Homeಸಾಹಿತ್ಯ-ಸಂಸ್ಕೃತಿಕವನಒಂದಿಷ್ಟು ಜಪಾನೀ ಹಾಯ್ಕುಗಳು

ಒಂದಿಷ್ಟು ಜಪಾನೀ ಹಾಯ್ಕುಗಳು

- Advertisement -
- Advertisement -

1.

ಹೂತು ಹೋದ ದೇಗುಲ,
ಸಾವಧಾನವಾಗಿ ಅಗೆಯುವವನ ಜೊತೆ
ಮಾತ್ರ ಹಂಚಿಕೊಳ್ಳುತ್ತದೆ,
ತನ್ನ ಕರುಣಾಜನಕ ಕಥೆಯನ್ನ.
– Basho

2.

ತೊಟ್ಟಿಕ್ಕುತ್ತಿರುವ
ಮಂಜಿನ ಹನಿಗಳನ್ನ ನೋಡಿದರೆ,
ಹೇಗಾದರೂ ಮಾಡಿ
ತೊಳೆದುಬಿಡಬೇಕು ಅನಿಸುತ್ತದೆ,
ಈ ಹೊಲಸು ಜಗತ್ತನ್ನೊಮ್ಮೆ.
– Basho

3.

ಗಜ್ಜರಿ ಕೀಳುತ್ತಿರುವವನು
ದಾರಿ ತೋರಿಸುತ್ತಾನೆ,
ಗಜ್ಜರಿಯಿಂದಲೇ.
– Issa

4.

ಚಳಿಗಾಲದ ಸಂಜೆಗೆ
ಒಂದಿಷ್ಟು ಸಣ್ಣ ಹೊಲಿಗೆ,
ಬೊಂಬೆಯ ಮುಖದಲ್ಲಿ
ಅರಳಿದ ನಗು.
– Ingrid Kunschke

5.

ಹಳೆಯ ತಪ್ಪುಗಳು ಮರುಕಳಿಸುತ್ತಿವೆ
ಹೊಸ ತಪ್ಪುಗಳು ಸೃಷ್ಟಿಯಾಗುತ್ತಿವೆ ಎಂದರೆ
ವಸಂತ ಬಂದಿದೆ ಎಂದೇ ಅರ್ಥ.
– Issa

6.

ಚಳಿಗಾಲದ ಚಂದ್ರನ ಬೆಳಕು
ಒಂದು ನೆರಳಿಗೂ
ಕೈಗಳಿಲ್ಲ.
– Anon

7.

ಮೊದಲೇ ದೀರ್ಘರಾತ್ರಿ,
ಬೊಗಳಿ ಬೊಗಳಿ
ಇನ್ನೂ ಜಗ್ಗಿಬಿಟ್ಟಿತು ನಾಯಿ
– Santoka

8.

ಎಲ್ಲೆಲ್ಲಿ ಮನುಷ್ಯರಿದ್ದಾರೋ
ಅಲ್ಲೆಲ್ಲ ನೊಣಗಳಿವೆ,
ಅಲ್ಲೆಲ್ಲ ಬುದ್ಧರಿದ್ದಾರೆ.
– Issa

9.

ಹುಳುಗಳ ಬಗ್ಗೆ,
ಕೆಲವರು ಹಾಡಬಹುದು,
ಕೆಲವರಿಗೆ ಆಗುವುದಿಲ್ಲ.
– Issa

10.

ಕಾಗೆಗಳನ್ನು ನಕಲು ಮಾಡುವವರು
ಚೆನ್ನಾಗಿ ಕಾಣಿಸುತ್ತಾರೆ,
ಕಾಗೆಗಳಿಗಿಂತ.
– Issa

11.

ಹೂವಿನ ಪಕಳೆಗಳಂತೆ ಕಾಣುವ
ನಿನ್ನೆಯ ಹಿಮ
ಮತ್ತೆ ನೀರಾಗುತ್ತಿದೆ ಕರಗಿ.
– Gozan

12.

ವಸಂತ ನನ್ನ ಪ್ರಕಾರ
ಹೊತ್ತಿಗೆ ಮೊದಲು ಅರಳಿದ ಹೂಗಳು
ಹೃದಯದಲ್ಲಿ.
– Sumitaku Kenshin

13.

ಯಾಕೆ ಇಷ್ಟು ಅವಸರ?
ಎಲ್ಲಿಗೆ ಹೋದರೂ
ಕಾಣಿಸುತ್ತಾನೆ ಅದೇ ಚಂದ್ರ
ಇಂದು.
– Izumi Shikibu

14.

ಎಲ್ಲವೂ ಖಾಲಿ ಎಂದಮೇಲೆ
ಧೂಳು ಬೀಳಲು ಜಾಗ ಎಲ್ಲಿ?
– Hui Neng

15.

ಸೂರ್ಯ ಮುಳುಗಿಹೋದರೂ
ಸಂಜೆಯ ಬೆಳಕು
ಉಳಿದುಕೊಂಡಿದೆ ಇನ್ನೂ ಎಲೆಗಳಲ್ಲಿ
– Nijo Yoshimoto

16.

ಸೇತುವೆ ದಾಟುತ್ತಿದ್ದಾನೆ
ಸೇತುವೆಯನ್ನ,
ಆದರೆ ನದಿಯನ್ನಲ್ಲ.
– Mahasattva Fu

17.

ಒಂಟಿತನ
ಆ ಗಾಢ ಸುಂದರ ಬಣ್ಣ,
ಯಾವುದನ್ನ ಬಣ್ಣಿಸುವುದು
ಅಸಾಧ್ಯವೋ ಅದು.
– Jakuren

18.

ಚಂದ್ರನ ಬೆಳಕು
ಸರಿಯುತ್ತಿದೆ ಪೂರ್ವದತ್ತ,
ಹೂವಿನ ನೆರಳು
ತೆವಳುತ್ತಿದೆ ಪಶ್ಚಿಮದತ್ತ.
– Yosa Buson

19.

ಅಂತಃಕರಣದಿಂದ ನಾನು
ಯಾವುದನ್ನು ಮುಟ್ಟಿದರೂ
ಚುಚ್ಚುತ್ತದೆ
ಕವಳಿ ಕಂಟಿಯಂತೆ.
– Issa

20.

ಬೇಸಿಗೆ ನದಿ,
ಸೇತುವೆಯಿದ್ದರೂ
ನೀರಿನಲ್ಲಿ ಹೆಜ್ಜೆ ಹಾಕುತ್ತಿದೆ
ನನ್ನ ಕುದುರೆ.
– Massoka Shikhi

21.

ದೀಪ ಆರಿದಮೇಲೆ,
ಒಳಗೆ ಬಂದವು
ಕೆಲವು ತಂಪು ನಕ್ಷತ್ರಗಳು
ಕಿಟಕಿ ದಾಟಿ.
– Natsume Soseki

22.

ಆಗಿಂದಾಗ್ಗೆ ಮೋಡಗಳು,
ವಿರಾಮ ನೀಡುತ್ತಿವೆ
ಚಂದ್ರನ ನೋಡುವ ಕಣ್ಣುಗಳಿಗೆ.
– Basho

23.

ಶರತ್ಕಾಲದ ಮುಂಜಾವು,
ನನಗೆ ನನ್ನ ಅಪ್ಪನ ಮುಖ ತೋರಿಸಿತು
ನಾನು ದಿಟ್ಟಿಸಿದ ಕನ್ನಡಿ.
– Murakami Kijo

24.

ಜೀರುಂಡೆಯ ಹಾಡಿನಲ್ಲಿ ಶಬ್ದಗಳಿಲ್ಲ
ಆದರೂ ಯಾಕೋ
ಧ್ವನಿಸುತ್ತಿದೆ ದುಃಖದ ಹಾಡಿನಂತೆ.
– Izumi Shikibu

25.

ಸ್ವರ್ಗ ಮತ್ತು ನರಕ
ಏನೂ ಮಾಡುವುದಿಲ್ಲವಾದರೂ
ಅವು ಮಾಡದಿರುವುದು
ಏನೂ ಇಲ್ಲ.
– Chuang Tzu

26.

ಮೌನ
ಹೃದಯದೊಳಗೆ ದಾಖಲಾಗುತ್ತಿದೆ,
ಆಕಾಶದಲ್ಲಿ ಬಿದಿಗೆಯ ಚಂದ್ರ.
– Chiyo – ni

27.

ಕೊರೆಯುವ ಚಂದ್ರ,
ಚಪ್ಪಲಿ ಕೆಳಗೆ ಮುಟ್ಟಲು ಬಂದ
ಬೆಣಚು ಕಲ್ಲುಗಳು.
– Yosa Buson

28.

ಬೆಟ್ಟದ ಕೆಳಗೆ ಹಲವಾರು ದಾರಿಗಳು,
ಆದರೆ ಬೆಟ್ಟದ ತುದಿಯಿಂದ
ಒಬ್ಬ ಪ್ರಖರ ಚಂದ್ರ ಮಾತ್ರ ಕಂಡ.
– Ikkyu

29.

ಮಸುಕಾದ ಚಂದ್ರನ ಕೆಳಗೆ,
ನನ್ನ ತೋಳುಗಳೇ ನನ್ನ ದಿಂಬು
ನಾನೆಂದರೆ ಪ್ರೀತಿ ನನಗೆ.
– Yosa Buson

30.

ಅಲೆಗಳಿಲ್ಲ ಗಾಳಿಯಿಲ್ಲ
ಖಾಲಿ ದೋಣಿಯ ತುಂಬ
ಉಕ್ಕಿ ಹರಿದ ಬೆಳದಿಂಗಳು.
– Dogen Zenji

31.

ಸ್ವಂತದ್ದು ಏನೂ ಇಲ್ಲದಾಗ
ಎಲ್ಲ ದಾರಿಯೂ
ನಿನ್ನ ಮನೆಯ ದಾರಿಯೇ
– Muso Soseki

32.

ಹರಿದಂತೆಲ್ಲ ತಿಳಿಯಾಗುತ್ತಿದೆ
ರಾಡಿ ನೀರು
– Taneda Santoka

33.

ಜೀರುಂಡೆ!
ನೀನು ಕಾರಣ ಅಲ್ಲ ಆದರೂ
ಹಗಲು ಸಾಗುತ್ತಿದೆ ಕತ್ತಲಿನತ್ತ.
– Den Sute-jo

34.

ಚೆರ್ರಿ ಮರ ಹೂ ಬಿಟ್ಟಾಗ
ಹಕ್ಕಿಗಳಿಗೆ ಎರಡು ಕಾಲುಗಳು
ಕುದುರೆಗಳಿಗೆ ನಾಲ್ಕು.
– Uejima Onitsura

35.

ಸಿದ್ಧರಾಗಿ, ಸಾಯಲು ಸಿದ್ಧರಾಗಿ
ಒಂದೇ ಸಮನೇ ಕೂಗುತ್ತಿವೆ
ಚೆರ್ರಿ ಹೂಗಳು.
– Issa

36.

ಸಮಾಧಾನದ ಸಂಜೆ

ಮೀನಿನ ದೋಣಿ ಹಿಂತಿರುಗಿದೆ,

ಸೂರ್ಯನನ್ನು ತುಂಬಿಕೊAಡು.

– Horiuchi

37.

ಕರಗುವ ವಸ್ತುಗಳೆಲ್ಲ

ಅಮಾಯಕರಂತೆ ವರ್ತಿಸುತ್ತಿವೆ,

ವಸಂತದ ಅಳುಕು.

– Tagami Kikusha

38.

ರಾತ್ರಿಯಿಡೀ ನಿದ್ದೆಯಿಲ್ಲ,

ತುಂಬಿದ ಮಡಿಕೆ

ಬಿರುಕು ಬಿಡುವ ಸದ್ದಿಗೆ.

– ಬಾಶೋ

39.

ಶರತ್ಕಾಲ ಮುಗಿಯುತ್ತ ಬಂದರೂ

ಇನ್ನೂ ಚಿಟ್ಟೆಯಾಗಿಲ್ಲ,

ಈ ಕಂಬಳಿಹುಳು.

– ಬಾಶೋ

40.

ತಂಪು ಚಳಿಗಾಲದ ರಾತ್ರಿಗೆ

ಒಳ್ಳೆಯ ಬೆಂಕಿ ಆಗಬಹುದು,

ಹಳೆಯ ಕಟ್ಟಿಗೆ ತಲೆಯ ಬುದ್ಧ.

– ಬುಸಾನ್

41.

ಬಿರುಸಾಗಿ ಹನೀತಾ ಇರೋದು

ಕ್ಷಣದಲ್ಲೇ ಹಿಮವಾಗೋದು,

ಚಳಿಗಾಲದ ವಿಚಿತ್ರ ವಿನೋದ.

– ಬಾಶೋ

42.

ಮುಂಗಾರು ಮಳೆಯಲ್ಲಿ

ರೌದ್ರಾವತಾರ ತಾಳುತ್ತವೆ,

ಹೆಸರಿಲ್ಲದ ನದಿಗಳು ಕೂಡ.

– ಬುಸಾನ್

43.

ಮತ್ತು ಬರಿಸುವ ಹೂಗಳು,

ದಾರಿ ತಪ್ಪುವುದು

ಪ್ರಯಾಣದ ಒಂದು ಭಾಗ.

– Inahata Teiko

44.

ಹೋಗತ್ತೆ, ಬರತ್ತೆ,

ಪ್ರೀತಿ

ಒಂದು ಬೆಕ್ಕಿನಂತೆ.

– Issa

45.

ಕವಿತೆ ನಮ್ಮ ನಡುವೆ

ಅಸಾಧ್ಯವಾದ

ಒಂದು ಸಂಭಾಷಣೆ.

– Santoka

ಚಿದಂಬರ ನರೇಂದ್ರ

ಚಿದಂಬರ ನರೇಂದ್ರ
ಕವಿ, ಅನುವಾದಕ. ’ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ’ಹೂಬಾಣ’, ’ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...