Homeಅಂಕಣಗಳುಕಳೆದುಹೋದ ದಿನಗಳು 33 - ಬರವಣಿಗೆಯ ಹಿನ್ನೆಲೆ : ಪ್ರಸಾದ್ ರಕ್ಷಿದಿ

ಕಳೆದುಹೋದ ದಿನಗಳು 33 – ಬರವಣಿಗೆಯ ಹಿನ್ನೆಲೆ : ಪ್ರಸಾದ್ ರಕ್ಷಿದಿ

- Advertisement -
- Advertisement -

ಸುಮಾರು ನಾಲ್ಕು ದಶಕಗಳಲ್ಲಿ ಕಂಡ, ನೋಡಿದ, ಜೊತೆಯಾಗಿ ಕೆಲಸಮಾಡಿದ, ಒಡನಾಡಿದ ಅನುಭವಗಳು ಹಾಗೂ ಮನಸ್ಸಿನಲ್ಲಿ ಉಳಿದು ಹೋಗಿದ್ದ ವಿಚಾರಗಳು ಎಲ್ಲದರ ಬಗ್ಗೆ ಎಂದಾದರೂ ಬರೆಯಬೇಕು ಎಂದುಕೊಂಡೇ ಕಾಲಕಳೆಯುತ್ತ ಇದ್ದವನಿಗೆ ಈಗ ಬರೆಯಲೇಬೇಕೆಂಬ ಎಂಬ ಯೋಚನೆ ಬಂದದ್ದು ಡಾ ವೆಂಕಟೇಶ ನೆಲ್ಲುಕುಂಟೆಯವರ ಮಾತಿನಿಂದ.

ಆ ಘಟನೆ ಹೀಗಿದೆ… ಡಾ ನೆಲ್ಲುಕುಂಟೆಯವರು ತೋಡ ಜನಾಂಗದವರು ಬೌದ್ಧಾನುಯಾಯಿಗಳೇ ಎಂಬ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಆಗ ನಾನು ಈ ಬಗ್ಗೆ ಲೇಖಕ ಪರಂಜ್ಯೋತಿಯವರು ಹಿಂದೆ ಒಂದು ಸಂದರ್ಭದಲ್ಲಿ “ನಾವು ಒಂದು ಕಾಲದಲ್ಲಿ ಬೌದ್ಧರಾಗಿದ್ದೆವಂತೆ ಎಂದಿದ್ದರು. ಪರಂಜ್ಯೋತಿ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಕೆ.ಪಿ. ಸ್ವಾಮಿ ಅದೇ ತೋಡ ಜನಾಂಗದವರು. ತೋಡ ಎನ್ನುವುದು ಬ್ರಿಟಿಷರ ಮಾಡಿದ ಅಪಭ್ರಂಶ. ನಿಜವಾದ ಹೆಸರು “ತೊದವ” ರು ಎಂದು ತಿಳಿಸಿದವರೂ ಅವರೇ.

ಆಗ ನಾನು ಸರ್ ಈ ಬಗ್ಗೆ ನೀವು ಬರೆಯಿರಿ ಎಂದಿದ್ದೆ. ಆಗ ಅವರು ಕುಮಾರ ವೆಂಕಣ್ಣನವರ ಬಗ್ಗೆ ಕೃತಿಯೊಂದನ್ನು ರಚಿಸುತ್ತಿದ್ದರು. ನಂತರ ಅವರು ಹೆಚ್ಚು ಕಾಲ ಇರಲೇ ಇಲ್ಲ

ಈ ವಿಚಾರವನ್ನು ನಾನು ವೆಂಕಟೇಶ ನೆಲ್ಲುಕುಂಟೆಯವರಿಗೆ ತಿಳಿಸಿದೆ.

ಆಗ ಅವರು ಕೆಲವು ವಿಚಾರಗಳನ್ನು ಯಾರು ಬರೆಯಬೇಕು ಅವರು ಆ ಕೆಲಸ ಮಾಡದಿದ್ದರೆ ಆಗುವ ನಷ್ಟ ಅಪಾರ ಎಂದರು. ಆ ಮಾತು ನನ್ನನ್ನು ಕೊರೆಯುತ್ತ ಇತ್ತು.

ಈ ಸಂಕಥನ ಗಣಪಯ್ಯನವರ ಜೀವನ ಚರಿತ್ರೆ ಅಲ್ಲ. ಕೊಡಗು ಮತ್ತು ಕೊಡಗಿನ ಭಾಗವಾಗಿದ್ದ ಮಂಜ್ರಾಬಾದ್ ಪ್ರದೇಶದ ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರೋತ್ತರ ಕಾಲದ ಸುಮಾರು ಏಳು ದಶಕಗಳ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸ್ಥಿತ್ಯಂತರಗಳ ಪಕ್ಷಿನೋಟ.

ಸಕಲೇಶಪುರ ತಾಲ್ಲೂಕು ಹಾಸನಜಿಲ್ಲೆಯಲ್ಲಿ ಇದ್ದರೂ, ಇದು ಸಂಪುರ್ಣವಾಗಿ ಮಲೆನಾಡಿನ ಕಾಫಿ ವಲಯವಾಗಿದ್ದು ದಟ್ಟ ಅರಣ್ಯಗಳಿಂದ ಕೂಡಿದ ಪ್ರದೇಶವೇ ಆಗಿದೆ. ಹೇಮಾವತಿ ನದಿಯ ದಕ್ಷಿಣ ಭಾಗ ಹಿಂದೆ  ಕೊಡಗಿನ ಭಾಗವಾದ ಮಂಜ್ರಾಬಾದ್ ಪ್ರಾಂತವೆಂದೇ ಪರಿಗಣಿಸಲ್ಪಟ್ಟಿತ್ತು. ಟಿಪ್ಪು ಸುಲ್ತಾನ್ ಕಾಲದಲ್ಲಿ, ಕೊಡಗಿನ ಅರಸರು ಮತ್ತು ನಂತರವೂ ಈ ಪ್ರದೇಶ  ಮಂಜ್ರಾಬಾದ್ ತಾಲ್ಲೂಕು ಎಂದೇ ಕರೆಯಲ್ಪಟ್ಟು ಸರ್ಕಾರಿ ದಾಖಲೆಗಳಲ್ಲಿಯೂ ಹಾಗೇಯೇ ಇದೆ. ತೀರ ಇತ್ತೀಚಿನವರೆಗೂ ಇದ್ದ ಸಕಲೇಶಪುರದ ಹಳೆಯ ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ಮಂಜ್ರಾಬಾದ್ ತಾಲ್ಲೂಕು ಕಛೇರಿ ಎಂದೇ ಬರೆಯಲ್ಪಟ್ಟಿತ್ತು. ಮಂಜ್ರಾಬಾದ್ ಯಾಲಕ್ಕಿ ವಿಶ್ವವಿಖ್ಯಾತಿ ಪಡೆದು ದಕ್ಷಿಣ ಕೊಡಗಿನಿಂದ ಯಾಲಕ್ಕಿ ಗಿಡಗಳಿಗಾಗಿ ಕೃಷಿಕರು ಮಂಜ್ರಾಬಾದ್‌ಗೆ ಬರುತ್ತಿದ್ದ ಉಲ್ಲೇಖ ಭಾರತೀಸುತರ ಕಾದಂಬರಿಗಳಲ್ಲಿ ಇದೆ.

ಜಯರಾಮ್ ಶೆಟ್ಟರು

ಕೊಡಗಿನ ಹಾಗೂ ಈಗ ಹಾಸನಜಿಲ್ಲೆಯ ಭಾಗವಾಗಿರುವ ಮಂಜ್ರಾಬಾದ್ ಇವೆರಡು ಪ್ರದೇಶಗಳ ಈ ಕಥಾನಕವನ್ನು ಬೆಸೆದಿರುವ ಕೊಂಡಿ ಗಣಪಯ್ಯ.

ಈ ಬರಹಗಳ ಮಾಲಿಕೆಯಲ್ಲಿ ಬರುವ ಕೆಲವರ ಬಗ್ಗೆ ಅಲ್ಲಲ್ಲಿ ಒಂದಷ್ಟು ಮಾಹಿತಿಗಳು ಸಿಗಬಹುದು. ಆದರೆ ಇನ್ನು ಕೆಲವರ ಬಗ್ಗೆ ಬರಹಕ್ಕಿಳಿದ ಮಾಹಿತಿಗಳು ಕಡಿಮೆ ಮತ್ತು ಇನ್ನು ಕೆಲವರ ಬಗ್ಗೆ ಇಲ್ಲವೇ ಇಲ್ಲ.

ಅಂತಹವರಲ್ಲಿ ಮುಖ್ಯರು ಎನ್.ಕೆ.ಗಣಪಯ್ಯ.

ಚೆನ್ನಮ್ಮ

ಅದಕ್ಕೆ ಬಹಳ ಮುಖ್ಯ ಕಾರಣ ಅವರು ಯಾವುದನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಪ್ರಚಾರಪ್ರಿಯತೆ ಹೋಗಲಿ ಪ್ರಜ್ಞಾಪೂರ್ವಕವಾಗಿ ಪ್ರಚಾರದಿಂದ ದೂರವಿದ್ದುದು. ಅವರು ಮಾಡಿದ ಎಷ್ಟೋ  ಜನಪರ ಕೆಲಸಗಳು ಅವರ ಕುಟುಂಬದವರಿಗೂ ತಿಳಿಯದೇ ಇದ್ದದು. ಈ ಎಲ್ಲದರಿಂದ ಬಹಳಷ್ಟು ಜನರಿಗೆ ಅವರ ಬಗ್ಗೆ ಮಾಹಿತಿಗಳಿಲ್ಲ. ನಾಡಿನ ಪತ್ರಿಕೆಗಳಲ್ಲಿ ಲೇಖನಗಳು ಬಂದಿಲ್ಲ ಹಾಗೂ ಬೌದ್ಧಿಕ ವಲಯದಲ್ಲಿ ಚರ್ಚೆಗಳಾಗಿಲ್ಲ. ಅವರು ನಡೆಸಿದ ನೂರಾರು ಕಾರ್ಯಕ್ರಮಗಳಲ್ಲಿಯೂ ಪೋಟೋ ತೆಗೆಸಿಕೊಳ್ಳುವ ಆಸಕ್ತಿಯೂ ಅವರಿಗೆ ಇದ್ದಿರಲಿಲ್ಲ.

ಇಲ್ಲಿ ಲಭ್ಯವಿರುವ ಹಲವು ಫೋಟೋಗಳು ಕೂಡಾ ಬೇರೆಯವರು ಕಾಲ ಕಾಲಕ್ಕೆ ತೆಗೆದಂತವುಗಳು. ಗಣಪಯ್ಯನವರು ಕೊನೆಯವರೆಗೂ ಬದುಕಿದ್ದ ಹಾರ್ಲೆ ಬಂಗಲೆಯ (ಬ್ರಿಟಿಷರು ಕಟ್ಟಿದ ಬಂಗಲೆ) ಒಂದು ಇಡಿಯಾದ ಫೋಟೋ ಕೂಡಾ ನನಗೆ ದೊರೆಯಲಿಲ್ಲ.

ಮಂಜಯ್ಯ ಮತ್ತು ದ್ಯಾವಯ್ಯ

ಈ ಎಲ್ಲ ಕಾರಣಗಳಿಂದ ನನಗೆ ದಕ್ಕಿದ ಮತ್ತು ನನ್ನ ನೆನಪುಗಳ ಸಂಗ್ರಹದಲ್ಲದ್ದನ್ನು ಬಳಸಿಕೊಂಡು ಹಲವರೊಡನೆ ಮತ್ತೊಮ್ಮೆ ಚರ್ಚಿಸಿ ಈ ಸಂಕಥನವನ್ನು ಕಟ್ಟುವ ಪ್ರಯತ್ನ ಮಾಡಿದ್ದೇನೆ. ಮತ್ತು ಆ ವಿವರಗಳನ್ನು ಮರುಪರಿಶೀಲನೆ ಮಾಡಿಕೊಂಡಿದ್ದೇನೆ.

ಅವರ ಒಡನಾಡಿಗಳಾಗಿದ್ದ ಹಿರಿಯರಲ್ಲಿ ಬಹಳ ಜನರು ಈಗ ಇಲ್ಲ.

ಈ ಬಗ್ಗೆ ಅವರ ಕುಟುಂಬವರ್ಗದವರಾದ ಡಾ.ರವೀಂದ್ರನಾಥ, ಕಮಲಾ ರವೀಂದ್ರನಾಥ, ಬಂಧುಗಳಾದ ವಾಸುದೇವ ಶರ್ಮ, ಎಂ.ಜಿ. ರಾಧಾಕೃಷ್ಣ ಹಾಗೂ ಗಣಪಯ್ಯನವರ ಕೊನೆಯವರೆಗೂ ಅವರ ಕಛೇರಿಯಲ್ಲಿ ಆಪ್ತಸಹಾಯಕಿಯಾಗಿ ದುಡಿದ ಕಮಲಾ.ಎನ್. ಭಟ್ ಇವರುಗಳ ಸಹಕಾರ ದೊಡ್ಡದು. ಗಣಪಯ್ಯನವರಿಗೆ ಸಂಬಂಧಿಸಿದ ಕೆಲವು ಅಪರೂಪದ ಫೋಟೋಗಳು ಇವರೆಲ್ಲರ ಸಂಗ್ರಹದ ಕೊಡುಗೆ.

ಕಮಲಾ. ಎನ್. ಭಟ್

ಹಾಗೆಯೇ ಅವರಲ್ಲಿ ಎಳವೆಯಿಂದ ಹಾರ್ಲೆಯಲ್ಲಿ ಕೆಲಸಮಾಡುತ್ತ ಬೆಳೆದ ಇಂದೂ ಕೂಡಾ ಗಣಪಯ್ಯನವರ ಗೆಳೆಯ ಗ್ರೆಗೊರಿ ಮಥಾಯಿಸ್ ರವರ ತೋಟವನ್ನು ನೋಡಿಕೊಳ್ಳುತ್ತಿರುವ ಬಿ.ಜಯರಾಮ ಶೆಟ್ಟರು, ನಡಹಳ್ಳಿ ಗ್ರಾಮದ ಮಂಜಯ್ಯ, ದ್ಯಾವಯ್ಯ. ರೇಖಾ, ಅಜ್ಜನಕೆರೆಯ ಚೆನ್ನಮ್ಮ, ಹೆನ್ನಲಿ ಮಂಜುನಾಥ್, ಸಣ್ಣಯ್ಯ, ಕೃಷ್ಣಪ್ಪ ಮುಂತಾದವರು ಹಲವು ಮಾಹಿತಿಗಳನ್ನು ನೀಡಿದ್ದಾರೆ.

ಮಂಜುನಾಥ್ ಮತ್ತು ಇತರರು

ಕೊಡಗಿನಿಂದ ಸಿ.ಪಿ.ಬೆಳ್ಳಿಯಪ್ಪ ಅವರ ಲೇಖನವೊಂದನ್ನು ಗೆಳೆಯರೊಬ್ಬರು ಕಳುಹಿಸಿ ಕೊಟ್ಟಿದ್ದಾರೆ.

ಇಲ್ಲಿ ಬಳಸಿಕೊಂಡಿರುವ ಪೋಟೋಗಳಲ್ಲಿ ಹೆಚ್ಚಿನವು ನನ್ನ ಸಂಗ್ರಹ, ಸಾಕಮ್ಮನವರ ಬಂಗಲೆಯ ಕೆಲವು ಅಮೂಲ್ಯ ಚಿತ್ರಗಳನ್ನು ಒದಗಿಸಿದ್ದು ಹಾರ್ಲೆ ಎಸ್ಟೇಟ್‌ನ ಇಂದಿನ ಮಾಲಿಕರಾದ ಡಿ.ಎಂ. ಪೂರ್ಣೇಶ್ ಅವರು.

ಇವರೆಲ್ಲರಿಗೆ ಕೃತಜ್ಞತೆಗಳು….

ಹಾಗೇ ಇನ್ನು ಕೆಲವು ಚಿತ್ರಗಳಿಗಾಗಿ ಗೂಗಲಪ್ಪನಿಗೂ ವಂದನೆಗಳು.

ಇವೆಲ್ಲದರೊಂದಿಗೆ ಈ ಬರಹದ ಮೂಲಕ ಅನಾವರಣ ಗೊಳ್ಳುತ್ತಿರುವ ಹಲವಾರು ಸಂಗತಿಗಳು. ಇನ್ನಷ್ಟು ವಿಚಾರಗಳನ್ನು ತೆರೆದಿಡುತ್ತಿವೆ. ಇದು ಸಾಮಾಜಿಕ ತಾಣದ ಶಕ್ತಿ ಕೂಡಾ. ಈ ಬರಹಗಳ ಮಾಲಿಕೆಯಲ್ಲಿ ಉಲ್ಲೇಖವಾಗಿರುವ ಹಲವಾರು ವ್ಯಕ್ತಿಗಳ ಬಗ್ಗೆ ಅನೇಕ ಮಾಹಿತಿಗಳು ಇಂದು ಲಭ್ಯ.

ವಾಸುದೇವ ಶರ್ಮಾ

ಈ ಬರಹಗಳು ಮುದ್ರಣವಾಗುವ ಸಂದರ್ಭದಲ್ಲಿ ಪರಿಷ್ಕರಿಸಿಕೊಳ್ಳಲು ಅವು ಸಹಾಯಕವಾಗಿವೆ.

ಈ ಬರಹಗಳ ಮುಂದುವರಿದ ಭಾಗವಾಗಿ ಬರೆಯಬಹುದಾದ ಕೆಲವು ಸಂಗತಿಗಳಿವೆ. ಕೆಲವು ದಿನಗಳ ವಿರಾಮದ ನಂತರ ಮತ್ತು ಅವು ನಿಮ್ಮೊಂದಿಗೆ ಮಾತನಾಡಲಿವೆ.

ಅಲ್ಲಿಯವರೆಗೆ …… ನಮಸ್ಕಾರ

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು -24: ಶಾಪ್ ಸಿದ್ಧೇಗೌಡ ಚಿನ್ನದ ಪದಕದ ಸ್ಥಾಪಕರ ಕುರಿತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...