Homeಸಾಹಿತ್ಯ-ಸಂಸ್ಕೃತಿಕಥೆಅವಕಾಶಗಳ ಬಾಲ ಕೈ ಬಿಟ್ಟಾಗ

ಅವಕಾಶಗಳ ಬಾಲ ಕೈ ಬಿಟ್ಟಾಗ

- Advertisement -
- Advertisement -

ಇಪ್ಪತ್ತೈದು ವಯಸ್ಸಿನ ಸ್ಫುರದ್ರೂಪಿ ಯುವಕ. ಪಕ್ಕದೂರಿನ ರೈತನೊಬ್ಬನ ಮಗಳ ಮೇಲೆ ಅವನಿಗೆ ಒಲವಾಯಿತು. ಆಕೆಯನ್ನೇ ಮದುವೆಯಾಗಬೇಕೆಂದು ನಿರ್ಧರಿಸಿಕೊಂಡ. ಸೀದಾ ಆ ಹುಡುಗಿಯ ಅಪ್ಪನ ಮುಂದೆ ಬಂದು ನಿಂತ.
`ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ. ಅವಳನ್ನು ಮದುವೆಯಾಗುತ್ತೇನೆ. ದಯವಿಟ್ಟು ಅಪ್ಪಣೆ ಕೊಡಿ’ ಹುಡುಗ ಪ್ರಾಮಾಣಿಕವಾಗಿ ತನ್ನ ಮನದಾಸೆಯನ್ನು ಹುಡುಗಿಯ ಅಪ್ಪನೆದುರು ಬಿಚ್ಚಿಟ್ಟ.
ರೈತ, ಹುಡುಗನನ್ನು ಒಮ್ಮೆ ದಿಟ್ಟಿಸಿ ನೋಡಿದ. ಸಿರಿವಂತಿಕೆಯ ಲಕ್ಷಣಗಳು ಅವನ ದೇಹದಿಂದ ಚಿಮ್ಮಿ ಬರುತ್ತಿದ್ದವು.
ಒಂದು ನಿರ್ಧಾರಿತ ಧ್ವನಿಯಲ್ಲಿ ರೈತ ನುಡಿದ, `ನಿನಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡಲು ನನಗೆ ಯಾವ ಅಭ್ಯಂತರವೂ ಇಲ್ಲ. ಆದರೆ ನಾನು ಒಂದು ಸ್ಪರ್ಧೆ ಇಡುವೆ. ಅದರಲ್ಲಿ ನೀನು ಗೆದ್ದರೆ ಮಾತ್ರ ಮದುವೆಯ ಪ್ರಸ್ತಾಪ. ಇಲ್ಲದಿದ್ದರೆ ನೀನು ಖಾಲಿ ಕೈಯಲ್ಲಿ ವಾಪಾಸ್ ಹೋಗಬೇಕು’.
ವಯಸ್ಸಿನ ಹುಮ್ಮಸ್ಸು, ಪ್ರೀತಿಯ ನಶೆಯಲ್ಲಿದ್ದ ಹುಡುಗ `ಸರಿ, ನಾನು ಸಿದ್ಧ. ಏನು ನಿಮ್ಮ ಸ್ಪರ್ಧೆ?’ ಪ್ರಶ್ನಿಸಿಯೇಬಿಟ್ಟ.
`ಏನಿಲ್ಲ, ನೀನು ಆ ಮೈದಾನದ ಮಧ್ಯದಲ್ಲಿ ನಿಂತಿರು. ನಾನು ನನ್ನ ಬಳಿಯಿರುವ ಮೂರು ಗೂಳಿಗಳನ್ನು ಒಂದಾದ ಮೇಲೆ ಒಂದರಂತೆ ಮೈದಾನದೊಳಕ್ಕೆ ಬಿಡುತ್ತೇನೆ. ಮೂರರಲ್ಲಿ ಯಾವುದಾದರು ಒಂದು ಗೂಳಿಯ ಬಾಲವನ್ನು ನೀನು ಹಿಡಿದರೂ ನಿನಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡ್ತೀನಿ.’
`ಅಷ್ಟೇ ತಾನೆ, ನಾನು ಸಿದ್ಧ!’ ಹುಡುಗ ಒಂದೇ ಉಸುರಿಗೆ ಸಮ್ಮತಿಯಿತ್ತ.
ಮೈದಾನದ ನಡುವೆ ಹುಡುಗ ಮೊದಲ ಗೂಳಿಗಾಗಿ ಕಾದು ನಿಂತ. ರೈತ ತನ್ನ ಕೊಟ್ಟಿಗೆಯಿಂದ ಒಂದು ಗೂಳಿಯನ್ನು ಮೈದಾನದತ್ತ ನುಗ್ಗಿಸಿದ. ಅದು ದಷ್ಟಪುಷ್ಟವಾಗಿದ್ದ ಗೂಳಿ. ಕಟ್ಟುಮಸ್ತಾದ ಐದಾರು ಪೈಲ್ವಾನರನ್ನು ಒಂದೇ ಏಟಿಗೆ ಎತ್ತಿ ಬಿಸಾಡಬಲ್ಲ ರೋಷದಿಂದ ನುಗ್ಗಿ ಬರುತ್ತಿತ್ತು.
ಹುಡುಗ ಯೋಚನೆ ಮಾಡಿದ, `ಈ ಗೂಳಿ ಭಯಂಕರ ತಾಕತ್ತಿನಲ್ಲಿದೆ. ಇದರ ಬಾಲ ಹಿಡಿಯಲು ಹೋದರೆ ಅಪಾಯ ಕಟ್ಟಿಟ್ಟಬುತ್ತಿ. ಇದನ್ನು ಸುಮ್ಮನೇ ಬಿಟ್ಟುಬಿಡೋಣ. ಎರಡನೇ ಗೂಳಿಯ ಬಾಲ ಹಿಡಿದರಾಯ್ತು. ಹೇಗೂ ಒಂದು ಗೂಳಿಯ ಬಾಲವನ್ನು ತಾನೇ ನಾನು ಹಿಡಿಯಬೇಕಿರುವುದು. ಮನಸ್ಸಿನ ಆಲೋಚನೆಯನ್ನು ಪ್ರತಿಫಲಿಸುವಂತೆ ಆತ ಪಕ್ಕಕ್ಕೆ ಸರಿದು ಗೂಳಿ ಓಡಿಹೋಗಲು ಅನುವು ಮಾಡಿಕೊಟ್ಟ.
ಈಗಾತ ಎರಡನೇ ಗೂಳಿಯ ನಿರೀಕ್ಷೆಯಲ್ಲಿದ್ದಾನೆ. ಕೊಟ್ಟಿಗೆ ತೆರೆಯಿತು, ಎರಡನೇ ಗೂಳಿ ಮೈದಾನದತ್ತ ದೌಡಾಯಿಸಿತು. ಅದು ಮೊದಲನೆಯದ್ದಕ್ಕಿಂತ ಬಲಿಷ್ಠವಾಗಿದೆ. ಅದರ ಓಟಕ್ಕೆ ನೆಲವೇ ನಡುಗಿಹೋಗುತ್ತಿದೆ. ಹುಡುಗನ ಮನಸ್ಸು ಮತ್ತೆ ಆಲೋಚಿಸಿತು `ಈ ಗೂಳಿಯ ಸಹವಾಸವೂ ಬೇಡ. ಇದೂ ಹೋಗಲಿ. ಮೂರನೇ ಗೂಳಿಯ ಬಾಲವನ್ನು ಹಿಡಿದರಾಯಿತು.’
ಎರಡನೇ ಗೂಳಿಯೂ ಅನಾಯಾಸವಾಗಿ ಸಾಗಿಹೋಯಿತು. ಈಗ ಕಡೆಯ, ಮೂರನೇ ಗೂಳಿಯ ನಿರೀಕ್ಷೆಯಲ್ಲಿ ಹುಡುಗನಿದ್ದಾನೆ. ಇದು ಅವನ ಕೊನೆಯ ಅವಕಾಶ. ಕೊಟ್ಟಿಗೆಯ ಬಾಗಿಲು ತೆರೆಯಿತು. ಮೂರನೇ ಗೂಳಿಯೂ ಹೊರಬಂತು. ಅದನ್ನು ನೋಡುತ್ತಿದ್ದಂತೆ ಹುಡುಗನ ಮುಖದಲ್ಲಿ ಖುಷಿ ದಟ್ಟೈಸಿತು. ಯಾಕೆಂದರೆ ಅದು ಬಡಕಲು ದೇಹದ ನರಪೇತಲ ಗೂಳಿ! ಸುಲಭವಾಗಿ ಅದರ ಬಾಲ ಹಿಡಿಯಬಹುದೆಂದು ಹುಡುಗ ಲೆಕ್ಕಾಚಾರ ಹಾಕಿದ. ಗೂಳಿ ಹತ್ತಿರ ಬರುತ್ತಿದ್ದಂತೆಯೇ ಅದರ ಮೇಲೆ ನೆಗೆಯಲು ಸನ್ನದ್ಧನಾದ. ಬಾಲ ಹಿಡಿಯಬೇಕೆಂದರೆ ಗೂಳಿ ಕೊಂಚ ಮುಂದಕ್ಕೆ ಹೋಗಬೇಕು, ಆಗ ಹಿಂದಿನಿಂದ ನೆಗೆದು ಬಾಲ ಹಿಡಿಯಬಹುದೆಂಬ ತಂತ್ರ ರೂಪಿಸಿಕೊಂಡ. ಅದರಂತೆ ಆ ಗೂಳಿ ತನ್ನನ್ನು ಪಾರು ಮಾಡಿಕೊಂಡು ಹೋಗುತ್ತಿದ್ದಂತೆಯೇ ಎರಡೂ ತೋಳುಗಳಿಗೆ ಬಲತುಂಬಿಕೊಂಡು, ಅಂಗೈಗಳನ್ನು ಬಿಗಿತಕ್ಕೆ ಅಣಿಮಾಡಿಕೊಂಡು ಗೂಳಿಯ ಮೇಲೆ ಹಾರಿದ.
ಹುಡುಗನಿಗೆ ಅಚ್ಚರಿ… ಆ ಗೂಳಿಗೆ ಬಾಲವೇ ಇರಲಿಲ್ಲ! ಪ್ರಶ್ನಾರ್ಥಕ ಮೊಗದೊಂದಿಗೆ ರೈತನತ್ತ ನೋಡಿದ. ರೈತ ತನ್ನ ಮೊದಲೆರಡು ಗೂಳಿಗಳ ಕಡೆ ನೋಡಿ ಮುಗುಳ್ನಕ್ಕ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...