Homeಸಾಹಿತ್ಯ-ಸಂಸ್ಕೃತಿಕವನಒಂದಿಷ್ಟು ಜಪಾನೀ ಹಾಯ್ಕುಗಳು

ಒಂದಿಷ್ಟು ಜಪಾನೀ ಹಾಯ್ಕುಗಳು

- Advertisement -
- Advertisement -

1.

ಹೂತು ಹೋದ ದೇಗುಲ,
ಸಾವಧಾನವಾಗಿ ಅಗೆಯುವವನ ಜೊತೆ
ಮಾತ್ರ ಹಂಚಿಕೊಳ್ಳುತ್ತದೆ,
ತನ್ನ ಕರುಣಾಜನಕ ಕಥೆಯನ್ನ.
– Basho

2.

ತೊಟ್ಟಿಕ್ಕುತ್ತಿರುವ
ಮಂಜಿನ ಹನಿಗಳನ್ನ ನೋಡಿದರೆ,
ಹೇಗಾದರೂ ಮಾಡಿ
ತೊಳೆದುಬಿಡಬೇಕು ಅನಿಸುತ್ತದೆ,
ಈ ಹೊಲಸು ಜಗತ್ತನ್ನೊಮ್ಮೆ.
– Basho

3.

ಗಜ್ಜರಿ ಕೀಳುತ್ತಿರುವವನು
ದಾರಿ ತೋರಿಸುತ್ತಾನೆ,
ಗಜ್ಜರಿಯಿಂದಲೇ.
– Issa

4.

ಚಳಿಗಾಲದ ಸಂಜೆಗೆ
ಒಂದಿಷ್ಟು ಸಣ್ಣ ಹೊಲಿಗೆ,
ಬೊಂಬೆಯ ಮುಖದಲ್ಲಿ
ಅರಳಿದ ನಗು.
– Ingrid Kunschke

5.

ಹಳೆಯ ತಪ್ಪುಗಳು ಮರುಕಳಿಸುತ್ತಿವೆ
ಹೊಸ ತಪ್ಪುಗಳು ಸೃಷ್ಟಿಯಾಗುತ್ತಿವೆ ಎಂದರೆ
ವಸಂತ ಬಂದಿದೆ ಎಂದೇ ಅರ್ಥ.
– Issa

6.

ಚಳಿಗಾಲದ ಚಂದ್ರನ ಬೆಳಕು
ಒಂದು ನೆರಳಿಗೂ
ಕೈಗಳಿಲ್ಲ.
– Anon

7.

ಮೊದಲೇ ದೀರ್ಘರಾತ್ರಿ,
ಬೊಗಳಿ ಬೊಗಳಿ
ಇನ್ನೂ ಜಗ್ಗಿಬಿಟ್ಟಿತು ನಾಯಿ
– Santoka

8.

ಎಲ್ಲೆಲ್ಲಿ ಮನುಷ್ಯರಿದ್ದಾರೋ
ಅಲ್ಲೆಲ್ಲ ನೊಣಗಳಿವೆ,
ಅಲ್ಲೆಲ್ಲ ಬುದ್ಧರಿದ್ದಾರೆ.
– Issa

9.

ಹುಳುಗಳ ಬಗ್ಗೆ,
ಕೆಲವರು ಹಾಡಬಹುದು,
ಕೆಲವರಿಗೆ ಆಗುವುದಿಲ್ಲ.
– Issa

10.

ಕಾಗೆಗಳನ್ನು ನಕಲು ಮಾಡುವವರು
ಚೆನ್ನಾಗಿ ಕಾಣಿಸುತ್ತಾರೆ,
ಕಾಗೆಗಳಿಗಿಂತ.
– Issa

11.

ಹೂವಿನ ಪಕಳೆಗಳಂತೆ ಕಾಣುವ
ನಿನ್ನೆಯ ಹಿಮ
ಮತ್ತೆ ನೀರಾಗುತ್ತಿದೆ ಕರಗಿ.
– Gozan

12.

ವಸಂತ ನನ್ನ ಪ್ರಕಾರ
ಹೊತ್ತಿಗೆ ಮೊದಲು ಅರಳಿದ ಹೂಗಳು
ಹೃದಯದಲ್ಲಿ.
– Sumitaku Kenshin

13.

ಯಾಕೆ ಇಷ್ಟು ಅವಸರ?
ಎಲ್ಲಿಗೆ ಹೋದರೂ
ಕಾಣಿಸುತ್ತಾನೆ ಅದೇ ಚಂದ್ರ
ಇಂದು.
– Izumi Shikibu

14.

ಎಲ್ಲವೂ ಖಾಲಿ ಎಂದಮೇಲೆ
ಧೂಳು ಬೀಳಲು ಜಾಗ ಎಲ್ಲಿ?
– Hui Neng

15.

ಸೂರ್ಯ ಮುಳುಗಿಹೋದರೂ
ಸಂಜೆಯ ಬೆಳಕು
ಉಳಿದುಕೊಂಡಿದೆ ಇನ್ನೂ ಎಲೆಗಳಲ್ಲಿ
– Nijo Yoshimoto

16.

ಸೇತುವೆ ದಾಟುತ್ತಿದ್ದಾನೆ
ಸೇತುವೆಯನ್ನ,
ಆದರೆ ನದಿಯನ್ನಲ್ಲ.
– Mahasattva Fu

17.

ಒಂಟಿತನ
ಆ ಗಾಢ ಸುಂದರ ಬಣ್ಣ,
ಯಾವುದನ್ನ ಬಣ್ಣಿಸುವುದು
ಅಸಾಧ್ಯವೋ ಅದು.
– Jakuren

18.

ಚಂದ್ರನ ಬೆಳಕು
ಸರಿಯುತ್ತಿದೆ ಪೂರ್ವದತ್ತ,
ಹೂವಿನ ನೆರಳು
ತೆವಳುತ್ತಿದೆ ಪಶ್ಚಿಮದತ್ತ.
– Yosa Buson

19.

ಅಂತಃಕರಣದಿಂದ ನಾನು
ಯಾವುದನ್ನು ಮುಟ್ಟಿದರೂ
ಚುಚ್ಚುತ್ತದೆ
ಕವಳಿ ಕಂಟಿಯಂತೆ.
– Issa

20.

ಬೇಸಿಗೆ ನದಿ,
ಸೇತುವೆಯಿದ್ದರೂ
ನೀರಿನಲ್ಲಿ ಹೆಜ್ಜೆ ಹಾಕುತ್ತಿದೆ
ನನ್ನ ಕುದುರೆ.
– Massoka Shikhi

21.

ದೀಪ ಆರಿದಮೇಲೆ,
ಒಳಗೆ ಬಂದವು
ಕೆಲವು ತಂಪು ನಕ್ಷತ್ರಗಳು
ಕಿಟಕಿ ದಾಟಿ.
– Natsume Soseki

22.

ಆಗಿಂದಾಗ್ಗೆ ಮೋಡಗಳು,
ವಿರಾಮ ನೀಡುತ್ತಿವೆ
ಚಂದ್ರನ ನೋಡುವ ಕಣ್ಣುಗಳಿಗೆ.
– Basho

23.

ಶರತ್ಕಾಲದ ಮುಂಜಾವು,
ನನಗೆ ನನ್ನ ಅಪ್ಪನ ಮುಖ ತೋರಿಸಿತು
ನಾನು ದಿಟ್ಟಿಸಿದ ಕನ್ನಡಿ.
– Murakami Kijo

24.

ಜೀರುಂಡೆಯ ಹಾಡಿನಲ್ಲಿ ಶಬ್ದಗಳಿಲ್ಲ
ಆದರೂ ಯಾಕೋ
ಧ್ವನಿಸುತ್ತಿದೆ ದುಃಖದ ಹಾಡಿನಂತೆ.
– Izumi Shikibu

25.

ಸ್ವರ್ಗ ಮತ್ತು ನರಕ
ಏನೂ ಮಾಡುವುದಿಲ್ಲವಾದರೂ
ಅವು ಮಾಡದಿರುವುದು
ಏನೂ ಇಲ್ಲ.
– Chuang Tzu

26.

ಮೌನ
ಹೃದಯದೊಳಗೆ ದಾಖಲಾಗುತ್ತಿದೆ,
ಆಕಾಶದಲ್ಲಿ ಬಿದಿಗೆಯ ಚಂದ್ರ.
– Chiyo – ni

27.

ಕೊರೆಯುವ ಚಂದ್ರ,
ಚಪ್ಪಲಿ ಕೆಳಗೆ ಮುಟ್ಟಲು ಬಂದ
ಬೆಣಚು ಕಲ್ಲುಗಳು.
– Yosa Buson

28.

ಬೆಟ್ಟದ ಕೆಳಗೆ ಹಲವಾರು ದಾರಿಗಳು,
ಆದರೆ ಬೆಟ್ಟದ ತುದಿಯಿಂದ
ಒಬ್ಬ ಪ್ರಖರ ಚಂದ್ರ ಮಾತ್ರ ಕಂಡ.
– Ikkyu

29.

ಮಸುಕಾದ ಚಂದ್ರನ ಕೆಳಗೆ,
ನನ್ನ ತೋಳುಗಳೇ ನನ್ನ ದಿಂಬು
ನಾನೆಂದರೆ ಪ್ರೀತಿ ನನಗೆ.
– Yosa Buson

30.

ಅಲೆಗಳಿಲ್ಲ ಗಾಳಿಯಿಲ್ಲ
ಖಾಲಿ ದೋಣಿಯ ತುಂಬ
ಉಕ್ಕಿ ಹರಿದ ಬೆಳದಿಂಗಳು.
– Dogen Zenji

31.

ಸ್ವಂತದ್ದು ಏನೂ ಇಲ್ಲದಾಗ
ಎಲ್ಲ ದಾರಿಯೂ
ನಿನ್ನ ಮನೆಯ ದಾರಿಯೇ
– Muso Soseki

32.

ಹರಿದಂತೆಲ್ಲ ತಿಳಿಯಾಗುತ್ತಿದೆ
ರಾಡಿ ನೀರು
– Taneda Santoka

33.

ಜೀರುಂಡೆ!
ನೀನು ಕಾರಣ ಅಲ್ಲ ಆದರೂ
ಹಗಲು ಸಾಗುತ್ತಿದೆ ಕತ್ತಲಿನತ್ತ.
– Den Sute-jo

34.

ಚೆರ್ರಿ ಮರ ಹೂ ಬಿಟ್ಟಾಗ
ಹಕ್ಕಿಗಳಿಗೆ ಎರಡು ಕಾಲುಗಳು
ಕುದುರೆಗಳಿಗೆ ನಾಲ್ಕು.
– Uejima Onitsura

35.

ಸಿದ್ಧರಾಗಿ, ಸಾಯಲು ಸಿದ್ಧರಾಗಿ
ಒಂದೇ ಸಮನೇ ಕೂಗುತ್ತಿವೆ
ಚೆರ್ರಿ ಹೂಗಳು.
– Issa

36.

ಸಮಾಧಾನದ ಸಂಜೆ

ಮೀನಿನ ದೋಣಿ ಹಿಂತಿರುಗಿದೆ,

ಸೂರ್ಯನನ್ನು ತುಂಬಿಕೊAಡು.

– Horiuchi

37.

ಕರಗುವ ವಸ್ತುಗಳೆಲ್ಲ

ಅಮಾಯಕರಂತೆ ವರ್ತಿಸುತ್ತಿವೆ,

ವಸಂತದ ಅಳುಕು.

– Tagami Kikusha

38.

ರಾತ್ರಿಯಿಡೀ ನಿದ್ದೆಯಿಲ್ಲ,

ತುಂಬಿದ ಮಡಿಕೆ

ಬಿರುಕು ಬಿಡುವ ಸದ್ದಿಗೆ.

– ಬಾಶೋ

39.

ಶರತ್ಕಾಲ ಮುಗಿಯುತ್ತ ಬಂದರೂ

ಇನ್ನೂ ಚಿಟ್ಟೆಯಾಗಿಲ್ಲ,

ಈ ಕಂಬಳಿಹುಳು.

– ಬಾಶೋ

40.

ತಂಪು ಚಳಿಗಾಲದ ರಾತ್ರಿಗೆ

ಒಳ್ಳೆಯ ಬೆಂಕಿ ಆಗಬಹುದು,

ಹಳೆಯ ಕಟ್ಟಿಗೆ ತಲೆಯ ಬುದ್ಧ.

– ಬುಸಾನ್

41.

ಬಿರುಸಾಗಿ ಹನೀತಾ ಇರೋದು

ಕ್ಷಣದಲ್ಲೇ ಹಿಮವಾಗೋದು,

ಚಳಿಗಾಲದ ವಿಚಿತ್ರ ವಿನೋದ.

– ಬಾಶೋ

42.

ಮುಂಗಾರು ಮಳೆಯಲ್ಲಿ

ರೌದ್ರಾವತಾರ ತಾಳುತ್ತವೆ,

ಹೆಸರಿಲ್ಲದ ನದಿಗಳು ಕೂಡ.

– ಬುಸಾನ್

43.

ಮತ್ತು ಬರಿಸುವ ಹೂಗಳು,

ದಾರಿ ತಪ್ಪುವುದು

ಪ್ರಯಾಣದ ಒಂದು ಭಾಗ.

– Inahata Teiko

44.

ಹೋಗತ್ತೆ, ಬರತ್ತೆ,

ಪ್ರೀತಿ

ಒಂದು ಬೆಕ್ಕಿನಂತೆ.

– Issa

45.

ಕವಿತೆ ನಮ್ಮ ನಡುವೆ

ಅಸಾಧ್ಯವಾದ

ಒಂದು ಸಂಭಾಷಣೆ.

– Santoka

ಚಿದಂಬರ ನರೇಂದ್ರ

ಚಿದಂಬರ ನರೇಂದ್ರ
ಕವಿ, ಅನುವಾದಕ. ’ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ’ಹೂಬಾಣ’, ’ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...

‘ದಿ ಹಿಂದೂ’, ‘ದೈನಿಕ್ ಭಾಸ್ಕರ್’ ಗಳಲ್ಲಿ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಮರ್ಥಿಸುವ ಜಾಹೀರಾತು: ಓದುಗರಲ್ಲಿ ಕ್ಷಮೆಯಾಚಿಸಿದ ‘ದಿ ಹಿಂದೂ’

ನವದೆಹಲಿ: ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಸಮರ್ಥಿಸುವ ರೀತಿಯಲ್ಲಿ ಪೂರ್ಣ ಪುಟದ ಮುಖಪುಟ ಜಾಹೀರಾತು...

ದ್ವಿ-ರಾಷ್ಟ್ರ ಪರಿಹಾರ : ಬ್ರಿಕ್ಸ್ ನಿಲುವು ಸ್ವಾಗತಿಸಿದ ಪ್ಯಾಲೆಸ್ತೀನ್

ಪ್ಯಾಲೆಸ್ತೀನ್-ಇಸ್ರೇಲ್ ವಿವಾದಕ್ಕೆ ದ್ವಿ-ರಾಷ್ಟ್ರ ಪರಿಹಾರವನ್ನು ಕಂಡುಕೊಳ್ಳುವಂತೆ ಕರೆ ನೀಡಿರುವ ಬ್ರಿಕ್ಸ್ (BRICS) ಜಂಟಿ ಘೋಷಣೆಯನ್ನು ಪ್ಯಾಲೆಸ್ತೀನ್ ವಿದೇಶಾಂಗ ಮತ್ತು ವಲಸಿಗರ ಸಚಿವಾಲಯವು ಮುಕ್ತಕಂಠದಿಂದ ಸ್ವಾಗತಿಸಿದೆ. ಬ್ರಿಕ್ಸ್‌ ಶೃಂಗಸಭೆ, ಜೆರುಸಲೆಮ್ ಸೇರಿದಂತೆ ಪ್ಯಾಲೆಸ್ತೀನಿಯರನ್ನು ಅವರದೇ ಭೂಮಿಯಿಂದ...

ತೆಲಂಗಾಣ| ಅಂತರ್ಜಾತಿ ವಿವಾಹಕ್ಕೆ ಯುವತಿ ಕುಟುಂಬದ ವಿರೋಧ; ದಲಿತ ಯುವಕನ ಮನೆ ಧ್ವಂಸ

ಹೈದರಾಬಾದ್ ಸಮೀಪದ ಗದ್ವಾಲ್ ಜಿಲ್ಲೆಯ ರೆಪಲ್ಲೆ ಗ್ರಾಮದಲ್ಲಿ ಅಂತರ್ಜಾತಿ ವಿವಾಹದ ಹಿನ್ನೆಲೆಯಲ್ಲಿ ದಲಿತ ಯುವಕನ ಮನೆಯನ್ನು ಧ್ವಂಸಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಲಿತ ಬಹುಜನ ಫ್ರಂಟ್, ಹ್ಯೂಮನ್...

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...