Homeಅಂಕಣಗಳುಗೌರಿ ಕಾರ್ನರ್: ಈ ದೇಶ ಕುರಿತು ಖುಷವಂತರ ಪ್ರಶ್ನೆ

ಗೌರಿ ಕಾರ್ನರ್: ಈ ದೇಶ ಕುರಿತು ಖುಷವಂತರ ಪ್ರಶ್ನೆ

- Advertisement -
- Advertisement -

ಸಿಖ್ ಧರ್ಮದ ಗುರುಗ್ರಂಥವನ್ನು ಆಳವಾಗಿ ಅಭ್ಯಾಸ ಮಾಡಿರುವ, ಸಾವಿರಾರು ಉರ್ದು ಶಾಯರಿಗಳನ್ನು ಅನುವಾದಿಸಿರುವ, ನೂರಾರು ಹಿಂದೂ ಸಂನ್ಯಾಸಿಗಳನ್ನು ಸಂದರ್ಶಿಸಿರುವ, ಜೀವನವನ್ನು ಪ್ರೀತಿಸುವಷ್ಟೇ ಎಲ್ಲ ಜಾತಿ, ಧರ್ಮದ ಜನರನ್ನು ಬಹುವಾಗಿ ಪ್ರೀತಿಸುವ -ಟೀಕಿಸುವ ವ್ಯಕ್ತಿ ಖುಷವಂತ್ ಸಿಂಗ್.

ಖುಷವಂತರಿಗೆ 80 ವರ್ಷ ತುಂಬಿದಾಗ, ಅಪ್ಪ ಅವರನ್ನು ಕುರಿತು ಹೀಗೆ ಬರೆದಿದ್ದರು: “ಸಿಖ್ ಜನರ ಶಕ್ತಿ ಮತ್ತು ಅಸಹಾಯಕತೆ, ಮುಸ್ಲಿಮರ ತ್ರಾಣ ಮತ್ತು ಹುಂಬತನ, ಹಿಂದೂಗಳ ಗುಣ ಮತ್ತು ದೋಷ-ಎಲ್ಲವನ್ನೂ ಬಲ್ಲ ವ್ಯಕ್ತಿ ಖುಷವಂತ್. ಪಾಕಿಸ್ತಾನ ಮತ್ತು ಭಾರತವನ್ನು ಹತ್ತಿರ ತರುವಲ್ಲಿ, ಸಿಖ್ ಜನ ಭಾರತದಲ್ಲೇ ಉಳಿದು ನೆಮ್ಮದಿಯಾಗಿರುವಲ್ಲಿ ಖುಷವಂತ್ ಮಾಡಿದಷ್ಟು ಕೆಲಸ ಯಾವನೂ ಮಾಡಿಲ್ಲ. ಈ ದೇಶದಲ್ಲಿ ಶಾಂತಿಗಾಗಿ ನೊಬೆಲ್ ಬಹುಮಾನ ಸಿಗಬೇಕಿದ್ದರೆ ಅದು ಸಿಗಬೇಕಾದ್ದು ಖುಷವಂತ್‌ರಿಗೆ…..”

ಈಗ ತಮ್ಮ 88ನೇ ಹರೆಯದಲ್ಲಿರುವ ಖುಷವಂತ್, ದೇಶ ವಿಭಜನೆ ಸಮಯದಲ್ಲಿ ಅತಿಘೋರ ಕೋಮುದಳ್ಳುರಿಯನ್ನು ಕಣ್ಣಾರೆ ಕಂಡವರು; ಲಾಹೋರಿನಿಂದ ದೆಹಲಿಗೆ ವಲಸೆ ಬಂದು ತಾನು ಭಾರತದವನೋ ಪಾಕಿಸ್ತಾನದವನೋ ಎಂದು ದಿಗ್ಭ್ರಾಂತರಾದವರು; 1947ರ ಆಗಸ್ಟ್ 14/15ರ ರಾತ್ರಿ ಹೊಸರಾಷ್ಟ್ರದ ಉದಯದ ಸಂಭ್ರಮದಲ್ಲಿ ಅಪಾರ ಕನಸುಗಳನ್ನು ಹೊತ್ತು ಪಾಲ್ಗೊಂಡವರು.

PC : Amazon.in

ಈಗ, ದೇಶ ವಿಭಜನೆಯಾದ 56 ವರ್ಷಗಳಲ್ಲಿ, ಅದರಲ್ಲೂ ಮುಖ್ಯವಾಗಿ ಹೋದ ವರ್ಷ ಗುಜರಾತ್ ರಾಜ್ಯದಲ್ಲಿ ನಡೆದ ಕೋಮುದಳ್ಳುರಿಯನ್ನು ಕಂಡು ಕಂಗಾಲಾಗಿದ್ದಾರೆ ಖುಷವಂತ್. ತನ್ನ ಜೀವನದುದ್ದಕ್ಕೂ ಕೋಮುಸೌಹಾರ್ದತೆಗಾಗಿ ಶ್ರಮಿಸಿದ್ದ ಖುಷವಂತ್, ಕೋಮುವಾದಿಗಳ ಪ್ರಸ್ತುತ ಅಟ್ಟಹಾಸವನ್ನು ಕಂಡು ಮೊನ್ನೆ ’ದಿ ಎಂಡ್ ಆಫ್ ಇಂಡಿಯಾ’ ಎಂಬ ಪುಸ್ತಕವನ್ನು ಹೊರತಂದಿದ್ದಾರೆ.

ನಾಲ್ಕು ಪ್ರಬಂಧಗಳ ಸಂಗ್ರಹವಾದ ಈ ಪುಸ್ತಕದ ಮುನ್ನುಡಿಯನ್ನು ಖುಷವಂತ್ ಹೀಗೆ ಆರಂಭಿಸುತ್ತಾರೆ: “ಭಾರತಕ್ಕೆ ಕತ್ತಲು ಮುಸುಕುತ್ತಿದೆ. 2002ರ ಆರಂಭದಲ್ಲಿ ಗಾಂಧಿ ಹುಟ್ಟಿದ ನಾಡು ಗುಜರಾತಿನಲ್ಲಿ ನಡೆದ ನರಮೇಧ ಹಾಗೂ ಆನಂತರದ ಚುನಾವಣೆಯಲ್ಲಿ ನರೇಂದ್ರ ಮೋದಿಯ ಜಯ ನಮ್ಮ ದೇಶಕ್ಕೆ ದುರಂತವನ್ನು ತಂದಿದೆ. ನಮ್ಮ ಆಧುನಿಕ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದಂತಹ ಫ್ಯಾಸಿಸ್ಟ್ ಧೋರಣೆಯನ್ನು ಹಿಂದೂ ಮೂಲಭೂತವಾದಿಗಳು ಪ್ರದರ್ಶಿಸುತ್ತಿದ್ದಾರೆ. ದೇಶ ವಿಭಜನೆಯ ನಂತರ ಮತ್ತೆಂದೂ ಅಂತಹ ನರಮೇಧ ನಡೆಯದೆಂದು ನಾನು ಭಾವಿಸಿದ್ದೆ. ಆದರೆ ಅದು ಸುಳ್ಳೆಂದು ಸಾಬೀತಾಗಿದೆ. ಮಹಾನ್ ದೇಶವಾಗುವ ಬದಲು ನಮ್ಮ ಭಾರತ ಕೆಳಮಟ್ಟಕ್ಕೆ ಕುಸಿಯುತ್ತಿದೆ, ಒಂದು ಅದ್ಭುತ ಪವಾಡ ನಮ್ಮನ್ನು ರಕ್ಷಿಸದಿದ್ದರೆ ದೇಶ ಒಡೆದುಹೋಗುತ್ತದೆ.”

ಜಾತ್ಯತೀತತೆಯಲ್ಲಿ ಅಪಾರ ನಂಬಿಕೆಯಿಟ್ಟುಕೊಂಡಿರುವ ಖುಷವಂತ್ ಸಿಂಗ್ ಹಿಂದಿನಿಂದಲೂ ಎಲ್ಲಾ ರೀತಿಯ ಧಾರ್ಮಿಕ ಮೂಲಭೂತವಾದವನ್ನು ಖಂಡಿಸುತ್ತಲೇ ಬಂದಿದ್ದಾರೆ. ಹಿಂದೂಗಳ ವಿರುದ್ಧ ಕೆಂಡಕಾರುತ್ತಿದ್ದ ಜರ್ನೇಲ್ ಸಿಂಗ್ ಬಿಂಧ್ರನ್‌ವಾಲೆನನ್ನು ಕಟುವಾಗಿ ಟೀಕಿಸಿದ್ದಕ್ಕೆ ಖಾಲಿಸ್ತಾನಿಗಳ ಹಿಟ್ ಲಿಸ್ಟ್‌ಗೆ ಸೇರ್ಪಡೆಯಾಗಿ 15 ವರ್ಷಗಳ ಕಾಲ ಖುಷವಂತ್ ಸಿಂಗ್‌ರವರು ಬಿಗಿಯಾದ ಭದ್ರತೆಯ ಮಧ್ಯೆ ಜೀವಿಸಬೇಕಾಗಿ ಬಂತು. ಈಗ ಅಲ್ಪಸಂಖ್ಯಾತರ ವಿರುದ್ಧ ಕೆಂಡಕಾರುತ್ತಿರುವ ನರೇಂದ್ರ ಮೋದಿ, ತೊಗಾಡಿಯಾ, ಬಾಳಠಾಕ್ರೆ, ಗಿರಿರಾಜ್ ಕಿಶೋರ್‌ರಂತಹ ಹಿಂದೂ ಮೂಲಭೂತವಾದಿಗಳ ವಿರುದ್ಧ ಮಾತನಾಡುತ್ತಿರುವುದಕ್ಕೆ ಅಶ್ಲೀಲ ಪತ್ರಗಳಿಗೂ, ಬಣ್ಣಬಣ್ಣದ ಶಾಪಗಳಿಗೂ ಗುರಿಯಾಗಿದ್ದಾರೆ ಖುಷವಂತ್.

ಪ್ರತಿಯೊಂದು ಧರ್ಮದ ವೈರಿ ಮತ್ತೊಂದು ಧರ್ಮವಲ್ಲ, ಬದಲಾಗಿ ತನ್ನ ಧರ್ಮದ ’ಶ್ರೇಷ್ಠತೆ’ಯನ್ನೇ ಇನ್ನೊಬ್ಬರ ಮೇಲೆ ಹೊರಿಸಲು ಯತ್ನಿಸುವವನು; ಪ್ರತಿ ಧರ್ಮವನ್ನು ಇತರರು ತೀರ್ಮಾನಿಸುವುದು ಆ ಧರ್ಮಗ್ರಂಥದಲ್ಲೇನಿದೆ ಅಥವಾ ಆ ಧರ್ಮದ ಗುರುಗಳು ಏನು ಹೇಳಿದ್ದಾರೆ ಎಂದು ವಿಶ್ಲೇಷಿಸಿಯಲ್ಲ. ಬದಲಾಗಿ ಆ ಧರ್ಮದ ಅನುಯಾಯಿಗಳು ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಎಂದು ನಂಬಿರುವವರು ಖುಷವಂತ್. ಆದರೆ ಈಗ, ಬಾಬ್ರಿ ಮಸೀದಿಯನ್ನು ಕೆಡವುವವರು, ಕ್ರೈಸ್ತ ಮಿಷನರಿಗಳನ್ನು ಸುಟ್ಟುಹಾಕುವವರು, ಮುಸ್ಲಿಮರ ರಕ್ತವನ್ನು ಹೀರುವವರು, ತಮಗೆ ಸರಿಕಾಣದ ಪುಸ್ತಕ-ಸಿನಿಮಾ-ಚಿತ್ರಕಲೆಗಳ ವಿರುದ್ಧ ಪ್ರತಿಭಟಿಸುವುದು, ಇತಿಹಾಸವನ್ನು ತಿರುಚುವುದು…… ಇವೆ ಹಿಂದೂ ಧರ್ಮದ ಲಕ್ಷಣಗಳಂತೆ ಕಾಣಿಸುತ್ತಿದೆ ಎಂದು ಎಚ್ಚರಿಸುತ್ತಾರೆ ಖುಷವಂತ್.

“ಇವೆಲ್ಲವನ್ನು ಪ್ರತಿಭಟಿಸುವವರನ್ನು ತುಚ್ಛವಾಗಿ ಕಂಡರು, ಸ್ಯೂಡೋ ಜಾತ್ಯತೀತರು ಎಂಬ ಹಣೆಪಟ್ಟಿಯನ್ನು ನೀಡಿದರು. ಜಾತ್ಯತೀತತೆಯಲ್ಲಿ ನಂಬಿಕೆಯಿರುವವರು ಇದೆಲ್ಲವನ್ನು ಸಹಿಸಿದ್ದು ಏಕೆಂದರೆ ಇವರು ಸಂಘಟಿತರಾಗಿಲ್ಲದಿದ್ದಕ್ಕೆ. ಈಗ ನಾವು ನಮ್ಮ ದೇಶವನ್ನೇ ಆವರ ಕೈಗಿಟ್ಟಿದ್ದೇವೆ,” ಎಂದು ಪರಿತಪಿಸುತ್ತಾರೆ.

ಹಾಗೆಯೆ ಗೀತಾ ಹರಿಹರನ್ ಎಂಬ ಆಂಗ್ಲ ಲೇಖಕಿಯ ’ಇನ್ ಟೈಮ್ಸ್ ಆಫ್ ಸೀಜ್’ ಎಂಬ ಪುಸ್ತಕದಿಂದ ಒಂದು ಉದಾಹರಣೆಯನ್ನು ನೀಡುತ್ತಾರೆ. ರೆವರೆಂಡ್ ಮಾರ್ಟಿನ್ ನಿಮುಲ್ಲರ್ ಎಂಬ ಜರ್ಮನ್ ಪಾದ್ರಿಯನ್ನು ನಾಜಿಗಳು ಪೀಡಿಸಿದ್ದರು. ಅವನು ಹೀಗೆಂದಿದ್ದೇನು:

PC : The World Sikh News (ಜರ್ನೇಲ್ ಸಿಂಗ್ ಬಿಂಧ್ರನ್‌ವಾಲೆ)

“ಜರ್ಮನಿಯಲ್ಲಿ ನಾಜಿಗಳು ಪ್ರಥಮವಾಗಿ ಗುರಿಯಾಗಿಸಿಕೊಂಡಿದ್ದು ಕಮ್ಯುನಿಸ್ಟ್‌ಗಳನ್ನು. ಆದರೆ ನಾನು ಕಮ್ಯುನಿಸ್ಟ್ ಆಗಿಲ್ಲದಿದ್ದರಿಂದ ನಾನು ಸುಮ್ಮನಿದ್ದೆ.

ನಂತರ ನಾಜಿಗಳು ಯಹೂದಿಯರನ್ನು ಗುರಿಯಾಗಿಸಿಕೊಂಡಾಗ ನಾನು ಯಹೂದಿಯಲ್ಲವಾದ್ದರಿಂದ, ಆಗಲೂ ಸುಮ್ಮನಿದ್ದೆ.

ಆಮೇಲೆ ನಾಜಿಗಳು ಟ್ರೇಡ್ ಯೂನಿಯನಿಸ್ಟ್‌ಗಳನ್ನು ಹಿಡಿಯಲಾರಂಭಿಸಿದರು. ನಾನು ಯಾವ ಟ್ರೇಡ್ ಯೂನಿಯನ್‌ಗೂ ಸೇರಿಲ್ಲವಾದ್ದರಿಂದ ನಾನು ಸುಮ್ಮನೆ ಇದ್ದೆ.

ಮುಂದೆ, ಸಲಿಂಗಕಾಮಿಗಳನ್ನು ಸೆರೆ ಹಿಡಿಯಲಾರಂಭಿಸಿದಾಗಲೂ, ನಾನು ಸಲಿಂಗಕಾಮಿಯೇನಲ್ಲವಲ್ಲಾ ಎಂದು ಸುಮ್ಮನಿದ್ದೆ.

ಆನಂತರ, ನಾಜಿಗಳು ಕ್ಯಾಥೋಲಿಕ್‌ರನ್ನು ಗುರಿಮಾಡಿಕೊಂಡಾಗ, ಪ್ರಾಟೊಸ್ಟೆಂಟ್‌ನಾದ ನನಗೂ ಅದಕ್ಕೂ ಏನೂ ಸಂಬಂಧವಿಲ್ಲವಲ್ಲಾ ಎಂದು ಸುಮ್ಮನಾದೆ.

ಕೊನೆಗೆ ನಾಜಿಗಳು ನನ್ನನ್ನೇ ಗುರಿಮಾಡಿಕೊಂಡರು… ಆ ಹೊತ್ತಿಗೆ ನನ್ನ ಪರವಾಗಿ ಮಾತನಾಡಲು ಯಾರೂ ಉಳಿದಿರಲಿಲ್ಲ.”

ಈ ಪುಟ್ಟ ಟಿಪ್ಪಣಿ ಎಲ್ಲರಿಗೂ ಎಷ್ಟೊಂದು ಪಾಠ ಹೇಳುತ್ತದೆಯಲ್ಲವೇ? ಮುಸ್ಲಿಮರನ್ನು ಕೊಲ್ಲುತ್ತಿದ್ದರೆ ನನಗೇನು? ಕ್ರೈಸ್ತರನ್ನು ಬಡಿಯುತ್ತಿದ್ದರೆ ನನಗೇನು? ಬುಡಕಟ್ಟು ಜನಾಂಗದವರನ್ನು ನಾಶ ಮಾಡುತ್ತಿದ್ದರೆ ನನಗೇನು? ದಲಿತರನ್ನು ಶೋಷಿಸುತ್ತಿದ್ದರೆ ನನಗೇನು? ಲಿಂಗಾಯತರನ್ನು ಮೂಲೆಗುಂಪು ಮಾಡುತ್ತಿದ್ದರೆ ನನಗೇನು? ಒಕ್ಕಲಿಗರನ್ನು ಛಿದ್ರ ಮಾಡುತ್ತಿದ್ದರೆ ನನಗೇನು? ಎಂದು ನಾವೆಲ್ಲಾ ಸುಮ್ಮನೆ ಕೂತರೆ ನಮಗೂ ಮುಂದೆ ರೆವರೆಂಡ್ ಮಾರ್ಟಿನ್ ನಿಮುಲ್ಲರ್ ಗತಿಯೇ ಆಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ ಅಲ್ಲವೇ?

’ದಿ ಎಂಡ್ ಆಫ್ ಇಂಡಿಯಾ’ ಪುಸ್ತಕದ ಕೊನೆಯ ಪ್ರಬಂಧದ ಶೀರ್ಷಿಕೆ ’ಈಸ್ ದೇರ್ ಎ ಸಲ್ಯೂಷನ್?’ ಎಂಬುದು.

ಈ ಅಧ್ಯಾಯದಲ್ಲಿ ಹಲವಾರು ವಿವಿಧ ಧರ್ಮಗಳನ್ನು ಹೊಂದಿರುವ ಭಾರತೀಯರಿಗೆ ಹೊಸದೊಂದು ಧರ್ಮ ಬೇಕಿದೆ ಎಂದು ಪ್ರಸ್ತಾಪಿಸುತ್ತಾರೆ ಖುಷವಂತ್ ಸಿಂಗ್. “ಒಳ್ಳೆಯವ ಅಥವಾ ಕೆಟ್ಟವನಾಗುವುದಕ್ಕೂ ಹಾಗೂ ದೇವರಲ್ಲಿ ನಂಬಿಕೆಯಿಡುವುದಕ್ಕೂ ಏನೂ ಸಂಬಂಧವಿಲ್ಲ ಎಂಬುದು ನೆನಪಿಡಬೇಕಾದ ಮುಖ್ಯ ಸಂಗತಿ. ದೇವರಲ್ಲಿ ನಂಬಿಕೆಯಿಲ್ಲದೆಯೇ ನೀವೊಬ್ಬ ಸಂತನಾಗಬಹುದು ಹಾಗೆಯೇ ದೇವರಲ್ಲಿ ನಂಬಿಕೆಯಿರಿಸಿಕೊಂಡೂ ಕೂಡ ಒಬ್ಬ ತಿರಸ್ಕರಣೀಯ ಖಳನಾಗಲೂಬಹುದು. ನನ್ನ ಧರ್ಮದಲ್ಲಿ ದೇವರಿಗೆ ಯಾವುದೇ ಸ್ಥಾನವಿಲ್ಲ.” ಎನ್ನುತ್ತಾರೆ ನಿರೀಶ್ವರವಾದಿ ಖುಷವಂತ್.

ನಮ್ಮ ದೇಶಕ್ಕೆ ಬೇಕಾಗಿರುವ ಹೊಸ ಧರ್ಮದ ತಳಹದಿ ‘work ethic’ (ಕಾರ್ಯ ಸಿದ್ಧಾಂತ) ಆಗಿರಬೇಕು ಮಾತ್ರವಲ್ಲ, ಪ್ರತಿಯೊಬ್ಬರ ಧರ್ಮವೂ ಇನ್ನೊಬ್ಬ ವ್ಯಕ್ತಿಗೆ ಅಥವಾ ಜೀವವಿರುವ ಯಾವುದೇ ಪ್ರಾಣಿಗೆ ನೋವುಂಟು ಮಾಡಬಾರದು ಹಾಗೂ ತನ್ನ ಪರಿಸರವನ್ನು ಕಾಪಾಡುವುದು ಮುಖ್ಯವಾಗಬೇಕು; ಅಹಿಂಸೆಯೇ ಎಲ್ಲಕ್ಕಿಂತ ಉತ್ಕೃಷ್ಟ ಧರ್ಮ ಹಾಗೂ ಅಸಭ್ಯತೆಯ ಅಂತಿಮ ರೂಪವೇ ಹಿಂಸೆ ಎಂದು ಮಂಡಿಸುವ ಖುಷವಂತ್ ತಮ್ಮ ಪುಸ್ತಕವನ್ನು ಇಲ್ಲಾ ವೀಲರ್ ವಿಲ್‌ಕಾಕ್ಸ್ ಎಂಬವವರ ಹೇಳಿಕೆಯೊಂದಿಗೆ ಮುಗಿಸುತ್ತಾರೆ. ಅದು ಹೀಗಿದೆ:

“So many gods, so many creeds, so many paths that wind & wind. When just the art of being kind is all that the sad world needs.”

(ಖುಷ್ವಂತ್ ಸಿಂಗ್ ಅವರು ತಮ್ಮ 88 ವಯಸ್ಸಿನಲ್ಲಿ ಬರೆದ ಪುಸ್ತಕವನ್ನು ಉದಾಹರಿಸಿ ಬರೆದಿದ್ದ ಗೌರಿಯವರ ಕಂಡಹಾಗೆ ಅಂಕಣವನ್ನು ಇಲ್ಲಿ ಮರುಪ್ರಕಟಿಸಿದ್ದೇವೆ. ಖುಷ್ವಂತ್ 2014ರಲ್ಲಿ ತಮ್ಮ 99ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು)


ಇದನ್ನೂ ಓದಿ: ಗೌರಿ ಕಾರ್ನರ್: ಭಾಷೆಯನ್ನು ವಿಭಜಿಸುವುದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...