Homeಅಂಕಣಗಳುಸರಳ ಬಹುಮತ ಸಿಕ್ಕಿದ್ದರೆ ಸರಿಯಾಗಿ ಮಾಡುತ್ತಿದ್ದೆ!

ಸರಳ ಬಹುಮತ ಸಿಕ್ಕಿದ್ದರೆ ಸರಿಯಾಗಿ ಮಾಡುತ್ತಿದ್ದೆ!

- Advertisement -
- Advertisement -

ಆತ ಅವಳ ಕಿವಿಯಲ್ಲಿ ಉಸುರಿದ! ‘ನಾನು ಒಂದು ಹತ್ತು ವರ್ಷ ಚಿಕ್ಕವನಾಗಿದ್ದಿದ್ದ್ರೆ, ನಿನ್ನನ್ನು ಇನ್ನೂ ಸುಖವಾಗಿಡುತ್ತಿದೆ’ ಎಂದು. ಅದಕ್ಕವಳು ಈಗಲೂ ಏನೂ ಆಗಿಲ್ಲ, ಹತ್ತು ವರ್ಷ ಚಿಕ್ಕವನೆಂದೇ ನಿನ್ನ ಪೌರುಷ ತೋರಬಹುದೆಂದಳು.
ಇಂತಹದೊಂದು ಮಾತು ನಮ್ಮ ಗ್ರಾಮೀಣ ಭಾಗದಲ್ಲಿ ಆಗಾಗ್ಗೆ ಹೊರಬರುತ್ತದೆ. ಕಾರಣ, ತಮ್ಮತಮ್ಮ ಅಸಮರ್ಥತೆಗಳನ್ನು ಯಾವು ಯಾವುದೋ ಕಾರಣಗಳ ಮೇಲೆ ಹಾಕಿ ಬಂಡವಾಳವನ್ನ ಕೊಚ್ಚಿಕೊಳ್ಳುವ ಜನ ಈಗಲೂ ಇದ್ದಾರೆ. ಅದಕ್ಕೆ ತಕ್ಕ ಉದಾಹರಣೆ ಎಂದರೆ, ನಮ್ಮ ಮುಖ್ಯಮಂತ್ರಿಯಂತಲ್ಲಾ. ಜೆಡಿಎಸ್‍ಗೆ ಹೆಚ್ಚಿನ ಬಹುಮತವಿದ್ದರೆ ಇನ್ನೂ ಹೆಚ್ಚಿನದನ್ನು ಕಡಿದು ಕಟ್ಟೆ ಹಾಕುತ್ತಿದ್ದೆ ಎಂದು ಕುಮಾರಣ್ಣ ಜನರ ಮೇಲೆಯೇ ಆಪಾದನೆ ಹೊರಿಸುತ್ತಿದ್ದಾರೆ. ಹಾಗೆನೋಡಿದರೆ ತಮ್ಮ ಕ್ಯೆಪಾಸಿಟಿ ಮೂವತ್ತು ಸೀಟು; ಅದು ಹೇಗೋ ಬಿಜೆಪಿಯ ಜೊತೆ ಒಳ ವ್ಯವಹಾರ ನಡೆಸಿ ಮುವ್ವತ್ತೆಂಟು ಸೀಟು ಬಂದವು. ಇನ್ನು ಎಡೂರಪ್ಪನ ಸೀಟು ನೂರ ನಾಕು, ಏಕೆಂದರೆ ಸಿದ್ದು ವೀರಶೈವ ಮತ್ತು ಲಿಂಗಾಯಿತ ಜೇನುಹುಟ್ಟಿಗೆ ಕಲ್ಲು ಬೀರಿ ಕಡಿಸಿಕೊಂಡಿದ್ದಕ್ಕೆ. ಇಂತಿರುವಾಗ ಕುಮಾರಣ್ಣನಿಗ್ಹೇಗೆ ಸರಳ ಬಹುಮತ ಸಾಧ್ಯ. ಅಂತೂ ಕುಮಾರಣ್ಣ ಕೈಲಾಗದಕ್ಕೆ ಕಾಂಗೈನೇ ದೂರುತ್ತಿದ್ದಾರಂತಲ್ಲಾ… ಥೂತ್ತೇರಿ!

******

ಕುಮಾರಣ್ಣನವರು ಸರಳ ಬಹುಮತ ಬಂದಿದ್ದರೆ ಒಳ್ಳೆ ಕೆಲಸ ಮಾಡುತ್ತಿದ್ದೆ ಎಂದರೆ ಏನರ್ಥ. ಈ ಕಾಂಗೈಗಳು ನನ್ನನ್ನು ಒಳ್ಳೆ ಕೆಲಸ ಮಾಡಲು ಬಿಡುತ್ತಿಲ್ಲ ಎಂಬರ್ಥ ತಾನೆ. ನಾವು ಯಾವರೀತಿ ಇವರಿಗೆ ಅಡ್ಡಿಯಾಗಿದ್ದೇವೆ ಎಂದು ವಿವರಿಸಬೇಕೆಂದು ಕಾಂಗೈ ಬುದ್ದಿಜೀವಿಗಳು ತಮ್ಮ ಅನಿಸಿಕೆಯನ್ನು ಬಾಯಿಬಿಡದೆ ಮುಲುಕುತ್ತಿರುವಾಗಲೇ ಅತ್ತ ದೇವೇಗೌಡರು ನನ್ನ ಜೆಡಿಎಸ್ ಪಾರ್ಟಿಯಿಂದ ಮುಸ್ಲಿಮರು ಕಾಲ್ತೆಗೆಯಲು ಕಾಂಗ್ರೆಸ್ಸಿನವರೇ ಕಾರಣ, ಯಾಕೆಂದರೆ ಕಳೆದ ಚುನಾವಣೆಯಲ್ಲಿ ನಮ್ಮನ್ನ ಬಿಜೆಪಿಯ ಬಿ ಟೀಮ್ ಎಂದು ಕರೆದ ಕಾರಣವಾಗಿ ಮುಸ್ಲಿಮರು ನಮ್ಮಿಂದ ದೂರ ಹೋದರು ಎಂದು ಕಾಂಗೈನೇ ದೂರಿದರಲ್ಲಾ. ಕಾಂಗ್ರೆಸ್‍ನವರು ಹಾಗಂದಿದ್ದು ನಿಜ, ಆದರೆ ಜೆಡಿಎಸ್‍ನವರ ನಡವಳಿಕೆಯೇ ಹಾಗಿತ್ತು. ಚಾಮುಂಡೇಶ್ವರಿ ಚುನಾವಣೆಯಲ್ಲಿ ಗೌಡರ ಪಾರ್ಟಿ ಬಿ ಟೀಮಿನ ಕೆಲಸ ಮಾಡಿದ್ದಲ್ಲದೆ ಕರ್ನಾಟಕದ ಉಳಿದ ಕಡೆಯೂ ಹಾಗೇ ಮಾಡಿತು. ಜೊತೆಗೆ, ದೇವೇಗೌಡರು ಮೋದಿಯನ್ನು ಅಪ್ಪಿತಪ್ಪಿ ಟೀಕಿಸದೆ ಕಾಂಗ್ರೆಸ್‍ನ್ನೇ ಗುರಿಯಾಗಿರಿಸಿಕೊಂಡಿದ್ದಕ್ಕೆ ಸಾಕ್ಷಿ ಸಿಕ್ಕ ಕಾರಣಕ್ಕೆ ಜೆಡಿಎಸ್‍ಗೆ ಬಿ ಪಟ್ಟ ಕೊಟ್ಟರು. ಅದೇನಾದರಾಗಲಿ, ಇದೆಲ್ಲಾ ಆದಮೇಲೆ ಅಪ್ಪ ಮಗ ಕಾಂಗ್ರೆಸ್ಸನ್ನೇ ಟಾರ್ಗೆಟ್ ಮಾಡಿಕೊಂಡಿರುವುದರ ಮರ್ಮವೇನೆಂದು ಕಾಂಗೈಗಳು ಕಂಗಾಲಾಗಿವೆಯಂತಲ್ಲಾ, ಥೂತ್ತೇರಿ!!

******

ರೆಸಾರ್ಟ್ ರಾಜಕಾರಣಕ್ಕೂ ಕರ್ನಾಟಕಕ್ಕೂ ಸಂಬಂಧವೇ ಇರಲಿಲ್ಲ. ರಾಮಕೃಷ್ಣ ಹೆಗಡೆ ಕಾಲದಲ್ಲಿ ನಾದೆಂಡ್ಳ ಬಾಸ್ಕರರಾವ್ ಬಂಡಾಯದಿಂದ ಬೆಚ್ಚಿದ ಎನ್.ಟಿ.ಆರ್ ಆಂದ್ರದ ಶಾಸಕರನ್ನ ಹಿಡಿದುತಂದು ಬೆಂಗಳೂರು ನಂದಿಬೆಟ್ಟದಲ್ಲಿ ದನಗಳನ್ನು ಕೂಡಿಹಾಕಿದಂತೆ ಕೂಡಿ, ಕಡೆಗೆ ಹೊಡೆದುಕೊಂಡು ಹೋದರು. ಈ ಮೂರು ದಶಕದಲ್ಲಿ ಅಂತಹ ಘಟನೆಗಳು ಹಲವು ಜರುಗಿವೆ. ಆದರೀಗ ಜೆಡಿಎಸ್ ಸರಕಾರ ರಚಿಸಲು ಸಿದ್ದು 76 ಕುರಿಗಳನ್ನ ಅಟ್ಟಿಕೊಂಡು ರೆಸಾರ್ಟ್ ಕಡೆ ಹೋಗಿದ್ದು ಶಾನೆ ನಗೆಪಾಟಲಿಗೆ ಗುರಿಯಾಗಿದೆಯಂತಲ್ಲಾ. ಏಕೆಂದರೆ ನಿಮ್ಮಪ್ಪನಾಣೆ ಮುಖ್ಯಮಂತ್ರಿಯಾಗಲ್ಲ ಎಂದು ಕುಮಾರಣ್ಣನಿಗೆ ಹೇಳುತ್ತಿದ್ದ ಸಿದ್ದು ತನ್ನ ಜಾಯಮಾನಕ್ಕೆ ಒಗ್ಗದ ಈ ವ್ಯವಹಾರಕ್ಕೆ ತೊಡಗಿದ್ದು ಅಚ್ಚರಿ ಮೂಡಿಸಿದೆಯಲ್ಲಾ. ಸಿದ್ದು ಅನುಮಾನದ ಪ್ರಕಾರವನ್ನು ವಿಶ್ಲೇಷಿಸುವುದಾದರೆ ಕಳೆದ ಚುನಾವಣೆಯಲ್ಲಿ ಓಟಿಗೆರಡು ಸಾವಿರದಂತೆ ಪೀಕಿ ಗೆದ್ದು ಬಂದಿರುವ ಯಮ್ಮೆಲ್ಲೆಗಳು ಗೊಡ್ಡೆಮ್ಮೆಗಳಂತೆ ಬದುಕಲು ಸಾಧ್ಯವಿಲ್ಲ. ಮಾಡಿದ ಖರ್ಚನ್ನು ಮರಳಿ ಪಡೆದು ಎಷ್ಟು ಕೋಟಿಯನ್ನಾದರೂ ಕೊಡಲು ಮೋದಿ ಟೀಮು ಮರ್ಯಾದೆಗೆಟ್ಟು ಕೂತಿವೆ. ಆಕಡೆ ನೋಡದೆ ಇರಲು ನಮ್ಮವರಿಂದ ಸಾಧ್ಯವಿಲ್ಲ ಎಂದು ರೆಸಾರ್ಟ್ ಕಡೆ ಕುರಿಮಂದೆ ಹೊರಡಿಸಿದರಲ್ಲಾ, ಥೂತ್ತೇರಿ!!!

*******

ಧಾರವಾಡದ ಸಾಹಿತ್ಯ ಸಂಭ್ರಮವಂತೂ ಹೇಳತೀರದಾಗಿದೆಯಂತಲ್ಲಾ. ಈ ಹಿಂದೆ ಗಿರಡ್ಡಿ ಗೋವಿಂದರಾಜರು ಬಲಪಂಥೀಯರಿಗೂ ಆಹ್ವಾನ ಕೊಡಲಾಗಿ ಅವರು ಈ ಸಮ್ಮೇಳನ ನಮ್ಮದೇ ಎಂಬಂತೆ ನಡೆದುಕೊಳ್ಳುತ್ತಿದ್ದಾರಂತಲ್ಲಾ. ಆ ನಂತರ ಎಡಪಂಥೀಯರೂ ಈ ಸಂಭ್ರಮದೊಳಗೆ ಕಾಣಿಸಿಕೊಂಡು ಗುಟುರು ಹಾಕಲಾಗಿ ಹಲವು ಜನರು ಎಡಬಲ ಎಂದು ಚರ್ಚಿಸುತ್ತಿರುವಾಗಲೇ ಈ ಇಬ್ಬರು ಜೊತೆಗೂ ಸ್ನೇಹದಿಂದಿದ್ದ ಕೆಲವರು ನಾವಂತೂ ಎಡವೂ ಅಲ್ಲ, ಬಲವೂ ಅಲ್ಲ ನಮ್ಮದೇನಿದ್ದರೂ ನಡು ಎಂದಾಗ ಕಂಬಾರ `ನಾನೂ ಕೂಡ ನಡು ಮಧ್ಯದವನು. ನಡು ಎಂದರೆ ನನಗೆ ತುಂಬಾ ಇಷ್ಟ. ಆದರೂ, ಬಲದ ಕಡೆಗಿನ ಒಲವು ತುಸು ಜಾಸ್ತಿ ಇದ್ದುದರಿಂದ ಪೇಜಾವರನ ಕಾಲಿಗೆ ಡೈ ಹೊಡೆದೆ ಇದನ್ನು ಸರಿದೂಗಿಸಲೋಸ್ಕರ ಈಚೆಗೆ ಕೋಡೀಮಠದ ಕಾಲಿಗೆ ಬಿದ್ದೆ’ ಎಂದಿಲ್ಲವಂತಲ್ಲಾ, ಥೂತ್ತೇರಿ!!!!

******

ಯಾವತ್ತಿಗೂ ಹಿಂದೂ ಧರ್ಮದ ಮೇಧಾವಿಗಳ ಕಣ್ಣು ತೆರೆಸಿದ್ದು ಈ ಶ್ರೇಣೀಕೃತ ಸಮಾಜದ ಕಟ್ಟಕಡೆಯವರಂತಲ್ಲಾ. ಹಾಗೆಯೇ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಿದ್ದ ಜನ ಬೆಚ್ಚಿ ಬೀಳುವಂತೆ ಉಚಲ್ಯಾ ಕ್ಯಾತಿಯ ಲಕ್ಷಣ ಗಾಯಕವಾಡ ಮಾತನಾಡಿದರಂತಲ್ಲಾ. ಅದೇನಪ್ಪ ಎಂದರೆ, ಭೂದೇವಿ ಉಳಿಸಲು ವಿಷ್ಣು ವರಹ ಅವತಾರವೆತ್ತಿದ್ದ. ಅಂದರೆ ವಿಷ್ಣು ಹಂದಿಯಾಗಿದ್ದ. ಆದ್ದರಿಂದ ಹಂದಿ ಪೂಜನೀಯ ಪ್ರಾಣಿ. ಗೋವಿನಂತೆ ಇದೂ ಕೂಡ ಹಿಂದೂ ಧರ್ಮದ ಗೌರವಕ್ಕೆ ಪಾತ್ರವಾಗಬೇಕು. ಆದರೆ ನೀವು ಗೋಮೂತ್ರದಂತೆಯೇ ಹಂದಿ ಮೂತ್ರವನ್ನು ಪರಿಗಣಿಸಬೇಕು. ಅಂದರೆ ಪೂಜಾಸ್ಥಳದಲ್ಲಿ ಪ್ರೋಕ್ಷಣೆಗೆ ಬಳಸಬೇಕು, ತೀರ್ಥ ರೂಪವಾಗಿ ಸೇವಿಸಬೇಕು ಎಂದಾಗ ಬಲಪಂಥೀಯಗಳು ಮಧ್ಯಾಹ್ನ ಭೋಜನ ಮಾಡುವುದೇ ಕಷ್ಟವಾಯ್ತಂತಲ್ಲಾ, ಥೂತ್ತೇರಿ….!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೀರಪ್ಪನ್ ಹೇಳಿದ ಕಥೆಗೆ 30 ವರ್ಷಗಳ ಬಳಿಕ ಕ್ಲೈಮ್ಯಾಕ್ಸ್ : ಸನ್ ಟಿವಿ ವಿರುದ್ಧ ಕಾನೂನು ಸಮರದಲ್ಲಿ ಗೆದ್ದ ನಟಿ ಸುಕನ್ಯಾ​

ತೊಂಬತ್ತರ ದಶಕದಲ್ಲಿ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖ ನಟರೊಂದಿಗೆ ನಟಿಸಿ, ಅಪಾರ ಜನಪ್ರಿಯತೆ ಗಳಿಸಿದ್ದ ನಟಿ ಸುಕನ್ಯಾ ರಮೇಶ್, ಪ್ರಸ್ತುತ ಕೆಲವು ಅಪರೂಪದ ಪಾತ್ರಗಳನ್ನು ಹೊರತುಪಡಿಸಿದರೆ ಚಿತ್ರರಂಗದಲ್ಲಿ ಅಷ್ಟಾಗಿ ಸಕ್ರಿಯರಾಗಿಲ್ಲ. ಈ ನಡುವೆ 2024ರಲ್ಲಿ...

“ರಾಜೀನಾಮೆ ನೀಡಿ, ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ”: ಟಿಎಂಸಿ ಬಂಡುಕೋರರಿಗೆ ಮಹುವಾ ಮೊಯಿತ್ರಾ ನೇರ ಸವಾಲು

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗೆ ತೀವ್ರ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಬೆಂಬಲ ನೀಡಲು ಮುಂದಾಗಿರುವ ಸ್ವಪಕ್ಷದ ಬಂಡಾಯ ಸಂಸದರ ವಿರುದ್ಧ ಟಿಎಂಸಿ ಸಂಸದೆ...

ಪಶ್ಚಿಮ ಬಂಗಾಳದ ಸೋಲಿನ ಬಳಿಕ ‘ಇಂಡಿಯಾದ ಆಸರೆ’ ಬಯಸಿದ ಮಮತಾ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಮತಾ ಬ್ಯಾನರ್ಜಿ ಅವರು ಇದ್ದಕ್ಕಿದ್ದಂತೆ ‘ಇಂಡಿಯಾ’ (INDIA) ಒಕ್ಕೂಟ ಮತ್ತು ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡುತ್ತಿರುವುದು ಏಕೆ? ದೀರ್ಘಕಾಲದವರೆಗೆ...

ಪಶ್ಚಿಮ ಬಂಗಾಳ| ಮತದಾರರ ಪಟ್ಟಿಯಿಂದ ಡಿಲೀಟ್‌ ಆದವರಿಗೆ ಪಡಿತರ ಪ್ರಯೋಜನಗಳಿಲ್ಲ

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯಿಂದಾಗಿ ಪಶ್ಚಿಮ ಬಂಗಾಳದ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದವರಿಗೆ ಈಗ ಎರಡು ಹೊಡೆತ ಎದುರಾಗಿದೆ. ರಾಜ್ಯ ಸರ್ಕಾರವು ಈಗ ಅವರ ಪಡಿತರ ಚೀಟಿಗಳನ್ನು ಸಹ ನಿಷ್ಕ್ರಿಯಗೊಳಿಸಲು...

ಇಂಡಿಯಾ ಮೈತ್ರಿಕೂಟದ ಸಭೆ: ಎಸ್‌ಐಆರ್, ಬೆಲೆ ಏರಿಕೆ, ನಿರುದ್ಯೋಗದ ಕುರಿತು ಖರ್ಗೆ ಕಳವಳ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ವಿದೇಶಾಂಗ ನೀತಿ ರಂಗಗಳಲ್ಲಿ ಮೋದಿ ಸರ್ಕಾರದ ವೈಫಲ್ಯಗಳನ್ನು ಎದುರಿಸಲು ತನ್ನ ಒಗ್ಗಟ್ಟನ್ನು ಬಲಪಡಿಸಿಕೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ (ಜೂ.8) ಇಂಡಿಯಾ ಮೈತ್ರಿಕೂಟಕ್ಕೆ ಕರೆ...

ಟೆಹ್ರಾನ್ ಮೇಲಿನ ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಕ್ಷಿಪಣಿ ಹಾರಿಸಿದ ಇರಾನ್

ಟೆಹ್ರಾನ್, ತಬ್ರಿಜ್ ಮತ್ತು ಇಸ್ಫಹಾನ್‌ ಮೇಲಿನ ದಾಲಿಗಳಿಗೆ ಪ್ರತೀಕಾರವಾಗಿ, ಇರಾನ್ ಸೇನೆಯು ಇಸ್ರೇಲ್‌ ಮೇಲೆ ಎರಡನೇ ತರಂಗದ ಕ್ಷಿಪಣಿಗಳನ್ನು ಹಾರಿಸಿದೆ. ದೇಶಾದ್ಯಂತ ಸೈರನ್‌ಗಳು ಮೊಳಗುತ್ತಿವೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ ಎಂದು ಅಂತರಾಷ್ಟ್ರೀಯ...

ಭಾರತದಲ್ಲಿ ಬೆಂಕಿ ದುರಂತ ‘ದಿನವೊಂದಕ್ಕೆ ಬಲಿಯಾಗುತ್ತಿವೆ 16 ಜೀವಗಳು’ NCRB ವರದಿ

ಇತ್ತೀಚೆಗೆ ದೆಹಲಿಯ ಮಾಳವೀಯ ನಗರದ ಹೋಟೆಲ್‌ ಒಂದರಲ್ಲಿ ನಡೆದ ಭೀಕರ ಬೆಂಕಿ ದುರಂತ (ಇದರಲ್ಲಿ 22 ಜನರು ಸಜೀವ ದಹನವಾಗಿದ್ದರು) ಇಡೀ ದೇಶವನ್ನೇ ನಡುಗಿಸಿದೆ. ಈ ದುರಂತದ ಬೆನ್ನಲ್ಲೇ ಕರ್ನಾಟಕದಲ್ಲೂ ವಾಣಿಜ್ಯ ಮತ್ತು...

ಈದ್ ಹಬ್ಬದ ವೇಳೆ ಮುಸ್ಲೀಮರನ್ನು ಗುರಿಯಾಗಿಸಿ 46 ದ್ವೇಷ ಅಪರಾಧಗಳು, ಮೂವರ ಹತ್ಯೆ: APCR ಆತಂಕಕಾರಿ ವರದಿ

ಇತ್ತೀಚಿನ ಬಕ್ರೀದ್ (ಈದ್ ಉಲ್-ಅಧಾ) ಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶದ ವಿವಿಧೆಡೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದ ಕೋಮು ಕಿರುಕುಳ, ದ್ವೇಷ ಭಾಷಣ ಹಾಗೂ ಹಿಂಸಾಚಾರದ ಘಟನೆಗಳ ಕುರಿತು 'ನಾಗರಿಕ ಹಕ್ಕುಗಳ ರಕ್ಷಣಾ ಸಂಘ'...

ಗ್ರೇಟ್ ನಿಕೋಬಾರ್ : ಕಾರ್ಪೊರೇಟ್ ಹಿತಾಸಕ್ತಿಗೆ ಬಲಿಯಾಗುತ್ತಿರುವ ಪರಿಸರ, ಆದಿವಾಸಿಗಳ ಅಸ್ತಿತ್ವ

ಬಂಗಾಳಕೊಲ್ಲಿಯಲ್ಲಿರುವ ಭಾರತದ ದಕ್ಷಿಣ ತುದಿಯ ದ್ವೀಪದ ಸಮಗ್ರ ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಬರೋಬ್ಬರಿ 72 ಸಾವಿರದಿಂದ 81 ಸಾವಿರ ಕೋಟಿ ರೂಪಾಯಿ ವೆಚ್ಚದ ’ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ’ಯನ್ನು ರೂಪಿಸಿದೆ.ಈ...

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...