Homeಪುಸ್ತಕ ವಿಮರ್ಶೆ’ಸಾವಿತ್ರಿಬಾಯಿ ಫುಲೆ ಮತ್ತು ನಾನು’: ಶೋಷಿತ ಶಬರಿಗಳ ಕಥನಗಳಿಗೆ ಕನ್ನಡಿ

’ಸಾವಿತ್ರಿಬಾಯಿ ಫುಲೆ ಮತ್ತು ನಾನು’: ಶೋಷಿತ ಶಬರಿಗಳ ಕಥನಗಳಿಗೆ ಕನ್ನಡಿ

- Advertisement -
- Advertisement -

ಶೌಚಾಲಯದಂತಹ ಕನಿಷ್ಟ ಮೂಲಸೌಕರ್ಯಗಳೂ ಇಲ್ಲದ ಒಂದು ಹಳ್ಳಿಯಲ್ಲಿ ಬದುಕುತ್ತಿರುವ, ನಗರದ ಕಲ್ಪನೆಯೇ ಇಲ್ಲದ ತಳಸಮುದಾಯದ ಒಬ್ಬ ಹುಡುಗಿ ಶಬರಿ ತನ್ನ ಸಾಹಸದಿಂದ ನಗರದ ಒಂದು ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆದು, ಆನಂತರ ಆ ಶಿಕ್ಷಣ ಸಂಸ್ಥೆಯಲ್ಲಿ ಎದುರಾಗುವ ಅವಮಾನ, ನಿರ್ಲಕ್ಷ್ಯ, ಏಕಾಂಗಿತನದಂತಹ ಸವಾಲುಗಳ ನಡುವೆ ಕುಗ್ಗಿ, ಮತ್ತೆ ಎದ್ದುನಿಂತು ಅಂದುಕೊಂಡಿದ್ದನ್ನು ಸಾಧಿಸಿ, ಒಬ್ಬ ಆಕ್ಟಿವಿಸ್ಟ್ ಆದ ಪ್ರಗತಿಯ ಹಾದಿಯನ್ನು ’ಸಾವಿತ್ರಿಬಾಯಿ ಫುಲೆ ಮತ್ತು ನಾನು’ ಎಂಬ ಕಥನ (ಕಿರು ಕಾದಂಬರಿ) ನಿರೂಪಿಸುತ್ತದೆ.

ಶಬರಿಯ ಈ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಕೆಳಜಾತಿಯ ಹೆಣ್ಣು, ಜಾತಿಯ ಕಾರಣಕ್ಕೆ ಮಾತ್ರವಲ್ಲದೆ ಹೆಣ್ಣೆಂಬ ಕಾರಣವೂ ಸೇರಿ ಇನ್ನೂ ಹೆಚ್ಚು ತುಳಿಯಲ್ಪಟ್ಟವಳಾಗಿದ್ದಾಳೆ. ಈ ವ್ಯವಸ್ಥೆಯು ’ಮಾದರಿ ಹೆಣ್ಣು’ ಎಂದರೆ ಹೀಗೇ ಎಂದು ಶತಮಾನಗಳಿಂದ ಬಿಂಬಿಸಿದೆ. ಈ ಗುಂಪಿಗೆ ಸೇರಲು ಸೋ ಕಾಲ್ಡ್ ಮಾನದಂಡಗಳೆನಿಸಿಕೊಂಡಿರುವ ಮೇಲ್ಜಾತಿ, ಬಿಳಿಬಣ್ಣ, ಶುದ್ಧ ಭಾಷೆ, ಬಣ್ಣಬಣ್ಣದ ಬಟ್ಟೆ ಈ ಯಾವುವೂ ಶಬರಿಯ ಬಳಿಯಿಲ್ಲ. ತಳಜಾತಿಯಿಂದ ಬಂದ ಅವಳು ನಗರವನ್ನೇ ನೋಡಿರದ, ಕಪ್ಪು ಬಣ್ಣದ, ಜಿಡ್ಡು ಮುಖದ, ಇಂಗ್ಲಿಷ್ ಬಾರದ, ಮೀಸಲಾತಿಯಿಂದ ಮುಂದೆಬಂದ ಹುಡುಗಿ. ಅವಳನ್ನು ಪ್ರತ್ಯೇಕಿಸಲು ಈ ವ್ಯವಸ್ಥೆಗೆ ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕೇ? ಧರ್ಮ, ಜಾತಿ, ಲಿಂಗ, ಭಾಷೆ, ಬಣ್ಣ, ಆಹಾರ, ಉಡುಗೆ ಇತ್ಯಾದಿಯಾಗಿ ಯಾವುದೋ ಒಂದು ಭಿನ್ನತೆಯ ಕಾರಣಕ್ಕೆ ಎಲ್ಲರಿಂದಲೂ, ಎಲ್ಲಾ ಕಡೆಯೂ ಹೊರಗಿಡುವಿಕೆ ಕ್ರೌರ್ಯದ ಪರಮಾವಧಿ. ಈ ಕ್ರೌರ್ಯ ಅಂತಿಂತದ್ದಲ್ಲಾ. ಇದು ಒಂದು ವ್ಯಕ್ತಿತ್ವವನ್ನೇ ಕೊಂದುಬಿಡುತ್ತದೆ. ಶಬರಿ ಈ ಪ್ರತ್ಯೇಕತೆಯಿಂದ ಖಿನ್ನತೆಗೊಳಗಾಗಿ ಇನ್ನು ಇಲ್ಲಿ ಬದುಕುಳಿಯುವುದು ಅಸಾಧ್ಯವೆಂದು ನಿರ್ಧರಿಸಿ ಆತ್ಮಹತ್ಯೆಯ ಬಗ್ಗೆ ಯೋಚಿಸುವಾಗ ಅವಳಿಗೆ ಸಿಕ್ಕ ಸಾವಿತ್ರಿಬಾಯಿ ಫುಲೆಯವರ ಡೈರಿಯು ಬದುಕಲು ಸ್ಫೂರ್ತಿ ತುಂಬುತ್ತದೆ. ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದು ಅಪರಾಧವಾಗಿದ್ದ ಕಾಲದಲ್ಲಿ, ಜ್ಯೋತಿಬಾ ಫುಲೆಯವರ ಬೆಂಬಲದಿಂದ ಶಿಕ್ಷಣ ಪಡೆದು, ಇಡೀ ಸಮಾಜದ, ಕುಟುಂಬದ ಅಡಚಣೆಗಳ ನಡುವೆಯೂ ಭಾರತದಲ್ಲೇ ಮೊದಲಬಾರಿಗೆ ಹೆಣ್ಣು ಮಕ್ಕಳಿಗೆ, ದಲಿತರಿಗೆ, ದಮನಿತರಿಗೆ ಶಾಲೆಯನ್ನು ತೆರೆದ ಸಾವಿತ್ರಿಬಾಯಿ ಫುಲೆಯವರ ಸಾಧನೆ ಶಬರಿಗೆ ತಾನು ಮಾಡಬೇಕಿರುವ ಕರ್ತವ್ಯವನ್ನು, ತನಗಿರುವ ಜವಾಬ್ದಾರಿಯನ್ನು ಎಚ್ಚರಿಸುತ್ತದೆ. ಇದರಿಂದ ಶಬರಿಯ ಆತ್ಮಸ್ಥೈರ್ಯ ಹೆಚ್ಚುತ್ತದೆ. ತನ್ನ ಗುರಿಯು ಸ್ಪಷ್ಟವಾಗುತ್ತದೆ. ಆದರೆ, ಅದನ್ನು ಸಾಧಿಸಲು ಹೊರಟ ಶಬರಿ ಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ. ಶತಮಾನಗಳಿಂದ ತಳಸಮುದಾಯದ ಜನರನ್ನು ಗುಲಾಮರನ್ನಾಗಿ ದುಡಿಸಿಕೊಂಡ ಈ ವ್ಯವಸ್ಥೆಗೆ ಕೆಳಜಾತಿಯ, ಅದರಲ್ಲೂ ಹೆಣ್ಣೊಬ್ಬಳ ಆತ್ಮವಿಶ್ವಾಸ ನೆಮ್ಮದಿ ಕೆಡಿಸದಿರಲು ಸಾಧ್ಯವೇ? ಇಲ್ಲಿ ಹೆಣ್ಣೊಬ್ಬಳನ್ನು ತನ್ನ ಸ್ಥಾನದಿಂದ ಮೇಲೇಳದಂತೆ ತಡೆಯಲು ಬೇಕಾದ ಎಲ್ಲಾ ನೀಚ ಕ್ರೌರ್ಯಗಳನ್ನೂ ಎಸಗಲಾಗುತ್ತದೆ ಎಂಬುದಕ್ಕೆ ಅವಳನ್ನು ಕಾರಿನಲ್ಲಿ ಅಪಹರಿಸಿ ಕಿರುಕುಳ ಕೊಟ್ಟು ಬೆದರಿಸಿದ ಘಟನೆ ಒಂದು ದುರಂತ ಉದಾಹರಣೆಯಾಗಿ, ಸಾಂಕೇತಿಕವಾಗಿ ಚಿತ್ರಿಸಲಾಗಿದೆ.


ಇಷ್ಟೆಲ್ಲಾ ಅಡಚಣೆಗಳ ಮಧ್ಯೆಯೂ ಶಬರಿ ಕುಸಿಯದೆ, ತನ್ನ ಔಪಚಾರಿಕ ಶಿಕ್ಷಣದ ಪಡೆಯುವುದರ ಜೊತೆಗೆ, ಶೋಷಿಸುವವರ ಮಧ್ಯೆ ಬದುಕಿ ಜಯಿಸುವ ಸಾಮರ್ಥ್ಯವನ್ನು ಕಲಿತುಕೊಂಡು ತನ್ನ ಗುರಿ ಮುಟ್ಟುತ್ತಾಳೆ. ಅಂತ್ಯಗೊಳಿಸಬೇಕೆಂದುಕೊಂಡಿದ್ದ ಬದುಕನ್ನು ಅರ್ಥಪೂರ್ಣವಾಗಿ ಜೀವಿಸಿ ತನ್ನ ಹೋರಾಟದಲ್ಲಿ ಗೆದ್ದ ಅವಳ ಹೋರಾಟದ ಹಾದಿ ನಮ್ಮಂತಹ ಸಾವಿರಾರು ಶಬರಿಗಳಿಗೆ ಸ್ಫೂರ್ತಿ.

ಮೀಸಲಾತಿ ಮತ್ತು ಅದನ್ನು ಪಡೆಯುತ್ತಿರುವವರ ಕುರಿತು ಮೇಲ್ಜಾತಿಗಳಲ್ಲಿ ಅಸಹನೆ, ಕೇಡಿನ ಮನೋಭಾವ ಹಾಗೂ ತಾತ್ಸಾರ ಇಂದಿಗೂ ಪ್ರಸ್ತುತವಾಗಿದೆ ಹಾಗು ಬೆಳೆಯುತ್ತಲೇ ಇದೆ. ಮೀಸಲಾತಿಯ ಬಗೆಗಿನ ಇಂತಹ ಕುತ್ಸಿತ ನೋಟಗಳಿಂದಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾದಂಬರಿಯ ಶಬರಿಯಂತೆಯೇ ನಾವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ತಪ್ಪದೇ ಶೋಷಣೆಯನ್ನು ಅನುಭವಿಸಿರುವುದು ವಾಸ್ತವ. ನಾವ್ಯಾರೂ ಈ ಅವಮಾನದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಮೀಸಲಾತಿಯ ನಿಜವಾದ ಅರ್ಥ ಎಲ್ಲರಿಗೂ ತಿಳಿಯಬೇಕಿದೆ. ನಿಮಗೆ ಮೀಸಲಾತಿಯನ್ನು ಪಡೆಯುತ್ತಿರುವವರ ಬಗ್ಗೆ ಅಸೂಯೆ, ದ್ವೇಷ ಇದ್ದರೆ ಅಥವಾ ಮೀಸಲಾತಿಯಿಂದಾಗಿ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ ಎಂಬ ನಿಲುವಿದ್ದರೆ ಅಥವಾ ಈಗ ಜಾತಿಯೆಂಬುದೇ ಇಲ್ಲ, ಮೀಸಲಾತಿಯನ್ನು ಬಡತನದ ಆಧಾರದ ಮೇಲೆ ನೀಡಬೇಕು ಎಂಬೆಲ್ಲಾ ತಕರಾರುಗಳಿದ್ದರೆ ಈ ಪುಸ್ತಕ ನಿಮ್ಮೆಲ್ಲಾ ತಕರಾರುಗಳಿಗೆ ಸ್ಪಷ್ಟನೆ ಕೊಡುತ್ತದೆ. ಈ ಕಥನವು ಮೇಲ್ಜಾತಿಯಲ್ಲಿ ಹುಟ್ಟಿದವರು ತಮ್ಮ ಜಾತಿಯ ಕಾರಣಕ್ಕೆ ಪಡೆಯುವ ಎಲ್ಲಾ ರೀತಿಯ ಸಾಮಾಜಿಕ ಬಂಡವಾಳಗಳನ್ನು ಮನಗಾಣಿಸಿ, ಮೀಸಲಾತಿ ಯಾಕೆ ಬೇಕು ಎಂಬುದನ್ನೂ ಅರ್ಥ ಮಾಡಿಸುತ್ತದೆ. ಜೊತೆಗೆ, ಶಿಕ್ಷಿತರಾದ ನಮ್ಮ ಜವಾಬ್ದಾರಿಗಳೇನು, ನಾವೇಗೆ ಸಂಘಟಿತರಾಗಬೇಕು ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಂದ, ಹಳ್ಳಿಗಳಿಂದ ನಗರಕ್ಕೆ ಬರುವ ದಲಿತ, ದಮನಿತ ವಿದ್ಯಾರ್ಥಿನಿ/ವಿದ್ಯಾರ್ಥಿಯು ನಗರದ ಉಳ್ಳವರ ಮಧ್ಯೆ ಏಕಾಂಗಿಯಾಗಿ ಪ್ರತ್ಯೇಕಗೊಳ್ಳುವುದನ್ನು ತಡೆಯಲು ನಾವು ಮಾಡಬೇಕಾದ ಕರ್ತವ್ಯಗಳೇನು ಎಂಬುದನ್ನೂ ಹೇಳುತ್ತದೆ.

ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ನೆರವಾಗುವ ಈ ಪುಸ್ತಕವನ್ನು ಕೊಟ್ಟ ಸಂಗೀತಾ ಮುಳೆಯವರಿಗೆ ಹಾಗೂ ಅದನ್ನು ಕನ್ನಡಕ್ಕೆ ತಂದಿರುವ ಕೆಸ್ತಾರ ವಿ ಮೌರ್ಯ ಮತ್ತು ವಿಕಾಸ್ ಆರ್ ಮೌರ್ಯರವರಿಗೆ
ಅಭಿನಂದನೆಗಳು.

ಕಾವ್ಯ .ಸಿ

ಕಾವ್ಯ .ಸಿ
ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕಾವ್ಯ ಸದ್ಯಕ್ಕೆ ಬೆಂಗಳೂರು ನಿವಾಸಿ. ದಲಿತ-ಬಹುಜನ ಚಳವಳಿ ಮತ್ತು ಸ್ತ್ರೀವಾದಿ ಚಿಂತನೆಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ.


ಇದನ್ನೂ ಓದಿ: ನೊಂದವರ ಘನತೆಗೆ ಮಾರ್ಗ ತೋರಿದ ಸಾವಿತ್ರಿಬಾಯಿ ಫುಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಧನ್ಯವಾದಗಳು ಮೇಡಂ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.
    ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ.
    ಜೈ ಸಾವಿತ್ರಿಬಾಯಿ ಫುಲೆ 🌹
    ಜೈ ಭೀಮ್ 🙏

    💯ಮಾರುತಿ ಕೆಳಗೇರಿ 🙏

LEAVE A REPLY

Please enter your comment!
Please enter your name here

- Advertisment -

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...