Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-4)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-4)

- Advertisement -
- Advertisement -

ಜನರಲ್ ಎಪಾಂಚಿನ್ ಈಗ ಕುಟುಂಬದ ತಂದೆಯ ಸ್ಥಾನದಲ್ಲಿ ನಿಂತು ಮಾತನಾಡಿದ; ಅವನು ಬಹಳ ವಿವೇಚನಾಶೀಲತೆಯಿಂದ ಮಾತನಾಡಿದ. ಯಾವುದೇ ರೀತಿಯ ಭಾವಾತಿರೇಕದ ಪದಗಳನ್ನ ಉಪಯೋಗಿಸದೆ, ಈ ಸಂದರ್ಭದಲ್ಲಿ ಟೋಟ್ಸ್ಕಿಯ ಭವಿಷ್ಯದ ಬಗ್ಗೆ ನಿರ್ಣಾಯಕವಾದ ತೀರ್ಪು ನೀಡುವ ಅವಳ ಹಕ್ಕನ್ನು ತಾನೇ ಪ್ರತಿಪಾದಿಸಿ ದಾಖಲಿಸಿದ. ಅವನ ಮಗಳ ಭವಿಷ್ಯ ಮತ್ತು ಇನ್ನಿಬ್ಬರ ಮಕ್ಕಳದ್ದೂ ಕೂಡ ಅವಳ ಉತ್ತರದ ಮೇಲೆ ಅವಲಂಬಿಸಿದೆ ಎಂದು ಅವನು ನಂತರ ಹೇಳಿದ.

ತಾನು ಏನು ಮಾಡಬೇಕೆಂದು ನೀವು ಇಚ್ಛಿಸುತ್ತೀರ ಅನ್ನುವ ನಸ್ಟಾಸಿಯಾಳ ಪ್ರಶ್ನೆಗೆ, ಐದು ವರ್ಷದ ಹಿಂದೆ, ಅವಳ ಬಗ್ಗೆ ಅವನು ಎಷ್ಟು ಭಯಭೀತನಾಗಿದ್ದನೆಂದರೆ, ಈಗ ಅವಳು ಮದುವೆಯಾಗುವವರೆಗೂ ಅವನು ಸಂಪೂರ್ಣವಾದ ನಿರಾಳತೆಯಿಂದ ಇರುವುದು ಅಸಾಧ್ಯ ಎಂದು ಟೋಟ್ಸ್ಕಿ ಬಿನ್ನವಿಸಿಕೊಂಡ. ನಿಖರತೆಯುಳ್ಳ ಪ್ರತಿಕ್ರಿಯೆಯ ಮಾತುಗಳನ್ನು ಸೇರಿಸದ ಹೊರತು, ಅವನಿಂದ ಬರುವ ಈ ರೀತಿಯ ಸಲಹೆ ಖಂಡಿತವಾಗಿಯೂ ಅಸಂಬದ್ಧವಾದದ್ದಾಗುತ್ತದೆ ಎಂದು ಕೂಡ ಹೇಳಿದ. ಒಳ್ಳೆಯ ಕುಟುಂಬದಿಂದ ಬಂದಿರುವ ಯುವಕ, ಅವನ ಹೆಸರು ಗಾವ್ರಿಲ ಅರ್ಡಾಲಿಯೊನೊವಿಚ್ ಇವೊಲ್ಜಿನ್, ಅವಳೀಗೆ ಪರಿಚಯ ಆಗಿರುವುದನ್ನು ತಾನು ತಿಳಿದಿರುವುದಾಗಿ ಹೇಳಿದ; ಅವನು ಅವಳ ಮನೆಗೆ ಆಗಾಗ್ಗೆ ಭೇಟಿಕೊಡುತ್ತಿರುತ್ತಾನೆ, ಅವಳನ್ನು ಬಹಳ ದಿನದಿಂದ ಭಾವೋದ್ರಿಕ್ತತೆಯಿಂದ ಪ್ರೀತಿಸುತ್ತಿದ್ದಾನೆ, ಅವಳಿಂದ ಸಕಾರಾತ್ಮಕವಾದ ಉತ್ತರವೇನಾದರೂ ಬಂದರೆ ತನ್ನ ಜೀವನವನ್ನ ತ್ಯಾಗ ಮಾಡಲೂ ಸಿದ್ಧನಿದ್ದಾನೆ ಎಂದು ಕೂಡ ತಿಳಿದಿರುವುದಾಗಿ ಹೇಳಿದ. ಈ ಯುವಕ ಅವಳ ಬಗ್ಗೆಯ ತನ್ನ ಪ್ರೀತಿಯನ್ನ ಅವನ (ಟೋಟ್ಸ್ಕಿ) ಬಳಿ ನಿವೇದಿಸಿಕೊಂಡಿದ್ದು, ಅದನ್ನು ಅವನ ಹಿತೈಶಿ ಜನರಲ್ ಎಪಾಂಚಿನ್ ಜತೆ ಕೂಡ ಒಪ್ಪಿಕೊಂಡಿದ್ದಾನೆ; ಅವನು (ಟೋಟ್ಸ್ಕಿ) ಅದರ ಬಗ್ಗೆ ತಪ್ಪು ತಿಳಿಯದೇ ಇದ್ದರೆ, ತಾನು ಅವಳನ್ನು ಪ್ರೀತಿಸುತ್ತಿದ್ದುದರ ಬಗ್ಗೆ ನಸ್ಟಾಸಿಯ ಕೂಡ ತಿಳಿದಿದ್ದಾಳೆ ಎಂದು ಕೂಡ ಅವನಲ್ಲಿ ಹೇಳಿದ್ದ; ಅವಳ ಈಗಿನ ಏಕಾಂಗಿ ಜೀವನ ಅವಳಿಗೆ ಸಾಕಾಗಿ ಹೋಗಿರುವ ಕಾರಣ, ತನ್ನ ಪ್ರೀತಿಯ ಬಗ್ಗೆ ಅವಳು ಸ್ವಲ್ಪ ಒಲವನ್ನೂ ತೋರಿಸಿದ್ದಾಳೆ ಎಂದೂ ಹೇಳಿದ್ದ. ಈ ವಿಷಯಗಳ ಬಗ್ಗೆ ಎಲ್ಲರಿಗಿಂತಲೂ ಅವಳ ಜೊತೆಗೆ ಮಾತನಾಡುವುದು ತನಗೆಷ್ಟು ಕಷ್ಟಕರ ಎಂದು ಅವನು ಸೂಚಿಸಿದ ನಂತರ, ತಾನೇನಾದರೂ ಆಕೆ ಸುಖ ಜೀವನವನ್ನು ಸಾಗಿಸುವುದಕ್ಕೆ ಎಪ್ಪತ್ತೈದು ಸಾವಿರ ರೂಬಲ್ಲುಗಳನ್ನು ಉಡುಗೊರೆಯ ರೀತಿ ಕೋಡುತ್ತೇನೆಂದರೆ ನಸ್ಟಾಸಿಯಾ ಫಿಲಿಪೊವ್ನ ತನ್ನನ್ನು ತಿರಸ್ಕಾರದಿಂದ ಕಾಣುವುದಿಲ್ಲ ಎಂದು ನಂಬಿದ್ದೇನೆ ಎಂದು ಟೋಟ್ಸ್ಕಿ ತನ್ನ ಮಾತನ್ನು ಮುಗಿಸುತ್ತಾ ಹೇಳಿದ. ಏನೇ ಆದರೂ ತನ್ನ ಉಯಿಲಿನಲ್ಲಿ ಎಪ್ಪತ್ತೈದು ಸಾವಿರ ರೂಬಲ್ಲುಗಳನ್ನು ಅವಳಿಗೆ ಬರೆದೇ ತೀರುತ್ತಿದ್ದೆ ಎಂದು ತನ್ನ ಮಾತಿನ ಜೊತೆಗೆ ಸೇರಿಸಿದ; ಆದುದರಿಂದ ಈ ಹಣವನ್ನು ಯಾವುದೇ ರೀತಿಯ ನಷ್ಟಪರಿಹಾರಕ್ಕೋಸ್ಕರ ಕೊಡುತ್ತಿರುವುದಲ್ಲ ಎಂದು ಪರಿಗಣಿಸಬೇಕೆಂದು ಅವಳನ್ನು ಕೇಳಿಕೊಂಡ, ಆದರೆ ಒಬ್ಬ ಮನುಷ್ಯ ಪಾಪಪ್ರಜ್ಞೆಯಿಂದ ತುಂಬಿ ಭಾರವಾದ ತನ್ನ ಆತ್ಮಸಾಕ್ಷಿಯನ್ನ ಸ್ವಲ್ಪ ಹಗೂರ ಮಾಡಿಕೊಳ್ಳುವುದರಲ್ಲಿ ಯಾವುದೇ ರೀತಿಯ ತಕರಾರು ಇರಬಾರದು ಇತ್ಯಾದಿ ಇತ್ಯಾದಿ ಎಂದು ಹೇಳಿದ; ಈಗಿನ ಪರಿಸ್ಥಿತಿಯನ್ನ ಪರಿಗಣಿಸಿದರೆ ಇವೆಲ್ಲವೂ ಸ್ವಾಭಾವಿಕವಾಗಿ ಹೇಳುವಂತಹವೇ. ತನ್ನ ಮಾತುಗಳನ್ನು ಟೋಟ್ಸ್ಕಿ ಬಹಳ ನಿರರ್ಗಳವಾಗಿ ಹೇಳಿದ; ತನ್ನ ಮಾತನ್ನು ಮುಗಿಸುತ್ತಾ, ಪ್ರಪಂಚದಲ್ಲಿನ ಒಂದೇ ಒಂದು ಜೀವಿಗೂ, ಜನರಲ್ ಎಪಾಂಚಿನ್‌ನನ್ನೂ ಸೇರಿಸಿ, ಮೇಲೆ ಹೇಳಿದ ಎಪ್ಪತ್ತೈದು ಸಾವಿರ ರೂಬಲ್ಲಿನ ಬಗ್ಗೆ ತಿಳಿದಿಲ್ಲ, ಅದರ ಬಗೆಗಿನ ತನ್ನ ಇಚ್ಛೆಯನ್ನ ಇದೇ ಮೊದಲ ಬಾರಿಗೆ ತಾನು ಪ್ರಕಟಿಸಿದ್ದು ಎಂದು ತನ್ನ ಪ್ರಸ್ತಾವನೆಯ ಬಗ್ಗೆ ಹೇಳಿದ.

ಈ ಸುದೀರ್ಘವಾದ ಭಾಷಣಕ್ಕೆ ನಸ್ಟಾಸಿಯ ಫಿಲಿಪೊವ್ನ ಕೊಟ್ಟ ಉತ್ತರ ಇಬ್ಬರೂ ಸ್ನೇಹಿತರನ್ನ ಸಾಕಷ್ಟು ಆಶ್ಚರ್ಯಗೊಳಿಸಿತು.

ಅವಳ ಹಿಂದಿನ ವ್ಯಂಗ್ಯದ ಭಾವ ಸುಳಿವಿಲ್ಲದಿರುವುದೊಂದೇ ಅಲ್ಲ, ಅವಳ ಹಳೆಯ ದ್ವೇಷ ಮತ್ತು ವೈರತ್ವ, ಆ ವಿಕಟವಾದ ನಗು- ಯಾವುದೆಲ್ಲದರ ಬರಿಯ ಸ್ಮರಣೆಯೊಂದೇ ಟೋಟ್ಸ್ಕಿಯ ಇಡೀ ದೇಹದಲ್ಲಿ ಈ ದಿನದವರೆಗೂ ನಡುಕ ಹುಟ್ಟಿಸುತ್ತಿತ್ತೊ ಅದ್ಯಾವುದರ ಕುರುಹೂ ಇರಲಿಲ್ಲ; ಅವಳೀಗ ಮುದಗೊಂಡಂತಿದ್ದಳು ಮತ್ತು ಯಾವಾಗಲೋ ಒಮ್ಮೆ ಆತನೊಂದಿಗೆ ಗಂಭೀರವಾಗಿ ಮಾತನಾಡುವುದಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಸಂತೋಷಗೊಂಡಿದ್ದಳು. ತಾನು ಬಹಳ ದಿನಗಳಿಂದ ಮನಬಿಚ್ಚಿ ಸಂಭಾಷಿಸಬೇಕು ಮತ್ತು ಸ್ನೇಹಪರವಾದ ಸಲಹೆಗಳನ್ನ ಕೇಳಬೇಕೆಂದು ಇಚ್ಛಿಸಿದ್ದೆ ಎಂದೂ, ಅವಳ ಅಹಂ ಅವಳನ್ನು ತಡೆದಿತ್ತೆಂದೂ ಅವಳು ನಿವೇದಿಸಿಕೊಂಡಳು. ಈಗ ಏನೇ ಆದರೂ ಅವರಿಬ್ಬರಲ್ಲಿದ್ದ ತಡೆಗೋಡೆ ಉರುಳಿಹೋದ ನಂತರ, ಅವಳಿಗೆ ಈ ಅವಕಾಶವನ್ನು ಬಿಟ್ಟು ಇನ್ನ್ಯಾವುದೂ ಕೂಡ ಸ್ವಾಗತಾರ್ಹವಾಗಿರಲಿಲ್ಲ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-3)

ಮೊದಲು, ದುಃಖದಿಂದ ಕೂಡಿದ ನಗುವಿನೊಂದಿಗೆ ಮತ್ತು ನಂತರ ಕಣ್ಣಿನಲ್ಲಿನ ಉಲ್ಲಾಸದ ಮಿನುಗಿನೊಂದಿಗೆ, ಐದು ವರ್ಷದ ಹಿಂದೆ ಉಂಟಾದಂತಹ ಚಂಡಮಾರುತ ಪುನಃ ಏಳುವುದು ಅಸಾಧ್ಯ ಎಂದು ಅವಳು ಒಪ್ಪಿಕೊಂಡಳು. ತಾನು ಬಹಳ ಹಿಂದಿನಿಂದಲೇ ಅನೇಕ ವಿಷಯಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನ ಬದಲಾಯಿಸಿಕೊಂಡಿದ್ದೇನೆಂದು, ಅವಳು ಗುರುತಿಸಿದ್ದ ಸತ್ಯಗಳನ್ನ ಪರಿಗಣನೆಗೆ ತೆಗೆದುಕೊಳ್ಳಬೇಕೇ ಹೊರತು ಹೃದಯದಲ್ಲಿನ ಭಾವನೆಗಳನ್ನಲ್ಲ ಎಂದು ಕೂಡ ಅವಳು ಹೇಳಿದಳು. ಆದದ್ದೆಲ್ಲಾ ಆಗಿಹೋಯಿತು ಮತ್ತು ಕೊನೆಗೊಂಡಿತು, ಇನ್ನೂ ಯಾಕೆ ಟೋಟ್ಸ್ಕಿ ಸದಾಕಾಲ ಎಚ್ಚರಿಕೆಯ ಮನಸ್ಸಿನಿಂದ ತೊಳಲಾಡುತ್ತಾ ಇರಬೇಕು ಎನ್ನುವುದು ತನಗೆ ಅರ್ಥವಾಗುತ್ತಿಲ್ಲವೆಂದಳು.

ಅವಳು ನಂತರ ಜನರಲ್ ಎಪಾಂಚಿನ್ ಕಡೆಗೆ ತಿರುಗಿ ಅವಲೋಕಿಸಿದಳು; ಬಹಳವಾದ ಸೌಜನ್ಯದಿಂದ, ಅವಳು ಅವನ ಹೆಣ್ಣುಮಕ್ಕಳ ಬಗ್ಗೆ ಮೊದಲಿನಿಂದಲೇ ಬಲ್ಲಳೆಂದು, ಅವರ ಬಗ್ಗೆ ಒಳ್ಳೆಯ ಸಕಾರಾತ್ಮಕವಾದ ವರದಿಗಳನ್ನಲ್ಲದೇ ಬೇರೇನನ್ನೂ ಕೇಳಿಲ್ಲವೆಂದು; ಅವರುಗಳ ಬಗ್ಗೆ ಆಳವಾದ ಗೌರವವನ್ನ ಬೆಳೆಸಿಕೊಂಡಿದ್ದಾಳೆಂದು ಹೇಳಿದಳು. ಅವರಿಗೆ ಯಾವುದೇ ರೀತಿಯಲ್ಲಿ ತನ್ನ ಸೇವೆ ಸಲ್ಲಿಸುವುದು ತನಗೆ ಹೆಮ್ಮೆಯ ಸಂಗತಿ ಮತ್ತು ನಿಜವಾದ ಸಂತೊಷದ ಮೂಲವೆಂದಳು.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...