Homeಕರ್ನಾಟಕರಾಜಿನಾಮೆ ರಾಜಕಾರಣದ ರಾಡಿ: ಜಿಗುಪ್ಸೆಯ ನಡುವೆಯೂ ಕುತೂಹಲ

ರಾಜಿನಾಮೆ ರಾಜಕಾರಣದ ರಾಡಿ: ಜಿಗುಪ್ಸೆಯ ನಡುವೆಯೂ ಕುತೂಹಲ

- Advertisement -
- Advertisement -

ಒಂಥರಾ ಟ್ವೆಂಟಿ-20 ಪಂದ್ಯದಂತೆ ಇಲ್ಲಿ ಸ್ಕೋರ್ ಬೋರ್ಡ್ ಬದಲಾಗುತ್ತಿದೆ. ಸಂವಿಧಾನವನ್ನೇ ಅರಗಿಸಿಕೊಂಡಂತೆ ಟಿವಿ ಸ್ಟುಡಿಯೋಗಳಿಂದ ಪಂದ್ಯದ ‘ರಿಸಲ್ಟ್’ ಹೊರಬೀಳುತ್ತಿವೆ. ಟ್ವೆಂಟಿ-20 ಪಂದ್ಯದಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್‍ಗಳನ್ನು ಹಿನ್ನೆಲೆಗೆ ಸರಿಸಿದಂತೆ ಇಲ್ಲಿಯೂ ಕುದುರೆ ವ್ಯಾಪಾರವನ್ನು ಹಿನ್ನೆಲೆಗೆ ಸರಿಸಲಾಗಿದೆ. ಸೋಲುವ ಭೀತಿಯಲ್ಲಿರುವ ಸಮ್ಮಿಶ್ರ ಟೀಮ್ ಕೈಚೆಲ್ಲಿದಂತೆ ಒದ್ದಾಡುತ್ತ, ಧೋ ಅಂತ ಮಳೆ ಸುರಿಯಲಿ ಎಂದು ಮುಗಿಲು ನೋಡುತ್ತಿದೆ. ಒಟ್ಟೂ ಈ ರಾಜಕಾರಣದ ಬಗ್ಗೆ ಜಿಗುಪ್ಸೆಯ ಭಾವನೆ ಹೊಂದಿರುವ ಸಾಮಾನ್ಯ ಜನರು ಬರದ ಬೇಗುದಿಯಲ್ಲೂ ಪಂದ್ಯವನ್ನು ವೀಕ್ಷಿಸುತ್ತ ಎಂಜಾಯ್ ಮಾಡುತ್ತ, ಗಂಟೆಗೊಮ್ಮೆ ಬದಲಾಗುತ್ತಿರುವ ರಾಜಕಾರಣವನ್ನು ಉಗಿಯುತ್ತ ತಮ್ಮ ಪಾಳೆಯಕ್ಕಾಗಿ ಕಾದಿದ್ದಾರೆ.

ಇಲ್ಲಿ ನಾಳೆ ಏನಾಗುತ್ತೆ ಎನ್ನುವುದು ಸ್ಪಷ್ಟವಾಗುತ್ತಿದ್ದರೂ ಚುಟುಕು ಪಂದ್ಯದಲ್ಲಿ ಏನಾದರೂ ಆಗಬಹುದು. ಒಂದು ಟೀಮ್‍ನ ಆಂತರಿಕ ಸದಸ್ಯರೇ ಆಗಿರುವ ಅಂಪೈರ್ ಸಾಹೇಬರು ಮೌನ ಮುರಿಯುತ್ತಲೇ ಇಲ್ಲ. ಇದು ಕೂಡ ನಿಗೂಢವಾಗಿದೆ. ಸರಿಯಾಗಿ ಒಂದು ವರ್ಷ ಎರಡು ತಿಂಗಳ ಹಿಂದೆ ಇದೇ ಅಂಪೈರ್ ತಾವೇ ‘ಸಾಂವಿಧಾನಿಕ’ ಬಿಕ್ಕಟ್ಟನ್ನು ಸೃಷ್ಟಿಸಲು ಹೋಗಿ ಸುಪ್ರಿಂಕೋರ್ಟ್‍ನ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದೆಲ್ಲವನ್ನೂ ಹಿನ್ನೆಲೆಯಲ್ಲಿ ಇಟ್ಟುಕೊಂಡು ನೋಡಿದಾಗ, ಇಲ್ಲಿ ಸರ್ಕಾರ ಇದ್ದರೆಷ್ಟು, ಬಿದ್ದರೆಷ್ಟು ಎಂಬ ಭಾವವಂತೂ ಜನರಿಗೆ ಇದೆ. ಹಾಗೆಯೇ ಹೊಸ ಸರ್ಕಾರ ಬಂದರೂ ಮತ್ತದೇ ಅತಂತ್ರ ವಾತಾವರಣ ಎಂಬ ಪ್ರಾಥಮಿಕ ಜ್ಞಾನವೂ ಜನರಲ್ಲಿದೆ. ಆದರೆ ಈಗ ಪಾರ್ಟಿ ಬದಲಿಸರುವ ಜನಪ್ರತಿನಿಧಿಗಳಿಗೆ ಇದು ಗೊತ್ತಿದ್ದರೂ, ಅವರು ಯಾವ ಅಳುಕಿಲ್ಲದೇ ಏಕೆ ಹೋಗುತ್ತಿದ್ದಾರೆ?

ಇದರ ಮೂಲ ಹುಡುಕುತ್ತ ಹೋದರೆ, ಅದು 2008ರ ಸಂದರ್ಭಕ್ಕೆ ಬಂದು ನಿಲ್ಲುತ್ತದೆ. ಪಕ್ಷಾಂತರ ಕಾನೂನನ್ನೇ ಅಣಕಿಸುವಂತೆ ಚಾಲೆಂಜ್ ಮಾಡಿದ ‘ಆಪರೇಷನ್ ಕಮಲ’ ಎಂಬ ಜನದ್ರೋಹಿ ನಡೆ ಶುರುವಾಯಿತಲ್ಲ, ಅದು ರಾಜಕಾರಣದಲ್ಲಿ ದಿಢೀರ್ ಕೋಟಿಗಳನ್ನು ಸಂಪಾದಿಸುವ ಮಾರ್ಗವನ್ನು ತೋರಿಸಿಕೊಟ್ಟಿತು. ಮೊದಲ ಆಪರೇಷನ್ ಕಮಲದ ಫಲಾನುಭವಿಗಳು ಇವತ್ತು ಎಷ್ಟು ನಿಶ್ಚಿಂತರಾಗಿದ್ದಾರೆ ಎಂದರೆ, ಅವರಿಗೆ ಈಗ ಚುನಾವಣೆ ಎಂಬುದೀಗ ಜೂಜು. ಅಭಿವೃದ್ಧಿ ಹೆಸರಲ್ಲಿ ಕಮಿಷನ್ ಹೆಸರಲ್ಲಿ ಬರುವ ದುಡ್ಡು ಜುಜುಬಿ. ಇಲ್ಲಿ ಸಿಕ್ಕಿ ಬಿದ್ದರೆ ಮಾನಗೇಡಿ. ಆದರೆ ಆಪರೇಷನ್ ಕಮಲದಲ್ಲಿ ಅನಾತಾಸವಾಗಿ 30-80 ಕೋಟಿವರೆಗೆ ಪಡೆದರೆ ಅದಕ್ಕೆ ಯಾವ ಕಾನೂನಿನ ಅಡಿಯೂ ಇಲ್ಲ!

2008ರಲ್ಲಿ ಬಿಜೆಪಿಯಿಂದ ಚಾಲನೆಗೊಂಡ ಈ ಬಲ್ಕ್ ವ್ಯಾಪಾರದ ಬಗ್ಗೆ ಯಾವ ಪಕ್ಷಕ್ಕೂ ಅಂತಹ ಅಸಹ್ಯವೇನೂ ಇಲ್ಲ. ಹೀಗಾಗಿ ಈ ರೋಗ ದೇಶದ ಎಲ್ಲ ರಾಜ್ಯಗಳಿಗೂ ಹಬ್ಬಿದೆ. ಶಾಂತವೇರಿ ಗೋಪಾಲಗೌಡ, ದೇವರಾಜ ಅರಸು, ನಜೀರ್ ಸಾಬ್‍ರಂತಹ ಮಾದರಿ ರಾಜಕಾರಣಿಗಳನ್ನು ಕೊಟ್ಟ ಕರ್ನಾಟಕವೇ ಆಪರೇಷನ್ ಕಮಲ ಎಂಬ ಹೇಯ ರಾಜಕೀಯದ ಪಿತೃ ಆಗಿರುವುದು ಒಟ್ಟೂ ರಾಜಕಾರಣದ ದುರಂತ.

ಮುಂಬೈನಲ್ಲಿ ಅತೃಪ್ತರು ತಂಗಿರುವ ಹೊಟೆಲ್‍ನ ರೂಮ್ ಬಾಡಿಗೆ ದರವನ್ನು ಉಲ್ಲೇಖಿಸುವಾಗ ಮಾಧ್ಯಮ ಮಿತ್ರರು ಅದನ್ನು ವೈಭವೀಕರಿಸುತ್ತಿದ್ದಾರೆಯೇ ವಿನ: ಅವರಿಗೆ ಇದೆಲ್ಲದರ ಹಿಂದಿರುವ ಹಣದ ಮೂಲದ ಬಗ್ಗೆ ಪ್ರಶ್ನೆಯೂ ಇಲ್ಲ. ಇವತ್ತು ಅಸಹಾಯಕ ಸ್ಥಿಯಲ್ಲಿರುವ ಮೈತ್ರಿ ಪಕ್ಷಗಳಿಗೂ ಇದನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಇಲ್ಲ.

ರೆಸಾರ್ಟ್ ರಾಜಕಾರಣ ಎಂಬುದು ಈಗ ಸಹಜ ವಿದ್ಯಮಾನ ಎಂದು ಬಿಂಬಿತವಾಗಿರುವ ಈ ಸಂದರ್ಭದಲ್ಲಿ ನಾಳೆ ಹೊಸ ಸರ್ಕಾರವೋ, ರಾಷ್ಟ್ರಪತಿ ಆಡಳಿತವೋ ಎಂದು ಚರ್ಚಿಸುವುದೇ ಈ ಹೊತ್ತಿನ ವ್ಯಂಗ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...