Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-4)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-4)

- Advertisement -
- Advertisement -

ಜನರಲ್ ಎಪಾಂಚಿನ್ ಈಗ ಕುಟುಂಬದ ತಂದೆಯ ಸ್ಥಾನದಲ್ಲಿ ನಿಂತು ಮಾತನಾಡಿದ; ಅವನು ಬಹಳ ವಿವೇಚನಾಶೀಲತೆಯಿಂದ ಮಾತನಾಡಿದ. ಯಾವುದೇ ರೀತಿಯ ಭಾವಾತಿರೇಕದ ಪದಗಳನ್ನ ಉಪಯೋಗಿಸದೆ, ಈ ಸಂದರ್ಭದಲ್ಲಿ ಟೋಟ್ಸ್ಕಿಯ ಭವಿಷ್ಯದ ಬಗ್ಗೆ ನಿರ್ಣಾಯಕವಾದ ತೀರ್ಪು ನೀಡುವ ಅವಳ ಹಕ್ಕನ್ನು ತಾನೇ ಪ್ರತಿಪಾದಿಸಿ ದಾಖಲಿಸಿದ. ಅವನ ಮಗಳ ಭವಿಷ್ಯ ಮತ್ತು ಇನ್ನಿಬ್ಬರ ಮಕ್ಕಳದ್ದೂ ಕೂಡ ಅವಳ ಉತ್ತರದ ಮೇಲೆ ಅವಲಂಬಿಸಿದೆ ಎಂದು ಅವನು ನಂತರ ಹೇಳಿದ.

ತಾನು ಏನು ಮಾಡಬೇಕೆಂದು ನೀವು ಇಚ್ಛಿಸುತ್ತೀರ ಅನ್ನುವ ನಸ್ಟಾಸಿಯಾಳ ಪ್ರಶ್ನೆಗೆ, ಐದು ವರ್ಷದ ಹಿಂದೆ, ಅವಳ ಬಗ್ಗೆ ಅವನು ಎಷ್ಟು ಭಯಭೀತನಾಗಿದ್ದನೆಂದರೆ, ಈಗ ಅವಳು ಮದುವೆಯಾಗುವವರೆಗೂ ಅವನು ಸಂಪೂರ್ಣವಾದ ನಿರಾಳತೆಯಿಂದ ಇರುವುದು ಅಸಾಧ್ಯ ಎಂದು ಟೋಟ್ಸ್ಕಿ ಬಿನ್ನವಿಸಿಕೊಂಡ. ನಿಖರತೆಯುಳ್ಳ ಪ್ರತಿಕ್ರಿಯೆಯ ಮಾತುಗಳನ್ನು ಸೇರಿಸದ ಹೊರತು, ಅವನಿಂದ ಬರುವ ಈ ರೀತಿಯ ಸಲಹೆ ಖಂಡಿತವಾಗಿಯೂ ಅಸಂಬದ್ಧವಾದದ್ದಾಗುತ್ತದೆ ಎಂದು ಕೂಡ ಹೇಳಿದ. ಒಳ್ಳೆಯ ಕುಟುಂಬದಿಂದ ಬಂದಿರುವ ಯುವಕ, ಅವನ ಹೆಸರು ಗಾವ್ರಿಲ ಅರ್ಡಾಲಿಯೊನೊವಿಚ್ ಇವೊಲ್ಜಿನ್, ಅವಳೀಗೆ ಪರಿಚಯ ಆಗಿರುವುದನ್ನು ತಾನು ತಿಳಿದಿರುವುದಾಗಿ ಹೇಳಿದ; ಅವನು ಅವಳ ಮನೆಗೆ ಆಗಾಗ್ಗೆ ಭೇಟಿಕೊಡುತ್ತಿರುತ್ತಾನೆ, ಅವಳನ್ನು ಬಹಳ ದಿನದಿಂದ ಭಾವೋದ್ರಿಕ್ತತೆಯಿಂದ ಪ್ರೀತಿಸುತ್ತಿದ್ದಾನೆ, ಅವಳಿಂದ ಸಕಾರಾತ್ಮಕವಾದ ಉತ್ತರವೇನಾದರೂ ಬಂದರೆ ತನ್ನ ಜೀವನವನ್ನ ತ್ಯಾಗ ಮಾಡಲೂ ಸಿದ್ಧನಿದ್ದಾನೆ ಎಂದು ಕೂಡ ತಿಳಿದಿರುವುದಾಗಿ ಹೇಳಿದ. ಈ ಯುವಕ ಅವಳ ಬಗ್ಗೆಯ ತನ್ನ ಪ್ರೀತಿಯನ್ನ ಅವನ (ಟೋಟ್ಸ್ಕಿ) ಬಳಿ ನಿವೇದಿಸಿಕೊಂಡಿದ್ದು, ಅದನ್ನು ಅವನ ಹಿತೈಶಿ ಜನರಲ್ ಎಪಾಂಚಿನ್ ಜತೆ ಕೂಡ ಒಪ್ಪಿಕೊಂಡಿದ್ದಾನೆ; ಅವನು (ಟೋಟ್ಸ್ಕಿ) ಅದರ ಬಗ್ಗೆ ತಪ್ಪು ತಿಳಿಯದೇ ಇದ್ದರೆ, ತಾನು ಅವಳನ್ನು ಪ್ರೀತಿಸುತ್ತಿದ್ದುದರ ಬಗ್ಗೆ ನಸ್ಟಾಸಿಯ ಕೂಡ ತಿಳಿದಿದ್ದಾಳೆ ಎಂದು ಕೂಡ ಅವನಲ್ಲಿ ಹೇಳಿದ್ದ; ಅವಳ ಈಗಿನ ಏಕಾಂಗಿ ಜೀವನ ಅವಳಿಗೆ ಸಾಕಾಗಿ ಹೋಗಿರುವ ಕಾರಣ, ತನ್ನ ಪ್ರೀತಿಯ ಬಗ್ಗೆ ಅವಳು ಸ್ವಲ್ಪ ಒಲವನ್ನೂ ತೋರಿಸಿದ್ದಾಳೆ ಎಂದೂ ಹೇಳಿದ್ದ. ಈ ವಿಷಯಗಳ ಬಗ್ಗೆ ಎಲ್ಲರಿಗಿಂತಲೂ ಅವಳ ಜೊತೆಗೆ ಮಾತನಾಡುವುದು ತನಗೆಷ್ಟು ಕಷ್ಟಕರ ಎಂದು ಅವನು ಸೂಚಿಸಿದ ನಂತರ, ತಾನೇನಾದರೂ ಆಕೆ ಸುಖ ಜೀವನವನ್ನು ಸಾಗಿಸುವುದಕ್ಕೆ ಎಪ್ಪತ್ತೈದು ಸಾವಿರ ರೂಬಲ್ಲುಗಳನ್ನು ಉಡುಗೊರೆಯ ರೀತಿ ಕೋಡುತ್ತೇನೆಂದರೆ ನಸ್ಟಾಸಿಯಾ ಫಿಲಿಪೊವ್ನ ತನ್ನನ್ನು ತಿರಸ್ಕಾರದಿಂದ ಕಾಣುವುದಿಲ್ಲ ಎಂದು ನಂಬಿದ್ದೇನೆ ಎಂದು ಟೋಟ್ಸ್ಕಿ ತನ್ನ ಮಾತನ್ನು ಮುಗಿಸುತ್ತಾ ಹೇಳಿದ. ಏನೇ ಆದರೂ ತನ್ನ ಉಯಿಲಿನಲ್ಲಿ ಎಪ್ಪತ್ತೈದು ಸಾವಿರ ರೂಬಲ್ಲುಗಳನ್ನು ಅವಳಿಗೆ ಬರೆದೇ ತೀರುತ್ತಿದ್ದೆ ಎಂದು ತನ್ನ ಮಾತಿನ ಜೊತೆಗೆ ಸೇರಿಸಿದ; ಆದುದರಿಂದ ಈ ಹಣವನ್ನು ಯಾವುದೇ ರೀತಿಯ ನಷ್ಟಪರಿಹಾರಕ್ಕೋಸ್ಕರ ಕೊಡುತ್ತಿರುವುದಲ್ಲ ಎಂದು ಪರಿಗಣಿಸಬೇಕೆಂದು ಅವಳನ್ನು ಕೇಳಿಕೊಂಡ, ಆದರೆ ಒಬ್ಬ ಮನುಷ್ಯ ಪಾಪಪ್ರಜ್ಞೆಯಿಂದ ತುಂಬಿ ಭಾರವಾದ ತನ್ನ ಆತ್ಮಸಾಕ್ಷಿಯನ್ನ ಸ್ವಲ್ಪ ಹಗೂರ ಮಾಡಿಕೊಳ್ಳುವುದರಲ್ಲಿ ಯಾವುದೇ ರೀತಿಯ ತಕರಾರು ಇರಬಾರದು ಇತ್ಯಾದಿ ಇತ್ಯಾದಿ ಎಂದು ಹೇಳಿದ; ಈಗಿನ ಪರಿಸ್ಥಿತಿಯನ್ನ ಪರಿಗಣಿಸಿದರೆ ಇವೆಲ್ಲವೂ ಸ್ವಾಭಾವಿಕವಾಗಿ ಹೇಳುವಂತಹವೇ. ತನ್ನ ಮಾತುಗಳನ್ನು ಟೋಟ್ಸ್ಕಿ ಬಹಳ ನಿರರ್ಗಳವಾಗಿ ಹೇಳಿದ; ತನ್ನ ಮಾತನ್ನು ಮುಗಿಸುತ್ತಾ, ಪ್ರಪಂಚದಲ್ಲಿನ ಒಂದೇ ಒಂದು ಜೀವಿಗೂ, ಜನರಲ್ ಎಪಾಂಚಿನ್‌ನನ್ನೂ ಸೇರಿಸಿ, ಮೇಲೆ ಹೇಳಿದ ಎಪ್ಪತ್ತೈದು ಸಾವಿರ ರೂಬಲ್ಲಿನ ಬಗ್ಗೆ ತಿಳಿದಿಲ್ಲ, ಅದರ ಬಗೆಗಿನ ತನ್ನ ಇಚ್ಛೆಯನ್ನ ಇದೇ ಮೊದಲ ಬಾರಿಗೆ ತಾನು ಪ್ರಕಟಿಸಿದ್ದು ಎಂದು ತನ್ನ ಪ್ರಸ್ತಾವನೆಯ ಬಗ್ಗೆ ಹೇಳಿದ.

ಈ ಸುದೀರ್ಘವಾದ ಭಾಷಣಕ್ಕೆ ನಸ್ಟಾಸಿಯ ಫಿಲಿಪೊವ್ನ ಕೊಟ್ಟ ಉತ್ತರ ಇಬ್ಬರೂ ಸ್ನೇಹಿತರನ್ನ ಸಾಕಷ್ಟು ಆಶ್ಚರ್ಯಗೊಳಿಸಿತು.

ಅವಳ ಹಿಂದಿನ ವ್ಯಂಗ್ಯದ ಭಾವ ಸುಳಿವಿಲ್ಲದಿರುವುದೊಂದೇ ಅಲ್ಲ, ಅವಳ ಹಳೆಯ ದ್ವೇಷ ಮತ್ತು ವೈರತ್ವ, ಆ ವಿಕಟವಾದ ನಗು- ಯಾವುದೆಲ್ಲದರ ಬರಿಯ ಸ್ಮರಣೆಯೊಂದೇ ಟೋಟ್ಸ್ಕಿಯ ಇಡೀ ದೇಹದಲ್ಲಿ ಈ ದಿನದವರೆಗೂ ನಡುಕ ಹುಟ್ಟಿಸುತ್ತಿತ್ತೊ ಅದ್ಯಾವುದರ ಕುರುಹೂ ಇರಲಿಲ್ಲ; ಅವಳೀಗ ಮುದಗೊಂಡಂತಿದ್ದಳು ಮತ್ತು ಯಾವಾಗಲೋ ಒಮ್ಮೆ ಆತನೊಂದಿಗೆ ಗಂಭೀರವಾಗಿ ಮಾತನಾಡುವುದಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಸಂತೋಷಗೊಂಡಿದ್ದಳು. ತಾನು ಬಹಳ ದಿನಗಳಿಂದ ಮನಬಿಚ್ಚಿ ಸಂಭಾಷಿಸಬೇಕು ಮತ್ತು ಸ್ನೇಹಪರವಾದ ಸಲಹೆಗಳನ್ನ ಕೇಳಬೇಕೆಂದು ಇಚ್ಛಿಸಿದ್ದೆ ಎಂದೂ, ಅವಳ ಅಹಂ ಅವಳನ್ನು ತಡೆದಿತ್ತೆಂದೂ ಅವಳು ನಿವೇದಿಸಿಕೊಂಡಳು. ಈಗ ಏನೇ ಆದರೂ ಅವರಿಬ್ಬರಲ್ಲಿದ್ದ ತಡೆಗೋಡೆ ಉರುಳಿಹೋದ ನಂತರ, ಅವಳಿಗೆ ಈ ಅವಕಾಶವನ್ನು ಬಿಟ್ಟು ಇನ್ನ್ಯಾವುದೂ ಕೂಡ ಸ್ವಾಗತಾರ್ಹವಾಗಿರಲಿಲ್ಲ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-3)

ಮೊದಲು, ದುಃಖದಿಂದ ಕೂಡಿದ ನಗುವಿನೊಂದಿಗೆ ಮತ್ತು ನಂತರ ಕಣ್ಣಿನಲ್ಲಿನ ಉಲ್ಲಾಸದ ಮಿನುಗಿನೊಂದಿಗೆ, ಐದು ವರ್ಷದ ಹಿಂದೆ ಉಂಟಾದಂತಹ ಚಂಡಮಾರುತ ಪುನಃ ಏಳುವುದು ಅಸಾಧ್ಯ ಎಂದು ಅವಳು ಒಪ್ಪಿಕೊಂಡಳು. ತಾನು ಬಹಳ ಹಿಂದಿನಿಂದಲೇ ಅನೇಕ ವಿಷಯಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನ ಬದಲಾಯಿಸಿಕೊಂಡಿದ್ದೇನೆಂದು, ಅವಳು ಗುರುತಿಸಿದ್ದ ಸತ್ಯಗಳನ್ನ ಪರಿಗಣನೆಗೆ ತೆಗೆದುಕೊಳ್ಳಬೇಕೇ ಹೊರತು ಹೃದಯದಲ್ಲಿನ ಭಾವನೆಗಳನ್ನಲ್ಲ ಎಂದು ಕೂಡ ಅವಳು ಹೇಳಿದಳು. ಆದದ್ದೆಲ್ಲಾ ಆಗಿಹೋಯಿತು ಮತ್ತು ಕೊನೆಗೊಂಡಿತು, ಇನ್ನೂ ಯಾಕೆ ಟೋಟ್ಸ್ಕಿ ಸದಾಕಾಲ ಎಚ್ಚರಿಕೆಯ ಮನಸ್ಸಿನಿಂದ ತೊಳಲಾಡುತ್ತಾ ಇರಬೇಕು ಎನ್ನುವುದು ತನಗೆ ಅರ್ಥವಾಗುತ್ತಿಲ್ಲವೆಂದಳು.

ಅವಳು ನಂತರ ಜನರಲ್ ಎಪಾಂಚಿನ್ ಕಡೆಗೆ ತಿರುಗಿ ಅವಲೋಕಿಸಿದಳು; ಬಹಳವಾದ ಸೌಜನ್ಯದಿಂದ, ಅವಳು ಅವನ ಹೆಣ್ಣುಮಕ್ಕಳ ಬಗ್ಗೆ ಮೊದಲಿನಿಂದಲೇ ಬಲ್ಲಳೆಂದು, ಅವರ ಬಗ್ಗೆ ಒಳ್ಳೆಯ ಸಕಾರಾತ್ಮಕವಾದ ವರದಿಗಳನ್ನಲ್ಲದೇ ಬೇರೇನನ್ನೂ ಕೇಳಿಲ್ಲವೆಂದು; ಅವರುಗಳ ಬಗ್ಗೆ ಆಳವಾದ ಗೌರವವನ್ನ ಬೆಳೆಸಿಕೊಂಡಿದ್ದಾಳೆಂದು ಹೇಳಿದಳು. ಅವರಿಗೆ ಯಾವುದೇ ರೀತಿಯಲ್ಲಿ ತನ್ನ ಸೇವೆ ಸಲ್ಲಿಸುವುದು ತನಗೆ ಹೆಮ್ಮೆಯ ಸಂಗತಿ ಮತ್ತು ನಿಜವಾದ ಸಂತೊಷದ ಮೂಲವೆಂದಳು.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...