Homeಅಂಕಣಗಳುಸರಳ ಬಹುಮತ ಸಿಕ್ಕಿದ್ದರೆ ಸರಿಯಾಗಿ ಮಾಡುತ್ತಿದ್ದೆ!

ಸರಳ ಬಹುಮತ ಸಿಕ್ಕಿದ್ದರೆ ಸರಿಯಾಗಿ ಮಾಡುತ್ತಿದ್ದೆ!

- Advertisement -
- Advertisement -

ಆತ ಅವಳ ಕಿವಿಯಲ್ಲಿ ಉಸುರಿದ! ‘ನಾನು ಒಂದು ಹತ್ತು ವರ್ಷ ಚಿಕ್ಕವನಾಗಿದ್ದಿದ್ದ್ರೆ, ನಿನ್ನನ್ನು ಇನ್ನೂ ಸುಖವಾಗಿಡುತ್ತಿದೆ’ ಎಂದು. ಅದಕ್ಕವಳು ಈಗಲೂ ಏನೂ ಆಗಿಲ್ಲ, ಹತ್ತು ವರ್ಷ ಚಿಕ್ಕವನೆಂದೇ ನಿನ್ನ ಪೌರುಷ ತೋರಬಹುದೆಂದಳು.
ಇಂತಹದೊಂದು ಮಾತು ನಮ್ಮ ಗ್ರಾಮೀಣ ಭಾಗದಲ್ಲಿ ಆಗಾಗ್ಗೆ ಹೊರಬರುತ್ತದೆ. ಕಾರಣ, ತಮ್ಮತಮ್ಮ ಅಸಮರ್ಥತೆಗಳನ್ನು ಯಾವು ಯಾವುದೋ ಕಾರಣಗಳ ಮೇಲೆ ಹಾಕಿ ಬಂಡವಾಳವನ್ನ ಕೊಚ್ಚಿಕೊಳ್ಳುವ ಜನ ಈಗಲೂ ಇದ್ದಾರೆ. ಅದಕ್ಕೆ ತಕ್ಕ ಉದಾಹರಣೆ ಎಂದರೆ, ನಮ್ಮ ಮುಖ್ಯಮಂತ್ರಿಯಂತಲ್ಲಾ. ಜೆಡಿಎಸ್‍ಗೆ ಹೆಚ್ಚಿನ ಬಹುಮತವಿದ್ದರೆ ಇನ್ನೂ ಹೆಚ್ಚಿನದನ್ನು ಕಡಿದು ಕಟ್ಟೆ ಹಾಕುತ್ತಿದ್ದೆ ಎಂದು ಕುಮಾರಣ್ಣ ಜನರ ಮೇಲೆಯೇ ಆಪಾದನೆ ಹೊರಿಸುತ್ತಿದ್ದಾರೆ. ಹಾಗೆನೋಡಿದರೆ ತಮ್ಮ ಕ್ಯೆಪಾಸಿಟಿ ಮೂವತ್ತು ಸೀಟು; ಅದು ಹೇಗೋ ಬಿಜೆಪಿಯ ಜೊತೆ ಒಳ ವ್ಯವಹಾರ ನಡೆಸಿ ಮುವ್ವತ್ತೆಂಟು ಸೀಟು ಬಂದವು. ಇನ್ನು ಎಡೂರಪ್ಪನ ಸೀಟು ನೂರ ನಾಕು, ಏಕೆಂದರೆ ಸಿದ್ದು ವೀರಶೈವ ಮತ್ತು ಲಿಂಗಾಯಿತ ಜೇನುಹುಟ್ಟಿಗೆ ಕಲ್ಲು ಬೀರಿ ಕಡಿಸಿಕೊಂಡಿದ್ದಕ್ಕೆ. ಇಂತಿರುವಾಗ ಕುಮಾರಣ್ಣನಿಗ್ಹೇಗೆ ಸರಳ ಬಹುಮತ ಸಾಧ್ಯ. ಅಂತೂ ಕುಮಾರಣ್ಣ ಕೈಲಾಗದಕ್ಕೆ ಕಾಂಗೈನೇ ದೂರುತ್ತಿದ್ದಾರಂತಲ್ಲಾ… ಥೂತ್ತೇರಿ!

******

ಕುಮಾರಣ್ಣನವರು ಸರಳ ಬಹುಮತ ಬಂದಿದ್ದರೆ ಒಳ್ಳೆ ಕೆಲಸ ಮಾಡುತ್ತಿದ್ದೆ ಎಂದರೆ ಏನರ್ಥ. ಈ ಕಾಂಗೈಗಳು ನನ್ನನ್ನು ಒಳ್ಳೆ ಕೆಲಸ ಮಾಡಲು ಬಿಡುತ್ತಿಲ್ಲ ಎಂಬರ್ಥ ತಾನೆ. ನಾವು ಯಾವರೀತಿ ಇವರಿಗೆ ಅಡ್ಡಿಯಾಗಿದ್ದೇವೆ ಎಂದು ವಿವರಿಸಬೇಕೆಂದು ಕಾಂಗೈ ಬುದ್ದಿಜೀವಿಗಳು ತಮ್ಮ ಅನಿಸಿಕೆಯನ್ನು ಬಾಯಿಬಿಡದೆ ಮುಲುಕುತ್ತಿರುವಾಗಲೇ ಅತ್ತ ದೇವೇಗೌಡರು ನನ್ನ ಜೆಡಿಎಸ್ ಪಾರ್ಟಿಯಿಂದ ಮುಸ್ಲಿಮರು ಕಾಲ್ತೆಗೆಯಲು ಕಾಂಗ್ರೆಸ್ಸಿನವರೇ ಕಾರಣ, ಯಾಕೆಂದರೆ ಕಳೆದ ಚುನಾವಣೆಯಲ್ಲಿ ನಮ್ಮನ್ನ ಬಿಜೆಪಿಯ ಬಿ ಟೀಮ್ ಎಂದು ಕರೆದ ಕಾರಣವಾಗಿ ಮುಸ್ಲಿಮರು ನಮ್ಮಿಂದ ದೂರ ಹೋದರು ಎಂದು ಕಾಂಗೈನೇ ದೂರಿದರಲ್ಲಾ. ಕಾಂಗ್ರೆಸ್‍ನವರು ಹಾಗಂದಿದ್ದು ನಿಜ, ಆದರೆ ಜೆಡಿಎಸ್‍ನವರ ನಡವಳಿಕೆಯೇ ಹಾಗಿತ್ತು. ಚಾಮುಂಡೇಶ್ವರಿ ಚುನಾವಣೆಯಲ್ಲಿ ಗೌಡರ ಪಾರ್ಟಿ ಬಿ ಟೀಮಿನ ಕೆಲಸ ಮಾಡಿದ್ದಲ್ಲದೆ ಕರ್ನಾಟಕದ ಉಳಿದ ಕಡೆಯೂ ಹಾಗೇ ಮಾಡಿತು. ಜೊತೆಗೆ, ದೇವೇಗೌಡರು ಮೋದಿಯನ್ನು ಅಪ್ಪಿತಪ್ಪಿ ಟೀಕಿಸದೆ ಕಾಂಗ್ರೆಸ್‍ನ್ನೇ ಗುರಿಯಾಗಿರಿಸಿಕೊಂಡಿದ್ದಕ್ಕೆ ಸಾಕ್ಷಿ ಸಿಕ್ಕ ಕಾರಣಕ್ಕೆ ಜೆಡಿಎಸ್‍ಗೆ ಬಿ ಪಟ್ಟ ಕೊಟ್ಟರು. ಅದೇನಾದರಾಗಲಿ, ಇದೆಲ್ಲಾ ಆದಮೇಲೆ ಅಪ್ಪ ಮಗ ಕಾಂಗ್ರೆಸ್ಸನ್ನೇ ಟಾರ್ಗೆಟ್ ಮಾಡಿಕೊಂಡಿರುವುದರ ಮರ್ಮವೇನೆಂದು ಕಾಂಗೈಗಳು ಕಂಗಾಲಾಗಿವೆಯಂತಲ್ಲಾ, ಥೂತ್ತೇರಿ!!

******

ರೆಸಾರ್ಟ್ ರಾಜಕಾರಣಕ್ಕೂ ಕರ್ನಾಟಕಕ್ಕೂ ಸಂಬಂಧವೇ ಇರಲಿಲ್ಲ. ರಾಮಕೃಷ್ಣ ಹೆಗಡೆ ಕಾಲದಲ್ಲಿ ನಾದೆಂಡ್ಳ ಬಾಸ್ಕರರಾವ್ ಬಂಡಾಯದಿಂದ ಬೆಚ್ಚಿದ ಎನ್.ಟಿ.ಆರ್ ಆಂದ್ರದ ಶಾಸಕರನ್ನ ಹಿಡಿದುತಂದು ಬೆಂಗಳೂರು ನಂದಿಬೆಟ್ಟದಲ್ಲಿ ದನಗಳನ್ನು ಕೂಡಿಹಾಕಿದಂತೆ ಕೂಡಿ, ಕಡೆಗೆ ಹೊಡೆದುಕೊಂಡು ಹೋದರು. ಈ ಮೂರು ದಶಕದಲ್ಲಿ ಅಂತಹ ಘಟನೆಗಳು ಹಲವು ಜರುಗಿವೆ. ಆದರೀಗ ಜೆಡಿಎಸ್ ಸರಕಾರ ರಚಿಸಲು ಸಿದ್ದು 76 ಕುರಿಗಳನ್ನ ಅಟ್ಟಿಕೊಂಡು ರೆಸಾರ್ಟ್ ಕಡೆ ಹೋಗಿದ್ದು ಶಾನೆ ನಗೆಪಾಟಲಿಗೆ ಗುರಿಯಾಗಿದೆಯಂತಲ್ಲಾ. ಏಕೆಂದರೆ ನಿಮ್ಮಪ್ಪನಾಣೆ ಮುಖ್ಯಮಂತ್ರಿಯಾಗಲ್ಲ ಎಂದು ಕುಮಾರಣ್ಣನಿಗೆ ಹೇಳುತ್ತಿದ್ದ ಸಿದ್ದು ತನ್ನ ಜಾಯಮಾನಕ್ಕೆ ಒಗ್ಗದ ಈ ವ್ಯವಹಾರಕ್ಕೆ ತೊಡಗಿದ್ದು ಅಚ್ಚರಿ ಮೂಡಿಸಿದೆಯಲ್ಲಾ. ಸಿದ್ದು ಅನುಮಾನದ ಪ್ರಕಾರವನ್ನು ವಿಶ್ಲೇಷಿಸುವುದಾದರೆ ಕಳೆದ ಚುನಾವಣೆಯಲ್ಲಿ ಓಟಿಗೆರಡು ಸಾವಿರದಂತೆ ಪೀಕಿ ಗೆದ್ದು ಬಂದಿರುವ ಯಮ್ಮೆಲ್ಲೆಗಳು ಗೊಡ್ಡೆಮ್ಮೆಗಳಂತೆ ಬದುಕಲು ಸಾಧ್ಯವಿಲ್ಲ. ಮಾಡಿದ ಖರ್ಚನ್ನು ಮರಳಿ ಪಡೆದು ಎಷ್ಟು ಕೋಟಿಯನ್ನಾದರೂ ಕೊಡಲು ಮೋದಿ ಟೀಮು ಮರ್ಯಾದೆಗೆಟ್ಟು ಕೂತಿವೆ. ಆಕಡೆ ನೋಡದೆ ಇರಲು ನಮ್ಮವರಿಂದ ಸಾಧ್ಯವಿಲ್ಲ ಎಂದು ರೆಸಾರ್ಟ್ ಕಡೆ ಕುರಿಮಂದೆ ಹೊರಡಿಸಿದರಲ್ಲಾ, ಥೂತ್ತೇರಿ!!!

*******

ಧಾರವಾಡದ ಸಾಹಿತ್ಯ ಸಂಭ್ರಮವಂತೂ ಹೇಳತೀರದಾಗಿದೆಯಂತಲ್ಲಾ. ಈ ಹಿಂದೆ ಗಿರಡ್ಡಿ ಗೋವಿಂದರಾಜರು ಬಲಪಂಥೀಯರಿಗೂ ಆಹ್ವಾನ ಕೊಡಲಾಗಿ ಅವರು ಈ ಸಮ್ಮೇಳನ ನಮ್ಮದೇ ಎಂಬಂತೆ ನಡೆದುಕೊಳ್ಳುತ್ತಿದ್ದಾರಂತಲ್ಲಾ. ಆ ನಂತರ ಎಡಪಂಥೀಯರೂ ಈ ಸಂಭ್ರಮದೊಳಗೆ ಕಾಣಿಸಿಕೊಂಡು ಗುಟುರು ಹಾಕಲಾಗಿ ಹಲವು ಜನರು ಎಡಬಲ ಎಂದು ಚರ್ಚಿಸುತ್ತಿರುವಾಗಲೇ ಈ ಇಬ್ಬರು ಜೊತೆಗೂ ಸ್ನೇಹದಿಂದಿದ್ದ ಕೆಲವರು ನಾವಂತೂ ಎಡವೂ ಅಲ್ಲ, ಬಲವೂ ಅಲ್ಲ ನಮ್ಮದೇನಿದ್ದರೂ ನಡು ಎಂದಾಗ ಕಂಬಾರ `ನಾನೂ ಕೂಡ ನಡು ಮಧ್ಯದವನು. ನಡು ಎಂದರೆ ನನಗೆ ತುಂಬಾ ಇಷ್ಟ. ಆದರೂ, ಬಲದ ಕಡೆಗಿನ ಒಲವು ತುಸು ಜಾಸ್ತಿ ಇದ್ದುದರಿಂದ ಪೇಜಾವರನ ಕಾಲಿಗೆ ಡೈ ಹೊಡೆದೆ ಇದನ್ನು ಸರಿದೂಗಿಸಲೋಸ್ಕರ ಈಚೆಗೆ ಕೋಡೀಮಠದ ಕಾಲಿಗೆ ಬಿದ್ದೆ’ ಎಂದಿಲ್ಲವಂತಲ್ಲಾ, ಥೂತ್ತೇರಿ!!!!

******

ಯಾವತ್ತಿಗೂ ಹಿಂದೂ ಧರ್ಮದ ಮೇಧಾವಿಗಳ ಕಣ್ಣು ತೆರೆಸಿದ್ದು ಈ ಶ್ರೇಣೀಕೃತ ಸಮಾಜದ ಕಟ್ಟಕಡೆಯವರಂತಲ್ಲಾ. ಹಾಗೆಯೇ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಿದ್ದ ಜನ ಬೆಚ್ಚಿ ಬೀಳುವಂತೆ ಉಚಲ್ಯಾ ಕ್ಯಾತಿಯ ಲಕ್ಷಣ ಗಾಯಕವಾಡ ಮಾತನಾಡಿದರಂತಲ್ಲಾ. ಅದೇನಪ್ಪ ಎಂದರೆ, ಭೂದೇವಿ ಉಳಿಸಲು ವಿಷ್ಣು ವರಹ ಅವತಾರವೆತ್ತಿದ್ದ. ಅಂದರೆ ವಿಷ್ಣು ಹಂದಿಯಾಗಿದ್ದ. ಆದ್ದರಿಂದ ಹಂದಿ ಪೂಜನೀಯ ಪ್ರಾಣಿ. ಗೋವಿನಂತೆ ಇದೂ ಕೂಡ ಹಿಂದೂ ಧರ್ಮದ ಗೌರವಕ್ಕೆ ಪಾತ್ರವಾಗಬೇಕು. ಆದರೆ ನೀವು ಗೋಮೂತ್ರದಂತೆಯೇ ಹಂದಿ ಮೂತ್ರವನ್ನು ಪರಿಗಣಿಸಬೇಕು. ಅಂದರೆ ಪೂಜಾಸ್ಥಳದಲ್ಲಿ ಪ್ರೋಕ್ಷಣೆಗೆ ಬಳಸಬೇಕು, ತೀರ್ಥ ರೂಪವಾಗಿ ಸೇವಿಸಬೇಕು ಎಂದಾಗ ಬಲಪಂಥೀಯಗಳು ಮಧ್ಯಾಹ್ನ ಭೋಜನ ಮಾಡುವುದೇ ಕಷ್ಟವಾಯ್ತಂತಲ್ಲಾ, ಥೂತ್ತೇರಿ….!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...