Homeಚಳವಳಿಉತ್ತರದಾದ್ಯಂತ ಪ್ರಶ್ನೆ ಕೇಳುತ್ತಿರುವ ರೈತರು

ಉತ್ತರದಾದ್ಯಂತ ಪ್ರಶ್ನೆ ಕೇಳುತ್ತಿರುವ ರೈತರು

- Advertisement -
- Advertisement -

ಉತ್ತರ ಭಾರತದ ರೈತರು ಗ್ರಾಮ ಬಂದ್ ಪ್ರತಿಭಟನೆಯ ಹೋರಾಟ ಆರಂಭಿಸಿದ್ದಾರೆ. ತಮ್ಮ ಯಾವುದೇ ಉತ್ಪನ್ನವನ್ನೂ ಮಂಡಿಗಳಿಗೆ ಕಳಿಸುವುದಿಲ್ಲ; ಇಲ್ಲೇ ಕೊಳೆಯಲಿ ಪರವಾಗಿಲ್ಲ ಎಂಬ ವಿನೂತನ ಪ್ರತಿಭಟನೆ ಇದು. ಹಾಲು, ತರಕಾರಿ, ಹಣ್ಣುಗಳ ಪೂರೈಕೆ ನಗರಗಳಿಗೆ ಬಂದ್ ಆದಾಗಲೇ ನಗರಿಗರಿಗೆ ರೈತರ ಕಷ್ಟ ಗೊತ್ತಾಗುವುದು.
ಈ ಪ್ರತಿಭಟನೆ ಉತ್ತರ ಭಾರತದಲ್ಲಿ, ಅದರಲ್ಲೂ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‍ಗಢ, ಮಹಾರಾಷ್ಟ್ರ ಮತ್ತು ಪಂಜಾಬುಗಳಲ್ಲಿ ತೀವ್ರ ಸ್ವರೂಪ ಪಡೆದಿದೆ. ಈ ಹೋರಾಟ ಭಾಜಪ ಆಳ್ವಿಕೆಯ ರಾಜ್ಯಗಳಲ್ಲಿ ತೀವ್ರವಾಗಿದೆ ಎನ್ನುವುದು ಕಾಕತಾಳೀಯ ಅಲ್ಲ; ಹಾಗೆಂದು ಅದು ರಾಜಕೀಯ ಕುತಂತ್ರದ ಆಟವೂ ಅಲ್ಲ. ಈ ರಾಜ್ಯಗಳ ಸರಕಾರಗಳು ರೈತರ ಬಗ್ಗೆ ಸತತವಾಗಿ ತಾತ್ಸಾರದ ಧೋರಣೆ ತಳೆದ ಕಾರಣ ರೈತರ ಬೇಗುದಿ ಹೆಚ್ಚಿದೆ. ಈ ಹೋರಾಟ ಏಕಾಏಕಿ ಹುಟ್ಟಿಕೊಂಡದ್ದೂ ಅಲ್ಲ, ಯಾವುದೋ ಭಾವನಾತಕ ಕಾರಣಕ್ಕೇ ಭುಗಿಲೆದ್ದ ಪ್ರತಿಭಟನೆಯೂ ಅಲ್ಲ. ಇದು ಭೂಕಂಪದ ಮೊದಲಿನ ಸರಣಿ ಗುರುಗಾಟದ ಹಾಗೆ; ಕಳೆದ ಕೆಲವು ವರ್ಷಗಳಿಂದ ಅಲ್ಲಿಇಲ್ಲಿ ವ್ಯಕ್ತವಾಗುತ್ತಲೇ ಇದೆ.
ಕಳೆದ ವರ್ಷ ಮಧ್ಯಪ್ರದೇಶದ ಮಾಂಡ್‍ಸೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಪೋಲೀಸರು ಗೋಲೀಬಾರ್ ಮಾಡಿ ಆರು ರೈತರ ಜೀವ ಹೋಗಿತ್ತು. ಈ ದಮನದ ನೆನಪು ರೈತರಲ್ಲಿ ಇನ್ನೂ ಹಸಿಯಾಗಿದೆ. ಈ ಗೋಲೀಬಾರಿನ ಬಳಿಕ ಸರ್ಕಾರ ಅಷ್ಟಿಷ್ಟು ಕ್ರಮ ಕೈಗೊಂಡರೂ ಮತ್ತೆ ರೈತ ನಿರ್ಲಕ್ಷದ ಜಾಡಿಗೆ ಮರಳಿದೆ. ಈ ಬಾರಿಯ ಗ್ರಾಮ ಬಂದ್ ಹೋರಾಟದ ಭಾಗವಾಗಿ ಮಾಂಡ್‍ಸೂರಿನಲ್ಲಿ ಇದೇ ಜೂನ್ ಆರರಂದು, ಗೋಲೀಬಾರಿನಲ್ಲಿ ಹುತಾತ್ಮರಾದ ರೈತರನ್ನು ಸ್ಮರಿಸುವ ಹುತಾತ್ಮ ದಿನಾಚರಣೆಯೂ ನಡೆಯಲಿದೆ. ಸಾವಿರಾರು ರೈತರು ಸೇರಲಿದ್ದಾರೆ.
ಈ ಹೋರಾಟಕ್ಕೆ ಇನ್ನೊಂದು ಆಯಾಮವಿದೆ. ಇಷ್ಟು ದಿನ ಆಯಾ ರಾಜ್ಯ ಅಥವಾ ಸಂದರ್ಭಗಳಲ್ಲಿ ಬೇಗುದಿ ಅನುಭವಿಸಿದ ರೈತರು ಬೀದಿಗಿಳಿದಾಗ ಉಳಿದ ಸಂಘಟನೆಗಳು ಅದಕ್ಕೆ ಬೆಂಬಲ ನೀಡಿ ಹೋರಾಟದ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ದರು. ಕಳೆದ ವರ್ಷದ ಮಧ್ಯಪ್ರದೇಶದ ರೈತ ಹೋರಾಟವಿರಬಹುದು, ಭೂ ಸ್ವಾಧೀನದ ವಿರುದ್ಧ ರಾಜಸ್ತಾನದಲ್ಲಿ ಭುಗಿಲೆದ್ದ ಹೋರಾಟ ಇರಬಹುದು. ಆದರೆ ಈ ಬಾರಿ ಕಳೆದ ಎರಡು ವರ್ಷಗಳಿಂದ ಸಮಾಲೊಚನೆ ನಡೆಸಿ ಸುಮಾರು 150 ರೈತಪರ ಸಂಘಟನೆಗಳ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ರೂಪುತಳೆದಿದೆ. ಕಳೆದ ವರ್ಷದ ಜುಲೈನಲ್ಲಿ ಈ ಸಮಿತಿಗೊಂದು ಸಾಂಸ್ಥಿಕ ಸ್ವರೂಪವೂ ದೊರಕಿತು. ಕೃಷಿಕ್ ಮುಕ್ತಿ ಸಂಗ್ರಾಮ ಸಮಿತಿ, ಅಖಿಲ ಭಾರತ ಕಿಸಾನ್ ಸಭಾ, ಆಶಾ, ಕರ್ನಾಟಕ ರಾಜ್ಯ ರೈತ ಸಂಘ, ಜನ ಚಳವಳಿಯ ರಾಷ್ಟ್ರೀಯ ಒಕ್ಕೂಟ, ಸ್ವರಾಜ್ ಅಭಿಯಾನ್ ಸೇರಿ ದೇಶದ ಸುಮಾರು 150 ಮುಖ್ಯ ರೈತಪರ/ ಜನಪರ ಹೋರಾಟಗಳು ಸಂಘಟನೆಗಳು ಈ ಸಮಿತಿಯ ಭಾಗವಾಗಿವೆ.
ನಮ್ಮದೆರಡೇ ಬೇಡಿಕೆಗಳು
ಕೃಷಿ ಬಿಕ್ಕಟ್ಟಿನ ಎಲ್ಲಾ ಸಮಸ್ಯೆಗಳ ವಿವರ ಈ ಎರಡು ಮೂಲಗಳಲ್ಲಿ ಹುದುಗಿದೆ ಎಂಬ ಸ್ಪಷ್ಟತೆಯನ್ನು ಈ ಸಮನ್ವಯ ಸಮಿತಿ ಅನಾವರಣಗೊಳಿಸಿದೆ. ಈ ಸಮನ್ವಯ ಸಮಿತಿ ಎರಡು ಸ್ಥೂಲ ಬೇಡಿಕೆಗಲನ್ನು ಮುಂದಿಟ್ಟಿದೆ. ಬೆಳೆಗೆ ಲಾಭದಾಯಕ ಬೆಲೆ ಮತ್ತು ಋಣಮುಕ್ತ ರೈತ. ಬೆಳೆಗೆ ಲಾಭದಾಯಕ ಬೆಲೆ ನೀಡಿದರೆ ಸಾಲ ಮನ್ನಾದಂಥಾ ಬೇಡಿಕೆಗಳೇ ಅಸಂಗತವಾಗುತ್ತದೆ ಎಂಬ ನಿಲುವನ್ನು ಬಹುತೇಕ ಆರ್ಥಿಕ ತಜ್ಞರಷ್ಟೇ ಅಲ್ಲ, ರೈತ ನಾಯಕರೂ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವೇ ನೇಮಿಸಿದ ಸ್ವಾಮಿನಾಥನ್ ಸಮಿತಿ ಈ ಕುರಿತ ಶಿಫಾರಸ್ಸುಗಳನ್ನು ಪ್ರಕಟಗೊಳಿಸಿದ್ದು ಕೇಂದ್ರ ಸರ್ಕಾರ ಅದನ್ನು ಜಾರಿಗೊಳಿಸದೇ ನುಣುಚಿಕೊಳ್ಳುತ್ತಿದೆ. ಕಳೆದ ವರ್ಷ ಸರ್ವೋಚ್ಛ ನ್ಯಾಯಾಲಯದಲ್ಲಿ ‘ಈ ಶಿಫಾರಸ್ಸನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ; ಅದು ಬೆಲೆ ಏರಿಕೆಗೆ ಕಾರಣವಾಗುತ್ತದೆ’ ಎಂದು ಅಫಿಡವಿಟ್ ಸಲ್ಲಿಸಿದ್ದ ಮೋದಿ ಈ ವರ್ಷ ರೈತ ಅಸಹನೆಯ ಬಿಸಿ ತಟ್ಟಿದ್ದರಿಂದ ಸ್ವಾಮಿನಾಥನ್ ಶಿಫಾರಸು ಜಾರಿ ಮಾಡುತ್ತಿದ್ದೇವೆ ಎಂದು ಘೋಷಿಸಿದ್ದಾರೆ. ಆದರೆ ಮೋದಿ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯ ಚೌಕಟ್ಟು ಪೂರಾ ಲೊಳಲೊಟ್ಟೆ. ಸರ್ಕಾರ ಉತ್ಪಾದನಾ ವೆಚ್ಚ + 50% ಎಂಬ ಸೂತ್ರ ಮುಂದಿಟ್ಟಿರುವುದರಲ್ಲಿ ಭೂಮಿಯ ಬಂಡವಾಳದ ವೆಚ್ಚ ಮತ್ತಿತರ ಪರೋಕ್ಷ ವೆಚ್ಚಗಳು ಸೇರಿಲ್ಲ. ಅಷ್ಟೇಕೆ ಉತ್ಪಾದನಾ ವೆಚ್ಚವನ್ನು ಸರ್ಕಾರ ಲೆಕ್ಕ ಹಾಕಿದ್ದೇ ಅವಾಸ್ತವವಾಗಿದೆ. ಕುಗ್ಗಿದ ಉತ್ಪಾದನಾ ವೆಚ್ಚವನ್ನು ತಾನೇ ತೀರ್ಮಾನಿಸಿ ಅದರ ಆಧಾರದ ಮೇಲೆ ತಾನೇ ಬೆಲೆ ಘೋಷಿಸುವ ಸರ್ಕಾರದ ಅಡ್ಡ ಕಸುಬಿತನ ರೈತ ಮುಖಂಡರಿಗೆ ಅರ್ಥವಾಗಿದೆ.
ಈ ರೀತಿ ಅತಾರ್ಕಿಕವಾದ ಕನಿಷ್ಠ ಬೆಂಬಲ ಬೆಲೆಯೂ ರೈತರಿಗೆ ದಕ್ಕುತ್ತಿಲ್ಲ ಎಂಬುದನ್ನು ಸಾಬೀತುಪಡಿಸಲು ಈ ಸಮಿತಿಯು ದೇಶದ ಬಹುತೇಕ ಮಾರುಕಟ್ಟೆಗಳಿಗೆ ಹೋಗಿ ಅಧ್ಯಯನ ನಡೆಸಿದೆ. ಎಲ್ಲಾ ಕಡೆ ಒಂದೇ ಚಿತ್ರಣ. ಕನಿಷ್ಠ ಬೆಂಬಲ ಬೆಲೆ ಎನ್ನುವುದೇ ದೊಡ್ಡ ಮೋಸ. ಆದ್ದರಿಂದಲೇ ಲಾಭದಾಯಕ ಬೆಲೆ ಕುರಿತಂತೆ ನಿಷ್ಕರ್ಷೆಗೆ ಬರಲು ಕಾನೂನು ರೂಪಿಸಲೂ ಈ ಸಮಿತಿ ಒತ್ತಾಯಿಸುತ್ತಿದೆ. ಬೆಲೆ ಕುಸಿತದ ಸಮಯದಲ್ಲಿ ಸರ್ಕಾರದ ಮಧ್ಯಪ್ರವೇಶ, ಮಾರುಕಟ್ಟೆ ಬೆಲೆ ಮತ್ತು ಸರ್ಕಾರದ ಬೆಲೆಯ ಮಧ್ಯೆಯ ವ್ಯತ್ಯಾಸವನ್ನು ರೈತರಿಗೆ ಸಬ್ಸಿಡಿ ರೂಪದಲ್ಲಿ ನೀಡುವುದು ಎಲ್ಲಾ ಈ ಬೇಡಿಕೆಗಳಲ್ಲಿ ಸೇರಿದೆ.
ಈ ಸಮಿತಿ ಗಹನವಾಗಿ ಯೋಚಿಸಿರುವ ಇನ್ನೊಂದು ಆಯಾಮ ಸಾಲದ್ದು. ಋಣಮುಕ್ತ ರೈತ ಎಂಬ ಪರಿಕಲ್ಪನೆಯನ್ನು ಮುಂದಿಟ್ಟಿರುವ ಸಮಿತಿ, ರೈತ ಸಂಕುಲ ಯಾವುದೇ ಋಣ ಬಾಧೆಯಿಂದ ನರಳದಂತೆ ಮಾಡುವ ಮಾರ್ಗೋಪಾಯಗಳನ್ನು ಸರ್ಕಾರ ರಚಿಸಬೇಕು ಎಂದು ಒತ್ತಾಯಿಸಿದೆ. ಮುಖ್ಯ ಅಂಶವೆಂದರೆ ಈ ಬೇಡಿಕೆ ಯಾಕೆ ಎಂಬುದಷ್ಟೇ ಅಲ್ಲ, ಇದನ್ನು ಹೇಗೆ ಮಾಡಬಹುದು ಎಂಬು ಅನುಷ್ಠಾನ ಯೊಗ್ಯ ಸಲಹೆಗಳೂ ಈ ಸಮಿತಿಯಲ್ಲಿದೆ. ಸರ್ಕಾರಗಳು ನುಣುಚಿಕೊಳ್ಳಲು ಸಾದ್ಯವೇ ಇಲ್ಲ!
ಹಾಗಿದ್ದರೆ ಸರ್ಕಾರಗಳು ಯಾಕೆ ನುಣುಚಿಕೊಳ್ಳುತ್ತಿವೆ?
ಈ ಚಳವಳಿ ಉತ್ತರಭಾರತದಲ್ಲಿ ಪ್ರಖರವಾಗಿ ಬೆಳೆಯುತ್ತಿರುವುದರ ಹಿಂದೆ ಭಾಜಪದ ರಾಜಕೀಯ ಹಿತಾಸಕ್ತಿಗಳ ಜನದ್ರೋಹ ಇದೆ. ಗ್ರಾಮೀಣ ವರ್ಗವನ್ನು ಭಾವುಕ ವಿಷಯಗಳ ಮೂಲಕ ಹಾದಿ ತಪ್ಪಿಸುತ್ತಾ ಆಡಳಿತದ ತಣ್ಣನೆ ಆಟದಲ್ಲಿ ಕಾರ್ಪೋರೇಟ್ ಹಿತಾಸಕ್ತಿಗೆ ಮಣೆ ಹಾಕುವ ಕೆಲಸ ಭಾಜಪ ಕಾಂಗ್ರೆಸ್ಸಿಗಿಂತಲೂ ತೀವ್ರವಾಗಿ ಮಾಡುತ್ತಿದೆ. ಕಾರ್ಪೋರೇಟ್ ಕುಳಗಳ ಕೆಟ್ಟ ಸಾಲಗಳನ್ನು ನಿರಂತರವಾಗಿ ಮನ್ನಾ ಮಾಡುತ್ತಾ ಬಂದಿರುವ ಈ ಸರ್ಕಾರ ಆ ನಷ್ಟ ತುಂಬಿಸಲು ಬ್ಯಾಂಕುಗಳಿಗೆ ಬಜೆಟ್ ಅನುದಾನ ಬೇರೆ ನೀಡುತ್ತಿದೆ. ಅರ್ಥಾತ್ ಕಾರ್ಪೋರೇಟ್ ನಷ್ಟವನ್ನು ನೇರಾ ನೇರಾ ಸರ್ಕಾರ ತುಂಬಿ ಕೊಡುತ್ತಿದೆ; ಅದೂ ನಮ್ಮ ತೆರಿಗೆ ಮೂಲಕ.
ಈ ಕಳ್ಳಾಟಕ್ಕೆ ಶಾಶ್ವತ ಕೊನೆ ಹೇಳಲು ಈ ಸಂಯುಕ್ತ ಸಮನ್ವಯ ಸಮಿತಿಯ ನೇತೃತ್ವದ ರೈತ ಹೋರಾಟ ನಿರ್ಧರಿಸಿದಂತಿದೆ. ಭಾಜಪ ತನ್ನ ಭಾವನಾತ್ಮಕ ಕೋಮು ಧ್ರುವೀಕರಣದ ಮೂಲಕ ಹುಲುಸು ಬೆಲೆ ಪಡೆದಿರುವ ರಾಜ್ಯಗಳಲ್ಲೇ ಈ ಭೂಕಂಪದ ಅದುರುವಿಕೆ ತೀವ್ರವಾಗುತ್ತಿದೆ. ಮೊದಲೇ ಅಭಿವೃದ್ಧಿ ಕುಂಠಿತವಾಗಿರುವ ಈ ರಾಜ್ಯಗಳಲ್ಲಿ ರೈತ ನಿರ್ಲಕ್ಷ್ಯವೂ ಸೇರಿಕೊಂಡರೆ ಅಧಿಕಾರಸ್ಥ ಪಕ್ಷಕ್ಕೆ ಅದಕ್ಕಿಂತ ದೊಡ್ಡ ಅಪಾಯದ ಸೂಚನೆ ಇಲ್ಲ. ದಕ್ಷಿಣದ ರಾಜ್ಯಗಳಲ್ಲಿ ಅದೂ ಕರ್ನಾಟಕದಲ್ಲಿ ಸ್ಥಳೀಯ ಮಂಥನದ ಸಂಕ್ರಮಣ ಸ್ಥಿತಿಯಲ್ಲಿ ಉತ್ತರದಷ್ಟು ತೀವ್ರ ಹೋರಾಟ ತಕ್ಷಣಕ್ಕೆ ಹೊಮ್ಮದು. ಆದರೆ ಈ ಚಳವಳಿ ರೈತ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಪಡೆವ ಸ್ಪಷ್ಠತೆಯೊಂದಿಗೆ ಹೊರಟಿರುವ ಕಾರಣ ಈ ವರ್ಷ ಅಭೂತಪೂರ್ವ ಚಳವಳಿ ಎಲ್ಲೆಡೆ ಭುಗಿಲೇಳಲಿದೆ. ಕರ್ನಾಟಕವೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

– ಕೆ.ಪಿ.ಸುರೇಶ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...