Homeಅಂಕಣಗಳುಕಳೆದುಹೋದ ದಿನಗಳುಮುಖ್ಯಮಂತ್ರಿಗಳ ಮನೆಗೆ ಬರುವುದಿಲ್ಲವೆಂದಿದ್ದ ಆದರ್ಶವಾದಿ ಕಾಂಗ್ರೆಸ್ಸಿಗ ಶಾಂತಪ್ಪ: ಪ್ರಸಾದ್ ರಕ್ಷಿದಿ

ಮುಖ್ಯಮಂತ್ರಿಗಳ ಮನೆಗೆ ಬರುವುದಿಲ್ಲವೆಂದಿದ್ದ ಆದರ್ಶವಾದಿ ಕಾಂಗ್ರೆಸ್ಸಿಗ ಶಾಂತಪ್ಪ: ಪ್ರಸಾದ್ ರಕ್ಷಿದಿ

- Advertisement -
- Advertisement -

ಕಳೆದು ಹೋದ ದಿನಗಳು – 23

ಅಂದು ಸರ್ಕಾರಿ ಸ್ಥಳವನ್ನು ಜಮೀನಿದ್ದವರು ಒತ್ತುವರಿ ಮಾಡುತ್ತಿದ್ದವರ ನಡುವೆಯೂ ಕೆಲವರು ನ್ಯಾಯ ನಿಷ್ಟುರಿ ಭೂಮಾಲಿಕರಿದ್ದರಿದ್ದರು.

ಅಂತಹವರಲ್ಲಿ ಒಬ್ಬರು ಹಾದಿಗೆ ಶಾಂತಪ್ಪನವರು. ಅವರು ಕಾಂಗ್ರೆಸ್ಸಿಗರು, ಗಣಪಯ್ಯನವರ ಸ್ವತಂತ್ರ ಪಾರ್ಟಿ ಹಾಸನ ಜಿಲ್ಲೆಯಲ್ಲಿ ಉತ್ತುಂಗದಲ್ಲಿ ಇದ್ದಾಗಲೂ ಶಾಂತಪ್ಪನವರು ಕಾಂಗ್ರೆಸ್ಸಿನಲ್ಲಿಯೇ ಇದ್ದರು. ಆದರೆ ಗಣಪಯ್ಯನವರ ಸ್ನೇಹವಲಯದಲ್ಲೇ ಇದ್ದರು.
ಶಾಂತಪ್ಪನವರು ಆ ಕಾಲದಲ್ಲಿಯೇ ಬಿ.ಎ. ಪದವೀಧರರು. ಕಾಲೇಜಿನಲ್ಲಿ ಕೆಂಗಲ್ ಹನುಮಂತಯ್ಯನವರ ಸಹಪಾಠಿಗಳು ಮಾತ್ರವಲ್ಲ, ಆತ್ಮೀಯ ಸ್ನೇಹಿತರು ಕೂಡಾ. ಹನುಮಂತಯ್ಯನವರ ಜೊತೆಗಿನ ಒಡನಾಟ ಮತ್ತು ಸ್ನೇಹ ಕಾಲೇಜು ದಿನಗಳ ನಂತರವೂ ಮುಂದುವರೆದಿತ್ತು.

ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿ ನಿಯುಕ್ತರಾದಾಗ ಪ್ರಮಾಣ ವಚನ ಸಮಾರಂಭಕ್ಕೆ ಸಮಯ ನಿಗದಿ ಮಾಡಲು ಅಧಿಕಾರಿಗಳು ಹನುಮಂತಯ್ಯನವರಲ್ಲಿ ಚರ್ಚಿಸಲು ಬಂದರು. ಆಗ ಹನುಮಂತಯ್ಯನವರು, ಶಾಂತಪ್ಪನವರಲ್ಲಿ ಇಂತ ಸಮಯಕ್ಕೆ ನಿನಗೆ ಬಿಡುವು ಇದಿಯೇನಯ್ಯ, ನಾನು ಪ್ರಮಾಣ ವಚನ ಸ್ವೀಕರಿಸುವಾಗ ಅಲ್ಲಿ ನೀನಿರಬೇಕು. ಆಗ ನಿನಗೆ ಬಿಡುವಿರದಿದ್ದರೆ ಹೇಳು ಸಮಯ ಬದಲಾಯಿಸುತ್ತೇನೆ ಎಂದರಂತೆ !

ಮುಖ್ಯಮಂತ್ರಿಯಾಗಿ ಕೆಂಗಲ್ ಹನುಮಂತಯ್ಯನವರ ಪ್ರಮಾಣವಚನ ಸ್ವೀಕಾರಕ್ಕೆ ಶಾಂತಪ್ಪನವರು ಸಾಕ್ಷಿಯಾದರು. ನಂತರ ಗೆಳೆಯನನ್ನು ಹನುಮಂತಯ್ಯ ತಮ್ಮ ಮನೆಗೆ ಊಟಕ್ಕೆ ಕರೆದೊಯ್ದರು.

ಊಟ ಮಾಡುವಾಗ ಹನುಮಂತಯ್ಯನವರು, “ಶಾಂತು ನಾನೀಗ ಮುಖ್ಯಮಂತ್ರಿ ನಿಂದೇನಾದ್ರೂ ಕೆಲಸ ಇದ್ರೆ ಸಂಕೋಚ ಮಾಡ್ಬೇಡ ನನ್ನತ್ರ ಬಾ” ಎಂದರಂತೆ.

ಆಗ ಶಾಂತಪ್ಪ “ಹನುಮಂತು ಏನಾದರೂ ಸಾರ್ವಜನಿಕ ಕೆಲಸ ಇದ್ರೆ ಸಂಬಂಧಪಟ್ಟ ಅಧಿಕಾರಿಗೆ ಅರ್ಜಿ ಕೊಡ್ತೇನೆ, ಇನ್ನು ನಾನು ನಿನ್ನ ಮನೆಗೆ ಬರೋದು, ಒಂದಿನ ನೀನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಲೇ ಬೇಕಲ್ಲ, ಆ ನಂತರ ಬರ್ತೀನಿ” ಎಂದರು. ಮುಂದೆ ಹಾಗೆಯೇ ನಡೆದುಕೊಂಡರು.

ಸಾಕಷ್ಟು ಕಾಫಿ ತೋಟವಿದ್ದ ಶಾಂತಪ್ಪನವರು ಸಾರ್ವಜನಿಕ ಕೆಲಸಗಳಿಗೆ ಕೊಡುಗೈ ದೊರೆ. ಪ್ರತಿ ವರ್ಷ ತಮ್ಮ ಆದಾಯದ ಗಣನೀಯ ಮೊತ್ತವನ್ನು ಇಂತಹ ಕೆಲಸಗಳಿಗೆಂದೇ ಬೇರೆ ತೆಗೆದಿಟ್ಟು ಖರ್ಚು ಮಾಡುತ್ತಿದ್ದರು.

ಒಮ್ಮೆ ಇವರ ಮಗ, ತಂದೆ ಮನೆಯಲ್ಲಿ ಇಲ್ಲದಾಗ ತೋಟದ ಪಕ್ಕದಲ್ಲಿದ್ದ ಒಂದಷ್ಟು ಸರ್ಕಾರಿ ಜಾಗಕ್ಕೆ ಬೇಲಿ ಹಾಕಿಸಿದರು. ಕೆಲವು ದಿನಗಳ ನಂತರ ಶಾಂತಪ್ಪನವರು ತೋಟಕ್ಕೆ ಹೋದಾಗ ಅದು ಅವರ ಕಣ್ಣಿಗೆ ಬಿತ್ತು. ಕೆಲಸದವರಲ್ಲಿ ವಿಚಾರಿಸಿದಾಗ ಅದು ತಮ್ಮ ಮಗನ ಕೆಲಸವೆಂದು ತಿಳಿಯಿತು. ಕೂಡಲೇ ಕೆಲಸದವರನ್ನು ಕರೆಸಿ. ಬೇಲಿ ಮೊದಲು ಎಲ್ಲಿ ಇತ್ತೋ ಅಲ್ಲಿಗೇ ಹಾಕಿಸಿದರಲ್ಲದೆ ಮಗನನ್ನು ಕರೆದು ಇನ್ನುಮುಂದೆ ಹೀಗೆ ಮಾಡಬೇಕೆಂದು ತಾಕೀತು ಮಾಡಿದರು.

ಇವರ ಒಬ್ಬನೇ ಮಗ ಹೆಚ್.ಎಸ್. ಸಂಪತ್. ಸ್ನೇಹಜೀವಿ, ಅಪಾರ ಗೆಳೆಯರನ್ನು ಕಟ್ಟಿಕೊಂಡು ಸಕಲೇಶಪುರದಲ್ಲಿ ಕ್ರೀಡಾಭಿವೃದ್ಧಿಗೆ ದುಡಿದವರು. ಮುಂದೆ ನಮ್ಮ ಕ್ಯಾಮನಹಳ್ಳಿ ಮಂಡಲ ಪಂಚಾಯತಿಯ ಪ್ರಧಾನರಾಗಿ ಹಲವಾರು ಜನಪರ ಕೆಲಸಗಳನ್ನು ಮಾಡಿದರು. ನಮ್ಮ ನಮ್ಮ ಜೈ ಕರ್ನಾಟಕ ಸಂಘ ಬೆಳ್ಳೇಕೆರೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ನಂತರದ ದಿನಗಳಲ್ಲಿ ಸಕಲೇಶಪುರ ಶಾಸಕರಾದ ಬಿ.ಡಿ.ಬಸವರಾಜ್ ಇವರ ಹತ್ತಿರದ ಸಂಬಂಧಿ.

ಗಣಪಯ್ಯನವರು ಪ್ರಾರಂಭಿಸಿದ್ದ ಮನೆಗಳ ಕೆಲಸ ಮುಗಿಯುತ್ತಾ ಬಂದಿತ್ತು. ಅಗಲಟ್ಟಿ ಮಾವಿನಹಳ್ಳಿ ಗ್ರಾಮದಲ್ಲಿ ದಲಿತರಿಗೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದ ನೂರು ಎಕರೆ ಜಮೀನಿನ ಸರ್ವೆ ಎಲ್ಲ ಮುಗಿದರೂ, ಇನ್ನೂ ಹಕ್ಕು ಪತ್ರ ವಿತರಣೆ ಆಗಿರಲಿಲ್ಲ. ಅದಕ್ಕಾಗಿ ಪ್ರಯತ್ನ ನಡೆದೇ ಇತ್ತು.

ಈಗ ನಿರ್ಮಾಣವಾಗಿದ್ದ ಮನೆಗಳನ್ನು ಅವರಿಗೆ ಹಸ್ತಾಂತರಿಸುವ ಬಗ್ಗೆ ಒಂದು ಸಮಾರಂಭ ಮಾಡಬೇಕೆಂದು ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳೂ ಹೇಳುತ್ತಿದ್ದರು. ಸುಮಾರು ಹತ್ತು ಕಡೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಮನೆಗಳು ವಾಸಕ್ಕೆ ಕೊಡುವ ಹಂತಕ್ಕೆ ಬಂದಿದ್ದವು.
ಹೆನ್ನಲಿ ಗ್ರಾಮದಲ್ಲಿ ಹೇಮಾವತಿ ನದಿ ದಡದಲ್ಲಿ ಒಂದು ಸಮಾರಂಭಕ್ಕೆ ತಯಾರಿ ನಡೆಯಿತು. ಯೋಜನೆ ಫಲಾನುಭವಿಗಳು ಈ ಕಾರ್ಯಕ್ರಮಕ್ಕೆ ಉತ್ಸಾಹದಿಂದಲೇ ತಯಾರಿ ನಡೆಸಿದರು.
ಅಂದಿನ ಕಾರ್ಯಕ್ರಮಕ್ಕೆ ಸಿ.ಎಂ.ಪೂಣಚ್ಚನವರು ಅತಿಥಿಗಳಾಗಿ ಬಂದಿದ್ದರು. ಅವರು ಆಗ ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದರು. ಅಂದು ಅವರು ಭಾಷಣದಲ್ಲಿ ನಾವು ದಕ್ಷಿಣ ಭಾರತದ ಜನ ಪುಣ್ಯ ಮಾಡಿದ್ದೇವೆ. ನಮ್ಮಲ್ಲಿ ಗಣಪಯ್ಯನವರಂತಹ ಜನ ಇದ್ದಾರೆ. ಆ ಕಾರಣಕ್ಕಾಗಿಯೇ ನಾವು ಸ್ವಲ್ಪಮಟ್ಟಿಗೆ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಆದರೆ ಇಲ್ಲಿಗೆ ಹೋಲಿಸಿದಲ್ಲಿ ಉತ್ತರ ಭಾರತದ ರಾಜ್ಯಗಳು ನಮಗಿಂತ ಐವತ್ತು ವರ್ಷಗಳಷ್ಟು ಹಿಂದೆ ಇದ್ದಾರೆ. ಹಳ್ಳಿಗಳ ಜನರಿಗೆ ದೇಶಕ್ಕೆ ಪ್ರಜಾಪ್ರಭುತ್ವ ಬಂದಿದೆ ಎಂದೇ ಗೊತ್ತಿಲ್ಲ. ಇನ್ನೂ ರಾಜರ ಆಳ್ವಿಕೆ ಇದೆ ಎಂದೇ ನಂಬಿದ್ದಾರೆ. ನಮ್ಮಂತವರು ಹೋದರೂ ಮಹಾರಾಜರು ಬಂದರು ಎಂದುಕೊಳ್ಳುತ್ತಾರೆ. ನೀವೆಲ್ಲ ಇಲ್ಲಿ ಇರುವಂತಹ ಅವಕಾಶವನ್ನು ಬಳಸಿಕೊಂಡು ಮಕ್ಕಳಿಗೆ ವಿದ್ಯೆ ಕಲಿಸಿ. ಕುದುರೆಯನ್ನು ಹೊಳೆಯವರೆಗೆ ಒಯ್ಯಬಹುದಷ್ಟೇ ಆದರೆ ನೀರನ್ನು ಅದೇ ಕುಡಿಯಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಮನೆಗಳ ಫಲಾನುಭವಿಗಳೆಲ್ಲರೂ ಸೇರಿ, ಸುಮಾರು ಎರಡು ಸಾವಿರ ಜನರಿಗಾಗುವಷ್ಟು ಉಪ್ಪಿಟ್ಟು ಮತ್ತು ಕೇಸರಿಬಾತನ್ನು ತಯಾರಿಸಿದ್ದರು. ಕೆಲವರು ಭಾಷಣಗಳು ಮುಗಿದಕೂಡಲೇ ದಲಿತರು ಮಾಡಿದ ಅಡಿಗೆಯೆಂದು ಉಪಹಾರಕ್ಕೆ ನಿಲ್ಲದೆ ಜಾರಿಕೊಂಡರು. ಆದರೆ ಗಣಪಯ್ಯ ಮತ್ತು ಪೂಣಚ್ಚನವರು ಎಲ್ಲರ ಮದ್ಯೆ ಉಪಹಾರಕ್ಕೆ ಕುಳಿತಾಗ ಇನ್ನು ಕೆಲವರು ನಿರ್ವಾಹವಿಲ್ಲದೆ ಜೊತೆ ಸೇರಿದರು.

ಈ ಮನೆಗಳನ್ನು ಕಟ್ಟಿದ ಕೆಲವು ಸ್ಥಳಗಳಿಗೆ ಮೊದಲೇ ರೂಡಿಯಾದ ಹೆಸರುಗಳಿದ್ದವು, ಉದಾಹರಣೆಗೆ ಕೃಷ್ಣಾಪುರ, ಅಜ್ಜನಕೆರೆ, ಹಾರ್ಲೆ ಕೂಡಿಗೆ ಹೀಗೆ, ಇದ್ದವು ಆ ಹೆಸರುಗಳನ್ನು ಬಿಟ್ಟು ಕೆಲವು ಹೆಸರಿಲ್ಲದ ಸ್ಥಳಗಳು ಮತ್ತು ಕೇರಿಗಳಿಗೆ ಗಣಪಯ್ಯ ಹೊಸ ಹೆಸರನ್ನು ಇಟ್ಟರು. ರಾಮಕೃಷ್ಣ ನಗರ, ವಿವೇಕ ನಗರ, ವಿಜಯ ನಗರ ಹೀಗೆ, ಈ ತಲೆಮಾರಿನ ಅನೇಕರು “ರಾಮಕೃಷ್ಣ ನಗರ” ದ ಹೆಸರು, ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆದಾಗ ಇಟ್ಟದ್ದೆಂದು ತಿಳಿದಿದ್ದಾರೆ. ಮತ್ತು ಕೆಲವರು ರಾಜಕೀಯದ ವ್ಯಕ್ತಿಗಳು ಅದನ್ನೇ ಭಾಷಣಗಳಲ್ಲಿಯೂ ಹೇಳುತ್ತಾರೆ. ಅದು ನಿಜವಲ್ಲ ಹೆಗಡೆಯವರು ಮುಖ್ಯಮಂತ್ರಿ ಆಗುವ ಮೊದಲೇ ಈ ಸ್ಥಳಕ್ಕೆ ಹೆಸರಿಡಲಾಗಿತ್ತು, ಮತ್ತು ಅದು ರಾಮಕೃಷ್ಣ ಪರಮಹಂಸರ ಹೆಸರು ಮತ್ತು ಪಕ್ಕದ “ವಿವೇಕ ನಗರ” ದ ವಿವೇಕಾನಂದರ ಹೆಸರಾಗಿದೆ.

ಹಾಗೇಯೇ ಇನ್ನೊಂದು ಹೆಸರು ವಿಜಯ ನಗರ. ಯಾವ ಬ್ಯಾಂಕೂ ಈ ಯೋಜನೆಗೆ ಸಾಲ ಕೊಡದಿದ್ದಾಗ ಸಾಲ ಕೊಟ್ಟ ವಿಜಯಬ್ಯಾಂಕಿನ ವಿಠ್ಠಲ ಶೆಟ್ಟರ ಹೆಸರಿಡೋಣ ಎಂದಿದ್ದರು ಗಣಪಯ್ಯ. ಆಗ ವಿಠ್ಠಲ ಶೆಟ್ಟರು ನಾನೊಬ್ಬ ಬ್ಯಾಂಕ್ ನೌಕರ ಜನರ ದುಡ್ಡನ್ನು ಜನರಿಗೆ ಕೊಡುವವ, ನನ್ನ ಹೆಸರು ಹಾಕಲೇಬಾರದು ಎಂದರು. ಆದ್ದರಿಂದ ಬ್ಯಾಂಕಿನ ಹೆಸರಾದರೂ ಇರಲಿ ಎಂದು ಹೇಳಿ ಕಾನೂನಿನ ತೊಡಕಾಗದಂತೆ ವಿಜಯ ನಗರ ಎಂದು ಹೆಸರಿಟ್ಟರು.
ನಂತರ ಆ ಮನೆಗಳತ್ತ ಗಣಪಯ್ಯನವರ ಓಡಾಟ ಹೆಚ್ಚಾಯಿತು. ಅವರಿಗೆ ಬಟ್ಟೆ ಬರೆ ಹಂಚುವುದು, ಹಣ್ಣಿನ ಗಿಡಗಳನ್ನು ಕೊಡಿಸುವುದು. ಬೇರೆ ಬೆಳೆಗಳಿಗೆ ಪ್ರೋತ್ಸಾಹ ನೀಡುವುದು ಮಾಡುತ್ತಿದ್ದರು.

ರಾಜ್ಯ ರಾಜಕಾರಣದಲ್ಲಿ ಅವರ ತೊಡಗುವಿಕೆ ಕಡಿಮೆಯಾಗುತ್ತ ಬಂತು. ರಾಜ್ಯದಲ್ಲಿ ರೈತ ಚಳುವಳಿ ಉತ್ತುಂಗಕ್ಕೇರಿತ್ತು. ಗುಂಡೂರಾವ್ ಸರ್ಕಾರವನ್ನು ಕೆಳಗಿಳಿಸುವಲ್ಲಿ ರೈತ ಸಂಘದ ಪಾತ್ರವೂ ಗಣನೀಯವಾಗಿತ್ತು. ರೈತ ಸಂಘ ತನ್ನ ಕಾರ್ಯಕರ್ತರಿಗೆ ಗುಂಡೂರಾವ್ ಸರ್ಕಾರ ವಿರುದ್ಧ ಮತ ಚಲಾಯಿಸುವಂತೆ ಕರೆನೀಡಿತ್ತು. ದೇವರಾಜ ಅರಸರ ದೇಹಾಂತ್ಯವಾಗಿತ್ತು. ಬಂಗಾರಪ್ಪನವರು ಕಾಂಗ್ರೆಸ್ಸಿನಿಂದ ಬೇರೆಯಾಗಿ ಕರ್ನಾಟಕ ಕ್ರಾಂತಿರಂಗ ಎಂಬ ಪಕ್ಷವನ್ನು ಕಟ್ಟಿದ್ದರು. ಇದೆಲ್ಲದರ ಫಲವಾಗಿ ಜನತಾ ಪಕ್ಷ ಹೆಚ್ಚು ಸದಸ್ಯರನ್ನು ಗೆದ್ದು ಹದಿನೆಂಟು ಜನರು ಶಾಸಕರಿದ್ದ ಬಿಜೆಪಿಯ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂತು. ರಾಮಕೃಷ್ಣಹೆಗಡೆಯವರು ಮುಖ್ಯಮಂತ್ರಿಗಳಾದರು.


ಇದನ್ನೂ ಓದಿ: ಸೆ.17: ಸಾಮಾಜಿಕ ನ್ಯಾಯ ದಿನ; ಸ್ವಾಭಿಮಾನದ ಸಂಕೇತ ದ್ರಾವಿಡ ಸೂರ್ಯ ಪೆರಿಯಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...