Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-4)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-4)

- Advertisement -
- Advertisement -

ಜನರಲ್ ಎಪಾಂಚಿನ್ ಈಗ ಕುಟುಂಬದ ತಂದೆಯ ಸ್ಥಾನದಲ್ಲಿ ನಿಂತು ಮಾತನಾಡಿದ; ಅವನು ಬಹಳ ವಿವೇಚನಾಶೀಲತೆಯಿಂದ ಮಾತನಾಡಿದ. ಯಾವುದೇ ರೀತಿಯ ಭಾವಾತಿರೇಕದ ಪದಗಳನ್ನ ಉಪಯೋಗಿಸದೆ, ಈ ಸಂದರ್ಭದಲ್ಲಿ ಟೋಟ್ಸ್ಕಿಯ ಭವಿಷ್ಯದ ಬಗ್ಗೆ ನಿರ್ಣಾಯಕವಾದ ತೀರ್ಪು ನೀಡುವ ಅವಳ ಹಕ್ಕನ್ನು ತಾನೇ ಪ್ರತಿಪಾದಿಸಿ ದಾಖಲಿಸಿದ. ಅವನ ಮಗಳ ಭವಿಷ್ಯ ಮತ್ತು ಇನ್ನಿಬ್ಬರ ಮಕ್ಕಳದ್ದೂ ಕೂಡ ಅವಳ ಉತ್ತರದ ಮೇಲೆ ಅವಲಂಬಿಸಿದೆ ಎಂದು ಅವನು ನಂತರ ಹೇಳಿದ.

ತಾನು ಏನು ಮಾಡಬೇಕೆಂದು ನೀವು ಇಚ್ಛಿಸುತ್ತೀರ ಅನ್ನುವ ನಸ್ಟಾಸಿಯಾಳ ಪ್ರಶ್ನೆಗೆ, ಐದು ವರ್ಷದ ಹಿಂದೆ, ಅವಳ ಬಗ್ಗೆ ಅವನು ಎಷ್ಟು ಭಯಭೀತನಾಗಿದ್ದನೆಂದರೆ, ಈಗ ಅವಳು ಮದುವೆಯಾಗುವವರೆಗೂ ಅವನು ಸಂಪೂರ್ಣವಾದ ನಿರಾಳತೆಯಿಂದ ಇರುವುದು ಅಸಾಧ್ಯ ಎಂದು ಟೋಟ್ಸ್ಕಿ ಬಿನ್ನವಿಸಿಕೊಂಡ. ನಿಖರತೆಯುಳ್ಳ ಪ್ರತಿಕ್ರಿಯೆಯ ಮಾತುಗಳನ್ನು ಸೇರಿಸದ ಹೊರತು, ಅವನಿಂದ ಬರುವ ಈ ರೀತಿಯ ಸಲಹೆ ಖಂಡಿತವಾಗಿಯೂ ಅಸಂಬದ್ಧವಾದದ್ದಾಗುತ್ತದೆ ಎಂದು ಕೂಡ ಹೇಳಿದ. ಒಳ್ಳೆಯ ಕುಟುಂಬದಿಂದ ಬಂದಿರುವ ಯುವಕ, ಅವನ ಹೆಸರು ಗಾವ್ರಿಲ ಅರ್ಡಾಲಿಯೊನೊವಿಚ್ ಇವೊಲ್ಜಿನ್, ಅವಳೀಗೆ ಪರಿಚಯ ಆಗಿರುವುದನ್ನು ತಾನು ತಿಳಿದಿರುವುದಾಗಿ ಹೇಳಿದ; ಅವನು ಅವಳ ಮನೆಗೆ ಆಗಾಗ್ಗೆ ಭೇಟಿಕೊಡುತ್ತಿರುತ್ತಾನೆ, ಅವಳನ್ನು ಬಹಳ ದಿನದಿಂದ ಭಾವೋದ್ರಿಕ್ತತೆಯಿಂದ ಪ್ರೀತಿಸುತ್ತಿದ್ದಾನೆ, ಅವಳಿಂದ ಸಕಾರಾತ್ಮಕವಾದ ಉತ್ತರವೇನಾದರೂ ಬಂದರೆ ತನ್ನ ಜೀವನವನ್ನ ತ್ಯಾಗ ಮಾಡಲೂ ಸಿದ್ಧನಿದ್ದಾನೆ ಎಂದು ಕೂಡ ತಿಳಿದಿರುವುದಾಗಿ ಹೇಳಿದ. ಈ ಯುವಕ ಅವಳ ಬಗ್ಗೆಯ ತನ್ನ ಪ್ರೀತಿಯನ್ನ ಅವನ (ಟೋಟ್ಸ್ಕಿ) ಬಳಿ ನಿವೇದಿಸಿಕೊಂಡಿದ್ದು, ಅದನ್ನು ಅವನ ಹಿತೈಶಿ ಜನರಲ್ ಎಪಾಂಚಿನ್ ಜತೆ ಕೂಡ ಒಪ್ಪಿಕೊಂಡಿದ್ದಾನೆ; ಅವನು (ಟೋಟ್ಸ್ಕಿ) ಅದರ ಬಗ್ಗೆ ತಪ್ಪು ತಿಳಿಯದೇ ಇದ್ದರೆ, ತಾನು ಅವಳನ್ನು ಪ್ರೀತಿಸುತ್ತಿದ್ದುದರ ಬಗ್ಗೆ ನಸ್ಟಾಸಿಯ ಕೂಡ ತಿಳಿದಿದ್ದಾಳೆ ಎಂದು ಕೂಡ ಅವನಲ್ಲಿ ಹೇಳಿದ್ದ; ಅವಳ ಈಗಿನ ಏಕಾಂಗಿ ಜೀವನ ಅವಳಿಗೆ ಸಾಕಾಗಿ ಹೋಗಿರುವ ಕಾರಣ, ತನ್ನ ಪ್ರೀತಿಯ ಬಗ್ಗೆ ಅವಳು ಸ್ವಲ್ಪ ಒಲವನ್ನೂ ತೋರಿಸಿದ್ದಾಳೆ ಎಂದೂ ಹೇಳಿದ್ದ. ಈ ವಿಷಯಗಳ ಬಗ್ಗೆ ಎಲ್ಲರಿಗಿಂತಲೂ ಅವಳ ಜೊತೆಗೆ ಮಾತನಾಡುವುದು ತನಗೆಷ್ಟು ಕಷ್ಟಕರ ಎಂದು ಅವನು ಸೂಚಿಸಿದ ನಂತರ, ತಾನೇನಾದರೂ ಆಕೆ ಸುಖ ಜೀವನವನ್ನು ಸಾಗಿಸುವುದಕ್ಕೆ ಎಪ್ಪತ್ತೈದು ಸಾವಿರ ರೂಬಲ್ಲುಗಳನ್ನು ಉಡುಗೊರೆಯ ರೀತಿ ಕೋಡುತ್ತೇನೆಂದರೆ ನಸ್ಟಾಸಿಯಾ ಫಿಲಿಪೊವ್ನ ತನ್ನನ್ನು ತಿರಸ್ಕಾರದಿಂದ ಕಾಣುವುದಿಲ್ಲ ಎಂದು ನಂಬಿದ್ದೇನೆ ಎಂದು ಟೋಟ್ಸ್ಕಿ ತನ್ನ ಮಾತನ್ನು ಮುಗಿಸುತ್ತಾ ಹೇಳಿದ. ಏನೇ ಆದರೂ ತನ್ನ ಉಯಿಲಿನಲ್ಲಿ ಎಪ್ಪತ್ತೈದು ಸಾವಿರ ರೂಬಲ್ಲುಗಳನ್ನು ಅವಳಿಗೆ ಬರೆದೇ ತೀರುತ್ತಿದ್ದೆ ಎಂದು ತನ್ನ ಮಾತಿನ ಜೊತೆಗೆ ಸೇರಿಸಿದ; ಆದುದರಿಂದ ಈ ಹಣವನ್ನು ಯಾವುದೇ ರೀತಿಯ ನಷ್ಟಪರಿಹಾರಕ್ಕೋಸ್ಕರ ಕೊಡುತ್ತಿರುವುದಲ್ಲ ಎಂದು ಪರಿಗಣಿಸಬೇಕೆಂದು ಅವಳನ್ನು ಕೇಳಿಕೊಂಡ, ಆದರೆ ಒಬ್ಬ ಮನುಷ್ಯ ಪಾಪಪ್ರಜ್ಞೆಯಿಂದ ತುಂಬಿ ಭಾರವಾದ ತನ್ನ ಆತ್ಮಸಾಕ್ಷಿಯನ್ನ ಸ್ವಲ್ಪ ಹಗೂರ ಮಾಡಿಕೊಳ್ಳುವುದರಲ್ಲಿ ಯಾವುದೇ ರೀತಿಯ ತಕರಾರು ಇರಬಾರದು ಇತ್ಯಾದಿ ಇತ್ಯಾದಿ ಎಂದು ಹೇಳಿದ; ಈಗಿನ ಪರಿಸ್ಥಿತಿಯನ್ನ ಪರಿಗಣಿಸಿದರೆ ಇವೆಲ್ಲವೂ ಸ್ವಾಭಾವಿಕವಾಗಿ ಹೇಳುವಂತಹವೇ. ತನ್ನ ಮಾತುಗಳನ್ನು ಟೋಟ್ಸ್ಕಿ ಬಹಳ ನಿರರ್ಗಳವಾಗಿ ಹೇಳಿದ; ತನ್ನ ಮಾತನ್ನು ಮುಗಿಸುತ್ತಾ, ಪ್ರಪಂಚದಲ್ಲಿನ ಒಂದೇ ಒಂದು ಜೀವಿಗೂ, ಜನರಲ್ ಎಪಾಂಚಿನ್‌ನನ್ನೂ ಸೇರಿಸಿ, ಮೇಲೆ ಹೇಳಿದ ಎಪ್ಪತ್ತೈದು ಸಾವಿರ ರೂಬಲ್ಲಿನ ಬಗ್ಗೆ ತಿಳಿದಿಲ್ಲ, ಅದರ ಬಗೆಗಿನ ತನ್ನ ಇಚ್ಛೆಯನ್ನ ಇದೇ ಮೊದಲ ಬಾರಿಗೆ ತಾನು ಪ್ರಕಟಿಸಿದ್ದು ಎಂದು ತನ್ನ ಪ್ರಸ್ತಾವನೆಯ ಬಗ್ಗೆ ಹೇಳಿದ.

ಈ ಸುದೀರ್ಘವಾದ ಭಾಷಣಕ್ಕೆ ನಸ್ಟಾಸಿಯ ಫಿಲಿಪೊವ್ನ ಕೊಟ್ಟ ಉತ್ತರ ಇಬ್ಬರೂ ಸ್ನೇಹಿತರನ್ನ ಸಾಕಷ್ಟು ಆಶ್ಚರ್ಯಗೊಳಿಸಿತು.

ಅವಳ ಹಿಂದಿನ ವ್ಯಂಗ್ಯದ ಭಾವ ಸುಳಿವಿಲ್ಲದಿರುವುದೊಂದೇ ಅಲ್ಲ, ಅವಳ ಹಳೆಯ ದ್ವೇಷ ಮತ್ತು ವೈರತ್ವ, ಆ ವಿಕಟವಾದ ನಗು- ಯಾವುದೆಲ್ಲದರ ಬರಿಯ ಸ್ಮರಣೆಯೊಂದೇ ಟೋಟ್ಸ್ಕಿಯ ಇಡೀ ದೇಹದಲ್ಲಿ ಈ ದಿನದವರೆಗೂ ನಡುಕ ಹುಟ್ಟಿಸುತ್ತಿತ್ತೊ ಅದ್ಯಾವುದರ ಕುರುಹೂ ಇರಲಿಲ್ಲ; ಅವಳೀಗ ಮುದಗೊಂಡಂತಿದ್ದಳು ಮತ್ತು ಯಾವಾಗಲೋ ಒಮ್ಮೆ ಆತನೊಂದಿಗೆ ಗಂಭೀರವಾಗಿ ಮಾತನಾಡುವುದಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಸಂತೋಷಗೊಂಡಿದ್ದಳು. ತಾನು ಬಹಳ ದಿನಗಳಿಂದ ಮನಬಿಚ್ಚಿ ಸಂಭಾಷಿಸಬೇಕು ಮತ್ತು ಸ್ನೇಹಪರವಾದ ಸಲಹೆಗಳನ್ನ ಕೇಳಬೇಕೆಂದು ಇಚ್ಛಿಸಿದ್ದೆ ಎಂದೂ, ಅವಳ ಅಹಂ ಅವಳನ್ನು ತಡೆದಿತ್ತೆಂದೂ ಅವಳು ನಿವೇದಿಸಿಕೊಂಡಳು. ಈಗ ಏನೇ ಆದರೂ ಅವರಿಬ್ಬರಲ್ಲಿದ್ದ ತಡೆಗೋಡೆ ಉರುಳಿಹೋದ ನಂತರ, ಅವಳಿಗೆ ಈ ಅವಕಾಶವನ್ನು ಬಿಟ್ಟು ಇನ್ನ್ಯಾವುದೂ ಕೂಡ ಸ್ವಾಗತಾರ್ಹವಾಗಿರಲಿಲ್ಲ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-3)

ಮೊದಲು, ದುಃಖದಿಂದ ಕೂಡಿದ ನಗುವಿನೊಂದಿಗೆ ಮತ್ತು ನಂತರ ಕಣ್ಣಿನಲ್ಲಿನ ಉಲ್ಲಾಸದ ಮಿನುಗಿನೊಂದಿಗೆ, ಐದು ವರ್ಷದ ಹಿಂದೆ ಉಂಟಾದಂತಹ ಚಂಡಮಾರುತ ಪುನಃ ಏಳುವುದು ಅಸಾಧ್ಯ ಎಂದು ಅವಳು ಒಪ್ಪಿಕೊಂಡಳು. ತಾನು ಬಹಳ ಹಿಂದಿನಿಂದಲೇ ಅನೇಕ ವಿಷಯಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನ ಬದಲಾಯಿಸಿಕೊಂಡಿದ್ದೇನೆಂದು, ಅವಳು ಗುರುತಿಸಿದ್ದ ಸತ್ಯಗಳನ್ನ ಪರಿಗಣನೆಗೆ ತೆಗೆದುಕೊಳ್ಳಬೇಕೇ ಹೊರತು ಹೃದಯದಲ್ಲಿನ ಭಾವನೆಗಳನ್ನಲ್ಲ ಎಂದು ಕೂಡ ಅವಳು ಹೇಳಿದಳು. ಆದದ್ದೆಲ್ಲಾ ಆಗಿಹೋಯಿತು ಮತ್ತು ಕೊನೆಗೊಂಡಿತು, ಇನ್ನೂ ಯಾಕೆ ಟೋಟ್ಸ್ಕಿ ಸದಾಕಾಲ ಎಚ್ಚರಿಕೆಯ ಮನಸ್ಸಿನಿಂದ ತೊಳಲಾಡುತ್ತಾ ಇರಬೇಕು ಎನ್ನುವುದು ತನಗೆ ಅರ್ಥವಾಗುತ್ತಿಲ್ಲವೆಂದಳು.

ಅವಳು ನಂತರ ಜನರಲ್ ಎಪಾಂಚಿನ್ ಕಡೆಗೆ ತಿರುಗಿ ಅವಲೋಕಿಸಿದಳು; ಬಹಳವಾದ ಸೌಜನ್ಯದಿಂದ, ಅವಳು ಅವನ ಹೆಣ್ಣುಮಕ್ಕಳ ಬಗ್ಗೆ ಮೊದಲಿನಿಂದಲೇ ಬಲ್ಲಳೆಂದು, ಅವರ ಬಗ್ಗೆ ಒಳ್ಳೆಯ ಸಕಾರಾತ್ಮಕವಾದ ವರದಿಗಳನ್ನಲ್ಲದೇ ಬೇರೇನನ್ನೂ ಕೇಳಿಲ್ಲವೆಂದು; ಅವರುಗಳ ಬಗ್ಗೆ ಆಳವಾದ ಗೌರವವನ್ನ ಬೆಳೆಸಿಕೊಂಡಿದ್ದಾಳೆಂದು ಹೇಳಿದಳು. ಅವರಿಗೆ ಯಾವುದೇ ರೀತಿಯಲ್ಲಿ ತನ್ನ ಸೇವೆ ಸಲ್ಲಿಸುವುದು ತನಗೆ ಹೆಮ್ಮೆಯ ಸಂಗತಿ ಮತ್ತು ನಿಜವಾದ ಸಂತೊಷದ ಮೂಲವೆಂದಳು.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...