Homeಕರ್ನಾಟಕದುಷ್ಟ ಜಿಂದಾಲ್ ಪಾದಕ್ಕೆ ಮತ್ತೆ 3667 ಎಕರೆ ಧಾರೆಯೆರೆಯುತ್ತಿರುವ ಭ್ರಷ್ಟ ಸರ್ಕಾರ.

ದುಷ್ಟ ಜಿಂದಾಲ್ ಪಾದಕ್ಕೆ ಮತ್ತೆ 3667 ಎಕರೆ ಧಾರೆಯೆರೆಯುತ್ತಿರುವ ಭ್ರಷ್ಟ ಸರ್ಕಾರ.

ಬಡವರಿಗೆ ವಸತಿ ವಿಚಾರ ಬಂದ ಕೂಡಲೇ ಎಲ್ಲಿದೆ ಭೂಮಿ? ಎನ್ನುವ ಸರ್ಕಾರ ಈಗ ಜಿಂದಾಲ್‍ನವರಿಗೆ ನೀಡುವಾಗ ಮಾತ್ರ ಎಲ್ಲಿದೆ ಭೂಮಿ ಎನ್ನುವುದಿಲ್ಲ. ಅಲ್ಲಿನ ರೈತರ ವಿರೋಧದ ನಡುವೆಯೂ ಭೂಮಿ ವಶಪಡಿಸಿಕೊಂಡು ಜಿಂದಾಲ್ ಪಾದಕ್ಕೆ ಅರ್ಪಿಸುವ ಗುಲಾಮಗಿರಿ ಕೆಲಸ ಮಾಡುತ್ತಿದ್ದಾರೆ.

- Advertisement -
- Advertisement -

| ಮುತ್ತುರಾಜು |

ಬಳ್ಳಾರಿ ಜಿಲ್ಲೆಯಲ್ಲಿ ಬಲಾಢ್ಯವಾಗಿ ಬೇರೂರಿರುವ ಜಿಂದಾಲ್ ಸ್ಟೀಲ್ ವಕ್ರ್ಸ್ ಕಂಪನಿಯ ಅಕ್ರಮ, ಅನೀತಿಗಳಿಗೆ ಕೊನೆಯಿಲ್ಲದಂತಾಗಿದೆ. ಅಧಿಕಾರ ದುರುಪಯೋಗ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಂದಲೇ ಕೊಬ್ಬಿರುವ ಈ ಕಂಪನಿಗೆ ಹೇಳೋರು ಕೇಳೋರು ಇಲ್ಲದ ಕಾರಣ ತನ್ನ ಇನ್ನಿಲ್ಲದ ಕರ್ಮಕಾಂಡಗಳನ್ನು ಅವ್ಯಾವತವಾಗಿ ಮುಂದುವರೆಸಿದೆ. ಅನಿಯಂತ್ರಿತ ಪರಿಸರ ನಾಶ, ಕಾರ್ಮಿಕರಿಗೆ ಕಿರುಕುಳ ಇತ್ಯಾದಿಗಳಿಂದ ಕುಖ್ಯಾತಿಗೆ ಒಳಗಾಗಿದ್ದ ಕಂಪನಿಯ ಪಾದಕ್ಕೆ ಇಂದು ಮತ್ತೆ 3667ಎಕರೆ ಭೂಮಿಯನ್ನು ಅರ್ಪಿಸುವ ಕೆಲಸಕ್ಕೆ ಭ್ರಷ್ಟ ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲಿ ಸ್ಥಳೀಯರ ವಿರೋಧದ ನಡುವೆಯೂ ಸರ್ಕಾರ ಭೂಮಿ ನೀಡಲು ಮುಂದಾಗಿರುವುದರಿಂದ ಜಿಲ್ಲೆಯ ಜನರ ಆಕ್ರೋಶಕ್ಕೆ ತುತ್ತಾಗಿದೆ.

ಬಳ್ಳಾರಿ-ಹೋಸಪೇಟೆ ಮಧ್ಯದಲ್ಲಿರುವ ತೋರಣಗಲ್ಲು ಎಂಬಲ್ಲಿರುವ ಜೆಎಸ್‍ಡಬ್ಲು ಕಂಪನಿಯು ಭಾರತದಲ್ಲಿ ಉಕ್ಕು ತಯಾರಿಸುವ 2ನೇ ಅತಿದೊಡ್ಡ ಖಾಸಗಿ ಕಂಪನಿ. ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಇದು 1994 ರಲ್ಲಿ ಜಿಂದಾಲ್ ವಿಜಯನಗರ್ ಸ್ಟೀಲ್ ಲಿಮಿಟೆಡ್ ಹೆಸರಿನಲ್ಲಿ ಆರಂಭಗೊಂಡಿದೆ. ನಂತರ 2005 ರಲ್ಲಿ ಜಿಂದಾಲ್ ಐರನ್ ಅಂಡ್ ಸ್ಟೀಲ್ ಕಂಪನಿ ಜೊತೆ ವಿಲೀನವಾಗುವುದರೊಂದಿಗೆ ಹಾಲಿ ಜೆಎಸ್‍ಡಬ್ಲು ಲಿಮಿಟೆಡ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸಜ್ಜನ್ ಜಿಂದಾಲ್

ಕಳ್ಳ ಮಾರ್ಗದಲ್ಲಿ ಆರಂಭ:
ಇದರ ಆರಂಭವೇ ಕಳ್ಳ ಮಾರ್ಗದಿಂದ ಶುರುವಾಗಿದೆ. ಬಳ್ಳಾರಿ ಸ್ಟೀಲ್ಸ್ ಅಂಡ್ ಅಲಾಯ್ಸ್ ಲಿಮಿಟೆಡ್ (ಬಿಎಸ್‍ಎಎಲ್) ಎಂಬ ಖಾಸಗಿ ಕಂಪನಿಗೆ ಹಲವು ವರ್ಷಗಳ ಹಿಂದೆ ಉಕ್ಕು ಕಾರ್ಖಾನೆ ಸ್ಥಾಪನೆಗೆಂದು ಅಂದಿನ ಸರ್ಕಾರ 1000 ಎಕರೆಗೂ ಹೆಚ್ಚು ಭೂಮಿಯನ್ನು ರೈತರಿಂದ ಬಲವಂತವಾಗಿ ಅಗ್ಗದ ಬೆಲೆಯಲ್ಲಿ ಕಸಿದು, ಮಂಜೂರು ಮಾಡಲಾಯಿತು. ಕೆಲಸ ಆರಂಭಿಸದೇ ಆ ಕಂಪನಿ ಅದರ ಮೇಲೆ 200 ಕೋಟಿ ರೂ. ಬ್ಯಾಂಕ್ ಸಾಲ ಎತ್ತಿಕೊಂಡು ನಂತರ ಅದೇ ಭೂಮಿಯನ್ನು ಜಿಂದಾಲ್ ಕಂಪನಿಗೆ ಹಸ್ತಾಂತರಿಸಿತು. ಇದು ನೂರಕ್ಕೆ ನೂರು ಕಾಯ್ದೆಬಾಹಿರ. ಆದರೆ ಯಾರು ಕೇಳುತ್ತಾರೆ? ಕಂಪನಿ ಮಾಲೀಕ ಸಜ್ಜನ್ ಜಿಂದಾಲ್‍ಗಾಗಿ ತನ್ನ ಕಡುವೈರಿ ಎಂದು ಭಾಷಣ ಬಿಗಿಯುವ ಪಾಕಿಸ್ತಾನಕ್ಕೆ ದೇಶದ ಪ್ರಧಾನಿಯೇ ಹೋಗಿ ಬರುತ್ತಿರುವಾಗ ಇದರ ಬಗ್ಗೆ ರಾಜ್ಯ ಸರ್ಕಾರವೆಲ್ಲಿ ತಲೆ ಕೆಡಿಸಿಕೊಳ್ಳುತ್ತದೆ ಹೇಳಿ?

ಈಗ ಜಿಂದಾಲ್ ಇಲ್ಲಿ ಉಕ್ಕು ಘಟಕ ಸ್ಥಾಪಿಸುವ ಬದಲು ಅದನ್ನು ಬ್ಯಾಂಕ್ ಸಾಲ ಎತ್ತುವ ಸಟ್ಟಾಬಾಜಿಗೆ ಬಳಸಲು ಯತ್ನಿಸುತ್ತಿದೆ, ಅದನ್ನು ಕಾಯ್ದೆ ಪ್ರಕಾರ ರೈತರಿಗೆ ಹಿಂದಿರುಗಿಸಬೇಕು ಎಂದು ಬಳ್ಳಾರಿಯ ಹಲವು ಸಂಘಟನೆಗಳು ಹೋರಾಟಕ್ಕಿಳಿದಿವೆ. ಇದಲ್ಲದೆ ಸ್ವತಃ ಜಿಂದಾಲ್‍ಗೇನೇ ಉಕ್ಕು ಕಾರ್ಖಾನೆ ಸ್ಥಾಪಿಸಲು 500 ಎಕರೆ ಸಾಕಾಗಿದ್ದ ಕಡೆ 4000 ಎಕರೆ ಮಂಜೂರು ಮಾಡಿಕೊಡಲಾಗಿದೆ. ಈ ರೀತಿ ಆರಂಭವಾಗಿರುವ ಕಾರ್ಖಾನೆ ನಿಯತ್ತಾಗಿ ಕೆಲಸ ಮಾಡುತ್ತಿದೆಯ ಅಂದರೆ ಅದೂ ಇಲ್ಲ. ಸ್ಥಳೀಯರಿಗೆ ಕೆಲಸ ಕೊಡದೆ ವಂಚಿಸಿರುವುದಲ್ಲದೇ ಇರುವ ಕಾರ್ಮಿಕರನ್ನು ಸಹ ಜೀತದಾಳುಗಳ ರೀತಿ ದುಡಿಸಿಕೊಳ್ಳುತ್ತಿದೆ.

ಕಾರ್ಮಿಕ ವಿರೋಧಿ ಕಂಪನಿ:
ಕಂಪನಿಯು ಹೈದರಾಬಾದ್ ಕರ್ನಾಟಕ ಪ್ರದೇಶವಾದ ಬಳ್ಳಾರಿ ಜಿಲ್ಲೆಯಲ್ಲಿರುವುದರಿಂದ ಈ ವ್ಯಾಪ್ತಿಯ ಕಾರ್ಮಿಕರಿಗೆ ಶೇ.80 ರಷ್ಟನ್ನು ಇನ್ನು ಸಿ ಮತ್ತು ಡಿ ವೃಂದದ ಉದ್ಯೋಗಗಳನ್ನು ಪೂರ್ತಿ ಕನ್ನಡಿಗರಿಗೆ ನೀಡಬೇಕೆಂದು ನಿಯಮ ಹೇಳುತ್ತದೆ. ಅದರೆ ಈಗ ಇಲ್ಲಿ ಕಾರ್ಯನಿರ್ವಹಿಸುವ ಸ್ಥಳೀಯ ಕಾರ್ಮಿಕ ಸಂಖ್ಯೆ ಶೇ.10 ರಷ್ಟು ಮಾತ್ರ. ಇಲ್ಲಿನ ಕಾರ್ಮಿಕರನ್ನು ತೆಗೆದುಕೊಂಡರೆ ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗುತ್ತಾರೆ, ನ್ಯಾಯಬದ್ಧ ಸೌಲಭ್ಯಗಳನ್ನು ಕೇಳುತ್ತಾರೆ ಮತ್ತು ತಮ್ಮ ಮನಸ್ಸೊಇಚ್ಛೆ ಬಂದಷ್ಟು ದುಡಿಸಲು ಆಗುವುದಿಲ್ಲ ಎಂಬ ಕುತಂತ್ರದಿಂದ ಹೊರ ರಾಜ್ಯದವರನ್ನೆ ಹೆಚ್ಚಾಗಿ ನೇಮಿಸಿಕೊಳ್ಳಲಾಗುತ್ತಿದೆ. ಎಲ್ಲವೂ ಗುತ್ತಿಗೆ ಕೆಲಸವಾದ್ದರಿಂದ ಕಾರ್ಮಿಕರ ಶ್ರಮವನ್ನು ತಮಗೆ ಬೇಕಾದಷ್ಟು ಹೀರಿಕೊಂಡು 40-45 ವರ್ಷ ದಾಟಿದ ಕಾರ್ಮಿಕರನ್ನು ಕಿತ್ತು ಬಿಸಾಡುವುದು ಇಲ್ಲಿನ ಪದ್ಧತಿ. ಇಂತಹ ಪರಿಸ್ಥಿತಿಯಲ್ಲಿ ಕಾರ್ಮಿಕ ಸಂಘಟನೆಯೊಂದು ಇಲ್ಲಿನ ಕಾರ್ಮಿಕರನ್ನು ಸಂಘಟಿಸಲು ಮುಂದಾದಾಗ ಪರಿಸ್ಥಿತಿ ವಿಕೋಪಕ್ಕೆ ತಲುಪಿ ಕಾರ್ಮಿಕರು ಮತ್ತು ಮಾಲೀಕರ ನಡುವಿನ ಸಂಘರ್ಷ ಆರಂಭವಾಗಿತ್ತು.

ಪರಿಸರ ವಿನಾಶ ಮತ್ತು ಜೆಎಸ್‍ಡಬ್ಲು ಡಾಂಬರ್ ಕಾರ್ಖಾನೆಯ ನಂತರ ಪೇಂಟ್ ಕಾರ್ಖಾನೆ
ಆದರೆ ಇದನ್ನು ಸರಿಪಡಿಸುವ ಗೋಜಿಗೆ ಹೋಗುವ ಬದಲು ಮತ್ತಷ್ಟು ಪರಿಸರ ನಾಶಕ್ಕೆ ಜೆಎಸ್‍ಡಬ್ಲು ಕೈಹಾಕಿತ್ತು. ಅದೇ ಜಿಂದಾಲ್ ಡಾಂಬಾರು ಕಾರ್ಖಾನೆ. ಸ್ಥಳೀಯರ ಸಾಕಷ್ಟು ವಿರೋಧದ ನಡುವೆ ಡಾಂಬಾರು ಕಾರ್ಖಾನೆ ಸ್ಥಾಪಿಸಿದ್ದ ಜಿಂದಾಲ್ ಈಗ ಪೇಂಟ್ ಕಾರ್ಖಾನೆ ಸ್ಥಾಪಿಸಲೆಂದು ಮತ್ತೆ 3667 ಎಕರೆ ಜಾಗಕ್ಕೆ ಕನ್ನ ಹಾಕಿದೆ. ತೋರಣಗಲ್ಲು ಗ್ರಾಮದ ಸರ್ವೇ ನಂಬರ್ 504, 505, 506, 515, 416 ಮತ್ತು ಮುಸಿನಾಯಕನಹಳ್ಳಿಯ ಸರ್ವೇ ನಂಬರ್ 17, 17, 19 ಮತ್ತು 21 ರಲ್ಲಿ ಹಾಲಿ ಪೇಂಟ್ ಕಂಪನಿ ಆರಂಭಿಸಲು ತಯಾರಿ ನಡೆಸಿದೆ. ವಾರ್ಷಿಕ 2 ಲಕ್ಷ ಲೀಟರ್ ನೀರು ಆಧಾರಿತ 40 ಸಾವಿರ ಟಿಆರ್‍ಪಿಎ ನೀರು ಆಧಾರಿತ ಎಮಲ್ಷನ್ ಕೋಪಾಲಿಮರ್ ಉತ್ಪಾದನೆ ಘಟಕ ಇದಾಗಿದೆ. ಪೇಂಟ್ ತಯಾರಿಕೆಯಲ್ಲಿ ಸಹಜವಾಗಿ ರಸಾಯನಿಕ ವಸ್ತುಗಳನ್ನು ಬಳಸುವುದರಿಂದ ಸುತ್ತಮುತ್ತಲಿನ ಪರಿಸರ ಮತ್ತಷ್ಟು ಹದಗೆಡಲಿದೆ ಎಂದು ಸ್ಥಳೀಯ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರ ಪತ್ರಿಭಟನೆ

ಈ ಕುರಿತು ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಸಿಪಿಐ-ಎಂ, ರೈತ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಈ ಯೋಜನೆಗೆ ತೀವ್ರ ವಿರೋಧ ತೋರಿದ್ದಾರೆ. ಇದೇ ಜಿಂದಾಲ್ ಎಂಬ ಮಹಾಮಾರಿ ಕಂಪನಿಯಿಂದ ಸಾಕಷ್ಟು ಪರಿಸರ ಈಗಾಗಲೇ ಹಾಳಾಗಿದ್ದು ಹಲವಾರು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಮುಂದಾದರು ಪರಿಸರಕ್ಕೆ ಅಪಾಯ ಒಡ್ಡುವ ಕಂಪನಿಗಳು ಬೇಡ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಇಂತಹ ವಿರೋಧವನ್ನು ಮೊದಲೇ ನಿರೀಕ್ಷಿಸಿದ್ದ ಕಂಪನಿಯು ತನ್ನ ನವರಂಗಿ ಆಟವನ್ನು ಇಲ್ಲಿಯೂ ಪ್ರದರ್ಶಿಸಿದೆ. ಮೊದಲೇ ಕೆಲವು ಗ್ರಾಮಸ್ಥರನ್ನು ಬುಕ್ ಮಾಡಿಕೊಂಡು ಹಣದ ಆಮಿಷ ತೋರಿಸಿ ಸಭೆಯಲ್ಲಿ ಕಂಪನಿ ಪರ ವಾದಿಸುವಂತೆ ಪುಸಲಾಯಿಸಿದ್ದಾರೆ. ಅಂತೆಯೇ ಸಭೆಯಲ್ಲಿ ಕೆಲವರು ಮಾತನಾಡಿ, ಕಾರ್ಖಾನೆಗಳ ಸ್ಥಾಪನೆಯಿಂದ ಈ ಭಾಗದ ನಿರುದ್ಯೋಗಿಗಳಿಗೆ ಕೆಲಸ ಸಿಗುವುದು ಅಲ್ಲದೇ ಕಂಪನಿಗಳು ಹೆಚ್ಚು ತೆರಿಗೆ ಕಟ್ಟುವುದರಿಂದ ಗ್ರಾಮದ ಅಭಿವೃದ್ದಿಯೂ ಸಹ ಆಗಲಿದೆ ಎಂದು ಕಂಪನಿಯವರು ಹೇಳಿದಂತೆ ಉರುಹೊಡೆದಿದ್ದನ್ನು ಸಭೆಯಲ್ಲಿ ಒಂದೇ ಸಮನೆ ಉಸುರಿದ್ದಾರೆ. ಅಲ್ಲಿಗೆ ಎಲ್ಲಾ ಮುಗಿಸಿ ಈಗ ಪೇಂಟ್ ಕಾರ್ಖಾನೆ ಕೂಡ ತಯಾರಾಗಿದೆ. ಇನ್ನು ಕಾರ್ಯಾರಂಭ ಮಾಡಿಲ್ಲ ಅಷ್ಟೇ. ಒಟ್ಟಿನಲ್ಲಿ ಅಲ್ಲಿನ ರೈತರು ಮತ್ತು ಸ್ಥಳೀಯರು ಈ ಕಾರ್ಖಾನೆಯ ವಿರುದ್ಧ ಕಳೆದ 10 ವರ್ಷಗಳಿಂದ ಬಂದರೂ ಇಲ್ಲಿನ ಎಂಪಿ ಎಮ್ಮೆಲ್ಲೆಗಳು ಜಿಂದಾಲ್‍ಗೆ ಬುಕ್ ಆಗಿರುವುದರಿಂದ ಯಾವುದೇ ಪ್ರಯೋಜವಾಗಿಲ್ಲ.

ಬಡವರಿಗಿಲ್ಲದ ಭೂಮಿ ಜಿಂದಾಲ್ ಹೇಗೆ?
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಬಡವರಿಗೆ ಭೂಮಿ ಮತ್ತು ವಸತಿ ನೀಡಬೇಕೆಂದು ಹೋರಾಡುತ್ತಾ ಬಂದಿದೆ. ಸಿದ್ದರಾಮನ್ಯನವರ ಸರ್ಕಾರ ಇದ್ದಾಗಿನಿಂದಲೂ ಕಾಗೋಡು ತಿಮ್ಮಪ್ಪನವರು ಸಚಿವರಾಗಿದ್ದಾಗಿನಿಂದಲೂ ಹೋರಾಟ ನಡೆಸಿದೆ. ಸ್ವತಂತ್ರ ಸೇನಾನಿ ದೊರೆಸ್ವಾಮಿಯವರು ಇದರ ನೇತೃತ್ವ ವಹಿಸಿದ್ದಾರೆ. ಇವರ ಹೋರಾಟದ ಫಲವಾಗಿ ರಾಜ್ಯಮಟ್ಟದ ಸರ್ಕಾರ ಮತ್ತು ಹೋರಾಟಗಾರರನ್ನೊಳಗೊಂಡ ಸಮಿತಿಯು ರಚನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಆ ಸಭೆಗಳಲ್ಲಿ ಬಡವರಿಗೆ ವಸತಿ ವಿಚಾರ ಬಂದ ಕೂಡಲೇ ಎಲ್ಲಿದೆ ಭೂಮಿ? ಎನ್ನುವ ಸರ್ಕಾರ ಈಗ ಜಿಂದಾಲ್‍ನವರಿಗೆ ನೀಡುವಾಗ ಮಾತ್ರ ಎಲ್ಲಿದೆ ಭೂಮಿ ಎನ್ನುವುದಿಲ್ಲ. ಅಲ್ಲಿನ ರೈತರ ವಿರೋಧದ ನಡುವೆಯೂ ಭೂಮಿ ವಶಪಡಿಸಿಕೊಂಡು ಜಿಂದಾಲ್ ಪಾದಕ್ಕೆ ಅರ್ಪಿಸುವ ಗುಲಾಮಗಿರಿ ಕೆಲಸ ಮಾಡುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...