Homeನಿಜವೋ ಸುಳ್ಳೋನೀವು ನಂಬಿಯೇಬಿಟ್ಟಿದ್ದ ಕಳೆದ ವಾರದ ಫೇಕ್‌ನ್ಯೂಸ್‌ಗಳು ಯಾವುವು ಗೊತ್ತೆ?

ನೀವು ನಂಬಿಯೇಬಿಟ್ಟಿದ್ದ ಕಳೆದ ವಾರದ ಫೇಕ್‌ನ್ಯೂಸ್‌ಗಳು ಯಾವುವು ಗೊತ್ತೆ?

- Advertisement -
- Advertisement -

1 ಕೊರೋನಾ ವೈರಸ್ ತಗುಲಿ ಸಾವಿರಾರು ಜನ ರಸ್ತೆಯಲ್ಲಿಯೇ ಮೃತಪಟ್ಟರೆ?

ಈ ಚಿತ್ರವನ್ನು ನಿಮ್ಮ ಫೇಸ್‌ಬುಕ್ ಅಥವಾ ವಾಟ್ಸಾಪ್‌ನಲ್ಲಿ ನೋಡಿರಬಹುದು. ಕೊರೋನಾ ವೈರಸ್ ತಗುಲಿ ಸಾವಿರಾರು ಜನ ರಸ್ತೆಯಲ್ಲಿಯೇ ಮೃತಪಟ್ಟಿದ್ದಾರೆ ಎಂಬ ಹೆಡ್‌ಲೈನ್ ಕೂಡ ಕೊಟ್ಟಿರಬಹುದು ಅಲ್ಲವೇ? ಬಹಳಷ್ಟು ಜನ ಇದನ್ನು ನಂಬಿಬಿಟ್ಟಿದ್ದಾರೆ.

ಇದನ್ನು ಫ್ಯಾಕ್ಟ್ ಚೆಕ್ ನಡೆಸುವ ಸಲುವಾಗಿ ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಸತ್ಯ ತಿಳಿದುಬಂದಿದೆ. ಅದರಂತೆ ಇದು ಕೊರೋನ ವೈರಸ್‌ನಿಂದ ಸತ್ತ ವ್ಯಕ್ತಿಗಳ ಚಿತ್ರವಲ್ಲ ಎಂದು ತಿಳಿದುಬಂದಿದೆ.

ಈ ಚಿತ್ರವನ್ನು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯು 2014 ರಲ್ಲಿಯೇ ಪ್ರಕಟಿಸಿದೆ. ಅವರ ಫೋಟೋ ಪ್ರಬಂಧದ ವರದಿಯ ಪ್ರಕಾರ, “ಫ್ರಾಂಕ್‌ಫರ್ಟ್ನಲ್ಲಿರುವ ಕಾಟ್ಜ್ಬಾಚ್ ‘ನಾಜಿ ಕಾನ್ಸಂಟ್ರೇಶನ್ ಕ್ಯಾಂಪ್‌ನಲ್ಲಿ” ಸತ್ತ 528 ಸಂತ್ರಸ್ತರನ್ನು ಸ್ಮರಿಸುವ ಸಲುವಾಗಿ ಕಲಾ ಯೋಜನೆಯ ಭಾಗವಾಗಿ ಜನರು ಪಾದಚಾರಿ ವಲಯದಲ್ಲಿ ಮಲಗಿರುವುದಾಗಿದೆ”. ಈ ಚಿತ್ರವನ್ನು ರಾಯಿಟರ್ಸ್ ತೆಗೆದಿದೆ. ಅಂದರೆ ಇದು ಅಣುಕು ಪ್ರದರ್ಶನವೇ ಹೊರತು ಸತ್ತಿರುವುದಲ್ಲ ಎಂಬುದು ಸ್ಪಷ್ಟವಾಗಿದೆ.

ಹಿಂದೂಸ್ತಾನ್‌ ಟೈಮ್ಸ್‌ನಲ್ಲಿ ಪ್ರಕಟವಾದ ನಿಜವಾದ ಚಿತ್ರ..

2 ಮಂಗಳೂರಿನಿಂದ ಬೆಂಗಳೂರುವರೆಗೆ ಆಂಬುಲೆನ್ಸ್ ಮುಂದೆ ಒಂದೇ ಪೊಲೀಸ್ ವಾಹನ ಸಂಚರಿಸಿತೇ?

ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 40 ದಿನದ ಹಸಿಗೂಸನ್ನು ಫೆಬ್ರವರಿ 6 ರಂದು ಮಂಗಳೂರಿನಿಂದ ಬೆಂಗಳೂರಿನ ಆಸ್ಪತ್ರೆಗೆ ಝೀರೋ ಟ್ರಾಫಿಕ್‌ನಲ್ಲಿ ಕೇವಲ 4 ಗಂಟೆ 15 ನಿಮಿಷದಲ್ಲಿ ಆಂಬುಲೆನ್ಸ್ನಲ್ಲಿ ಸಾಗಿಸಿದ್ದರು. ಇದಕ್ಕಾಗಿ ಆ ಆಂಬುಲೆನ್ಸ್ ಡ್ರೈವರ್ ಆಗಿದ್ದ ಮೊಹಮ್ಮದ್ ಹನೀಫ್‌ರವರಿಗೆ ರಾಜ್ಯಾದ್ಯಂತ ಪ್ರಶಂಸೆಗಳ ಸುರಿಮಳೆಯಾಗಿತ್ತು.

ಇದಾದ ಎರಡು ಮೂರು ದಿನದ ನಂತರ ‘ಆಂಬುಲೆನ್ಸ್‌ವ ಹೀರೋ ಆದ. ಆಂಬುಲೆನ್ಸ್ ಮುಂದೆ ಪೊಲೀಸ್ ಜೀಪ್ ಓಡಿಸಿದ ಪೊಲೀಸರನ್ನು ಮರೆತವು. ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಹ ಗಾಂಧೀಜಿಯನ್ನು ಹೀರೋ ಮಾಡಿ ಸುಭಾಷ್ ಚಂದ್ರ ಬೋಸ್‌ರನ್ನು ಮರೆತವು. ನಮ್ಮ ದೇಶದಲ್ಲಿ ಪ್ರಚಾರಕ್ಕೆ ಮಾತ್ರ ಆದ್ಯತೆ, ನಿಷ್ಟೆಗಲ್ಲ ಎಂದು ಹಿಂದೂ ನ್ಯಾಷನಲಿಸ್ಟ್ ವಿಕಾಸ್ ವಿಕ್ಕಿ ಎಂಬುವ ಮಾಡಿದ ಪೋಸ್ಟರ್ ಎಲ್ಲಾ ಕಡೆ ಹರಿದಾಡುತ್ತಿದೆ.

ಯಮವೇಗದಲ್ಲಿ ಜೀಪ್ ಚಲಾಯಿಸುತ್ತಾ ಆಂಬುಲೆನ್ಸ್ಗೆ ದಾರಿ ಮಾಡಿಕೊಟ್ಟ 2012ರ ಬ್ಯಾಚಿನ, ಬಿಜಾಪುರ ಮೂಲದ ಮಂಗಳೂರು ಸಿಟಿ ರಿಸರ್ವ್ ಪೊಲೀಸ್ ಮಾರುತಿ ಡಿ ಯವರಿಗೆ ನಮ್ಮೆಲ್ಲರ ಸಲಾಂ.. ಎಂಬ ಸಂದೇಶ ಕೂಡ ವೈರಲ್ ಆಗಿದೆ.

ಇನ್ನು ಬಿಜೆಪಿಯ ಮಹೇಶ್ ವಿಕ್ರಮ್ ಹೆಗಡೆ ಎಂಬುವವರು ಸಹ “ಮೊನ್ನೆ ಮಂಗಳೂರಿನಿಂದ ಬೆಂಗಳೂರಿಗೆ ಹೋದ ಆಂಬುಲೆನ್ಸ್‌ನ ಮುಂದಿದ್ದ ಪೊಲೀಸ್ ಜೀಪಿನವರು ಇವರೆ” ಎಂದು ಮಾರುತಿ ಎಂಬ ಪೊಲೀಸ್ ಅಧಿಕಾರಿಯ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಷೇರ್ ಮಾಡಿದ್ದಾರೆ.

ಬಹಳಷ್ಟು ಜನ ಆಂಬುಲೆನ್ಸ್ನ ಮುಸ್ಲಿಂ ಡ್ರೈವರ್‌ನನ್ನು ಮಾತ್ರ ಹೊಗಳುತ್ತಿದ್ದಾರೆ, ಆದರೆ ಹಿಂದೂ ಪೊಲೀಸ್ ಡ್ರೈವರ್‌ನ ಮರೆತುಬಿಟ್ಟಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ಆದರೆ ಇದು ಸುಳ್ಳು ಸುದ್ದಿಯಾಗಿದೆ. ಏಕೆಂದರೆ ವಾಸ್ತವದಲ್ಲಿ ಆಂಬುಲೆನ್ಸ್‌ಗೆ ಮಂಗಳೂರಿನಿಂದ ಬೆಂಗಳೂರಿನವರೆಗೆ ಒಂದೇ ಪೈಲೆಟ್ ಜೀಪು ಬರಲು ಪೊಲೀಸ್ ನಿಯಮಾವಳಿಗಳಲ್ಲಿ ಅವಕಾಶವೇ ಇಲ್ಲ. ಹಾಗಾಗಿ ಆಂಬುಲೆನ್ಸ್ ಮಂಗಳೂರಿನಿಂದ ಹೊರಟಾಗ, ಅದಕ್ಕೆ ಮಂಗಳೂರು ಕಮೀಷನರ್ ವ್ಯಾಪ್ತಿಯಲ್ಲಿ ಒಂದು ಜೀಪು ಪೈಲಟ್ ಕೊಟ್ಟು, ಮಂಗಳೂರು ಜಿಲ್ಲಾ ವ್ಯಾಪ್ತಿಗೆ ಬಂದ ತಕ್ಷಣ ಮತ್ತೊಂದು ಜೀಪು, ಹಾಸದ ಗಡಿಯಿಂದ ಇನ್ನೊಂದು ಜೀಪು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಗದೊಂದು ಜೀಪು ಪೈಲಟ್ ಕೊಟ್ಟಿದೆಯೇ ಹೊರತು ಒಂದೇ ಜೀಪು ಬೆಂಗಳೂರಿನತನಕ ಬಂದಿಲ್ಲ. ಅಲ್ಲದೇ ಅವರು ಷೇರ್ ಮಾಡಿರುವ ಪೊಲೀಸ್ ಜೀಪಿನ ಫೋಟೊ ಸಹ 2016ರ ಕಲ್ಕತ್ತದ ಫೋಟೊವಾಗಿದೆಯೇ ಹೊರತು ಇಲ್ಲಿಯದಲ್ಲ.

3 ಈಸ್ಟ್ ಇಂಡಿಯಾ ಕಂಪನಿ ರಾಮನ ಚಿತ್ರವಿರುವ ನಾಣ್ಯಗಳನ್ನು ಬಿಡುಗಡೆ ಮಾಡಿತ್ತೇ?

ಪೋಸ್ಟ್ ಕಾರ್ಡ್ ಕನ್ನಡ ಫೇಸ್‌ಬುಕ್ ಪುಟ “ಈಸ್ಟ್ ಇಂಡಿಯಾ ಕಂಪನಿ 1818ರಲ್ಲಿಯೇ ರಾಮನ ಚಿತ್ರವಿರುವ ಮತ್ತು ಓಂ ಎಂದು ನಾಣ್ಯಗಳನ್ನು ಬಿಡುಗಡೆ ಮಾಡಿತ್ತು ಎಂದು ಹೇಳಿಕೊಂಡಿದೆ.

ಇದರ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ ಅದು ಸುಳ್ಳು ಎಂದು ಗೊತ್ತಾಗಿದೆ. ನಾಣ್ಯಶಾಸ್ತ್ರಜ್ಞ ಮತ್ತು ಲೇಖಕ ಮೋಹಿತ್ ಕಪೂರ್ ಇದು ಯಾರೋ ಫ್ಯಾಂಟಸಿಗಾಗಿ ಮಾಡಿರುವುದೇ ಹೊರತು ನಿಜದ ನಾಣ್ಯಗಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

4 ಗಾಂಜಾವು ಕೊರೋನ ವೈರಸ್ ಅನ್ನು ಕೊಲ್ಲುತ್ತದೆಯೇ?

ಈಗ ಎಲ್ಲೆಲ್ಲೂ ಕೊರೋನ ವೈರಸ್ ಮಾತು. ಇಂತಹ ಸಂದರ್ಭದಲ್ಲಿ ಹಲವು ಸುಳ್ಳು ಸುದ್ದಿಗಳು ಸಹ ಓಡಾಡುತ್ತಿವೆ. ಅದರಲ್ಲಿ ಗಾಂಜಾವು ಕರೋನ ವೈರಸ್ ಅನ್ನು ಕೊಲ್ಲುತ್ತದೆ ಎಂಬುದಾಗಿದೆ.

ಸಿನಿಮಾ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಎಂಬುವವರು ಗಾಂಜಾವು ಕೊರೋನ ವೈರಸ್ ಅನ್ನು ಕೊಲ್ಲುತ್ತದೆ, ಹಾಗಾಗಿ ಅದರ ಮಾರಾಟವನ್ನು ಕಾನೂನುಬದ್ಧಗೊಳಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಇದು ಸುಳ್ಳು ಸುದ್ದಿಯಾಗಿದ್ದು, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಲಭ್ಯವಾಗಿಲ್ಲ. ಅದೇ ರೀತಿ ಡೆಟಾಲ್‌ನಿಂದ ಕೈತೊಳೆದುಕೊಂಡರೆ ಕೊರೋನ ಹರಡುವುದಿಲ್ಲ ಎಂಬ ಮತ್ತೊಂದು ಸುಳ್ಳನ್ನು ಸಹ ಹರಿಬಿಡಲಾಗಿದೆ.

5 ಕೊರೋನ ಪೀಡಿತ 20000 ಜನರನ್ನು ಕೊಲ್ಲಲು ಚೀನಾ ಕೋರ್ಟಿ ಮೆಟ್ಟಿಲೇರಿದೆಯೇ?

ಹೀಗೊಂದು ಸುದ್ದಿ ಹರಿದಾಡುತ್ತಿದೆ. ಮಧು ಪೂರ್ಣಿಮ ಕಿಶ್ವರ್ ಎಂಬ ಬಲಪಂಥೀಯ ಕಾರ್ಯಕರ್ತೆ “ಮಾನವೀಯತೆ ಇಲ್ಲದ ಕಮ್ಯುನಿಸ್ಟರು ಜನರನ್ನು ಸಾಯಿಸುತ್ತಾರೆ” ಎಂದು ಆರೋಪಿಸಿ ಎಬಿ-ಟಿಸಿ ಎಂಬುದರಲ್ಲಿ ಬಂದ ಲೇಖನ ಷೇರ್ ಮಾಡಿದ್ದಾರೆ.

ಆದರೆ ಅವರು ಹಾಕಿರುವ ಲೇಖನ ಸುಳ್ಳಾಗಿದೆ. ಮತ್ತು ಎಬಿ-ಟಿಸಿ ಎಂಬುದು ಫೇಕ್‌ನ್ಯೂಸ್ ಹರಡುವ ವೆಬ್‌ಸೈಟ್ ಆಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಭಯಂಕರ ಫೇಕ್ ನ್ಯೂಸ್ ಗಳು ಈ ತರಹದ ಫೇಕ್ ನ್ಯೂಸ್ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...