Homeಮುಖಪುಟಬ್ರಿಟನ್ ಕವಿ ಬ್ರಯಾನ್ ಪ್ಯಾಟನ್ ಅವರ ಹತ್ತು ಪದ್ಯಗಳು

ಬ್ರಿಟನ್ ಕವಿ ಬ್ರಯಾನ್ ಪ್ಯಾಟನ್ ಅವರ ಹತ್ತು ಪದ್ಯಗಳು

- Advertisement -
- Advertisement -

1.ಬೆಳಕಿನವತಾರ

ನನ್ನ ಕನ್ನಡಿಯೊಳಗೆ ನಡೆದು ಬಂದವಳು
ಪ್ರೀತಿ ಮತ್ತು ಅದರ ಇತರ ಉತ್ಪನ್ನಗಳ ಬಗ್ಗೆ
ಚಕಾರ ಎತ್ತುವುದಿಲ್ಲ,
ಸುಮ್ಮನೇ ನಿಂತಿರುತ್ತಾಳೆ,
ತನ್ನ ಮೌನವನ್ನು ತಾನೇ ಸುಖಿಸುತ್ತಾಳೆ,
ನನಗೆ ಗೊತ್ತಿರುವ ಎಲ್ಲ ಋತುಗಳೂ
ತಾನೇ ಎಂಬಂತೆ ಉಟ್ಟು ಮೆರೆಯುತ್ತಾಳೆ,
ಒಂದು ಮೊಲೆಯಲ್ಲಿ ಕಾಡು
ಇನ್ನೊಂದರಲ್ಲಿ ಸಮುದ್ರ ಧರಿಸಿಕೊಂಡಿದ್ದಾಳೆ.

ಯಾವುದೇ ಬೇಡಿಕೆಯಿಲ್ಲ ಅವಳಲ್ಲಿ
ಒಮ್ಮೆ ನೋಡಿದರೆ ಸಾಕು.
ಎಷ್ಟೆಲ್ಲಾ ಬೇಡಿಕೆ.

ಮಾಟ ಎಲ್ಲರ ಹಾಗೇ
ಪ್ರೇಮಕ್ಕೆ ಬೇಕಾದಷ್ಟು, ಸಾಕಾದಷ್ಟು,
ನನ್ನ ಕಟ್ಟಿ ಹಾಕಿರುವುದು ಅದಲ್ಲ,
ಅದರಾಚೆಗಿನ ಬೆಳಗು.

ಒಮ್ಮೊಮ್ಮೆ ನನಗನಿಸುತ್ತದೆ
ನಾನೂ ಹಾಗೇ
ಬೆಳಕಿನವತಾರ.

*****

2. Reading between Graffiti

ಟಾಯ್ಲೆಟ್‌ನ ಗೋಡೆಯ ಮೇಲೆ
ಮಸುಕು ಮಸುಕಾದ ಗೀಚು ಬರಹ,
‘FUCK THE STRANGER TONIGHT’
ಕಳೆದ ವಾರ ಕಣ್ಣಿಗೆ ಬಿದ್ದಿರಲಿಲ್ಲ.
ಬಾಕಿ ಎಲ್ಲ ಲವ್ ಸಿಂಬಲ್‌ಗಳು,
ಕಾಮ ಪ್ರಲಾಪಗಳು, ಉತ್ಕಟ ಹಳಹಳಿಕೆಗಳು
ಈ ಅನಾಮಿಕನ ಸಲಹೆಯ ಮುಂದೆ
ಸಪ್ಪೆ, ಸಪ್ಪೆ ಎನಿಸುವಂತಿದ್ದವು.
ಕಳೆದುಕೊಂಡವರು, ಸಾಯದ ಆದರೆ ದಿನದಿನಕ್ಕೂ
ಬಾತುಕೊಳ್ಳುತ್ತಲೇ ಸಣ್ಣಗಾಗುವವರು,
ಅನುಕಂಪಕ್ಕಾಗಿ ತುಡಿಯುವ ಆದರೆ
ಟಾಯ್ಲೆಟ್‌ನ ಗೋಡೆಗಳ ಮುಂದೆ ದಿಢೀರನೇ ದಾರ್ಶನಿಕರಾಗುವವರು,
ಹೀಗೆ ಗೋಡೆ ಬರಹಗಳು
ಆಯಾ ಗುಂಪಿನ ಮನಸ್ಥಿತಿಯನ್ನು ಹಾಡುತ್ತವೆ.
ಅದೇನೇ ಇರಲಿ
ಈ ಬರಹ ಬರೆದವನಿಗೆ
ಒಂದಿಷ್ಟು ಕ್ರೆಡಿಟ್ ಕೊಡಲೇಬೇಕು,
ಕೊನೆ ಪಕ್ಷ ತಿಳಿದುಕೊಳ್ಳಲಿಕ್ಕಾದರೂ
’ಯಾಕೆ? ರಾತ್ರಿ, ಹೀಗೆ ಒಳಗೆ ಇಳಿದು
ತನ್ನ ಉನ್ಮತ್ತ ದಾಸರಿಂದ
ತಪ್ಪುತಪ್ಪಾಗಿ ಬರೆಸುತ್ತದೆ
ಸತ್ಯ ವಚನ’

*****

3. ದುರಂತ

ನಿನ್ನೆ
ನಡು ಮನೆಯಲ್ಲಿರುವ
ಬೆಂಕಿಗೂಡಿನ ಹಿಂದೆ
ಪೆನ್ಸಿಲ್‌ನಲ್ಲಿ ಬರೆದಿರುವ ಒಂದು ಚೀಟಿ ಸಿಕ್ಕಿತು.
ಎಷ್ಟು ಹಳೆಯದೋ ಗೊತ್ತಿಲ್ಲ
ದಿನದ ಗೋಜಲುಗಳ ನಡುವೆ
ತನ್ನ ಪಾಳಿಗಾಗಿ ಕಾತುರದಿಂದ ಕಾಯುವಂತಿತ್ತು.

’ಬಾಸ್ಟರ್ಡ್’ ಹೀಗೆ ಶುರುವಾಗಿತ್ತು
’ಮತ್ತೆಂದೂ ವಾಪಸ್ ಆಗಲಾರೆ
ಇದೇ ಕೊನೆಯ ರಾತ್ರಿ
ಶಾಶ್ವತವಾಗಿ ಬಿಟ್ಟು ಹೋಗುತ್ತಿದ್ದೇನೆ’

ಕೆಳಗೆ ಬರೆದಿರುವ ಹೆಸರನ್ನ
ನನಗೆ ಗುರುತಿಸಲಾಗಲಿಲ್ಲ
ಆ ಸಹಿಯನ್ನ ಮಸಿ ನುಂಗಿ ಹಾಕಿತ್ತು.

ಅದು, ನನಗೇ ಬರೆದಿರುವ ಚೀಟಿ
ಎನ್ನುವ ಗ್ಯಾರಂಟಿ ಕೂಡ ನನಗಿರಲಿಲ್ಲ.
ಬಹುಶಃ ಇರಬಹುದು
ಬಹುಶಃ ಇರಲಿಕ್ಕೂ ಇಲ್ಲ.
ನನಗೆ ಅದು ಗೊತ್ತಾಗಲೂ ಇಲ್ಲ
ನಾನು ಕಾಳಜಿ ಕೂಡ ಮಾಡಲಿಲ್ಲ.

ತಮಾಷೆ ಎಂದರೆ ಒಮ್ಮೊಮ್ಮೆ
ದುರಂತ ಹೀಗೂ ನಡೆದುಹೋಗುತ್ತದೆ
ನಗಿಸದೇ ಅಳಿಸದೆ.
(The tragedy)

*****

4. ಹುಲ್ಲಿನ ಗರಿ

ನಿನ್ನ ಫರ್ಮಾಯಿಶ್ ಕವಿತೆಯಾಗಿತ್ತು,
ನಾನು ಹುಲ್ಲಿನ ಗರಿ ಕೊಟ್ಟೆ.
ಉಹೂಂ,
ಕವಿತೆಯೇ ಬೇಕು ನಿನ್ನ ಹಟ,
ಹುಲ್ಲಿನ ಗರಿ ಸಾಕು ನನ್ನ ವಾದ.

ಮಂಜಿನಲ್ಲಿ ಮಿಂದ ಗರಿ ಎಲ್ಲಕ್ಕಿಂತ ಹೊಸದು
ನನ್ನ ಯಾವ ರೂಪಕಕ್ಕಿಂತಲೂ
ನನ್ನ ಸಮಜಾಯಿಷಿ,
ಆದರೂ ಅದು ಕವಿತೆಯಲ್ಲ…..
ಮುಂದುವರಿದಿದೆ ನಿನ್ನ ಹಟ.

ನಿನಗೆ ಸಿಟ್ಟು
ಹುಲ್ಲಿನ ಗರಿ ಸುಲಭ ಎಂಬ ನಂಬಿಕೆ
ಯಾರೂ ಕೊಡಬಲ್ಲರು ಎಂಬ ತಿಳಿವಳಿಕೆ.

ನಿನ್ನ ಫರ್ಮಾಯಿಶ್ ಕವಿತೆಯಾಗಿತ್ತು
ಹುಲ್ಲಿನ ಗರಿಯನ್ನು
ನಿನಗೆ ಒಪ್ಪಿಸಲಾಗದ ನನ್ನ ಅಸಹಾಯಕತೆಯ ಕುರಿತು
ನಾನೊಂದು ದುರಂತ ಕವಿತೆ ಬರೆದೆ
ಅದರಲ್ಲೊಂದು ಸಾಲಿತ್ತು
ನಿನ್ನ ಬಗ್ಗೆ
ವಯಸ್ಸಾಗುತ್ತಾ ಹೋದಂತೆ
ಹುಲ್ಲಿನ ಗರಿಯನ್ನು
ಒಪ್ಪಿಕೊಳ್ಳದ ನಿನ್ನ ಜಿದ್ದಿನ ಬಗ್ಗೆ.
(Blade of grass)

*****

5. What I need for the present

ಥ್ಯಾಂಕ್ಸ್, ಆದರೆ
ವಾಪಸ್ ತೆಗೆದುಕೊಂಡುಬಿಡು
ಈ ಉಂಗುರ ಮತ್ತು ಅದರ ಬಾಕ್ಸ್,
ಚಿಟ್ಟೆಯ ರೆಕ್ಕೆ ಮತ್ತು ಗಾಜಿನ ಮಣಿಗಳಿಂದ
ಅಲಂಕೃತವಾದ ಈ ಬಣ್ಣದ ಚಿತ್ರ
ಬೇಡ ನನಗೀಗ ಇವೆಲ್ಲ.
ದಯವಿಟ್ಟು, ಈ ಪುಸ್ತಕಗಳು,
ಪೋಸ್ಟ್ ಕಾರ್ಡುಗಳು,
ಜೇನು ಮೇಣದ ಕ್ಯಾಂಡಲ್‌ಗಳು,
ಹೂವಿನ ಕುಂಡಗಳು, ಪೇಂಟಿಂಗ್‌ಗಳು,
ಮತ್ತು ಈ ದುಬಾರಿ ಪೆನ್
ಎಲ್ಲವನ್ನೂ ವಾಪಸ್ ತೆಗೆದುಕೊಂಡುಬಿಡು.

ಹೀಗೆ ಹೇಳುವುದು ಸೌಜನ್ಯ ಅಲ್ಲ ನಿಜ, ಆದರೆ
ಯಾವುದನ್ನು ಕೊಡಲಾಗುವುದಿಲ್ಲವೋ
ಅದರ ಬದಲಿಗೆ ಕೊಡಲಾಗಿದೆ
ಎಂಬಂತಿವೆ ಈ ಉಡುಗೊರೆಗಳು.

ಹೀಗೆ ಹೇಳುವುದು ಸೌಜನ್ಯ ಅಲ್ಲ ನಿಜ, ಆದರೆ
ಈ ಕೋಣೆಯಲ್ಲಿ ಓಡಾಡುವಾಗಲೆಲ್ಲ
ಕಣ್ಣಿಗೆ ಬೀಳುವುದು ಈ ಉಡುಗೊರೆಗಳಲ್ಲ
ಅವುಗಳ ಮೇಲೆ ಧೂಳಿನಂತೆ ಕುಳಿತಿರುವ
ನಿನ್ನ ಗೈರು ಹಾಜರಿ ಮಾತ್ರ.

ದಯವಿಟ್ಟು ಕ್ಷಮಿಸು

ನೀನೇನೊ ಪ್ರೀತಿಯಿಂದಲೇ ಕೊಟ್ಟಿರಬಹುದು, ಆದರೆ
ಸದ್ಯ ಈ ಬೇಡಿಗಳ ತುರ್ತು ನನಗಿಲ್ಲ.

******

ಬ್ರಯಾನ್ ಪ್ಯಾಟನ್

6. She complicates her life

ಅದೇನೋ ಅವಳು
ಎಲ್ಲವನ್ನು ಸುಮ್ಮನೆ ಕಾಂಪ್ಲಿಕೇಟ್ ಮಾಡಿಕೊಳ್ಳುತ್ತಾಳೆ.
ಕೆಲ ಭೂತಗಳು ಅವಳ ದಿನಗಳನ್ನು
ಹಿಡಿದು ಅಲ್ಲಾಡಿಸುತ್ತಿವೆ.

ಪ್ರೇಮ ತಾನಾಗಿಯೇ ಬಂದು, ಕೈಹಿಡಿದು
’ನಿಲ್ಲು’ ಎಂದರೆ
’ಹೋಗು’ ಎಂದು ಕೇಳಿಸಿಕೊಂಡು
ಬೆನ್ನು ತಿರುವಿ ಹೊರಟುಬಿಡುತ್ತಾಳೆ.

ಎಲ್ಲ ಬಾಗಿಲುಗಳನ್ನ ಮುಚ್ಚಿಕೊಂಡಿದ್ದಾಳೆ
ನೋವು ಹೆಚ್ಚಾದಾಗಲೆಲ್ಲ ಹಿಮವಾಗಿಬಿಡುತ್ತಾಳೆ.

*****

7. ತುಂಬಿಕೊಂಡವಳು

ಮೊನ್ನೆ ನಿನ್ನ
ಕಿಟಕಿಯಲ್ಲಿ ನೋಡಿದೆ.
ಅದೇ ಚೆಲುವು, ಅದೇ ಹೊಂಗೂದಲಿನ ಜಡೆ
ಅವೇ ಅಲೌಕಿಕ ನೀಳ ಕಾಲುಗಳು.
ಓಡಿ ಬೀದಿಗೆ ಬಂದವನೇ
ನಿನ್ನ ಹೆಸರಿಟ್ಟು ಕೂಗಿದೆ.
ನೀನು ಹಿಂತಿರುಗಿ ನೋಡಿ
ನನ್ನ ಆತುರಕ್ಕೆ
’ಛೀ’ ಎಂದೆ.
ಹೌದು obviously ಆಕೆ ನೀನಾಗಿರಲಿಲ್ಲ

ಮೂವತ್ತು ವರ್ಷ ಹೇಗೆ ಕಳೆದುಹೋಯಿತೆಂಬುದನ್ನ

ನಾನೂ ಮರೆತುಬಿಟ್ಟಿದ್ದೆ.
ಕ್ಷಮೆ ಕೇಳಿದೆ

“ಸಾರಿ, ಬೇರೆ ಯಾರೋ ಅಂದುಕೊಂಡಿದ್ದೆ” ತೊದಲಿದೆ.
ಆದರೆ ಇದರಲ್ಲಿ ನನ್ನದೇನೂ ಅಂಥ ತಪ್ಪಿಲ್ಲ.
ನಾನು ನೋಡಿದ್ದು,
ನನ್ನೊಳಗೆ ಅಂದು ತುಂಬಿಕೊಂಡಿದ್ದ ನಿನ್ನನ್ನು
ಈ ಹೊತ್ತಿಗೂ.

*****

8. ಪ್ರೇಮ ಪಾಠ

ಹಠಾತ್ ಆಗಿ ಪ್ರೇಮ
ತನ್ನ ಎಲ್ಲ ಹತಾಶೆಗಳಿಂದ ವಾಪಸ್ಸಾಗಿ
ನಿಮ್ಮ ತೋಳಲ್ಲಿ ಹುದುಗಿ, ಮುಲುಕುತ್ತ

“ಇನ್ನು ಎಲ್ಲೂ ಹೋಗಲಾರೆ,
ಬೇರೆ ದೇಹಗಳೆಲ್ಲ ಬಹುತೇಕ ರಾಜಿ ಮಾತ್ರ”

ಎಂದರೆ ಆ ಸುಳ್ಳನ್ನ
ಥಟ್ ಅಂತ ಒಪ್ಪಿಕೊಂಡುಬಿಡುತ್ತೀರಿ ನೀವು
ಅಕಸ್ಮಾತ್ ಜಾಣರಾಗಿದ್ದರೆ.
(Love lesson)

*****

9. ಸಿನಿಕನ ಪ್ರೇಮಗೀತೆ

ಪ್ರೇಮದ ಕೆಲಸವೇ
ಬರೋದು, ಹೋಗೋದು
ಮತ್ತು
ಆಗಾಗ ನಿಲ್ಲೋದು
ಆದರೆ

ಮತ್ತೆ ವಾಪಸ್ ಬರೋದು ಮಾತ್ರ
ಆದ ಅನಾಹುತದ ಪರಿಶೀಲನೆಗೆ

*****

10. ವ್ಯಾಲಂಟೈನ್

ಒಬ್ಬರು ಇನ್ನೊಬ್ಬರ ಜೊತೆ
ಹೀಗೇ ಸದಾ
ಯಾವದೇ ಸಂಶಯ ಇಲ್ಲದೆ
ಇದ್ದುಬಿಡುವ ಆಸೆ ಉಳ್ಳವರು,
(ಮುಂದೆ ಆಗಬಹುದಾದ ದಣಿವಿನ ಬಗ್ಗೆ ಯಾವ ಕಳವಳವೂ ಇಲ್ಲದೆ)

ನನ್ನ ನಿನ್ನ ಹಾಗೆ ಇರುವವರೇ,

ರಾತ್ರಿ ಇಡೀ ಪಿಸುಮಾತಿನಲ್ಲಿ
ಲೋಕದ ಉಸಿರನ್ನು ಜೀವಂತವಾಗಿಟ್ಟವರು,

ಶಾಶ್ವತದ ಮಿತಿಗೆ ಗಾಬರಿಯಾಗಿ
ನೆಲಕ್ಕೆ ಅಂಗುಷ್ಟವ ಒತ್ತಿದವರು,

ಎರಡು ಉಸಿರುಗಳ ನಡುವಿನ ಅಂತರದ ವಿರುದ್ಧ
ಕೋರ್ಟಿನಲ್ಲಿ ಸಾಕ್ಷಿ ಹೇಳಿದವರು.
( A Valentine)

ಕನ್ನಡಕ್ಕೆ: ಚಿದಂಬರ ನರೇಂದ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...