Homeಕರ್ನಾಟಕಸಿ.ಟಿ.ರವಿಯ ಬಾಯಲ್ಲಿ ಕುವೆಂಪು, ಶಾಂತವೇರಿಯವರ ಹೆಸರು: ಹೇಳಿಕೊಳ್ಳಲು ಸಿ.ಟಿ.ರವಿಗೆ ಒಂದೂ ಸಂಘಪರಿವಾರದ ಹೆಸರು ಸಿಗಲಿಲ್ಲವೇಕೆ?

ಸಿ.ಟಿ.ರವಿಯ ಬಾಯಲ್ಲಿ ಕುವೆಂಪು, ಶಾಂತವೇರಿಯವರ ಹೆಸರು: ಹೇಳಿಕೊಳ್ಳಲು ಸಿ.ಟಿ.ರವಿಗೆ ಒಂದೂ ಸಂಘಪರಿವಾರದ ಹೆಸರು ಸಿಗಲಿಲ್ಲವೇಕೆ?

- Advertisement -
- Advertisement -

ಡಿ.ಕೆ.ಶಿವಕುಮಾರ್ ರ ಬಂಧನಕ್ಕೆ ಒಕ್ಕಲಿಗರ ಸಂಘಗಳು ಸೇರಿ ಮಾಡಿದ ಪ್ರತಿಭಟನೆಯ ಕುರಿತು ಒಕ್ಕಲಿಗ ಸಮುದಾಯಕ್ಕೆ ಸೇರಿದ ಬಿಜೆಪಿ ಸಚಿವ ಸಿ.ಟಿ.ರವಿ ಆಕ್ಷೇಪಣೆ ಎತ್ತಿ ಮಾತನಾಡಿದರು. ಜಾತಿಯ ಆಧಾರದಲ್ಲಿ ಪ್ರತಿಭಟಿಸಬೇಡಿ ಎಂದು ಅವರು ಹೇಳಲಿಲ್ಲ. ಈ ಮಾತನ್ನು ಬೇರೆ ಕೆಲವರು ಹೇಳಿದ್ದಾರೆ. ಆರ್.ಅಶೋಕ್ ಸೇರಿದಂತೆ ಹಲವರು ತಪ್ಪು ಮಾಡಿದ್ದಾರೆ, ಅನುಭವಿಸುತ್ತಾರೆ ಅಷ್ಟೇ ಹೊರತು ಇದಕ್ಕೆ ಜಾತಿಯ ಬಣ್ಣ ಬಳಿಯಬೇಡಿ ಎಂದು ಹೇಳಿದರು. ಆದರೆ, ಸಿ.ಟಿ.ರವಿ ತಾನು ಭಿನ್ನವಾಗಿ ಹೇಳಬೇಕು ಎಂಬ ಕಾರಣಕ್ಕೆ ಆಶ್ಚರ್ಯಕರವಾದ ಮಾತುಗಳನ್ನು ಹೇಳಿದರು.

‘ಒಕ್ಕಲಿಗ ಸಮುದಾಯದಲ್ಲಿ ಶಾಂತವೇರಿ ಗೋಪಾಲಗೌಡ, ಕುವೆಂಪು, ಕೆಂಗಲ್ ಹನುಮಂತಯ್ಯರಂಥವರು ಇದ್ದರು. ಅವರನ್ನು ಬಿಟ್ಟು ಡಿ.ಕೆ.ಶಿವಕುಮಾರ್ ಥರದವರನ್ನು ನಿಮ್ಮ ನಾಯಕರೆಂದು ಆರಿಸಿಕೊಳ್ಳುತ್ತೀರಾ (ಡಿಕೆಶಿ ಹೆಸರು ಹೇಳದಿದ್ದರೂ, ಅದೇ ಉದ್ದೇಶದಿಂದ ಹೇಳಿದ್ದು) ಯೋಚಿಸಿ’ ಎಂಬುದು ರವಿಯವರ ಹೇಳಿಕೆಯಾಗಿತ್ತು.

ವಿಪರ್ಯಾಸವೆಂದರೆ, ಕೆಂಗಲ್ ಹನುಮಂತಯ್ಯನವರು ಸಿ.ಟಿ.ರವಿಯವರ ಪಕ್ಷದ ಹಿಂದಿನ ಅವತಾರವಾಗಿದ್ದ ಜನಸಂಘದಲ್ಲೇನೂ ಇರಲಿಲ್ಲ. ಅವರು ಕಾಂಗ್ರೆಸ್ ನಾಯಕರಾಗಿದ್ದರು. ಸಿ.ಟಿ.ರವಿಯವರ ಸಂಘಟನೆ ಆರೆಸ್ಸೆಸ್ ಬ್ರಿಟಿಷರ ಪರವಾಗಿ ಕೆಲಸ ಮಾಡಿದರೆ, ಹನುಮಂತಯ್ಯನವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು 9 ಸಾರಿ ಜೈಲು ಅನುಭವಿಸಿದ್ದರು.

ಇನ್ನು ಶಾಂತವೇರಿ ಗೋಪಾಲಗೌಡರು. ಅವರು ಕಾಂಗ್ರೆಸ್ ವಿರುದ್ಧ ಇದ್ದರು. ಆದರೆ, ಬಿಜೆಪಿ ಹಾಗೂ ಆರೆಸ್ಸೆಸ್‍ಅನ್ನು ಸಂಪೂರ್ಣವಾಗಿ ವಿರೋಧಿಸುವ ಸಮಾಜವಾದಿ ಆಶಯದ ಪಕ್ಷದಲ್ಲಿದ್ದರು. ಸಿ.ಟಿ.ರವಿಯವರ ಪಕ್ಷ ಅಥವಾ ಅವರ ಪೂರ್ವಸೂರಿಗಳು ಭೂಮಾಲೀಕರ ಪರವಾಗಿದ್ದರೆ, ಗೋಪಾಲಗೌಡರು ಗೇಣೀದಾರರ ಪರವಾಗಿದ್ದರು. ಇನ್ನು ರವಿಯವರೇ ಕೊಂಡಾಡಿದ ಗೌಡರ ಸರಳತೆ, ಅತ್ಯಂತ ಕೆಳಸ್ತರದಲ್ಲಿದ್ದ ಜನರ ಪರವಾಗಿ ದನಿಯೆತ್ತುವುದೂ ಸಹಾ ರವಿಯವರ ಪಕ್ಷದ ಧೋರಣೆಯಲ್ಲ. ಹಾಗೆಯೇ ಗೋಪಾಲಗೌಡರು ಜಾತಿ ರಾಜಕಾರಣ ಮಾಡಿರಲಿಲ್ಲ. ರವಿ ಬಂದಿರುವ ಮಲೆನಾಡಿನಿಂದಲೇ ಬಂದ ಗೋಪಾಲಗೌಡರು ಕಾಂಗ್ರೆಸ್ಸಿಗೆ ಸಲ್ಲುವ ವ್ಯಕ್ತಿಯಾಗಿರಲಿಲ್ಲ; ಬಿಜೆಪಿಗಂತೂ ಹತ್ತಿರವೂ ಬರುತ್ತಿರಲಿಲ್ಲ.


ಸಿ.ಟಿ.ರವಿಯಂತಹ ವ್ಯಕ್ತಿಗಳು ಕುವೆಂಪು ಅವರ ಹೆಸರಂತೂ ಹೇಳುವುದೇ ಅಪಚಾರ. ಜಾತಿ, ಧರ್ಮ, ಜನಾಂಗಗಳ ಕಾರಣಕ್ಕೆ ದೂರವಿಡುವ ಸಂಸ್ಕೃತಿಯ ರವಿ, ವಿಶ್ವಮಾನವ ತತ್ವವನ್ನು ಹೇಳಿದ ಕುವೆಂಪು ಅವರ ಹೆಸರನ್ನು ಹೇಳಿದ್ದು ವಿಪರ್ಯಾಸ. ರವಿ ಪ್ರತಿಪಾದಿಸುವ ಹಿಂದಿ, ಹಿಂದೂ ಮತ್ತು ಹಿಂದೂರಾಷ್ಟ್ರದ ಕಟುವಿರೋಧಿಗಳಾಗಿದ್ದ ಕುವೆಂಪು ಆರೆಸ್ಸೆಸ್‍ಅನ್ನು ವಿರೋಧಿಸುತ್ತಿದ್ದರಷ್ಟೇ ಅಲ್ಲ, ತಮ್ಮನ್ನು ಒಕ್ಕಲಿಗರೆಂದು ಕರೆಯುವುದನ್ನೂ ಇಷ್ಟಪಡುತ್ತಿರಲಿಲ್ಲ. ಅವರು ಬದುಕಿರುವಷ್ಟು ಕಾಲ ಆದಿಚುಂಚನಗಿರಿ ಮಠಕ್ಕೆ ಭೇಟಿಯೂ ಕೊಡಲಿಲ್ಲ. ಅಂತರ್ಜಾತಿ ಮದುವೆಗಳನ್ನು ಪ್ರೋತ್ಸಾಹಿಸಿದರು. ಸ್ವತಃ ಅವರ ಮಗನ ಅಂತರ್ಜಾತಿ ಮದುವೆಗೆ ಬೆಂಬಲವಾಗಿ ನಿಂತರು.

ಈಗ ಸಿ.ಟಿ.ರವಿಯ ಮಾತನ್ನೇ ಪರಿಗಣಿಸಿ ಕುವೆಂಪು, ಶಾಂತವೇರಿ ಗೋಪಾಲಗೌಡರು, ಕೆಂಗಲ್ ಹನುಮಂತಯ್ಯರವರನ್ನು ಒಕ್ಕಲಿಗ ಸಮುದಾಯ ಆದರ್ಶವಾಗಿ ಪರಿಗಣಿಸಿದರೆ, ಬಿಜೆಪಿ ಒಕ್ಕಲಿಗ ಸಮುದಾಯದ ಮೊದಲ ಶತ್ರುವಾಗಿಬಿಡುತ್ತದೆ. ಜೊತೆಗೆ ಆರೆಸ್ಸೆಸ್‍ನ ಸಿದ್ಧಾಂತದ ಕಡುವಿರೋಧಿಗಳಾಗಿ ಬದಲಾಗಲೇಬೇಕಾಗುತ್ತದೆ. ಹೀಗಾಗಿಯೇ ಉಳಿದವರು ಅಂತಹ ದೊಡ್ಡವರ ಹೆಸರನ್ನು ಹೇಳುವುದಕ್ಕೆ ಹೆದರುತ್ತಾರೆ. ಒಕ್ಕಲಿಗರ ಸಂಘದ ಬೃಹತ್ ಕಾರ್ಯಕ್ರಮವೊಂದರಲ್ಲಿ ಕುವೆಂಪು ಅವರ ಫೋಟೋ ಹಾಕಿಕೊಂಡಿದ್ದಕ್ಕೆ ದೊಡ್ಡ ವಿರೋಧ ಕೇಳಿ ಬಂದಿತ್ತು.

ದುರಂತವೆಂದರೆ, ಸಿ.ಟಿ.ರವಿ ‘ಇವರು ನಿಮ್ಮ ಆದರ್ಶ’ ಎಂದು ತನ್ನ ಪರಿವಾರದ ಹೆಸರುಗಳನ್ನು ಹೇಳುವುದು ಸಾಧ್ಯವಿಲ್ಲ. ಹಾಗಾಗಿ ಈ ಸದ್ಯ ಡಿ.ಕೆ.ಶಿವಕುಮಾರ್‍ರ ಮೇಲೆ ಕೇಂದ್ರ ಸರ್ಕಾರ ಮುಗಿಬಿದ್ದಿರುವ ಸಂದರ್ಭದಲ್ಲಿ ಒಕ್ಕಲಿಗರು ಬಿಜೆಪಿಯ ವಿರುದ್ಧ ತಿರುಗಿ ಬೀಳುತ್ತಿರುವುದನ್ನು ರವಿ ಗ್ರಹಿಸಿದ್ದಾರೆ. ಜಾತಿಯಾಚೆ ಯೋಚಿಸಿ ಎಂದು ‘ಸಂಘಪರಿವಾರದ ಮೂಲದವರಲ್ಲದ’ ಅಶ್ವತ್ಥನಾರಾಯಣ ಹೇಳುತ್ತಿದ್ದರೆ, ಜಾತಿ-ಧರ್ಮಗಳನ್ನು ಬಳಸಿಯೇ ರಾಜಕಾರಣ ಮಾಡುವ ಅಭ್ಯಾಸದ ರವಿಗೆ ಒಕ್ಕಲಿಗ ಹೆಸರುಗಳನ್ನೇ ಮುಂದೆ ಮಾಡುವ ಆಲೋಚನೆ ಬಂದಿದೆ. ಆದರೆ, ಅದಕ್ಕೆ ಅವರು ಆರಿಸಿಕೊಂಡಿರುವ ಹೆಸರುಗಳು ಮಾತ್ರ ಅವರ ವಿರೋಧಿ ಪಾಳೆಯದ್ದು ಎಂಬುದನ್ನು ನೆನಪಿಸುವ ಅಗತ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...