Homeಮುಖಪುಟಪೊಳ್ಳು ಜಗದ್ಗುರುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವನು ಸರಹಪಾದ: ನಟರಾಜ ಬೂದಾಳು

ಪೊಳ್ಳು ಜಗದ್ಗುರುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವನು ಸರಹಪಾದ: ನಟರಾಜ ಬೂದಾಳು

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ `ನಾನು ಗೌರಿ’ ಮೀಡಿಯಾದೊಂದಿಗೆ ಮಾತನಾಡಿದ ಬೂದಾಳು ಅವರು, ಸರಹಪಾದನ ತಾತ್ವಿಕತೆಯ ಪ್ರಸ್ತುತತೆ, ಶ್ರಮಣ ಪರಂಪರೆಯ ವೈಶಿಷ್ಟ್ಯತೆ ಹಾಗೂ ಕೃತಿಯ ಅನುವಾದದ ಹಿಂದಿನ ಶ್ರಮವನ್ನು ಹಂಚಿಕೊಂಡಿದ್ದಾರೆ.

- Advertisement -
- Advertisement -

ಕನ್ನಡದ ಪ್ರಮುಖ ಸಾಂಸ್ಕೃತಿಕ ಚಿಂತಕರಲ್ಲಿ ಒಬ್ಬರಾದ ಡಾ.ನಟರಾಜ್‌ ಬೂದಾಳು ಅವರು ಅನುವಾದಿಸಿರುವ ‘ಸರಹಪಾದ’ ಕೃತಿಗೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಶ್ರಮಣ ಪರಂಪರೆಯ ಕುರಿತು ವಿಸ್ತೃತವಾಗಿ ಬೆಳಕು ಚೆಲ್ಲುತ್ತಿರುವ ನಟರಾಜ ಬೂದಾಳು ಅವರು ಹೊರ ತಂದಿರುವ ವಿಶೇಷ ಕೃತಿಗಳಲ್ಲಿ ‘ಸರಹಪಾದ’ವೂ ಒಂದು. ಶ್ರಮಣ ಪರಂಪರೆಗಳಾದ ಸಿದ್ಧ, ನಾಥ, ಆರೂಢ, ಬೌದ್ಧ, ತತ್ವಪದ ಮೊದಲಾದವುಗಳ ತಾತ್ವಿಕತೆಗಳನ್ನು ಚರ್ಚೆಗೆ ತಂದಿರುವವರಲ್ಲಿ ಬೂದಾಳು ಪ್ರಮುಖರು.

ಎಲ್ಲ ಮಿಥ್ಯಾವಾದಗಳನ್ನು ದಾಟುವುದನ್ನು ಕಲಿಸಿದ ಮಹಾಬೌದ್ಧ ಸಿದ್ಧ ಸರಹಪಾದನ ವಿಚಾರಗಳನ್ನು ಬೂದಾಳು ವಿಶಿಷ್ಟವಾಗಿ ಕನ್ನಡಕ್ಕೆ ತಂದಿದ್ದಾರೆ. ಲೋಕಾನುಭವವೇ ಮುಖ್ಯವೆಂದ ಅನುಭಾವ ಪರಂಪರೆಯಲ್ಲಿ ಬರುವ ಬೌದ್ಧಸಿದ್ಧ ಸರಹಪಾದ. ಬೌದ್ಧ ತಾತ್ವಿಕತೆಯಲ್ಲಿ ಪ್ರಧಾನವಾಗಿರುವ ‘ಮೂಲಮಾಧ್ಯಮಕಕಾರಿಕೆ’ ಕೃತಿಯ ರಚನಾಕಾರನಾದ ನಾಗಾರ್ಜುನನ ಗುರು ಸರಹಪಾದ.

ಇದನ್ನೂ ಓದಿ: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ, ‘ಬಹುಭಾಷೆಗಳಲ್ಲಿ ದ್ವಿಭಾಷೆ’: ಕುವೆಂಪು

‘ನಾಗಾರ್ಜುನ ಅಲ್ಲಮಪ್ರಭು ಒಂದು ತೌಲನಿಕ ಅಧ್ಯಯನ’, ‘ನಾಗಾರ್ಜುನ ಮಧ್ಯಮಮಾರ್ಗ’, ‘ಬುದ್ಧನೆಂಬ ಜ್ಞಾನಪೂರ್ಣ ಜಗಂಜ್ಯೋತಿ’, ‘ಬುದ್ಧಗುರುವಿನ ಮಧ್ಯಮಮಾರ್ಗ’, ‘ಪ್ರತ್ಯೇಕ ಬುದ್ಧ ಅಲ್ಲಮಪ್ರಭು’, ‘ಹಿಂದಣ ಹೆಜ್ಜೆಯನರಿತನಲ್ಲದೆ’, ‘ಪ್ರಜ್ಞಾ ಪಾರಮಿತ ಹೃದಯ ಸೂತ್ರ’, ‘ಬೌದ್ಧ ಮಧ್ಯಮ ಮಾರ್ಗ’, ‘ಮಾತಿನ ಮೊದಲು’, ‘ಶಂಕರಾನಂದಯೋಗಿ ಮತ್ತು ಶಂಕರಾರ್ಯರ ತತ್ವಪದಗಳು’, ‘ದಾವ್ ದೆ ಚಿಂಗ್’, ‘ಮನಮಗ್ನತೆ’ ಸೇರಿದಂತೆ ಹಲವು ಕೃತಿಗಳನ್ನುಅವರು ರಚಿಸಿದ್ದಾರೆ. ತತ್ವಪದ ಕ್ಷೇತ್ರದಲ್ಲಿ ಬೂದಾಳು ಅವರು ಮಾಡಿರುವ ಕಾರ್ಯಗಳು ಅವಿಸ್ಮರಣೀಯ.

‘ಸರಹಪಾದ ಕನ್ನಡಕ್ಕೇ ಯಾವತ್ತೋ ಬರಬೇಕಿತ್ತು’

ಪ್ರಶಸ್ತಿ ಲಭಿಸಿದ ಈ ಸಂದರ್ಭದಲ್ಲಿ ‘ನಾನು ಗೌರಿ’ ಮಾಧ್ಯಮದೊಂದಿಗೆ ಮಾತನಾಡಿದ ನಟರಾಜ ಬೂದಾಳು ಅವರು, “ಭಾರತದ ಬಹಳ ಮುಖ್ಯವಾದ ಸಾಧಕ ಪರಂಪರೆ ಎಂದರೆ ಶ್ರಮಣ ಪರಂಪರೆ. ಈ ಪರಂಪರೆಯ ಮಹಾಗುರು ಸರಹಪಾದ. ಆತನ ತಾತ್ವಿಕತೆಗಳು ಕನ್ನಡಕ್ಕೆ ಯಾವತ್ತೋ ಬರಬೇಕಿತ್ತು. ತಡವಾಗಿಯಾದರೂ ಬಂತು. ಅದನ್ನು ಓದುಗರು ಗುರುತಿಸಿದ್ದು ಸಂತೋಷ ತಂದಿದೆ” ಎಂದರು.

“ಸರಹಪಾದನ ತಾತ್ವಿಕತೆಗಳು ದೇವನಾಗರಿ ಲಿಪಿಯಲ್ಲಿ, ಅಪಭ್ರ೦ಶ ಭಾಷೆಯಲ್ಲಿ ಇವೆ. ಅಪಭ್ರಂಶ ಭಾಷೆಯಲ್ಲಿನ ಕೃತಿ, ಸಂಸ್ಕೃತಿಗೆ ಆಗಿರುವ ಅನುವಾದ ಹಾಗೂ ಮೂರು ಇಂಗ್ಲಿಷ್ ಭಾಷಾಂತರಗಳನ್ನು ಆಧಾರವಾಗಿಟ್ಟುಕೊಂಡು ಕನ್ನಡಕ್ಕೆ ‘ಸರಹಪಾದ’ ಕೃತಿಯನ್ನು ತಂದೆ. ದೇವನಾಗರಿ ಲಿಪಿಯಲ್ಲಿರುವ ಕೃತಿಯು ಅಪಭ್ರಂಶ ಆವೃತ್ತಿಯಲ್ಲೇ ಇದೆ. ಅಪಭ್ರಂಶ ಈಗ ಇಲ್ಲ. ಆದರೆ ಆ ಕೃತಿ ಇದೆ. ಇಂಗ್ಲಿಷ್‌ಗಿಂತ, ಸಂಸ್ಕೃತಕ್ಕಿಂತ ಕನ್ನಡಕ್ಕೆ ಹತ್ತಿರವಾದ ಭಾಷೆ ‘ಅಪಭ್ರಂಶ’. ಮೂರು ಭಾಷೆಗಳಲ್ಲಿ ಬಂದಿರುವ ಕೃತಿಗಳನ್ನು ಅಧ್ಯಯನ ಮಾಡಿ ಅನುವಾದ ಮಾಡಿರುವೆ” ಎಂದು ಬೂದಾಳು ತಿಳಿಸಿದರು.

“ಬೌದ್ಧತಾತ್ವಿಕತೆಯನ್ನು ಪಸರಿಸಿದ ನಾಗಾರ್ಜುನ ಗುರು ಸರಹಪಾದ. ಆತ ದಕ್ಷಿಣ ಭಾರತಕ್ಕೂ ಬಂದಿದ್ದ ಎನ್ನುವವರಿದ್ದಾರೆ. ಆತ ಮಹಾನ್‌ ತಾತ್ವಿಕನೂ ಹೌದು, ಸಾಧಕನೂ ಹೌದು. ಸರಹ ಎಲ್ಲವನ್ನೂ ತಿರಸ್ಕರಿಸಿ ಸುಮ್ಮನಿರುವ ಮಾರ್ಗದ ಕುರಿತು ಮಾತನಾಡುತ್ತಾನೆ. ಅವನ ಎದುರು ನಾಗಾರ್ಜುನ ಸೇರಿದಂತೆ ಯಾವ ತಾತ್ವಿಕರೂ ನಿಲ್ಲಲು ಸಾಧ್ಯವಿಲ್ಲ” ಎಂಬುದು ಬೂದಾಳು ಅವರ ಅಭಿಪ್ರಾಯ.

“ಆತ ಪೊಳ್ಳು ಜಗದ್ಗುರುಗಳನ್ನು ತೀಕ್ಷ್ಣವಾಗಿ ವಿಮರ್ಶೆಗೆ ಒಳಪಡಿಸುತ್ತಾನೆ. ಸರಹನ ಪ್ರಕಾರ ಕುಟುಂಬವೇ ದೊಡ್ಡದು. ಪಾರಲೌಖಿತ ವ್ಯಮೋಹಕ್ಕೆ ಏಕೆ ಬೀಳುತ್ತೀರಾ? ಲೌಕಿಕದಲ್ಲಿ ಚೆನ್ನಾಗಿ ಬಾಳಲು ಸಾಧ್ಯವಿಲ್ಲದನು ಅಲ್ಲೇನು ಮಾಡುತ್ತಾನೆ? ಅಧಿಕಾರ ಕೇಂದ್ರಗಳು, ಸರ್ಕಾರಗಳು ವಿಧೇಯರಾಗಿರಬೇಕಾದದ್ದು ಕುಟುಂಬಗಳಿಗೆ ಹೊರತು ಜಗದ್ಗುರುಗಳಿಗೂ ಅಲ್ಲ, ದೇವಸ್ಥಾನಕ್ಕೂ ಅಲ್ಲ. ಕುಟುಂಬವೇ ಶ್ರೇಷ್ಟ ಎಂದು ಹೇಳಿದವನು ಸರಹ” ಎನ್ನುತ್ತಾರೆ ಅವರು.

“ಶ್ರಮಣ ಪರಂಪರೆಯನ್ನು ಯಾರೂ ಮುನ್ನಲೆ ತರಬೇಕಾಗಿಲ್ಲ. ಅದು ಪ್ರಯೋಗಿಕವಾಗಿ ಈಗಾಗಲೇ ಸಮಾಜದಲ್ಲಿದೆ. ನಮ್ಮ ನಡುವೆ ತತ್ವಪದಕಾರರು ಇದ್ದಾರೆ. ಇಂದಿಗೂ ಶ್ರಮಣ ಪರಂಪರೆ ಜೀವಂತವಾಗಿದೆ. ಆದರೆ ಶೈಕ್ಷಣಿಕ ವಲಯದಲ್ಲಿ ಈ ಕುರಿತು ಗಂಭೀರ ಚರ್ಚೆಗಳಾಗುತ್ತಿಲ್ಲ. ಅಕಾಡೆಮಿಕ್‌ ವಲಯ ಈ ಶ್ರಮಣ ಪರಂಪರೆಯನ್ನು ಕಣ್ಣುಬಿಟ್ಟು ನೋಡಬೇಕಾಗಿದೆ” ಎಂದು ತಿಳಿಸಿದರು ಬೂದಾಳು.


ಇದನ್ನೂ ಓದಿ: ‘ಕುವೆಂಪು ಸಮಗ್ರ ಸಾಹಿತ್ಯ ಸಂಪುಟ 12’ ಮಾರಾಟಕ್ಕೆ ಹೈಕೋರ್ಟ್ ತಡೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...