Homeಕರ್ನಾಟಕ'ಸಾಮ್ರಾಟ'ರ ಕಿರೀಟ ಮತ್ತೊಬ್ಬರ ಪಾಲಾದ ಕಥೆಯು!

‘ಸಾಮ್ರಾಟ’ರ ಕಿರೀಟ ಮತ್ತೊಬ್ಬರ ಪಾಲಾದ ಕಥೆಯು!

- Advertisement -
- Advertisement -

ನಿರೀಕ್ಷೆಯಂತೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ರಾಜ್ಯ ರಾಜಕಾರಣದ ಕೇಂದ್ರದಿಂದ ಅಂಚಿಗೆ ಸರಿಸುವ ಪ್ರಯತ್ನಗಳಿಗೆ ಚಾಲನೆ ನೀಡಿರುವ ಬಿಜೆಪಿ ಹೈಕಮಾಂಡ್ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದೆ. ಅಷ್ಟು ಮಾತ್ರವೇ ಅಲ್ಲ, ಡಿಸಿಎಂ ಹುದ್ದೆಗಳಿಗೆ ಆಯ್ಕೆ ಮಾಡುವಾಗ ರಾಜ್ಯ ಬಿಜೆಪಿಯಲ್ಲಿ ತಮ್ಮನ್ನು ತಾವು ಅತಿರಥ ಮಹಾರಥರು ಎಂದು ಪರಿಗಣಿಸುವ ನಾಯಕರನ್ನು ನಿಕೃಷ್ಟವಾಗಿ ಬದಿಗೆ ಸರಿಸಿರುವ ಪರಿ ಪಕ್ಷದೊಳಗೆ ಆಸಕ್ತಿಕರ ಚರ್ಚೆಗೂ ವೇದಿಕೆಯಾಗಿದೆ.

ರಾಜ್ಯ ಬಿಜೆಪಿಯ ಪ್ರಬಲ ಒಕ್ಕಲಿಗ ನಾಯಕ ಎಂದು ಬಿಂಬಿತವಾಗಿದ್ದ ಸಚಿವ ಆರ್.ಅಶೋಕ್ ಅವರನ್ನು ಬದಿಗೆ ಸರಿಸಿರುವ ರೀತಿ, ಮುಖ್ಯಮಂತ್ರಿಯಾದ ನಂತರವೂ ಉಪ ಮುಖ್ಯಮಂತ್ರಿಯಾಗುವ ಬಗ್ಗೆ ಯಾವುದೇ ಸಂಕೋಚವಿಲ್ಲದೆ ಅವಕಾಶ ಸಿಕ್ಕರೆ ಒಂದು ಕೈ ನೋಡಲು ಇಚ್ಛಿಸಿದ್ದ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಹೈಕಮಾಂಡ್ ಪರಿಗಣಿಸದ ಬಗೆ, ಸಚಿವ ಸ್ಥಾನ ಸಿಕ್ಕದೆ ಪರಿತಪಿಸುತ್ತಿರುವ ಅನೇಕ ಹಿರಿಯ ನಾಯಕರ ಗೊಣಗಾಟಗಳಿಗೆ ಸೊಪ್ಪು ಹಾಕದೆ ಇರುವುದು ಇದೆಲ್ಲದರ ಬಗ್ಗೆ ಕಮಲ ಪಾಳಯದಲ್ಲಿ ಆಸಕ್ತಿಕರ ಚರ್ಚೆಗಳು ಆರಂಭವಾಗಿವೆ.

ಯಡಿಯೂರಪ್ಪನವರ ಅಧಿಕಾರ ಅಲ್ಪಾಯುವಾಗಲಿದ್ದು, ಮುಂದೆ ರಾಜ್ಯದ ಮತ್ತೊಂದು ಪ್ರಭಾವಿ ಸಮುದಾಯವಾದ ಒಕ್ಕಲಿಗ ಸಮುದಾಯಕ್ಕೆ ಈ ಸ್ಥಾನ ಸಲ್ಲಬೇಕು ಎನ್ನುವ ಲೆಕ್ಕಾಚಾರ ರಾಜ್ಯ ಬಿಜೆಪಿಯ ಒಂದು ಗುಂಪಿನಲ್ಲಿದೆ. ಹಾಗಾದಲ್ಲಿ ಮಾತ್ರವೇ ಕರ್ನಾಟಕದಲ್ಲಿ, ಅದರಲ್ಲಿಯೂ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿಯನ್ನು ಬೆಂಗಳೂರಿನ ಆಚೆಗೂ ಪ್ರಬಲವಾಗಿ ವಿಸ್ತರಿಸಲು ಸಾಧ್ಯ ಎನ್ನುವುದು ಈ ಗುಂಪಿನ ವಾದ. ಈ ವಾದದ ಹುರುಳೇನೇ ಇದ್ದರೂ ಬೆಂಗಳೂರಿನ ಪ್ರಭಾವಿ ಸಚಿವ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರನ್ನು ಸಮೀಪದ ಭವಿಷ್ಯದಲ್ಲಿ ಮುಖ್ಯಮಂತ್ರಿಯನ್ನಾಗಿ ಕಾಣುವ ಪ್ರಯತ್ನಕ್ಕೆ ಈ ವಾದ ಇಂಬು ನೀಡಿತ್ತು.

ಅಶೋಕ್ ತಮ್ಮ ರಾಜಕೀಯ ಜೀವನದಲ್ಲಿ ಬೆಳೆದ ಪರಿ, ಪಕ್ಷದಲ್ಲಿ, ಸರ್ಕಾರದಲ್ಲಿ ಸ್ಥಾನಮಾನ ಪಡೆಯುವಲ್ಲಿ ಅವರು ತೋರಿಸಿದ ತಂತ್ರಗಾರಿಕೆಯನ್ನು ಗಮನಿಸಿದ ಎಲ್ಲರಿಗೂ ಅವರು ದೊಡ್ಡ ಮಹತ್ವಾಕಾಂಕ್ಷೆಯ ಬೆನ್ನುಹತ್ತಿ ಹೊರಟಿದ್ದು ಸ್ಪಷ್ಟವಾಗಿತ್ತು. ಈ ಹಿಂದೆ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಮಾಜಿ ಕೇಂದ್ರ ಸಚಿವ, ದಿವಂಗತ ಅನಂತಕುಮಾರ್ ಅವರ ನಡುವೆ ಪಕ್ಷದ ಮೇಲಿನ ಹಿಡಿತಕ್ಕಾಗಿ ನಡೆಯುತ್ತಿದ್ದ ಹಗ್ಗಜಗ್ಗಾಟವನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಬೆಳೆದ ನಾಯಕರೆಂದರೆ ಅದು ಅಶೋಕ್ ಎನ್ನುವ ಮಾತು ಅವರ ಸರೀಕರಲ್ಲಿಯೇ ಇದೆ. ಈ ಹಿಂದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅನಂತಕುಮಾರ್ ಅವರ ಬಲ, ಒಕ್ಕಲಿಗ ಸಮುದಾಯದ ಬೆಂಬಲಗಳೆಲ್ಲವನ್ನೂ ಅಶೋಕ್ ಅಚ್ಚುಕಟ್ಟಾಗಿ ಬಳಸಿಕೊಂಡು ಬೆಳೆದವರು.

ಬೆಂಗಳೂರಿನ ಅಧಿಕಾರದ ಮೇಲೆ ಒಂದೊಮ್ಮೆ ಪಕ್ಷದೊಳಗೆ ತಮಗೆ ಪ್ರಬಲ ಪ್ರತಿಸ್ಪರ್ಧಿಯಂತೆ ತೋರುತ್ತಿದ್ದ ಕಟ್ಟಾ ಸುಬ್ರಹ್ಮಣ್ಯನಾಯ್ಡು ಜೈಲುಪಾಲಾಗಿ ರಾಜಕೀಯವಾಗಿ ಹಿನ್ನಡೆ ಅನುಭವಿಸಿದ್ದು ಸಹ ಅಶೋಕ್ ಅವರ ಪಾಲಿಗೆ ವರವೇ ಆಗಿತ್ತು. ಜಾತಿ ಲೆಕ್ಕಾಚಾರವನ್ನು ಯಾವಾಗ ಮುಂದೆ ಮಾಡಬೇಕು, ಬಣ ರಾಜಕೀಯದ ಗಣಿತದಲ್ಲಿ ಎಲ್ಲಿ ಯಾವಾಗ ಪ್ರತ್ಯಕ್ಷವಾಗಬೇಕು ಎನ್ನುವ ಲೆಕ್ಕಾಚಾರವನ್ನು ಚೆನ್ನಾಗಿ ಅರಿತಿದ್ದ ಅಶೋಕ್ ಅದರ ಮೂಲಕವೇ ಕಷ್ಟಸಾಧ್ಯವೆನಿಸಿದ್ದ ಉಪಮುಖ್ಯಮಂತ್ರಿ ಹುದ್ದೆಯನ್ನು ತಮ್ಮದಾಗಿಸಿಕೊಂಡಿದ್ದರು.

ಅಶೋಕ್ ಅವರ ಮತ್ತೊಂದು ವರಸೆಯೆಂದರೆ, ಪ್ರತಿ ಬಾರಿಯೂ ಪಕ್ಷ ಅಥವಾ ಬಿಜೆಪಿ ಸರ್ಕಾರ ಸಂಕಷ್ಟದಲ್ಲಿದೆ ಎನ್ನುವಂತಹ ಗಳಿಗೆಗಳಲ್ಲಿ ಅದನ್ನು ಉಳಿಸಲು ತಾವು ಮಾಡಿದ `ತಂತ್ರಗಾರಿಕೆ’, ಇದಕ್ಕಾಗಿ ಪಟ್ಟ `ಅಪಾರ ಶ್ರಮ’ದ ಬಗ್ಗೆ ಮಾಧ್ಯಮಗಳಲ್ಲಿ ವಿಶೇಷವಾಗಿ ವರದಿಯಾಗುವಂತೆ ನೋಡಿಕೊಳ್ಳುತ್ತಿದ್ದುದು! ಬಹುತೇಕ ಸಂದರ್ಭಗಳಲ್ಲಿ ಅವರು ತೆಗೆದುಕೊಂಡ ಈ ಶ್ರಮ, ಮಾಡಿದ ತಂತ್ರಗಾರಿಕೆಗಳು ಅದನ್ನು `ಬರೆದವರಿಗೆ’ ಹಾಗೂ `ಹೇಳಿದವರಿಗೆ’ ಬಿಟ್ಟರೆ ಪಕ್ಷದೊಳಗಿನ ಇನ್ನಾರಿಗೂ ಗೊತ್ತೇ ಇರುತ್ತಿರಲಿಲ್ಲ ಎನ್ನುವ ಆರೋಪ ಪಕ್ಷದೊಳಗಿಂದಲೇ ಕೇಳಿಬರುತ್ತಿತ್ತು! ಅಶೋಕ್ ಅವರ ಪರವಾಗಿ ಮಾಧ್ಯಮದಲ್ಲಿ ಒಂದು ಪಡೆ ಅವರು ಈ ಹಿಂದೆ ಸಚಿವರಾಗಿದ್ದ ಕಾಲದಿಂದಲೂ ಅತಿ ಎನಿಸುವಷ್ಟು ಮಮಕಾರವನ್ನು ತೋರುತ್ತಾ ಬಂದಿದೆ. ಅದಕ್ಕೆ ಕಾರಣವೇನು ಎನ್ನುವುದನ್ನು ಅಶೋಕ್ ಅವರ ಕುರಿತು ತುದಿಗಾಲಿನಲ್ಲಿ ನಿಂತು, ಶ್ರದ್ಧೆಯಿಂದ ಬರೆಯುವ ಈ ಗುಂಪೇ ಹೇಳಬೇಕು! ಹೀಗೆ `ಜಾಣ ರಾಜಕಾರಣ’ದಿಂದಲೇ ರಾಜಕೀಯವಾಗಿ ಅತ್ಯುತ್ತಮ ಸ್ಥಾನಗಳನ್ನು ಪಡೆದ, `ಸಾಮ್ರಾಟ್’ ಬಿರುದಾಂಕಿತ ಅಶೋಕ್ ಅವರ ಮೇಲೆ ಸಂಘ ಪರಿವಾರದ ಆಯಕಟ್ಟಿನ ಮಂದಿ ಮೊದಲಿನಿಂದಲೂ ಒಂದು ಕಣ್ಣು ಇರಿಸಿದ್ದರು.

ಒಮ್ಮೆ ಮೋದಿ – ಶಾ ಜೋಡಿ ಕೇಂದ್ರದಲ್ಲಿ ಅಧಿಕಾರ ಹಿಡಿದು ಪಕ್ಷದ ಮೇಲೆ ಬಿಗಿ ಹಿಡಿತವನ್ನು ಗಳಿಸಿದ ನಂತರ ಇತ್ತ ಅನಂತಕುಮಾರ್ ಸಹ ಕಳಾಹೀನರಾದರು. ಒಂದು ಕಾಲದಲ್ಲಿ ವಾಜಪೇಯಿ ಹಾಗೂ ಅಡ್ವಾಣಿಯವರ ವಿಶೇಷ ಮೆಚ್ಚುಗೆ, ಆಶೀರ್ವಾದಗಳಿಗೆ ಪಾತ್ರರಾಗಿದ್ದ ಅನಂತಕುಮಾರ್ ಅವರು ಮುಂದೆ ಇದೇ ಕಾರಣದಿಂದಾಗಿ ಪ್ರಧಾನಿ ಮೋದಿಯವರೆಡೆಗೆ ತಮ್ಮದು ಅಚಲನಿಷ್ಠೆ ಎಂದು ಬಿಂಬಿಸಿಕೊಳ್ಳಲು ಹೆಣಗಬೇಕಾಯಿತು. ಸಂಘ ಪರಿವಾರದ ಹಿನ್ನೆಲೆಯಿಂದ ರಾಷ್ಟ್ರ ರಾಜಕಾರಣದಲ್ಲಿ ಬೇಗನೇ ಪ್ರವರ್ಧಮಾನಕ್ಕೆ ಬಂದು, ದೆಹಲಿ ರಾಜಕಾರಣದ ಅಧಿಕಾರದ ಆಯಕಟ್ಟಿನ ಜಾಗಗಳ ಒಳಹೊರಗುಗಳನ್ನು ಚೆನ್ನಾಗಿ ಬಲ್ಲವರಾಗಿದ್ದ ಅನಂತಕುಮಾರ್ ಅವರ ಬಗ್ಗೆ ಅವರದೇ ವಾರಿಗೆಯ ಮೋದಿಯವರಿಗೆ ಕೆಲವೊಂದು ಖಚಿತ ಅಭಿಪ್ರಾಯಗಳಿದ್ದವು. ಹಾಗಾಗಿಯೇ, ಅಳೆದು ಸುರಿದೂ ಮೋದಿ – ಶಾ ಜೋಡಿ ಅನಂತಕುಮಾರ್ ಅವರನ್ನು ಸಂಪುಟದೊಳಗೆ ಬಿಟ್ಟುಕೊಂಡಿತ್ತು. ಅನಂತಕುಮಾರ್ ಅವರಿಗೆ ಮೊದಲ ಬಾರಿಗೆ `ಅಪಾಯ ವಲಯ’ದಲ್ಲಿ ನಿಂತು ಸೂಕ್ಷ್ಮ ರಾಜಕಾರಣ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು.

ಹೀಗೆ, ಅತ್ತ ರಾಷ್ಟ್ರ ರಾಜಕಾರಣದಲ್ಲಿ ಅನಂತಕುಮಾರ್ ಹಾಗೂ ಇತ್ತ ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪನವರು ಮೋದಿ – ಶಾ ಜೋಡಿಯೊಂದಿಗೆ ಅಷ್ಟೇನೂ ಮಧುರ ಮೈತ್ರಿ ಹೊಂದಿರದ ಕಾಲಘಟ್ಟ ಆರಂಭವಾಯಿತು. ಅನಂತಕುಮಾರ್ ವಿಧಿವಶರಾಗುವ ವೇಳೆಗೆ ಇತ್ತ ರಾಜ್ಯ ರಾಜಕಾರಣದ ಪರಿಸ್ಥಿತಿಯೂ ಸಾಕಷ್ಟು ಬದಲಾಯಿಸಿತ್ತು. ಇಂದು ಅನಂತಕುಮಾರ್ ಎನ್ನುವ ಕವಚವಿಲ್ಲದೆ ಅಶೋಕ್ ಅವರು ತಮ್ಮ ರಾಜಕೀಯ ದಾಳ ಉರುಳಿಸಬೇಕಾಗಿದೆ. ಗಮನಿಸಬೇಕಾದ ಇನ್ನೊಂದು ಆಸಕ್ತಿಕರ ವಿಷಯವೆಂದರೆ ಈ ಹಿಂದೆ ಅನಂತ್ ಬೆಂಬಲಿತ ಅಶೋಕ್‍ಗೆ ಪರ್ಯಾಯವಾಗಿ ಬೆಂಗಳೂರಿನ ರಾಜಕಾರಣದಲ್ಲಿ ತಮ್ಮದೇ ಹಿಡಿತವನ್ನು ಇರಿಸಿಕೊಳ್ಳಲು ಯಡಿಯೂರಪ್ಪನವರು ಅರವಿಂದ ಲಿಂಬಾವಳಿಯನ್ನು ಬೆಳೆಸಲು ಮುಂದಾಗಿದ್ದರು. ಆದರೆ, ಈ ಬಗೆಯ ಎಲ್ಲ ಶಕ್ತಿ ಧ್ರುವೀಕರಣಗಳನ್ನು ಚೆನ್ನಾಗಿ ಅರಿತಿರುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ಬಿಜೆಪಿ ಹೈಕಮಾಂಡ್ ಮುಲಾಜಿಲ್ಲದೆ ಬೆಂಗಳೂರಿನ ರಾಜಕಾರಣದ ಮೇಲಿನ ಹಿಡಿತವನ್ನು ಈ ಎರಡೂ ಧ್ರುವಗಳಿಂದ ಒಂದೇ ಏಟಿಗೆ ದೂರ ಸರಿಸಿದೆ. ಹಾಗೆ ನೋಡಿದರೆ, ಮುಂಬರುವ ದಿನಗಳಲ್ಲಿ ಬೆಂಗಳೂರಿಗೆ ಬಿಜೆಪಿಯ ಮುಖ ಯಾರಾಗಬೇಕು ಎನ್ನುವ ಹುಡುಕಾಟ ವಿಧಾನಸಭಾ ಚುನಾವಣಾಪೂರ್ವದಲ್ಲಿಯೇ ಆರಂಭವಾಗಿತ್ತು. ಪಕ್ಷ ಹಾಗೂ ಸಂಘಕ್ಕೆ ವಿಧೇಯರಾಗಿರುವ, ಪ್ರಬಲ ಸಮುದಾಯಕ್ಕೆ ಸೇರಿದವರಾದರೂ ಹೈಕಮಾಂಡ್ ಅಣತಿಯನ್ನು ಶಿರಸಾವಹಿಸಿ ಪಾಲಿಸುವಂತಹ ಹಾಗೂ ವೈಯಕ್ತಿಕ ರಾಜಕೀಯ ಮಹತ್ವಾಕಾಂಕ್ಷೆಗಳ ತಂತ್ರಗಾರಿಕೆಗಿಂತ ಹೆಚ್ಚಾಗಿ ಪಕ್ಷ ರಾಜಕಾರಣದ ತಂತ್ರಗಾರಿಕೆ ಬದ್ಧರಾಗಿರುವವರನ್ನು ಹುಡುಕುತ್ತಿದ್ದ ಬಿಜೆಪಿಯ ವರಿಷ್ಠರು ಮೂರು ಬಾರಿ ಮಲ್ಲೇಶ್ವರ ಕ್ಷೇತ್ರವನ್ನು ಪ್ರತಿನಿಧಿಸಿರುವ ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ಆ ಮುಖವಾಗಿ ಪರಿಗಣಿಸಿದೆ. ಪರಿಣಾಮ, ಮೊದಲ ಬಾರಿಗೆ ಸಚಿವರಾಗುತ್ತಿರುವ ಅಶ್ವತ್ಥನಾರಾಯಣ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವೂ ಸಿಕ್ಕಿದೆ.

ಈ ಹಿಂದೆ ಬಿಬಿಎಂಪಿ ಅಧಿಕಾರವನ್ನು ಹಿಡಿಯುವಲ್ಲಿ ಮಾಡಿಕೊಂಡ ಎಡವಟ್ಟು, ಅದಕ್ಕೂ ಪ್ರಮುಖವಾಗಿ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಪರಿವರ್ತನಾ ರ್ಯಾಲಿಗೆ ಬೆಂಗಳೂರಿನಲ್ಲಿ ಚಾಲನೆ ನೀಡುವ ಸಂದರ್ಭದಲ್ಲಿ ಅರೆಮನಸ್ಸಿನಿಂದ ತಮ್ಮನ್ನು ತೊಡಗಿಸಿಕೊಂಡಿದ್ದರು ಎನ್ನುವ ಆರೋಪಗಳು ಅಶೋಕ್ ಅವರ ಮೇಲಿವೆ. ಜೆಡಿಎಸ್ ಜೊತೆಗೆ ಹೊಂದಿರುವ ಉತ್ತಮ ಬಾಂಧವ್ಯದ ಬಗ್ಗೆಯೂ ಪಕ್ಷದೊಳಗೆ ಚರ್ಚೆಗಳಿವೆ. ಈ ಕಾರಣಕ್ಕೆ ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಅಂತಿಮ ಹಂತದ ತಂತ್ರಗಾರಿಕೆಯಲ್ಲಿ ಅಶೋಕ್ ಅವರನ್ನು ಬಿಜೆಪಿ ವಿಶೇಷವಾಗಿಯೇನೂ ಪರಿಗಣಿಸಿರಲಿಲ್ಲ. ಆ ಸ್ಥಾನವನ್ನು ಎಲ್ಲ ರೀತಿಯಲ್ಲೂ ಸಮರ್ಥವಾಗಿ ತುಂಬುವಂತೆ ಅಶ್ವತ್ಥನಾರಾಯಣ ಅವರಿಗೆ ಸೂಚಿಸಲಾಗಿತ್ತು. ಅಧಿಕಾರ ಹಿಡಿಯುವ ಈ ಇಡೀ ಪ್ರಹಸನದಲ್ಲಿ ತಾವು ಸುದ್ದಿಯಲ್ಲೇ ಇಲ್ಲದೆ ಹೋದದ್ದರಿಂದ ಮುಜುಗರಗೊಂಡಂತೆ ಕಂಡ ಅಶೋಕ್, ಶಾಸಕರನ್ನು ಸೆಳೆಯುವ ಪ್ರಹಸನದಲ್ಲಿ ತಮ್ಮ `ವಿಶೇಷ ಶ್ರಮ’ವೂ ಇದೆ ಎಂದು ತಮ್ಮ ಕೆಲ ಮಾಧ್ಯಮ ಸ್ನೇಹಿತರ ಮೂಲಕ ಬಿಂಬಿಸಲು ಹೋಗಿ ಅಪಹಾಸ್ಯಕ್ಕೆ ಈಡಾಗಿದ್ದರು. ಜೊತೆಗೆ, ಹೈಕಮಾಂಡ್ ಕೆಂಗಣ್ಣಿಗೂ ತುತ್ತಾಗಿದ್ದರು.
ಮುಂದಿನ ದಿನಗಳಲ್ಲಿ ಅಶೋಕ್ ತಮ್ಮ ರಾಜಕೀಯ ಸ್ಥಾನಮಾನಗಳನ್ನು ಉಳಿಸಿಕೊಳ್ಳಬೇಕೆಂದರೆ ಹೈಕಮಾಂಡ್‍ಗೆ ಪೂರ್ಣ ಶರಣಾಗಬೇಕು. ಮಾಧ್ಯಮಗಳ ಮೂಲಕವಷ್ಟೇ ತಮ್ಮ `ಶ್ರಮ’ವನ್ನು ತೋರಿಸದೆ ವರಿಷ್ಠರು ಹೇಳುವ ಕೆಲಸವನ್ನು ಶಿರಸಾವಹಿಸಿ ಪಾಲಿಸಬೇಕು. ಪ್ರಸ್ತುತ ಪಕ್ಷದೊಳಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅವರಿಗೆ ಸಮುದಾಯದ ಬೆಂಬಲಕ್ಕಿಂತ ವರಿಷ್ಠರ ಬೆಂಬಲ ಅತ್ಯಗತ್ಯ ಎನ್ನುವುದು ಪಕ್ಷದೊಳಗಿನ ಮಾತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...