Homeಮುಖಪುಟಹೊಸ ವರುಷದ ಆವಿಷ್ಕಾರಗಳ ನಿರೀಕ್ಷೆಯಲ್ಲಿ, ಹಳೆ ವರುಷದ ವಿಜ್ಞಾನ ಕಸುವಿನ ನೆನಪುಗಳು

ಹೊಸ ವರುಷದ ಆವಿಷ್ಕಾರಗಳ ನಿರೀಕ್ಷೆಯಲ್ಲಿ, ಹಳೆ ವರುಷದ ವಿಜ್ಞಾನ ಕಸುವಿನ ನೆನಪುಗಳು

- Advertisement -
- Advertisement -

ನಾವು 2020ರ ವರ್ಷ ಕಳೆದು, 2021ರ ನಿರೀಕ್ಷೆಯಲ್ಲಿ ಇದ್ದೇವೆ. 2020ರ ವರ್ಷ ಕೋವಿಡ್-19, ಲಾಕ್‌ಡೌನ್, ಅನ್‌ಲಾಕ್ (1.0,2.0) ಎನ್ನುತ್ತಲೇ ಕಳೆದಿದ್ದೇವೆ. ಇವೆಲ್ಲದರ ಮಧ್ಯೆಯು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹಲವು ಅಭಿವೃದ್ಧಿಗಳಾಗುತ್ತಲೇ ಇವೆ.

ಪ್ರಸ್ತುತ ದಿನಗಳಲ್ಲಿ, ಬಹಳ ಮುಖ್ಯವಾದ ಹವಾಮಾನ ಬದಲಾವಣೆ, ಭೂಮಿಯ ಸರಾಸರಿ ತಾಪಮಾನ ಏರಿಕೆ, ಇದಕ್ಕೆ ಸಂಬಂಧಿಸಿದಂತೆ ಜಗತ್ತಿನ ದೇಶಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಿಸುವ ನೀತಿನಿಯಮಗಳು ಬಹಳ ಪ್ರಮುಖವಾಗಿವೆ. ಮುಂದಿನ ದಶಕದಲ್ಲಿ ಹವಾಮಾನ ಬದಲಾವಣೆಯ ಬಗ್ಗೆ ಚಿಂತನೆ ಅತಿ ಅಗತ್ಯ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ವೇಗದ ಕ್ರಮಗಳಿಗೆ ಒತ್ತು ಕೊಡುವುದೇ ಆಗಿದೆ. ಇಂತಹ ಹಲವು ಚರ್ಚೆಗಳ ನಡವೆ, ಪ್ರತಿ ವರ್ಷದಂತೆ ಈ ವರ್ಷವೂ ಜಗತ್ತಿನ ಅಂತ್ಯದ ಬಗ್ಗೆ (ನಿರ್ನಾಮದ ಬಗ್ಗೆಯೇ) ಅಗಾಧ ’ಒಲವುಳ್ಳ ಮಾಧ್ಯಮಗಳು, ಈಗ 2020 ಮುಗಿದಿರುವುದರಿಂದ 2021ರಲ್ಲಿ ಜಗತ್ತು ಅಂತ್ಯವನ್ನು ಕಾಣುತ್ತದೆ ಎಂದು ತರ್ಕವಿಲ್ಲದ ವಾದವನ್ನು ಮುಂದಿಟ್ಟು, ಜನರನ್ನು ಭಯಪಡಿಸುತ್ತಿದ್ದಾರೆ. ಇದಕ್ಕೆ ಕೊರೊನಾ ವೈರಾಣು ಸಾಕಷ್ಟು ಆಹಾರವನ್ನು ನೀಡಿದೆ. ಇರಲಿ, ಹೊಸ ವರ್ಷದ ಆರಂಭದಲ್ಲಿ ಇರುವ ನಾವು, ಇವರನ್ನು ಪಕ್ಕಕ್ಕಿಟ್ಟು ಕಳೆದ ವರ್ಷದಲ್ಲಿ ಪ್ರಮುಖವಾದ ಆಸಕ್ತಿದಾಯಕ ವೈಜ್ಞಾನಿಕ ಬೆಳವಣಿಗೆಯ ಬಗ್ಗೆ ಒಂದು ಪಕ್ಷಿನೋಟವನ್ನು ನೋಡೋಣ.

ಚಂದ್ರನ ಮೇಲೆ ನೀರು

ಭಾರತದ ಚಂದ್ರಯಾನ-1 ನೌಕೆಯು ಚಂದ್ರನ ಮೇಲೆ ನೀರು ಇರುವುದನ್ನು ಸಾಬೀತುಪಡಿಸಿದ ಹತ್ತು ವರ್ಷದ ನಂತರ, ನಾಸಾ ಕಳೆದ ನವೆಂಬರ್‌ನಲ್ಲಿ Stratospheric Observatory for Infrared Astronomy (SOFIA) ಮತ್ತು Lunar Reconnaissance Orbiter (LRO) ದೂರದರ್ಶಕಗಳ ಮೂಲಕ ಅಧ್ಯಯನ ಮಾಡಿದ ವರದಿಗಳನ್ನು Nature Astronomyಯಲ್ಲಿ ಪ್ರಕಟಿಸಿತು. ಇದರ ಪ್ರಕಾರ ಇದೇ ಮೊದಲ ಬಾರಿಗೆ ಚಂದ್ರನಲ್ಲಿ ಸೂರ್ಯನ ಬೆಳಕು ಬೀಳುವ ಪ್ರದೇಶದಲ್ಲಿ ನೀರು ಇರುವುದನ್ನು ಪತ್ತೆ ಮಾಡಲಾಗಿದೆ. ಅಲ್ಲದೆ, ಚಂದ್ರನ ನೆರಳಿನ ಪ್ರದೇಶದಲ್ಲಿ, ಈ ಹಿಂದೆ ಘನೀಕೃತ ರೂಪದಲ್ಲಿ ಇದ್ದಿದ್ದಕ್ಕಿಂತಲೂ ನೀರು ಹೆಚ್ಚಾಗಿ ಇದೆ ಎಂದು ಅಂದಾಜಿಸಲಾಗಿದೆ. ಭವಿಷ್ಯದಲ್ಲಿ, ಮಾನವನು ಚಂದ್ರನ ಮೇಲೆ ಅನೇಕ ಪ್ರಯೋಗಗಳನ್ನು ನಡೆಸಲು ಮತ್ತು ಇತರ ಗ್ರಹಗಳಿಗೆ ಅಂತರಿಕ್ಷಯಾನ ಮಾಡಲು ಸೂಕ್ತ ನಿಲ್ದಾಣವನ್ನು ರೂಪಿಸಲು ಇಂತಹ ಅನ್ವೇಷಣೆಗಳು ಉಪಯೋಗವಾಗಬಲ್ಲವು.

ಭೂಮಿಯ ಮೇಲೆ ಸಿಕ್ಕ ಅತ್ಯಂತ ಪುರಾತನ ವಸ್ತು
PC : wwwHECKETAL.PNAS 2020

ಇಲೆಕ್ಟ್ರಾನ್ ಮೈಕ್ರೋಸ್ಕೋಪ್ ಮುಖಾಂತರ ತೆಗೆದ ಉಲ್ಕೆಯ ಧೂಳಿನ ಕಣ ಭೂಮಿಯ ಮೇಲೆ ಪತ್ತೆಯಾದ ಒಂದು ವಸ್ತುವಿನಲ್ಲಿನ ಕಣಗಳು ಅತ್ಯಂತ ಪುರಾತನವಾದದ್ದು ಎಂದು ಇತ್ತೀಚೆಗೆ ವಿಜ್ಞಾನಿಗಳು ಹೇಳಿದ್ದಾರೆ. ಇದು ಯಾವ ಕಾಲದ್ದು ಎಂದರೆ, ನಮ್ಮ ಸೌರ ಮಂಡಲಕ್ಕಿಂತಲೂ ಪ್ರಾಚೀನವಾದದ್ದು! ಹೀಗಂತ ವಿಜ್ಞಾನಿಗಳೆ ನಿರೂಪಿಸಿದ್ದಾರೆ. 1969ರಲ್ಲಿ ಆಸ್ಟ್ರೇಲಿಯಾ ದೇಶದಲ್ಲಿ, ಆಕಾಶದಲ್ಲಿ ಪ್ರಕಾಶಮಾನವಾಗಿ ಬೆಳಗಿ ಭೂಮಿಗೆ ಬಿದ್ದಿದ್ದ ಉಲ್ಕೆಯು ಇದಾಗಿದೆ. ಈ ಉಲ್ಕೆಯು ಸಾಯುತ್ತಿರುವ ನಕ್ಷತ್ರದಿಂದ ಉಂಟಾದ ನಕ್ಷತ್ರಧೂಳಿನ ಕಣಗಳಿಂದ ಉಂಟಾಗಿರುವುದು ಎಂದು ವಿವರಿಸಲಾಗಿತ್ತು. ಈ ಉಲ್ಕೆಯ ಕಣಗಳನ್ನು ಹಲವು ರೀತಿಯ ಪರೀಕ್ಷೆಗೆ ಒಳಪಡಿಸಿ, ಇದರ ಕಾಲವನ್ನು ಲೆಕ್ಕ ಹಾಕಿದಾಗ, ಇದು ಸುಮಾರು 7 ಬಿಲಿಯನ್ ವರ್ಷದ ಹಿಂದಿನದು ಎಂದು ಅಂದಾಜಿಸಲಾಗಿದೆ. ಒಟ್ಟು ಉಲ್ಕೆಯಲ್ಲಿ ಶೇ.5ರಷ್ಟು ಕಣಗಳು ಮಾತ್ರ ಇಷ್ಟು ಹಳೆಯದಾಗಿದ್ದು, ಇನ್ನುಳಿದ ಭಾಗದ ಪರೀಕ್ಷೆಗಳು ನಡೆಯುತ್ತಿವೆ. ಈ ಕಣಗಳು ನಮ್ಮ ಗ್ಯಾಲಾಕ್ಸಿಯಾದ ಹಾಲು ಹಾದಿ ಗ್ಯಾಲಾಕ್ಸಿಯ ಹಲವು ರಹಸ್ಯ ಮಾಹಿತಿಯನ್ನು ತನ್ನೊಳಗಿಟ್ಟುಕೊಂಡಿದ್ದು, ಇದರ ಪರೀಕ್ಷೆಗಳು ಮುಂದುವರೆದಂತೆ ಹೊಸ ವಿಚಾರಗಳು ಹೊರಬರುತ್ತವೆ.

ಗಂಟೆಗೆ ಸುಮಾರು 900 ಕಿಲೋ ಮೀಟರ್ ಸಂಚರಿಸುವ ಹೈಪರ್‌ಲೂಪ್

ಅಮೆರಿಕದ ಲಾಸ್‌ವೇಗಸ್‌ನ ನವೇಡಾದಲ್ಲಿ ನವೆಂಬರ್ 08, 2020ರಂದು ನಡೆದ ಅತಿ ವೇಗದ ಸಾರಿಗೆ ತಂತ್ರಜ್ಞಾನವಾದ – ಹೈಪರ್‌ಲೂಪ್‌ನ ಪರೀಕ್ಷಾರ್ಥ ಸಂಚಾರದಲ್ಲಿ ಪ್ರಪ್ರಥಮವಾಗಿ ವರ್ಜಿನ್ ಹೈಪರ್‌ಲೂಪ್ ತಂಡದವರಾದ ಜೊಶ್ ಗಿಗೆಲ್, ಮತ್ತು ಸಾರಾ ಲೂಚಿನ್ ಇವರಿಬ್ಬರು ಸಂಚರಿಸಿ (ಗಂಟೆಗೆ ಸರಿಸುಮಾರು 900 ಕಿಲೋಮೀಟರ್ ವೇಗದಲ್ಲಿ), ಇತಿಹಾಸ ಸೃಷ್ಟಿಸಿದ್ದಾರೆ. ಇದು, ಜಗತ್ತಿನ ಆಧುನಿಕ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಒಂದು ಮೈಲುಗಲ್ಲಾಗಿದೆ. ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆ ಎಂದರೆ, ಸಂಚರಿಸಬೇಕಾದ ನಿರ್ದಿಷ್ಟವಾದ ಎರಡು ಸ್ಥಳಗಳ ನಡುವೆ ಬೃಹದಾಕಾರದ ಟ್ಯೂಬ್‌ಅನ್ನು ರಚಿಸಿ, ಅದರ ಒಳಗಿನ ಪ್ರದೇಶವನ್ನು ನಿರ್ವಾತಗೊಳಿಸಿ, ಟ್ಯೂಬ್‌ನ ಒಳಗೆ ಪ್ರಯಾಣಿಕರು ಕುಳಿತಿರುವ ಪಾಡ್‌ಅನ್ನು ಗಾಳಿಯ ಪ್ರತಿರೋಧ ಮತ್ತು ಇತರೆ ಘರ್ಷಣೆ ಇಲ್ಲದೆ ಅತೀ ವೇಗದಲ್ಲಿ ಸಂಚರಿಸುವ ತಂತ್ರಜ್ಞಾನ. ಪ್ರಪಂಚದಾದ್ಯಂತ ಇಂತಹ ಹೈಪರ್‌ಲೂಪ್ ತಂತ್ರಜ್ಞಾನದ ಸಾರಿಗೆ ವ್ಯವಸ್ಥೆಯ ಪರೀಕ್ಷಾರ್ಥ ಸಂಚಾರಗಳು ಕೆಲವು ವರ್ಷಗಳಿಂದ ನಡೆಯುತ್ತಿದೆ. ಆದರೆ ಇಲ್ಲಿಯವರೆಗೂ ಮಾನವರು ಸಂಚರಿಸಿರಲಿಲ್ಲ. ಇದು, ತಂತ್ರಜ್ಞಾನ ಆಧಾರಿತದ ಭವಿಷ್ಯದ ಅತಿ ವೇಗದ ಸಾರಿಗೆ ವ್ಯವಸ್ಥೆಗೆ ನಾಂದಿ ಹಾಡಿದೆ.

ವಿಡಿಯೋ: ಮೊದಲ ಹೈಪರ್‌ಲೂಪ್ ಪ್ರಯಾಣಿಕರ ಪರೀಕ್ಷೆ

Crispar-Cas 9

ಈ ವರ್ಷದ ರಸಾಯನ ವಿಜ್ಞಾನಕ್ಕೆ ದೊರೆತ ನೊಬೆಲ್ ಪ್ರಶಸ್ತಿಯ ವಿಷಯ Crispar-Cas 9. ಈ ಪ್ರಶಸ್ತಿಯು ಇಮಾನ್ಯೂಯೆಲಿ ಚಾರ್ಪೆಂಟಿಯರ್ ಮತ್ತು ಜನಿಫರ್ ಡೋಡುನಾರವರಿಗೆ ದೊರೆತಿದೆ. Crispar-Cas 9 ಜೀವ ವಿಜ್ಞಾನದ ಕತ್ತರಿ. ಅಂದರೆ, ಜೀನ್ ವ್ಯತ್ಯಯವಾದ (Gene Mutation) DNAಗಳನ್ನು ಕತ್ತರಿಸಲು ಉಪಯೋಗಿಸುವ ಕತ್ತರಿ ಎಂದು. ದೇಹದಲ್ಲಿ ಜೀನ್ ವ್ಯತ್ಯಯದಿಂದ ಕಾಣಬರುವ ಸಮಸ್ಯೆಗಳನ್ನು ಸರಿಪಡಿಸಲು Crispar-Cas 9 ಪರಿಣಾಮಕಾರಿಯಾಗಿ ಉಪಯೋಗಿಸಬಹುದಾಗಿದೆ ಎಂಬುದು ವಿಜ್ಞಾನಿಗಳ ವಾದ. ಕಳೆದ ಮಾರ್ಚನಲ್ಲಿ ಒರೆಗಾನ್ ಹೆಲ್ತ್ & ಸೈನ್ಸ್ ವಿಶ್ವವಿದ್ಯಾನಿಲಯದಲ್ಲಿ, ವ್ಯಕ್ತಿಯೊಬ್ಬನಲ್ಲಿ ಜೀನ್ ವ್ಯತ್ಯಯದಿಂದ ಉಂಟಾಗಿದ್ದ ಕುರುಡನ್ನು ಇದೆ Crispar-Cas 9 ಬಳಸಿ, ನ್ಯೂನತೆಯುಳ್ಳ DNAಗಳನ್ನು ಕತ್ತರಿಸಿ, ಸರಿಪಡಿಸಿದ್ದಾರೆ. ಅದಾಗ್ಯೂ Crispar-Cas 9 ಇನ್ನೂ ವೈದ್ಯಕೀಯ ಕ್ಷೇತ್ರದಲ್ಲಿ ಪ್ರ್ರಾಯೋಗಿಕವಾಗಿಯೇ ಬಳಸಲಾಗುತ್ತಿದೆ. ಇದರ ಸಾಧಕ ಭಾಧಕಗಳ ಬಗ್ಗೆ ವೈದ್ಯಕೀಯ ಲೋಕದಲ್ಲಿ ಹಲವು ಚರ್ಚೆಗಳಾಗುತ್ತಿವೆ.

ಸೌರ ಮಂಡಲದ ಹೊರಗಿನಿಂದ ಬಂದ ಮೊದಲ ಸಂದೇಶ

ಭೂಮಿಯನ್ನು ಹೊರತುಪಡಿಸಿ, ಇಲ್ಲಿಯವರೆಗೂ ಜೀವವಿರುವ ಯಾವುದೇ ಗ್ರಹ ಪತ್ತೆಯಾಗಿಲ್ಲ. ಆದರೆ, ಅಂತಹ ಗ್ರಹವನ್ನು ಕಂಡುಹಿಡಿಯುವುದಕ್ಕೆ ಮತ್ತು ಅನ್ಯಗ್ರಹದ ಜೀವಿಗಳ ಜೊತೆಗೆ ಸಂಪರ್ಕ ಸಾಧಿಸಲು ಮನುಷ್ಯ ಪ್ರಯತ್ನಿಸುತ್ತಲೇ ಇದ್ದಾನೆ. ಇದಕ್ಕಂತಲೇ, ಹಲವು ದೊಡ್ಡ ದೊಡ್ಡ ರೇಡಿಯೋ ದೂರದರ್ಶಕಗಳನ್ನು ಭೂಮಿಯ ಮೇಲೆ ಮತ್ತು ಆಕಾಶದಲ್ಲಿಯೂ ಹಾರಿಸಿ ಅದರ ಮುಖಾಂತರ ಪ್ರತಿದಿನ ಅಧ್ಯಯನಗಳನ್ನು ನಡೆಸುತ್ತಲೇ ಇದ್ದಾನೆ. ಈ ರೇಡಿಯೋ ದೂರದರ್ಶಕಗಳಿಂದ ನಮ್ಮ ಮಾಹಿತಿಯನ್ನು (ಭೂಮಿಯ ಬಗ್ಗೆ, ಭೂಮಿಯಲ್ಲಿರುವ ಜೀವರಾಶಿಯ ಬಗ್ಗೆ ಮತ್ತು ಸೌರಮಂಡಲದ ಬಗ್ಗೆ…) ಆಕಾಶಕ್ಕೆ ಕಳುಹಿಸುತ್ತಲೇ ಇದ್ದೇವೆ ಹಾಗೂ ಅನ್ಯಗ್ರಹ ಜೀವಿಗಳು ಕಳುಹಿಸಬಹುದಾದ ಸಂದೇಶವನ್ನು/ ಸಂಕೇತಗಳನ್ನು ಗ್ರಹಿಸಿ ಭೇದಿಸಲು ಪ್ರಯತ್ನಿಸುತ್ತಿದ್ದೇವೆ. ಆದರೂ, ಇಲ್ಲಿಯವರೆಗೂ ಯಾವುದೇ ಒಂದು ಸಂದೇಶವೂ ಬಂದಿರಲಿಲ್ಲ. ಇತ್ತೀಚೆಗೆ ಅಂದರೆ, ಡಿಸೆಂಬರ್ 16ರಂದು Astronomy & Astrophysics ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ, ಸೌರ ಮಂಡಲದಿಂದ ಆಚೆ ಇರುವ ಅನ್ಯಗ್ರಹದಿಂದ ಬಂದ ಒಂದು ಸಂದೇಶವನ್ನು ಸ್ವೀಕರಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದು ಅನ್ಯ ಗ್ರಹಗಳಲ್ಲಿ ಜೀವಿಗಳನ್ನು ಹುಡುಕುವ ನಮ್ಮ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಗ್ಗೆ ಮುಂದಿನ ವರ್ಷದಲ್ಲಿ ಹಲವು ಮಾಹಿತಿಗಳು ನಮಗೆ ಸಿಗಲಿವೆ ಎನ್ನಬಹುದೇನೋ!

ಅಧಿವಾಹಕತೆ

ಅಧಿವಾಹಕತೆ ಎಂದರೆ superconductivity. ಸಾಮಾನ್ಯವಾಗಿ ವಿದ್ಯುತ್, ವಾಹಕದಲ್ಲಿ ಚಲಿಸಿದಾಗ ಪ್ರತಿರೋಧ ಇರುತ್ತೆ. ಇದನ್ನು ರೋಧ (resistance)ಎಂದು ಕರೆಯುತ್ತೇವೆ. ಈ ರೋಧದಿಂದ ವಿದ್ಯುತ್ ಶಕ್ತಿಯ ನಷ್ಟ ಹೆಚ್ಚಿರುತ್ತದೆ. ಆದರೆ, ಅಧಿವಾಹಕಗಳಲ್ಲಿ ಇಂತಹ ರೋಧ ಇರುವುದಿಲ್ಲ. ಅಂದರೆ, ಅಧಿವಾಹಕಗಳಲ್ಲಿ ವಿದ್ಯುತ್ ಶಕ್ತಿಯ ನಷ್ಟ ಸೊನ್ನೆ. ಇಂತಹ ಹಲವು ಅಧಿವಾಹಕಗಳನ್ನು ನಾವು ಈಗಾಗಲೇ ಉಪಯೋಗಿಸುತ್ತಿದ್ದೇವೆ. ಆದರೆ ಇವೆಲ್ಲವೂ ಕಾರ್ಯನಿರ್ವಹಿಸಲು ನಿಯಂತ್ರಿತ ಅಂದರೆ ಅತಿಶೀತ ತಾಪಮಾನ ಅಗತ್ಯ ಮತ್ತು ಇದರ ವೆಚ್ಚವು ಅತಿಹೆಚ್ಚು. ಹಾಗಾಗಿ, ಕೊಠಡಿ ತಾಪಮಾನದಲ್ಲಿ (room temperature) ಕಾರ್ಯನಿರ್ವಸಬಲ್ಲ ಅಧಿವಾಹಕಗಳ ಅನ್ವೇಷಣೆ ಹೆಚ್ಚು ಅಗತ್ಯವಿತ್ತು. ಈ ನಿಟ್ಟಿನಲ್ಲಿ, ರೊಚೆಸ್ಟ್‌ರ್ ಮತ್ತು ನಾವೇಡಾ ವಿಶ್ವವಿದ್ಯಾನಿಲಯದ ಸಂಶೋಧಕರು ಕಾರ್ಬೊನೇಸಿಯಸ್ ಸಲ್ಫರ್ ಹೈಡ್ರೈಡ್ ವಸ್ತುವಿನಿಂದ ಅಧಿವಾಹಕವನ್ನು ತಯಾರಿಸಿದ್ದಾರೆ. ಇದು ಕೊಠಡಿ ತಾಪಮಾನದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. ಇದು, ಮುಂದಿನ ದಿನಗಳಲ್ಲಿ ನಾವು ಊಹಿಸಲೂ ಅಸಾಧ್ಯವಾದ ತಂತ್ರಜ್ಞಾನಗಳಿಗೆ ಮುನ್ನುಡಿಯಾಗಬಹುದೇನೊ!

2020ರ ಅಂತ್ಯಕ್ಕೆ ನಾವು ಬಂದು ನಿಂತಿದ್ದೇವೆ. ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದಿದ್ದರೂ, 2020ರಲ್ಲಿ ಸೂಕ್ಷ್ಮ ವೈರಾಣು ಜಗತ್ತು ಜನರ ಬದುಕನ್ನೇ ಬದಲಾಯಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

ಕೋವಿಡ್ ನಂತರದ ದಿನನಿತ್ಯದ ಬದುಕು ಹಲವು ಬದಲಾವಣೆಗಳನ್ನು ಕಾಣುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕೋವಿಡ್-19ರ ಲಸಿಕೆಗೆ ಸಂಬಂಧಿಸಿದಂತೆ ರಾಜಕೀಯ ಲಾಭಕ್ಕಾಗಿ ಪೈಪೋಟಿಗೆ ಇಳಿದವರಂತೆ ದಿನಕ್ಕೊಂದು ಹೇಳಿಕೆಗಳನ್ನು ಎಸೆಯುವ ಜಗತ್ತಿನ ರಾಜಕಾರಣಿಗಳ ಜೊತೆಗೆ, ವೈಜ್ಞಾನಿಕವಾಗಿ ಅವಿರತ ಸಂಶೋಧನೆಗಳನ್ನು ನಡೆಸುತ್ತಿರುವ ವಿಜ್ಞಾನಿಗಳ ಗುಂಪು ಮತ್ತು ಸಂಸ್ಥೆಗಳು ಜಗತ್ತಿನಲ್ಲಿವೆ. ಅವರ ಕಾರ್ಯ ಸಾಗುತ್ತಲೇ ಇದೆ. ಲಸಿಕೆಗೆ ನಾವು ಎಷ್ಟು ಹತ್ತಿರ ಇದ್ದೇವೆ, ಎಷ್ಟು ದೂರವಿದ್ದೇವೆ ಎಂಬುದನ್ನು ಇಂದಿನ ಕಲ್ಮಷಯುಕ್ತ ಮಾಧ್ಯಮದ ಮೂಲಕ ನಾವು ತಿಳಿಯಲು ಸಾಧ್ಯವಿಲ್ಲ. ಆದರೆ, ಭಾರತವೂ ಸೇರಿದಂತೆ ಜಗತ್ತಿನ ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರ್ರಾಯೋಗಿಕವಾಗಿ ಉಪಯೋಗಿಸುತ್ತಿರುವ ಲಸಿಕೆಗಳು ಪರಿಣಾಮಕಾರಿಯಾಗಿ ಫಲಿತಾಂಶ ತೋರುತ್ತಿದ್ದರು, ಲಸಿಕೆಯ ಎಲ್ಲಾ ಪರೀಕ್ಷೆಗಳನ್ನು ಮಾಡಿಮುಗಿಸಲು ಇನ್ನೂ ಹೆಚ್ಚು ಸಮಯ ಬೇಕಾಗಬಹುದೇನೊ.

ಇರಲಿ, ಕೋವಿಡ್-19ರ ಮುನ್ನೆಚರಿಕೆಯೊಂದಿಗೆ, ಮುಂದಿನ ವರ್ಷ ಇನ್ನು ಹೆಚ್ಚು ವೈಜ್ಞಾನಿಕ ಚಿಂತನೆಗಳು, ಚಟುವಟಿಕೆಗಳು ಮತ್ತು ಸಂಶೋಧನೆಗಳಿಗೆ ಸಾಕ್ಷಿಯಾಗಬಹುದು ಎಂಬ ನಿರೀಕ್ಷೆಯೊಂದಿಗೆ ಅದಕ್ಕೆ ಅಗತ್ಯವಾದ ಕುತೂಹಲವನ್ನು ಕಾಪಿಟ್ಟುಕೊಂಡು 2021ನ್ನು ಬರಮಾಡಿಕೊಳ್ಳುವ.


ಇದನ್ನೂ ಓದಿ: ಆಕಾಶ ವೀಕ್ಷಣೆ ಮಾರ್ಗದರ್ಶಿ: ಅನಂತದಿಂ.. ದಿಗಂತದಿಂ.. ನೋಡೆ ನೋಡೆ ಮೂಡಿತೊಂದು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...