Homeಅಂಕಣಗಳುಕಳೆದುಹೋದ ದಿನಗಳು 33 - ಬರವಣಿಗೆಯ ಹಿನ್ನೆಲೆ : ಪ್ರಸಾದ್ ರಕ್ಷಿದಿ

ಕಳೆದುಹೋದ ದಿನಗಳು 33 – ಬರವಣಿಗೆಯ ಹಿನ್ನೆಲೆ : ಪ್ರಸಾದ್ ರಕ್ಷಿದಿ

- Advertisement -
- Advertisement -

ಸುಮಾರು ನಾಲ್ಕು ದಶಕಗಳಲ್ಲಿ ಕಂಡ, ನೋಡಿದ, ಜೊತೆಯಾಗಿ ಕೆಲಸಮಾಡಿದ, ಒಡನಾಡಿದ ಅನುಭವಗಳು ಹಾಗೂ ಮನಸ್ಸಿನಲ್ಲಿ ಉಳಿದು ಹೋಗಿದ್ದ ವಿಚಾರಗಳು ಎಲ್ಲದರ ಬಗ್ಗೆ ಎಂದಾದರೂ ಬರೆಯಬೇಕು ಎಂದುಕೊಂಡೇ ಕಾಲಕಳೆಯುತ್ತ ಇದ್ದವನಿಗೆ ಈಗ ಬರೆಯಲೇಬೇಕೆಂಬ ಎಂಬ ಯೋಚನೆ ಬಂದದ್ದು ಡಾ ವೆಂಕಟೇಶ ನೆಲ್ಲುಕುಂಟೆಯವರ ಮಾತಿನಿಂದ.

ಆ ಘಟನೆ ಹೀಗಿದೆ… ಡಾ ನೆಲ್ಲುಕುಂಟೆಯವರು ತೋಡ ಜನಾಂಗದವರು ಬೌದ್ಧಾನುಯಾಯಿಗಳೇ ಎಂಬ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಆಗ ನಾನು ಈ ಬಗ್ಗೆ ಲೇಖಕ ಪರಂಜ್ಯೋತಿಯವರು ಹಿಂದೆ ಒಂದು ಸಂದರ್ಭದಲ್ಲಿ “ನಾವು ಒಂದು ಕಾಲದಲ್ಲಿ ಬೌದ್ಧರಾಗಿದ್ದೆವಂತೆ ಎಂದಿದ್ದರು. ಪರಂಜ್ಯೋತಿ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಕೆ.ಪಿ. ಸ್ವಾಮಿ ಅದೇ ತೋಡ ಜನಾಂಗದವರು. ತೋಡ ಎನ್ನುವುದು ಬ್ರಿಟಿಷರ ಮಾಡಿದ ಅಪಭ್ರಂಶ. ನಿಜವಾದ ಹೆಸರು “ತೊದವ” ರು ಎಂದು ತಿಳಿಸಿದವರೂ ಅವರೇ.

ಆಗ ನಾನು ಸರ್ ಈ ಬಗ್ಗೆ ನೀವು ಬರೆಯಿರಿ ಎಂದಿದ್ದೆ. ಆಗ ಅವರು ಕುಮಾರ ವೆಂಕಣ್ಣನವರ ಬಗ್ಗೆ ಕೃತಿಯೊಂದನ್ನು ರಚಿಸುತ್ತಿದ್ದರು. ನಂತರ ಅವರು ಹೆಚ್ಚು ಕಾಲ ಇರಲೇ ಇಲ್ಲ

ಈ ವಿಚಾರವನ್ನು ನಾನು ವೆಂಕಟೇಶ ನೆಲ್ಲುಕುಂಟೆಯವರಿಗೆ ತಿಳಿಸಿದೆ.

ಆಗ ಅವರು ಕೆಲವು ವಿಚಾರಗಳನ್ನು ಯಾರು ಬರೆಯಬೇಕು ಅವರು ಆ ಕೆಲಸ ಮಾಡದಿದ್ದರೆ ಆಗುವ ನಷ್ಟ ಅಪಾರ ಎಂದರು. ಆ ಮಾತು ನನ್ನನ್ನು ಕೊರೆಯುತ್ತ ಇತ್ತು.

ಈ ಸಂಕಥನ ಗಣಪಯ್ಯನವರ ಜೀವನ ಚರಿತ್ರೆ ಅಲ್ಲ. ಕೊಡಗು ಮತ್ತು ಕೊಡಗಿನ ಭಾಗವಾಗಿದ್ದ ಮಂಜ್ರಾಬಾದ್ ಪ್ರದೇಶದ ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರೋತ್ತರ ಕಾಲದ ಸುಮಾರು ಏಳು ದಶಕಗಳ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸ್ಥಿತ್ಯಂತರಗಳ ಪಕ್ಷಿನೋಟ.

ಸಕಲೇಶಪುರ ತಾಲ್ಲೂಕು ಹಾಸನಜಿಲ್ಲೆಯಲ್ಲಿ ಇದ್ದರೂ, ಇದು ಸಂಪುರ್ಣವಾಗಿ ಮಲೆನಾಡಿನ ಕಾಫಿ ವಲಯವಾಗಿದ್ದು ದಟ್ಟ ಅರಣ್ಯಗಳಿಂದ ಕೂಡಿದ ಪ್ರದೇಶವೇ ಆಗಿದೆ. ಹೇಮಾವತಿ ನದಿಯ ದಕ್ಷಿಣ ಭಾಗ ಹಿಂದೆ  ಕೊಡಗಿನ ಭಾಗವಾದ ಮಂಜ್ರಾಬಾದ್ ಪ್ರಾಂತವೆಂದೇ ಪರಿಗಣಿಸಲ್ಪಟ್ಟಿತ್ತು. ಟಿಪ್ಪು ಸುಲ್ತಾನ್ ಕಾಲದಲ್ಲಿ, ಕೊಡಗಿನ ಅರಸರು ಮತ್ತು ನಂತರವೂ ಈ ಪ್ರದೇಶ  ಮಂಜ್ರಾಬಾದ್ ತಾಲ್ಲೂಕು ಎಂದೇ ಕರೆಯಲ್ಪಟ್ಟು ಸರ್ಕಾರಿ ದಾಖಲೆಗಳಲ್ಲಿಯೂ ಹಾಗೇಯೇ ಇದೆ. ತೀರ ಇತ್ತೀಚಿನವರೆಗೂ ಇದ್ದ ಸಕಲೇಶಪುರದ ಹಳೆಯ ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ಮಂಜ್ರಾಬಾದ್ ತಾಲ್ಲೂಕು ಕಛೇರಿ ಎಂದೇ ಬರೆಯಲ್ಪಟ್ಟಿತ್ತು. ಮಂಜ್ರಾಬಾದ್ ಯಾಲಕ್ಕಿ ವಿಶ್ವವಿಖ್ಯಾತಿ ಪಡೆದು ದಕ್ಷಿಣ ಕೊಡಗಿನಿಂದ ಯಾಲಕ್ಕಿ ಗಿಡಗಳಿಗಾಗಿ ಕೃಷಿಕರು ಮಂಜ್ರಾಬಾದ್‌ಗೆ ಬರುತ್ತಿದ್ದ ಉಲ್ಲೇಖ ಭಾರತೀಸುತರ ಕಾದಂಬರಿಗಳಲ್ಲಿ ಇದೆ.

ಜಯರಾಮ್ ಶೆಟ್ಟರು

ಕೊಡಗಿನ ಹಾಗೂ ಈಗ ಹಾಸನಜಿಲ್ಲೆಯ ಭಾಗವಾಗಿರುವ ಮಂಜ್ರಾಬಾದ್ ಇವೆರಡು ಪ್ರದೇಶಗಳ ಈ ಕಥಾನಕವನ್ನು ಬೆಸೆದಿರುವ ಕೊಂಡಿ ಗಣಪಯ್ಯ.

ಈ ಬರಹಗಳ ಮಾಲಿಕೆಯಲ್ಲಿ ಬರುವ ಕೆಲವರ ಬಗ್ಗೆ ಅಲ್ಲಲ್ಲಿ ಒಂದಷ್ಟು ಮಾಹಿತಿಗಳು ಸಿಗಬಹುದು. ಆದರೆ ಇನ್ನು ಕೆಲವರ ಬಗ್ಗೆ ಬರಹಕ್ಕಿಳಿದ ಮಾಹಿತಿಗಳು ಕಡಿಮೆ ಮತ್ತು ಇನ್ನು ಕೆಲವರ ಬಗ್ಗೆ ಇಲ್ಲವೇ ಇಲ್ಲ.

ಅಂತಹವರಲ್ಲಿ ಮುಖ್ಯರು ಎನ್.ಕೆ.ಗಣಪಯ್ಯ.

ಚೆನ್ನಮ್ಮ

ಅದಕ್ಕೆ ಬಹಳ ಮುಖ್ಯ ಕಾರಣ ಅವರು ಯಾವುದನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಪ್ರಚಾರಪ್ರಿಯತೆ ಹೋಗಲಿ ಪ್ರಜ್ಞಾಪೂರ್ವಕವಾಗಿ ಪ್ರಚಾರದಿಂದ ದೂರವಿದ್ದುದು. ಅವರು ಮಾಡಿದ ಎಷ್ಟೋ  ಜನಪರ ಕೆಲಸಗಳು ಅವರ ಕುಟುಂಬದವರಿಗೂ ತಿಳಿಯದೇ ಇದ್ದದು. ಈ ಎಲ್ಲದರಿಂದ ಬಹಳಷ್ಟು ಜನರಿಗೆ ಅವರ ಬಗ್ಗೆ ಮಾಹಿತಿಗಳಿಲ್ಲ. ನಾಡಿನ ಪತ್ರಿಕೆಗಳಲ್ಲಿ ಲೇಖನಗಳು ಬಂದಿಲ್ಲ ಹಾಗೂ ಬೌದ್ಧಿಕ ವಲಯದಲ್ಲಿ ಚರ್ಚೆಗಳಾಗಿಲ್ಲ. ಅವರು ನಡೆಸಿದ ನೂರಾರು ಕಾರ್ಯಕ್ರಮಗಳಲ್ಲಿಯೂ ಪೋಟೋ ತೆಗೆಸಿಕೊಳ್ಳುವ ಆಸಕ್ತಿಯೂ ಅವರಿಗೆ ಇದ್ದಿರಲಿಲ್ಲ.

ಇಲ್ಲಿ ಲಭ್ಯವಿರುವ ಹಲವು ಫೋಟೋಗಳು ಕೂಡಾ ಬೇರೆಯವರು ಕಾಲ ಕಾಲಕ್ಕೆ ತೆಗೆದಂತವುಗಳು. ಗಣಪಯ್ಯನವರು ಕೊನೆಯವರೆಗೂ ಬದುಕಿದ್ದ ಹಾರ್ಲೆ ಬಂಗಲೆಯ (ಬ್ರಿಟಿಷರು ಕಟ್ಟಿದ ಬಂಗಲೆ) ಒಂದು ಇಡಿಯಾದ ಫೋಟೋ ಕೂಡಾ ನನಗೆ ದೊರೆಯಲಿಲ್ಲ.

ಮಂಜಯ್ಯ ಮತ್ತು ದ್ಯಾವಯ್ಯ

ಈ ಎಲ್ಲ ಕಾರಣಗಳಿಂದ ನನಗೆ ದಕ್ಕಿದ ಮತ್ತು ನನ್ನ ನೆನಪುಗಳ ಸಂಗ್ರಹದಲ್ಲದ್ದನ್ನು ಬಳಸಿಕೊಂಡು ಹಲವರೊಡನೆ ಮತ್ತೊಮ್ಮೆ ಚರ್ಚಿಸಿ ಈ ಸಂಕಥನವನ್ನು ಕಟ್ಟುವ ಪ್ರಯತ್ನ ಮಾಡಿದ್ದೇನೆ. ಮತ್ತು ಆ ವಿವರಗಳನ್ನು ಮರುಪರಿಶೀಲನೆ ಮಾಡಿಕೊಂಡಿದ್ದೇನೆ.

ಅವರ ಒಡನಾಡಿಗಳಾಗಿದ್ದ ಹಿರಿಯರಲ್ಲಿ ಬಹಳ ಜನರು ಈಗ ಇಲ್ಲ.

ಈ ಬಗ್ಗೆ ಅವರ ಕುಟುಂಬವರ್ಗದವರಾದ ಡಾ.ರವೀಂದ್ರನಾಥ, ಕಮಲಾ ರವೀಂದ್ರನಾಥ, ಬಂಧುಗಳಾದ ವಾಸುದೇವ ಶರ್ಮ, ಎಂ.ಜಿ. ರಾಧಾಕೃಷ್ಣ ಹಾಗೂ ಗಣಪಯ್ಯನವರ ಕೊನೆಯವರೆಗೂ ಅವರ ಕಛೇರಿಯಲ್ಲಿ ಆಪ್ತಸಹಾಯಕಿಯಾಗಿ ದುಡಿದ ಕಮಲಾ.ಎನ್. ಭಟ್ ಇವರುಗಳ ಸಹಕಾರ ದೊಡ್ಡದು. ಗಣಪಯ್ಯನವರಿಗೆ ಸಂಬಂಧಿಸಿದ ಕೆಲವು ಅಪರೂಪದ ಫೋಟೋಗಳು ಇವರೆಲ್ಲರ ಸಂಗ್ರಹದ ಕೊಡುಗೆ.

ಕಮಲಾ. ಎನ್. ಭಟ್

ಹಾಗೆಯೇ ಅವರಲ್ಲಿ ಎಳವೆಯಿಂದ ಹಾರ್ಲೆಯಲ್ಲಿ ಕೆಲಸಮಾಡುತ್ತ ಬೆಳೆದ ಇಂದೂ ಕೂಡಾ ಗಣಪಯ್ಯನವರ ಗೆಳೆಯ ಗ್ರೆಗೊರಿ ಮಥಾಯಿಸ್ ರವರ ತೋಟವನ್ನು ನೋಡಿಕೊಳ್ಳುತ್ತಿರುವ ಬಿ.ಜಯರಾಮ ಶೆಟ್ಟರು, ನಡಹಳ್ಳಿ ಗ್ರಾಮದ ಮಂಜಯ್ಯ, ದ್ಯಾವಯ್ಯ. ರೇಖಾ, ಅಜ್ಜನಕೆರೆಯ ಚೆನ್ನಮ್ಮ, ಹೆನ್ನಲಿ ಮಂಜುನಾಥ್, ಸಣ್ಣಯ್ಯ, ಕೃಷ್ಣಪ್ಪ ಮುಂತಾದವರು ಹಲವು ಮಾಹಿತಿಗಳನ್ನು ನೀಡಿದ್ದಾರೆ.

ಮಂಜುನಾಥ್ ಮತ್ತು ಇತರರು

ಕೊಡಗಿನಿಂದ ಸಿ.ಪಿ.ಬೆಳ್ಳಿಯಪ್ಪ ಅವರ ಲೇಖನವೊಂದನ್ನು ಗೆಳೆಯರೊಬ್ಬರು ಕಳುಹಿಸಿ ಕೊಟ್ಟಿದ್ದಾರೆ.

ಇಲ್ಲಿ ಬಳಸಿಕೊಂಡಿರುವ ಪೋಟೋಗಳಲ್ಲಿ ಹೆಚ್ಚಿನವು ನನ್ನ ಸಂಗ್ರಹ, ಸಾಕಮ್ಮನವರ ಬಂಗಲೆಯ ಕೆಲವು ಅಮೂಲ್ಯ ಚಿತ್ರಗಳನ್ನು ಒದಗಿಸಿದ್ದು ಹಾರ್ಲೆ ಎಸ್ಟೇಟ್‌ನ ಇಂದಿನ ಮಾಲಿಕರಾದ ಡಿ.ಎಂ. ಪೂರ್ಣೇಶ್ ಅವರು.

ಇವರೆಲ್ಲರಿಗೆ ಕೃತಜ್ಞತೆಗಳು….

ಹಾಗೇ ಇನ್ನು ಕೆಲವು ಚಿತ್ರಗಳಿಗಾಗಿ ಗೂಗಲಪ್ಪನಿಗೂ ವಂದನೆಗಳು.

ಇವೆಲ್ಲದರೊಂದಿಗೆ ಈ ಬರಹದ ಮೂಲಕ ಅನಾವರಣ ಗೊಳ್ಳುತ್ತಿರುವ ಹಲವಾರು ಸಂಗತಿಗಳು. ಇನ್ನಷ್ಟು ವಿಚಾರಗಳನ್ನು ತೆರೆದಿಡುತ್ತಿವೆ. ಇದು ಸಾಮಾಜಿಕ ತಾಣದ ಶಕ್ತಿ ಕೂಡಾ. ಈ ಬರಹಗಳ ಮಾಲಿಕೆಯಲ್ಲಿ ಉಲ್ಲೇಖವಾಗಿರುವ ಹಲವಾರು ವ್ಯಕ್ತಿಗಳ ಬಗ್ಗೆ ಅನೇಕ ಮಾಹಿತಿಗಳು ಇಂದು ಲಭ್ಯ.

ವಾಸುದೇವ ಶರ್ಮಾ

ಈ ಬರಹಗಳು ಮುದ್ರಣವಾಗುವ ಸಂದರ್ಭದಲ್ಲಿ ಪರಿಷ್ಕರಿಸಿಕೊಳ್ಳಲು ಅವು ಸಹಾಯಕವಾಗಿವೆ.

ಈ ಬರಹಗಳ ಮುಂದುವರಿದ ಭಾಗವಾಗಿ ಬರೆಯಬಹುದಾದ ಕೆಲವು ಸಂಗತಿಗಳಿವೆ. ಕೆಲವು ದಿನಗಳ ವಿರಾಮದ ನಂತರ ಮತ್ತು ಅವು ನಿಮ್ಮೊಂದಿಗೆ ಮಾತನಾಡಲಿವೆ.

ಅಲ್ಲಿಯವರೆಗೆ …… ನಮಸ್ಕಾರ

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು -24: ಶಾಪ್ ಸಿದ್ಧೇಗೌಡ ಚಿನ್ನದ ಪದಕದ ಸ್ಥಾಪಕರ ಕುರಿತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...