Homeಮುಖಪುಟ2023: ಹೊಸ ವರ್ಷದಲ್ಲಿ ಹೋಲಿಸ್ಟಿಕ್ ಜೀವನಶೈಲಿಗೆ ಶ್ರಮಿಸೋಣ

2023: ಹೊಸ ವರ್ಷದಲ್ಲಿ ಹೋಲಿಸ್ಟಿಕ್ ಜೀವನಶೈಲಿಗೆ ಶ್ರಮಿಸೋಣ

- Advertisement -
- Advertisement -

ಬೆಳಗಿನ ಜಾವದ ಐದು ಗಂಟೆಯ ಚುಮುಚುಮು ಚಳಿಗೆ ತಲೆಗೊಂದು ಟೋಪಿ ಹಾಕಿಕೊಂಡು ರನ್ನಿಂಗ್‌ಗೆ ಹೊರಟಾಗ, ನಮಗೆ ಅಪರಿಚಿತವೆನ್ನಬಹುದಾದ, ಉತ್ತರ ಕರ್ನಾಟಕದ ಊರಿನಲ್ಲಿ ಹೆಣ್ಣುಮಗಳೊಬ್ಬಳು ಆಗಷ್ಟೇ ಸ್ನಾನ ಮುಗಿಸಿ, ನೆತ್ತಿಯ ಮೇಲಿನ ನೀರು ಆರುವ ಮುನ್ನವೇ, ಒದ್ದೆ ಮುದ್ದೆ ಕೂದಲನ್ನು ಟವಲಿನಲ್ಲಿ ಸುತ್ತಿಕೊಂಡು, ಗುಡಿಸಿ ಸಾರಿಸಿದ ನೆಲಕ್ಕೆ ರಂಗೋಲಿಯ ಚುಕ್ಕಿಯನ್ನಿಡುವುದನ್ನು ನೋಡಿದಾಗ ಮೂಡಿದ ಮನಸ್ಸಿನ ಭಾವ; ಉಳಿದುಕೊಂಡಿದ್ದ ಟೆಂಟ್ ಹೌಸ್‌ನಿಂದ ಸೂರ್ಯ ಹುಟ್ಟುವ ಮುನ್ನವೇ ಹೊರಬಂದು ಚಳಿಗೆ ಮುಖವೊಡ್ಡಿ ಕಾಲಾಡಿಸುತ್ತಿದ್ದಾಗ, ಹಿಮಾಲಯದ ತಪ್ಪಲಿನ ಕಾರ್ಗಿಲ್‌ನ ಹೊರವಲಯದ ಜನರಿಲ್ಲದ ತಾಣದಲ್ಲಿ, ಕುರಿಕಾಯುವ ಅಲೆಮಾರಿ ಸಮುದಾಯದ ವೃದ್ಧರೊಬ್ಬರು ಹರಿಯುವ ತೊರೆಯ ಪಕ್ಕದಲ್ಲಿ ಕಲ್ಲು ಜೋಡಿಸಿ ಒಲೆ ಹೂಡಿ ಚಹಾ ಕಾಯಿಸಿ “ಸರ್‌ದೀ ಮೆ ಚಾಯ್ ಬಹೊತ್ ಸುಕೂನ್ ದೇತಾ ಹೈ ಬಿಟಿಯಾ, ಪೀವೋ” (ಚಳಿಯಲ್ಲಿ ಚಹಾ ಕುಡಿಯೋದು ಬಹಳ ನೆಮ್ಮದಿ ಕೊಡುತ್ತೆ ಮಗಳೇ, ಕುಡಿ.) ಎಂದು ಟೀ ನೀಡಿ ನಕ್ಕಾಗ ಮೂಡಿದ ಮನಸ್ಸಿನ ಭಾವ; ಇವೆರಡೂ ಭಾವಗಳಿಗೆ ಇದ್ದ ಸಾಮ್ಯತೆಯೆಂದರೆ ಅವರ ’ಬದುಕು’ ಎನ್ನಬಹುದೇನೊ.

ಬದುಕಿನ ಏರಿಳಿತಗಳ ನಡುವೆ ನಾನಾ ತರಹದ ಅನುಭವಗಳಿಗೆ, ನೋವು ನಲಿವುಗಳಿಗೆ, ಕಷ್ಟ ಕಾರ್ಪಣ್ಯಗಳಿಗೆ ತೆರೆದಿಟ್ಟುಕೊಂಡು ನಿರಂತರವಾಗಿ ಸಾಗುತ್ತಲೇ ಇರುವಾಗ ನಾನು ಕೇಳಿಕೊಳ್ಳುವ ಮುಖ್ಯ ಪ್ರಶ್ನೆ ಈ ’ಬದುಕು’ ಎಂದರೆ ಏನು? ಬದುಕುವುದು ಎಂದರೆ ಹೇಗಿರಬೇಕು? ಈ ಪ್ರಶ್ನೆಗಳನ್ನು ಬಹುಶಃ ನನ್ನಂತೆ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿಕೊಂಡಿರುತ್ತಾರೆ. ಸರಿಯುತ್ತಿರುವ ವರುಷದ ಕೊನೆಯಲ್ಲಿ ನಿಂತು ಬದಲಾಗುವ ಕ್ಯಾಲೆಂಡರಿನೊಂದಿಗೆ ಹೊಸದಿನಗಳನ್ನು ಸ್ವಾಗತಿಸುವ ಸಂದರ್ಭದಲ್ಲಿ ನಾವು ನಮಗೆ ಮತ್ತೆಮತ್ತೆ ಕೇಳಿಕೊಳ್ಳಲೇಬೇಕಾದ ಬಹುಮುಖ್ಯ ಪ್ರಶ್ನೆಗಳಿವು. ಇತ್ತೀಚಿನ ದಿನಗಳಲ್ಲಿ ಕೋವಿಡ್‌ನಂತಹ ಕಷ್ಟದ ದಿನಗಳನ್ನು ಸವೆಸಿ, ಬದುಕುಳಿದು, ಮತ್ತೆ ಬದುಕು ಕಟ್ಟಿಕೊಳ್ಳಲು ಹೋರಾಡಿರುವವರಿಂದ ಹಿಡಿದು ಬರೀ ಆರ್ಥಿಕವಾಗಿಯಷ್ಟೇ ಅಲ್ಲ ಮಾನಸಿಕವಾಗಿ, ದೈಹಿಕವಾಗಿ, ಆರೋಗ್ಯದಲ್ಲೂ ಜರ್ಜರಿತರಾಗಿ, ಬದುಕುಳಿದಿರುವುದೇ ವರವೆಂದು ಜೀವಿಸುತ್ತಿರುವವರೂ, ಈಗ ಹಿಂತಿರುಗಿ ನೋಡಿ ನಕ್ಕಿದ್ದೆಲ್ಲ, ಸಂಭ್ರಮಿಸಿದ್ದೆಲ್ಲಿ, ಎಡವಿದ್ದೆಲ್ಲಿ ಹಾಗೂ ನಿಜವಾಗಿಯೂ ಬದುಕನ್ನು ಬದುಕಿದ್ದೆಲ್ಲಿ ಎನ್ನುವುದನ್ನು ಕೇಳಿಕೊಳ್ಳಲೇಬೇಕಿದೆ.

ಈ ಸಮಗ್ರ ಬದುಕಿಗೊಂದು ಇಂಥದ್ದೇ ಎಂಬ ಒಂದು ಚೌಕಟ್ಟಿಲ್ಲದಿದ್ದರೂ ಬುದ್ಧ ಹೇಳಿದ ’ಆಸೆಯೇ ದುಃಖಕ್ಕೆ ಮೂಲ’, ಬಸವಣ್ಣನೆಂದ ’ಕಾಯಕವೇ ಕೈಲಾಸ’, ಓಶೋ ಹೇಳಿದ ’ಬದುಕನ್ನು ಜೀವಿಸು’ ಅನ್ನುವ ಮಾತುಗಳನ್ನು ಜೋಡಿಸಿ ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕಿದೆ. ಹೇಗೆ ಕಣ್ಣು, ಮೂಗು, ಕೈ, ಕಾಲು ಹಾಗೂ ದೇಹದ ಪ್ರತಿಯೊಂದು ಅಂಗಾಂಗಗಳು ಆರೋಗ್ಯವಾಗಿರುವುದು ಇಡೀ ದೇಹಕ್ಕೆ ಅವಶ್ಯಕವೋ ಹಾಗೆಯೇ ಮನಸ್ಸಿನ ಆರೋಗ್ಯಕ್ಕೆ ನಮ್ಮ ಆಲೋಚನೆಗಳು, ಅವುಗಳ ಗಟ್ಟಿತನ, ಒಳನೋಟ, ಹೊರನೋಟ, ಆಂತರಿಕ ಶುದ್ಧಿ ಎಲ್ಲವೂ ಮುಖ್ಯವಾಗುತ್ತವೆ. ಹೀಗೆ ಅವೆರಡೂ ಒಂದರ ಕೈ ಇನ್ನೊಂದು ಹಿಡಿದು, ಬೆಂಬಿಡದ ಸಂಗಾತಿಯಂತೆ ನಡೆಯಬೇಕಾಗುತ್ತದೆ. ಅಂದರೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಒಂದಕ್ಕೊಂದು ಜೊತೆಯಾಗಿ ಸಾಗಿದಾಗಲಷ್ಟೇ ಈ ಬದುಕನ್ನು ಜೀವಿಸಲು ಸಹನೀಯವಾಗುವುದು.

ಪ್ರತಿದಿನ ಮನುಷ್ಯನ ಮೆದುಳು ಸುಮಾರು 70,000 ಆಲೋಚನೆಗಳನ್ನು ಮಂಥನ ಮಾಡುತ್ತದಂತೆ. ಇವುಗಳಲ್ಲಿ ಖುಷಿ ಕೊಡುವುದೊಂದಿಷ್ಟಿದ್ದರೆ, ಚಿಂತೆಗೆ ಹಚ್ಚುವುದು ಒಂದಿಷ್ಟು. ಇವುಗಳಲ್ಲಿನ ಅನೇಕ ಆಲೋಚನೆಗಳಿಗೆ ನಾವಿರುವ ಸಾಮಾಜಿಕ ಪರಿಸರ, ಮನೆಯ ವಾತಾವರಣ, ಬದುಕುವ ರೀತಿ, ಆರ್ಥಿಕ ಪರಿಸ್ಥಿತಿ, ಆರೋಗ್ಯದ ಸುಸ್ಥಿತಿ ಎಲ್ಲವೂ ಕಾರಣವಾಗಿರುತ್ತದೆ. ಹಾಗಾಗಿ ಈ ಸಮಗ್ರ ಬದುಕಿಗೆ ನಾವು ಆಲೋಚಿಸುವ ದಿಕ್ಕು ಸರಿದಾರಿಯಲ್ಲಿರುವುದು ಬಹಳ ಮುಖ್ಯ. ಇದ್ಯಾಕೆ ಮುಖ್ಯವಾಗುತ್ತದೆಂದರೆ, ನಮ್ಮ ಆಲೋಚನೆಗಳು ನಮ್ಮ ಸುತ್ತಲಿನ ಪರಿಸರವನ್ನು ಹಾಳು ಮಾಡುವ ಅಥವಾ ಸುಂದರಗೊಳಿಸುವ ಮೊದಲು, ಅವು ನಮ್ಮೊಳಗಿಂದಲೇ ತಮ್ಮ ಕೆಲಸವನ್ನು ಶುರುಮಾಡುತ್ತವೆ.

ಇನ್ನು ಇದರೊಂದಿಗೆ ದೈಹಿಕ ಆರೋಗ್ಯವೂ ಅಷ್ಟೇ ಮುಖ್ಯವಾದ ವಿಚಾರ. ದೈಹಿಕ ಆರೋಗ್ಯವೆಂದರೆ ಅಂಗಡಿಯಲ್ಲಿ ಕಾಸಿಗೆ ಸಿಗುವ ವಸ್ತುವಲ್ಲ ಅಥವಾ ಯಾವುದೇ ವಸ್ತುವನ್ನು ಬಳಸಿ ಸಂಪೂರ್ಣ ಆರೋಗ್ಯ ಪಡೆಯಲೂ ಸಾಧ್ಯವಿಲ್ಲ. ನಾನಾಗಲೇ ಹೇಳಿದಂತೆ, ರಂಗೋಲಿಗೆ ಚುಕ್ಕಿ ಇಟ್ಟ ಹೆಣ್ಣು ಮತ್ತು ಚಳಿಗೆ ಮೈ ಒಡ್ಡಿ ಚಹಾ ಕಾಯಿಸುವ ವೃದ್ಧನಲ್ಲಿ ಕಾಣಿಸಿದ್ದು ಒಂದು ಶಿಸ್ತುಬದ್ಧ ಜೀವನ. ಸೂರ್ಯನ ಜೊತೆಜೊತೆಗೆ ಎದ್ದು ಮನಸ್ಸಿಗೆ ಮುದ ನೀಡುವ ಹಾಗೂ ಉಲ್ಲಸಿತಗೊಳಿಸುವ ಒಂದಿಷ್ಟು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದಿನದ ಸಮಯಕ್ಕೊಂದು ನಕ್ಷೆ ರೂಪಿಸಿಕೊಂಡು, ತೊಡಕುಗಳನ್ನು ಮೀರಿ ಅಂದುಕೊಂಡ ಕೆಲಸಗಳನ್ನು ಮುಗಿಸಿ, ಆರೋಗ್ಯಕರ ಗುಣಮಟ್ಟದ ಸಮಯ ಕಳೆದು, ಸಂಭ್ರಮದ ಮತ್ತು ಸಂತೃಪ್ತಿಯ ಬದುಕು ಬದುಕುವುದೇ ನಿಜವಾದ ಆರೋಗ್ಯಕರ ಜೀವನ. ಈ ತರದ ಬದುಕು ಬದುಕಲು ಶಿಸ್ತಿರಬೇಕು, ಶ್ರದ್ಧೆಯಿರಬೇಕು; ಹೀಗೇ ಬದುಕುತ್ತೇವೆನ್ನುವ ಹಠವಿರಬೇಕು. ಆಸೆ, ಆಕಾಂಕ್ಷೆ, ಖರ್ಚುವೆಚ್ಚಗಳಲ್ಲಿ ಹಿಡಿತವಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಆಲೋಚನೆಯ ದಿಕ್ಕು ಸರಿಯಾಗಿರಬೇಕು. ಮನಸ್ಸಿನ ಆರೋಗ್ಯಕ್ಕೂ ದೇಹದ ಆರೋಗ್ಯಕ್ಕೂ ನೇರವಾದ ಸಂಬಂಧವಿರುವುದರಿಂದ ಬದುಕುವ ಧಾವಂತದಲ್ಲಿ ಮನಸ್ಸಿಗೂ ದೇಹಕ್ಕೂ ಕೊಂಡಿ ತ್ರಾಸದಾಯಕವಾಗಿರಬಾರದು. ನಮ್ಮೊಳಗಿನ, ನಮ್ಮವರ ಬಗೆಗಿನ, ನಮ್ಮ ಸುತ್ತಮುತ್ತಲಿನ ಸಮಾಜದ ಬಗೆಗಿನ ನಮ್ಮ ಆಲೋಚನೆ ಪ್ರಬುದ್ಧತೆಯಿಂದ ಮತ್ತು ಕಾಳಜಿಯಿಂದ ಕೂಡಿರಬೇಕಾಗುತ್ತದೆ. ಅಂದರೆ ಒಂದು ಸ್ವಸ್ಥ ಬದುಕಿನ ಕನಸು ಕಾಣಲು ನಮ್ಮ ಸುತ್ತಲಿನ ಪರಿಸರವೂ ಸ್ವಸ್ಥವಾಗಿರುವುದು ಮುಖ್ಯ. ಅಲ್ಲಿ ದ್ವೇಷ, ಅಸೂಯೆ, ಅಸಹ್ಯ, ಅಪಹಾಸ್ಯ, ಅನಿಷ್ಟ ಆಚರಣೆ, ಅಂಧಶ್ರದ್ಧೆಗಳಿಗೆ ಜಾಗ ಕೊಡದೆ ಒಬ್ಬರಿಗೊಬ್ಬರು ಹೆಗಲಾಗಿ, ನೊಗವಾಗಿ, ಆಸರೆಯಾಗಿ ಬದುಕಲು ಯೋಗ್ಯವಾದಂತಹ ವಾತಾವರಣ ನಿರ್ಮಿಸಿಕೊಳ್ಳಬೇಕಾದದ್ದು ಬಹಳ ಮುಖ್ಯ. ಆಗಲೇ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಈ ಮಾನಸಿಕ ಆರೋಗ್ಯ ಸಿದ್ಧಿಸಿಕೊಂಡರೆ ದೈಹಿಕ ಆರೋಗ್ಯದೆಡೆಗೆ ಗಮನ ನೀಡುವುದು ಕಷ್ಟದ ಕೆಲಸವೇನಲ್ಲ. ಈ ಪ್ರೀತಿ ಒಂದು ರೀತಿಯ ಔಷಧಿ. ಪ್ರೀತಿ ಮನೆಯೊಳಗೆ ನೆಮ್ಮದಿ ನೆಲೆಸುವಂತೆ ಮಾಡುತ್ತದೆ. ಅದೇ ಪ್ರೀತಿಯನ್ನು ನಾವು ಬದುಕುವ ಪರಿಸರದೆಡೆಗೆ ಹಂಚಿದಾಗ ಆ ನೆಮ್ಮದಿಯೂ ಮನೆಯ ಹೊರಗೆ ಪಸರಿಸುತ್ತದೆ. ಹೀಗೊಂದು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಹೆಚ್ಚೇನೂ ಕಷ್ಟ ಪಡುವುದು ಬೇಕಿಲ್ಲ; ಹೆಚ್ಚುಹೆಚ್ಚು ಸ್ವಸ್ಥ ಮನಸ್ಸುಗಳ ಇದ್ದರದೇ ಸಾಕು. ಅಂತದೊಂದು ಸ್ವಸ್ಥ ಮನಸ್ಸು ಬೆಳೆಸಿಕೊಂಡು ನೋಡಲು ಸಾಧ್ಯವಾದರೆ, ಸುತ್ತಲಿನ ಕಲ್ಲು ಕೋಟೆಯೂ ನಕ್ಕಂತೆ ಭಾಸವಾಗುತ್ತದೆ.

ಅಂದಹಾಗೆ ಬರಲಿರುವ ದಿನಗಳಿಗಾಗಿ ಒಂದಿಷ್ಟು ಪ್ರತಿಜ್ಞೆಗಳನ್ನು ಕೈಗೊಳ್ಳಬೇಕಿದೆ. ಅವುಗಳಲ್ಲಿ ಮುಖ್ಯವಾದವುಗಳು ಬೆಳಿಗ್ಗೆ ಬೇಗ ಏಳುವುದು, ಒಂದಿಷ್ಟು ವ್ಯಾಯಾಮ, ಒಳ್ಳೆಯ ಊಟ, ಒಳ್ಳೆಯ ನಿದ್ದೆ, ದೇಹ ದಣಿಯುವಷ್ಟು ಕೆಲಸ, ಒಂದಿಷ್ಟು ಸಮಯ ತಮ್ಮವರಿಗಾಗಿ ನೀಡುವುದು; ಇವಿಷ್ಟೂ ದೇಹದ ಆರೋಗ್ಯಕ್ಕಾದರೆ, ಮನಸ್ಸಿನ ಆರೋಗ್ಯಕ್ಕಾಗಿ ಒಂದಿಷ್ಟು ಓದು, ಅನಗತ್ಯ ಹಾಗೂ ಕೆಟ್ಟ ’ಕಾರ್ಯಕ್ರಮಗಳು-ಮನಸ್ಥಿತಿಯ ಜನರು-ಕೆಲಸ’ಗಳಿಂದ ದೂರವಿರುವುದು, ಪ್ರೀತಿ ಕೊಡಲಾಗದಿದ್ದರೂ ದ್ವೇಷ ಹಂಚದಿರುವುದು, ಸಮುದಾಯ ಕೇಂದ್ರಿತವಲ್ಲದ ಅನಗತ್ಯವಾದ ವಾದ ವಿವಾದಗಳಿಂದ ದೂರವಿರುವುದು ಹಾಗೂ ನಮಗಾಗಿ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಒಂದು ಒಳ್ಳೆಯ ಸಮಾಜವನ್ನು ಕಟ್ಟುವ ಕೆಲಸದಲ್ಲಿ ಕಿಂಚಿತ್ತಾದರೂ ಭಾಗಿಯಾಗುವುದು; ಇವಿಷ್ಟು ನಾವು ಕೈಗೊಳ್ಳಲೇಬೇಕಾದ ಪ್ರತಿಜ್ಞೆಗಳು. ಈ ಮಾನಸಿಕ ಸಿದ್ಧತೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ನಮ್ಮ ಮುಂದಿರುವ ಅನೇಕ ಸಾಮಾಜಿಕ ಒತ್ತಡಗಳನ್ನು, ಅಂತಹ ಒತ್ತಡಗಳನ್ನು ಹೆಚ್ಚಿಸುವ ಮಾಧ್ಯಮಗಳನ್ನು ಮೀರಿ ಸ್ವಸ್ಥ ಬದುಕನ್ನು ಕಟ್ಟಕೊಳ್ಳುತ್ತಾ 2023ರಲ್ಲಿ ಮುಂದುವರಿಯೋಣ. ಅಷ್ಟಕ್ಕೂ, ಇದಕ್ಕೇ ಅಲ್ವೇ ಸಮಗ್ರ ಬದುಕು ಅಥವಾ Holistic Living ಅನ್ನುವುದು!

ಪಲ್ಲವಿ ಇಡೂರು

ಪಲ್ಲವಿ ಇಡೂರು
ಲೇಖಕಿ ಮತ್ತು ರಾಜಕೀಯ ವಿಮರ್ಶಕರು. ’ಜೊಲಾಂಟಾ’ (ಇರೇನಾ ಸ್ಲೆಂಡರ್ ಜೀವನ ಕಥನ) ಮತ್ತು ದೇಶ ವಿಭಜನೆಯ ಬಗ್ಗೆ ’ಆಗಸ್ಟ್ ಮಾಸದ ರಾಜಕೀಯ ಕಥನ’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...