕ್ಷದ ಪರವಿರುವ ವಿದ್ಯಾರ್ಥಿಗಳು, ಕೇವಲ ಬಿಜೆಪಿ ವಿರುದ್ಧ ಕೆಲಸ ಮಾಡುವವರು ಎಂದು ಅಪಪ್ರಚಾರವನ್ನು ಮಾಡಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳು ಆಳ್ವಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ನಂದಿಗ್ರಾಮ ಇತ್ಯಾದಿ ಜಾಗದಲ್ಲಿ ನಡೆದ ಹಿಂಸೆಯ ವಿರುದ್ಧವೂ ಜೆಎನ್‌ಯು ದನಿ ಎತ್ತಿತ್ತು. 1996ರಲ್ಲಿ ಜನಪರವಾದ ಪಕ್ಷದ ಪರ ಬಿಹಾರದಲ್ಲಿ ಪ್ರಚಾರ ಮಾಡಿದ್ದರು ಅನ್ನುವ ಕಾರಣಕ್ಕೆ ಜೆಎನ್‌ಯು ವಿದ್ಯಾರ್ಥಿ ಮುಖಂಡರನ್ನು ಕೊಲೆ ಮಾಡಲಾಗಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ಅವಧಿಯ ನಿರ್ಭಯ ಅತ್ಯಾಚಾರ ಸಂದರ್ಭದಲ್ಲಿ ನಿರಂತರವಾಗಿ ವಿದ್ಯಾರ್ಥಿ ಹೋರಾಟದ ಕಾವನ್ನು ಕಾಪಿಟ್ಟುಕೊಂಡಿದ್ದು ಜೆಎನ್‌ಯು. ಕಾಶ್ಮೀರದ 370 ರದ್ಧತಿ ಸಂದರ್ಭದಲ್ಲಿ, ಹೊಸ ಶಿಕ್ಷಣ ನೀತಿ ಕರಡು ಬಂದ ಸಮಯದಲ್ಲಿ ಮತ್ತು ಹಲವಾರು ಇತರ ಜನವಿರೋಧಿ ನೀತಿಗಳು ಬಂದಾಗ ದೇಶದಲ್ಲಿ ದೊಡ್ಡ ಮಟ್ಟದ ಪ್ರತಿರೋಧಗಳು ಬರದೇ ಇದ್ದಾಗ ಜೆಎನ್‌ಯು ಮಾತ್ರ ಪ್ರತಿರೋಧವನ್ನು ಒಡ್ಡುತ್ತಲಿತ್ತು. ಹೀಗೆ ಬಹು ಕಾಲದಿಂದ ಜನಪರವಾಗಿ ವಿದ್ಯಾರ್ಥಿ ಹೋರಾಟದ ಬದ್ಧತೆಯನ್ನು ಜೆಎನ್‌ಯು ಕಾಪಾಡಿಕೊಂಡಿದೆ. ಈ ಬದ್ಧತೆಯನ್ನು ಮುರಿಯುವ ಕೆಲಸವನ್ನು ಎಲ್ಲಾ ಸರ್ಕಾರಗಳು ಮಾಡುತ್ತಾ ಬರುತ್ತಿವೆ. ಆದರೆ ಈ ಕಾಲದ ಕೇಂದ್ರ ಸರ್ಕಾರ ಕ್ರೂರವಾಗಿ ಮತ್ತಷ್ಟು ಆಕ್ರಮಣಕಾರಿಯಾಗಿ ದಾಳಿ ನಡೆಸುತ್ತಿದೆ.

ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ದಾಳಿ ಏಕಾಯಿತು?

ಸಿಎಎ, ಎನ್‌ಆರ್‌ಸಿ ವಿರುದ್ಧದ ದೇಶದಾದ್ಯಂತ ಬಂದ ಪ್ರತಿರೋಧವನ್ನು ಕೇಂದ್ರ ಸುಧಾರಿಸಿಕೊಳ್ಳದಾಯಿತು. ಅದರಲ್ಲೂ ವಿದ್ಯಾರ್ಥಿ ಯುವಜನರ ಪಾತ್ರ ಅವರಿಗೆ ದಿಗಿಲು ಬಡಿಸಿತ್ತು. ಈ ಹೊತ್ತಿಗಾಗಲೇ ದೇಶದ್ರೋಹದಂತಹ ನೂರಾರು ಸುಳ್ಳು ಕೇಸು, ಜೈಲು ಎಲ್ಲವನ್ನೂ ನೋಡಿ ಬಂದಂತಹ ಜೆಎನ್‌ಯು ವಿದ್ಯಾರ್ಥಿಗಳನ್ನು ಯಾವುದರಿಂದಲೂ ಹೆದರಿಸಲು ಸಾಧ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಕೇಂದ್ರ ಬಂದಿತ್ತಾದರೂ ಎಬಿವಿಪಿ ಗೂಂಡಾಗಳನ್ನು ಬಳಸಿಕೊಂಡು, ವಿಸಿ ಹಾಗೂ ಪೊಲೀಸರ ಸಹಾಯದಿಂದಲೂ ದಾಳಿ ನಡೆಸಿದೆ.

ಜೆಎನ್‌ಯು ವಿದ್ಯಾರ್ಥಿ ಹಾಗೂ ಪ್ರೊಫೆಸರ್‌ಗಳು ಹೇಳುವಂತೆ ಮೌಖಿಕವಾಗಿ ಪೋಲಿಸರಿಗೆ ಎರಡು ಗಂಟೆಗಳ ಕಾಲ ಸುಮ್ಮನಿದ್ದು ದಾಳಿಕೋರರಿಗೆ ಅವಕಾಶ ನೀಡಬೇಕು ಎನ್ನುವ ಆದೇಶವಿತ್ತು ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾದ ವಿಡಿಯೋಗಳು, ವಾಟ್ಸಾಪ್ ಗ್ರೂಪಿನ ಸಂದೇಶದ ಸ್ಕ್ರೀನ್ ಶಾಟ್‌ಗಳು ಈಗ ಬಹಿರಂಗವಾಗಿವೆ. ಶುಲ್ಕ ಹೆಚ್ಚಳದಿಂದ ಶುರುವಾಗಿ ಸಿಎಎ ವಿರುದ್ಧದ ಪ್ರತಿರೋಧದವರೆಗೂ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಇದು ಶಾಂತಿಯುತವಾಗಿ ನಡೆಯುತ್ತಿರುವುದು ಕೇಂದ್ರಕ್ಕೆ ಮತ್ತೊಂದು ನುಂಗಲಾರದ ತುತ್ತಾಗಿದೆ. ಇದರ ಮಹತ್ವ ಕುಗ್ಗಿಸಲು ಶಾಂತಿ ಕದಡಲು ವಿದ್ಯಾರ್ಥಿಗಳ ಮಧ್ಯ ಗಲಾಟೆ ನಡೆಯುತ್ತಿದೆ ಎಂದು ಬಿಂಬಿಸಲು ಈ ಪೂರ್ವನಿಯೋಜಿತ ದಾಳಿ ನಡೆಸಿದ್ದಾರೆ. ಈ ದಾಳಿಯ ನಂತರ ‘ಶಟ್‌ಡೌನ್ ಜೆಎನ್‌ಯು’ ಎಂದು ಟ್ರೆಂಡ್ ಮಾಡುತ್ತಿರುವುದೇ ಇವರ ಉದ್ದೇಶ ತಿಳಿಯುತ್ತಿದೆ. ಇದರಿಂದಾಗಿ ಒಂದು ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಪ್ರಯತ್ನದಲ್ಲಿ ಕೇಂದ್ರ ಇದ್ದಂತಿದೆ. ಒಂದು ನಿರಂತರವಾಗಿರುವ ಜೆಎನ್‌ಯು ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕುವುದು ಮತ್ತೊಂದು ತಳ ಸಮುದಾಯದ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದು.

ಇದೆಲ್ಲದರ ದಮನದ ನಂತರವೂ ಧೂಳಿನಿಂದ ಎದ್ದುಬರುವ ಫೀನಿಕ್ಸ್ ಪಕ್ಷಿಯಂತೆ ಪ್ರತಿಬಾರಿ ಜೆಎನ್‌ಯು ವಿದ್ಯಾರ್ಥಿ ಹೋರಾಟವೂ ಎದ್ದು ಬರುತ್ತಿದೆ. ಪ್ರಜಾತಂತ್ರವನ್ನು ಕಾಪಾಡಲು ದೇಶದಾದ್ಯಂತ ವಿದ್ಯಾರ್ಥಿಯುವಜನರು ಹೋರಾಟದ ಸಾಗರಕ್ಕೆ ಸೇರುತ್ತಿರುವುದು ಆಶಾದಾಯಕವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸೌಂದರ್ಯವಲ್ಲ; ಪ್ರಜಾಪ್ರಭುತ್ವದ ಜೀವ ಮತ್ತು ಆತ್ಮದ ಮೇಲಿನ ದಾಳಿ!

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...