Homeಅಂಕಣಗಳುಕಳೆದುಹೋದ ದಿನಗಳು 33 - ಬರವಣಿಗೆಯ ಹಿನ್ನೆಲೆ : ಪ್ರಸಾದ್ ರಕ್ಷಿದಿ

ಕಳೆದುಹೋದ ದಿನಗಳು 33 – ಬರವಣಿಗೆಯ ಹಿನ್ನೆಲೆ : ಪ್ರಸಾದ್ ರಕ್ಷಿದಿ

- Advertisement -
- Advertisement -

ಸುಮಾರು ನಾಲ್ಕು ದಶಕಗಳಲ್ಲಿ ಕಂಡ, ನೋಡಿದ, ಜೊತೆಯಾಗಿ ಕೆಲಸಮಾಡಿದ, ಒಡನಾಡಿದ ಅನುಭವಗಳು ಹಾಗೂ ಮನಸ್ಸಿನಲ್ಲಿ ಉಳಿದು ಹೋಗಿದ್ದ ವಿಚಾರಗಳು ಎಲ್ಲದರ ಬಗ್ಗೆ ಎಂದಾದರೂ ಬರೆಯಬೇಕು ಎಂದುಕೊಂಡೇ ಕಾಲಕಳೆಯುತ್ತ ಇದ್ದವನಿಗೆ ಈಗ ಬರೆಯಲೇಬೇಕೆಂಬ ಎಂಬ ಯೋಚನೆ ಬಂದದ್ದು ಡಾ ವೆಂಕಟೇಶ ನೆಲ್ಲುಕುಂಟೆಯವರ ಮಾತಿನಿಂದ.

ಆ ಘಟನೆ ಹೀಗಿದೆ… ಡಾ ನೆಲ್ಲುಕುಂಟೆಯವರು ತೋಡ ಜನಾಂಗದವರು ಬೌದ್ಧಾನುಯಾಯಿಗಳೇ ಎಂಬ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಆಗ ನಾನು ಈ ಬಗ್ಗೆ ಲೇಖಕ ಪರಂಜ್ಯೋತಿಯವರು ಹಿಂದೆ ಒಂದು ಸಂದರ್ಭದಲ್ಲಿ “ನಾವು ಒಂದು ಕಾಲದಲ್ಲಿ ಬೌದ್ಧರಾಗಿದ್ದೆವಂತೆ ಎಂದಿದ್ದರು. ಪರಂಜ್ಯೋತಿ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಕೆ.ಪಿ. ಸ್ವಾಮಿ ಅದೇ ತೋಡ ಜನಾಂಗದವರು. ತೋಡ ಎನ್ನುವುದು ಬ್ರಿಟಿಷರ ಮಾಡಿದ ಅಪಭ್ರಂಶ. ನಿಜವಾದ ಹೆಸರು “ತೊದವ” ರು ಎಂದು ತಿಳಿಸಿದವರೂ ಅವರೇ.

ಆಗ ನಾನು ಸರ್ ಈ ಬಗ್ಗೆ ನೀವು ಬರೆಯಿರಿ ಎಂದಿದ್ದೆ. ಆಗ ಅವರು ಕುಮಾರ ವೆಂಕಣ್ಣನವರ ಬಗ್ಗೆ ಕೃತಿಯೊಂದನ್ನು ರಚಿಸುತ್ತಿದ್ದರು. ನಂತರ ಅವರು ಹೆಚ್ಚು ಕಾಲ ಇರಲೇ ಇಲ್ಲ

ಈ ವಿಚಾರವನ್ನು ನಾನು ವೆಂಕಟೇಶ ನೆಲ್ಲುಕುಂಟೆಯವರಿಗೆ ತಿಳಿಸಿದೆ.

ಆಗ ಅವರು ಕೆಲವು ವಿಚಾರಗಳನ್ನು ಯಾರು ಬರೆಯಬೇಕು ಅವರು ಆ ಕೆಲಸ ಮಾಡದಿದ್ದರೆ ಆಗುವ ನಷ್ಟ ಅಪಾರ ಎಂದರು. ಆ ಮಾತು ನನ್ನನ್ನು ಕೊರೆಯುತ್ತ ಇತ್ತು.

ಈ ಸಂಕಥನ ಗಣಪಯ್ಯನವರ ಜೀವನ ಚರಿತ್ರೆ ಅಲ್ಲ. ಕೊಡಗು ಮತ್ತು ಕೊಡಗಿನ ಭಾಗವಾಗಿದ್ದ ಮಂಜ್ರಾಬಾದ್ ಪ್ರದೇಶದ ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರೋತ್ತರ ಕಾಲದ ಸುಮಾರು ಏಳು ದಶಕಗಳ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸ್ಥಿತ್ಯಂತರಗಳ ಪಕ್ಷಿನೋಟ.

ಸಕಲೇಶಪುರ ತಾಲ್ಲೂಕು ಹಾಸನಜಿಲ್ಲೆಯಲ್ಲಿ ಇದ್ದರೂ, ಇದು ಸಂಪುರ್ಣವಾಗಿ ಮಲೆನಾಡಿನ ಕಾಫಿ ವಲಯವಾಗಿದ್ದು ದಟ್ಟ ಅರಣ್ಯಗಳಿಂದ ಕೂಡಿದ ಪ್ರದೇಶವೇ ಆಗಿದೆ. ಹೇಮಾವತಿ ನದಿಯ ದಕ್ಷಿಣ ಭಾಗ ಹಿಂದೆ  ಕೊಡಗಿನ ಭಾಗವಾದ ಮಂಜ್ರಾಬಾದ್ ಪ್ರಾಂತವೆಂದೇ ಪರಿಗಣಿಸಲ್ಪಟ್ಟಿತ್ತು. ಟಿಪ್ಪು ಸುಲ್ತಾನ್ ಕಾಲದಲ್ಲಿ, ಕೊಡಗಿನ ಅರಸರು ಮತ್ತು ನಂತರವೂ ಈ ಪ್ರದೇಶ  ಮಂಜ್ರಾಬಾದ್ ತಾಲ್ಲೂಕು ಎಂದೇ ಕರೆಯಲ್ಪಟ್ಟು ಸರ್ಕಾರಿ ದಾಖಲೆಗಳಲ್ಲಿಯೂ ಹಾಗೇಯೇ ಇದೆ. ತೀರ ಇತ್ತೀಚಿನವರೆಗೂ ಇದ್ದ ಸಕಲೇಶಪುರದ ಹಳೆಯ ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ಮಂಜ್ರಾಬಾದ್ ತಾಲ್ಲೂಕು ಕಛೇರಿ ಎಂದೇ ಬರೆಯಲ್ಪಟ್ಟಿತ್ತು. ಮಂಜ್ರಾಬಾದ್ ಯಾಲಕ್ಕಿ ವಿಶ್ವವಿಖ್ಯಾತಿ ಪಡೆದು ದಕ್ಷಿಣ ಕೊಡಗಿನಿಂದ ಯಾಲಕ್ಕಿ ಗಿಡಗಳಿಗಾಗಿ ಕೃಷಿಕರು ಮಂಜ್ರಾಬಾದ್‌ಗೆ ಬರುತ್ತಿದ್ದ ಉಲ್ಲೇಖ ಭಾರತೀಸುತರ ಕಾದಂಬರಿಗಳಲ್ಲಿ ಇದೆ.

ಜಯರಾಮ್ ಶೆಟ್ಟರು

ಕೊಡಗಿನ ಹಾಗೂ ಈಗ ಹಾಸನಜಿಲ್ಲೆಯ ಭಾಗವಾಗಿರುವ ಮಂಜ್ರಾಬಾದ್ ಇವೆರಡು ಪ್ರದೇಶಗಳ ಈ ಕಥಾನಕವನ್ನು ಬೆಸೆದಿರುವ ಕೊಂಡಿ ಗಣಪಯ್ಯ.

ಈ ಬರಹಗಳ ಮಾಲಿಕೆಯಲ್ಲಿ ಬರುವ ಕೆಲವರ ಬಗ್ಗೆ ಅಲ್ಲಲ್ಲಿ ಒಂದಷ್ಟು ಮಾಹಿತಿಗಳು ಸಿಗಬಹುದು. ಆದರೆ ಇನ್ನು ಕೆಲವರ ಬಗ್ಗೆ ಬರಹಕ್ಕಿಳಿದ ಮಾಹಿತಿಗಳು ಕಡಿಮೆ ಮತ್ತು ಇನ್ನು ಕೆಲವರ ಬಗ್ಗೆ ಇಲ್ಲವೇ ಇಲ್ಲ.

ಅಂತಹವರಲ್ಲಿ ಮುಖ್ಯರು ಎನ್.ಕೆ.ಗಣಪಯ್ಯ.

ಚೆನ್ನಮ್ಮ

ಅದಕ್ಕೆ ಬಹಳ ಮುಖ್ಯ ಕಾರಣ ಅವರು ಯಾವುದನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಪ್ರಚಾರಪ್ರಿಯತೆ ಹೋಗಲಿ ಪ್ರಜ್ಞಾಪೂರ್ವಕವಾಗಿ ಪ್ರಚಾರದಿಂದ ದೂರವಿದ್ದುದು. ಅವರು ಮಾಡಿದ ಎಷ್ಟೋ  ಜನಪರ ಕೆಲಸಗಳು ಅವರ ಕುಟುಂಬದವರಿಗೂ ತಿಳಿಯದೇ ಇದ್ದದು. ಈ ಎಲ್ಲದರಿಂದ ಬಹಳಷ್ಟು ಜನರಿಗೆ ಅವರ ಬಗ್ಗೆ ಮಾಹಿತಿಗಳಿಲ್ಲ. ನಾಡಿನ ಪತ್ರಿಕೆಗಳಲ್ಲಿ ಲೇಖನಗಳು ಬಂದಿಲ್ಲ ಹಾಗೂ ಬೌದ್ಧಿಕ ವಲಯದಲ್ಲಿ ಚರ್ಚೆಗಳಾಗಿಲ್ಲ. ಅವರು ನಡೆಸಿದ ನೂರಾರು ಕಾರ್ಯಕ್ರಮಗಳಲ್ಲಿಯೂ ಪೋಟೋ ತೆಗೆಸಿಕೊಳ್ಳುವ ಆಸಕ್ತಿಯೂ ಅವರಿಗೆ ಇದ್ದಿರಲಿಲ್ಲ.

ಇಲ್ಲಿ ಲಭ್ಯವಿರುವ ಹಲವು ಫೋಟೋಗಳು ಕೂಡಾ ಬೇರೆಯವರು ಕಾಲ ಕಾಲಕ್ಕೆ ತೆಗೆದಂತವುಗಳು. ಗಣಪಯ್ಯನವರು ಕೊನೆಯವರೆಗೂ ಬದುಕಿದ್ದ ಹಾರ್ಲೆ ಬಂಗಲೆಯ (ಬ್ರಿಟಿಷರು ಕಟ್ಟಿದ ಬಂಗಲೆ) ಒಂದು ಇಡಿಯಾದ ಫೋಟೋ ಕೂಡಾ ನನಗೆ ದೊರೆಯಲಿಲ್ಲ.

ಮಂಜಯ್ಯ ಮತ್ತು ದ್ಯಾವಯ್ಯ

ಈ ಎಲ್ಲ ಕಾರಣಗಳಿಂದ ನನಗೆ ದಕ್ಕಿದ ಮತ್ತು ನನ್ನ ನೆನಪುಗಳ ಸಂಗ್ರಹದಲ್ಲದ್ದನ್ನು ಬಳಸಿಕೊಂಡು ಹಲವರೊಡನೆ ಮತ್ತೊಮ್ಮೆ ಚರ್ಚಿಸಿ ಈ ಸಂಕಥನವನ್ನು ಕಟ್ಟುವ ಪ್ರಯತ್ನ ಮಾಡಿದ್ದೇನೆ. ಮತ್ತು ಆ ವಿವರಗಳನ್ನು ಮರುಪರಿಶೀಲನೆ ಮಾಡಿಕೊಂಡಿದ್ದೇನೆ.

ಅವರ ಒಡನಾಡಿಗಳಾಗಿದ್ದ ಹಿರಿಯರಲ್ಲಿ ಬಹಳ ಜನರು ಈಗ ಇಲ್ಲ.

ಈ ಬಗ್ಗೆ ಅವರ ಕುಟುಂಬವರ್ಗದವರಾದ ಡಾ.ರವೀಂದ್ರನಾಥ, ಕಮಲಾ ರವೀಂದ್ರನಾಥ, ಬಂಧುಗಳಾದ ವಾಸುದೇವ ಶರ್ಮ, ಎಂ.ಜಿ. ರಾಧಾಕೃಷ್ಣ ಹಾಗೂ ಗಣಪಯ್ಯನವರ ಕೊನೆಯವರೆಗೂ ಅವರ ಕಛೇರಿಯಲ್ಲಿ ಆಪ್ತಸಹಾಯಕಿಯಾಗಿ ದುಡಿದ ಕಮಲಾ.ಎನ್. ಭಟ್ ಇವರುಗಳ ಸಹಕಾರ ದೊಡ್ಡದು. ಗಣಪಯ್ಯನವರಿಗೆ ಸಂಬಂಧಿಸಿದ ಕೆಲವು ಅಪರೂಪದ ಫೋಟೋಗಳು ಇವರೆಲ್ಲರ ಸಂಗ್ರಹದ ಕೊಡುಗೆ.

ಕಮಲಾ. ಎನ್. ಭಟ್

ಹಾಗೆಯೇ ಅವರಲ್ಲಿ ಎಳವೆಯಿಂದ ಹಾರ್ಲೆಯಲ್ಲಿ ಕೆಲಸಮಾಡುತ್ತ ಬೆಳೆದ ಇಂದೂ ಕೂಡಾ ಗಣಪಯ್ಯನವರ ಗೆಳೆಯ ಗ್ರೆಗೊರಿ ಮಥಾಯಿಸ್ ರವರ ತೋಟವನ್ನು ನೋಡಿಕೊಳ್ಳುತ್ತಿರುವ ಬಿ.ಜಯರಾಮ ಶೆಟ್ಟರು, ನಡಹಳ್ಳಿ ಗ್ರಾಮದ ಮಂಜಯ್ಯ, ದ್ಯಾವಯ್ಯ. ರೇಖಾ, ಅಜ್ಜನಕೆರೆಯ ಚೆನ್ನಮ್ಮ, ಹೆನ್ನಲಿ ಮಂಜುನಾಥ್, ಸಣ್ಣಯ್ಯ, ಕೃಷ್ಣಪ್ಪ ಮುಂತಾದವರು ಹಲವು ಮಾಹಿತಿಗಳನ್ನು ನೀಡಿದ್ದಾರೆ.

ಮಂಜುನಾಥ್ ಮತ್ತು ಇತರರು

ಕೊಡಗಿನಿಂದ ಸಿ.ಪಿ.ಬೆಳ್ಳಿಯಪ್ಪ ಅವರ ಲೇಖನವೊಂದನ್ನು ಗೆಳೆಯರೊಬ್ಬರು ಕಳುಹಿಸಿ ಕೊಟ್ಟಿದ್ದಾರೆ.

ಇಲ್ಲಿ ಬಳಸಿಕೊಂಡಿರುವ ಪೋಟೋಗಳಲ್ಲಿ ಹೆಚ್ಚಿನವು ನನ್ನ ಸಂಗ್ರಹ, ಸಾಕಮ್ಮನವರ ಬಂಗಲೆಯ ಕೆಲವು ಅಮೂಲ್ಯ ಚಿತ್ರಗಳನ್ನು ಒದಗಿಸಿದ್ದು ಹಾರ್ಲೆ ಎಸ್ಟೇಟ್‌ನ ಇಂದಿನ ಮಾಲಿಕರಾದ ಡಿ.ಎಂ. ಪೂರ್ಣೇಶ್ ಅವರು.

ಇವರೆಲ್ಲರಿಗೆ ಕೃತಜ್ಞತೆಗಳು….

ಹಾಗೇ ಇನ್ನು ಕೆಲವು ಚಿತ್ರಗಳಿಗಾಗಿ ಗೂಗಲಪ್ಪನಿಗೂ ವಂದನೆಗಳು.

ಇವೆಲ್ಲದರೊಂದಿಗೆ ಈ ಬರಹದ ಮೂಲಕ ಅನಾವರಣ ಗೊಳ್ಳುತ್ತಿರುವ ಹಲವಾರು ಸಂಗತಿಗಳು. ಇನ್ನಷ್ಟು ವಿಚಾರಗಳನ್ನು ತೆರೆದಿಡುತ್ತಿವೆ. ಇದು ಸಾಮಾಜಿಕ ತಾಣದ ಶಕ್ತಿ ಕೂಡಾ. ಈ ಬರಹಗಳ ಮಾಲಿಕೆಯಲ್ಲಿ ಉಲ್ಲೇಖವಾಗಿರುವ ಹಲವಾರು ವ್ಯಕ್ತಿಗಳ ಬಗ್ಗೆ ಅನೇಕ ಮಾಹಿತಿಗಳು ಇಂದು ಲಭ್ಯ.

ವಾಸುದೇವ ಶರ್ಮಾ

ಈ ಬರಹಗಳು ಮುದ್ರಣವಾಗುವ ಸಂದರ್ಭದಲ್ಲಿ ಪರಿಷ್ಕರಿಸಿಕೊಳ್ಳಲು ಅವು ಸಹಾಯಕವಾಗಿವೆ.

ಈ ಬರಹಗಳ ಮುಂದುವರಿದ ಭಾಗವಾಗಿ ಬರೆಯಬಹುದಾದ ಕೆಲವು ಸಂಗತಿಗಳಿವೆ. ಕೆಲವು ದಿನಗಳ ವಿರಾಮದ ನಂತರ ಮತ್ತು ಅವು ನಿಮ್ಮೊಂದಿಗೆ ಮಾತನಾಡಲಿವೆ.

ಅಲ್ಲಿಯವರೆಗೆ …… ನಮಸ್ಕಾರ

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು -24: ಶಾಪ್ ಸಿದ್ಧೇಗೌಡ ಚಿನ್ನದ ಪದಕದ ಸ್ಥಾಪಕರ ಕುರಿತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...