Homeಮುಖಪುಟ2023: ಹೊಸ ವರ್ಷದಲ್ಲಿ ಹೋಲಿಸ್ಟಿಕ್ ಜೀವನಶೈಲಿಗೆ ಶ್ರಮಿಸೋಣ

2023: ಹೊಸ ವರ್ಷದಲ್ಲಿ ಹೋಲಿಸ್ಟಿಕ್ ಜೀವನಶೈಲಿಗೆ ಶ್ರಮಿಸೋಣ

- Advertisement -
- Advertisement -

ಬೆಳಗಿನ ಜಾವದ ಐದು ಗಂಟೆಯ ಚುಮುಚುಮು ಚಳಿಗೆ ತಲೆಗೊಂದು ಟೋಪಿ ಹಾಕಿಕೊಂಡು ರನ್ನಿಂಗ್‌ಗೆ ಹೊರಟಾಗ, ನಮಗೆ ಅಪರಿಚಿತವೆನ್ನಬಹುದಾದ, ಉತ್ತರ ಕರ್ನಾಟಕದ ಊರಿನಲ್ಲಿ ಹೆಣ್ಣುಮಗಳೊಬ್ಬಳು ಆಗಷ್ಟೇ ಸ್ನಾನ ಮುಗಿಸಿ, ನೆತ್ತಿಯ ಮೇಲಿನ ನೀರು ಆರುವ ಮುನ್ನವೇ, ಒದ್ದೆ ಮುದ್ದೆ ಕೂದಲನ್ನು ಟವಲಿನಲ್ಲಿ ಸುತ್ತಿಕೊಂಡು, ಗುಡಿಸಿ ಸಾರಿಸಿದ ನೆಲಕ್ಕೆ ರಂಗೋಲಿಯ ಚುಕ್ಕಿಯನ್ನಿಡುವುದನ್ನು ನೋಡಿದಾಗ ಮೂಡಿದ ಮನಸ್ಸಿನ ಭಾವ; ಉಳಿದುಕೊಂಡಿದ್ದ ಟೆಂಟ್ ಹೌಸ್‌ನಿಂದ ಸೂರ್ಯ ಹುಟ್ಟುವ ಮುನ್ನವೇ ಹೊರಬಂದು ಚಳಿಗೆ ಮುಖವೊಡ್ಡಿ ಕಾಲಾಡಿಸುತ್ತಿದ್ದಾಗ, ಹಿಮಾಲಯದ ತಪ್ಪಲಿನ ಕಾರ್ಗಿಲ್‌ನ ಹೊರವಲಯದ ಜನರಿಲ್ಲದ ತಾಣದಲ್ಲಿ, ಕುರಿಕಾಯುವ ಅಲೆಮಾರಿ ಸಮುದಾಯದ ವೃದ್ಧರೊಬ್ಬರು ಹರಿಯುವ ತೊರೆಯ ಪಕ್ಕದಲ್ಲಿ ಕಲ್ಲು ಜೋಡಿಸಿ ಒಲೆ ಹೂಡಿ ಚಹಾ ಕಾಯಿಸಿ “ಸರ್‌ದೀ ಮೆ ಚಾಯ್ ಬಹೊತ್ ಸುಕೂನ್ ದೇತಾ ಹೈ ಬಿಟಿಯಾ, ಪೀವೋ” (ಚಳಿಯಲ್ಲಿ ಚಹಾ ಕುಡಿಯೋದು ಬಹಳ ನೆಮ್ಮದಿ ಕೊಡುತ್ತೆ ಮಗಳೇ, ಕುಡಿ.) ಎಂದು ಟೀ ನೀಡಿ ನಕ್ಕಾಗ ಮೂಡಿದ ಮನಸ್ಸಿನ ಭಾವ; ಇವೆರಡೂ ಭಾವಗಳಿಗೆ ಇದ್ದ ಸಾಮ್ಯತೆಯೆಂದರೆ ಅವರ ’ಬದುಕು’ ಎನ್ನಬಹುದೇನೊ.

ಬದುಕಿನ ಏರಿಳಿತಗಳ ನಡುವೆ ನಾನಾ ತರಹದ ಅನುಭವಗಳಿಗೆ, ನೋವು ನಲಿವುಗಳಿಗೆ, ಕಷ್ಟ ಕಾರ್ಪಣ್ಯಗಳಿಗೆ ತೆರೆದಿಟ್ಟುಕೊಂಡು ನಿರಂತರವಾಗಿ ಸಾಗುತ್ತಲೇ ಇರುವಾಗ ನಾನು ಕೇಳಿಕೊಳ್ಳುವ ಮುಖ್ಯ ಪ್ರಶ್ನೆ ಈ ’ಬದುಕು’ ಎಂದರೆ ಏನು? ಬದುಕುವುದು ಎಂದರೆ ಹೇಗಿರಬೇಕು? ಈ ಪ್ರಶ್ನೆಗಳನ್ನು ಬಹುಶಃ ನನ್ನಂತೆ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿಕೊಂಡಿರುತ್ತಾರೆ. ಸರಿಯುತ್ತಿರುವ ವರುಷದ ಕೊನೆಯಲ್ಲಿ ನಿಂತು ಬದಲಾಗುವ ಕ್ಯಾಲೆಂಡರಿನೊಂದಿಗೆ ಹೊಸದಿನಗಳನ್ನು ಸ್ವಾಗತಿಸುವ ಸಂದರ್ಭದಲ್ಲಿ ನಾವು ನಮಗೆ ಮತ್ತೆಮತ್ತೆ ಕೇಳಿಕೊಳ್ಳಲೇಬೇಕಾದ ಬಹುಮುಖ್ಯ ಪ್ರಶ್ನೆಗಳಿವು. ಇತ್ತೀಚಿನ ದಿನಗಳಲ್ಲಿ ಕೋವಿಡ್‌ನಂತಹ ಕಷ್ಟದ ದಿನಗಳನ್ನು ಸವೆಸಿ, ಬದುಕುಳಿದು, ಮತ್ತೆ ಬದುಕು ಕಟ್ಟಿಕೊಳ್ಳಲು ಹೋರಾಡಿರುವವರಿಂದ ಹಿಡಿದು ಬರೀ ಆರ್ಥಿಕವಾಗಿಯಷ್ಟೇ ಅಲ್ಲ ಮಾನಸಿಕವಾಗಿ, ದೈಹಿಕವಾಗಿ, ಆರೋಗ್ಯದಲ್ಲೂ ಜರ್ಜರಿತರಾಗಿ, ಬದುಕುಳಿದಿರುವುದೇ ವರವೆಂದು ಜೀವಿಸುತ್ತಿರುವವರೂ, ಈಗ ಹಿಂತಿರುಗಿ ನೋಡಿ ನಕ್ಕಿದ್ದೆಲ್ಲ, ಸಂಭ್ರಮಿಸಿದ್ದೆಲ್ಲಿ, ಎಡವಿದ್ದೆಲ್ಲಿ ಹಾಗೂ ನಿಜವಾಗಿಯೂ ಬದುಕನ್ನು ಬದುಕಿದ್ದೆಲ್ಲಿ ಎನ್ನುವುದನ್ನು ಕೇಳಿಕೊಳ್ಳಲೇಬೇಕಿದೆ.

ಈ ಸಮಗ್ರ ಬದುಕಿಗೊಂದು ಇಂಥದ್ದೇ ಎಂಬ ಒಂದು ಚೌಕಟ್ಟಿಲ್ಲದಿದ್ದರೂ ಬುದ್ಧ ಹೇಳಿದ ’ಆಸೆಯೇ ದುಃಖಕ್ಕೆ ಮೂಲ’, ಬಸವಣ್ಣನೆಂದ ’ಕಾಯಕವೇ ಕೈಲಾಸ’, ಓಶೋ ಹೇಳಿದ ’ಬದುಕನ್ನು ಜೀವಿಸು’ ಅನ್ನುವ ಮಾತುಗಳನ್ನು ಜೋಡಿಸಿ ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕಿದೆ. ಹೇಗೆ ಕಣ್ಣು, ಮೂಗು, ಕೈ, ಕಾಲು ಹಾಗೂ ದೇಹದ ಪ್ರತಿಯೊಂದು ಅಂಗಾಂಗಗಳು ಆರೋಗ್ಯವಾಗಿರುವುದು ಇಡೀ ದೇಹಕ್ಕೆ ಅವಶ್ಯಕವೋ ಹಾಗೆಯೇ ಮನಸ್ಸಿನ ಆರೋಗ್ಯಕ್ಕೆ ನಮ್ಮ ಆಲೋಚನೆಗಳು, ಅವುಗಳ ಗಟ್ಟಿತನ, ಒಳನೋಟ, ಹೊರನೋಟ, ಆಂತರಿಕ ಶುದ್ಧಿ ಎಲ್ಲವೂ ಮುಖ್ಯವಾಗುತ್ತವೆ. ಹೀಗೆ ಅವೆರಡೂ ಒಂದರ ಕೈ ಇನ್ನೊಂದು ಹಿಡಿದು, ಬೆಂಬಿಡದ ಸಂಗಾತಿಯಂತೆ ನಡೆಯಬೇಕಾಗುತ್ತದೆ. ಅಂದರೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಒಂದಕ್ಕೊಂದು ಜೊತೆಯಾಗಿ ಸಾಗಿದಾಗಲಷ್ಟೇ ಈ ಬದುಕನ್ನು ಜೀವಿಸಲು ಸಹನೀಯವಾಗುವುದು.

ಪ್ರತಿದಿನ ಮನುಷ್ಯನ ಮೆದುಳು ಸುಮಾರು 70,000 ಆಲೋಚನೆಗಳನ್ನು ಮಂಥನ ಮಾಡುತ್ತದಂತೆ. ಇವುಗಳಲ್ಲಿ ಖುಷಿ ಕೊಡುವುದೊಂದಿಷ್ಟಿದ್ದರೆ, ಚಿಂತೆಗೆ ಹಚ್ಚುವುದು ಒಂದಿಷ್ಟು. ಇವುಗಳಲ್ಲಿನ ಅನೇಕ ಆಲೋಚನೆಗಳಿಗೆ ನಾವಿರುವ ಸಾಮಾಜಿಕ ಪರಿಸರ, ಮನೆಯ ವಾತಾವರಣ, ಬದುಕುವ ರೀತಿ, ಆರ್ಥಿಕ ಪರಿಸ್ಥಿತಿ, ಆರೋಗ್ಯದ ಸುಸ್ಥಿತಿ ಎಲ್ಲವೂ ಕಾರಣವಾಗಿರುತ್ತದೆ. ಹಾಗಾಗಿ ಈ ಸಮಗ್ರ ಬದುಕಿಗೆ ನಾವು ಆಲೋಚಿಸುವ ದಿಕ್ಕು ಸರಿದಾರಿಯಲ್ಲಿರುವುದು ಬಹಳ ಮುಖ್ಯ. ಇದ್ಯಾಕೆ ಮುಖ್ಯವಾಗುತ್ತದೆಂದರೆ, ನಮ್ಮ ಆಲೋಚನೆಗಳು ನಮ್ಮ ಸುತ್ತಲಿನ ಪರಿಸರವನ್ನು ಹಾಳು ಮಾಡುವ ಅಥವಾ ಸುಂದರಗೊಳಿಸುವ ಮೊದಲು, ಅವು ನಮ್ಮೊಳಗಿಂದಲೇ ತಮ್ಮ ಕೆಲಸವನ್ನು ಶುರುಮಾಡುತ್ತವೆ.

ಇನ್ನು ಇದರೊಂದಿಗೆ ದೈಹಿಕ ಆರೋಗ್ಯವೂ ಅಷ್ಟೇ ಮುಖ್ಯವಾದ ವಿಚಾರ. ದೈಹಿಕ ಆರೋಗ್ಯವೆಂದರೆ ಅಂಗಡಿಯಲ್ಲಿ ಕಾಸಿಗೆ ಸಿಗುವ ವಸ್ತುವಲ್ಲ ಅಥವಾ ಯಾವುದೇ ವಸ್ತುವನ್ನು ಬಳಸಿ ಸಂಪೂರ್ಣ ಆರೋಗ್ಯ ಪಡೆಯಲೂ ಸಾಧ್ಯವಿಲ್ಲ. ನಾನಾಗಲೇ ಹೇಳಿದಂತೆ, ರಂಗೋಲಿಗೆ ಚುಕ್ಕಿ ಇಟ್ಟ ಹೆಣ್ಣು ಮತ್ತು ಚಳಿಗೆ ಮೈ ಒಡ್ಡಿ ಚಹಾ ಕಾಯಿಸುವ ವೃದ್ಧನಲ್ಲಿ ಕಾಣಿಸಿದ್ದು ಒಂದು ಶಿಸ್ತುಬದ್ಧ ಜೀವನ. ಸೂರ್ಯನ ಜೊತೆಜೊತೆಗೆ ಎದ್ದು ಮನಸ್ಸಿಗೆ ಮುದ ನೀಡುವ ಹಾಗೂ ಉಲ್ಲಸಿತಗೊಳಿಸುವ ಒಂದಿಷ್ಟು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದಿನದ ಸಮಯಕ್ಕೊಂದು ನಕ್ಷೆ ರೂಪಿಸಿಕೊಂಡು, ತೊಡಕುಗಳನ್ನು ಮೀರಿ ಅಂದುಕೊಂಡ ಕೆಲಸಗಳನ್ನು ಮುಗಿಸಿ, ಆರೋಗ್ಯಕರ ಗುಣಮಟ್ಟದ ಸಮಯ ಕಳೆದು, ಸಂಭ್ರಮದ ಮತ್ತು ಸಂತೃಪ್ತಿಯ ಬದುಕು ಬದುಕುವುದೇ ನಿಜವಾದ ಆರೋಗ್ಯಕರ ಜೀವನ. ಈ ತರದ ಬದುಕು ಬದುಕಲು ಶಿಸ್ತಿರಬೇಕು, ಶ್ರದ್ಧೆಯಿರಬೇಕು; ಹೀಗೇ ಬದುಕುತ್ತೇವೆನ್ನುವ ಹಠವಿರಬೇಕು. ಆಸೆ, ಆಕಾಂಕ್ಷೆ, ಖರ್ಚುವೆಚ್ಚಗಳಲ್ಲಿ ಹಿಡಿತವಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಆಲೋಚನೆಯ ದಿಕ್ಕು ಸರಿಯಾಗಿರಬೇಕು. ಮನಸ್ಸಿನ ಆರೋಗ್ಯಕ್ಕೂ ದೇಹದ ಆರೋಗ್ಯಕ್ಕೂ ನೇರವಾದ ಸಂಬಂಧವಿರುವುದರಿಂದ ಬದುಕುವ ಧಾವಂತದಲ್ಲಿ ಮನಸ್ಸಿಗೂ ದೇಹಕ್ಕೂ ಕೊಂಡಿ ತ್ರಾಸದಾಯಕವಾಗಿರಬಾರದು. ನಮ್ಮೊಳಗಿನ, ನಮ್ಮವರ ಬಗೆಗಿನ, ನಮ್ಮ ಸುತ್ತಮುತ್ತಲಿನ ಸಮಾಜದ ಬಗೆಗಿನ ನಮ್ಮ ಆಲೋಚನೆ ಪ್ರಬುದ್ಧತೆಯಿಂದ ಮತ್ತು ಕಾಳಜಿಯಿಂದ ಕೂಡಿರಬೇಕಾಗುತ್ತದೆ. ಅಂದರೆ ಒಂದು ಸ್ವಸ್ಥ ಬದುಕಿನ ಕನಸು ಕಾಣಲು ನಮ್ಮ ಸುತ್ತಲಿನ ಪರಿಸರವೂ ಸ್ವಸ್ಥವಾಗಿರುವುದು ಮುಖ್ಯ. ಅಲ್ಲಿ ದ್ವೇಷ, ಅಸೂಯೆ, ಅಸಹ್ಯ, ಅಪಹಾಸ್ಯ, ಅನಿಷ್ಟ ಆಚರಣೆ, ಅಂಧಶ್ರದ್ಧೆಗಳಿಗೆ ಜಾಗ ಕೊಡದೆ ಒಬ್ಬರಿಗೊಬ್ಬರು ಹೆಗಲಾಗಿ, ನೊಗವಾಗಿ, ಆಸರೆಯಾಗಿ ಬದುಕಲು ಯೋಗ್ಯವಾದಂತಹ ವಾತಾವರಣ ನಿರ್ಮಿಸಿಕೊಳ್ಳಬೇಕಾದದ್ದು ಬಹಳ ಮುಖ್ಯ. ಆಗಲೇ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಈ ಮಾನಸಿಕ ಆರೋಗ್ಯ ಸಿದ್ಧಿಸಿಕೊಂಡರೆ ದೈಹಿಕ ಆರೋಗ್ಯದೆಡೆಗೆ ಗಮನ ನೀಡುವುದು ಕಷ್ಟದ ಕೆಲಸವೇನಲ್ಲ. ಈ ಪ್ರೀತಿ ಒಂದು ರೀತಿಯ ಔಷಧಿ. ಪ್ರೀತಿ ಮನೆಯೊಳಗೆ ನೆಮ್ಮದಿ ನೆಲೆಸುವಂತೆ ಮಾಡುತ್ತದೆ. ಅದೇ ಪ್ರೀತಿಯನ್ನು ನಾವು ಬದುಕುವ ಪರಿಸರದೆಡೆಗೆ ಹಂಚಿದಾಗ ಆ ನೆಮ್ಮದಿಯೂ ಮನೆಯ ಹೊರಗೆ ಪಸರಿಸುತ್ತದೆ. ಹೀಗೊಂದು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಹೆಚ್ಚೇನೂ ಕಷ್ಟ ಪಡುವುದು ಬೇಕಿಲ್ಲ; ಹೆಚ್ಚುಹೆಚ್ಚು ಸ್ವಸ್ಥ ಮನಸ್ಸುಗಳ ಇದ್ದರದೇ ಸಾಕು. ಅಂತದೊಂದು ಸ್ವಸ್ಥ ಮನಸ್ಸು ಬೆಳೆಸಿಕೊಂಡು ನೋಡಲು ಸಾಧ್ಯವಾದರೆ, ಸುತ್ತಲಿನ ಕಲ್ಲು ಕೋಟೆಯೂ ನಕ್ಕಂತೆ ಭಾಸವಾಗುತ್ತದೆ.

ಅಂದಹಾಗೆ ಬರಲಿರುವ ದಿನಗಳಿಗಾಗಿ ಒಂದಿಷ್ಟು ಪ್ರತಿಜ್ಞೆಗಳನ್ನು ಕೈಗೊಳ್ಳಬೇಕಿದೆ. ಅವುಗಳಲ್ಲಿ ಮುಖ್ಯವಾದವುಗಳು ಬೆಳಿಗ್ಗೆ ಬೇಗ ಏಳುವುದು, ಒಂದಿಷ್ಟು ವ್ಯಾಯಾಮ, ಒಳ್ಳೆಯ ಊಟ, ಒಳ್ಳೆಯ ನಿದ್ದೆ, ದೇಹ ದಣಿಯುವಷ್ಟು ಕೆಲಸ, ಒಂದಿಷ್ಟು ಸಮಯ ತಮ್ಮವರಿಗಾಗಿ ನೀಡುವುದು; ಇವಿಷ್ಟೂ ದೇಹದ ಆರೋಗ್ಯಕ್ಕಾದರೆ, ಮನಸ್ಸಿನ ಆರೋಗ್ಯಕ್ಕಾಗಿ ಒಂದಿಷ್ಟು ಓದು, ಅನಗತ್ಯ ಹಾಗೂ ಕೆಟ್ಟ ’ಕಾರ್ಯಕ್ರಮಗಳು-ಮನಸ್ಥಿತಿಯ ಜನರು-ಕೆಲಸ’ಗಳಿಂದ ದೂರವಿರುವುದು, ಪ್ರೀತಿ ಕೊಡಲಾಗದಿದ್ದರೂ ದ್ವೇಷ ಹಂಚದಿರುವುದು, ಸಮುದಾಯ ಕೇಂದ್ರಿತವಲ್ಲದ ಅನಗತ್ಯವಾದ ವಾದ ವಿವಾದಗಳಿಂದ ದೂರವಿರುವುದು ಹಾಗೂ ನಮಗಾಗಿ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಒಂದು ಒಳ್ಳೆಯ ಸಮಾಜವನ್ನು ಕಟ್ಟುವ ಕೆಲಸದಲ್ಲಿ ಕಿಂಚಿತ್ತಾದರೂ ಭಾಗಿಯಾಗುವುದು; ಇವಿಷ್ಟು ನಾವು ಕೈಗೊಳ್ಳಲೇಬೇಕಾದ ಪ್ರತಿಜ್ಞೆಗಳು. ಈ ಮಾನಸಿಕ ಸಿದ್ಧತೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ನಮ್ಮ ಮುಂದಿರುವ ಅನೇಕ ಸಾಮಾಜಿಕ ಒತ್ತಡಗಳನ್ನು, ಅಂತಹ ಒತ್ತಡಗಳನ್ನು ಹೆಚ್ಚಿಸುವ ಮಾಧ್ಯಮಗಳನ್ನು ಮೀರಿ ಸ್ವಸ್ಥ ಬದುಕನ್ನು ಕಟ್ಟಕೊಳ್ಳುತ್ತಾ 2023ರಲ್ಲಿ ಮುಂದುವರಿಯೋಣ. ಅಷ್ಟಕ್ಕೂ, ಇದಕ್ಕೇ ಅಲ್ವೇ ಸಮಗ್ರ ಬದುಕು ಅಥವಾ Holistic Living ಅನ್ನುವುದು!

ಪಲ್ಲವಿ ಇಡೂರು

ಪಲ್ಲವಿ ಇಡೂರು
ಲೇಖಕಿ ಮತ್ತು ರಾಜಕೀಯ ವಿಮರ್ಶಕರು. ’ಜೊಲಾಂಟಾ’ (ಇರೇನಾ ಸ್ಲೆಂಡರ್ ಜೀವನ ಕಥನ) ಮತ್ತು ದೇಶ ವಿಭಜನೆಯ ಬಗ್ಗೆ ’ಆಗಸ್ಟ್ ಮಾಸದ ರಾಜಕೀಯ ಕಥನ’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...

‘ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ’: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.  ಮಾರ್ಚ್ 14ರಂದು, ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ...

ಮಣಿಪುರ ಹಿಂಸಾಚಾರ: ಕಾಮ್ಜಾಂಗ್‌ನಲ್ಲಿ ಇಬ್ಬರು ಕುಕಿ ಪುರುಷರು ಶವವಾಗಿ ಪತ್ತೆ; ಹೆಚ್ಚಿದ ಉದ್ವಿಗ್ನತೆ 

ಮಣಿಪುರದ ಕಾಮ್ಜಾಂಗ್ ಜಿಲ್ಲೆಯಲ್ಲಿ ಬುಧವಾರದಿಂದ ನಾಪತ್ತೆಯಾಗಿದ್ದ ಇಬ್ಬರು ಕುಕಿ ಪುರುಷರು ಗುರುವಾರ ಥವಾಯ್ ಕುಕಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರಿಂದ ಉದ್ವಿಗ್ನತೆ ಹೆಚ್ಚಾಗಿದೆ. ಜಿಲ್ಲೆಯ ಥಾವಾಯಿ ಕುಕಿ ಗ್ರಾಮದ 42 ವರ್ಷದ ಥೇಂಗಿನ್...

ಉತ್ತರ ಪ್ರದೇಶ | ಮುಸ್ಲಿಮರೊಂದಿಗಿನ ಶಾಂತಿ ಸಭೆಯಲ್ಲಿ ‘ಇರಾನ್‌ಗೆ ಹೋಗಿ’ ಎಂದ ಪೊಲೀಸ್‌ ಅಧಿಕಾರಿ : ತೀವ್ರ ಆಕ್ರೋಶ

ಉತ್ತರ ಪ್ರದೇಶದಲ್ಲಿ ಈದುಲ್ ಫಿತರ್ (ರಂಝಾನ್) ಹಬ್ಬಕ್ಕೆ ಪೂರ್ವಭಾವಿಯಾಗಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಭಾಲ್ ಜಿಲ್ಲೆಯ ಅಸ್ಮೋಲಿ ಪ್ರದೇಶದಲ್ಲಿ ರಂಝಾನ್ ತಿಂಗಳ ಕೊನೆಯ...

ಪಶ್ಚಿಮ ಏಷ್ಯಾ ಸಂಘರ್ಷ: ಲೆಬನಾನ್‌ನಲ್ಲಿ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ದಾಳಿ: ವೈದ್ಯರು, ದಾದಿಯರು ಸೇರಿ 12 ಮಂದಿ ಸಾವು

ದಕ್ಷಿಣ ಲೆಬನಾನ್‌ನಲ್ಲಿರುವ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 12 ವೈದ್ಯಕೀಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಲೆಬನಾನಿನ ಸಾರ್ವಜನಿಕ ಆರೋಗ್ಯ ಸಚಿವಾಲಯ ವರದಿ ಮಾಡಿದೆ.  ಲೆಬನಾನ್‌ನಾದ್ಯಂತ ಇಸ್ರೇಲಿ ದಾಳಿಯಲ್ಲಿ ಈವರೆಗೂ 103 ಮಕ್ಕಳು...

ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಪರ ತೀರ್ಮಾನಕ್ಕೆ ಎಲ್ಲರೂ ಸಹಕರಿಸಿ: ಒಳಮೀಸಲಾತಿ ಹೋರಾಟ ಸಮಿತಿ ಮನವಿ

ಬೆಂಗಳೂರು: ಒಳಮೀಸಲಾತಿ ಜಾರಿ ಮಾಡುವ ಪ್ರಕ್ರಿಯೆಯು ಕೊನೆಯ ಹಂತಕ್ಕೆ ತಲುಪಿದ್ದು, ಇದನ್ನು ಸುಲಲಿತವಾಗಿ ಬಗೆಹರಿಸಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಆಗ್ರಹಿಸಿ ಇಂದು (14 ಮಾರ್ಚ್)‌ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಒಳಮೀಸಲಾತಿ ಹೋರಾಟಗಾರರು...

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ; ರೋಸ್ಟರ್ ಮೀಸಲು ಕ್ರಮ ಉಲ್ಲಂಘನೆ ಆರೋಪ: ನ್ಯಾಯಾಂಗ ತನಿಖೆಗೆ ಆಗ್ರಹ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿರುವ Central University of Karnataka ದಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಮೀಸಲು ಕ್ರಮ ಉಲ್ಲಂಘನೆ ಹಾಗೂ ಅಕ್ರಮ ನೇಮಕಾತಿಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ...

ಸಂಭಾಲ್ | ಮಸೀದಿಯಲ್ಲಿ ನಮಾಝ್ ಮಾಡುವವರ ಸಂಖ್ಯೆ ಮಿತಿಗೊಳಿಸಲು ಸಾಧ್ಯವಿಲ್ಲ; ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ರಾಜೀನಾಮೆ ನೀಡಿ: ಅಧಿಕಾರಿಗಳಿಗೆ ಅಲಹಾಬಾದ್ ಹೈಕೋರ್ಟ್ ತರಾಟೆ

ಸಂಭಾಲ್ ಜಿಲ್ಲೆಯ ಮಸೀದಿಯೊಂದರಲ್ಲಿ ರಂಝಾನ್ ಸಮಯದಲ್ಲಿ ನಮಾಝ್ ಮಾಡುವವರ ಸಂಖ್ಯೆಯನ್ನು ಮಿತಿಗೊಳಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದಿದೆ. ಫೆಬ್ರವರಿ 27ರಂದು...

ಇರಾನ್ ‘ಭಯೋತ್ಪಾದಕ ಆಡಳಿತ’ ಎಂದು ಕರೆದ NDTV ಹಿರಿಯ ಸಂಪಾದಕ: ವ್ಯಾಪಕ ಟೀಕೆಯ ನಂತರ ಪೋಸ್ಟ್ ಡಿಲಿಟ್ 

ಹೊಸದಿಲ್ಲಿ: ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತದ ಮುಖ್ಯ ಮಾಧ್ಯಮ ಸಂಸ್ಥೆ NDTV ಹಿರಿಯ ಸಂಪಾದಕ ಆದಿತ್ಯ ರಾಜ್ ಕೌಲ್ ಅವರು ಇರಾನ್ “ಭಯೋತ್ಪಾದಕ...

ಎಲ್‌ಪಿಜಿ ಬಿಕ್ಕಟ್ಟು: ಹೋಟೆಲ್ ಮಾಲೀಕರಿಗೆ ವಿದ್ಯುತ್ ಒಲೆಗಳನ್ನು ಬಳಸಲು ಸೂಚಿಸಿದ ಸಚಿವ ಕೆ.ಎಚ್. ​​ಮುನಿಯಪ್ಪ

ಬೆಂಗಳೂರು: ಪಶ್ಚಿಮ ಏಷ್ಯಾ ಸಂಘರ್ಷದ ಪ್ರಭಾವ ಭಾರತೀಯರ ಅಡುಗೆ ಮನೆಯನ್ನು ಪ್ರವೇಶಿಸಿದ್ದು, ಎಲ್‌ಪಿಜಿ  ಬಿಕ್ಕಟ್ಟಿನಿಂದ ನಾಗರೀಕರು, ಸೇರಿದಂತೆ ಹೋಟೆಲ್ ಉಧ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ನಡುವೆ ಯುದ್ಧದ ಪರಿಣಾಮ ಭಾರತದ ಮೇಲೆ...