Homeಮುಖಪುಟಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ

ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ

ರಣವೀರ್ ಸಿಂಗ್ ಎಂಬ 29ರ ಯುವಕ ತನ್ನೂರಿಗೆ ನಡೆಯುತ್ತಲೇ ಪ್ರಾಣಬಿಟ್ಟ ಕಣ್ಣೀರ ಕಥೆಯನ್ನು ಕಣ್ಮುಂದೆ ಕಟ್ಟಿಕೊಡುವ ಲೇಖನ

- Advertisement -
- Advertisement -

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವೇಡ್ಕರ್ ಕಳೆದ ದಿನ ತನ್ನ ಅಧಿಕೃತ ನಿವಾಸದಲ್ಲಿ ‘ರಾಮಾಯಣ’ ಧಾರವಾಹಿ ನೋಡಿ ಆನಂದಿಸುತ್ತಿದ್ದಾಗಲೇ, ರಣವೀರ್ ಸಿಂಗ್ ಎಂಬ ಯುವಕ ದೆಹಲಿಯ ಸರಹದ್ದು ದಾಟಿಯಾಗಿರಬೇಕು. ರಾಷ್ಟ್ರದ ರಾಜಧಾನಿಯಲ್ಲಿ ದಿನಗೂಲಿಗಾಗಿ ರೆಸ್ಟೋರೆಂಟ್‌ಗಳಲ್ಲಿ ಡೆಲಿವರಿ ಏಜೆಂಟ್ ಕೆಲಸ ಮಾಡುವ ಒಬ್ಬ ಸಾಮಾನ್ಯ ವ್ಯಕಿಯಾಗಿದ್ದ ರಣವೀರ್.

ಕೋವಿಡ್-19ರ ಹಿನ್ನೆಲೆಯಲ್ಲಿ, ಪ್ರತ್ಯೇಕವಾದ ಪೂರ್ವ ತಯಾರಿಗಳಿಲ್ಲದೆ ಮಾರ್ಚ್ 24 ಕ್ಕೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರು ವಾರಗಳ ಲಾಕ್‌ಡೌನ್ ಘೋಷಿಸಿದಾಗ, ಬೀದಿಗೆ ಬಿದ್ದ ಸಾವಿರಾರು ಜನರ ಪೈಕಿ ಅವನೂ ಒಬ್ಬ.

ಅತ್ತ ದುಡಿಮೆಯೂ, ಇತ್ತ ಆಹಾರವೂ ಇಲ್ಲದೆ ದೆಹಲಿಯಲ್ಲಿ ಕೂಡುವುದು ಕಷ್ಟಸಾಧ್ಯವೆಂಬುದನ್ನು ಅರಿತ ರಣವೀರ್, ಮಧ್ಯ ಪ್ರದೇಶದ ಮೊರೋನಾ ಜಿಲ್ಲೆಯ ತನ್ನ ಹುಟ್ಟೂರಿಗೆ ಹಿಂತಿರುಗಲು ತೀರ್ಮಾನಿಸಿದ. 200 ಕಿ.ಮೀ.ಗಿಂತಲೂ ಹೆಚ್ಚು ದೂರದ ಪ್ರದೇಶವದು. ಇತರ ಸಂಪರ್ಕ ವ್ಯವಸ್ಥೆಗಳಿಲ್ಲದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಕಾಲ್ನಡಿಗೆಯಲ್ಲೇ ಸಾಗಬೇಕಿತ್ತು. ಹಾಗೇ ಮರುದಿನ ರಾತ್ರಿ ಹೊತ್ತಲ್ಲಿ, ಕುಡಿಯಲು ನೀರೂ ಕೂಡಾ ಜೊತೆಗಿಲ್ಲದೆ ನಡೆಯಲು ಆರಂಭಿಸಿದ.

ಅದಾಗಲೇ ರಣವೀರ್ ಸುಮಾರು 100 ಕಿ.ಮೀ ದೂರವನ್ನು ಬರಿಗಾಲಲ್ಲೇ ಕ್ರಮಿಸಿಯಾಗಿತ್ತು. ಇದರ ನಡುವೆ ಯಾರೋ ದಾರಿ ನಡುವೆ ಸಿಕ್ಕ ವ್ಯಾಪಾರಿಯೋರ್ವರು ಕೊಟ್ಟ ಚಹಾ ಮತ್ತು ಬಿಸ್ಕತ್ತು ಮಾತ್ರವಾಗಿತ್ತು ದಾರಿಯುದ್ದಕ್ಕೂ ಆಹಾರ. ನಡೆದಾಡಿ ಬಳಲಿದ ಆ 29ರ ಹರೆಯದ ಯುವಕ, ತನ್ನ ಗ್ರಾಮ ತಲುಪುವುದಕ್ಕಿಂತಲೂ ಬಹಳ ದೂರದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದನೆಂದಾಗಿತ್ತು ವರದಿ.

ನರೇಂದ್ರ ಮೋದಿಯ ಎಂಟು ಗಂಟೆಯ ಘೋಷಣೆಯಿಂದ ಉಂಟಾದ ಆಘಾತದಿಂದಾಗಿ, ಇದರಂತೆಯೇ ಲಕ್ಷಾಂತರ ರಣವೀರ್‌ಗಳು ‘ಕಾಲ್ನಡಿಗೆ’ ಆರಂಭಿಸಿದ ದೃಶ್ಯಗಳನ್ನು ಎಲ್ಲೆಡೆ ಕಂಡಿದ್ದೇವೆ. ನೆರೆಯ ರಾಜ್ಯಗಳಿಂದ ಕೆಲಸ ಹುಡುಕುತ್ತಾ ದೆಹಲಿ ತಲುಪಿದ್ದ ಕಾರ್ಮಿಕರು ಲಾಕ್‌ಡೌನ್‌ ಕಾರಣದಿಂದಾಗಿ ಅವರ ಕುಟುಂಬಗಳೊಂದಿಗೆ ಸಾಲು ಸಾಲಾಗಿ ಗುಳೆ ಹೊರಟಿರುವ ದಯನೀಯ ದೃಶ್ಯಗಳು ದೇಶಕ್ಕೆ ಕೋವಿಡ್ ವೈರಾಣುವಿನಷ್ಟೇ ಭೀತಿಜನಕವಾದುದು.

ದೆಹಲಿ- ಯು.ಪಿ ಗಡಿಭಾಗದ ಗಾಜಿಯಾಬಾದ್‌ನಲ್ಲೂ ಅಂತೆಯೇ ಇನ್ನಿತರ ಪ್ರದೇಶಗಳಲ್ಲೂ ಊರು ಸೇರಲು ಲಾಕ್‌ಡೌನ್ ಉಲ್ಲಂಘಿಸಿ, ಬಸ್ಸಿಗಾಗಿ ಕಾಯುತ್ತಿರುವ ಈ ಜನರ ಗುಂಪು, ಎಲ್ಲಾ ಗಡಿಗಳಲ್ಲೂ ಇದೀಗ ‘ನಿರಾಶ್ರಿತ ವಲಸಿಗರು’  ಎಂಬ ವಿಶೇಷ ಮನ್ನಣೆ ಪಡೆದುಕೊಂಡಿದ್ದಾರೆ.

ಉತ್ತರ ಆಫ್ರಿಕಾದ ಹಾಗೂ ಪಶ್ಚಿಮ ಏಷ್ಯಾದ ಸಂಘರ್ಷ ಭೂಮಿಯಿಂದ ಮುಕ್ತಿ ಹೊಂದಿ, ಯುರೋಪಿಯನ್ ಯೂನಿಯನ್ನಿನ ಪ್ರವೇಶ ಕವಾಟಗಳಾದ ಮಾಸಿಡೋನಿಯ ಹಾಗೂ ಇತರೆಡೆಗಳಲ್ಲಿ ಅಭಯ ಯಾಚಿಸುತ್ತಾ ಕಾದು ನಿಂತಿರುವ ಲಕ್ಷಾಂತರ ಜನರನ್ನು ನೆನೆಪಿಸುತ್ತಿದೆ ಈ ಜನಸಾಗರ. ಜೀವನದ ಹೊಸ ನಿರ್ಣಾಯಕ ದಡವನ್ನು ಸೇರುವ ಆಸೆಯಿಂದ ಯುರೋಪಿನತ್ತ ಹಲವರು ಮೆಡಿಟೆರೇನಿಯನ್ ಸಮುದ್ರವನ್ನು ಈಜುತ್ತಾ ದಾಟಿ ಬಂದರೆ, ಇಲ್ಲಿ ಕಾಲ್ನಡಿಗೆ ಸಂಚಾರ ಎನ್ನುವ ವ್ಯತ್ಯಾಸ ಮಾತ್ರ. ಪಲಾಯನದ ಉದ್ದೇಶ ಮಾತ್ರ ಒಂದೇ. ಒಂದು ಹೊತ್ತಿನ ತುತ್ತು ಅನ್ನ.

ದೆಹಲಿಯಲ್ಲಿರುವ ಕೂಲಿ ಕಾರ್ಮಿಕರ ಸಂಖ್ಯೆ 20 ಲಕ್ಷಕ್ಕಿಂತಲೂ ಹೆಚ್ಚು. ಲಾಕ್‌ಡೌನ್ ಘೋಷಿಸಿದಾಗ ಇದರಲ್ಲಿ ಹೆಚ್ಚಿನ ಪ್ರಮಾಣದ ಜನರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ದೆಹಲಿ ಸರ್ಕಾರದ ಗಣತಿಯಂತೆ, ಈಗಾಗಲೇ ನಾಲ್ಕು ಲಕ್ಷದಷ್ಟು ಬರುವ ಜನರಿಗಾಗುವಷ್ಟು ಮಾತ್ರ ಆಹಾರ ಮತ್ತು ವಸತಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸಲಾಗಿದೆ.  ಕೇಂದ್ರ ಸರಕಾರವೋ ಬಂದ್ ಮಾಡಿ ಅನ್ನೋ ಘೋಷಣೆ ಬಿಟ್ಟು ಕ್ರಿಯಾತ್ಮಕವಾದ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಗುಳೆ ಹೊರಡುವುದು ಸ್ವಾಭಾವಿಕ.

ಸರಕಾರವು ಗುರುತರವಾದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವಾಗ, ವಲಸೆ ಕಾರ್ಮಿಕರು ಗುಳೆ ಹೊರಟಿರುವುದರ ಹಿಂದಿನ ಉದ್ದೇಶ ನಿಜವಾಗಿಯೂ ಹಸಿವಿನಿಂದ ಬರುವ ಸಾವುಗಳನ್ನ ಪ್ರತಿರೋಧಿಸುವುದಕ್ಕಾಗಿಯೇ ಆಗಿದೆ. ಈ ಸಾಮೂಹಿಕ ಗುಳೆಯ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲೂ ವರದಿಯಾದಾಗ, ವಲಸಿಗರನ್ನು ಕರೆತರಲು ನೆರೆಯ ರಾಜ್ಯಗಳು ಬಸ್ಸುಗಳನ್ನು ಕಳುಹಿಸಲು ಮುಂದೆ ಬಂದವು.  ಇದು ಬರಿ ದೆಹಲಿಯ ದೃಶ್ಯಗಳಾಗಿವೆ ಅಂದುಕೊಂಡರೆ ಅದು ತಪ್ಪು. ಮುಂಬೈ , ಕಲ್ಕತ್ತಾ, ಚೆನ್ನೈ, ಬೆಂಗಳೂರು ಮುಂತಾದ ಮೆಟ್ರೋ ನಗರಗಳಲ್ಲಿನ ಬೀದಿಗಳಿಂದೆಲ್ಲಾ, ಈ ರೀತಿಯ ಸಾಮೂಹಿಕ ಪಲಾಯನದ ಸುದ್ದಿಗಳು ವರದಿಯಾಗುತ್ತಿವೆ.

ಗಾಜಿಯಾಬಾದ್ ಮತ್ತು ಇತರೆಡೆಗಳಲ್ಲಿ ಬಸ್ಸುಗಳಿಗಾಗಿ ಕಾಯುತಿರುವ ಹಲವರು ಆಡುವ ಮಾತು “ನಮ್ಮಲ್ಲಿ ಹಲವರಿಗೆ ಆಧಾರ್ ನಂತಹ ಯಾವುದೇ ಗುರುತು ಚೀಟಿಗಳಿಲ್ಲ” ಎಂದಾಗಿದೆ. ಅಂದರೆ, ನಾಮಮಾತ್ರವಾದರೂ, ಈ ಸಮಯದಲ್ಲಿ ಸರಕಾರ ನೀಡುವ ಯಾವುದೇ ಸೌಜನ್ಯ ಸವಲತ್ತುಗಳಿಗೆ ಅವರು ಅನರ್ಹರು. ಇವೆಲ್ಲವೂ ವರ್ತಮಾನ ಭಾರತದ ಅವ್ಯವಸ್ಥೆಯ ನೇರನೋಟಗಳಾಗಿವೆ ಎಂಬುದನ್ನು ಮನಗಾಣಬೇಕಿದೆ.

ಗೃಹ ಸಚಿವ ಅಮಿತ್ ಶಾ ಘೋಷಿಸಿದ ಎನ್‌ಆರ್‌ಸಿ ದೇಶವ್ಯಾಪಿಯಾಗಿ ಪ್ರಾಬಲ್ಯಕ್ಕೆ ಬಂದರೆ, ಗುರುತು ತೋರಿಸಲು ದಾಖಲೆಗಳಿಲ್ಲದ ಈ ಜನರ ಸ್ಥಿತಿ ಏನಾಗಬಹುದೆಂಬುದು ಈ ಮೂಲಕ ಊಹಿಸಬಹುದಾಗಿದೆ. ಆದ್ದರಿಂದ ಹಲವರ ನಿರೀಕ್ಷಿಸಿದಂತೆ, ಮೋದಿಯ ಲಾಕ್‌ಡೌನ್ ಘೋಷಣೆಯು ಹಳೆಯ ನೋಟು ನಿಷೇಧವನ್ನಲ್ಲ ನೆನೆಪಿಸೋದು. ಬದಲಾಗಿ, ಇನ್ನೇನು ಜಾರಿಗೊಳಿಸಲಿರುವ ಎನ್‌ಆರ್‌ಸಿಯ ಪ್ರತ್ಯಾಘಾತ ಎಂಬಂತೆ, ದೇಶದುದ್ದಕ್ಕೂ ಪ್ರತ್ಯಕ್ಷವಾಗಲು ಸಾಧ್ಯತೆಗಳಿರುವ ಬಹುದೊಡ್ಡ ಸಂಖ್ಯೆಯ  ನಿರಾಶ್ರಿತ ಸಮೂಹಗಳ ಸೂಕ್ತ ಮುನ್ಸೂಚನೆಯೇ ಆಗಿದೆ ಈ ಬಸ್ಸು ಕಾಯುತ್ತಿರುವ ಜನ ಸಮೂಹ ಅನ್ನುವುದು ಸ್ಪಷ್ಟ.

ಈ ಸಾಮೂಹಿಕವಾಗಿ ಗುಳೆ ಹೊರಟವರೊಂದಿಗಿನ ಅಧಿಕಾರಿಗಳ ಮನೋಭಾವ ಕೂಡಾ ಅತ್ಯಂತ ದಯನೀಯವಾದುದು. ಲಾಕ್‌ಡೌನ್ ಅನ್ನುವ ಕಠಿಣ ನಿರ್ಧಾರವನ್ನು ತಳೆದಿದ್ದಕ್ಕಾಗಿ ಜನತೆಯೊಂದಿಗೆ ಕ್ಷಮೆ ಯಾಚಿಸುತ್ತೇನೆ ಎಂದಾಗಿತ್ತು ಕಳೆದೆರಡು ದಿನಗಳ ಹಿಂದಿನ ಮೋದಿಯ ಪ್ರಸ್ತಾವನೆ. ಯಾವುದೇ ಪೂರ್ವ ತಯಾರಿಗಳಿಲ್ಲದೆ, ನಾಲ್ಕು ಗಂಟೆಗಳ ಸಮಯವನ್ನು ಮಾತ್ರ ನೀಡಿ, 130 ಕೋಟಿ ಜನರನ್ನು ನಿರ್ದಾಕ್ಷಿಣ್ಯ ಲಾಕ್‌ಡೌನ್ ನತ್ತ ತಳ್ಳಿಹಾಕಿ, ನಂತರದ ಈ ಕ್ಷಮಾಪಣೆಯಲ್ಲಿ ಯಾವುದೇ ಅರ್ಥವಿಲ್ಲ.

ನೋಟ್ ಬ್ಯಾನ್‌ನ ನಂತರ, 50 ದಿನಗಳ ಸಮಯಾವಕಾಶ ಕೋರಿದ, ಅದೇ ‘ಪ್ರಾಮಾಣ ಕತೆ’ಯಷ್ಟೇ ಈ ಪ್ರಸ್ತಾವನೆಗೂ ಇರುವುದು. ಅಂದು ನೋಟು ಬ್ಯಾನ್‌ನಲ್ಲಿ ಕ್ಯೂ ನಿಂತು ಅಸ್ವಸ್ಥರಾದವರೇ ಇಂದೂ ಬೀದಿಗೆ ಬಂದಿರುವುದು. ಆ ಜನರೊಂದಿಗೆ ‘ಮನೆಯೊಳಗೇ ಕುಳಿತುಕೊಂಡಿರಿ’ ಎಂಬುದಾಗಿದೆ ಈಗಲೂ ನೀಡಿರುವ ಎಚ್ಚರಿಕೆ. ಹಾಗಾದರೆ ಇದಕ್ಕೂ ಮುನ್ನವೇ ಸೂರು ಕಳೆದುಕೊಂಡ ಬಡಜನರು ಎತ್ತ ಹೋಗಬೇಕು..? ಸಂಘರಾಜಕೀಯದ ವಿಷಬೀಜಗಳು ಬಿತ್ತಿದ ರಾಮಾನಂದ ಸಾಗರನ ‘ಸೀರಿಯಲ್ ನಾಸ್ಟಾಲ್ಜಿಯ’ದ ಮೂಲಕ ಜನರ ಹಸಿವು ನೀಗುತ್ತದೆ ಎಂದಾಗಿದೆಯೋ ಈ ಆಡಳಿತಾರೂಢರು ಅಂದ್ಕೊಂಡಿರೋದು…?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...