Homeಅಂಕಣಗಳುಗೌರಿ ಕಾರ್ನರ್: ಈ ದೇಶ ಕುರಿತು ಖುಷವಂತರ ಪ್ರಶ್ನೆ

ಗೌರಿ ಕಾರ್ನರ್: ಈ ದೇಶ ಕುರಿತು ಖುಷವಂತರ ಪ್ರಶ್ನೆ

- Advertisement -
- Advertisement -

ಸಿಖ್ ಧರ್ಮದ ಗುರುಗ್ರಂಥವನ್ನು ಆಳವಾಗಿ ಅಭ್ಯಾಸ ಮಾಡಿರುವ, ಸಾವಿರಾರು ಉರ್ದು ಶಾಯರಿಗಳನ್ನು ಅನುವಾದಿಸಿರುವ, ನೂರಾರು ಹಿಂದೂ ಸಂನ್ಯಾಸಿಗಳನ್ನು ಸಂದರ್ಶಿಸಿರುವ, ಜೀವನವನ್ನು ಪ್ರೀತಿಸುವಷ್ಟೇ ಎಲ್ಲ ಜಾತಿ, ಧರ್ಮದ ಜನರನ್ನು ಬಹುವಾಗಿ ಪ್ರೀತಿಸುವ -ಟೀಕಿಸುವ ವ್ಯಕ್ತಿ ಖುಷವಂತ್ ಸಿಂಗ್.

ಖುಷವಂತರಿಗೆ 80 ವರ್ಷ ತುಂಬಿದಾಗ, ಅಪ್ಪ ಅವರನ್ನು ಕುರಿತು ಹೀಗೆ ಬರೆದಿದ್ದರು: “ಸಿಖ್ ಜನರ ಶಕ್ತಿ ಮತ್ತು ಅಸಹಾಯಕತೆ, ಮುಸ್ಲಿಮರ ತ್ರಾಣ ಮತ್ತು ಹುಂಬತನ, ಹಿಂದೂಗಳ ಗುಣ ಮತ್ತು ದೋಷ-ಎಲ್ಲವನ್ನೂ ಬಲ್ಲ ವ್ಯಕ್ತಿ ಖುಷವಂತ್. ಪಾಕಿಸ್ತಾನ ಮತ್ತು ಭಾರತವನ್ನು ಹತ್ತಿರ ತರುವಲ್ಲಿ, ಸಿಖ್ ಜನ ಭಾರತದಲ್ಲೇ ಉಳಿದು ನೆಮ್ಮದಿಯಾಗಿರುವಲ್ಲಿ ಖುಷವಂತ್ ಮಾಡಿದಷ್ಟು ಕೆಲಸ ಯಾವನೂ ಮಾಡಿಲ್ಲ. ಈ ದೇಶದಲ್ಲಿ ಶಾಂತಿಗಾಗಿ ನೊಬೆಲ್ ಬಹುಮಾನ ಸಿಗಬೇಕಿದ್ದರೆ ಅದು ಸಿಗಬೇಕಾದ್ದು ಖುಷವಂತ್‌ರಿಗೆ…..”

ಈಗ ತಮ್ಮ 88ನೇ ಹರೆಯದಲ್ಲಿರುವ ಖುಷವಂತ್, ದೇಶ ವಿಭಜನೆ ಸಮಯದಲ್ಲಿ ಅತಿಘೋರ ಕೋಮುದಳ್ಳುರಿಯನ್ನು ಕಣ್ಣಾರೆ ಕಂಡವರು; ಲಾಹೋರಿನಿಂದ ದೆಹಲಿಗೆ ವಲಸೆ ಬಂದು ತಾನು ಭಾರತದವನೋ ಪಾಕಿಸ್ತಾನದವನೋ ಎಂದು ದಿಗ್ಭ್ರಾಂತರಾದವರು; 1947ರ ಆಗಸ್ಟ್ 14/15ರ ರಾತ್ರಿ ಹೊಸರಾಷ್ಟ್ರದ ಉದಯದ ಸಂಭ್ರಮದಲ್ಲಿ ಅಪಾರ ಕನಸುಗಳನ್ನು ಹೊತ್ತು ಪಾಲ್ಗೊಂಡವರು.

PC : Amazon.in

ಈಗ, ದೇಶ ವಿಭಜನೆಯಾದ 56 ವರ್ಷಗಳಲ್ಲಿ, ಅದರಲ್ಲೂ ಮುಖ್ಯವಾಗಿ ಹೋದ ವರ್ಷ ಗುಜರಾತ್ ರಾಜ್ಯದಲ್ಲಿ ನಡೆದ ಕೋಮುದಳ್ಳುರಿಯನ್ನು ಕಂಡು ಕಂಗಾಲಾಗಿದ್ದಾರೆ ಖುಷವಂತ್. ತನ್ನ ಜೀವನದುದ್ದಕ್ಕೂ ಕೋಮುಸೌಹಾರ್ದತೆಗಾಗಿ ಶ್ರಮಿಸಿದ್ದ ಖುಷವಂತ್, ಕೋಮುವಾದಿಗಳ ಪ್ರಸ್ತುತ ಅಟ್ಟಹಾಸವನ್ನು ಕಂಡು ಮೊನ್ನೆ ’ದಿ ಎಂಡ್ ಆಫ್ ಇಂಡಿಯಾ’ ಎಂಬ ಪುಸ್ತಕವನ್ನು ಹೊರತಂದಿದ್ದಾರೆ.

ನಾಲ್ಕು ಪ್ರಬಂಧಗಳ ಸಂಗ್ರಹವಾದ ಈ ಪುಸ್ತಕದ ಮುನ್ನುಡಿಯನ್ನು ಖುಷವಂತ್ ಹೀಗೆ ಆರಂಭಿಸುತ್ತಾರೆ: “ಭಾರತಕ್ಕೆ ಕತ್ತಲು ಮುಸುಕುತ್ತಿದೆ. 2002ರ ಆರಂಭದಲ್ಲಿ ಗಾಂಧಿ ಹುಟ್ಟಿದ ನಾಡು ಗುಜರಾತಿನಲ್ಲಿ ನಡೆದ ನರಮೇಧ ಹಾಗೂ ಆನಂತರದ ಚುನಾವಣೆಯಲ್ಲಿ ನರೇಂದ್ರ ಮೋದಿಯ ಜಯ ನಮ್ಮ ದೇಶಕ್ಕೆ ದುರಂತವನ್ನು ತಂದಿದೆ. ನಮ್ಮ ಆಧುನಿಕ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದಂತಹ ಫ್ಯಾಸಿಸ್ಟ್ ಧೋರಣೆಯನ್ನು ಹಿಂದೂ ಮೂಲಭೂತವಾದಿಗಳು ಪ್ರದರ್ಶಿಸುತ್ತಿದ್ದಾರೆ. ದೇಶ ವಿಭಜನೆಯ ನಂತರ ಮತ್ತೆಂದೂ ಅಂತಹ ನರಮೇಧ ನಡೆಯದೆಂದು ನಾನು ಭಾವಿಸಿದ್ದೆ. ಆದರೆ ಅದು ಸುಳ್ಳೆಂದು ಸಾಬೀತಾಗಿದೆ. ಮಹಾನ್ ದೇಶವಾಗುವ ಬದಲು ನಮ್ಮ ಭಾರತ ಕೆಳಮಟ್ಟಕ್ಕೆ ಕುಸಿಯುತ್ತಿದೆ, ಒಂದು ಅದ್ಭುತ ಪವಾಡ ನಮ್ಮನ್ನು ರಕ್ಷಿಸದಿದ್ದರೆ ದೇಶ ಒಡೆದುಹೋಗುತ್ತದೆ.”

ಜಾತ್ಯತೀತತೆಯಲ್ಲಿ ಅಪಾರ ನಂಬಿಕೆಯಿಟ್ಟುಕೊಂಡಿರುವ ಖುಷವಂತ್ ಸಿಂಗ್ ಹಿಂದಿನಿಂದಲೂ ಎಲ್ಲಾ ರೀತಿಯ ಧಾರ್ಮಿಕ ಮೂಲಭೂತವಾದವನ್ನು ಖಂಡಿಸುತ್ತಲೇ ಬಂದಿದ್ದಾರೆ. ಹಿಂದೂಗಳ ವಿರುದ್ಧ ಕೆಂಡಕಾರುತ್ತಿದ್ದ ಜರ್ನೇಲ್ ಸಿಂಗ್ ಬಿಂಧ್ರನ್‌ವಾಲೆನನ್ನು ಕಟುವಾಗಿ ಟೀಕಿಸಿದ್ದಕ್ಕೆ ಖಾಲಿಸ್ತಾನಿಗಳ ಹಿಟ್ ಲಿಸ್ಟ್‌ಗೆ ಸೇರ್ಪಡೆಯಾಗಿ 15 ವರ್ಷಗಳ ಕಾಲ ಖುಷವಂತ್ ಸಿಂಗ್‌ರವರು ಬಿಗಿಯಾದ ಭದ್ರತೆಯ ಮಧ್ಯೆ ಜೀವಿಸಬೇಕಾಗಿ ಬಂತು. ಈಗ ಅಲ್ಪಸಂಖ್ಯಾತರ ವಿರುದ್ಧ ಕೆಂಡಕಾರುತ್ತಿರುವ ನರೇಂದ್ರ ಮೋದಿ, ತೊಗಾಡಿಯಾ, ಬಾಳಠಾಕ್ರೆ, ಗಿರಿರಾಜ್ ಕಿಶೋರ್‌ರಂತಹ ಹಿಂದೂ ಮೂಲಭೂತವಾದಿಗಳ ವಿರುದ್ಧ ಮಾತನಾಡುತ್ತಿರುವುದಕ್ಕೆ ಅಶ್ಲೀಲ ಪತ್ರಗಳಿಗೂ, ಬಣ್ಣಬಣ್ಣದ ಶಾಪಗಳಿಗೂ ಗುರಿಯಾಗಿದ್ದಾರೆ ಖುಷವಂತ್.

ಪ್ರತಿಯೊಂದು ಧರ್ಮದ ವೈರಿ ಮತ್ತೊಂದು ಧರ್ಮವಲ್ಲ, ಬದಲಾಗಿ ತನ್ನ ಧರ್ಮದ ’ಶ್ರೇಷ್ಠತೆ’ಯನ್ನೇ ಇನ್ನೊಬ್ಬರ ಮೇಲೆ ಹೊರಿಸಲು ಯತ್ನಿಸುವವನು; ಪ್ರತಿ ಧರ್ಮವನ್ನು ಇತರರು ತೀರ್ಮಾನಿಸುವುದು ಆ ಧರ್ಮಗ್ರಂಥದಲ್ಲೇನಿದೆ ಅಥವಾ ಆ ಧರ್ಮದ ಗುರುಗಳು ಏನು ಹೇಳಿದ್ದಾರೆ ಎಂದು ವಿಶ್ಲೇಷಿಸಿಯಲ್ಲ. ಬದಲಾಗಿ ಆ ಧರ್ಮದ ಅನುಯಾಯಿಗಳು ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಎಂದು ನಂಬಿರುವವರು ಖುಷವಂತ್. ಆದರೆ ಈಗ, ಬಾಬ್ರಿ ಮಸೀದಿಯನ್ನು ಕೆಡವುವವರು, ಕ್ರೈಸ್ತ ಮಿಷನರಿಗಳನ್ನು ಸುಟ್ಟುಹಾಕುವವರು, ಮುಸ್ಲಿಮರ ರಕ್ತವನ್ನು ಹೀರುವವರು, ತಮಗೆ ಸರಿಕಾಣದ ಪುಸ್ತಕ-ಸಿನಿಮಾ-ಚಿತ್ರಕಲೆಗಳ ವಿರುದ್ಧ ಪ್ರತಿಭಟಿಸುವುದು, ಇತಿಹಾಸವನ್ನು ತಿರುಚುವುದು…… ಇವೆ ಹಿಂದೂ ಧರ್ಮದ ಲಕ್ಷಣಗಳಂತೆ ಕಾಣಿಸುತ್ತಿದೆ ಎಂದು ಎಚ್ಚರಿಸುತ್ತಾರೆ ಖುಷವಂತ್.

“ಇವೆಲ್ಲವನ್ನು ಪ್ರತಿಭಟಿಸುವವರನ್ನು ತುಚ್ಛವಾಗಿ ಕಂಡರು, ಸ್ಯೂಡೋ ಜಾತ್ಯತೀತರು ಎಂಬ ಹಣೆಪಟ್ಟಿಯನ್ನು ನೀಡಿದರು. ಜಾತ್ಯತೀತತೆಯಲ್ಲಿ ನಂಬಿಕೆಯಿರುವವರು ಇದೆಲ್ಲವನ್ನು ಸಹಿಸಿದ್ದು ಏಕೆಂದರೆ ಇವರು ಸಂಘಟಿತರಾಗಿಲ್ಲದಿದ್ದಕ್ಕೆ. ಈಗ ನಾವು ನಮ್ಮ ದೇಶವನ್ನೇ ಆವರ ಕೈಗಿಟ್ಟಿದ್ದೇವೆ,” ಎಂದು ಪರಿತಪಿಸುತ್ತಾರೆ.

ಹಾಗೆಯೆ ಗೀತಾ ಹರಿಹರನ್ ಎಂಬ ಆಂಗ್ಲ ಲೇಖಕಿಯ ’ಇನ್ ಟೈಮ್ಸ್ ಆಫ್ ಸೀಜ್’ ಎಂಬ ಪುಸ್ತಕದಿಂದ ಒಂದು ಉದಾಹರಣೆಯನ್ನು ನೀಡುತ್ತಾರೆ. ರೆವರೆಂಡ್ ಮಾರ್ಟಿನ್ ನಿಮುಲ್ಲರ್ ಎಂಬ ಜರ್ಮನ್ ಪಾದ್ರಿಯನ್ನು ನಾಜಿಗಳು ಪೀಡಿಸಿದ್ದರು. ಅವನು ಹೀಗೆಂದಿದ್ದೇನು:

PC : The World Sikh News (ಜರ್ನೇಲ್ ಸಿಂಗ್ ಬಿಂಧ್ರನ್‌ವಾಲೆ)

“ಜರ್ಮನಿಯಲ್ಲಿ ನಾಜಿಗಳು ಪ್ರಥಮವಾಗಿ ಗುರಿಯಾಗಿಸಿಕೊಂಡಿದ್ದು ಕಮ್ಯುನಿಸ್ಟ್‌ಗಳನ್ನು. ಆದರೆ ನಾನು ಕಮ್ಯುನಿಸ್ಟ್ ಆಗಿಲ್ಲದಿದ್ದರಿಂದ ನಾನು ಸುಮ್ಮನಿದ್ದೆ.

ನಂತರ ನಾಜಿಗಳು ಯಹೂದಿಯರನ್ನು ಗುರಿಯಾಗಿಸಿಕೊಂಡಾಗ ನಾನು ಯಹೂದಿಯಲ್ಲವಾದ್ದರಿಂದ, ಆಗಲೂ ಸುಮ್ಮನಿದ್ದೆ.

ಆಮೇಲೆ ನಾಜಿಗಳು ಟ್ರೇಡ್ ಯೂನಿಯನಿಸ್ಟ್‌ಗಳನ್ನು ಹಿಡಿಯಲಾರಂಭಿಸಿದರು. ನಾನು ಯಾವ ಟ್ರೇಡ್ ಯೂನಿಯನ್‌ಗೂ ಸೇರಿಲ್ಲವಾದ್ದರಿಂದ ನಾನು ಸುಮ್ಮನೆ ಇದ್ದೆ.

ಮುಂದೆ, ಸಲಿಂಗಕಾಮಿಗಳನ್ನು ಸೆರೆ ಹಿಡಿಯಲಾರಂಭಿಸಿದಾಗಲೂ, ನಾನು ಸಲಿಂಗಕಾಮಿಯೇನಲ್ಲವಲ್ಲಾ ಎಂದು ಸುಮ್ಮನಿದ್ದೆ.

ಆನಂತರ, ನಾಜಿಗಳು ಕ್ಯಾಥೋಲಿಕ್‌ರನ್ನು ಗುರಿಮಾಡಿಕೊಂಡಾಗ, ಪ್ರಾಟೊಸ್ಟೆಂಟ್‌ನಾದ ನನಗೂ ಅದಕ್ಕೂ ಏನೂ ಸಂಬಂಧವಿಲ್ಲವಲ್ಲಾ ಎಂದು ಸುಮ್ಮನಾದೆ.

ಕೊನೆಗೆ ನಾಜಿಗಳು ನನ್ನನ್ನೇ ಗುರಿಮಾಡಿಕೊಂಡರು… ಆ ಹೊತ್ತಿಗೆ ನನ್ನ ಪರವಾಗಿ ಮಾತನಾಡಲು ಯಾರೂ ಉಳಿದಿರಲಿಲ್ಲ.”

ಈ ಪುಟ್ಟ ಟಿಪ್ಪಣಿ ಎಲ್ಲರಿಗೂ ಎಷ್ಟೊಂದು ಪಾಠ ಹೇಳುತ್ತದೆಯಲ್ಲವೇ? ಮುಸ್ಲಿಮರನ್ನು ಕೊಲ್ಲುತ್ತಿದ್ದರೆ ನನಗೇನು? ಕ್ರೈಸ್ತರನ್ನು ಬಡಿಯುತ್ತಿದ್ದರೆ ನನಗೇನು? ಬುಡಕಟ್ಟು ಜನಾಂಗದವರನ್ನು ನಾಶ ಮಾಡುತ್ತಿದ್ದರೆ ನನಗೇನು? ದಲಿತರನ್ನು ಶೋಷಿಸುತ್ತಿದ್ದರೆ ನನಗೇನು? ಲಿಂಗಾಯತರನ್ನು ಮೂಲೆಗುಂಪು ಮಾಡುತ್ತಿದ್ದರೆ ನನಗೇನು? ಒಕ್ಕಲಿಗರನ್ನು ಛಿದ್ರ ಮಾಡುತ್ತಿದ್ದರೆ ನನಗೇನು? ಎಂದು ನಾವೆಲ್ಲಾ ಸುಮ್ಮನೆ ಕೂತರೆ ನಮಗೂ ಮುಂದೆ ರೆವರೆಂಡ್ ಮಾರ್ಟಿನ್ ನಿಮುಲ್ಲರ್ ಗತಿಯೇ ಆಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ ಅಲ್ಲವೇ?

’ದಿ ಎಂಡ್ ಆಫ್ ಇಂಡಿಯಾ’ ಪುಸ್ತಕದ ಕೊನೆಯ ಪ್ರಬಂಧದ ಶೀರ್ಷಿಕೆ ’ಈಸ್ ದೇರ್ ಎ ಸಲ್ಯೂಷನ್?’ ಎಂಬುದು.

ಈ ಅಧ್ಯಾಯದಲ್ಲಿ ಹಲವಾರು ವಿವಿಧ ಧರ್ಮಗಳನ್ನು ಹೊಂದಿರುವ ಭಾರತೀಯರಿಗೆ ಹೊಸದೊಂದು ಧರ್ಮ ಬೇಕಿದೆ ಎಂದು ಪ್ರಸ್ತಾಪಿಸುತ್ತಾರೆ ಖುಷವಂತ್ ಸಿಂಗ್. “ಒಳ್ಳೆಯವ ಅಥವಾ ಕೆಟ್ಟವನಾಗುವುದಕ್ಕೂ ಹಾಗೂ ದೇವರಲ್ಲಿ ನಂಬಿಕೆಯಿಡುವುದಕ್ಕೂ ಏನೂ ಸಂಬಂಧವಿಲ್ಲ ಎಂಬುದು ನೆನಪಿಡಬೇಕಾದ ಮುಖ್ಯ ಸಂಗತಿ. ದೇವರಲ್ಲಿ ನಂಬಿಕೆಯಿಲ್ಲದೆಯೇ ನೀವೊಬ್ಬ ಸಂತನಾಗಬಹುದು ಹಾಗೆಯೇ ದೇವರಲ್ಲಿ ನಂಬಿಕೆಯಿರಿಸಿಕೊಂಡೂ ಕೂಡ ಒಬ್ಬ ತಿರಸ್ಕರಣೀಯ ಖಳನಾಗಲೂಬಹುದು. ನನ್ನ ಧರ್ಮದಲ್ಲಿ ದೇವರಿಗೆ ಯಾವುದೇ ಸ್ಥಾನವಿಲ್ಲ.” ಎನ್ನುತ್ತಾರೆ ನಿರೀಶ್ವರವಾದಿ ಖುಷವಂತ್.

ನಮ್ಮ ದೇಶಕ್ಕೆ ಬೇಕಾಗಿರುವ ಹೊಸ ಧರ್ಮದ ತಳಹದಿ ‘work ethic’ (ಕಾರ್ಯ ಸಿದ್ಧಾಂತ) ಆಗಿರಬೇಕು ಮಾತ್ರವಲ್ಲ, ಪ್ರತಿಯೊಬ್ಬರ ಧರ್ಮವೂ ಇನ್ನೊಬ್ಬ ವ್ಯಕ್ತಿಗೆ ಅಥವಾ ಜೀವವಿರುವ ಯಾವುದೇ ಪ್ರಾಣಿಗೆ ನೋವುಂಟು ಮಾಡಬಾರದು ಹಾಗೂ ತನ್ನ ಪರಿಸರವನ್ನು ಕಾಪಾಡುವುದು ಮುಖ್ಯವಾಗಬೇಕು; ಅಹಿಂಸೆಯೇ ಎಲ್ಲಕ್ಕಿಂತ ಉತ್ಕೃಷ್ಟ ಧರ್ಮ ಹಾಗೂ ಅಸಭ್ಯತೆಯ ಅಂತಿಮ ರೂಪವೇ ಹಿಂಸೆ ಎಂದು ಮಂಡಿಸುವ ಖುಷವಂತ್ ತಮ್ಮ ಪುಸ್ತಕವನ್ನು ಇಲ್ಲಾ ವೀಲರ್ ವಿಲ್‌ಕಾಕ್ಸ್ ಎಂಬವವರ ಹೇಳಿಕೆಯೊಂದಿಗೆ ಮುಗಿಸುತ್ತಾರೆ. ಅದು ಹೀಗಿದೆ:

“So many gods, so many creeds, so many paths that wind & wind. When just the art of being kind is all that the sad world needs.”

(ಖುಷ್ವಂತ್ ಸಿಂಗ್ ಅವರು ತಮ್ಮ 88 ವಯಸ್ಸಿನಲ್ಲಿ ಬರೆದ ಪುಸ್ತಕವನ್ನು ಉದಾಹರಿಸಿ ಬರೆದಿದ್ದ ಗೌರಿಯವರ ಕಂಡಹಾಗೆ ಅಂಕಣವನ್ನು ಇಲ್ಲಿ ಮರುಪ್ರಕಟಿಸಿದ್ದೇವೆ. ಖುಷ್ವಂತ್ 2014ರಲ್ಲಿ ತಮ್ಮ 99ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು)


ಇದನ್ನೂ ಓದಿ: ಗೌರಿ ಕಾರ್ನರ್: ಭಾಷೆಯನ್ನು ವಿಭಜಿಸುವುದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...