Homeಕರ್ನಾಟಕಕರ್ನಾಟಕ ಬಜೆಟ್ 2021-22 ಗಾಳಿಯಲ್ಲಿ ಕಟ್ಟಿದ ಗೋಪುರ!: ಪ್ರೊ. ಟಿ ಆರ್ ಚಂದ್ರಶೇಖರ್

ಕರ್ನಾಟಕ ಬಜೆಟ್ 2021-22 ಗಾಳಿಯಲ್ಲಿ ಕಟ್ಟಿದ ಗೋಪುರ!: ಪ್ರೊ. ಟಿ ಆರ್ ಚಂದ್ರಶೇಖರ್

- Advertisement -
- Advertisement -

ಕರ್ನಾಟಕವು ಇಂದು ಎರಡು ರೀತಿಯ ಪ್ಯಾಂಡಮಿಕ್‌ಗಳನ್ನು ಎದುರಿಸುತ್ತಿದೆ. ಒಂದು: ಕೋವಿಡ್ 19. ಎರಡು: ಒಕ್ಕೂಟ(ಭಾರತ) ಸರ್ಕಾರದ ಮಲತಾಯಿ ಧೋರಣೆ. ಒಂದು ಜಾಗತಿಕ ಮತ್ತು ಪ್ರಕೃತಿ ನಿರ್ಮಿತ ವಿಕೋಪ. ಎರಡನೆಯದು ಒಕ್ಕೂಟ ಸರ್ಕಾರವು ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ. ಈ ಎರಡೂ ಪ್ಯಾಂಡಮಿಕ್‌ಗಳಿಂದಾಗಿ 2020-21 ಮತ್ತು 2021-22ರಲ್ಲಿ ನಮ್ಮ ಆರ್ಥಿಕತೆಯು ಇನ್ನಿಲ್ಲದ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಕೋವಿಡ್ 19ರಿಂದಾಗಿ ನಮ್ಮ ಆರ್ಥಿಕತೆ ನೆಲಕಚ್ಚುವಂತಾಯಿತು. ಇದರಿಂದಾಗಿ 2019-20ರಿಂದ 2020-21ರಲ್ಲಿ ಒಟ್ಟು ರಾಜ್ಯ ಆಂತರಿಕ ಉತ್ಪನ್ನವು ರೂ.18.05 ಲಕ್ಷ ಕೋಟಿಯಿಂದ ರೂ.17.02 ಲಕ್ಷ ಕೋಟಿಗೆ ಕುಸಿಯುವಂತಾಗಿದೆ (ಶೇ. 5.71 ಕುಸಿತ). ಕರ್ನಾಟಕಕ್ಕೆ 2018-19ರಲ್ಲಿ ಒಕ್ಕೂಟ ಸರ್ಕಾರದ ತೆರಿಗೆ ರಾಶಿಯಿಂದ ದೊರೆತ ಮೊತ್ತ ರೂ.35894 ಕೋಟಿ. ಆದರೆ 2019-20ರಲ್ಲಿ ದೊರೆತ ಮೊತ್ತ ರೂ.30919 ಕೋಟಿ. ಇದು 2020-21ರಲ್ಲಿ ಪರಿಷ್ಕೃತ ಅಂದಾಜಿನ ಪ್ರಕಾರ ರೂ. 20053 ಕೋಟಿಯಾಗಿದೆ. ಪ್ರಸ್ತುತ ವರ್ಷದ(2021-22) ಬಜೆಟ್ ಅಂದಾಜಿನಲ್ಲಿ ಇದು ರೂ. 24274 ಕೋಟಿಯಾಗಿದೆ. ಇದೇ ರೀತಿಯಲ್ಲಿ ಕೇಂದ್ರವು ರಾಜ್ಯಕ್ಕೆ ನೀಡುವ ಸಹಾಯಾನುದಾನ 2020-21ರಲ್ಲಿ ರೂ.14144 ಕೋಟಿಯಷ್ಟಾಗಿದ್ದರೆ 2021-22ರಲ್ಲಿ ಇದು ರೂ.15537 ಕೋಟಿಯಾಗಿದೆ.

ಅಂದರೆ ಒಕ್ಕೂಟ ಸರ್ಕಾರದಿಂದ ರಾಜ್ಯಕ್ಕೆ 2018-19ರಿಂದ 2019-20ರಲ್ಲಿ ಒಕ್ಕೂಟದ ವರ್ಗಾವಣೆಯಲ್ಲಿನ ಕಡಿತ ರೂ. 4975 ಕೋಟಿ ಮತ್ತು 2019-20 ರಿಂದ 2020-21ರ ನಡುವೆ ಉಂಟಾದ ಕಡಿತ ರೂ. 10866 ಕೋಟಿ. ಇದೇ ರೀತಿಯಲ್ಲಿ ಸಹಾಯಾನುದಾನ 2019-20ರಲ್ಲಿ ರೂ. 19839 ಕೋಟಿಯಷ್ಟಿದ್ದರೆ 2021-22ರಲ್ಲಿ ಇದರ ಮೊತ್ತ ರೂ. 15537 ಕೋಟಿ. ಇಲ್ಲಿನ ಕಡಿತ ರೂ. 4445 ಕೋಟಿ. ಈ ರೀತಿಯಲ್ಲಿ ಒಕ್ಕೂಟ(ಭಾರತ) ಸರ್ಕಾರದ ಮಲತಾಯಿ ಧೋರಣೆಯನ್ನು ರಾಜ್ಯದ ದೃಷ್ಟಿಯಿಂದ ಪ್ಯಾಂಡಮಿಕ್ ಎನ್ನದೆ ಮತ್ತೇನನ್ನಬೇಕು?

PC : Money9

ಒಂದು ಬಜೆಟ್ಟಿನ ಮೌಲ್ಯಮಾಪನದ ಮುಖ್ಯ ಮಾನದಂಡವೆಂದರೆ ಬಜೆಟ್ಟಿನ ಗಾತ್ರ. ಕರ್ನಾಟಕದ ಬಜೆಟ್ಟಿನಲ್ಲಿನ ಒಟ್ಟು ವೆಚ್ಚ 2020-21ರಲ್ಲಿ ರೂ.2.37 ಲಕ್ಷ ಕೋಟಿಯಷ್ಟಿದ್ದುದು 2021-22 ರಲ್ಲಿ ಇದು ರೂ.2.46 ಲಕ್ಷ ಕೋಟಿಗೇರಿದೆ. ಇಲ್ಲಿನ ಏರಿಕೆ ಪ್ರಮಾಣವು ಕೇವಲ ಶೇ.3.78. ಇಷ್ಟು ಏರಿಕೆಯಿಂದ ಯಾವ ಪ್ರಮಾಣದ ಆರ್ಥಿಕ ಪುನಶ್ಚೇತನವನ್ನು ನಾವು ನಿರೀಕ್ಷಿಸಬಹುದು? ಎಲ್ಲಕ್ಕಿಂತ ಮುಖ್ಯವಾಗಿ 2021-22ರಲ್ಲಿ ಬಡ್ಡಿ ಪಾವತಿ ವೆಚ್ಚ ರೂ.27160 ಕೋಟಿ. ಇದು ಒಟ್ಟು ವೆಚ್ಚದ ಶೇ.41 ರಷ್ಟಾಗುತ್ತದೆ. ಸಾರ್ವಜನಿಕ ಅರ್ಥಶಾಸ್ತ್ರದಲ್ಲಿ ಸರ್ಕಾರವೊಂದು ಸಾಲ ಎತ್ತುವುದು ತಪ್ಪೇನಲ್ಲ. ಆದರೆ ತಂದ ಸಾಲವನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬುದು ಮುಖ್ಯವಾಗುತ್ತದೆ. ಕರ್ನಾಟಕದ 2020-21ರಲ್ಲಿ ರೆವಿನ್ಯೂ ಕೊರತೆ ರೂ.19985 ಕೋಟಿ. ಇದು 2021-22ರಲ್ಲಿ ರೂ.15133 ಕೋಟಿಯಾಗಿದೆ. ಕರ್ನಾಟಕವು 2004-05ನೆಯ ಸಾಲಿನಿಂದಲೂ ಸತತವಾಗಿ ರೆವಿನ್ಯೂ ಖಾತೆಯಲ್ಲಿ ಆಧಿಕ್ಯವನ್ನು ಸಾಧಿಸಿಕೊಂಡು ಬಂದ ರಾಜ್ಯವಾಗಿದೆ. ಈ ಸಾಧನೆ ಇಂದು ಮಣ್ಣು ಪಾಲಾಗಿದೆ. ಸರ್ಕಾರವು ಎತ್ತಿದ ಸಾಲವನ್ನು ಬಂಡವಾಳ ವೆಚ್ಚಕ್ಕೆ ಬಳಸದೆ ರೆವಿನ್ಯೂ ಕೊರತೆ ತುಂಬಲು ಅಥವಾ ಬಡ್ಡಿ ಪಾವತಿಸಲು ಬಳಸಿದರೆ ಅದರಿಂದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಹಣಕಾಸು ವಲಯದ ನಿರ್ವಹಣೆಯು ಕಳೆದ ಎರಡು ವರ್ಷಗಳಿಂದ ಸಮರ್ಪಕವಾಗಿಲ್ಲ ಎಂದು ಹೇಳಬೇಕಾಗಿದೆ. ಇಲ್ಲಿ Escapee ರಾಜ್ಯ ಎಷ್ಟು ಕಾರಣವೋ ಒಕ್ಕೂಟ ಸರ್ಕಾರವು ರಾಜ್ಯಕ್ಕೆ ತೋರುತ್ತಿರುವ ಮಲತಾಯಿ ಧೋರಣೆಯೂ ಅಷ್ಟೇ ಕಾರಣ.

ಒಕ್ಕೂಟ ಸರ್ಕಾರವು ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾಡುತ್ತಿರುವ ಮತ್ತೊಂದು ಅನ್ಯಾಯವೆಂದರೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲಗಳ ಮೇಲಿನ ತೆರಿಗೆ ರಾಶಿಯನ್ನು ರಾಜ್ಯಗಳ ಜೊತೆ ಹಂಚಿಕೊಳ್ಳದೆ ತಿಂದು ನೊಣೆಯುತ್ತಿರುವುದು. ಏಕೆಂದರೆ ಈ ತೆರಿಗೆಯು ಜಿಎಸ್‌ಟಿ ವ್ಯಾಪ್ತಿಗೆ ಸೇರುವುದಿಲ್ಲ. ಈ ತೆರಿಗೆ ಮೂಲಕ ಭಾರತ ಸರ್ಕಾರವು ಸಂಗ್ರಹಿಸಿಕೊಳ್ಳುತ್ತಿರುವ ತೆರಿಗೆ ಮೊತ್ತ 2016-17ರಲ್ಲಿ ರೂ.2.37 ಲಕ್ಷ ಕೋಟಿಯಷ್ಟಾಗಿದ್ದರೆ 2020-21ರಲ್ಲಿ ಇದು ರೂ.3.01 ಲಕ್ಷ ಕೋಟಿಯಾಗಿದೆ (ಭಾರತ ಸರ್ಕಾರದ ಪೆಟ್ರೋಲಿಯಮ್ ಸಚಿವ ಧರ್ಮೇಂದ್ರ ಪ್ರಧಾನ ಹೇಳಿಕೆ: ಪ್ರಜಾವಾಣಿ. ಮಾರ್ಚ್ 09, 2021). ಇದು ಸಣ್ಣ ಪ್ರಮಾಣವಲ್ಲ. ಇದನ್ನು ಒಕ್ಕೂಟ ಸರ್ಕಾರವು ರಾಜ್ಯಗಳ ಜೊತೆ ಹಂಚಿಕೊಳ್ಳುತ್ತಿಲ್ಲ. ಇದು ಇನ್ನೊಂದು ರೀತಿಯಲ್ಲಿ ಕರ್ನಾಟಕಕ್ಕೆ ಬಿದ್ದ ಪ್ಯಾಂಡಮಿಕ್ ಹೊಡೆತ.

ಮತ್ತೊಂದು ರೀತಿಯಲ್ಲಿ ಒಕ್ಕೂಟ ಸರ್ಕಾರವು ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ. ಇದನ್ನು 15ನೆಯ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ ಸಿಂಗ್ ಬಹಿರಂಗಪಡಿಸಿದ್ದಾರೆ. ಒಕ್ಕೂಟ ಮತ್ತು ರಾಜ್ಯಗಳ ನಡುವೆ ಹಂಚಿಕೊಳ್ಳಬಹುದಾದ ತೆರಿಗೆ ರಾಶಿಯಲ್ಲಿ ಸೆಸ್ ಮತ್ತು ಸರ್‌ಚಾರ್ಚ್‌ಗಳು ಸೇರುವುದಿಲ್ಲ. ಎನ್.ಕೆ ಸಿಂಗ್ ಪ್ರಕಾರ 2021-22ರಿಂದ 2025-26ರ ಅವಧಿಯಲ್ಲಿನ ತೆರಿಗೆ ರಾಶಿ ಅಂದಾಜು ಮೊತ್ತ ರೂ.135.2 ಲಕ್ಷ ಕೋಟಿ. ಆದರೆ ಇದರಲ್ಲಿ ಸೆಸ್ ಮತ್ತು ಸರ್‌ಚಾರ್ಜ್‌ಗಳ ಮೊತ್ತವನ್ನು ತೆಗೆದರೆ ಹಂಚಬಹುದಾದ ಮೊತ್ತ ರೂ.103 ಲಕ್ಷ ಕೋಟಿ. ಒಂದು ವೇಳೆ ರೂ.135 ಕೋಟಿ ಹಂಚಿಕೆ ಮೊತ್ತವಾಗಿದ್ದರೆ ರಾಜ್ಯಗಳಿಗೆ ದೊರೆಯುವ ಮೊತ್ತ ರೂ.55.43 ಲಕ್ಷ ಕೋಟಿ (ಶೇ.41). ಆದರೆ ಈಗ ದೊರೆಯುವ ಮೊತ್ತ ರೂ.42.23 ಲಕ್ಷ ಕೋಟಿ ಮಾತ್ರ. ಒಕ್ಕೂಟದ ತೆರಿಗೆ ರಾಶಿಯಲ್ಲಿ ಸೆಸ್ ಮತ್ತು ಸರ್‌ಚಾರ್ಜ್‌ಗಳ ಪ್ರಮಾಣ 2011-12ರಲ್ಲಿ ಶೇ. 10.4ರಷ್ಟಿದ್ದುದು 2020-21ರಲ್ಲಿ ಶೇ.20ಕ್ಕೇರಿದೆ. ಇವೆಲ್ಲವೂ ಸಂವಿಧಾನದತ್ತ ಒಕ್ಕೂಟ ತತ್ವಕ್ಕೆ ವಿರುದ್ಧವಾದ ನಡೆಗಳಾಗಿವೆ. ಒಕ್ಕೂಟ ಸರ್ಕಾರದ ಇಂತಹ ನಡೆಯಿಂದಾಗಿ ಕರ್ನಾಟಕವು ತನ್ನ ಬಜೆಟ್ ನಿರ್ವಹಣೆಯಲ್ಲಿ ಮತ್ತು ಅಭಿವೃದ್ಧಿ ನಿರ್ವಹಣೆಯಲ್ಲಿ ವಿಫಲವಾಗುತ್ತಿದೆ.

ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯ

ಒಕ್ಕೂಟ ಸರ್ಕಾರದಿಂದ ರಾಜ್ಯಕ್ಕೆ ಉಂಟಾಗಿರುವ ಅನ್ಯಾಯವನ್ನು ಉಲ್ಬಣಗೊಳಿಸುವ ರೀತಿಯಲ್ಲಿ, 15ನೆಯ ಹಣಕಾಸು ಆಯೋಗವೂ ಕರ್ನಾಟಕಕ್ಕೆ ಭಾರತ ಸರ್ಕಾರದ ತೆರಿಗೆ ರಾಶಿಯಿಂದ ಮಾಡುವ ವರ್ಗಾವಣೆಯ ಪ್ರಮಾಣವನ್ನು 14ನೆಯ ಹಣಕಾಸು ಆಯೋಗದ ಶಿಫಾರಸ್ಸಾದ ಶೇ.4.713 ರಿಂದ ಶೇ.3.646ಕ್ಕೆ ಕಡಿತ ಮಾಡಿದೆ. ಅದರ ಶಿಫಾರಸ್ಸಿನ ಪ್ರಕಾರ 2016-17ರಿಂದ 2021-22ರ ಐದು ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ದೊರೆಯುವ ಭಾರತ ಸರ್ಕಾರದ ತೆರಿಗೆ ರಾಶಿಯಲ್ಲಿನ ಅನುದಾನದ ಅಂದಾಜು ರೂ.1.54 ಲಕ್ಷ ಕೋಟಿ. ಅಂದರೆ ವಾರ್ಷಿಕ ರೂ.30815.40 ಕೋಟಿ. ಹಿಂದಿನ 14ನೆಯ ಹಣಕಾಸು ಆಯೋಗದ ಶಿಫಾರಸ್ಸಿನ ಐದು ವರ್ಷಗಳಲ್ಲಿ (2015-16ರಿಂದ 2020-21) ಶಿಫಾರಸ್ಸು ಮಾಡಿದ್ದ ಅಂದಾಜು ಮೊತ್ತ ರೂ.1.86 ಲಕ್ಷ ಕೋಟಿ. ಅಂದರೆ ವಾರ್ಷಿಕ ರೂ.37215.6 ಕೋಟಿ. ಅಂದರೆ 15ನೆಯ ಹಣಕಾಸು ಆಯೋಗದ ಭಾರತ ಸರ್ಕಾರದ ತೆರಿಗೆ ರಾಶಿಯಲ್ಲಿನ ರಾಜ್ಯದ ಪಾಲು 14ನೆಯ ಹಣಕಾಸು ಆಯೋಗದ ಶಿಫಾರಸ್ಸಿಗೆ ಹೋಲಿಸಿದರೆ, ಇದು ರೂ.32001 ಕೋಟಿ ಕಡಿಮೆಯಾಗುತ್ತದೆ (ವಿವರಗಳಿಗೆ ನೋಡಿ: 14ನೆಯ ಹಣಕಾಸು ಆಯೋಗದ ವರದಿ, ಸಂಪುಟ 1, ಪುಟ: 95 ಮತ್ತು 15ನೆಯ ಹಣಕಾಸು ಆಯೋಗದ ಅಂತಿಮ ವರದಿ, ಪುಟ: 328).

ಬಜೆಟ್ಟಿನಲ್ಲಿ ಮಹಿಳಾ ಸ್ಪಂದನೆ

ಮಾನ್ಯ ಮುಖ್ಯಮಂತ್ರಿಯವರು ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 08ರಂದು ಬಜೆಟ್ ಮಂಡಿಸಿ ಮಹಿಳೆಯರಿಗೆ ವಿಶೇಷ ಆದ್ಯತೆಯನ್ನು ಬಜೆಟ್ಟಿನಲ್ಲಿ ನೀಡಿರುವುದಾಗಿ ಘೋಷಿಸಿದ್ದಾರೆ. ಹಾಗಾದರೆ ಈ ಬಜೆಟ್ಟನ್ನು ಮಹಿಳಾ ಸಂವೇದಿ ಬಜೆಟ್ಟೆಂದು ಹೇಳಬಹುದೆ? ಖಚಿತವಾಗಿ ಇಲ್ಲ. ಏಕೆಂದರೆ ಮಹಿಳಾ ಉದ್ದೇಶಿತ ಬಜೆಟ್ ಎಂಬುದನ್ನು ಸರ್ಕಾರ ಪರಿಭಾವಿಸಿಕೊಂಡಿರುವ ಕ್ರಮವೇ ಸಮಸ್ಯಾತ್ಮಕವಾಗಿದೆ. ಉದಾ: 2020-21ರ ಬಜೆಟ್ಟಿನಲ್ಲಿ ಮಹಿಳಾ ಉದ್ದೇಶಿತ ಬಜೆಟ್ ಕಾರ್ಯಕ್ರಮಗಳ ಸಂಖ್ಯೆ 953. ಸರ್ಕಾರವು 2020-21ರಲ್ಲಿ ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ ಬಜೆಟ್ಟಿನಲ್ಲಿ ನೀಡಿದ್ದ ಮೊತ್ತ ರೂ.37785 ಕೋಟಿ. ಇದು ಒಟ್ಟು ಬಜೆಟ್ ವೆಚ್ಚದ ಶೇ.15.88ರಷ್ಟಿತ್ತು. ಪ್ರಸ್ತುತ ವರ್ಷ ಇದಕ್ಕಾಗಿ ನೀಡಿರುವ ಮೊತ್ತ ರೂ.37187 ಕೋಟಿ. ಒಟ್ಟು ಬಜೆಟ್ ವೆಚ್ಚದ ಶೇ.15.10. ಅಂದರೆ ಕಡಿಮೆಯಾಗಿದೆ. ಈ ಮಹಿಳಾ ಉದ್ದೇಶಿತ ಬಜೆಟ್ ಸಮಾಜದ ಯಾವ ವರ್ಗದ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡಿದೆ? ಉದಾ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿನ ಒಟ್ಟು ಮಹಿಳಾ ಸಾಗುವಳಿದಾರರ ಸಂಖ್ಯೆ 18.27 ಲಕ್ಷ ಮತ್ತು ಭೂರಹಿತ ಕೃಷಿ ದಿನಗೂಲಿ ದುಡಿಮೆಗಾರ ಮಹಿಳೆಯರ ಸಂಖ್ಯೆ 38.72 ಲಕ್ಷ. ಇವರ ಬಗ್ಗೆ ಬಜೆಟ್ಟಿನಲ್ಲಿ ಏನಿದೆ? ಇವರ ಆಹಾರ ಭದ್ರತೆಯ ಬಗ್ಗೆ, ಇವರ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ, ಇವರ ಮಕ್ಕಳ ಯೋಗಕ್ಷೇಮದ ಬಗ್ಗೆ ಏನು ಕಾರ್ಯಕ್ರಮಗಳಿವೆ? ಏನೂ ಇಲ್ಲ.

ಮಹಿಳಾ ಉದ್ದಿಮೆದಾರರ ಬಗ್ಗೆ ಬಜೆಟ್ ಮಾತನಾಡುತ್ತದೆ. ನಗರ ಉದ್ಯೋಗಿ ಮಹಿಳೆಯರ ಶಿಶುಪಾಲನಾ ಕೇಂದ್ರಗಳ ಬಗ್ಗೆ ಬಜೆಟ್ಟಿನಲ್ಲಿ ಅನುದಾನವಿದೆ. ಆದರೆ ಈ ಬಜೆಟ್ಟಿನ ಬಹುಮುಖ್ಯ ವೈಫಲ್ಯವೆಂದರೆ ಮಕ್ಕಳು ಮತ್ತು ಮಹಿಳೆಯರ ಅಪೌಷ್ಟಿಕತೆಯ ಬಗ್ಗೆ ಮೌನ ವಹಿಸಿರುವುದು. ಕರ್ನಾಟಕದಲ್ಲಿ 6 ತಿಂಗಳಿಂದ 59 ತಿಂಗಳ ವಯೋಮಾದ ಒಟ್ಟು ಮಕ್ಕಳಲ್ಲಿ ಅನೀಮಿಯ ರೋಗವನ್ನು ಎದುರಿಸುತ್ತಿರುವ ಮಕ್ಕಳ ಪ್ರಮಾಣ 2015-16ರಲ್ಲಿ ಶೇ. 60.9ರಷ್ಟಿದ್ದುದು 2019-2020ರಲ್ಲಿ ಇದು ಶೇ.65.5ಕ್ಕೇರಿದೆ. ಇದೇ ರೀತಿಯಲ್ಲಿ 15ರಿಂದ 49 ವರ್ಷಗಳ ವಯೋಮಾನದ ಒಟ್ಟು ಮಹಿಳೆಯರಲ್ಲಿ ಅನೀಮಿಯ ಎದುರಿಸುತ್ತಿರುವ ಮಹಿಳೆಯರ ಪ್ರಮಾಣ 2015-16ರಲ್ಲಿ ಶೇ.44.8ರಷ್ಟಿದ್ದುದು 2019-2020ರಲ್ಲಿ ಶೇ.47.8ಕ್ಕೇರಿದೆ. (ಮೂಲ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ – ಎನ್‌ಎಫ್‌ಎಚ್‌ಎಸ್ – ಸುತ್ತು 4: 2015-16 ಮತ್ತು ಸುತ್ತು 5: 2019-2020, ಕರ್ನಾಟಕ). ಈ 2019-2020ರ ಸಮೀಕ್ಷೆಯು ಕೋವಿಡ್ ಪ್ಯಾಂಡಮಿಕ್ ಪೂರ್ವದಲ್ಲಿ ನಡೆದಿದೆ. ಅಂದರೆ ಈಗ ಇದು ಇನ್ನಷ್ಟು ಉಲ್ಬಣಗೂಂಡಿರಲು ಸಾಕು. ಇದರ ಬಗ್ಗೆ ಸೌಜನ್ಯಕ್ಕಾದರೂ ಮಖ್ಯಮಂತ್ರಿಯವರು ಉಲ್ಲೇಖ ಮಾಡಿಲ್ಲ. ಹಾಗಾದರೆ ಲಿಂಗತ್ವ ನ್ಯಾಯ ಬಜೆಟ್ಟಿನಲ್ಲಿ ಸಾಕಾರಗೊಂಡಿದೆ ಎಂದು ಹೇಳಲು ಸಾಧ್ಯವೆ?

ಕೊನೆಯದಾಗಿ ಕೋವಿಡ್ ಪರಿಣಾಮವಾಗಿ ಅತಿಹೆಚ್ಚು ಹೊಡೆತ ಅನುಭವಿಸಿದ ವರ್ಗ ಯಾವುದು? ವಲಸೆ ಕಾರ್ಮಿಕರು ಎಂಬುದು ಜಗಜ್ಜಾಹೀರಾಗಿದೆ. ನಿರುದ್ಯೋಗ ಪ್ರಮಾಣ ಕಳೆದ 40 ವರ್ಷಗಳಲ್ಲಿ ಅತಿಹೆಚ್ಚು ಎನ್ನುವ ಮಟ್ಟದಲ್ಲಿದೆ. ಇಡೀ ಬಜೆಟ್ಟಿನಲ್ಲಿ ಉದ್ಯೋಗ ಸೃಷ್ಟಿಸುವ ಕಾರ್ಯಕ್ರಮಗಳಿಲ್ಲ. ನಿಜ, ಬಜೆಟ್ಟಿನಲ್ಲಿನ ಕಾರ್ಯಕ್ರಮಗಳಿಂದ ಅಪ್ರತ್ಯಕ್ಷವಾದ ಉಪಯೋಗಗಳು ಉಂಟಾಗಬಹುದು. ಆದರೆ ಇಂದು ನಾವು ವಿಶೇಷ ಸಂದರ್ಭದಲ್ಲಿದ್ದೇವೆ. ಆದ್ದರಿಂದ ನೇರವಾಗಿ ಉದ್ಯೋಗ ನಿರ್ಮಿಸುವ, ಹೂಡಿಕೆ ಹೆಚ್ಚಿಸುವ ಕ್ರಮಗಳಿಗೆ ಬಜೆಟ್ಟಿನಲ್ಲಿ ಆದ್ಯತೆ ದೊರೆಯಬೇಕಾಗಿತ್ತು.

ಅನ್ನಭಾಗ್ಯ-ಆಹಾರ ಭದ್ರತೆ ಕಾರ್ಯಕ್ರಮಗಳನ್ನು ಬಲಪಡಿಸುವ ಅಗತ್ಯವಿತ್ತು. ಸಾರ್ವಜನಿಕ ಆರೋಗ್ಯ ಮತ್ತು ಸಾರ್ವಜನಿಕ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿತ್ತು. (ಬಲಿಷ್ಠ) ಜಾತಿವಾರು ಮಂಡಳಿಗಳಿಗೆ ನೀಡಿರುವ ಅನುದಾನವನ್ನು ಇವಕ್ಕೆ ವರ್ಗಾಯಿಸಬೇಕಾಗಿತ್ತು. ಇವೆಲ್ಲ ಆರ್ಥಿಕತೆಯ ಕಟ್ಟಕಡೆಯಲ್ಲಿರುವ ವರ್ಗಗಳಿಗೆ ನೆರವಾಗಬಲ್ಲ ಕಾರ್ಯಕ್ರಮಗಳಾಗಿದ್ದವು. ಪ್ರಜಾವಾಣಿ ಸರಿಯಾಗಿ ಗುರುತಿಸಿರುವಂತೆ ಈ ಬಜೆಟ್ಟಿನಲ್ಲಿರುವುದು ’ಬರೀ ನೋಟ: (ಎಲ್ಲವೂ) ಸಾಲದ ಆಟ’.

35 ಲಕ್ಷದಿಂದ 45 ಲಕ್ಷದೊಳಗಿನ ಫ್ಲಾಟ್ ಖರೀದಿಸುವವರಿಗೆ ನೋಂದಣಿ ಶುಲ್ಕವನ್ನು ಶೇ.5ರಿಂದ ಶೇ.3ಕ್ಕಿಳಿಸಲಾಗಿದೆ. ಇದನ್ನು ಉಳ್ಳವರ ಬಜೆಟ್ ಎನ್ನದೆ ವಿಧಿಯಿಲ್ಲ. ಸಂಪನ್ಮೂಲದ ಭಾರಿ ಕೊರತೆಯನ್ನು ಅನುಭವಿಸುತ್ತಿರುವ ಆರ್ಥಿಕತೆಯಲ್ಲಿ ಉಳ್ಳವರಿಗೆ ಶುಲ್ಕವನ್ನು ಇಳಿಸುವುದು ಯಾವ ಸಾರ್ವಜನಿಕ ಹಣಕಾಸು ಶಾಸ್ತ್ರವೋ ತಿಳಿಯುತ್ತಿಲ್ಲ. ಮಾಧ್ಯಮಗಳು ’ಇದೊಂದು ತೆರಿಗೆಯಲ್ಲದ ಬಜೆಟ್ ಎಂದು ಬೊಬ್ಬಿಡುತ್ತಿವೆ. ಸ್ವಾಮಿ ತೆರಿಗೆ ವಿಧಿಸುವ ರಾಜ್ಯಗಳ ಅದಿಕಾರವನ್ನು ಜಿಎಸ್‌ಟಿ ಕಸಿದುಕೊಂಡಿದೆ. ತೆರಿಗೆಗಳನ್ನು ವಿಧಿಸುವ ಅಥವಾ ತೆರಿಗೆ ದರಗಳನ್ನು ಹೆಚ್ಚಿಸುವ ಅಧಿಕಾರ ಇಂದು ರಾಜ್ಯಗಳಿಗಿಲ್ಲ.

ಒಟ್ಟಾರೆಯಾಗಿ ಇದೊಂದು ಗಾಳಿಯಲ್ಲಿ ಗೋಪುರ ಕಟ್ಟುವ ಪ್ರಯತ್ನದ ಬಜೆಟ್ಟಾಗಿದೆ.

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುಂಚೂಣಿ ಚಿಂತಕರು


ಇದನ್ನೂ ಓದಿ: ಕಾಂಗ್ರೆಸ್ ಸೇರಲಿರುವ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...