Homeಅಂಕಣಗಳುಸರಳ ಬಹುಮತ ಸಿಕ್ಕಿದ್ದರೆ ಸರಿಯಾಗಿ ಮಾಡುತ್ತಿದ್ದೆ!

ಸರಳ ಬಹುಮತ ಸಿಕ್ಕಿದ್ದರೆ ಸರಿಯಾಗಿ ಮಾಡುತ್ತಿದ್ದೆ!

- Advertisement -
- Advertisement -

ಆತ ಅವಳ ಕಿವಿಯಲ್ಲಿ ಉಸುರಿದ! ‘ನಾನು ಒಂದು ಹತ್ತು ವರ್ಷ ಚಿಕ್ಕವನಾಗಿದ್ದಿದ್ದ್ರೆ, ನಿನ್ನನ್ನು ಇನ್ನೂ ಸುಖವಾಗಿಡುತ್ತಿದೆ’ ಎಂದು. ಅದಕ್ಕವಳು ಈಗಲೂ ಏನೂ ಆಗಿಲ್ಲ, ಹತ್ತು ವರ್ಷ ಚಿಕ್ಕವನೆಂದೇ ನಿನ್ನ ಪೌರುಷ ತೋರಬಹುದೆಂದಳು.
ಇಂತಹದೊಂದು ಮಾತು ನಮ್ಮ ಗ್ರಾಮೀಣ ಭಾಗದಲ್ಲಿ ಆಗಾಗ್ಗೆ ಹೊರಬರುತ್ತದೆ. ಕಾರಣ, ತಮ್ಮತಮ್ಮ ಅಸಮರ್ಥತೆಗಳನ್ನು ಯಾವು ಯಾವುದೋ ಕಾರಣಗಳ ಮೇಲೆ ಹಾಕಿ ಬಂಡವಾಳವನ್ನ ಕೊಚ್ಚಿಕೊಳ್ಳುವ ಜನ ಈಗಲೂ ಇದ್ದಾರೆ. ಅದಕ್ಕೆ ತಕ್ಕ ಉದಾಹರಣೆ ಎಂದರೆ, ನಮ್ಮ ಮುಖ್ಯಮಂತ್ರಿಯಂತಲ್ಲಾ. ಜೆಡಿಎಸ್‍ಗೆ ಹೆಚ್ಚಿನ ಬಹುಮತವಿದ್ದರೆ ಇನ್ನೂ ಹೆಚ್ಚಿನದನ್ನು ಕಡಿದು ಕಟ್ಟೆ ಹಾಕುತ್ತಿದ್ದೆ ಎಂದು ಕುಮಾರಣ್ಣ ಜನರ ಮೇಲೆಯೇ ಆಪಾದನೆ ಹೊರಿಸುತ್ತಿದ್ದಾರೆ. ಹಾಗೆನೋಡಿದರೆ ತಮ್ಮ ಕ್ಯೆಪಾಸಿಟಿ ಮೂವತ್ತು ಸೀಟು; ಅದು ಹೇಗೋ ಬಿಜೆಪಿಯ ಜೊತೆ ಒಳ ವ್ಯವಹಾರ ನಡೆಸಿ ಮುವ್ವತ್ತೆಂಟು ಸೀಟು ಬಂದವು. ಇನ್ನು ಎಡೂರಪ್ಪನ ಸೀಟು ನೂರ ನಾಕು, ಏಕೆಂದರೆ ಸಿದ್ದು ವೀರಶೈವ ಮತ್ತು ಲಿಂಗಾಯಿತ ಜೇನುಹುಟ್ಟಿಗೆ ಕಲ್ಲು ಬೀರಿ ಕಡಿಸಿಕೊಂಡಿದ್ದಕ್ಕೆ. ಇಂತಿರುವಾಗ ಕುಮಾರಣ್ಣನಿಗ್ಹೇಗೆ ಸರಳ ಬಹುಮತ ಸಾಧ್ಯ. ಅಂತೂ ಕುಮಾರಣ್ಣ ಕೈಲಾಗದಕ್ಕೆ ಕಾಂಗೈನೇ ದೂರುತ್ತಿದ್ದಾರಂತಲ್ಲಾ… ಥೂತ್ತೇರಿ!

******

ಕುಮಾರಣ್ಣನವರು ಸರಳ ಬಹುಮತ ಬಂದಿದ್ದರೆ ಒಳ್ಳೆ ಕೆಲಸ ಮಾಡುತ್ತಿದ್ದೆ ಎಂದರೆ ಏನರ್ಥ. ಈ ಕಾಂಗೈಗಳು ನನ್ನನ್ನು ಒಳ್ಳೆ ಕೆಲಸ ಮಾಡಲು ಬಿಡುತ್ತಿಲ್ಲ ಎಂಬರ್ಥ ತಾನೆ. ನಾವು ಯಾವರೀತಿ ಇವರಿಗೆ ಅಡ್ಡಿಯಾಗಿದ್ದೇವೆ ಎಂದು ವಿವರಿಸಬೇಕೆಂದು ಕಾಂಗೈ ಬುದ್ದಿಜೀವಿಗಳು ತಮ್ಮ ಅನಿಸಿಕೆಯನ್ನು ಬಾಯಿಬಿಡದೆ ಮುಲುಕುತ್ತಿರುವಾಗಲೇ ಅತ್ತ ದೇವೇಗೌಡರು ನನ್ನ ಜೆಡಿಎಸ್ ಪಾರ್ಟಿಯಿಂದ ಮುಸ್ಲಿಮರು ಕಾಲ್ತೆಗೆಯಲು ಕಾಂಗ್ರೆಸ್ಸಿನವರೇ ಕಾರಣ, ಯಾಕೆಂದರೆ ಕಳೆದ ಚುನಾವಣೆಯಲ್ಲಿ ನಮ್ಮನ್ನ ಬಿಜೆಪಿಯ ಬಿ ಟೀಮ್ ಎಂದು ಕರೆದ ಕಾರಣವಾಗಿ ಮುಸ್ಲಿಮರು ನಮ್ಮಿಂದ ದೂರ ಹೋದರು ಎಂದು ಕಾಂಗೈನೇ ದೂರಿದರಲ್ಲಾ. ಕಾಂಗ್ರೆಸ್‍ನವರು ಹಾಗಂದಿದ್ದು ನಿಜ, ಆದರೆ ಜೆಡಿಎಸ್‍ನವರ ನಡವಳಿಕೆಯೇ ಹಾಗಿತ್ತು. ಚಾಮುಂಡೇಶ್ವರಿ ಚುನಾವಣೆಯಲ್ಲಿ ಗೌಡರ ಪಾರ್ಟಿ ಬಿ ಟೀಮಿನ ಕೆಲಸ ಮಾಡಿದ್ದಲ್ಲದೆ ಕರ್ನಾಟಕದ ಉಳಿದ ಕಡೆಯೂ ಹಾಗೇ ಮಾಡಿತು. ಜೊತೆಗೆ, ದೇವೇಗೌಡರು ಮೋದಿಯನ್ನು ಅಪ್ಪಿತಪ್ಪಿ ಟೀಕಿಸದೆ ಕಾಂಗ್ರೆಸ್‍ನ್ನೇ ಗುರಿಯಾಗಿರಿಸಿಕೊಂಡಿದ್ದಕ್ಕೆ ಸಾಕ್ಷಿ ಸಿಕ್ಕ ಕಾರಣಕ್ಕೆ ಜೆಡಿಎಸ್‍ಗೆ ಬಿ ಪಟ್ಟ ಕೊಟ್ಟರು. ಅದೇನಾದರಾಗಲಿ, ಇದೆಲ್ಲಾ ಆದಮೇಲೆ ಅಪ್ಪ ಮಗ ಕಾಂಗ್ರೆಸ್ಸನ್ನೇ ಟಾರ್ಗೆಟ್ ಮಾಡಿಕೊಂಡಿರುವುದರ ಮರ್ಮವೇನೆಂದು ಕಾಂಗೈಗಳು ಕಂಗಾಲಾಗಿವೆಯಂತಲ್ಲಾ, ಥೂತ್ತೇರಿ!!

******

ರೆಸಾರ್ಟ್ ರಾಜಕಾರಣಕ್ಕೂ ಕರ್ನಾಟಕಕ್ಕೂ ಸಂಬಂಧವೇ ಇರಲಿಲ್ಲ. ರಾಮಕೃಷ್ಣ ಹೆಗಡೆ ಕಾಲದಲ್ಲಿ ನಾದೆಂಡ್ಳ ಬಾಸ್ಕರರಾವ್ ಬಂಡಾಯದಿಂದ ಬೆಚ್ಚಿದ ಎನ್.ಟಿ.ಆರ್ ಆಂದ್ರದ ಶಾಸಕರನ್ನ ಹಿಡಿದುತಂದು ಬೆಂಗಳೂರು ನಂದಿಬೆಟ್ಟದಲ್ಲಿ ದನಗಳನ್ನು ಕೂಡಿಹಾಕಿದಂತೆ ಕೂಡಿ, ಕಡೆಗೆ ಹೊಡೆದುಕೊಂಡು ಹೋದರು. ಈ ಮೂರು ದಶಕದಲ್ಲಿ ಅಂತಹ ಘಟನೆಗಳು ಹಲವು ಜರುಗಿವೆ. ಆದರೀಗ ಜೆಡಿಎಸ್ ಸರಕಾರ ರಚಿಸಲು ಸಿದ್ದು 76 ಕುರಿಗಳನ್ನ ಅಟ್ಟಿಕೊಂಡು ರೆಸಾರ್ಟ್ ಕಡೆ ಹೋಗಿದ್ದು ಶಾನೆ ನಗೆಪಾಟಲಿಗೆ ಗುರಿಯಾಗಿದೆಯಂತಲ್ಲಾ. ಏಕೆಂದರೆ ನಿಮ್ಮಪ್ಪನಾಣೆ ಮುಖ್ಯಮಂತ್ರಿಯಾಗಲ್ಲ ಎಂದು ಕುಮಾರಣ್ಣನಿಗೆ ಹೇಳುತ್ತಿದ್ದ ಸಿದ್ದು ತನ್ನ ಜಾಯಮಾನಕ್ಕೆ ಒಗ್ಗದ ಈ ವ್ಯವಹಾರಕ್ಕೆ ತೊಡಗಿದ್ದು ಅಚ್ಚರಿ ಮೂಡಿಸಿದೆಯಲ್ಲಾ. ಸಿದ್ದು ಅನುಮಾನದ ಪ್ರಕಾರವನ್ನು ವಿಶ್ಲೇಷಿಸುವುದಾದರೆ ಕಳೆದ ಚುನಾವಣೆಯಲ್ಲಿ ಓಟಿಗೆರಡು ಸಾವಿರದಂತೆ ಪೀಕಿ ಗೆದ್ದು ಬಂದಿರುವ ಯಮ್ಮೆಲ್ಲೆಗಳು ಗೊಡ್ಡೆಮ್ಮೆಗಳಂತೆ ಬದುಕಲು ಸಾಧ್ಯವಿಲ್ಲ. ಮಾಡಿದ ಖರ್ಚನ್ನು ಮರಳಿ ಪಡೆದು ಎಷ್ಟು ಕೋಟಿಯನ್ನಾದರೂ ಕೊಡಲು ಮೋದಿ ಟೀಮು ಮರ್ಯಾದೆಗೆಟ್ಟು ಕೂತಿವೆ. ಆಕಡೆ ನೋಡದೆ ಇರಲು ನಮ್ಮವರಿಂದ ಸಾಧ್ಯವಿಲ್ಲ ಎಂದು ರೆಸಾರ್ಟ್ ಕಡೆ ಕುರಿಮಂದೆ ಹೊರಡಿಸಿದರಲ್ಲಾ, ಥೂತ್ತೇರಿ!!!

*******

ಧಾರವಾಡದ ಸಾಹಿತ್ಯ ಸಂಭ್ರಮವಂತೂ ಹೇಳತೀರದಾಗಿದೆಯಂತಲ್ಲಾ. ಈ ಹಿಂದೆ ಗಿರಡ್ಡಿ ಗೋವಿಂದರಾಜರು ಬಲಪಂಥೀಯರಿಗೂ ಆಹ್ವಾನ ಕೊಡಲಾಗಿ ಅವರು ಈ ಸಮ್ಮೇಳನ ನಮ್ಮದೇ ಎಂಬಂತೆ ನಡೆದುಕೊಳ್ಳುತ್ತಿದ್ದಾರಂತಲ್ಲಾ. ಆ ನಂತರ ಎಡಪಂಥೀಯರೂ ಈ ಸಂಭ್ರಮದೊಳಗೆ ಕಾಣಿಸಿಕೊಂಡು ಗುಟುರು ಹಾಕಲಾಗಿ ಹಲವು ಜನರು ಎಡಬಲ ಎಂದು ಚರ್ಚಿಸುತ್ತಿರುವಾಗಲೇ ಈ ಇಬ್ಬರು ಜೊತೆಗೂ ಸ್ನೇಹದಿಂದಿದ್ದ ಕೆಲವರು ನಾವಂತೂ ಎಡವೂ ಅಲ್ಲ, ಬಲವೂ ಅಲ್ಲ ನಮ್ಮದೇನಿದ್ದರೂ ನಡು ಎಂದಾಗ ಕಂಬಾರ `ನಾನೂ ಕೂಡ ನಡು ಮಧ್ಯದವನು. ನಡು ಎಂದರೆ ನನಗೆ ತುಂಬಾ ಇಷ್ಟ. ಆದರೂ, ಬಲದ ಕಡೆಗಿನ ಒಲವು ತುಸು ಜಾಸ್ತಿ ಇದ್ದುದರಿಂದ ಪೇಜಾವರನ ಕಾಲಿಗೆ ಡೈ ಹೊಡೆದೆ ಇದನ್ನು ಸರಿದೂಗಿಸಲೋಸ್ಕರ ಈಚೆಗೆ ಕೋಡೀಮಠದ ಕಾಲಿಗೆ ಬಿದ್ದೆ’ ಎಂದಿಲ್ಲವಂತಲ್ಲಾ, ಥೂತ್ತೇರಿ!!!!

******

ಯಾವತ್ತಿಗೂ ಹಿಂದೂ ಧರ್ಮದ ಮೇಧಾವಿಗಳ ಕಣ್ಣು ತೆರೆಸಿದ್ದು ಈ ಶ್ರೇಣೀಕೃತ ಸಮಾಜದ ಕಟ್ಟಕಡೆಯವರಂತಲ್ಲಾ. ಹಾಗೆಯೇ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಿದ್ದ ಜನ ಬೆಚ್ಚಿ ಬೀಳುವಂತೆ ಉಚಲ್ಯಾ ಕ್ಯಾತಿಯ ಲಕ್ಷಣ ಗಾಯಕವಾಡ ಮಾತನಾಡಿದರಂತಲ್ಲಾ. ಅದೇನಪ್ಪ ಎಂದರೆ, ಭೂದೇವಿ ಉಳಿಸಲು ವಿಷ್ಣು ವರಹ ಅವತಾರವೆತ್ತಿದ್ದ. ಅಂದರೆ ವಿಷ್ಣು ಹಂದಿಯಾಗಿದ್ದ. ಆದ್ದರಿಂದ ಹಂದಿ ಪೂಜನೀಯ ಪ್ರಾಣಿ. ಗೋವಿನಂತೆ ಇದೂ ಕೂಡ ಹಿಂದೂ ಧರ್ಮದ ಗೌರವಕ್ಕೆ ಪಾತ್ರವಾಗಬೇಕು. ಆದರೆ ನೀವು ಗೋಮೂತ್ರದಂತೆಯೇ ಹಂದಿ ಮೂತ್ರವನ್ನು ಪರಿಗಣಿಸಬೇಕು. ಅಂದರೆ ಪೂಜಾಸ್ಥಳದಲ್ಲಿ ಪ್ರೋಕ್ಷಣೆಗೆ ಬಳಸಬೇಕು, ತೀರ್ಥ ರೂಪವಾಗಿ ಸೇವಿಸಬೇಕು ಎಂದಾಗ ಬಲಪಂಥೀಯಗಳು ಮಧ್ಯಾಹ್ನ ಭೋಜನ ಮಾಡುವುದೇ ಕಷ್ಟವಾಯ್ತಂತಲ್ಲಾ, ಥೂತ್ತೇರಿ….!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...

ಪ್ರತಿಭಟನಾನಿರತ ಮಹಿಳೆಯ ಕೆನ್ನೆಗೆ ಹೊಡೆದ ದೆಹಲಿ ಪೊಲೀಸ್ ಅಧಿಕಾರಿ ಸಂದೀಪ್ ಲಂಬಾ: ವಿಡಿಯೋ ವೈರಲ್ ನಂತರ ವ್ಯಾಪಕ ಟೀಕೆ

ದೆಹಲಿ: ಶಾಂತಿಯುತವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ನಡೆಸಿದ ಕ್ರೂರ ದಮನ ಕಾರ್ಯಾಚರಣೆಯ ಭೀಕರ ಮುಖವಾಡವೊಂದು ಮತ್ತೆ ಜಗಜ್ಜಾಹೀರಾಗಿದೆ. ಸೋಮವಾರ ಸಂಸತ್ತಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರನ್ನು ಹತ್ತಿಕ್ಕುವ ನೆಪದಲ್ಲಿ,...