Homeಕರ್ನಾಟಕಕಸಾಪ ಆಗದಿರಲಿ ನಿವೃತ್ತ ನೌಕರರ ಆಶ್ರಯತಾಣ

ಕಸಾಪ ಆಗದಿರಲಿ ನಿವೃತ್ತ ನೌಕರರ ಆಶ್ರಯತಾಣ

- Advertisement -
- Advertisement -

ಕಸಾಪ ಕಳವಳ ಚರ್ಚೆ-1

ಹಲವು ವೈರುಧ್ಯ-ವೈಪರೀತ್ಯಗಳ ನಡುವೆಯೂ ಕಲ್ಬುರ್ಗಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಸಾಂಗವಾಗಿ ಮುಗಿದಿದೆ. ಆದರೆ ಅದರ ಬೆನ್ನಿಗೇ `ಕಸಾಪ ಕಾಳಜಿ’ಯ ಸುತ್ತ ಸಾಕಷ್ಟು ಆತಂಕಗಳೂ ತಲೆಯೆತ್ತಿವೆ. ಈಗಾಗಲೇ ಜಾತಿ ರಾಜಕಾರಣದ ಸೋಂಕಿನಿಂದ ತತ್ತರಿಸಿರುವ ಕಸಾಪ ಆವರಣವನ್ನು ಈಗ ಶುದ್ಧ ಕೋಮುವಾದವೂ ಹೊಕ್ಕು ಕೂತಿದೆ. ಶೃಂಗೇರಿ ಸಮ್ಮೇಳನಕ್ಕೆ ಕಸಾಪ ಸ್ಪಂದಿಸಿದ ರೀತಿಯೇ ಇದಕ್ಕೆ ಸಾಕ್ಷಿ. ಕಸಾಪ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ಸಮ್ಮೇಳನದಲ್ಲೆ, ಸರ್ಕಾರಿ ಗುಮಾಸ್ತಗಿರಿಗೆ ಸೀಮಿತವಾದ ಹಾಲಿ ಅಧ್ಯಕ್ಷರ ರಾಜೀನಾಮೆಯ ಕೂಗು ಕೇಳಿಬಂದದ್ದು ತಳ್ಳಿಹಾಕುವ ಸಂಗತಿಯಲ್ಲ.

ಆದರೆ ಕಸಾಪ ಪಾಲಿಗೆ ಇದಕ್ಕಿಂತಲು ಘೋರವಾದ ದಿನಗಳು ಎದುರಾಗುವ ಲಕ್ಷಣಗಳು ಇದೇ ಸಮ್ಮೇಳನದಲ್ಲಿ ಸ್ಪಷ್ಟವಾಗಿ ಗೋಚರಿಸಿವೆ. ಮುಂದಿನ ಬಾರಿ ಕಸಾಪ ಅಧ್ಯಕ್ಷರಾಗಲು ಮತ್ತೊಮ್ಮೆ ಸಾಹಿತ್ಯದ ಸೊಗಡೇ ಗೊತ್ತಿಲ್ಲದ ನಿವೃತ್ತ ಸರ್ಕಾರಿ ಅಧಿಕಾರಿಗಳು, ಒಂದು ರಾಜಕೀಯ ಪಕ್ಷದಲ್ಲಿ ನೇರವಾಗಿ ಗುರುತಿಸಿಕೊಂಡವರು ಕಸರತ್ತು ಶುರು ಮಾಡಿದ್ದಾರೆ. ಈಗ ಸಾಹಿತ್ಯಾಸಕ್ತರು ಎಚ್ಚೆತ್ತುಕೊಂಡು, ಸಾಂಸ್ಕøತಿಕ ಮನಸ್ತಾಪಗಳನ್ನು ಬದಿಗಿರಿಸಿ ಒಂದು ನಿರ್ದಿಷ್ಟ ಯೋಜನೆಯೊಂದಿಗೆ ಕಾರ್ಯೋನ್ಮುಖರಾಗದಿದ್ದಲ್ಲಿ ಮುಂದೊಂದು ದಿನ ಈಗಿನಂತೆಯೇ ಕಸಾಪ ಚುಕ್ಕಾಣಿ ಹಿಡಿದವರ ವರ್ತನೆಗಳನ್ನು ದೂಷಿಸುತ್ತಾ ಕೂರುವ ಒಣಕಾಯಕವಷ್ಟೇ ಉಳಿಯುವುದು. ಅದರಿಂದ ದೂಷಿಸುವವರಿಗೆ ಆತ್ಮತೃಪ್ತಿ ಸಿಗಬಹುದೇ ವಿನಾಃ ಕಸಾಪಕ್ಕಾಗಲಿ, ಕನ್ನಡಕ್ಕಾಗಲಿ, ಸಾಹಿತ್ಯಕ್ಕಾಗಿ ಕಿಂಚಿತ್ತೂ ಪ್ರಯೋಜನವಿಲ್ಲ. ಹಾಗಾಗಿ ಇದು ಎಚ್ಚೆತ್ತುಕೊಳ್ಳಲೇಬೇಕಾದ ಕಾಲ. ಕಸಾಪಕ್ಕೆ ಎದುರಾಗಿರುವ ಅಸಲಿ ಸಂಕಟಗಳೇನು? ಮುಂದೇನು ಮಾಡಬಹುದು? ಎಂಬುದನ್ನು ಚರ್ಚಿಸಲು ನ್ಯಾಯಪಥ ಪತ್ರಿಕೆ ಈ ಚರ್ಚಾ ಸರಣಿ ಶುರು ಮಾಡಿದೆ. ಆ ಮೂಲಕ ಒಂದು ವೇದಿಕೆ ರೂಪುಗೊಳ್ಳಲಿ ಎಂಬುದು ಪತ್ರಿಕೆಯ ಆಶಯ. ಓದುಗರು ತಮ್ಮ ಅನಿಸಿಕೆಗಳನ್ನು ಬರಹರೂಪದಲ್ಲಿ ಕಳುಹಿಸಬಹುದು. ನಿಮ್ಮ ಬರಹ ಯಾವುದೇ ವ್ಯಕ್ತಿನಿಷ್ಠ, ವ್ಯಕ್ತಿದೂಷಣೆಯಿಂದ ಕೂಡಿರುವುದಕ್ಕಿಂತ ಕಸಾಪ ಪಕ್ಷಪಾತಿಯಾಗಿರಲಿ ಎಂಬುದಷ್ಟೇ ನಮ್ಮ ವಿನಂತಿ….

ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಹಿತ್ಯ ಚಟುವಟಿಕೆಗಳಿಗಿಂತ ಇತರೆ ಕಾರಣಕ್ಕೆ ಸುದ್ದಿಯಲ್ಲಿದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ಮಹದಾಯಿ ನೀರು, ಕರ್ನಾಟಕದ ನೆರೆಹೊರೆಯ ರಾಜ್ಯಗಳಲ್ಲಿ ಕನ್ನಡ ಶಾಲೆಗಳ ದುಸ್ಥಿತಿ, ಕನ್ನಡಿಗರಿಗೆ ಕರ್ನಾಟಕದಲ್ಲಿಯೇ ಉದ್ಯೋಗ ದೊರಕದಿರುವುದು ಮುಂತಾದ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ, ಸಮಸ್ಯೆ ನಿವಾರಣೆಗೆ ಒತ್ತಾಯಿಸುವ ಕೆಲಸವನ್ನು ಮಾಡದಿರುವುದರಿಂದ ಪರಿಷತ್ತಿನ ಘನತೆಯು ಕುಗ್ಗಿದೆ. ಬಹುಶಃ ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಪರಿಷತ್ತಿಗೆ ಇಷ್ಟು ದುರ್ಬಲ ಹಾಗೂ ರಾಜಿಕಬೂಲಿ ಮಾಡುವ ದೇಶಾವರಿ ನಗೆಯ ಅಧ್ಯಕ್ಷರು ಯಾವತ್ತೂ ಆಯ್ಕೆಯಾಗಿರಲಿಲ್ಲ. ಹಾಲಿ ಅಧ್ಯಕ್ಷರ ಜಡತ್ವ, ಸರ್ಕಾರದ ಮುಂದೆ ನಡುಬಗ್ಗಿಸುವ ದೌರ್ಜನ್ಯವೇ ಮೇಲಿನ ಎಲ್ಲ ಅವಾಂತರಗಳಿಗೆ ಕಾರಣರಾಗಿದೆ.

ಕಳೆದ ಏಳೆಂಟು ವರ್ಷಗಳ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಗಮನಿಸಿದರೆ, ದತ್ತಿ ಉಪನ್ಯಾಸ ಕಾರ್ಯಕ್ರಮ, ದತ್ತಿ ಪ್ರಶಸ್ತಿ ವಿತರಣೆ ಹಾಗೂ ವರ್ಷಕ್ಕೊಮ್ಮೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವುದು- ಇಷ್ಟಕ್ಕೆ ಪರಿಷತ್ತಿನ ಕಾರ್ಯಚಟುವಟಿಕೆ ಸೀಮಿತವಾಗಿರುವುದು ಮನವರಿಕೆಯಾಗುತ್ತದೆ. ಪರಿಷತ್ತಿನಲ್ಲಿ ಪುಸ್ತಕ ಪ್ರಕಟಣೆ ವಿಭಾಗ ಇದೆ, ನಿಜ. ಆದರೆ ಅಲ್ಲಿ ಮೌಲಿಕವಾದ ಎಷ್ಟು ಹೊಸ ಪುಸ್ತಕ ಪ್ರಕಟಣೆಗೊಂಡಿವೆ ಎಂಬುದರ ಬಗ್ಗೆ ಏನನ್ನೂ ಹೇಳದಿರುವುದು ಸೂಕ್ತ. ಇನ್ನು ‘ಕನ್ನಡನುಡಿ’ ಪತ್ರಿಕೆ ಪರಿಷತ್ತಿನ ಎಲ್ಲ ಸದಸ್ಯರಿಗೆ ಕಳಿಸುವುದನ್ನು ನಿಲ್ಲಿಸಿ ಎಷ್ಟೋ ವರ್ಷಗಳಾಯಿತು!

ಸಾಹಿತ್ಯ ಪರಿಷತ್ತಿನ ಗಂಭೀರವಾದ ಸಮಸ್ಯೆಯೆಂದರೆ ಅದು ಜಾತಿರಾಜಕಾರಣದ ಸುಳಿಯಲ್ಲಿ ಸಿಲುಕಿರುವುದು. ನೂರಾ ಐದು ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆ ವಹಿಸಿರುವುದು ನಾಲ್ಕೇ ಜಾತಿಯವರು: ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರು ಮತ್ತು ಜೈನರು. ಈಗಿನ ಪರಿಸ್ಥಿತಿ ಹೇಗಿದೆಯೆಂದರೆ ಲಿಂಗಾಯತ ಅಥವಾ ಒಕ್ಕಲಿಗರನ್ನು ಬಿಟ್ಟು ಬೇರೆ ಸಮುದಾಯದವರು ಅಧ್ಯಕ್ಷರಾಗುವುದು ಸಾಧ್ಯವೇ ಇಲ್ಲ. ಜೊತೆಗೆ ಪರಿಷತ್ತಿನ ಮೂರು ಲಕ್ಷಕ್ಕೂ ಅಧಿಕ ಸದಸ್ಯರಿಗೆ ಒಂದು ಸುತ್ತು ಪತ್ರ ಕಳಿಸಲು ಕನಿಷ್ಟ ಹನ್ನೆರಡು ಲಕ್ಷ ರೂಪಾಯಿ ಬೇಕು. ರಾಜ್ಯದ ಒಳಗೆ ಮತ್ತು ಹೊರಗೆ ಪ್ರವಾಸ ಮಾಡಿ ಜಿಲ್ಲಾ ನಾಯಕರ ಭೇಟಿ, ಕರಪತ್ರ ಇತ್ಯಾದಿ ಎಲ್ಲ ವೆಚ್ಚ ಸೇರಿದರೆ ಕನಿಷ್ಟ ಇಪ್ಪತ್ತು ಲಕ್ಷ ರೂಪಾಯಿ ಖರ್ಚು ತಗಲುತ್ತದೆ. ಇದನ್ನೆಲ್ಲ ಕನ್ನಡದ ಯಾವ ಲೇಖಕ ಭರಿಸಲು ಸಾಧ್ಯ? ಇದನ್ನು ಮನಗಂಡು ನಿವೃತ್ತ ಸರ್ಕಾರಿ ಅಧಿಕಾರಿಗಳು ಸಾಹಿತ್ಯ ಪರಿಷತ್ತಿಗೆ ತೇಲಿಕೊಂಡಿದ್ದಾರೆ. ಇವರಿಗೆ ಯಾವ ಬದ್ಧತೆಯೂ ಇಲ್ಲ. ನಿವೃತ್ತಿ ನಂತರ ಗೂಟದ ಕಾರು ಇರುವ ಪರಿಷತ್ತನ್ನು ಹಿಡಿದು ಅಧಿಕಾರಸ್ಥ ರಾಜಕಾರಣಿಗಳನ್ನು ಓಲೈಸುತ್ತ ಸುದ್ದಿಯಲ್ಲಿರಲು ಹವಣಿಸುತ್ತಿದ್ದಾರೆ.

ಈಗಿನ ಅಧ್ಯಕ್ಷರಾದ ಮನು ಬಳಿಗಾರರ ಹಾದಿಯಲ್ಲಿ ಸಾಗಲು ನಿವೃತ್ತ ಅಧಿಕಾರಿಗಳಾದ ಸಿ.ಸೋಮಶೇಖರ್ ಮತ್ತು ದೂರದರ್ಶನದ ನಿವೃತ್ತ ನಿರ್ದೇಶಕ ಮಹೇಶ್ ಜೋಷಿ ಮುಂದಿನ ಚುನಾವಣೆಗೆ ತಾಲೀಮು ಶುರುಮಾಡಿದ್ದಾರೆ. ಈಗಾಗಲೇ ರಾಜ್ಯದ ಎಲ್ಲ ಪ್ರಮುಖ ಮಠಾಧೀಶರಿಗೆ ಪಾದಸೇವೆ ಮಾಡಿ ಬೆಂಬಲ ಕೋರಿದ್ದಾರೆ. ಕಳೆದ ಬಾರಿಯೇ ಮನು ಬಳಿಗಾರ್ ವಿರುದ್ಧ ಸಿ.ಸೋಮಶೇಖರ್ ಸ್ಪರ್ಧಿಸಲು ಸಿದ್ಧರಾಗಿದ್ದರು.ಒಂದೇ ಜಾತಿಯ ಇಬ್ಬರು ಸ್ಪರ್ಧಿಸಿದರೆ ಮೂರನೆಯವರಿಗೆ ಅನುಕೂಲವಾಗುವುದು ಎಂಬ ಕಾರಣಕ್ಕೆ ಮತ್ತು ಕುಲಬಾಂಧವರ ಒತ್ತಾಯಕ್ಕೆ ಮಣಿದು ಸೋಮಶೇಖರ್ ಹಿಂದೆ ಸರಿದರು. ಮೊನ್ನೆ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಪ್ರಚಾರಕ್ಕೆ ಇಳಿದ ಮಹೇಶ್ ಜೋಷಿ ಮತ್ತು ಸಿ.ಸೋಮಶೇಖರ್ ಅವರ ಸ್ಪರ್ಧೆ ಕುತೂಹಲಕಾರಿಯಾಗಿರುವುದು. ಇವರಲ್ಲದೆ ಮತ್ತೆ ಯಾರೂ ಸ್ಪರ್ಧಿಸಲು ಉತ್ಸಾಹ ತೋರದಿರುವುದು ಅಪಾರ ವೆಚ್ಚ ಮಾಡಬೇಕಾಗಿರುವುದು ಮತ್ತು ಜಾತಿಯ ಬಲ ಇಲ್ಲದಿರುವ ಕಾರಣಕ್ಕೆ!! ಜೊತೆಗೆ ಈಚೆಗೆ ಹಿಂದುತ್ವವಾದಿಗಳು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ನಿಯಂತ್ರಿಸಲು ಮುಂದಾಗಿರುವುದು ಹಾಗೂ ಪರಿಷತ್ತಿನ ಅಧ್ಯಕ್ಷರು ಹಿಂದುತ್ವವಾದಿಗಳಿಗೆ ಮಣಿದಿರುವುದು ಪರಿಷತ್ತಿನ ಸ್ವಾಯತ್ತತೆಗೆ ಭಂಗ ತಂದಿರುವುದು ಆತಂಕದ ಬೆಳವಣಿಗೆಯಾಗಿದೆ. ಪರಿಷತ್ತಿನ ಅಧ್ಯಕ್ಷರಾದವರು ಯಾವುದೇ ಪಕ್ಷ ಅಥವಾ ಸರ್ಕಾರದ ಕೈಗೊಂಬೆ ಅಥವಾ ಅವು ಹೇಳಿದಂತೆ ಕೇಳುವ ಆಜ್ಞಾಧಾರಕರು ಆಗುವುದು ಕನ್ನಡ ಭಾಷೆ ಮತ್ತು ಸಾಹಿತ್ಯದ ಹಿತಕ್ಕೆ ಮಾರಕವಾಗುವುದು. ಹೀಗಾಗಿ ಸ್ವತಂತ್ರ ವ್ಯಕ್ತಿತ್ವ ಮತ್ತು ಬೆನ್ನುಮೂಳೆಯಿರುವ ವ್ಯಕ್ತಿ ಮುಂದಿನ ಚುನಾವಣೆಯಲ್ಲಿ ಆಯ್ಕೆಯಾಗುವಂತೆ ನೋಡಿಕೊಳ್ಳುವುದು ಪರಿಷತ್ತಿನ ಸ್ವಾಯತ್ತತೆ ಬಯಸುವವರ ಜವಾಬ್ದಾರಿ.

ಕಳೆದ ತಿಂಗಳಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮನು ಬಳಿಗಾರ ಅವರ ವರ್ತನೆ ತೀವ್ರ ಟೀಕೆ ಮತ್ತು ಖಂಡನೆಗೆ ಗುರಿಯಾಯಿತು. ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರ ಆಜ್ಞಾಪಾಲಕರಾಗಿ ಜಿಲ್ಲಾ ಸಮ್ಮೇಳನಕ್ಕೆ ಹಣ ಬಿಡುಗಡೆ ಮಾಡದೇಹೋದದ್ದು ಮತ್ತು ಜಿಲ್ಲಾ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿದ ಸಮ್ಮೇಳನದ ಅಧ್ಯಕ್ಷರನ್ನು ಬದಲಾಯಿಸಬಾರದು ಎಂದು ಹೇಳದೆ ಮೌನ ವಹಿಸಿದ್ದು ಪರಿಷತ್ತಿನ ಇತಿಹಾಸದಲ್ಲಿ ಇದೇ ಮೊದಲು. ಈ ಬಗ್ಗೆ ಕನ್ನಡದ ಅನೇಕ ಹಿರಿಯ ಲೇಖಕರು ಮೌನ ತಾಳಿದ್ದು ಜುಗುಪ್ಸೆ ಹುಟ್ಟಿಸಿತು. ಅದರಲ್ಲೂ ಮುಖ್ಯವಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯುಕ್ತರಾಗಿದ್ದ ಎಚ್ ಎಸ್ ವೆಂಕಟೇಶಮೂರ್ತಿಯವರ ಮೌನ ಸಾಂಸ್ಕೃತಿಕ ಲೋಕದ ಘನತೆಯನ್ನು ನಾಶಮಾಡಿತು. ಕೆಲವರಿಗೆ ಸರ್ಕಾರದ ಭಯ, ಕೆಲವರಿಗೆ ತಮ್ಮ ಹಿಂದುತ್ವದ ಮೇಲಿನ ಪ್ರೀತಿ, ಕೆಲವರಿಗೆ ವೇದಿಕೆ ಏರುವ ಅವಕಾಶ ತಪ್ಪುವ ಭೀತಿ- ಹೀಗೆ ಅನೇಕ ಕಾರಣಕ್ಕೆ ಮೌನವಾದವರಿಂದ ಸಾಹಿತ್ಯ ಲೋಕದ ಘನತೆ ಮತ್ತು ಸ್ವಾಯತ್ತತೆ ಮಣ್ಣು ಪಾಲಾಗಿದೆ. ಇಂತಹ ಸ್ವಾರ್ಥಿಗಳು ಮತ್ತು ಕುತ್ಸಿತರ ಕಪಿಮುಷ್ಟಿಯಿಂದ ಪರಿಷತ್ತನ್ನು ಪಾರುಮಾಡಲು ಕನ್ನಡ ಭಾಷೆ ಮತ್ತು ಸಾಹಿತ್ಯ ಪ್ರೇಮಿಗಳು ಒಂದಾಗಿ ಮುಂದಿನ ಚುನಾವಣೆಯಲ್ಲಿ ಪ್ರಗತಿಪರ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕೆ ಇಳಿಸಿ ಗೆಲುವು ಸಾಧಿಸಲು ಕಾರ್ಯತಂತ್ರ ರೂಪಿಸಬೇಕಾಗಿದೆ. ಇದು ಬರೀ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಯ ಪ್ರಶ್ನೆ ಮಾತ್ರವಲ್ಲ, ಪ್ರಜಾಪ್ರಭುತ್ವದ ಬೇರಿಗೆ ವಿಷ ಹಾಕುತ್ತಿರುವ ಎಲ್ಲ ಕೋಮುವಾದಿಗಳ ವಿರುದ್ಧ ನಾವು ಗಟ್ಟಿಯಾದ ಪ್ರತಿರೋಧ ಒಡ್ಡಬೇಕಾದ ಜವಾಬ್ದಾರಿಯೂ ಆಗಿದೆ.

ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಲು ಹಣಬಲ ಮತ್ತು ಜಾತಿಬಲ ಬೇಕೇಬೇಕು ಎಂಬ ವಾತಾವರಣ ಏನಿದೆ, ಅದು ಕನ್ನಡ ಭಾಷೆ ಮತ್ತು ಸಾಹಿತ್ಯದ ಅಸ್ಮಿತೆ ಮತ್ತು ಉಳಿವಿನ ಪ್ರಶ್ನೆಯಾಗಿದೆ. ಮಠಮಾನ್ಯಗಳ ಬೆಂಬಲ ಪಡೆದು, ಎಲ್ಲೊ ಹೇಗೊ ಸಂಪಾದಿಸಿದ ಹಣವನ್ನು ತಂದು ಪರಿಷತ್ತಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ಹವಣಿಸುತ್ತಿರುವ ಮಾಜಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಬಾರದು. ಹತ್ತಾರು ವರ್ಷಗಳ ಕಾಲ ಸಾಹಿತ್ಯ ಕೃಷಿ ಮಾಡಿದ ಪ್ರಗತಿಪರರು, ಸಾಂಸ್ಕೃತಿಕ ಲೋಕದಲ್ಲಿ ಕ್ರಿಯಾಶೀಲರಾಗಿರುವವರು ಪರಿಷತ್ತಿನ ಅಧ್ಯಕ್ಷರಾಗಬೇಕು. ಜಾತಿ, ಧರ್ಮ, ಪ್ರಾಂತ, ಪಕ್ಷ ಮೀರಿ ಕೆಲಸ ಮಾಡುವ ಹಾಗೂ ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯದವರು ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗುವಂತೆ ನಾವು ಕೆಲಸ ಮಾಡಬೇಕು.

ಪರಿಷತ್ತು ನಿವೃತ್ತ ಸರ್ಕಾರಿ ನೌಕರರ ಪುನರ್ವಸತಿ ಕೇಂದ್ರವಲ್ಲ. ಈ ನಿವೃತ್ತ ಸರ್ಕಾರಿ ನೌಕರರು ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರದ ವಿರುದ್ಧ ಗುಡುಗಲಾರರು ಹಾಗೂ ಅಧಿಕಾರಶಾಹಿ ಮನೋಭಾವ ಅವರ ಅತಿದೊಡ್ಡ ದೌರ್ಬಲ್ಯ. ಇದರಿಂದ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆ ಮಣ್ಣು ಮುಕ್ಕುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಅವರು ಸರ್ಕಾರದ ಮುಂದೆ ವಿಧೇಯರಾಗಿ ವರ್ತಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡಿಗರಿಗೆ ಅವಮಾನ ಮಾಡುವರು. ಆದ್ದರಿಂದ ಸಾಹಿತ್ಯ ಲೋಕದ ಸಾಧಕರು ಪರಿಷತ್ತಿನ ಅಧ್ಯಕ್ಷರಾಗಬೇಕಾಗಿದೆ.

ಸಾಹಿತ್ಯ ಸಮ್ಮೇಳನ ನಡೆಸಲು ಪರಿಷತ್ತಿನ ಅಧ್ಯಕ್ಷರು, ಅಧಿಕಾರಿಗಳು ಮತ್ತು ರಾಜಕಾರಣಿಗಳು ಬಹಳ ಆಸಕ್ತಿ ತೋರುತ್ತಿರುವುದು ಇತ್ತೀಚಿನ ವಿದ್ಯಮಾನ. ಸಾಹಿತ್ಯದ ಮೇಲಿನ ಪ್ರೀತಿಗಿಂತ ‘ಇತರೆ’ ವ್ಯಾವಹಾರಿಕ ಸಂಗತಿಗಳು ಸಮ್ಮೇಳನ ನಡೆಸಲು ತೋರುತ್ತಿರುವ ಉತ್ಸಾಹಕ್ಕೆ ಕಾರಣವಾಗಿವೆ. ಸಾಹಿತ್ಯ ಸಮ್ಮೇಳನದ ವಿವಿಧ ಗೋಷ್ಠಿಯಲ್ಲಿ ಪಾಲ್ಗೊಳ್ಳುವವರ ಆಯ್ಕೆ ಮಾಡುವಲ್ಲಿ ಕೂಡ ಅನೇಕ ಲೆಕ್ಕಾಚಾರಗಳಿವೆ. ಸಾಹಿತ್ಯ ಸಮ್ಮೇಳನದಲ್ಲಿ ಸಂಭ್ರಮ, ಉತ್ಸಾಹ, ಜನರು ಮುಗಿಬಿದ್ದು ಪಾಲ್ಗೊಳ್ಳುತ್ತಿರುವುದು ಸರಿಯೇ. ಆದರೆ ಯಾವುದೇ ಗಟ್ಟಿ ಚಿಂತನೆ, ನೆಲಜಲ ಕುರಿತು ಬದ್ಧತೆ ಕಾಣದ ಸಮ್ಮೇಳನ ಇಷ್ಟರಿಂದ ಮಾತ್ರ ಯಶಸ್ವಿಯಾಗುವುದಿಲ್ಲ. ಸರ್ಕಾರದ ಅನುದಾನ ಹೆಚ್ಚಿದಂತೆ ಸಮ್ಮೇಳನಗಳ ಗುಣಮಟ್ಟ ಕುಸಿದಿರುವುದು ವಿಪರ್ಯಾಸ. ಹಾಗೆಯೇ ಬಹುತೇಕ ತಾಲ್ಲೂಕು, ಜಿಲ್ಲಾ ಸಮ್ಮೇಳನಗಳಲ್ಲಿ ರಾಜಕೀಯ ವ್ಯಕ್ತಿಗಳ ಮೇಲಾಟವೇ ಎದ್ದು ಕಾಣುತ್ತದೆ. ಸಮ್ಮೇಳನ ನಡೆಸಲು ಸರ್ಕಾರದ ಅನುದಾನ ಮತ್ತು ಖಾಸಗಿಯವರಿಂದ ಹಣ ಸಂಗ್ರಹಣೆ ಹೆಚ್ಚಿದಂತೆ ಸಾಹಿತ್ಯೇತರ ಹಿತಾಸಕ್ತಿ ಕೂಡ ಹೆಚ್ಚಿದೆ. ಸಾಹಿತ್ಯ ಪರಿಷತ್ತು ಕೊಡುವ ಪ್ರಶಸ್ತಿಗಳ ಮೇಲೆ ಕಣ್ಣಿಟ್ಟು ಕುಳಿತ ಅನೇಕ ಲೇಖಕರು, ಅದರಲ್ಲೂ ನೃಪತುಂಗ ಪ್ರಶಸ್ತಿ, ಸಮ್ಮೇಳನದ ಅಧ್ಯಕ್ಷತೆ ಮೇಲೆ ಕಣ್ಣಿಟ್ಟವರು ಪರಿಷತ್ತಿನ ವೈಫಲ್ಯ, ಯಪರಾತಪರಾ ಕುರಿತು ತುಟಿ ಬಿಚ್ಚುವುದೇ ಇಲ್ಲ. ಪರಿಷತ್ತು ಸ್ವಾಯತ್ತತೆ ಕಳೆದುಕೊಂಡು ಸರ್ಕಾರದ ಅಂಗಸಂಸ್ಥೆಯಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಿರಿಯ ಲೇಖಕರ ನಿದರ್ಶನ ಇಲ್ಲ. ಹಿಂದೆ 1980-82 ರಲ್ಲಿ ಗೋಕಾಕ್ ಚಳವಳಿ ನಡೆದಾಗ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಪರ ನಿಲ್ಲದೆ ಸರ್ಕಾರದ ಬಾಲಂಗೋಚಿಯಾಗಿತ್ತು. ಈಗ ಬೇರೆ ಕಾರಣಕ್ಕೆ- ಅನುದಾನದ ಕಾರಣಕ್ಕೆ ಸ್ವಾಯತ್ತತೆ ಕಳೆದುಕೊಂಡು ಕನ್ನಡ, ಕನ್ನಡಿಗರ ಪರವಾಗಿ ನಿಲ್ಲುತ್ತಿಲ್ಲ. ಮನು ಬಳಿಗಾರರು ನಿವೃತ್ತ ಅಧಿಕಾರಿ, ಅವರು ಮೊದಲಿಂದಲೂ ಅಧಿಕಾರಸ್ಥರ ಮುಂದೆ ನಡು ಬಗ್ಗಿಸಿ ಗೊತ್ತೇ ಹೊರತು ಸ್ವಾಯತ್ತ ಸಂಸ್ಥೆಯ ಘನತೆ ಎತ್ತಿ ಹಿಡಿದು ಗೊತ್ತಿಲ್ಲ. ಹೀಗಾಗಿ ಮುಂದೆ ಪರಿಷತ್ತು ಕನ್ನಡ, ಕನ್ನಡಿಗರ ಪರವಾಗಿ ನಿಲ್ಲುವಂಥ ಗಟ್ಟಿ ವ್ಯಕ್ತಿತ್ವದ ವ್ಯಕ್ತಿ ಪರಿಷತ್ತಿನ ಅಧ್ಯಕ್ಷರಾಗಬೇಕಾಗಿದೆ. ಹಾಗೂ ನಿವೃತ್ತ ಅಧಿಕಾರಿಗಳ ಆಶ್ರಯತಾಣ ಆಗಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...