Homeಸಾಹಿತ್ಯ-ಸಂಸ್ಕೃತಿಕವನಒಂದಿಷ್ಟು ಜಪಾನೀ ಹಾಯ್ಕುಗಳು

ಒಂದಿಷ್ಟು ಜಪಾನೀ ಹಾಯ್ಕುಗಳು

- Advertisement -
- Advertisement -

1.

ಹೂತು ಹೋದ ದೇಗುಲ,
ಸಾವಧಾನವಾಗಿ ಅಗೆಯುವವನ ಜೊತೆ
ಮಾತ್ರ ಹಂಚಿಕೊಳ್ಳುತ್ತದೆ,
ತನ್ನ ಕರುಣಾಜನಕ ಕಥೆಯನ್ನ.
– Basho

2.

ತೊಟ್ಟಿಕ್ಕುತ್ತಿರುವ
ಮಂಜಿನ ಹನಿಗಳನ್ನ ನೋಡಿದರೆ,
ಹೇಗಾದರೂ ಮಾಡಿ
ತೊಳೆದುಬಿಡಬೇಕು ಅನಿಸುತ್ತದೆ,
ಈ ಹೊಲಸು ಜಗತ್ತನ್ನೊಮ್ಮೆ.
– Basho

3.

ಗಜ್ಜರಿ ಕೀಳುತ್ತಿರುವವನು
ದಾರಿ ತೋರಿಸುತ್ತಾನೆ,
ಗಜ್ಜರಿಯಿಂದಲೇ.
– Issa

4.

ಚಳಿಗಾಲದ ಸಂಜೆಗೆ
ಒಂದಿಷ್ಟು ಸಣ್ಣ ಹೊಲಿಗೆ,
ಬೊಂಬೆಯ ಮುಖದಲ್ಲಿ
ಅರಳಿದ ನಗು.
– Ingrid Kunschke

5.

ಹಳೆಯ ತಪ್ಪುಗಳು ಮರುಕಳಿಸುತ್ತಿವೆ
ಹೊಸ ತಪ್ಪುಗಳು ಸೃಷ್ಟಿಯಾಗುತ್ತಿವೆ ಎಂದರೆ
ವಸಂತ ಬಂದಿದೆ ಎಂದೇ ಅರ್ಥ.
– Issa

6.

ಚಳಿಗಾಲದ ಚಂದ್ರನ ಬೆಳಕು
ಒಂದು ನೆರಳಿಗೂ
ಕೈಗಳಿಲ್ಲ.
– Anon

7.

ಮೊದಲೇ ದೀರ್ಘರಾತ್ರಿ,
ಬೊಗಳಿ ಬೊಗಳಿ
ಇನ್ನೂ ಜಗ್ಗಿಬಿಟ್ಟಿತು ನಾಯಿ
– Santoka

8.

ಎಲ್ಲೆಲ್ಲಿ ಮನುಷ್ಯರಿದ್ದಾರೋ
ಅಲ್ಲೆಲ್ಲ ನೊಣಗಳಿವೆ,
ಅಲ್ಲೆಲ್ಲ ಬುದ್ಧರಿದ್ದಾರೆ.
– Issa

9.

ಹುಳುಗಳ ಬಗ್ಗೆ,
ಕೆಲವರು ಹಾಡಬಹುದು,
ಕೆಲವರಿಗೆ ಆಗುವುದಿಲ್ಲ.
– Issa

10.

ಕಾಗೆಗಳನ್ನು ನಕಲು ಮಾಡುವವರು
ಚೆನ್ನಾಗಿ ಕಾಣಿಸುತ್ತಾರೆ,
ಕಾಗೆಗಳಿಗಿಂತ.
– Issa

11.

ಹೂವಿನ ಪಕಳೆಗಳಂತೆ ಕಾಣುವ
ನಿನ್ನೆಯ ಹಿಮ
ಮತ್ತೆ ನೀರಾಗುತ್ತಿದೆ ಕರಗಿ.
– Gozan

12.

ವಸಂತ ನನ್ನ ಪ್ರಕಾರ
ಹೊತ್ತಿಗೆ ಮೊದಲು ಅರಳಿದ ಹೂಗಳು
ಹೃದಯದಲ್ಲಿ.
– Sumitaku Kenshin

13.

ಯಾಕೆ ಇಷ್ಟು ಅವಸರ?
ಎಲ್ಲಿಗೆ ಹೋದರೂ
ಕಾಣಿಸುತ್ತಾನೆ ಅದೇ ಚಂದ್ರ
ಇಂದು.
– Izumi Shikibu

14.

ಎಲ್ಲವೂ ಖಾಲಿ ಎಂದಮೇಲೆ
ಧೂಳು ಬೀಳಲು ಜಾಗ ಎಲ್ಲಿ?
– Hui Neng

15.

ಸೂರ್ಯ ಮುಳುಗಿಹೋದರೂ
ಸಂಜೆಯ ಬೆಳಕು
ಉಳಿದುಕೊಂಡಿದೆ ಇನ್ನೂ ಎಲೆಗಳಲ್ಲಿ
– Nijo Yoshimoto

16.

ಸೇತುವೆ ದಾಟುತ್ತಿದ್ದಾನೆ
ಸೇತುವೆಯನ್ನ,
ಆದರೆ ನದಿಯನ್ನಲ್ಲ.
– Mahasattva Fu

17.

ಒಂಟಿತನ
ಆ ಗಾಢ ಸುಂದರ ಬಣ್ಣ,
ಯಾವುದನ್ನ ಬಣ್ಣಿಸುವುದು
ಅಸಾಧ್ಯವೋ ಅದು.
– Jakuren

18.

ಚಂದ್ರನ ಬೆಳಕು
ಸರಿಯುತ್ತಿದೆ ಪೂರ್ವದತ್ತ,
ಹೂವಿನ ನೆರಳು
ತೆವಳುತ್ತಿದೆ ಪಶ್ಚಿಮದತ್ತ.
– Yosa Buson

19.

ಅಂತಃಕರಣದಿಂದ ನಾನು
ಯಾವುದನ್ನು ಮುಟ್ಟಿದರೂ
ಚುಚ್ಚುತ್ತದೆ
ಕವಳಿ ಕಂಟಿಯಂತೆ.
– Issa

20.

ಬೇಸಿಗೆ ನದಿ,
ಸೇತುವೆಯಿದ್ದರೂ
ನೀರಿನಲ್ಲಿ ಹೆಜ್ಜೆ ಹಾಕುತ್ತಿದೆ
ನನ್ನ ಕುದುರೆ.
– Massoka Shikhi

21.

ದೀಪ ಆರಿದಮೇಲೆ,
ಒಳಗೆ ಬಂದವು
ಕೆಲವು ತಂಪು ನಕ್ಷತ್ರಗಳು
ಕಿಟಕಿ ದಾಟಿ.
– Natsume Soseki

22.

ಆಗಿಂದಾಗ್ಗೆ ಮೋಡಗಳು,
ವಿರಾಮ ನೀಡುತ್ತಿವೆ
ಚಂದ್ರನ ನೋಡುವ ಕಣ್ಣುಗಳಿಗೆ.
– Basho

23.

ಶರತ್ಕಾಲದ ಮುಂಜಾವು,
ನನಗೆ ನನ್ನ ಅಪ್ಪನ ಮುಖ ತೋರಿಸಿತು
ನಾನು ದಿಟ್ಟಿಸಿದ ಕನ್ನಡಿ.
– Murakami Kijo

24.

ಜೀರುಂಡೆಯ ಹಾಡಿನಲ್ಲಿ ಶಬ್ದಗಳಿಲ್ಲ
ಆದರೂ ಯಾಕೋ
ಧ್ವನಿಸುತ್ತಿದೆ ದುಃಖದ ಹಾಡಿನಂತೆ.
– Izumi Shikibu

25.

ಸ್ವರ್ಗ ಮತ್ತು ನರಕ
ಏನೂ ಮಾಡುವುದಿಲ್ಲವಾದರೂ
ಅವು ಮಾಡದಿರುವುದು
ಏನೂ ಇಲ್ಲ.
– Chuang Tzu

26.

ಮೌನ
ಹೃದಯದೊಳಗೆ ದಾಖಲಾಗುತ್ತಿದೆ,
ಆಕಾಶದಲ್ಲಿ ಬಿದಿಗೆಯ ಚಂದ್ರ.
– Chiyo – ni

27.

ಕೊರೆಯುವ ಚಂದ್ರ,
ಚಪ್ಪಲಿ ಕೆಳಗೆ ಮುಟ್ಟಲು ಬಂದ
ಬೆಣಚು ಕಲ್ಲುಗಳು.
– Yosa Buson

28.

ಬೆಟ್ಟದ ಕೆಳಗೆ ಹಲವಾರು ದಾರಿಗಳು,
ಆದರೆ ಬೆಟ್ಟದ ತುದಿಯಿಂದ
ಒಬ್ಬ ಪ್ರಖರ ಚಂದ್ರ ಮಾತ್ರ ಕಂಡ.
– Ikkyu

29.

ಮಸುಕಾದ ಚಂದ್ರನ ಕೆಳಗೆ,
ನನ್ನ ತೋಳುಗಳೇ ನನ್ನ ದಿಂಬು
ನಾನೆಂದರೆ ಪ್ರೀತಿ ನನಗೆ.
– Yosa Buson

30.

ಅಲೆಗಳಿಲ್ಲ ಗಾಳಿಯಿಲ್ಲ
ಖಾಲಿ ದೋಣಿಯ ತುಂಬ
ಉಕ್ಕಿ ಹರಿದ ಬೆಳದಿಂಗಳು.
– Dogen Zenji

31.

ಸ್ವಂತದ್ದು ಏನೂ ಇಲ್ಲದಾಗ
ಎಲ್ಲ ದಾರಿಯೂ
ನಿನ್ನ ಮನೆಯ ದಾರಿಯೇ
– Muso Soseki

32.

ಹರಿದಂತೆಲ್ಲ ತಿಳಿಯಾಗುತ್ತಿದೆ
ರಾಡಿ ನೀರು
– Taneda Santoka

33.

ಜೀರುಂಡೆ!
ನೀನು ಕಾರಣ ಅಲ್ಲ ಆದರೂ
ಹಗಲು ಸಾಗುತ್ತಿದೆ ಕತ್ತಲಿನತ್ತ.
– Den Sute-jo

34.

ಚೆರ್ರಿ ಮರ ಹೂ ಬಿಟ್ಟಾಗ
ಹಕ್ಕಿಗಳಿಗೆ ಎರಡು ಕಾಲುಗಳು
ಕುದುರೆಗಳಿಗೆ ನಾಲ್ಕು.
– Uejima Onitsura

35.

ಸಿದ್ಧರಾಗಿ, ಸಾಯಲು ಸಿದ್ಧರಾಗಿ
ಒಂದೇ ಸಮನೇ ಕೂಗುತ್ತಿವೆ
ಚೆರ್ರಿ ಹೂಗಳು.
– Issa

36.

ಸಮಾಧಾನದ ಸಂಜೆ

ಮೀನಿನ ದೋಣಿ ಹಿಂತಿರುಗಿದೆ,

ಸೂರ್ಯನನ್ನು ತುಂಬಿಕೊAಡು.

– Horiuchi

37.

ಕರಗುವ ವಸ್ತುಗಳೆಲ್ಲ

ಅಮಾಯಕರಂತೆ ವರ್ತಿಸುತ್ತಿವೆ,

ವಸಂತದ ಅಳುಕು.

– Tagami Kikusha

38.

ರಾತ್ರಿಯಿಡೀ ನಿದ್ದೆಯಿಲ್ಲ,

ತುಂಬಿದ ಮಡಿಕೆ

ಬಿರುಕು ಬಿಡುವ ಸದ್ದಿಗೆ.

– ಬಾಶೋ

39.

ಶರತ್ಕಾಲ ಮುಗಿಯುತ್ತ ಬಂದರೂ

ಇನ್ನೂ ಚಿಟ್ಟೆಯಾಗಿಲ್ಲ,

ಈ ಕಂಬಳಿಹುಳು.

– ಬಾಶೋ

40.

ತಂಪು ಚಳಿಗಾಲದ ರಾತ್ರಿಗೆ

ಒಳ್ಳೆಯ ಬೆಂಕಿ ಆಗಬಹುದು,

ಹಳೆಯ ಕಟ್ಟಿಗೆ ತಲೆಯ ಬುದ್ಧ.

– ಬುಸಾನ್

41.

ಬಿರುಸಾಗಿ ಹನೀತಾ ಇರೋದು

ಕ್ಷಣದಲ್ಲೇ ಹಿಮವಾಗೋದು,

ಚಳಿಗಾಲದ ವಿಚಿತ್ರ ವಿನೋದ.

– ಬಾಶೋ

42.

ಮುಂಗಾರು ಮಳೆಯಲ್ಲಿ

ರೌದ್ರಾವತಾರ ತಾಳುತ್ತವೆ,

ಹೆಸರಿಲ್ಲದ ನದಿಗಳು ಕೂಡ.

– ಬುಸಾನ್

43.

ಮತ್ತು ಬರಿಸುವ ಹೂಗಳು,

ದಾರಿ ತಪ್ಪುವುದು

ಪ್ರಯಾಣದ ಒಂದು ಭಾಗ.

– Inahata Teiko

44.

ಹೋಗತ್ತೆ, ಬರತ್ತೆ,

ಪ್ರೀತಿ

ಒಂದು ಬೆಕ್ಕಿನಂತೆ.

– Issa

45.

ಕವಿತೆ ನಮ್ಮ ನಡುವೆ

ಅಸಾಧ್ಯವಾದ

ಒಂದು ಸಂಭಾಷಣೆ.

– Santoka

ಚಿದಂಬರ ನರೇಂದ್ರ

ಚಿದಂಬರ ನರೇಂದ್ರ
ಕವಿ, ಅನುವಾದಕ. ’ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ’ಹೂಬಾಣ’, ’ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...