Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-4)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-4)

- Advertisement -
- Advertisement -

ಜನರಲ್ ಎಪಾಂಚಿನ್ ಈಗ ಕುಟುಂಬದ ತಂದೆಯ ಸ್ಥಾನದಲ್ಲಿ ನಿಂತು ಮಾತನಾಡಿದ; ಅವನು ಬಹಳ ವಿವೇಚನಾಶೀಲತೆಯಿಂದ ಮಾತನಾಡಿದ. ಯಾವುದೇ ರೀತಿಯ ಭಾವಾತಿರೇಕದ ಪದಗಳನ್ನ ಉಪಯೋಗಿಸದೆ, ಈ ಸಂದರ್ಭದಲ್ಲಿ ಟೋಟ್ಸ್ಕಿಯ ಭವಿಷ್ಯದ ಬಗ್ಗೆ ನಿರ್ಣಾಯಕವಾದ ತೀರ್ಪು ನೀಡುವ ಅವಳ ಹಕ್ಕನ್ನು ತಾನೇ ಪ್ರತಿಪಾದಿಸಿ ದಾಖಲಿಸಿದ. ಅವನ ಮಗಳ ಭವಿಷ್ಯ ಮತ್ತು ಇನ್ನಿಬ್ಬರ ಮಕ್ಕಳದ್ದೂ ಕೂಡ ಅವಳ ಉತ್ತರದ ಮೇಲೆ ಅವಲಂಬಿಸಿದೆ ಎಂದು ಅವನು ನಂತರ ಹೇಳಿದ.

ತಾನು ಏನು ಮಾಡಬೇಕೆಂದು ನೀವು ಇಚ್ಛಿಸುತ್ತೀರ ಅನ್ನುವ ನಸ್ಟಾಸಿಯಾಳ ಪ್ರಶ್ನೆಗೆ, ಐದು ವರ್ಷದ ಹಿಂದೆ, ಅವಳ ಬಗ್ಗೆ ಅವನು ಎಷ್ಟು ಭಯಭೀತನಾಗಿದ್ದನೆಂದರೆ, ಈಗ ಅವಳು ಮದುವೆಯಾಗುವವರೆಗೂ ಅವನು ಸಂಪೂರ್ಣವಾದ ನಿರಾಳತೆಯಿಂದ ಇರುವುದು ಅಸಾಧ್ಯ ಎಂದು ಟೋಟ್ಸ್ಕಿ ಬಿನ್ನವಿಸಿಕೊಂಡ. ನಿಖರತೆಯುಳ್ಳ ಪ್ರತಿಕ್ರಿಯೆಯ ಮಾತುಗಳನ್ನು ಸೇರಿಸದ ಹೊರತು, ಅವನಿಂದ ಬರುವ ಈ ರೀತಿಯ ಸಲಹೆ ಖಂಡಿತವಾಗಿಯೂ ಅಸಂಬದ್ಧವಾದದ್ದಾಗುತ್ತದೆ ಎಂದು ಕೂಡ ಹೇಳಿದ. ಒಳ್ಳೆಯ ಕುಟುಂಬದಿಂದ ಬಂದಿರುವ ಯುವಕ, ಅವನ ಹೆಸರು ಗಾವ್ರಿಲ ಅರ್ಡಾಲಿಯೊನೊವಿಚ್ ಇವೊಲ್ಜಿನ್, ಅವಳೀಗೆ ಪರಿಚಯ ಆಗಿರುವುದನ್ನು ತಾನು ತಿಳಿದಿರುವುದಾಗಿ ಹೇಳಿದ; ಅವನು ಅವಳ ಮನೆಗೆ ಆಗಾಗ್ಗೆ ಭೇಟಿಕೊಡುತ್ತಿರುತ್ತಾನೆ, ಅವಳನ್ನು ಬಹಳ ದಿನದಿಂದ ಭಾವೋದ್ರಿಕ್ತತೆಯಿಂದ ಪ್ರೀತಿಸುತ್ತಿದ್ದಾನೆ, ಅವಳಿಂದ ಸಕಾರಾತ್ಮಕವಾದ ಉತ್ತರವೇನಾದರೂ ಬಂದರೆ ತನ್ನ ಜೀವನವನ್ನ ತ್ಯಾಗ ಮಾಡಲೂ ಸಿದ್ಧನಿದ್ದಾನೆ ಎಂದು ಕೂಡ ತಿಳಿದಿರುವುದಾಗಿ ಹೇಳಿದ. ಈ ಯುವಕ ಅವಳ ಬಗ್ಗೆಯ ತನ್ನ ಪ್ರೀತಿಯನ್ನ ಅವನ (ಟೋಟ್ಸ್ಕಿ) ಬಳಿ ನಿವೇದಿಸಿಕೊಂಡಿದ್ದು, ಅದನ್ನು ಅವನ ಹಿತೈಶಿ ಜನರಲ್ ಎಪಾಂಚಿನ್ ಜತೆ ಕೂಡ ಒಪ್ಪಿಕೊಂಡಿದ್ದಾನೆ; ಅವನು (ಟೋಟ್ಸ್ಕಿ) ಅದರ ಬಗ್ಗೆ ತಪ್ಪು ತಿಳಿಯದೇ ಇದ್ದರೆ, ತಾನು ಅವಳನ್ನು ಪ್ರೀತಿಸುತ್ತಿದ್ದುದರ ಬಗ್ಗೆ ನಸ್ಟಾಸಿಯ ಕೂಡ ತಿಳಿದಿದ್ದಾಳೆ ಎಂದು ಕೂಡ ಅವನಲ್ಲಿ ಹೇಳಿದ್ದ; ಅವಳ ಈಗಿನ ಏಕಾಂಗಿ ಜೀವನ ಅವಳಿಗೆ ಸಾಕಾಗಿ ಹೋಗಿರುವ ಕಾರಣ, ತನ್ನ ಪ್ರೀತಿಯ ಬಗ್ಗೆ ಅವಳು ಸ್ವಲ್ಪ ಒಲವನ್ನೂ ತೋರಿಸಿದ್ದಾಳೆ ಎಂದೂ ಹೇಳಿದ್ದ. ಈ ವಿಷಯಗಳ ಬಗ್ಗೆ ಎಲ್ಲರಿಗಿಂತಲೂ ಅವಳ ಜೊತೆಗೆ ಮಾತನಾಡುವುದು ತನಗೆಷ್ಟು ಕಷ್ಟಕರ ಎಂದು ಅವನು ಸೂಚಿಸಿದ ನಂತರ, ತಾನೇನಾದರೂ ಆಕೆ ಸುಖ ಜೀವನವನ್ನು ಸಾಗಿಸುವುದಕ್ಕೆ ಎಪ್ಪತ್ತೈದು ಸಾವಿರ ರೂಬಲ್ಲುಗಳನ್ನು ಉಡುಗೊರೆಯ ರೀತಿ ಕೋಡುತ್ತೇನೆಂದರೆ ನಸ್ಟಾಸಿಯಾ ಫಿಲಿಪೊವ್ನ ತನ್ನನ್ನು ತಿರಸ್ಕಾರದಿಂದ ಕಾಣುವುದಿಲ್ಲ ಎಂದು ನಂಬಿದ್ದೇನೆ ಎಂದು ಟೋಟ್ಸ್ಕಿ ತನ್ನ ಮಾತನ್ನು ಮುಗಿಸುತ್ತಾ ಹೇಳಿದ. ಏನೇ ಆದರೂ ತನ್ನ ಉಯಿಲಿನಲ್ಲಿ ಎಪ್ಪತ್ತೈದು ಸಾವಿರ ರೂಬಲ್ಲುಗಳನ್ನು ಅವಳಿಗೆ ಬರೆದೇ ತೀರುತ್ತಿದ್ದೆ ಎಂದು ತನ್ನ ಮಾತಿನ ಜೊತೆಗೆ ಸೇರಿಸಿದ; ಆದುದರಿಂದ ಈ ಹಣವನ್ನು ಯಾವುದೇ ರೀತಿಯ ನಷ್ಟಪರಿಹಾರಕ್ಕೋಸ್ಕರ ಕೊಡುತ್ತಿರುವುದಲ್ಲ ಎಂದು ಪರಿಗಣಿಸಬೇಕೆಂದು ಅವಳನ್ನು ಕೇಳಿಕೊಂಡ, ಆದರೆ ಒಬ್ಬ ಮನುಷ್ಯ ಪಾಪಪ್ರಜ್ಞೆಯಿಂದ ತುಂಬಿ ಭಾರವಾದ ತನ್ನ ಆತ್ಮಸಾಕ್ಷಿಯನ್ನ ಸ್ವಲ್ಪ ಹಗೂರ ಮಾಡಿಕೊಳ್ಳುವುದರಲ್ಲಿ ಯಾವುದೇ ರೀತಿಯ ತಕರಾರು ಇರಬಾರದು ಇತ್ಯಾದಿ ಇತ್ಯಾದಿ ಎಂದು ಹೇಳಿದ; ಈಗಿನ ಪರಿಸ್ಥಿತಿಯನ್ನ ಪರಿಗಣಿಸಿದರೆ ಇವೆಲ್ಲವೂ ಸ್ವಾಭಾವಿಕವಾಗಿ ಹೇಳುವಂತಹವೇ. ತನ್ನ ಮಾತುಗಳನ್ನು ಟೋಟ್ಸ್ಕಿ ಬಹಳ ನಿರರ್ಗಳವಾಗಿ ಹೇಳಿದ; ತನ್ನ ಮಾತನ್ನು ಮುಗಿಸುತ್ತಾ, ಪ್ರಪಂಚದಲ್ಲಿನ ಒಂದೇ ಒಂದು ಜೀವಿಗೂ, ಜನರಲ್ ಎಪಾಂಚಿನ್‌ನನ್ನೂ ಸೇರಿಸಿ, ಮೇಲೆ ಹೇಳಿದ ಎಪ್ಪತ್ತೈದು ಸಾವಿರ ರೂಬಲ್ಲಿನ ಬಗ್ಗೆ ತಿಳಿದಿಲ್ಲ, ಅದರ ಬಗೆಗಿನ ತನ್ನ ಇಚ್ಛೆಯನ್ನ ಇದೇ ಮೊದಲ ಬಾರಿಗೆ ತಾನು ಪ್ರಕಟಿಸಿದ್ದು ಎಂದು ತನ್ನ ಪ್ರಸ್ತಾವನೆಯ ಬಗ್ಗೆ ಹೇಳಿದ.

ಈ ಸುದೀರ್ಘವಾದ ಭಾಷಣಕ್ಕೆ ನಸ್ಟಾಸಿಯ ಫಿಲಿಪೊವ್ನ ಕೊಟ್ಟ ಉತ್ತರ ಇಬ್ಬರೂ ಸ್ನೇಹಿತರನ್ನ ಸಾಕಷ್ಟು ಆಶ್ಚರ್ಯಗೊಳಿಸಿತು.

ಅವಳ ಹಿಂದಿನ ವ್ಯಂಗ್ಯದ ಭಾವ ಸುಳಿವಿಲ್ಲದಿರುವುದೊಂದೇ ಅಲ್ಲ, ಅವಳ ಹಳೆಯ ದ್ವೇಷ ಮತ್ತು ವೈರತ್ವ, ಆ ವಿಕಟವಾದ ನಗು- ಯಾವುದೆಲ್ಲದರ ಬರಿಯ ಸ್ಮರಣೆಯೊಂದೇ ಟೋಟ್ಸ್ಕಿಯ ಇಡೀ ದೇಹದಲ್ಲಿ ಈ ದಿನದವರೆಗೂ ನಡುಕ ಹುಟ್ಟಿಸುತ್ತಿತ್ತೊ ಅದ್ಯಾವುದರ ಕುರುಹೂ ಇರಲಿಲ್ಲ; ಅವಳೀಗ ಮುದಗೊಂಡಂತಿದ್ದಳು ಮತ್ತು ಯಾವಾಗಲೋ ಒಮ್ಮೆ ಆತನೊಂದಿಗೆ ಗಂಭೀರವಾಗಿ ಮಾತನಾಡುವುದಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಸಂತೋಷಗೊಂಡಿದ್ದಳು. ತಾನು ಬಹಳ ದಿನಗಳಿಂದ ಮನಬಿಚ್ಚಿ ಸಂಭಾಷಿಸಬೇಕು ಮತ್ತು ಸ್ನೇಹಪರವಾದ ಸಲಹೆಗಳನ್ನ ಕೇಳಬೇಕೆಂದು ಇಚ್ಛಿಸಿದ್ದೆ ಎಂದೂ, ಅವಳ ಅಹಂ ಅವಳನ್ನು ತಡೆದಿತ್ತೆಂದೂ ಅವಳು ನಿವೇದಿಸಿಕೊಂಡಳು. ಈಗ ಏನೇ ಆದರೂ ಅವರಿಬ್ಬರಲ್ಲಿದ್ದ ತಡೆಗೋಡೆ ಉರುಳಿಹೋದ ನಂತರ, ಅವಳಿಗೆ ಈ ಅವಕಾಶವನ್ನು ಬಿಟ್ಟು ಇನ್ನ್ಯಾವುದೂ ಕೂಡ ಸ್ವಾಗತಾರ್ಹವಾಗಿರಲಿಲ್ಲ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-3)

ಮೊದಲು, ದುಃಖದಿಂದ ಕೂಡಿದ ನಗುವಿನೊಂದಿಗೆ ಮತ್ತು ನಂತರ ಕಣ್ಣಿನಲ್ಲಿನ ಉಲ್ಲಾಸದ ಮಿನುಗಿನೊಂದಿಗೆ, ಐದು ವರ್ಷದ ಹಿಂದೆ ಉಂಟಾದಂತಹ ಚಂಡಮಾರುತ ಪುನಃ ಏಳುವುದು ಅಸಾಧ್ಯ ಎಂದು ಅವಳು ಒಪ್ಪಿಕೊಂಡಳು. ತಾನು ಬಹಳ ಹಿಂದಿನಿಂದಲೇ ಅನೇಕ ವಿಷಯಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನ ಬದಲಾಯಿಸಿಕೊಂಡಿದ್ದೇನೆಂದು, ಅವಳು ಗುರುತಿಸಿದ್ದ ಸತ್ಯಗಳನ್ನ ಪರಿಗಣನೆಗೆ ತೆಗೆದುಕೊಳ್ಳಬೇಕೇ ಹೊರತು ಹೃದಯದಲ್ಲಿನ ಭಾವನೆಗಳನ್ನಲ್ಲ ಎಂದು ಕೂಡ ಅವಳು ಹೇಳಿದಳು. ಆದದ್ದೆಲ್ಲಾ ಆಗಿಹೋಯಿತು ಮತ್ತು ಕೊನೆಗೊಂಡಿತು, ಇನ್ನೂ ಯಾಕೆ ಟೋಟ್ಸ್ಕಿ ಸದಾಕಾಲ ಎಚ್ಚರಿಕೆಯ ಮನಸ್ಸಿನಿಂದ ತೊಳಲಾಡುತ್ತಾ ಇರಬೇಕು ಎನ್ನುವುದು ತನಗೆ ಅರ್ಥವಾಗುತ್ತಿಲ್ಲವೆಂದಳು.

ಅವಳು ನಂತರ ಜನರಲ್ ಎಪಾಂಚಿನ್ ಕಡೆಗೆ ತಿರುಗಿ ಅವಲೋಕಿಸಿದಳು; ಬಹಳವಾದ ಸೌಜನ್ಯದಿಂದ, ಅವಳು ಅವನ ಹೆಣ್ಣುಮಕ್ಕಳ ಬಗ್ಗೆ ಮೊದಲಿನಿಂದಲೇ ಬಲ್ಲಳೆಂದು, ಅವರ ಬಗ್ಗೆ ಒಳ್ಳೆಯ ಸಕಾರಾತ್ಮಕವಾದ ವರದಿಗಳನ್ನಲ್ಲದೇ ಬೇರೇನನ್ನೂ ಕೇಳಿಲ್ಲವೆಂದು; ಅವರುಗಳ ಬಗ್ಗೆ ಆಳವಾದ ಗೌರವವನ್ನ ಬೆಳೆಸಿಕೊಂಡಿದ್ದಾಳೆಂದು ಹೇಳಿದಳು. ಅವರಿಗೆ ಯಾವುದೇ ರೀತಿಯಲ್ಲಿ ತನ್ನ ಸೇವೆ ಸಲ್ಲಿಸುವುದು ತನಗೆ ಹೆಮ್ಮೆಯ ಸಂಗತಿ ಮತ್ತು ನಿಜವಾದ ಸಂತೊಷದ ಮೂಲವೆಂದಳು.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...