Homeಮುಖಪುಟಕೊರೊನಾ ವಿರುದ್ದ ಕೇರಳದ ಹೋರಾಟ: ಅಮೆರಿಕಾದಿಂದ ನೈಜೀರಿಯಾವರೆಗಿನ ಮಾಧ್ಯಮಗಳಲ್ಲಿ ಮೆಚ್ಚುಗೆ!

ಕೊರೊನಾ ವಿರುದ್ದ ಕೇರಳದ ಹೋರಾಟ: ಅಮೆರಿಕಾದಿಂದ ನೈಜೀರಿಯಾವರೆಗಿನ ಮಾಧ್ಯಮಗಳಲ್ಲಿ ಮೆಚ್ಚುಗೆ!

- Advertisement -
- Advertisement -

ಕೊರೊನಾ ವಿರುದ್ದದ ಹೋರಾಟದಲ್ಲಿ ಕೇರಳ ಎಂಬ ಭಾರತದ ಪುಟ್ಟ ರಾಜ್ಯ ಕೇವಲ ಭಾರತಕ್ಕೆ ಮಾತ್ರ ಮಾದರಿಯಾಗಿ ನಿಂತಿಲ್ಲ. ಈ ಸೋಂಕಿನ ವಿರುದ್ದ ಕೇರಳ ನಡೆಸುತ್ತಿರುವ ಮಾದರಿಯೋಗ್ಯ ಹೋರಾಟದ ವರದಿಗಳು ಬಿಬಿಸಿಯಿಂದ ಹಿಡಿದು ನೈಜೀರಿಯಾ ಡೈಲಿಯವರೆಗಿನ ವಿಶ್ವದಾದ್ಯಂತ ಸುಮಾರು 30 ಕ್ಕಿಂತಲೂ ಹೆಚ್ಚು ಪತ್ರಿಕೆಗಳಲ್ಲಿ ವಿಶೇಷ ವರದಿಯಾಗಿವೆ.

ಭಾರತದ ಮೊದಲ ಕೊರೊನಾ ವೈರಸ್  ಪ್ರಕರಣದಲ್ಲಿ ಕೇರಳದಲ್ಲಿ ವರದಿಯಾದಾಗ ಬಿಬಿಸಿ ಮತ್ತು ಇತರ ಕೆಲವು ಮುಖ್ಯ ಸುದ್ದಿ ವಾಹಿನಿಗಳು ಸುದ್ದಿ ಮಾಡಿದ್ದವು. ಆದರೆ ಅಲ್ಲಿನ ಮಾದರಿಯೋಗ್ಯ ಆರೋಗ್ಯ ವ್ಯವಸ್ಥೆ ಸೋಂಕು ಹರಡುವುದನ್ನು ತಡೆಯಿತು. ನಂತರ ದೇಶದಾದ್ಯಂತದ ಇತರ ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿದ್ದಂತೆ, ಕೇರಳವು ಸೋಂಕಿನ ಪರೀಕ್ಷೆ, ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯ ಕಾರ್ಯವಿಧಾನದಲ್ಲಿನ ವಿಷಯಗಳಲ್ಲಿ ಎಚ್ಚರಿಕೆಯಿಂದ ನಡೆದುಕೊಂಡ ಪರಿಣಾಮ ಸೋಂಕು ರಾಜ್ಯದಲ್ಲಿ ಹತೋಟಿಗೆ ಬಂದಿದೆ. ಭಾರತಕ್ಕೆ ಕೊರೊನಾ ಕಾಲಿಟ್ಟ ನಂತರ ಅತೀ ಹೆಚ್ಚು ಕೊರೊನಾ ಪ್ರಕರಣಗಳಿದ್ದ ಕೇರಳದಲ್ಲಿ ಪ್ರಸ್ತುತ ಸಕ್ರಿಯ ಸೋಂಕು ಪ್ರಕರಣಗಳು ಕೇವಲ 32.

ದೇಶ ಹಾಗೂ ವಿಶ್ವದಾದ್ಯಂತದ  ಕೊರೊನಾ ಹರಡಲು ಪ್ರಾರಂಭಿಸಿದಾಗ, ಜಗತ್ತಿನಾದ್ಯಂತ ಮಾಧ್ಯಮಗಳ ಕಣ್ಣುಗಳು ಕೇರಳದತ್ತ ನೆಟ್ಟಿತ್ತು. ಭಾರತದಲ್ಲೇ ಅತೀ ಹೆಚ್ಚು ಅನಿವಾಸಿಗಳಿರುವ ರಾಜ್ಯಗಳಲ್ಲಿ ಒಂದಾದ ಕೇರಳದಲ್ಲಿ ಕೊರೊನಾ ಸಾವಿನ ಪ್ರಕರಣಗಳು ನಾಲ್ಕು. ಕೊರೊನಾ ವಿರುದ್ದದ ಕೇರಳ ಮಾದರಿಯ ಹೋರಾಟವನ್ನು ವಿಶ್ವದ ಮುಂದುವರೆದ ದೇಶಗಳಾದ ಬ್ರಿಟನ್, ಅಮೆರಿಕಾ, ಕೆನಡಾ, ಇಟಲಿ, ಫ್ರಾನ್ಸ್ ಮತ್ತು ಅರಬ್ ರಾಷ್ಟ್ರಗಳ ಹಲವಾರು ಪತ್ರಿಕೆಗಳು ವರದಿಗಳನ್ನು ಮಾಡಿವೆ. ಅವುಗಳಲ್ಲಿ ಕೆಲವು ಇಲ್ಲಿವೆ…

ಬಿಬಿಸಿ (ಲಂಡನ್)

ಕೇರಳ ತನ್ನ ಕೊರೊನಾ ರೇಖೆಯನ್ನು ಹೇಗೆ ಚಪ್ಪಟೆಗೊಳಿಸಿದೆ ಎಂಬ ಬಗ್ಗೆ ಬಿಬಿಸಿ ವರದಿ ಸಿದ್ಧಪಡಿಸಿದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ. “ವರ್ಕ್ ಲೈಕ್ ಕೇರಳ” ಎಂಬ ಶೀರ್ಷಿಕೆಯ ತನ್ನ ದೂರದರ್ಶನ ಕಾರ್ಯಕ್ರಮದಲ್ಲಿ, ನಿಫಾ ಸೋಂಕಿನಿಂದ ಹಿಡಿದು ಕೊರೊನಾ ಮೊದಲನೇ ಪ್ರಕರಣ ವರದಿ ಮಾಡಿದವರೆಗಿನ ಕೇರಳದ ಹೋರಾಟವನ್ನು ಬಿಬಿಸಿ ತೋರಿಸಿತು.

ಟ್ರಿಬ್ಯೂನ್ ಮ್ಯಾಗಝಿನ್

ಗಾರ್ಡಿಯನ್ ತನ್ನ ಸುದ್ದಿಯಲ್ಲಿ ಕೇರಳದ ಕಮ್ಯುನಿಸ್ಟ್ ಸರ್ಕಾರವು ಕೊರೊನಾ ವೈರಸ್ ತಗ್ಗಿಸುವ ಗುರಿಗಳನ್ನು ಹೇಗೆ ಸಾಧಿಸಿದೆ ಎಂಬುದನ್ನು ಹೇಳಿದೆ. ಸಾಂಕ್ರಾಮಿಕ ಸಮಯದಲ್ಲಿ ತನ್ನ ಜನರ ಯೋಗಕ್ಷೇಮವನ್ನು ನೋಡಿಕೊಳ್ಳುವುದರ ಜೊತೆಗೆ ರಾಜ್ಯದ ಆರ್ಥಿಕತೆ ಹೇಗೆ ನಿರ್ವಹಿಸಿತು ಎಂದು ಕೂಡಾ ವರದಿ ಮಾಡಿದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ.

ಆರ್ ಟಿ ಅಮೇರಿಕಾ ನ್ಯೂಸ್ (ಅಮೇರಿಕಾ)

ಕೇರಳ ಮಾದರಿಯನ್ನು ಕೇಂದ್ರೀಕರಿಸಿದ ಮಾತುಕತೆ ಕಾರ್ಯಕ್ರಮದಲ್ಲಿ, ಆರೋಗ್ಯ ತಜ್ಞರು ಕೇರಳದ ವೈದ್ಯಕೀಯ ವಿಧಾನ ಹೇಗೆ ವೈರಸ್ ಹರಡುವುದನ್ನು ತಡೆದಿದೆ ಎಂಬ ಬಗ್ಗೆ ಹೇಳಲಾಗಿದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ.

ದಿ ಎಕನಾಮಿಸ್ಟ್ (ಲಂಡನ್)

ಸಾಂಕ್ರಾಮಿಕ ರೋಗವನ್ನು ಅಸಾಧಾರಣ ಯಶಸ್ಸಿನೊಂದಿಗೆ ನಿಭಾಯಿಸಲು ತಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ದೃಡತೆ ಹೇಗೆ ಕಲಸ ಮಾಡಿದೆ ಎಂದು ತೋರಿಸಲು ವಿಯೆಟ್ನಾಂ ಮತ್ತು ಕೇರಳದಲ್ಲಿ ಅಳವಡಿಸಲಾಗಿರುವ ವೈರಸ್ ತಡೆ ಕ್ರಮಗಳನ್ನು ಲೇಖನವೊಂದು ತಿಳಿಸುತ್ತದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ.

ದಿ ವೋಗ್ (ಅಮೆರಿಕಾ)

ಕೇರಳದ ಆರೋಗ್ಯ ಮಂತ್ರಿ ಕೆ.ಕೆ.ಶೈಲಜಾ ಅವರು ಅಮೆರಿಕದ ಪ್ರಮುಖ ಫ್ಯಾಷನ್ ಮತ್ತು ಜೀವನಶೈಲಿ ನಿಯತಕಾಲಿಕ ದಿ ವೋಗ್ ಏಪ್ರಿಲ್ ಸಂಚಿಕೆಯಲ್ಲಿ ಕಾಣಿಸಿಕೊಂಡು, ಅವರು ಕೇರಳದಲ್ಲಿ ಸಾಂಕ್ರಮಿಕ ರೋಗದಿಂದ ಹೇಗೆ ಕೇರಳವನ್ನು ಹೊರತಂದರು ಎಂದು ಬರೆಯಲಾಗಿದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ.

Vogue Warriors: Meet Kerala’s health minister who is taking the state out of the pandemic

ಅರಬ್ ನ್ಯೂಸ್ (ಸೌದಿ ಅರೇಬಿಯಾ)

ಈ ವರದಿಯು ಕೇರಳದಲ್ಲಿ  ಕೊರೊನಾ ನಿರ್ವಹಣಾ ಚಿತ್ರಣವನ್ನು ಪರಿಶೀಲಿದಲ್ಲದೆ, ಕೇರಳವು ರಾಷ್ಟ್ರೀಯ 11 ಪ್ರತಿಶತದ ವಿರುದ್ಧ 50 ಪ್ರತಿಶತದಷ್ಟು ಚೇತರಿಕೆ ದರವನ್ನು ಹೇಗೆ ದಾಖಲಿಸಿದೆ ಎಂಬುದನ್ನು ತೋರಿಸುತ್ತದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ.

ಇಷ್ಟೇ ಅಲ್ಲದೆ ಕೇರಳ ಕೊರೊನಾ ವಿರುದ್ದ ಮಾದರಿ ಹೋರಾಟವನ್ನು ಹೇಗೆ ನಿಭಾಯಿಸಿತು ಎನ್ನುವುದು, ಇತರ ಜಾಗತಿಕ ಮಾಧ್ಯಮಗಳಲ್ಲಿ ಸುದ್ದಿಯಾದ ಲಿಂಕುಗಳು ಇಲ್ಲಿವೆ :

 Voice of America(ಅಮೆರಿಕಾ)

MIT Technology Review (ಕೇಂಬ್ರಿಡ್ಜ್)

National Post (ಕೆನಡ)

The Diplomat (ಜಪಾನ್)

The National Middle East (ಅಬುದಾಬಿ, ದುಬೈ)

Gulf News(ದುಬೈ)

Khaleej Times(ದುಬೈ)

France Le Munde (ಫ್ರಾನ್ಸ್)

France Courier International (ಫ್ರಾನ್ಸ್)

France Science Souvenir (ಫ್ರಾನ್ಸ್)

Italy La Stump(ಇಟೆಲಿ)

Italy Republic (ಇಟೆಲಿ)

Germany Jungle Wealth(ಜರ್ಮನಿ)

South China Morning Post ‌(ಚೀನಾ)

Strait Times (ಸಿಂಗಾಪುರ್)

Nigeria Pungence (ನೈಜೀರಿಯಾ)

New Prime South Africa(ದಕ್ಷಿಣ ಆಫ್ರಿಕಾ)

Turkey Evergreen (ತುರ್ಕಿ)

Europe  Solidaire

Daka Tribunal(ಬಾಂಗ್ಲಾದೇಶ)

Path (Org)

Alternate (ಯು.ಎ.ಇ)

Presence(ಬ್ರಿಟನ್)

France Humanite (ಫ್ರಾನ್ಸ್)

Poland Strjk (ಪೋಲಾಂಡ್)

Brasildefato (ಬ್ರೆಜಿಲ್)


ಇದನ್ನೂ ಓದಿ: ಭಾರತವೆಂಬ ಗಣರಾಜ್ಯ ಅನುಸರಿಸಬೇಕಾದ ದಾರಿ ಕೇರಳ ರಾಜ್ಯದಲ್ಲಿದೆ


ವಿಡಿಯೋ ನೋಡಿ: ಸದ್ದು…ಈ ಸುದ್ದಿ ಏನಾಗಿದೆ 8ನೇ ಸಂಚಿಕೆ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕೇರಳದ ಮಾದರಿಯನ್ನು ನಮ್ಮ ದೇಶದ ಎಲ್ಲ ರಾಜ್ಯಗಳು ಅನುಸರಿಸಬೇಕು.

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...