Homeಸಾಹಿತ್ಯ-ಸಂಸ್ಕೃತಿಕವನಒಂದಿಷ್ಟು ಜಪಾನೀ ಹಾಯ್ಕುಗಳು

ಒಂದಿಷ್ಟು ಜಪಾನೀ ಹಾಯ್ಕುಗಳು

- Advertisement -
- Advertisement -

1.

ಹೂತು ಹೋದ ದೇಗುಲ,
ಸಾವಧಾನವಾಗಿ ಅಗೆಯುವವನ ಜೊತೆ
ಮಾತ್ರ ಹಂಚಿಕೊಳ್ಳುತ್ತದೆ,
ತನ್ನ ಕರುಣಾಜನಕ ಕಥೆಯನ್ನ.
– Basho

2.

ತೊಟ್ಟಿಕ್ಕುತ್ತಿರುವ
ಮಂಜಿನ ಹನಿಗಳನ್ನ ನೋಡಿದರೆ,
ಹೇಗಾದರೂ ಮಾಡಿ
ತೊಳೆದುಬಿಡಬೇಕು ಅನಿಸುತ್ತದೆ,
ಈ ಹೊಲಸು ಜಗತ್ತನ್ನೊಮ್ಮೆ.
– Basho

3.

ಗಜ್ಜರಿ ಕೀಳುತ್ತಿರುವವನು
ದಾರಿ ತೋರಿಸುತ್ತಾನೆ,
ಗಜ್ಜರಿಯಿಂದಲೇ.
– Issa

4.

ಚಳಿಗಾಲದ ಸಂಜೆಗೆ
ಒಂದಿಷ್ಟು ಸಣ್ಣ ಹೊಲಿಗೆ,
ಬೊಂಬೆಯ ಮುಖದಲ್ಲಿ
ಅರಳಿದ ನಗು.
– Ingrid Kunschke

5.

ಹಳೆಯ ತಪ್ಪುಗಳು ಮರುಕಳಿಸುತ್ತಿವೆ
ಹೊಸ ತಪ್ಪುಗಳು ಸೃಷ್ಟಿಯಾಗುತ್ತಿವೆ ಎಂದರೆ
ವಸಂತ ಬಂದಿದೆ ಎಂದೇ ಅರ್ಥ.
– Issa

6.

ಚಳಿಗಾಲದ ಚಂದ್ರನ ಬೆಳಕು
ಒಂದು ನೆರಳಿಗೂ
ಕೈಗಳಿಲ್ಲ.
– Anon

7.

ಮೊದಲೇ ದೀರ್ಘರಾತ್ರಿ,
ಬೊಗಳಿ ಬೊಗಳಿ
ಇನ್ನೂ ಜಗ್ಗಿಬಿಟ್ಟಿತು ನಾಯಿ
– Santoka

8.

ಎಲ್ಲೆಲ್ಲಿ ಮನುಷ್ಯರಿದ್ದಾರೋ
ಅಲ್ಲೆಲ್ಲ ನೊಣಗಳಿವೆ,
ಅಲ್ಲೆಲ್ಲ ಬುದ್ಧರಿದ್ದಾರೆ.
– Issa

9.

ಹುಳುಗಳ ಬಗ್ಗೆ,
ಕೆಲವರು ಹಾಡಬಹುದು,
ಕೆಲವರಿಗೆ ಆಗುವುದಿಲ್ಲ.
– Issa

10.

ಕಾಗೆಗಳನ್ನು ನಕಲು ಮಾಡುವವರು
ಚೆನ್ನಾಗಿ ಕಾಣಿಸುತ್ತಾರೆ,
ಕಾಗೆಗಳಿಗಿಂತ.
– Issa

11.

ಹೂವಿನ ಪಕಳೆಗಳಂತೆ ಕಾಣುವ
ನಿನ್ನೆಯ ಹಿಮ
ಮತ್ತೆ ನೀರಾಗುತ್ತಿದೆ ಕರಗಿ.
– Gozan

12.

ವಸಂತ ನನ್ನ ಪ್ರಕಾರ
ಹೊತ್ತಿಗೆ ಮೊದಲು ಅರಳಿದ ಹೂಗಳು
ಹೃದಯದಲ್ಲಿ.
– Sumitaku Kenshin

13.

ಯಾಕೆ ಇಷ್ಟು ಅವಸರ?
ಎಲ್ಲಿಗೆ ಹೋದರೂ
ಕಾಣಿಸುತ್ತಾನೆ ಅದೇ ಚಂದ್ರ
ಇಂದು.
– Izumi Shikibu

14.

ಎಲ್ಲವೂ ಖಾಲಿ ಎಂದಮೇಲೆ
ಧೂಳು ಬೀಳಲು ಜಾಗ ಎಲ್ಲಿ?
– Hui Neng

15.

ಸೂರ್ಯ ಮುಳುಗಿಹೋದರೂ
ಸಂಜೆಯ ಬೆಳಕು
ಉಳಿದುಕೊಂಡಿದೆ ಇನ್ನೂ ಎಲೆಗಳಲ್ಲಿ
– Nijo Yoshimoto

16.

ಸೇತುವೆ ದಾಟುತ್ತಿದ್ದಾನೆ
ಸೇತುವೆಯನ್ನ,
ಆದರೆ ನದಿಯನ್ನಲ್ಲ.
– Mahasattva Fu

17.

ಒಂಟಿತನ
ಆ ಗಾಢ ಸುಂದರ ಬಣ್ಣ,
ಯಾವುದನ್ನ ಬಣ್ಣಿಸುವುದು
ಅಸಾಧ್ಯವೋ ಅದು.
– Jakuren

18.

ಚಂದ್ರನ ಬೆಳಕು
ಸರಿಯುತ್ತಿದೆ ಪೂರ್ವದತ್ತ,
ಹೂವಿನ ನೆರಳು
ತೆವಳುತ್ತಿದೆ ಪಶ್ಚಿಮದತ್ತ.
– Yosa Buson

19.

ಅಂತಃಕರಣದಿಂದ ನಾನು
ಯಾವುದನ್ನು ಮುಟ್ಟಿದರೂ
ಚುಚ್ಚುತ್ತದೆ
ಕವಳಿ ಕಂಟಿಯಂತೆ.
– Issa

20.

ಬೇಸಿಗೆ ನದಿ,
ಸೇತುವೆಯಿದ್ದರೂ
ನೀರಿನಲ್ಲಿ ಹೆಜ್ಜೆ ಹಾಕುತ್ತಿದೆ
ನನ್ನ ಕುದುರೆ.
– Massoka Shikhi

21.

ದೀಪ ಆರಿದಮೇಲೆ,
ಒಳಗೆ ಬಂದವು
ಕೆಲವು ತಂಪು ನಕ್ಷತ್ರಗಳು
ಕಿಟಕಿ ದಾಟಿ.
– Natsume Soseki

22.

ಆಗಿಂದಾಗ್ಗೆ ಮೋಡಗಳು,
ವಿರಾಮ ನೀಡುತ್ತಿವೆ
ಚಂದ್ರನ ನೋಡುವ ಕಣ್ಣುಗಳಿಗೆ.
– Basho

23.

ಶರತ್ಕಾಲದ ಮುಂಜಾವು,
ನನಗೆ ನನ್ನ ಅಪ್ಪನ ಮುಖ ತೋರಿಸಿತು
ನಾನು ದಿಟ್ಟಿಸಿದ ಕನ್ನಡಿ.
– Murakami Kijo

24.

ಜೀರುಂಡೆಯ ಹಾಡಿನಲ್ಲಿ ಶಬ್ದಗಳಿಲ್ಲ
ಆದರೂ ಯಾಕೋ
ಧ್ವನಿಸುತ್ತಿದೆ ದುಃಖದ ಹಾಡಿನಂತೆ.
– Izumi Shikibu

25.

ಸ್ವರ್ಗ ಮತ್ತು ನರಕ
ಏನೂ ಮಾಡುವುದಿಲ್ಲವಾದರೂ
ಅವು ಮಾಡದಿರುವುದು
ಏನೂ ಇಲ್ಲ.
– Chuang Tzu

26.

ಮೌನ
ಹೃದಯದೊಳಗೆ ದಾಖಲಾಗುತ್ತಿದೆ,
ಆಕಾಶದಲ್ಲಿ ಬಿದಿಗೆಯ ಚಂದ್ರ.
– Chiyo – ni

27.

ಕೊರೆಯುವ ಚಂದ್ರ,
ಚಪ್ಪಲಿ ಕೆಳಗೆ ಮುಟ್ಟಲು ಬಂದ
ಬೆಣಚು ಕಲ್ಲುಗಳು.
– Yosa Buson

28.

ಬೆಟ್ಟದ ಕೆಳಗೆ ಹಲವಾರು ದಾರಿಗಳು,
ಆದರೆ ಬೆಟ್ಟದ ತುದಿಯಿಂದ
ಒಬ್ಬ ಪ್ರಖರ ಚಂದ್ರ ಮಾತ್ರ ಕಂಡ.
– Ikkyu

29.

ಮಸುಕಾದ ಚಂದ್ರನ ಕೆಳಗೆ,
ನನ್ನ ತೋಳುಗಳೇ ನನ್ನ ದಿಂಬು
ನಾನೆಂದರೆ ಪ್ರೀತಿ ನನಗೆ.
– Yosa Buson

30.

ಅಲೆಗಳಿಲ್ಲ ಗಾಳಿಯಿಲ್ಲ
ಖಾಲಿ ದೋಣಿಯ ತುಂಬ
ಉಕ್ಕಿ ಹರಿದ ಬೆಳದಿಂಗಳು.
– Dogen Zenji

31.

ಸ್ವಂತದ್ದು ಏನೂ ಇಲ್ಲದಾಗ
ಎಲ್ಲ ದಾರಿಯೂ
ನಿನ್ನ ಮನೆಯ ದಾರಿಯೇ
– Muso Soseki

32.

ಹರಿದಂತೆಲ್ಲ ತಿಳಿಯಾಗುತ್ತಿದೆ
ರಾಡಿ ನೀರು
– Taneda Santoka

33.

ಜೀರುಂಡೆ!
ನೀನು ಕಾರಣ ಅಲ್ಲ ಆದರೂ
ಹಗಲು ಸಾಗುತ್ತಿದೆ ಕತ್ತಲಿನತ್ತ.
– Den Sute-jo

34.

ಚೆರ್ರಿ ಮರ ಹೂ ಬಿಟ್ಟಾಗ
ಹಕ್ಕಿಗಳಿಗೆ ಎರಡು ಕಾಲುಗಳು
ಕುದುರೆಗಳಿಗೆ ನಾಲ್ಕು.
– Uejima Onitsura

35.

ಸಿದ್ಧರಾಗಿ, ಸಾಯಲು ಸಿದ್ಧರಾಗಿ
ಒಂದೇ ಸಮನೇ ಕೂಗುತ್ತಿವೆ
ಚೆರ್ರಿ ಹೂಗಳು.
– Issa

36.

ಸಮಾಧಾನದ ಸಂಜೆ

ಮೀನಿನ ದೋಣಿ ಹಿಂತಿರುಗಿದೆ,

ಸೂರ್ಯನನ್ನು ತುಂಬಿಕೊAಡು.

– Horiuchi

37.

ಕರಗುವ ವಸ್ತುಗಳೆಲ್ಲ

ಅಮಾಯಕರಂತೆ ವರ್ತಿಸುತ್ತಿವೆ,

ವಸಂತದ ಅಳುಕು.

– Tagami Kikusha

38.

ರಾತ್ರಿಯಿಡೀ ನಿದ್ದೆಯಿಲ್ಲ,

ತುಂಬಿದ ಮಡಿಕೆ

ಬಿರುಕು ಬಿಡುವ ಸದ್ದಿಗೆ.

– ಬಾಶೋ

39.

ಶರತ್ಕಾಲ ಮುಗಿಯುತ್ತ ಬಂದರೂ

ಇನ್ನೂ ಚಿಟ್ಟೆಯಾಗಿಲ್ಲ,

ಈ ಕಂಬಳಿಹುಳು.

– ಬಾಶೋ

40.

ತಂಪು ಚಳಿಗಾಲದ ರಾತ್ರಿಗೆ

ಒಳ್ಳೆಯ ಬೆಂಕಿ ಆಗಬಹುದು,

ಹಳೆಯ ಕಟ್ಟಿಗೆ ತಲೆಯ ಬುದ್ಧ.

– ಬುಸಾನ್

41.

ಬಿರುಸಾಗಿ ಹನೀತಾ ಇರೋದು

ಕ್ಷಣದಲ್ಲೇ ಹಿಮವಾಗೋದು,

ಚಳಿಗಾಲದ ವಿಚಿತ್ರ ವಿನೋದ.

– ಬಾಶೋ

42.

ಮುಂಗಾರು ಮಳೆಯಲ್ಲಿ

ರೌದ್ರಾವತಾರ ತಾಳುತ್ತವೆ,

ಹೆಸರಿಲ್ಲದ ನದಿಗಳು ಕೂಡ.

– ಬುಸಾನ್

43.

ಮತ್ತು ಬರಿಸುವ ಹೂಗಳು,

ದಾರಿ ತಪ್ಪುವುದು

ಪ್ರಯಾಣದ ಒಂದು ಭಾಗ.

– Inahata Teiko

44.

ಹೋಗತ್ತೆ, ಬರತ್ತೆ,

ಪ್ರೀತಿ

ಒಂದು ಬೆಕ್ಕಿನಂತೆ.

– Issa

45.

ಕವಿತೆ ನಮ್ಮ ನಡುವೆ

ಅಸಾಧ್ಯವಾದ

ಒಂದು ಸಂಭಾಷಣೆ.

– Santoka

ಚಿದಂಬರ ನರೇಂದ್ರ

ಚಿದಂಬರ ನರೇಂದ್ರ
ಕವಿ, ಅನುವಾದಕ. ’ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ’ಹೂಬಾಣ’, ’ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...