Homeಅಂಕಣಗಳುಕಳೆದುಹೋದ ದಿನಗಳು 33 - ಬರವಣಿಗೆಯ ಹಿನ್ನೆಲೆ : ಪ್ರಸಾದ್ ರಕ್ಷಿದಿ

ಕಳೆದುಹೋದ ದಿನಗಳು 33 – ಬರವಣಿಗೆಯ ಹಿನ್ನೆಲೆ : ಪ್ರಸಾದ್ ರಕ್ಷಿದಿ

- Advertisement -
- Advertisement -

ಸುಮಾರು ನಾಲ್ಕು ದಶಕಗಳಲ್ಲಿ ಕಂಡ, ನೋಡಿದ, ಜೊತೆಯಾಗಿ ಕೆಲಸಮಾಡಿದ, ಒಡನಾಡಿದ ಅನುಭವಗಳು ಹಾಗೂ ಮನಸ್ಸಿನಲ್ಲಿ ಉಳಿದು ಹೋಗಿದ್ದ ವಿಚಾರಗಳು ಎಲ್ಲದರ ಬಗ್ಗೆ ಎಂದಾದರೂ ಬರೆಯಬೇಕು ಎಂದುಕೊಂಡೇ ಕಾಲಕಳೆಯುತ್ತ ಇದ್ದವನಿಗೆ ಈಗ ಬರೆಯಲೇಬೇಕೆಂಬ ಎಂಬ ಯೋಚನೆ ಬಂದದ್ದು ಡಾ ವೆಂಕಟೇಶ ನೆಲ್ಲುಕುಂಟೆಯವರ ಮಾತಿನಿಂದ.

ಆ ಘಟನೆ ಹೀಗಿದೆ… ಡಾ ನೆಲ್ಲುಕುಂಟೆಯವರು ತೋಡ ಜನಾಂಗದವರು ಬೌದ್ಧಾನುಯಾಯಿಗಳೇ ಎಂಬ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಆಗ ನಾನು ಈ ಬಗ್ಗೆ ಲೇಖಕ ಪರಂಜ್ಯೋತಿಯವರು ಹಿಂದೆ ಒಂದು ಸಂದರ್ಭದಲ್ಲಿ “ನಾವು ಒಂದು ಕಾಲದಲ್ಲಿ ಬೌದ್ಧರಾಗಿದ್ದೆವಂತೆ ಎಂದಿದ್ದರು. ಪರಂಜ್ಯೋತಿ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಕೆ.ಪಿ. ಸ್ವಾಮಿ ಅದೇ ತೋಡ ಜನಾಂಗದವರು. ತೋಡ ಎನ್ನುವುದು ಬ್ರಿಟಿಷರ ಮಾಡಿದ ಅಪಭ್ರಂಶ. ನಿಜವಾದ ಹೆಸರು “ತೊದವ” ರು ಎಂದು ತಿಳಿಸಿದವರೂ ಅವರೇ.

ಆಗ ನಾನು ಸರ್ ಈ ಬಗ್ಗೆ ನೀವು ಬರೆಯಿರಿ ಎಂದಿದ್ದೆ. ಆಗ ಅವರು ಕುಮಾರ ವೆಂಕಣ್ಣನವರ ಬಗ್ಗೆ ಕೃತಿಯೊಂದನ್ನು ರಚಿಸುತ್ತಿದ್ದರು. ನಂತರ ಅವರು ಹೆಚ್ಚು ಕಾಲ ಇರಲೇ ಇಲ್ಲ

ಈ ವಿಚಾರವನ್ನು ನಾನು ವೆಂಕಟೇಶ ನೆಲ್ಲುಕುಂಟೆಯವರಿಗೆ ತಿಳಿಸಿದೆ.

ಆಗ ಅವರು ಕೆಲವು ವಿಚಾರಗಳನ್ನು ಯಾರು ಬರೆಯಬೇಕು ಅವರು ಆ ಕೆಲಸ ಮಾಡದಿದ್ದರೆ ಆಗುವ ನಷ್ಟ ಅಪಾರ ಎಂದರು. ಆ ಮಾತು ನನ್ನನ್ನು ಕೊರೆಯುತ್ತ ಇತ್ತು.

ಈ ಸಂಕಥನ ಗಣಪಯ್ಯನವರ ಜೀವನ ಚರಿತ್ರೆ ಅಲ್ಲ. ಕೊಡಗು ಮತ್ತು ಕೊಡಗಿನ ಭಾಗವಾಗಿದ್ದ ಮಂಜ್ರಾಬಾದ್ ಪ್ರದೇಶದ ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರೋತ್ತರ ಕಾಲದ ಸುಮಾರು ಏಳು ದಶಕಗಳ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸ್ಥಿತ್ಯಂತರಗಳ ಪಕ್ಷಿನೋಟ.

ಸಕಲೇಶಪುರ ತಾಲ್ಲೂಕು ಹಾಸನಜಿಲ್ಲೆಯಲ್ಲಿ ಇದ್ದರೂ, ಇದು ಸಂಪುರ್ಣವಾಗಿ ಮಲೆನಾಡಿನ ಕಾಫಿ ವಲಯವಾಗಿದ್ದು ದಟ್ಟ ಅರಣ್ಯಗಳಿಂದ ಕೂಡಿದ ಪ್ರದೇಶವೇ ಆಗಿದೆ. ಹೇಮಾವತಿ ನದಿಯ ದಕ್ಷಿಣ ಭಾಗ ಹಿಂದೆ  ಕೊಡಗಿನ ಭಾಗವಾದ ಮಂಜ್ರಾಬಾದ್ ಪ್ರಾಂತವೆಂದೇ ಪರಿಗಣಿಸಲ್ಪಟ್ಟಿತ್ತು. ಟಿಪ್ಪು ಸುಲ್ತಾನ್ ಕಾಲದಲ್ಲಿ, ಕೊಡಗಿನ ಅರಸರು ಮತ್ತು ನಂತರವೂ ಈ ಪ್ರದೇಶ  ಮಂಜ್ರಾಬಾದ್ ತಾಲ್ಲೂಕು ಎಂದೇ ಕರೆಯಲ್ಪಟ್ಟು ಸರ್ಕಾರಿ ದಾಖಲೆಗಳಲ್ಲಿಯೂ ಹಾಗೇಯೇ ಇದೆ. ತೀರ ಇತ್ತೀಚಿನವರೆಗೂ ಇದ್ದ ಸಕಲೇಶಪುರದ ಹಳೆಯ ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ಮಂಜ್ರಾಬಾದ್ ತಾಲ್ಲೂಕು ಕಛೇರಿ ಎಂದೇ ಬರೆಯಲ್ಪಟ್ಟಿತ್ತು. ಮಂಜ್ರಾಬಾದ್ ಯಾಲಕ್ಕಿ ವಿಶ್ವವಿಖ್ಯಾತಿ ಪಡೆದು ದಕ್ಷಿಣ ಕೊಡಗಿನಿಂದ ಯಾಲಕ್ಕಿ ಗಿಡಗಳಿಗಾಗಿ ಕೃಷಿಕರು ಮಂಜ್ರಾಬಾದ್‌ಗೆ ಬರುತ್ತಿದ್ದ ಉಲ್ಲೇಖ ಭಾರತೀಸುತರ ಕಾದಂಬರಿಗಳಲ್ಲಿ ಇದೆ.

ಜಯರಾಮ್ ಶೆಟ್ಟರು

ಕೊಡಗಿನ ಹಾಗೂ ಈಗ ಹಾಸನಜಿಲ್ಲೆಯ ಭಾಗವಾಗಿರುವ ಮಂಜ್ರಾಬಾದ್ ಇವೆರಡು ಪ್ರದೇಶಗಳ ಈ ಕಥಾನಕವನ್ನು ಬೆಸೆದಿರುವ ಕೊಂಡಿ ಗಣಪಯ್ಯ.

ಈ ಬರಹಗಳ ಮಾಲಿಕೆಯಲ್ಲಿ ಬರುವ ಕೆಲವರ ಬಗ್ಗೆ ಅಲ್ಲಲ್ಲಿ ಒಂದಷ್ಟು ಮಾಹಿತಿಗಳು ಸಿಗಬಹುದು. ಆದರೆ ಇನ್ನು ಕೆಲವರ ಬಗ್ಗೆ ಬರಹಕ್ಕಿಳಿದ ಮಾಹಿತಿಗಳು ಕಡಿಮೆ ಮತ್ತು ಇನ್ನು ಕೆಲವರ ಬಗ್ಗೆ ಇಲ್ಲವೇ ಇಲ್ಲ.

ಅಂತಹವರಲ್ಲಿ ಮುಖ್ಯರು ಎನ್.ಕೆ.ಗಣಪಯ್ಯ.

ಚೆನ್ನಮ್ಮ

ಅದಕ್ಕೆ ಬಹಳ ಮುಖ್ಯ ಕಾರಣ ಅವರು ಯಾವುದನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಪ್ರಚಾರಪ್ರಿಯತೆ ಹೋಗಲಿ ಪ್ರಜ್ಞಾಪೂರ್ವಕವಾಗಿ ಪ್ರಚಾರದಿಂದ ದೂರವಿದ್ದುದು. ಅವರು ಮಾಡಿದ ಎಷ್ಟೋ  ಜನಪರ ಕೆಲಸಗಳು ಅವರ ಕುಟುಂಬದವರಿಗೂ ತಿಳಿಯದೇ ಇದ್ದದು. ಈ ಎಲ್ಲದರಿಂದ ಬಹಳಷ್ಟು ಜನರಿಗೆ ಅವರ ಬಗ್ಗೆ ಮಾಹಿತಿಗಳಿಲ್ಲ. ನಾಡಿನ ಪತ್ರಿಕೆಗಳಲ್ಲಿ ಲೇಖನಗಳು ಬಂದಿಲ್ಲ ಹಾಗೂ ಬೌದ್ಧಿಕ ವಲಯದಲ್ಲಿ ಚರ್ಚೆಗಳಾಗಿಲ್ಲ. ಅವರು ನಡೆಸಿದ ನೂರಾರು ಕಾರ್ಯಕ್ರಮಗಳಲ್ಲಿಯೂ ಪೋಟೋ ತೆಗೆಸಿಕೊಳ್ಳುವ ಆಸಕ್ತಿಯೂ ಅವರಿಗೆ ಇದ್ದಿರಲಿಲ್ಲ.

ಇಲ್ಲಿ ಲಭ್ಯವಿರುವ ಹಲವು ಫೋಟೋಗಳು ಕೂಡಾ ಬೇರೆಯವರು ಕಾಲ ಕಾಲಕ್ಕೆ ತೆಗೆದಂತವುಗಳು. ಗಣಪಯ್ಯನವರು ಕೊನೆಯವರೆಗೂ ಬದುಕಿದ್ದ ಹಾರ್ಲೆ ಬಂಗಲೆಯ (ಬ್ರಿಟಿಷರು ಕಟ್ಟಿದ ಬಂಗಲೆ) ಒಂದು ಇಡಿಯಾದ ಫೋಟೋ ಕೂಡಾ ನನಗೆ ದೊರೆಯಲಿಲ್ಲ.

ಮಂಜಯ್ಯ ಮತ್ತು ದ್ಯಾವಯ್ಯ

ಈ ಎಲ್ಲ ಕಾರಣಗಳಿಂದ ನನಗೆ ದಕ್ಕಿದ ಮತ್ತು ನನ್ನ ನೆನಪುಗಳ ಸಂಗ್ರಹದಲ್ಲದ್ದನ್ನು ಬಳಸಿಕೊಂಡು ಹಲವರೊಡನೆ ಮತ್ತೊಮ್ಮೆ ಚರ್ಚಿಸಿ ಈ ಸಂಕಥನವನ್ನು ಕಟ್ಟುವ ಪ್ರಯತ್ನ ಮಾಡಿದ್ದೇನೆ. ಮತ್ತು ಆ ವಿವರಗಳನ್ನು ಮರುಪರಿಶೀಲನೆ ಮಾಡಿಕೊಂಡಿದ್ದೇನೆ.

ಅವರ ಒಡನಾಡಿಗಳಾಗಿದ್ದ ಹಿರಿಯರಲ್ಲಿ ಬಹಳ ಜನರು ಈಗ ಇಲ್ಲ.

ಈ ಬಗ್ಗೆ ಅವರ ಕುಟುಂಬವರ್ಗದವರಾದ ಡಾ.ರವೀಂದ್ರನಾಥ, ಕಮಲಾ ರವೀಂದ್ರನಾಥ, ಬಂಧುಗಳಾದ ವಾಸುದೇವ ಶರ್ಮ, ಎಂ.ಜಿ. ರಾಧಾಕೃಷ್ಣ ಹಾಗೂ ಗಣಪಯ್ಯನವರ ಕೊನೆಯವರೆಗೂ ಅವರ ಕಛೇರಿಯಲ್ಲಿ ಆಪ್ತಸಹಾಯಕಿಯಾಗಿ ದುಡಿದ ಕಮಲಾ.ಎನ್. ಭಟ್ ಇವರುಗಳ ಸಹಕಾರ ದೊಡ್ಡದು. ಗಣಪಯ್ಯನವರಿಗೆ ಸಂಬಂಧಿಸಿದ ಕೆಲವು ಅಪರೂಪದ ಫೋಟೋಗಳು ಇವರೆಲ್ಲರ ಸಂಗ್ರಹದ ಕೊಡುಗೆ.

ಕಮಲಾ. ಎನ್. ಭಟ್

ಹಾಗೆಯೇ ಅವರಲ್ಲಿ ಎಳವೆಯಿಂದ ಹಾರ್ಲೆಯಲ್ಲಿ ಕೆಲಸಮಾಡುತ್ತ ಬೆಳೆದ ಇಂದೂ ಕೂಡಾ ಗಣಪಯ್ಯನವರ ಗೆಳೆಯ ಗ್ರೆಗೊರಿ ಮಥಾಯಿಸ್ ರವರ ತೋಟವನ್ನು ನೋಡಿಕೊಳ್ಳುತ್ತಿರುವ ಬಿ.ಜಯರಾಮ ಶೆಟ್ಟರು, ನಡಹಳ್ಳಿ ಗ್ರಾಮದ ಮಂಜಯ್ಯ, ದ್ಯಾವಯ್ಯ. ರೇಖಾ, ಅಜ್ಜನಕೆರೆಯ ಚೆನ್ನಮ್ಮ, ಹೆನ್ನಲಿ ಮಂಜುನಾಥ್, ಸಣ್ಣಯ್ಯ, ಕೃಷ್ಣಪ್ಪ ಮುಂತಾದವರು ಹಲವು ಮಾಹಿತಿಗಳನ್ನು ನೀಡಿದ್ದಾರೆ.

ಮಂಜುನಾಥ್ ಮತ್ತು ಇತರರು

ಕೊಡಗಿನಿಂದ ಸಿ.ಪಿ.ಬೆಳ್ಳಿಯಪ್ಪ ಅವರ ಲೇಖನವೊಂದನ್ನು ಗೆಳೆಯರೊಬ್ಬರು ಕಳುಹಿಸಿ ಕೊಟ್ಟಿದ್ದಾರೆ.

ಇಲ್ಲಿ ಬಳಸಿಕೊಂಡಿರುವ ಪೋಟೋಗಳಲ್ಲಿ ಹೆಚ್ಚಿನವು ನನ್ನ ಸಂಗ್ರಹ, ಸಾಕಮ್ಮನವರ ಬಂಗಲೆಯ ಕೆಲವು ಅಮೂಲ್ಯ ಚಿತ್ರಗಳನ್ನು ಒದಗಿಸಿದ್ದು ಹಾರ್ಲೆ ಎಸ್ಟೇಟ್‌ನ ಇಂದಿನ ಮಾಲಿಕರಾದ ಡಿ.ಎಂ. ಪೂರ್ಣೇಶ್ ಅವರು.

ಇವರೆಲ್ಲರಿಗೆ ಕೃತಜ್ಞತೆಗಳು….

ಹಾಗೇ ಇನ್ನು ಕೆಲವು ಚಿತ್ರಗಳಿಗಾಗಿ ಗೂಗಲಪ್ಪನಿಗೂ ವಂದನೆಗಳು.

ಇವೆಲ್ಲದರೊಂದಿಗೆ ಈ ಬರಹದ ಮೂಲಕ ಅನಾವರಣ ಗೊಳ್ಳುತ್ತಿರುವ ಹಲವಾರು ಸಂಗತಿಗಳು. ಇನ್ನಷ್ಟು ವಿಚಾರಗಳನ್ನು ತೆರೆದಿಡುತ್ತಿವೆ. ಇದು ಸಾಮಾಜಿಕ ತಾಣದ ಶಕ್ತಿ ಕೂಡಾ. ಈ ಬರಹಗಳ ಮಾಲಿಕೆಯಲ್ಲಿ ಉಲ್ಲೇಖವಾಗಿರುವ ಹಲವಾರು ವ್ಯಕ್ತಿಗಳ ಬಗ್ಗೆ ಅನೇಕ ಮಾಹಿತಿಗಳು ಇಂದು ಲಭ್ಯ.

ವಾಸುದೇವ ಶರ್ಮಾ

ಈ ಬರಹಗಳು ಮುದ್ರಣವಾಗುವ ಸಂದರ್ಭದಲ್ಲಿ ಪರಿಷ್ಕರಿಸಿಕೊಳ್ಳಲು ಅವು ಸಹಾಯಕವಾಗಿವೆ.

ಈ ಬರಹಗಳ ಮುಂದುವರಿದ ಭಾಗವಾಗಿ ಬರೆಯಬಹುದಾದ ಕೆಲವು ಸಂಗತಿಗಳಿವೆ. ಕೆಲವು ದಿನಗಳ ವಿರಾಮದ ನಂತರ ಮತ್ತು ಅವು ನಿಮ್ಮೊಂದಿಗೆ ಮಾತನಾಡಲಿವೆ.

ಅಲ್ಲಿಯವರೆಗೆ …… ನಮಸ್ಕಾರ

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು -24: ಶಾಪ್ ಸಿದ್ಧೇಗೌಡ ಚಿನ್ನದ ಪದಕದ ಸ್ಥಾಪಕರ ಕುರಿತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...