Homeಪುಸ್ತಕ ವಿಮರ್ಶೆ’ಸಾವಿತ್ರಿಬಾಯಿ ಫುಲೆ ಮತ್ತು ನಾನು’: ಶೋಷಿತ ಶಬರಿಗಳ ಕಥನಗಳಿಗೆ ಕನ್ನಡಿ

’ಸಾವಿತ್ರಿಬಾಯಿ ಫುಲೆ ಮತ್ತು ನಾನು’: ಶೋಷಿತ ಶಬರಿಗಳ ಕಥನಗಳಿಗೆ ಕನ್ನಡಿ

- Advertisement -
- Advertisement -

ಶೌಚಾಲಯದಂತಹ ಕನಿಷ್ಟ ಮೂಲಸೌಕರ್ಯಗಳೂ ಇಲ್ಲದ ಒಂದು ಹಳ್ಳಿಯಲ್ಲಿ ಬದುಕುತ್ತಿರುವ, ನಗರದ ಕಲ್ಪನೆಯೇ ಇಲ್ಲದ ತಳಸಮುದಾಯದ ಒಬ್ಬ ಹುಡುಗಿ ಶಬರಿ ತನ್ನ ಸಾಹಸದಿಂದ ನಗರದ ಒಂದು ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆದು, ಆನಂತರ ಆ ಶಿಕ್ಷಣ ಸಂಸ್ಥೆಯಲ್ಲಿ ಎದುರಾಗುವ ಅವಮಾನ, ನಿರ್ಲಕ್ಷ್ಯ, ಏಕಾಂಗಿತನದಂತಹ ಸವಾಲುಗಳ ನಡುವೆ ಕುಗ್ಗಿ, ಮತ್ತೆ ಎದ್ದುನಿಂತು ಅಂದುಕೊಂಡಿದ್ದನ್ನು ಸಾಧಿಸಿ, ಒಬ್ಬ ಆಕ್ಟಿವಿಸ್ಟ್ ಆದ ಪ್ರಗತಿಯ ಹಾದಿಯನ್ನು ’ಸಾವಿತ್ರಿಬಾಯಿ ಫುಲೆ ಮತ್ತು ನಾನು’ ಎಂಬ ಕಥನ (ಕಿರು ಕಾದಂಬರಿ) ನಿರೂಪಿಸುತ್ತದೆ.

ಶಬರಿಯ ಈ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಕೆಳಜಾತಿಯ ಹೆಣ್ಣು, ಜಾತಿಯ ಕಾರಣಕ್ಕೆ ಮಾತ್ರವಲ್ಲದೆ ಹೆಣ್ಣೆಂಬ ಕಾರಣವೂ ಸೇರಿ ಇನ್ನೂ ಹೆಚ್ಚು ತುಳಿಯಲ್ಪಟ್ಟವಳಾಗಿದ್ದಾಳೆ. ಈ ವ್ಯವಸ್ಥೆಯು ’ಮಾದರಿ ಹೆಣ್ಣು’ ಎಂದರೆ ಹೀಗೇ ಎಂದು ಶತಮಾನಗಳಿಂದ ಬಿಂಬಿಸಿದೆ. ಈ ಗುಂಪಿಗೆ ಸೇರಲು ಸೋ ಕಾಲ್ಡ್ ಮಾನದಂಡಗಳೆನಿಸಿಕೊಂಡಿರುವ ಮೇಲ್ಜಾತಿ, ಬಿಳಿಬಣ್ಣ, ಶುದ್ಧ ಭಾಷೆ, ಬಣ್ಣಬಣ್ಣದ ಬಟ್ಟೆ ಈ ಯಾವುವೂ ಶಬರಿಯ ಬಳಿಯಿಲ್ಲ. ತಳಜಾತಿಯಿಂದ ಬಂದ ಅವಳು ನಗರವನ್ನೇ ನೋಡಿರದ, ಕಪ್ಪು ಬಣ್ಣದ, ಜಿಡ್ಡು ಮುಖದ, ಇಂಗ್ಲಿಷ್ ಬಾರದ, ಮೀಸಲಾತಿಯಿಂದ ಮುಂದೆಬಂದ ಹುಡುಗಿ. ಅವಳನ್ನು ಪ್ರತ್ಯೇಕಿಸಲು ಈ ವ್ಯವಸ್ಥೆಗೆ ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕೇ? ಧರ್ಮ, ಜಾತಿ, ಲಿಂಗ, ಭಾಷೆ, ಬಣ್ಣ, ಆಹಾರ, ಉಡುಗೆ ಇತ್ಯಾದಿಯಾಗಿ ಯಾವುದೋ ಒಂದು ಭಿನ್ನತೆಯ ಕಾರಣಕ್ಕೆ ಎಲ್ಲರಿಂದಲೂ, ಎಲ್ಲಾ ಕಡೆಯೂ ಹೊರಗಿಡುವಿಕೆ ಕ್ರೌರ್ಯದ ಪರಮಾವಧಿ. ಈ ಕ್ರೌರ್ಯ ಅಂತಿಂತದ್ದಲ್ಲಾ. ಇದು ಒಂದು ವ್ಯಕ್ತಿತ್ವವನ್ನೇ ಕೊಂದುಬಿಡುತ್ತದೆ. ಶಬರಿ ಈ ಪ್ರತ್ಯೇಕತೆಯಿಂದ ಖಿನ್ನತೆಗೊಳಗಾಗಿ ಇನ್ನು ಇಲ್ಲಿ ಬದುಕುಳಿಯುವುದು ಅಸಾಧ್ಯವೆಂದು ನಿರ್ಧರಿಸಿ ಆತ್ಮಹತ್ಯೆಯ ಬಗ್ಗೆ ಯೋಚಿಸುವಾಗ ಅವಳಿಗೆ ಸಿಕ್ಕ ಸಾವಿತ್ರಿಬಾಯಿ ಫುಲೆಯವರ ಡೈರಿಯು ಬದುಕಲು ಸ್ಫೂರ್ತಿ ತುಂಬುತ್ತದೆ. ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದು ಅಪರಾಧವಾಗಿದ್ದ ಕಾಲದಲ್ಲಿ, ಜ್ಯೋತಿಬಾ ಫುಲೆಯವರ ಬೆಂಬಲದಿಂದ ಶಿಕ್ಷಣ ಪಡೆದು, ಇಡೀ ಸಮಾಜದ, ಕುಟುಂಬದ ಅಡಚಣೆಗಳ ನಡುವೆಯೂ ಭಾರತದಲ್ಲೇ ಮೊದಲಬಾರಿಗೆ ಹೆಣ್ಣು ಮಕ್ಕಳಿಗೆ, ದಲಿತರಿಗೆ, ದಮನಿತರಿಗೆ ಶಾಲೆಯನ್ನು ತೆರೆದ ಸಾವಿತ್ರಿಬಾಯಿ ಫುಲೆಯವರ ಸಾಧನೆ ಶಬರಿಗೆ ತಾನು ಮಾಡಬೇಕಿರುವ ಕರ್ತವ್ಯವನ್ನು, ತನಗಿರುವ ಜವಾಬ್ದಾರಿಯನ್ನು ಎಚ್ಚರಿಸುತ್ತದೆ. ಇದರಿಂದ ಶಬರಿಯ ಆತ್ಮಸ್ಥೈರ್ಯ ಹೆಚ್ಚುತ್ತದೆ. ತನ್ನ ಗುರಿಯು ಸ್ಪಷ್ಟವಾಗುತ್ತದೆ. ಆದರೆ, ಅದನ್ನು ಸಾಧಿಸಲು ಹೊರಟ ಶಬರಿ ಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ. ಶತಮಾನಗಳಿಂದ ತಳಸಮುದಾಯದ ಜನರನ್ನು ಗುಲಾಮರನ್ನಾಗಿ ದುಡಿಸಿಕೊಂಡ ಈ ವ್ಯವಸ್ಥೆಗೆ ಕೆಳಜಾತಿಯ, ಅದರಲ್ಲೂ ಹೆಣ್ಣೊಬ್ಬಳ ಆತ್ಮವಿಶ್ವಾಸ ನೆಮ್ಮದಿ ಕೆಡಿಸದಿರಲು ಸಾಧ್ಯವೇ? ಇಲ್ಲಿ ಹೆಣ್ಣೊಬ್ಬಳನ್ನು ತನ್ನ ಸ್ಥಾನದಿಂದ ಮೇಲೇಳದಂತೆ ತಡೆಯಲು ಬೇಕಾದ ಎಲ್ಲಾ ನೀಚ ಕ್ರೌರ್ಯಗಳನ್ನೂ ಎಸಗಲಾಗುತ್ತದೆ ಎಂಬುದಕ್ಕೆ ಅವಳನ್ನು ಕಾರಿನಲ್ಲಿ ಅಪಹರಿಸಿ ಕಿರುಕುಳ ಕೊಟ್ಟು ಬೆದರಿಸಿದ ಘಟನೆ ಒಂದು ದುರಂತ ಉದಾಹರಣೆಯಾಗಿ, ಸಾಂಕೇತಿಕವಾಗಿ ಚಿತ್ರಿಸಲಾಗಿದೆ.


ಇಷ್ಟೆಲ್ಲಾ ಅಡಚಣೆಗಳ ಮಧ್ಯೆಯೂ ಶಬರಿ ಕುಸಿಯದೆ, ತನ್ನ ಔಪಚಾರಿಕ ಶಿಕ್ಷಣದ ಪಡೆಯುವುದರ ಜೊತೆಗೆ, ಶೋಷಿಸುವವರ ಮಧ್ಯೆ ಬದುಕಿ ಜಯಿಸುವ ಸಾಮರ್ಥ್ಯವನ್ನು ಕಲಿತುಕೊಂಡು ತನ್ನ ಗುರಿ ಮುಟ್ಟುತ್ತಾಳೆ. ಅಂತ್ಯಗೊಳಿಸಬೇಕೆಂದುಕೊಂಡಿದ್ದ ಬದುಕನ್ನು ಅರ್ಥಪೂರ್ಣವಾಗಿ ಜೀವಿಸಿ ತನ್ನ ಹೋರಾಟದಲ್ಲಿ ಗೆದ್ದ ಅವಳ ಹೋರಾಟದ ಹಾದಿ ನಮ್ಮಂತಹ ಸಾವಿರಾರು ಶಬರಿಗಳಿಗೆ ಸ್ಫೂರ್ತಿ.

ಮೀಸಲಾತಿ ಮತ್ತು ಅದನ್ನು ಪಡೆಯುತ್ತಿರುವವರ ಕುರಿತು ಮೇಲ್ಜಾತಿಗಳಲ್ಲಿ ಅಸಹನೆ, ಕೇಡಿನ ಮನೋಭಾವ ಹಾಗೂ ತಾತ್ಸಾರ ಇಂದಿಗೂ ಪ್ರಸ್ತುತವಾಗಿದೆ ಹಾಗು ಬೆಳೆಯುತ್ತಲೇ ಇದೆ. ಮೀಸಲಾತಿಯ ಬಗೆಗಿನ ಇಂತಹ ಕುತ್ಸಿತ ನೋಟಗಳಿಂದಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾದಂಬರಿಯ ಶಬರಿಯಂತೆಯೇ ನಾವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ತಪ್ಪದೇ ಶೋಷಣೆಯನ್ನು ಅನುಭವಿಸಿರುವುದು ವಾಸ್ತವ. ನಾವ್ಯಾರೂ ಈ ಅವಮಾನದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಮೀಸಲಾತಿಯ ನಿಜವಾದ ಅರ್ಥ ಎಲ್ಲರಿಗೂ ತಿಳಿಯಬೇಕಿದೆ. ನಿಮಗೆ ಮೀಸಲಾತಿಯನ್ನು ಪಡೆಯುತ್ತಿರುವವರ ಬಗ್ಗೆ ಅಸೂಯೆ, ದ್ವೇಷ ಇದ್ದರೆ ಅಥವಾ ಮೀಸಲಾತಿಯಿಂದಾಗಿ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ ಎಂಬ ನಿಲುವಿದ್ದರೆ ಅಥವಾ ಈಗ ಜಾತಿಯೆಂಬುದೇ ಇಲ್ಲ, ಮೀಸಲಾತಿಯನ್ನು ಬಡತನದ ಆಧಾರದ ಮೇಲೆ ನೀಡಬೇಕು ಎಂಬೆಲ್ಲಾ ತಕರಾರುಗಳಿದ್ದರೆ ಈ ಪುಸ್ತಕ ನಿಮ್ಮೆಲ್ಲಾ ತಕರಾರುಗಳಿಗೆ ಸ್ಪಷ್ಟನೆ ಕೊಡುತ್ತದೆ. ಈ ಕಥನವು ಮೇಲ್ಜಾತಿಯಲ್ಲಿ ಹುಟ್ಟಿದವರು ತಮ್ಮ ಜಾತಿಯ ಕಾರಣಕ್ಕೆ ಪಡೆಯುವ ಎಲ್ಲಾ ರೀತಿಯ ಸಾಮಾಜಿಕ ಬಂಡವಾಳಗಳನ್ನು ಮನಗಾಣಿಸಿ, ಮೀಸಲಾತಿ ಯಾಕೆ ಬೇಕು ಎಂಬುದನ್ನೂ ಅರ್ಥ ಮಾಡಿಸುತ್ತದೆ. ಜೊತೆಗೆ, ಶಿಕ್ಷಿತರಾದ ನಮ್ಮ ಜವಾಬ್ದಾರಿಗಳೇನು, ನಾವೇಗೆ ಸಂಘಟಿತರಾಗಬೇಕು ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಂದ, ಹಳ್ಳಿಗಳಿಂದ ನಗರಕ್ಕೆ ಬರುವ ದಲಿತ, ದಮನಿತ ವಿದ್ಯಾರ್ಥಿನಿ/ವಿದ್ಯಾರ್ಥಿಯು ನಗರದ ಉಳ್ಳವರ ಮಧ್ಯೆ ಏಕಾಂಗಿಯಾಗಿ ಪ್ರತ್ಯೇಕಗೊಳ್ಳುವುದನ್ನು ತಡೆಯಲು ನಾವು ಮಾಡಬೇಕಾದ ಕರ್ತವ್ಯಗಳೇನು ಎಂಬುದನ್ನೂ ಹೇಳುತ್ತದೆ.

ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ನೆರವಾಗುವ ಈ ಪುಸ್ತಕವನ್ನು ಕೊಟ್ಟ ಸಂಗೀತಾ ಮುಳೆಯವರಿಗೆ ಹಾಗೂ ಅದನ್ನು ಕನ್ನಡಕ್ಕೆ ತಂದಿರುವ ಕೆಸ್ತಾರ ವಿ ಮೌರ್ಯ ಮತ್ತು ವಿಕಾಸ್ ಆರ್ ಮೌರ್ಯರವರಿಗೆ
ಅಭಿನಂದನೆಗಳು.

ಕಾವ್ಯ .ಸಿ

ಕಾವ್ಯ .ಸಿ
ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕಾವ್ಯ ಸದ್ಯಕ್ಕೆ ಬೆಂಗಳೂರು ನಿವಾಸಿ. ದಲಿತ-ಬಹುಜನ ಚಳವಳಿ ಮತ್ತು ಸ್ತ್ರೀವಾದಿ ಚಿಂತನೆಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ.


ಇದನ್ನೂ ಓದಿ: ನೊಂದವರ ಘನತೆಗೆ ಮಾರ್ಗ ತೋರಿದ ಸಾವಿತ್ರಿಬಾಯಿ ಫುಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಧನ್ಯವಾದಗಳು ಮೇಡಂ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.
    ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ.
    ಜೈ ಸಾವಿತ್ರಿಬಾಯಿ ಫುಲೆ 🌹
    ಜೈ ಭೀಮ್ 🙏

    💯ಮಾರುತಿ ಕೆಳಗೇರಿ 🙏

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...