Homeಅಂಕಣಗಳುಥೂತ್ತೇರಿ | ಯಾಹೂಹಿಂಗಾಡಿದ್ರೆ ಸಾಬರ ಕತೆ ಮುಗಿತು ಬುಡು: ಚಂದ್ರೇಗೌಡರ ಕಟ್ಟೆಪುರಾಣ

ಹಿಂಗಾಡಿದ್ರೆ ಸಾಬರ ಕತೆ ಮುಗಿತು ಬುಡು: ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

“ಜುಮ್ಮಿ ಮನೆಗೆ ಬಂದ ವಾಟಿಸ್ಸೆ.”
“ಇದೆನಕ್ಕ ರಂಗೋಲೆಲಿ ಗಾಡಿ ಚಕ್ರನೆ ಬರೆದಿದ್ದಿ” ಎಂದ.
“ಇಲ್ಲಿಗಂಟ ಬರಬ್ಯಾಡ ಅದರ್ವಳಗೆ ಕುತಗಂಡು ಮಾತಾಡು. ಅದ್ಕು ಮದ್ಲು ಅಲ್ಲಿ ಮಡಗಿರೊ ನೀರಲ್ಲಿ ಕೈ ಕಾಲು ತ್ವಳಕಂಡು ಬಾ. ಅಮ್ಯಾಲೆ ಆ ಬಾಯಿಕಟ್ಟ ಸರಿಯಾಗಾಯ್ಕೊ ಕೆಮ್ಮು ಬಂದ್ರೆ ಸೀನಿದ್ರೆ ಮುಸುರಿ ಮುಚಗಂಡು ಅಮ್ಯಾಲೆ ಕೈಯುಜ್ಜಕೊ” ಎಂದು ಜುಮ್ಮಿ ಹೇಳುತ್ತಿರುವಾಗ.
“ಭೇಷ್ ಕಣಕ್ಕ. ಎಷ್ಟೇ ಆಗ್ಲಿ ಜನಪತಿನಿಧಿ ನೀನು. ನಮ್ಮೂರ ಪಿಣರಾಯಿ ಕಣಕ್ಕ” ಎಂದ.
“ಪಿಣತೆರಾಯ ಅಂದ್ರೇನ್ಲ.”
“ಅವುನು ಕೇರಳದ ಚಿಪ್ ಮಿನಿಷ್ಟ್ರು ಕಣಕ್ಕ. ಕೊರೋನ ಯಂಗೆ ಕಂಟ್ರೊಲ್ ಮಾಡ್ಯವುನೆ ಅಂದ್ರೇ ಥೇಟ್ ನಿನ್ನ ತರನೆ ಮಾಡ್ಯವುನೆ ಕಣಕ್ಕ.”
“ಎಜ್ಜಾಟ್ಳಿ ಕರಟ್ ಕಣೊ ಉಗ್ರಿ. ಎಜುಕೇಟೆಡ್ ಪರಸನ್ ಅಂದ್ರೆ ಅವುನು. ಅವುನೇನಾರ ಪ್ರಧಾನಿಯಾಗಿದ್ರೆ ದೀಪ ಹಚ್ಚಿ ಜಾಗಟೆ ಬಡಿರಿ ಅಂತಿರಲಿಲ್ಲ. ಕರೋನ ಕಡಿಮೆ ಮಾಡಕ್ಕೆ ಏನು ಮಾಡಬೇಕು ಅದ್ ಮಾಡಿ ಅನ್ನೊನು.”
“ಮೋದಿ ದೀಪ ಹಚ್ಚಿ ಅಂದ ಮ್ಯಾಲೆ ಕಡಿಮ್ಯಾಗಬೇಕಿತ್ತಲವೆ” ಎಂದಳು ಜುಮ್ಮಿ.
“ದೀಪ ಹಚ್ಚಿದ್ರೆ ಕರೋನ ಕಡಿಮೆಯಾಯ್ತದೆ ಅಂತ ಅವುನೆಲ್ಲ ಹೇಳಿದ್ನಕ್ಕ. ದೀಪ ಹಚ್ಚಿ ಅಂದ ಅಷ್ಟೆಯ ಅದ್ಕೆ ನಮ್ಮೂರ ಮೇಷ್ಟ್ರು ಐದು ದೀಪ ಹಚ್ಚಿದ್ನಂತೆ.”
“ಅವುನ್ಯಾಕೆ ಐದು ದೀಪ ಹಚ್ಚಿದಾ.”
“ಅದು ಮದ್ಲೆ ಕಪಿ ಮುಂಡೆದಲವಾ. ಮೋದಿ ಹೇಳಿದ್ದು ತಲಿಗೊಂದು ದೀಪ ಅಂತ ತಿಳಕಂಡು ಅವುನು ಅವುನೆಂಡ್ತಿ ಮೂರು ಹೆಣ್ ಮಕ್ಕಳು ಸೇರಿ ತಲಿಗೊಂದು ದೀಪ ಹಚ್ಚಿದನಂತೆ.”
“ಮಕ್ಕಳಿಗೆ ಪಾಟ ಹೇಳೊ ಮುಂಡೆ ಮಗನೆ ಹಿಂಗಾದ್ರೆ ಇನ್ನ ದೇಸದ ಜನಗಳ ಕತಿಯೇನೂ.”
“ಇಂಥೊರಿಂದ್ಲೆಯ ಹಿಂದೂಗಳು ಸಾಬರು ಅಂತ ಬ್ಯಾರೆ ಬ್ಯಾರೆ ಆಯ್ತಾಯಿರದು.”
“ಅದೇನ್ಲ ಸಾಬರು ಗಲಾಟೆ” ಎಂದಳು ಜುಮ್ಮಿ.
“ಸಾಬರ ಕತೆ ಮುಗಿತು ಮುಗಿತು ಬುಡಕ್ಕ” ಎಂದ ವಾಟಿಸ್ಸೆ.
“ಅದ್ಯಾಕ್ಲ ಅಂಗಂತಿ.”
“ಇನ್ನೆನಕ್ಕ ಕೊರೋನ ಆದೊರಿಗೆ ಅವುಸ್ಥಿಕೊಡಕೋದೊರಿಗೆ ವಡುದು ಕಲ್ಲು ಬಿರತವೆ ಅಂದ್ರೆ ಅವು ಕತಿಯೇನೂ.”
“ಅವುಕೇನು ಮಲ್ಲಾಗ್ರು ಬಂದದ್ಲ.”
“ಬುದ್ದಿ ಕಡಿವೆಯಿದ್ದೊರಿಗೆ ಅಲವೆ ಮಲ್ಲಾಗ್ರು ಬರದು.”
“ಅದೇನಾರ ಆಗ್ಲಿ ಆ ಬಿಜೆಪಿಗಳಾಡದ್ಕೂ ಇವು ಮಾಡದ್ಕೂ ಸರಿಯಾಗ್ಯದೆ.”
“ನಿಜ ಕಣೊ ಉಗ್ರಿ ಈಗಾಗ್ಲೆ ಡೆಲ್ಲಿ ಮಸೀದಿ ವಳಗಿಂದ ತಂದು ಕರೋನ ಹರಡತ ಅವುರೆ ಸಾಬ್ರು ಊರಿಗೆ ಸೇರಸಬ್ಯಾಡಿ ಅಂತ ಬಿಜೆಪಿ ಬಡ್ಡೆತ್ತವು ಹೇಳಿಕೊಂಡು ತಿರುಗ್ತಾ ಅವೆ. ಅವುರಂಗೇಳಕ್ಕೂ ಇವುರಿಂಗೆ ಮಾಡಕ್ಕೂ ಸರಿಯಾಗ್ಯದೆ ಬುಡು.”
“ಮುಂದೆ ಕತಿಯೇನಯ್ಯಾ.”
“ಮುಂದೇನು ಅವುರ ಅಂಗೆಯ ಈ ಸಾಬರು ಅಂಗೆಯ ಅನ್ನಂಗಾಗಿ ಸಾಬರ ಪರ ಮಾತಡಕ್ಕೆ ಯಾರು ಇಲ್ದಂಗಾಯ್ತದೆ.”
“ನಾವು ಮಮನುಸರಾಗಿರತಿವಿ ಸಾಬರು ಮಾತ್ರ ಸಾಬರಾಗೆ ಇರತರೆ. ಅವನೋಡಂಗೆಯ, ಹೆಂಗಸರ್ಯಲ್ಲ ಬುರುಖಾ ಹಾಯ್ಕಂಡು. ಗಂಡಸರ್ಯಲ್ಲ ಗಡ್ಡ ಬುಟಗಂಡು ಕಣಕಾಲಗಾಟ ಪೈಜಾಮಕಂಡು ಟೋಪಿ ಹಾಯ್ಕಂಡು ನೋಡಿದೇಟಿಗೆ ಪಕ್ಕಾ ಸಾಬಿ ಅನ್ನಂಗೆ ಕಾಣ್ತರಪ್ಪ.”
“ಮದ್ಲಂಗಿರಲಿಲ್ಲ ಅಲವೆ.”
“ಊಕಣಕ್ಕ ಬಾಬ್ರಿ ಮಸೀದಿ ಬಿದ್ದಮ್ಯಾಲೆ ವಳಗಿರೊ ಮೌಲವಿಗಳು ಸಾಬರ ಕೈಗೆ ತಗಂಡು ಅಂಗೆ ಮಾಡ್ಯವುರೆ. ನೀವ್ಯಲ್ಲ ಧರಮ ಪಾಲಿಸಿಯಲ್ಲಿ ವಗ್ಗಟ್ಟಾಗಿರಿ. ಧರಮ ಅಂತ ಹೇಳಿ ಕಳುಸ್ತನೆ. ಇವು ಬಂದು ಕಲ್ಲು ಬೀರ್ತವೆ. ಅಂತೂ ಈ ಸಾಬ್ರು ಆರೆಸ್ಸೆಸ್‍ಗಳಿಂದ ನಮಗೆ ನೆಮ್ಮದಿಯಿವಲ್ಲ ಹೇಳು.”
“ಹಿಂಗಾದ್ರೆ ಸಾಬ್ರು ಕತೆ ಮುಗಿತು ಬುಡು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...