Homeಅಂಕಣಗಳುಸರಳ ಬಹುಮತ ಸಿಕ್ಕಿದ್ದರೆ ಸರಿಯಾಗಿ ಮಾಡುತ್ತಿದ್ದೆ!

ಸರಳ ಬಹುಮತ ಸಿಕ್ಕಿದ್ದರೆ ಸರಿಯಾಗಿ ಮಾಡುತ್ತಿದ್ದೆ!

- Advertisement -
- Advertisement -

ಆತ ಅವಳ ಕಿವಿಯಲ್ಲಿ ಉಸುರಿದ! ‘ನಾನು ಒಂದು ಹತ್ತು ವರ್ಷ ಚಿಕ್ಕವನಾಗಿದ್ದಿದ್ದ್ರೆ, ನಿನ್ನನ್ನು ಇನ್ನೂ ಸುಖವಾಗಿಡುತ್ತಿದೆ’ ಎಂದು. ಅದಕ್ಕವಳು ಈಗಲೂ ಏನೂ ಆಗಿಲ್ಲ, ಹತ್ತು ವರ್ಷ ಚಿಕ್ಕವನೆಂದೇ ನಿನ್ನ ಪೌರುಷ ತೋರಬಹುದೆಂದಳು.
ಇಂತಹದೊಂದು ಮಾತು ನಮ್ಮ ಗ್ರಾಮೀಣ ಭಾಗದಲ್ಲಿ ಆಗಾಗ್ಗೆ ಹೊರಬರುತ್ತದೆ. ಕಾರಣ, ತಮ್ಮತಮ್ಮ ಅಸಮರ್ಥತೆಗಳನ್ನು ಯಾವು ಯಾವುದೋ ಕಾರಣಗಳ ಮೇಲೆ ಹಾಕಿ ಬಂಡವಾಳವನ್ನ ಕೊಚ್ಚಿಕೊಳ್ಳುವ ಜನ ಈಗಲೂ ಇದ್ದಾರೆ. ಅದಕ್ಕೆ ತಕ್ಕ ಉದಾಹರಣೆ ಎಂದರೆ, ನಮ್ಮ ಮುಖ್ಯಮಂತ್ರಿಯಂತಲ್ಲಾ. ಜೆಡಿಎಸ್‍ಗೆ ಹೆಚ್ಚಿನ ಬಹುಮತವಿದ್ದರೆ ಇನ್ನೂ ಹೆಚ್ಚಿನದನ್ನು ಕಡಿದು ಕಟ್ಟೆ ಹಾಕುತ್ತಿದ್ದೆ ಎಂದು ಕುಮಾರಣ್ಣ ಜನರ ಮೇಲೆಯೇ ಆಪಾದನೆ ಹೊರಿಸುತ್ತಿದ್ದಾರೆ. ಹಾಗೆನೋಡಿದರೆ ತಮ್ಮ ಕ್ಯೆಪಾಸಿಟಿ ಮೂವತ್ತು ಸೀಟು; ಅದು ಹೇಗೋ ಬಿಜೆಪಿಯ ಜೊತೆ ಒಳ ವ್ಯವಹಾರ ನಡೆಸಿ ಮುವ್ವತ್ತೆಂಟು ಸೀಟು ಬಂದವು. ಇನ್ನು ಎಡೂರಪ್ಪನ ಸೀಟು ನೂರ ನಾಕು, ಏಕೆಂದರೆ ಸಿದ್ದು ವೀರಶೈವ ಮತ್ತು ಲಿಂಗಾಯಿತ ಜೇನುಹುಟ್ಟಿಗೆ ಕಲ್ಲು ಬೀರಿ ಕಡಿಸಿಕೊಂಡಿದ್ದಕ್ಕೆ. ಇಂತಿರುವಾಗ ಕುಮಾರಣ್ಣನಿಗ್ಹೇಗೆ ಸರಳ ಬಹುಮತ ಸಾಧ್ಯ. ಅಂತೂ ಕುಮಾರಣ್ಣ ಕೈಲಾಗದಕ್ಕೆ ಕಾಂಗೈನೇ ದೂರುತ್ತಿದ್ದಾರಂತಲ್ಲಾ… ಥೂತ್ತೇರಿ!

******

ಕುಮಾರಣ್ಣನವರು ಸರಳ ಬಹುಮತ ಬಂದಿದ್ದರೆ ಒಳ್ಳೆ ಕೆಲಸ ಮಾಡುತ್ತಿದ್ದೆ ಎಂದರೆ ಏನರ್ಥ. ಈ ಕಾಂಗೈಗಳು ನನ್ನನ್ನು ಒಳ್ಳೆ ಕೆಲಸ ಮಾಡಲು ಬಿಡುತ್ತಿಲ್ಲ ಎಂಬರ್ಥ ತಾನೆ. ನಾವು ಯಾವರೀತಿ ಇವರಿಗೆ ಅಡ್ಡಿಯಾಗಿದ್ದೇವೆ ಎಂದು ವಿವರಿಸಬೇಕೆಂದು ಕಾಂಗೈ ಬುದ್ದಿಜೀವಿಗಳು ತಮ್ಮ ಅನಿಸಿಕೆಯನ್ನು ಬಾಯಿಬಿಡದೆ ಮುಲುಕುತ್ತಿರುವಾಗಲೇ ಅತ್ತ ದೇವೇಗೌಡರು ನನ್ನ ಜೆಡಿಎಸ್ ಪಾರ್ಟಿಯಿಂದ ಮುಸ್ಲಿಮರು ಕಾಲ್ತೆಗೆಯಲು ಕಾಂಗ್ರೆಸ್ಸಿನವರೇ ಕಾರಣ, ಯಾಕೆಂದರೆ ಕಳೆದ ಚುನಾವಣೆಯಲ್ಲಿ ನಮ್ಮನ್ನ ಬಿಜೆಪಿಯ ಬಿ ಟೀಮ್ ಎಂದು ಕರೆದ ಕಾರಣವಾಗಿ ಮುಸ್ಲಿಮರು ನಮ್ಮಿಂದ ದೂರ ಹೋದರು ಎಂದು ಕಾಂಗೈನೇ ದೂರಿದರಲ್ಲಾ. ಕಾಂಗ್ರೆಸ್‍ನವರು ಹಾಗಂದಿದ್ದು ನಿಜ, ಆದರೆ ಜೆಡಿಎಸ್‍ನವರ ನಡವಳಿಕೆಯೇ ಹಾಗಿತ್ತು. ಚಾಮುಂಡೇಶ್ವರಿ ಚುನಾವಣೆಯಲ್ಲಿ ಗೌಡರ ಪಾರ್ಟಿ ಬಿ ಟೀಮಿನ ಕೆಲಸ ಮಾಡಿದ್ದಲ್ಲದೆ ಕರ್ನಾಟಕದ ಉಳಿದ ಕಡೆಯೂ ಹಾಗೇ ಮಾಡಿತು. ಜೊತೆಗೆ, ದೇವೇಗೌಡರು ಮೋದಿಯನ್ನು ಅಪ್ಪಿತಪ್ಪಿ ಟೀಕಿಸದೆ ಕಾಂಗ್ರೆಸ್‍ನ್ನೇ ಗುರಿಯಾಗಿರಿಸಿಕೊಂಡಿದ್ದಕ್ಕೆ ಸಾಕ್ಷಿ ಸಿಕ್ಕ ಕಾರಣಕ್ಕೆ ಜೆಡಿಎಸ್‍ಗೆ ಬಿ ಪಟ್ಟ ಕೊಟ್ಟರು. ಅದೇನಾದರಾಗಲಿ, ಇದೆಲ್ಲಾ ಆದಮೇಲೆ ಅಪ್ಪ ಮಗ ಕಾಂಗ್ರೆಸ್ಸನ್ನೇ ಟಾರ್ಗೆಟ್ ಮಾಡಿಕೊಂಡಿರುವುದರ ಮರ್ಮವೇನೆಂದು ಕಾಂಗೈಗಳು ಕಂಗಾಲಾಗಿವೆಯಂತಲ್ಲಾ, ಥೂತ್ತೇರಿ!!

******

ರೆಸಾರ್ಟ್ ರಾಜಕಾರಣಕ್ಕೂ ಕರ್ನಾಟಕಕ್ಕೂ ಸಂಬಂಧವೇ ಇರಲಿಲ್ಲ. ರಾಮಕೃಷ್ಣ ಹೆಗಡೆ ಕಾಲದಲ್ಲಿ ನಾದೆಂಡ್ಳ ಬಾಸ್ಕರರಾವ್ ಬಂಡಾಯದಿಂದ ಬೆಚ್ಚಿದ ಎನ್.ಟಿ.ಆರ್ ಆಂದ್ರದ ಶಾಸಕರನ್ನ ಹಿಡಿದುತಂದು ಬೆಂಗಳೂರು ನಂದಿಬೆಟ್ಟದಲ್ಲಿ ದನಗಳನ್ನು ಕೂಡಿಹಾಕಿದಂತೆ ಕೂಡಿ, ಕಡೆಗೆ ಹೊಡೆದುಕೊಂಡು ಹೋದರು. ಈ ಮೂರು ದಶಕದಲ್ಲಿ ಅಂತಹ ಘಟನೆಗಳು ಹಲವು ಜರುಗಿವೆ. ಆದರೀಗ ಜೆಡಿಎಸ್ ಸರಕಾರ ರಚಿಸಲು ಸಿದ್ದು 76 ಕುರಿಗಳನ್ನ ಅಟ್ಟಿಕೊಂಡು ರೆಸಾರ್ಟ್ ಕಡೆ ಹೋಗಿದ್ದು ಶಾನೆ ನಗೆಪಾಟಲಿಗೆ ಗುರಿಯಾಗಿದೆಯಂತಲ್ಲಾ. ಏಕೆಂದರೆ ನಿಮ್ಮಪ್ಪನಾಣೆ ಮುಖ್ಯಮಂತ್ರಿಯಾಗಲ್ಲ ಎಂದು ಕುಮಾರಣ್ಣನಿಗೆ ಹೇಳುತ್ತಿದ್ದ ಸಿದ್ದು ತನ್ನ ಜಾಯಮಾನಕ್ಕೆ ಒಗ್ಗದ ಈ ವ್ಯವಹಾರಕ್ಕೆ ತೊಡಗಿದ್ದು ಅಚ್ಚರಿ ಮೂಡಿಸಿದೆಯಲ್ಲಾ. ಸಿದ್ದು ಅನುಮಾನದ ಪ್ರಕಾರವನ್ನು ವಿಶ್ಲೇಷಿಸುವುದಾದರೆ ಕಳೆದ ಚುನಾವಣೆಯಲ್ಲಿ ಓಟಿಗೆರಡು ಸಾವಿರದಂತೆ ಪೀಕಿ ಗೆದ್ದು ಬಂದಿರುವ ಯಮ್ಮೆಲ್ಲೆಗಳು ಗೊಡ್ಡೆಮ್ಮೆಗಳಂತೆ ಬದುಕಲು ಸಾಧ್ಯವಿಲ್ಲ. ಮಾಡಿದ ಖರ್ಚನ್ನು ಮರಳಿ ಪಡೆದು ಎಷ್ಟು ಕೋಟಿಯನ್ನಾದರೂ ಕೊಡಲು ಮೋದಿ ಟೀಮು ಮರ್ಯಾದೆಗೆಟ್ಟು ಕೂತಿವೆ. ಆಕಡೆ ನೋಡದೆ ಇರಲು ನಮ್ಮವರಿಂದ ಸಾಧ್ಯವಿಲ್ಲ ಎಂದು ರೆಸಾರ್ಟ್ ಕಡೆ ಕುರಿಮಂದೆ ಹೊರಡಿಸಿದರಲ್ಲಾ, ಥೂತ್ತೇರಿ!!!

*******

ಧಾರವಾಡದ ಸಾಹಿತ್ಯ ಸಂಭ್ರಮವಂತೂ ಹೇಳತೀರದಾಗಿದೆಯಂತಲ್ಲಾ. ಈ ಹಿಂದೆ ಗಿರಡ್ಡಿ ಗೋವಿಂದರಾಜರು ಬಲಪಂಥೀಯರಿಗೂ ಆಹ್ವಾನ ಕೊಡಲಾಗಿ ಅವರು ಈ ಸಮ್ಮೇಳನ ನಮ್ಮದೇ ಎಂಬಂತೆ ನಡೆದುಕೊಳ್ಳುತ್ತಿದ್ದಾರಂತಲ್ಲಾ. ಆ ನಂತರ ಎಡಪಂಥೀಯರೂ ಈ ಸಂಭ್ರಮದೊಳಗೆ ಕಾಣಿಸಿಕೊಂಡು ಗುಟುರು ಹಾಕಲಾಗಿ ಹಲವು ಜನರು ಎಡಬಲ ಎಂದು ಚರ್ಚಿಸುತ್ತಿರುವಾಗಲೇ ಈ ಇಬ್ಬರು ಜೊತೆಗೂ ಸ್ನೇಹದಿಂದಿದ್ದ ಕೆಲವರು ನಾವಂತೂ ಎಡವೂ ಅಲ್ಲ, ಬಲವೂ ಅಲ್ಲ ನಮ್ಮದೇನಿದ್ದರೂ ನಡು ಎಂದಾಗ ಕಂಬಾರ `ನಾನೂ ಕೂಡ ನಡು ಮಧ್ಯದವನು. ನಡು ಎಂದರೆ ನನಗೆ ತುಂಬಾ ಇಷ್ಟ. ಆದರೂ, ಬಲದ ಕಡೆಗಿನ ಒಲವು ತುಸು ಜಾಸ್ತಿ ಇದ್ದುದರಿಂದ ಪೇಜಾವರನ ಕಾಲಿಗೆ ಡೈ ಹೊಡೆದೆ ಇದನ್ನು ಸರಿದೂಗಿಸಲೋಸ್ಕರ ಈಚೆಗೆ ಕೋಡೀಮಠದ ಕಾಲಿಗೆ ಬಿದ್ದೆ’ ಎಂದಿಲ್ಲವಂತಲ್ಲಾ, ಥೂತ್ತೇರಿ!!!!

******

ಯಾವತ್ತಿಗೂ ಹಿಂದೂ ಧರ್ಮದ ಮೇಧಾವಿಗಳ ಕಣ್ಣು ತೆರೆಸಿದ್ದು ಈ ಶ್ರೇಣೀಕೃತ ಸಮಾಜದ ಕಟ್ಟಕಡೆಯವರಂತಲ್ಲಾ. ಹಾಗೆಯೇ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಿದ್ದ ಜನ ಬೆಚ್ಚಿ ಬೀಳುವಂತೆ ಉಚಲ್ಯಾ ಕ್ಯಾತಿಯ ಲಕ್ಷಣ ಗಾಯಕವಾಡ ಮಾತನಾಡಿದರಂತಲ್ಲಾ. ಅದೇನಪ್ಪ ಎಂದರೆ, ಭೂದೇವಿ ಉಳಿಸಲು ವಿಷ್ಣು ವರಹ ಅವತಾರವೆತ್ತಿದ್ದ. ಅಂದರೆ ವಿಷ್ಣು ಹಂದಿಯಾಗಿದ್ದ. ಆದ್ದರಿಂದ ಹಂದಿ ಪೂಜನೀಯ ಪ್ರಾಣಿ. ಗೋವಿನಂತೆ ಇದೂ ಕೂಡ ಹಿಂದೂ ಧರ್ಮದ ಗೌರವಕ್ಕೆ ಪಾತ್ರವಾಗಬೇಕು. ಆದರೆ ನೀವು ಗೋಮೂತ್ರದಂತೆಯೇ ಹಂದಿ ಮೂತ್ರವನ್ನು ಪರಿಗಣಿಸಬೇಕು. ಅಂದರೆ ಪೂಜಾಸ್ಥಳದಲ್ಲಿ ಪ್ರೋಕ್ಷಣೆಗೆ ಬಳಸಬೇಕು, ತೀರ್ಥ ರೂಪವಾಗಿ ಸೇವಿಸಬೇಕು ಎಂದಾಗ ಬಲಪಂಥೀಯಗಳು ಮಧ್ಯಾಹ್ನ ಭೋಜನ ಮಾಡುವುದೇ ಕಷ್ಟವಾಯ್ತಂತಲ್ಲಾ, ಥೂತ್ತೇರಿ….!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...