Homeಮುಖಪುಟಬ್ರಿಟನ್ ಕವಿ ಬ್ರಯಾನ್ ಪ್ಯಾಟನ್ ಅವರ ಹತ್ತು ಪದ್ಯಗಳು

ಬ್ರಿಟನ್ ಕವಿ ಬ್ರಯಾನ್ ಪ್ಯಾಟನ್ ಅವರ ಹತ್ತು ಪದ್ಯಗಳು

- Advertisement -
- Advertisement -

1.ಬೆಳಕಿನವತಾರ

ನನ್ನ ಕನ್ನಡಿಯೊಳಗೆ ನಡೆದು ಬಂದವಳು
ಪ್ರೀತಿ ಮತ್ತು ಅದರ ಇತರ ಉತ್ಪನ್ನಗಳ ಬಗ್ಗೆ
ಚಕಾರ ಎತ್ತುವುದಿಲ್ಲ,
ಸುಮ್ಮನೇ ನಿಂತಿರುತ್ತಾಳೆ,
ತನ್ನ ಮೌನವನ್ನು ತಾನೇ ಸುಖಿಸುತ್ತಾಳೆ,
ನನಗೆ ಗೊತ್ತಿರುವ ಎಲ್ಲ ಋತುಗಳೂ
ತಾನೇ ಎಂಬಂತೆ ಉಟ್ಟು ಮೆರೆಯುತ್ತಾಳೆ,
ಒಂದು ಮೊಲೆಯಲ್ಲಿ ಕಾಡು
ಇನ್ನೊಂದರಲ್ಲಿ ಸಮುದ್ರ ಧರಿಸಿಕೊಂಡಿದ್ದಾಳೆ.

ಯಾವುದೇ ಬೇಡಿಕೆಯಿಲ್ಲ ಅವಳಲ್ಲಿ
ಒಮ್ಮೆ ನೋಡಿದರೆ ಸಾಕು.
ಎಷ್ಟೆಲ್ಲಾ ಬೇಡಿಕೆ.

ಮಾಟ ಎಲ್ಲರ ಹಾಗೇ
ಪ್ರೇಮಕ್ಕೆ ಬೇಕಾದಷ್ಟು, ಸಾಕಾದಷ್ಟು,
ನನ್ನ ಕಟ್ಟಿ ಹಾಕಿರುವುದು ಅದಲ್ಲ,
ಅದರಾಚೆಗಿನ ಬೆಳಗು.

ಒಮ್ಮೊಮ್ಮೆ ನನಗನಿಸುತ್ತದೆ
ನಾನೂ ಹಾಗೇ
ಬೆಳಕಿನವತಾರ.

*****

2. Reading between Graffiti

ಟಾಯ್ಲೆಟ್‌ನ ಗೋಡೆಯ ಮೇಲೆ
ಮಸುಕು ಮಸುಕಾದ ಗೀಚು ಬರಹ,
‘FUCK THE STRANGER TONIGHT’
ಕಳೆದ ವಾರ ಕಣ್ಣಿಗೆ ಬಿದ್ದಿರಲಿಲ್ಲ.
ಬಾಕಿ ಎಲ್ಲ ಲವ್ ಸಿಂಬಲ್‌ಗಳು,
ಕಾಮ ಪ್ರಲಾಪಗಳು, ಉತ್ಕಟ ಹಳಹಳಿಕೆಗಳು
ಈ ಅನಾಮಿಕನ ಸಲಹೆಯ ಮುಂದೆ
ಸಪ್ಪೆ, ಸಪ್ಪೆ ಎನಿಸುವಂತಿದ್ದವು.
ಕಳೆದುಕೊಂಡವರು, ಸಾಯದ ಆದರೆ ದಿನದಿನಕ್ಕೂ
ಬಾತುಕೊಳ್ಳುತ್ತಲೇ ಸಣ್ಣಗಾಗುವವರು,
ಅನುಕಂಪಕ್ಕಾಗಿ ತುಡಿಯುವ ಆದರೆ
ಟಾಯ್ಲೆಟ್‌ನ ಗೋಡೆಗಳ ಮುಂದೆ ದಿಢೀರನೇ ದಾರ್ಶನಿಕರಾಗುವವರು,
ಹೀಗೆ ಗೋಡೆ ಬರಹಗಳು
ಆಯಾ ಗುಂಪಿನ ಮನಸ್ಥಿತಿಯನ್ನು ಹಾಡುತ್ತವೆ.
ಅದೇನೇ ಇರಲಿ
ಈ ಬರಹ ಬರೆದವನಿಗೆ
ಒಂದಿಷ್ಟು ಕ್ರೆಡಿಟ್ ಕೊಡಲೇಬೇಕು,
ಕೊನೆ ಪಕ್ಷ ತಿಳಿದುಕೊಳ್ಳಲಿಕ್ಕಾದರೂ
’ಯಾಕೆ? ರಾತ್ರಿ, ಹೀಗೆ ಒಳಗೆ ಇಳಿದು
ತನ್ನ ಉನ್ಮತ್ತ ದಾಸರಿಂದ
ತಪ್ಪುತಪ್ಪಾಗಿ ಬರೆಸುತ್ತದೆ
ಸತ್ಯ ವಚನ’

*****

3. ದುರಂತ

ನಿನ್ನೆ
ನಡು ಮನೆಯಲ್ಲಿರುವ
ಬೆಂಕಿಗೂಡಿನ ಹಿಂದೆ
ಪೆನ್ಸಿಲ್‌ನಲ್ಲಿ ಬರೆದಿರುವ ಒಂದು ಚೀಟಿ ಸಿಕ್ಕಿತು.
ಎಷ್ಟು ಹಳೆಯದೋ ಗೊತ್ತಿಲ್ಲ
ದಿನದ ಗೋಜಲುಗಳ ನಡುವೆ
ತನ್ನ ಪಾಳಿಗಾಗಿ ಕಾತುರದಿಂದ ಕಾಯುವಂತಿತ್ತು.

’ಬಾಸ್ಟರ್ಡ್’ ಹೀಗೆ ಶುರುವಾಗಿತ್ತು
’ಮತ್ತೆಂದೂ ವಾಪಸ್ ಆಗಲಾರೆ
ಇದೇ ಕೊನೆಯ ರಾತ್ರಿ
ಶಾಶ್ವತವಾಗಿ ಬಿಟ್ಟು ಹೋಗುತ್ತಿದ್ದೇನೆ’

ಕೆಳಗೆ ಬರೆದಿರುವ ಹೆಸರನ್ನ
ನನಗೆ ಗುರುತಿಸಲಾಗಲಿಲ್ಲ
ಆ ಸಹಿಯನ್ನ ಮಸಿ ನುಂಗಿ ಹಾಕಿತ್ತು.

ಅದು, ನನಗೇ ಬರೆದಿರುವ ಚೀಟಿ
ಎನ್ನುವ ಗ್ಯಾರಂಟಿ ಕೂಡ ನನಗಿರಲಿಲ್ಲ.
ಬಹುಶಃ ಇರಬಹುದು
ಬಹುಶಃ ಇರಲಿಕ್ಕೂ ಇಲ್ಲ.
ನನಗೆ ಅದು ಗೊತ್ತಾಗಲೂ ಇಲ್ಲ
ನಾನು ಕಾಳಜಿ ಕೂಡ ಮಾಡಲಿಲ್ಲ.

ತಮಾಷೆ ಎಂದರೆ ಒಮ್ಮೊಮ್ಮೆ
ದುರಂತ ಹೀಗೂ ನಡೆದುಹೋಗುತ್ತದೆ
ನಗಿಸದೇ ಅಳಿಸದೆ.
(The tragedy)

*****

4. ಹುಲ್ಲಿನ ಗರಿ

ನಿನ್ನ ಫರ್ಮಾಯಿಶ್ ಕವಿತೆಯಾಗಿತ್ತು,
ನಾನು ಹುಲ್ಲಿನ ಗರಿ ಕೊಟ್ಟೆ.
ಉಹೂಂ,
ಕವಿತೆಯೇ ಬೇಕು ನಿನ್ನ ಹಟ,
ಹುಲ್ಲಿನ ಗರಿ ಸಾಕು ನನ್ನ ವಾದ.

ಮಂಜಿನಲ್ಲಿ ಮಿಂದ ಗರಿ ಎಲ್ಲಕ್ಕಿಂತ ಹೊಸದು
ನನ್ನ ಯಾವ ರೂಪಕಕ್ಕಿಂತಲೂ
ನನ್ನ ಸಮಜಾಯಿಷಿ,
ಆದರೂ ಅದು ಕವಿತೆಯಲ್ಲ…..
ಮುಂದುವರಿದಿದೆ ನಿನ್ನ ಹಟ.

ನಿನಗೆ ಸಿಟ್ಟು
ಹುಲ್ಲಿನ ಗರಿ ಸುಲಭ ಎಂಬ ನಂಬಿಕೆ
ಯಾರೂ ಕೊಡಬಲ್ಲರು ಎಂಬ ತಿಳಿವಳಿಕೆ.

ನಿನ್ನ ಫರ್ಮಾಯಿಶ್ ಕವಿತೆಯಾಗಿತ್ತು
ಹುಲ್ಲಿನ ಗರಿಯನ್ನು
ನಿನಗೆ ಒಪ್ಪಿಸಲಾಗದ ನನ್ನ ಅಸಹಾಯಕತೆಯ ಕುರಿತು
ನಾನೊಂದು ದುರಂತ ಕವಿತೆ ಬರೆದೆ
ಅದರಲ್ಲೊಂದು ಸಾಲಿತ್ತು
ನಿನ್ನ ಬಗ್ಗೆ
ವಯಸ್ಸಾಗುತ್ತಾ ಹೋದಂತೆ
ಹುಲ್ಲಿನ ಗರಿಯನ್ನು
ಒಪ್ಪಿಕೊಳ್ಳದ ನಿನ್ನ ಜಿದ್ದಿನ ಬಗ್ಗೆ.
(Blade of grass)

*****

5. What I need for the present

ಥ್ಯಾಂಕ್ಸ್, ಆದರೆ
ವಾಪಸ್ ತೆಗೆದುಕೊಂಡುಬಿಡು
ಈ ಉಂಗುರ ಮತ್ತು ಅದರ ಬಾಕ್ಸ್,
ಚಿಟ್ಟೆಯ ರೆಕ್ಕೆ ಮತ್ತು ಗಾಜಿನ ಮಣಿಗಳಿಂದ
ಅಲಂಕೃತವಾದ ಈ ಬಣ್ಣದ ಚಿತ್ರ
ಬೇಡ ನನಗೀಗ ಇವೆಲ್ಲ.
ದಯವಿಟ್ಟು, ಈ ಪುಸ್ತಕಗಳು,
ಪೋಸ್ಟ್ ಕಾರ್ಡುಗಳು,
ಜೇನು ಮೇಣದ ಕ್ಯಾಂಡಲ್‌ಗಳು,
ಹೂವಿನ ಕುಂಡಗಳು, ಪೇಂಟಿಂಗ್‌ಗಳು,
ಮತ್ತು ಈ ದುಬಾರಿ ಪೆನ್
ಎಲ್ಲವನ್ನೂ ವಾಪಸ್ ತೆಗೆದುಕೊಂಡುಬಿಡು.

ಹೀಗೆ ಹೇಳುವುದು ಸೌಜನ್ಯ ಅಲ್ಲ ನಿಜ, ಆದರೆ
ಯಾವುದನ್ನು ಕೊಡಲಾಗುವುದಿಲ್ಲವೋ
ಅದರ ಬದಲಿಗೆ ಕೊಡಲಾಗಿದೆ
ಎಂಬಂತಿವೆ ಈ ಉಡುಗೊರೆಗಳು.

ಹೀಗೆ ಹೇಳುವುದು ಸೌಜನ್ಯ ಅಲ್ಲ ನಿಜ, ಆದರೆ
ಈ ಕೋಣೆಯಲ್ಲಿ ಓಡಾಡುವಾಗಲೆಲ್ಲ
ಕಣ್ಣಿಗೆ ಬೀಳುವುದು ಈ ಉಡುಗೊರೆಗಳಲ್ಲ
ಅವುಗಳ ಮೇಲೆ ಧೂಳಿನಂತೆ ಕುಳಿತಿರುವ
ನಿನ್ನ ಗೈರು ಹಾಜರಿ ಮಾತ್ರ.

ದಯವಿಟ್ಟು ಕ್ಷಮಿಸು

ನೀನೇನೊ ಪ್ರೀತಿಯಿಂದಲೇ ಕೊಟ್ಟಿರಬಹುದು, ಆದರೆ
ಸದ್ಯ ಈ ಬೇಡಿಗಳ ತುರ್ತು ನನಗಿಲ್ಲ.

******

ಬ್ರಯಾನ್ ಪ್ಯಾಟನ್

6. She complicates her life

ಅದೇನೋ ಅವಳು
ಎಲ್ಲವನ್ನು ಸುಮ್ಮನೆ ಕಾಂಪ್ಲಿಕೇಟ್ ಮಾಡಿಕೊಳ್ಳುತ್ತಾಳೆ.
ಕೆಲ ಭೂತಗಳು ಅವಳ ದಿನಗಳನ್ನು
ಹಿಡಿದು ಅಲ್ಲಾಡಿಸುತ್ತಿವೆ.

ಪ್ರೇಮ ತಾನಾಗಿಯೇ ಬಂದು, ಕೈಹಿಡಿದು
’ನಿಲ್ಲು’ ಎಂದರೆ
’ಹೋಗು’ ಎಂದು ಕೇಳಿಸಿಕೊಂಡು
ಬೆನ್ನು ತಿರುವಿ ಹೊರಟುಬಿಡುತ್ತಾಳೆ.

ಎಲ್ಲ ಬಾಗಿಲುಗಳನ್ನ ಮುಚ್ಚಿಕೊಂಡಿದ್ದಾಳೆ
ನೋವು ಹೆಚ್ಚಾದಾಗಲೆಲ್ಲ ಹಿಮವಾಗಿಬಿಡುತ್ತಾಳೆ.

*****

7. ತುಂಬಿಕೊಂಡವಳು

ಮೊನ್ನೆ ನಿನ್ನ
ಕಿಟಕಿಯಲ್ಲಿ ನೋಡಿದೆ.
ಅದೇ ಚೆಲುವು, ಅದೇ ಹೊಂಗೂದಲಿನ ಜಡೆ
ಅವೇ ಅಲೌಕಿಕ ನೀಳ ಕಾಲುಗಳು.
ಓಡಿ ಬೀದಿಗೆ ಬಂದವನೇ
ನಿನ್ನ ಹೆಸರಿಟ್ಟು ಕೂಗಿದೆ.
ನೀನು ಹಿಂತಿರುಗಿ ನೋಡಿ
ನನ್ನ ಆತುರಕ್ಕೆ
’ಛೀ’ ಎಂದೆ.
ಹೌದು obviously ಆಕೆ ನೀನಾಗಿರಲಿಲ್ಲ

ಮೂವತ್ತು ವರ್ಷ ಹೇಗೆ ಕಳೆದುಹೋಯಿತೆಂಬುದನ್ನ

ನಾನೂ ಮರೆತುಬಿಟ್ಟಿದ್ದೆ.
ಕ್ಷಮೆ ಕೇಳಿದೆ

“ಸಾರಿ, ಬೇರೆ ಯಾರೋ ಅಂದುಕೊಂಡಿದ್ದೆ” ತೊದಲಿದೆ.
ಆದರೆ ಇದರಲ್ಲಿ ನನ್ನದೇನೂ ಅಂಥ ತಪ್ಪಿಲ್ಲ.
ನಾನು ನೋಡಿದ್ದು,
ನನ್ನೊಳಗೆ ಅಂದು ತುಂಬಿಕೊಂಡಿದ್ದ ನಿನ್ನನ್ನು
ಈ ಹೊತ್ತಿಗೂ.

*****

8. ಪ್ರೇಮ ಪಾಠ

ಹಠಾತ್ ಆಗಿ ಪ್ರೇಮ
ತನ್ನ ಎಲ್ಲ ಹತಾಶೆಗಳಿಂದ ವಾಪಸ್ಸಾಗಿ
ನಿಮ್ಮ ತೋಳಲ್ಲಿ ಹುದುಗಿ, ಮುಲುಕುತ್ತ

“ಇನ್ನು ಎಲ್ಲೂ ಹೋಗಲಾರೆ,
ಬೇರೆ ದೇಹಗಳೆಲ್ಲ ಬಹುತೇಕ ರಾಜಿ ಮಾತ್ರ”

ಎಂದರೆ ಆ ಸುಳ್ಳನ್ನ
ಥಟ್ ಅಂತ ಒಪ್ಪಿಕೊಂಡುಬಿಡುತ್ತೀರಿ ನೀವು
ಅಕಸ್ಮಾತ್ ಜಾಣರಾಗಿದ್ದರೆ.
(Love lesson)

*****

9. ಸಿನಿಕನ ಪ್ರೇಮಗೀತೆ

ಪ್ರೇಮದ ಕೆಲಸವೇ
ಬರೋದು, ಹೋಗೋದು
ಮತ್ತು
ಆಗಾಗ ನಿಲ್ಲೋದು
ಆದರೆ

ಮತ್ತೆ ವಾಪಸ್ ಬರೋದು ಮಾತ್ರ
ಆದ ಅನಾಹುತದ ಪರಿಶೀಲನೆಗೆ

*****

10. ವ್ಯಾಲಂಟೈನ್

ಒಬ್ಬರು ಇನ್ನೊಬ್ಬರ ಜೊತೆ
ಹೀಗೇ ಸದಾ
ಯಾವದೇ ಸಂಶಯ ಇಲ್ಲದೆ
ಇದ್ದುಬಿಡುವ ಆಸೆ ಉಳ್ಳವರು,
(ಮುಂದೆ ಆಗಬಹುದಾದ ದಣಿವಿನ ಬಗ್ಗೆ ಯಾವ ಕಳವಳವೂ ಇಲ್ಲದೆ)

ನನ್ನ ನಿನ್ನ ಹಾಗೆ ಇರುವವರೇ,

ರಾತ್ರಿ ಇಡೀ ಪಿಸುಮಾತಿನಲ್ಲಿ
ಲೋಕದ ಉಸಿರನ್ನು ಜೀವಂತವಾಗಿಟ್ಟವರು,

ಶಾಶ್ವತದ ಮಿತಿಗೆ ಗಾಬರಿಯಾಗಿ
ನೆಲಕ್ಕೆ ಅಂಗುಷ್ಟವ ಒತ್ತಿದವರು,

ಎರಡು ಉಸಿರುಗಳ ನಡುವಿನ ಅಂತರದ ವಿರುದ್ಧ
ಕೋರ್ಟಿನಲ್ಲಿ ಸಾಕ್ಷಿ ಹೇಳಿದವರು.
( A Valentine)

ಕನ್ನಡಕ್ಕೆ: ಚಿದಂಬರ ನರೇಂದ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...