Homeಅಂಕಣಗಳುಥೂತ್ತೇರಿ | ಯಾಹೂಹಿಂಗಾಡಿದ್ರೆ ಸಾಬರ ಕತೆ ಮುಗಿತು ಬುಡು: ಚಂದ್ರೇಗೌಡರ ಕಟ್ಟೆಪುರಾಣ

ಹಿಂಗಾಡಿದ್ರೆ ಸಾಬರ ಕತೆ ಮುಗಿತು ಬುಡು: ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

“ಜುಮ್ಮಿ ಮನೆಗೆ ಬಂದ ವಾಟಿಸ್ಸೆ.”
“ಇದೆನಕ್ಕ ರಂಗೋಲೆಲಿ ಗಾಡಿ ಚಕ್ರನೆ ಬರೆದಿದ್ದಿ” ಎಂದ.
“ಇಲ್ಲಿಗಂಟ ಬರಬ್ಯಾಡ ಅದರ್ವಳಗೆ ಕುತಗಂಡು ಮಾತಾಡು. ಅದ್ಕು ಮದ್ಲು ಅಲ್ಲಿ ಮಡಗಿರೊ ನೀರಲ್ಲಿ ಕೈ ಕಾಲು ತ್ವಳಕಂಡು ಬಾ. ಅಮ್ಯಾಲೆ ಆ ಬಾಯಿಕಟ್ಟ ಸರಿಯಾಗಾಯ್ಕೊ ಕೆಮ್ಮು ಬಂದ್ರೆ ಸೀನಿದ್ರೆ ಮುಸುರಿ ಮುಚಗಂಡು ಅಮ್ಯಾಲೆ ಕೈಯುಜ್ಜಕೊ” ಎಂದು ಜುಮ್ಮಿ ಹೇಳುತ್ತಿರುವಾಗ.
“ಭೇಷ್ ಕಣಕ್ಕ. ಎಷ್ಟೇ ಆಗ್ಲಿ ಜನಪತಿನಿಧಿ ನೀನು. ನಮ್ಮೂರ ಪಿಣರಾಯಿ ಕಣಕ್ಕ” ಎಂದ.
“ಪಿಣತೆರಾಯ ಅಂದ್ರೇನ್ಲ.”
“ಅವುನು ಕೇರಳದ ಚಿಪ್ ಮಿನಿಷ್ಟ್ರು ಕಣಕ್ಕ. ಕೊರೋನ ಯಂಗೆ ಕಂಟ್ರೊಲ್ ಮಾಡ್ಯವುನೆ ಅಂದ್ರೇ ಥೇಟ್ ನಿನ್ನ ತರನೆ ಮಾಡ್ಯವುನೆ ಕಣಕ್ಕ.”
“ಎಜ್ಜಾಟ್ಳಿ ಕರಟ್ ಕಣೊ ಉಗ್ರಿ. ಎಜುಕೇಟೆಡ್ ಪರಸನ್ ಅಂದ್ರೆ ಅವುನು. ಅವುನೇನಾರ ಪ್ರಧಾನಿಯಾಗಿದ್ರೆ ದೀಪ ಹಚ್ಚಿ ಜಾಗಟೆ ಬಡಿರಿ ಅಂತಿರಲಿಲ್ಲ. ಕರೋನ ಕಡಿಮೆ ಮಾಡಕ್ಕೆ ಏನು ಮಾಡಬೇಕು ಅದ್ ಮಾಡಿ ಅನ್ನೊನು.”
“ಮೋದಿ ದೀಪ ಹಚ್ಚಿ ಅಂದ ಮ್ಯಾಲೆ ಕಡಿಮ್ಯಾಗಬೇಕಿತ್ತಲವೆ” ಎಂದಳು ಜುಮ್ಮಿ.
“ದೀಪ ಹಚ್ಚಿದ್ರೆ ಕರೋನ ಕಡಿಮೆಯಾಯ್ತದೆ ಅಂತ ಅವುನೆಲ್ಲ ಹೇಳಿದ್ನಕ್ಕ. ದೀಪ ಹಚ್ಚಿ ಅಂದ ಅಷ್ಟೆಯ ಅದ್ಕೆ ನಮ್ಮೂರ ಮೇಷ್ಟ್ರು ಐದು ದೀಪ ಹಚ್ಚಿದ್ನಂತೆ.”
“ಅವುನ್ಯಾಕೆ ಐದು ದೀಪ ಹಚ್ಚಿದಾ.”
“ಅದು ಮದ್ಲೆ ಕಪಿ ಮುಂಡೆದಲವಾ. ಮೋದಿ ಹೇಳಿದ್ದು ತಲಿಗೊಂದು ದೀಪ ಅಂತ ತಿಳಕಂಡು ಅವುನು ಅವುನೆಂಡ್ತಿ ಮೂರು ಹೆಣ್ ಮಕ್ಕಳು ಸೇರಿ ತಲಿಗೊಂದು ದೀಪ ಹಚ್ಚಿದನಂತೆ.”
“ಮಕ್ಕಳಿಗೆ ಪಾಟ ಹೇಳೊ ಮುಂಡೆ ಮಗನೆ ಹಿಂಗಾದ್ರೆ ಇನ್ನ ದೇಸದ ಜನಗಳ ಕತಿಯೇನೂ.”
“ಇಂಥೊರಿಂದ್ಲೆಯ ಹಿಂದೂಗಳು ಸಾಬರು ಅಂತ ಬ್ಯಾರೆ ಬ್ಯಾರೆ ಆಯ್ತಾಯಿರದು.”
“ಅದೇನ್ಲ ಸಾಬರು ಗಲಾಟೆ” ಎಂದಳು ಜುಮ್ಮಿ.
“ಸಾಬರ ಕತೆ ಮುಗಿತು ಮುಗಿತು ಬುಡಕ್ಕ” ಎಂದ ವಾಟಿಸ್ಸೆ.
“ಅದ್ಯಾಕ್ಲ ಅಂಗಂತಿ.”
“ಇನ್ನೆನಕ್ಕ ಕೊರೋನ ಆದೊರಿಗೆ ಅವುಸ್ಥಿಕೊಡಕೋದೊರಿಗೆ ವಡುದು ಕಲ್ಲು ಬಿರತವೆ ಅಂದ್ರೆ ಅವು ಕತಿಯೇನೂ.”
“ಅವುಕೇನು ಮಲ್ಲಾಗ್ರು ಬಂದದ್ಲ.”
“ಬುದ್ದಿ ಕಡಿವೆಯಿದ್ದೊರಿಗೆ ಅಲವೆ ಮಲ್ಲಾಗ್ರು ಬರದು.”
“ಅದೇನಾರ ಆಗ್ಲಿ ಆ ಬಿಜೆಪಿಗಳಾಡದ್ಕೂ ಇವು ಮಾಡದ್ಕೂ ಸರಿಯಾಗ್ಯದೆ.”
“ನಿಜ ಕಣೊ ಉಗ್ರಿ ಈಗಾಗ್ಲೆ ಡೆಲ್ಲಿ ಮಸೀದಿ ವಳಗಿಂದ ತಂದು ಕರೋನ ಹರಡತ ಅವುರೆ ಸಾಬ್ರು ಊರಿಗೆ ಸೇರಸಬ್ಯಾಡಿ ಅಂತ ಬಿಜೆಪಿ ಬಡ್ಡೆತ್ತವು ಹೇಳಿಕೊಂಡು ತಿರುಗ್ತಾ ಅವೆ. ಅವುರಂಗೇಳಕ್ಕೂ ಇವುರಿಂಗೆ ಮಾಡಕ್ಕೂ ಸರಿಯಾಗ್ಯದೆ ಬುಡು.”
“ಮುಂದೆ ಕತಿಯೇನಯ್ಯಾ.”
“ಮುಂದೇನು ಅವುರ ಅಂಗೆಯ ಈ ಸಾಬರು ಅಂಗೆಯ ಅನ್ನಂಗಾಗಿ ಸಾಬರ ಪರ ಮಾತಡಕ್ಕೆ ಯಾರು ಇಲ್ದಂಗಾಯ್ತದೆ.”
“ನಾವು ಮಮನುಸರಾಗಿರತಿವಿ ಸಾಬರು ಮಾತ್ರ ಸಾಬರಾಗೆ ಇರತರೆ. ಅವನೋಡಂಗೆಯ, ಹೆಂಗಸರ್ಯಲ್ಲ ಬುರುಖಾ ಹಾಯ್ಕಂಡು. ಗಂಡಸರ್ಯಲ್ಲ ಗಡ್ಡ ಬುಟಗಂಡು ಕಣಕಾಲಗಾಟ ಪೈಜಾಮಕಂಡು ಟೋಪಿ ಹಾಯ್ಕಂಡು ನೋಡಿದೇಟಿಗೆ ಪಕ್ಕಾ ಸಾಬಿ ಅನ್ನಂಗೆ ಕಾಣ್ತರಪ್ಪ.”
“ಮದ್ಲಂಗಿರಲಿಲ್ಲ ಅಲವೆ.”
“ಊಕಣಕ್ಕ ಬಾಬ್ರಿ ಮಸೀದಿ ಬಿದ್ದಮ್ಯಾಲೆ ವಳಗಿರೊ ಮೌಲವಿಗಳು ಸಾಬರ ಕೈಗೆ ತಗಂಡು ಅಂಗೆ ಮಾಡ್ಯವುರೆ. ನೀವ್ಯಲ್ಲ ಧರಮ ಪಾಲಿಸಿಯಲ್ಲಿ ವಗ್ಗಟ್ಟಾಗಿರಿ. ಧರಮ ಅಂತ ಹೇಳಿ ಕಳುಸ್ತನೆ. ಇವು ಬಂದು ಕಲ್ಲು ಬೀರ್ತವೆ. ಅಂತೂ ಈ ಸಾಬ್ರು ಆರೆಸ್ಸೆಸ್‍ಗಳಿಂದ ನಮಗೆ ನೆಮ್ಮದಿಯಿವಲ್ಲ ಹೇಳು.”
“ಹಿಂಗಾದ್ರೆ ಸಾಬ್ರು ಕತೆ ಮುಗಿತು ಬುಡು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...