Homeಪುಸ್ತಕ ವಿಮರ್ಶೆ’ಸಾವಿತ್ರಿಬಾಯಿ ಫುಲೆ ಮತ್ತು ನಾನು’: ಶೋಷಿತ ಶಬರಿಗಳ ಕಥನಗಳಿಗೆ ಕನ್ನಡಿ

’ಸಾವಿತ್ರಿಬಾಯಿ ಫುಲೆ ಮತ್ತು ನಾನು’: ಶೋಷಿತ ಶಬರಿಗಳ ಕಥನಗಳಿಗೆ ಕನ್ನಡಿ

- Advertisement -
- Advertisement -

ಶೌಚಾಲಯದಂತಹ ಕನಿಷ್ಟ ಮೂಲಸೌಕರ್ಯಗಳೂ ಇಲ್ಲದ ಒಂದು ಹಳ್ಳಿಯಲ್ಲಿ ಬದುಕುತ್ತಿರುವ, ನಗರದ ಕಲ್ಪನೆಯೇ ಇಲ್ಲದ ತಳಸಮುದಾಯದ ಒಬ್ಬ ಹುಡುಗಿ ಶಬರಿ ತನ್ನ ಸಾಹಸದಿಂದ ನಗರದ ಒಂದು ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆದು, ಆನಂತರ ಆ ಶಿಕ್ಷಣ ಸಂಸ್ಥೆಯಲ್ಲಿ ಎದುರಾಗುವ ಅವಮಾನ, ನಿರ್ಲಕ್ಷ್ಯ, ಏಕಾಂಗಿತನದಂತಹ ಸವಾಲುಗಳ ನಡುವೆ ಕುಗ್ಗಿ, ಮತ್ತೆ ಎದ್ದುನಿಂತು ಅಂದುಕೊಂಡಿದ್ದನ್ನು ಸಾಧಿಸಿ, ಒಬ್ಬ ಆಕ್ಟಿವಿಸ್ಟ್ ಆದ ಪ್ರಗತಿಯ ಹಾದಿಯನ್ನು ’ಸಾವಿತ್ರಿಬಾಯಿ ಫುಲೆ ಮತ್ತು ನಾನು’ ಎಂಬ ಕಥನ (ಕಿರು ಕಾದಂಬರಿ) ನಿರೂಪಿಸುತ್ತದೆ.

ಶಬರಿಯ ಈ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಕೆಳಜಾತಿಯ ಹೆಣ್ಣು, ಜಾತಿಯ ಕಾರಣಕ್ಕೆ ಮಾತ್ರವಲ್ಲದೆ ಹೆಣ್ಣೆಂಬ ಕಾರಣವೂ ಸೇರಿ ಇನ್ನೂ ಹೆಚ್ಚು ತುಳಿಯಲ್ಪಟ್ಟವಳಾಗಿದ್ದಾಳೆ. ಈ ವ್ಯವಸ್ಥೆಯು ’ಮಾದರಿ ಹೆಣ್ಣು’ ಎಂದರೆ ಹೀಗೇ ಎಂದು ಶತಮಾನಗಳಿಂದ ಬಿಂಬಿಸಿದೆ. ಈ ಗುಂಪಿಗೆ ಸೇರಲು ಸೋ ಕಾಲ್ಡ್ ಮಾನದಂಡಗಳೆನಿಸಿಕೊಂಡಿರುವ ಮೇಲ್ಜಾತಿ, ಬಿಳಿಬಣ್ಣ, ಶುದ್ಧ ಭಾಷೆ, ಬಣ್ಣಬಣ್ಣದ ಬಟ್ಟೆ ಈ ಯಾವುವೂ ಶಬರಿಯ ಬಳಿಯಿಲ್ಲ. ತಳಜಾತಿಯಿಂದ ಬಂದ ಅವಳು ನಗರವನ್ನೇ ನೋಡಿರದ, ಕಪ್ಪು ಬಣ್ಣದ, ಜಿಡ್ಡು ಮುಖದ, ಇಂಗ್ಲಿಷ್ ಬಾರದ, ಮೀಸಲಾತಿಯಿಂದ ಮುಂದೆಬಂದ ಹುಡುಗಿ. ಅವಳನ್ನು ಪ್ರತ್ಯೇಕಿಸಲು ಈ ವ್ಯವಸ್ಥೆಗೆ ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕೇ? ಧರ್ಮ, ಜಾತಿ, ಲಿಂಗ, ಭಾಷೆ, ಬಣ್ಣ, ಆಹಾರ, ಉಡುಗೆ ಇತ್ಯಾದಿಯಾಗಿ ಯಾವುದೋ ಒಂದು ಭಿನ್ನತೆಯ ಕಾರಣಕ್ಕೆ ಎಲ್ಲರಿಂದಲೂ, ಎಲ್ಲಾ ಕಡೆಯೂ ಹೊರಗಿಡುವಿಕೆ ಕ್ರೌರ್ಯದ ಪರಮಾವಧಿ. ಈ ಕ್ರೌರ್ಯ ಅಂತಿಂತದ್ದಲ್ಲಾ. ಇದು ಒಂದು ವ್ಯಕ್ತಿತ್ವವನ್ನೇ ಕೊಂದುಬಿಡುತ್ತದೆ. ಶಬರಿ ಈ ಪ್ರತ್ಯೇಕತೆಯಿಂದ ಖಿನ್ನತೆಗೊಳಗಾಗಿ ಇನ್ನು ಇಲ್ಲಿ ಬದುಕುಳಿಯುವುದು ಅಸಾಧ್ಯವೆಂದು ನಿರ್ಧರಿಸಿ ಆತ್ಮಹತ್ಯೆಯ ಬಗ್ಗೆ ಯೋಚಿಸುವಾಗ ಅವಳಿಗೆ ಸಿಕ್ಕ ಸಾವಿತ್ರಿಬಾಯಿ ಫುಲೆಯವರ ಡೈರಿಯು ಬದುಕಲು ಸ್ಫೂರ್ತಿ ತುಂಬುತ್ತದೆ. ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದು ಅಪರಾಧವಾಗಿದ್ದ ಕಾಲದಲ್ಲಿ, ಜ್ಯೋತಿಬಾ ಫುಲೆಯವರ ಬೆಂಬಲದಿಂದ ಶಿಕ್ಷಣ ಪಡೆದು, ಇಡೀ ಸಮಾಜದ, ಕುಟುಂಬದ ಅಡಚಣೆಗಳ ನಡುವೆಯೂ ಭಾರತದಲ್ಲೇ ಮೊದಲಬಾರಿಗೆ ಹೆಣ್ಣು ಮಕ್ಕಳಿಗೆ, ದಲಿತರಿಗೆ, ದಮನಿತರಿಗೆ ಶಾಲೆಯನ್ನು ತೆರೆದ ಸಾವಿತ್ರಿಬಾಯಿ ಫುಲೆಯವರ ಸಾಧನೆ ಶಬರಿಗೆ ತಾನು ಮಾಡಬೇಕಿರುವ ಕರ್ತವ್ಯವನ್ನು, ತನಗಿರುವ ಜವಾಬ್ದಾರಿಯನ್ನು ಎಚ್ಚರಿಸುತ್ತದೆ. ಇದರಿಂದ ಶಬರಿಯ ಆತ್ಮಸ್ಥೈರ್ಯ ಹೆಚ್ಚುತ್ತದೆ. ತನ್ನ ಗುರಿಯು ಸ್ಪಷ್ಟವಾಗುತ್ತದೆ. ಆದರೆ, ಅದನ್ನು ಸಾಧಿಸಲು ಹೊರಟ ಶಬರಿ ಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ. ಶತಮಾನಗಳಿಂದ ತಳಸಮುದಾಯದ ಜನರನ್ನು ಗುಲಾಮರನ್ನಾಗಿ ದುಡಿಸಿಕೊಂಡ ಈ ವ್ಯವಸ್ಥೆಗೆ ಕೆಳಜಾತಿಯ, ಅದರಲ್ಲೂ ಹೆಣ್ಣೊಬ್ಬಳ ಆತ್ಮವಿಶ್ವಾಸ ನೆಮ್ಮದಿ ಕೆಡಿಸದಿರಲು ಸಾಧ್ಯವೇ? ಇಲ್ಲಿ ಹೆಣ್ಣೊಬ್ಬಳನ್ನು ತನ್ನ ಸ್ಥಾನದಿಂದ ಮೇಲೇಳದಂತೆ ತಡೆಯಲು ಬೇಕಾದ ಎಲ್ಲಾ ನೀಚ ಕ್ರೌರ್ಯಗಳನ್ನೂ ಎಸಗಲಾಗುತ್ತದೆ ಎಂಬುದಕ್ಕೆ ಅವಳನ್ನು ಕಾರಿನಲ್ಲಿ ಅಪಹರಿಸಿ ಕಿರುಕುಳ ಕೊಟ್ಟು ಬೆದರಿಸಿದ ಘಟನೆ ಒಂದು ದುರಂತ ಉದಾಹರಣೆಯಾಗಿ, ಸಾಂಕೇತಿಕವಾಗಿ ಚಿತ್ರಿಸಲಾಗಿದೆ.


ಇಷ್ಟೆಲ್ಲಾ ಅಡಚಣೆಗಳ ಮಧ್ಯೆಯೂ ಶಬರಿ ಕುಸಿಯದೆ, ತನ್ನ ಔಪಚಾರಿಕ ಶಿಕ್ಷಣದ ಪಡೆಯುವುದರ ಜೊತೆಗೆ, ಶೋಷಿಸುವವರ ಮಧ್ಯೆ ಬದುಕಿ ಜಯಿಸುವ ಸಾಮರ್ಥ್ಯವನ್ನು ಕಲಿತುಕೊಂಡು ತನ್ನ ಗುರಿ ಮುಟ್ಟುತ್ತಾಳೆ. ಅಂತ್ಯಗೊಳಿಸಬೇಕೆಂದುಕೊಂಡಿದ್ದ ಬದುಕನ್ನು ಅರ್ಥಪೂರ್ಣವಾಗಿ ಜೀವಿಸಿ ತನ್ನ ಹೋರಾಟದಲ್ಲಿ ಗೆದ್ದ ಅವಳ ಹೋರಾಟದ ಹಾದಿ ನಮ್ಮಂತಹ ಸಾವಿರಾರು ಶಬರಿಗಳಿಗೆ ಸ್ಫೂರ್ತಿ.

ಮೀಸಲಾತಿ ಮತ್ತು ಅದನ್ನು ಪಡೆಯುತ್ತಿರುವವರ ಕುರಿತು ಮೇಲ್ಜಾತಿಗಳಲ್ಲಿ ಅಸಹನೆ, ಕೇಡಿನ ಮನೋಭಾವ ಹಾಗೂ ತಾತ್ಸಾರ ಇಂದಿಗೂ ಪ್ರಸ್ತುತವಾಗಿದೆ ಹಾಗು ಬೆಳೆಯುತ್ತಲೇ ಇದೆ. ಮೀಸಲಾತಿಯ ಬಗೆಗಿನ ಇಂತಹ ಕುತ್ಸಿತ ನೋಟಗಳಿಂದಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾದಂಬರಿಯ ಶಬರಿಯಂತೆಯೇ ನಾವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ತಪ್ಪದೇ ಶೋಷಣೆಯನ್ನು ಅನುಭವಿಸಿರುವುದು ವಾಸ್ತವ. ನಾವ್ಯಾರೂ ಈ ಅವಮಾನದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಮೀಸಲಾತಿಯ ನಿಜವಾದ ಅರ್ಥ ಎಲ್ಲರಿಗೂ ತಿಳಿಯಬೇಕಿದೆ. ನಿಮಗೆ ಮೀಸಲಾತಿಯನ್ನು ಪಡೆಯುತ್ತಿರುವವರ ಬಗ್ಗೆ ಅಸೂಯೆ, ದ್ವೇಷ ಇದ್ದರೆ ಅಥವಾ ಮೀಸಲಾತಿಯಿಂದಾಗಿ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ ಎಂಬ ನಿಲುವಿದ್ದರೆ ಅಥವಾ ಈಗ ಜಾತಿಯೆಂಬುದೇ ಇಲ್ಲ, ಮೀಸಲಾತಿಯನ್ನು ಬಡತನದ ಆಧಾರದ ಮೇಲೆ ನೀಡಬೇಕು ಎಂಬೆಲ್ಲಾ ತಕರಾರುಗಳಿದ್ದರೆ ಈ ಪುಸ್ತಕ ನಿಮ್ಮೆಲ್ಲಾ ತಕರಾರುಗಳಿಗೆ ಸ್ಪಷ್ಟನೆ ಕೊಡುತ್ತದೆ. ಈ ಕಥನವು ಮೇಲ್ಜಾತಿಯಲ್ಲಿ ಹುಟ್ಟಿದವರು ತಮ್ಮ ಜಾತಿಯ ಕಾರಣಕ್ಕೆ ಪಡೆಯುವ ಎಲ್ಲಾ ರೀತಿಯ ಸಾಮಾಜಿಕ ಬಂಡವಾಳಗಳನ್ನು ಮನಗಾಣಿಸಿ, ಮೀಸಲಾತಿ ಯಾಕೆ ಬೇಕು ಎಂಬುದನ್ನೂ ಅರ್ಥ ಮಾಡಿಸುತ್ತದೆ. ಜೊತೆಗೆ, ಶಿಕ್ಷಿತರಾದ ನಮ್ಮ ಜವಾಬ್ದಾರಿಗಳೇನು, ನಾವೇಗೆ ಸಂಘಟಿತರಾಗಬೇಕು ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಂದ, ಹಳ್ಳಿಗಳಿಂದ ನಗರಕ್ಕೆ ಬರುವ ದಲಿತ, ದಮನಿತ ವಿದ್ಯಾರ್ಥಿನಿ/ವಿದ್ಯಾರ್ಥಿಯು ನಗರದ ಉಳ್ಳವರ ಮಧ್ಯೆ ಏಕಾಂಗಿಯಾಗಿ ಪ್ರತ್ಯೇಕಗೊಳ್ಳುವುದನ್ನು ತಡೆಯಲು ನಾವು ಮಾಡಬೇಕಾದ ಕರ್ತವ್ಯಗಳೇನು ಎಂಬುದನ್ನೂ ಹೇಳುತ್ತದೆ.

ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ನೆರವಾಗುವ ಈ ಪುಸ್ತಕವನ್ನು ಕೊಟ್ಟ ಸಂಗೀತಾ ಮುಳೆಯವರಿಗೆ ಹಾಗೂ ಅದನ್ನು ಕನ್ನಡಕ್ಕೆ ತಂದಿರುವ ಕೆಸ್ತಾರ ವಿ ಮೌರ್ಯ ಮತ್ತು ವಿಕಾಸ್ ಆರ್ ಮೌರ್ಯರವರಿಗೆ
ಅಭಿನಂದನೆಗಳು.

ಕಾವ್ಯ .ಸಿ

ಕಾವ್ಯ .ಸಿ
ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕಾವ್ಯ ಸದ್ಯಕ್ಕೆ ಬೆಂಗಳೂರು ನಿವಾಸಿ. ದಲಿತ-ಬಹುಜನ ಚಳವಳಿ ಮತ್ತು ಸ್ತ್ರೀವಾದಿ ಚಿಂತನೆಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ.


ಇದನ್ನೂ ಓದಿ: ನೊಂದವರ ಘನತೆಗೆ ಮಾರ್ಗ ತೋರಿದ ಸಾವಿತ್ರಿಬಾಯಿ ಫುಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಧನ್ಯವಾದಗಳು ಮೇಡಂ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.
    ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ.
    ಜೈ ಸಾವಿತ್ರಿಬಾಯಿ ಫುಲೆ 🌹
    ಜೈ ಭೀಮ್ 🙏

    💯ಮಾರುತಿ ಕೆಳಗೇರಿ 🙏

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...