Homeಮುಖಪುಟಹೊಸ ವರುಷದ ಆವಿಷ್ಕಾರಗಳ ನಿರೀಕ್ಷೆಯಲ್ಲಿ, ಹಳೆ ವರುಷದ ವಿಜ್ಞಾನ ಕಸುವಿನ ನೆನಪುಗಳು

ಹೊಸ ವರುಷದ ಆವಿಷ್ಕಾರಗಳ ನಿರೀಕ್ಷೆಯಲ್ಲಿ, ಹಳೆ ವರುಷದ ವಿಜ್ಞಾನ ಕಸುವಿನ ನೆನಪುಗಳು

- Advertisement -
- Advertisement -

ನಾವು 2020ರ ವರ್ಷ ಕಳೆದು, 2021ರ ನಿರೀಕ್ಷೆಯಲ್ಲಿ ಇದ್ದೇವೆ. 2020ರ ವರ್ಷ ಕೋವಿಡ್-19, ಲಾಕ್‌ಡೌನ್, ಅನ್‌ಲಾಕ್ (1.0,2.0) ಎನ್ನುತ್ತಲೇ ಕಳೆದಿದ್ದೇವೆ. ಇವೆಲ್ಲದರ ಮಧ್ಯೆಯು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹಲವು ಅಭಿವೃದ್ಧಿಗಳಾಗುತ್ತಲೇ ಇವೆ.

ಪ್ರಸ್ತುತ ದಿನಗಳಲ್ಲಿ, ಬಹಳ ಮುಖ್ಯವಾದ ಹವಾಮಾನ ಬದಲಾವಣೆ, ಭೂಮಿಯ ಸರಾಸರಿ ತಾಪಮಾನ ಏರಿಕೆ, ಇದಕ್ಕೆ ಸಂಬಂಧಿಸಿದಂತೆ ಜಗತ್ತಿನ ದೇಶಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಿಸುವ ನೀತಿನಿಯಮಗಳು ಬಹಳ ಪ್ರಮುಖವಾಗಿವೆ. ಮುಂದಿನ ದಶಕದಲ್ಲಿ ಹವಾಮಾನ ಬದಲಾವಣೆಯ ಬಗ್ಗೆ ಚಿಂತನೆ ಅತಿ ಅಗತ್ಯ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ವೇಗದ ಕ್ರಮಗಳಿಗೆ ಒತ್ತು ಕೊಡುವುದೇ ಆಗಿದೆ. ಇಂತಹ ಹಲವು ಚರ್ಚೆಗಳ ನಡವೆ, ಪ್ರತಿ ವರ್ಷದಂತೆ ಈ ವರ್ಷವೂ ಜಗತ್ತಿನ ಅಂತ್ಯದ ಬಗ್ಗೆ (ನಿರ್ನಾಮದ ಬಗ್ಗೆಯೇ) ಅಗಾಧ ’ಒಲವುಳ್ಳ ಮಾಧ್ಯಮಗಳು, ಈಗ 2020 ಮುಗಿದಿರುವುದರಿಂದ 2021ರಲ್ಲಿ ಜಗತ್ತು ಅಂತ್ಯವನ್ನು ಕಾಣುತ್ತದೆ ಎಂದು ತರ್ಕವಿಲ್ಲದ ವಾದವನ್ನು ಮುಂದಿಟ್ಟು, ಜನರನ್ನು ಭಯಪಡಿಸುತ್ತಿದ್ದಾರೆ. ಇದಕ್ಕೆ ಕೊರೊನಾ ವೈರಾಣು ಸಾಕಷ್ಟು ಆಹಾರವನ್ನು ನೀಡಿದೆ. ಇರಲಿ, ಹೊಸ ವರ್ಷದ ಆರಂಭದಲ್ಲಿ ಇರುವ ನಾವು, ಇವರನ್ನು ಪಕ್ಕಕ್ಕಿಟ್ಟು ಕಳೆದ ವರ್ಷದಲ್ಲಿ ಪ್ರಮುಖವಾದ ಆಸಕ್ತಿದಾಯಕ ವೈಜ್ಞಾನಿಕ ಬೆಳವಣಿಗೆಯ ಬಗ್ಗೆ ಒಂದು ಪಕ್ಷಿನೋಟವನ್ನು ನೋಡೋಣ.

ಚಂದ್ರನ ಮೇಲೆ ನೀರು

ಭಾರತದ ಚಂದ್ರಯಾನ-1 ನೌಕೆಯು ಚಂದ್ರನ ಮೇಲೆ ನೀರು ಇರುವುದನ್ನು ಸಾಬೀತುಪಡಿಸಿದ ಹತ್ತು ವರ್ಷದ ನಂತರ, ನಾಸಾ ಕಳೆದ ನವೆಂಬರ್‌ನಲ್ಲಿ Stratospheric Observatory for Infrared Astronomy (SOFIA) ಮತ್ತು Lunar Reconnaissance Orbiter (LRO) ದೂರದರ್ಶಕಗಳ ಮೂಲಕ ಅಧ್ಯಯನ ಮಾಡಿದ ವರದಿಗಳನ್ನು Nature Astronomyಯಲ್ಲಿ ಪ್ರಕಟಿಸಿತು. ಇದರ ಪ್ರಕಾರ ಇದೇ ಮೊದಲ ಬಾರಿಗೆ ಚಂದ್ರನಲ್ಲಿ ಸೂರ್ಯನ ಬೆಳಕು ಬೀಳುವ ಪ್ರದೇಶದಲ್ಲಿ ನೀರು ಇರುವುದನ್ನು ಪತ್ತೆ ಮಾಡಲಾಗಿದೆ. ಅಲ್ಲದೆ, ಚಂದ್ರನ ನೆರಳಿನ ಪ್ರದೇಶದಲ್ಲಿ, ಈ ಹಿಂದೆ ಘನೀಕೃತ ರೂಪದಲ್ಲಿ ಇದ್ದಿದ್ದಕ್ಕಿಂತಲೂ ನೀರು ಹೆಚ್ಚಾಗಿ ಇದೆ ಎಂದು ಅಂದಾಜಿಸಲಾಗಿದೆ. ಭವಿಷ್ಯದಲ್ಲಿ, ಮಾನವನು ಚಂದ್ರನ ಮೇಲೆ ಅನೇಕ ಪ್ರಯೋಗಗಳನ್ನು ನಡೆಸಲು ಮತ್ತು ಇತರ ಗ್ರಹಗಳಿಗೆ ಅಂತರಿಕ್ಷಯಾನ ಮಾಡಲು ಸೂಕ್ತ ನಿಲ್ದಾಣವನ್ನು ರೂಪಿಸಲು ಇಂತಹ ಅನ್ವೇಷಣೆಗಳು ಉಪಯೋಗವಾಗಬಲ್ಲವು.

ಭೂಮಿಯ ಮೇಲೆ ಸಿಕ್ಕ ಅತ್ಯಂತ ಪುರಾತನ ವಸ್ತು
PC : wwwHECKETAL.PNAS 2020

ಇಲೆಕ್ಟ್ರಾನ್ ಮೈಕ್ರೋಸ್ಕೋಪ್ ಮುಖಾಂತರ ತೆಗೆದ ಉಲ್ಕೆಯ ಧೂಳಿನ ಕಣ ಭೂಮಿಯ ಮೇಲೆ ಪತ್ತೆಯಾದ ಒಂದು ವಸ್ತುವಿನಲ್ಲಿನ ಕಣಗಳು ಅತ್ಯಂತ ಪುರಾತನವಾದದ್ದು ಎಂದು ಇತ್ತೀಚೆಗೆ ವಿಜ್ಞಾನಿಗಳು ಹೇಳಿದ್ದಾರೆ. ಇದು ಯಾವ ಕಾಲದ್ದು ಎಂದರೆ, ನಮ್ಮ ಸೌರ ಮಂಡಲಕ್ಕಿಂತಲೂ ಪ್ರಾಚೀನವಾದದ್ದು! ಹೀಗಂತ ವಿಜ್ಞಾನಿಗಳೆ ನಿರೂಪಿಸಿದ್ದಾರೆ. 1969ರಲ್ಲಿ ಆಸ್ಟ್ರೇಲಿಯಾ ದೇಶದಲ್ಲಿ, ಆಕಾಶದಲ್ಲಿ ಪ್ರಕಾಶಮಾನವಾಗಿ ಬೆಳಗಿ ಭೂಮಿಗೆ ಬಿದ್ದಿದ್ದ ಉಲ್ಕೆಯು ಇದಾಗಿದೆ. ಈ ಉಲ್ಕೆಯು ಸಾಯುತ್ತಿರುವ ನಕ್ಷತ್ರದಿಂದ ಉಂಟಾದ ನಕ್ಷತ್ರಧೂಳಿನ ಕಣಗಳಿಂದ ಉಂಟಾಗಿರುವುದು ಎಂದು ವಿವರಿಸಲಾಗಿತ್ತು. ಈ ಉಲ್ಕೆಯ ಕಣಗಳನ್ನು ಹಲವು ರೀತಿಯ ಪರೀಕ್ಷೆಗೆ ಒಳಪಡಿಸಿ, ಇದರ ಕಾಲವನ್ನು ಲೆಕ್ಕ ಹಾಕಿದಾಗ, ಇದು ಸುಮಾರು 7 ಬಿಲಿಯನ್ ವರ್ಷದ ಹಿಂದಿನದು ಎಂದು ಅಂದಾಜಿಸಲಾಗಿದೆ. ಒಟ್ಟು ಉಲ್ಕೆಯಲ್ಲಿ ಶೇ.5ರಷ್ಟು ಕಣಗಳು ಮಾತ್ರ ಇಷ್ಟು ಹಳೆಯದಾಗಿದ್ದು, ಇನ್ನುಳಿದ ಭಾಗದ ಪರೀಕ್ಷೆಗಳು ನಡೆಯುತ್ತಿವೆ. ಈ ಕಣಗಳು ನಮ್ಮ ಗ್ಯಾಲಾಕ್ಸಿಯಾದ ಹಾಲು ಹಾದಿ ಗ್ಯಾಲಾಕ್ಸಿಯ ಹಲವು ರಹಸ್ಯ ಮಾಹಿತಿಯನ್ನು ತನ್ನೊಳಗಿಟ್ಟುಕೊಂಡಿದ್ದು, ಇದರ ಪರೀಕ್ಷೆಗಳು ಮುಂದುವರೆದಂತೆ ಹೊಸ ವಿಚಾರಗಳು ಹೊರಬರುತ್ತವೆ.

ಗಂಟೆಗೆ ಸುಮಾರು 900 ಕಿಲೋ ಮೀಟರ್ ಸಂಚರಿಸುವ ಹೈಪರ್‌ಲೂಪ್

ಅಮೆರಿಕದ ಲಾಸ್‌ವೇಗಸ್‌ನ ನವೇಡಾದಲ್ಲಿ ನವೆಂಬರ್ 08, 2020ರಂದು ನಡೆದ ಅತಿ ವೇಗದ ಸಾರಿಗೆ ತಂತ್ರಜ್ಞಾನವಾದ – ಹೈಪರ್‌ಲೂಪ್‌ನ ಪರೀಕ್ಷಾರ್ಥ ಸಂಚಾರದಲ್ಲಿ ಪ್ರಪ್ರಥಮವಾಗಿ ವರ್ಜಿನ್ ಹೈಪರ್‌ಲೂಪ್ ತಂಡದವರಾದ ಜೊಶ್ ಗಿಗೆಲ್, ಮತ್ತು ಸಾರಾ ಲೂಚಿನ್ ಇವರಿಬ್ಬರು ಸಂಚರಿಸಿ (ಗಂಟೆಗೆ ಸರಿಸುಮಾರು 900 ಕಿಲೋಮೀಟರ್ ವೇಗದಲ್ಲಿ), ಇತಿಹಾಸ ಸೃಷ್ಟಿಸಿದ್ದಾರೆ. ಇದು, ಜಗತ್ತಿನ ಆಧುನಿಕ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಒಂದು ಮೈಲುಗಲ್ಲಾಗಿದೆ. ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆ ಎಂದರೆ, ಸಂಚರಿಸಬೇಕಾದ ನಿರ್ದಿಷ್ಟವಾದ ಎರಡು ಸ್ಥಳಗಳ ನಡುವೆ ಬೃಹದಾಕಾರದ ಟ್ಯೂಬ್‌ಅನ್ನು ರಚಿಸಿ, ಅದರ ಒಳಗಿನ ಪ್ರದೇಶವನ್ನು ನಿರ್ವಾತಗೊಳಿಸಿ, ಟ್ಯೂಬ್‌ನ ಒಳಗೆ ಪ್ರಯಾಣಿಕರು ಕುಳಿತಿರುವ ಪಾಡ್‌ಅನ್ನು ಗಾಳಿಯ ಪ್ರತಿರೋಧ ಮತ್ತು ಇತರೆ ಘರ್ಷಣೆ ಇಲ್ಲದೆ ಅತೀ ವೇಗದಲ್ಲಿ ಸಂಚರಿಸುವ ತಂತ್ರಜ್ಞಾನ. ಪ್ರಪಂಚದಾದ್ಯಂತ ಇಂತಹ ಹೈಪರ್‌ಲೂಪ್ ತಂತ್ರಜ್ಞಾನದ ಸಾರಿಗೆ ವ್ಯವಸ್ಥೆಯ ಪರೀಕ್ಷಾರ್ಥ ಸಂಚಾರಗಳು ಕೆಲವು ವರ್ಷಗಳಿಂದ ನಡೆಯುತ್ತಿದೆ. ಆದರೆ ಇಲ್ಲಿಯವರೆಗೂ ಮಾನವರು ಸಂಚರಿಸಿರಲಿಲ್ಲ. ಇದು, ತಂತ್ರಜ್ಞಾನ ಆಧಾರಿತದ ಭವಿಷ್ಯದ ಅತಿ ವೇಗದ ಸಾರಿಗೆ ವ್ಯವಸ್ಥೆಗೆ ನಾಂದಿ ಹಾಡಿದೆ.

ವಿಡಿಯೋ: ಮೊದಲ ಹೈಪರ್‌ಲೂಪ್ ಪ್ರಯಾಣಿಕರ ಪರೀಕ್ಷೆ

Crispar-Cas 9

ಈ ವರ್ಷದ ರಸಾಯನ ವಿಜ್ಞಾನಕ್ಕೆ ದೊರೆತ ನೊಬೆಲ್ ಪ್ರಶಸ್ತಿಯ ವಿಷಯ Crispar-Cas 9. ಈ ಪ್ರಶಸ್ತಿಯು ಇಮಾನ್ಯೂಯೆಲಿ ಚಾರ್ಪೆಂಟಿಯರ್ ಮತ್ತು ಜನಿಫರ್ ಡೋಡುನಾರವರಿಗೆ ದೊರೆತಿದೆ. Crispar-Cas 9 ಜೀವ ವಿಜ್ಞಾನದ ಕತ್ತರಿ. ಅಂದರೆ, ಜೀನ್ ವ್ಯತ್ಯಯವಾದ (Gene Mutation) DNAಗಳನ್ನು ಕತ್ತರಿಸಲು ಉಪಯೋಗಿಸುವ ಕತ್ತರಿ ಎಂದು. ದೇಹದಲ್ಲಿ ಜೀನ್ ವ್ಯತ್ಯಯದಿಂದ ಕಾಣಬರುವ ಸಮಸ್ಯೆಗಳನ್ನು ಸರಿಪಡಿಸಲು Crispar-Cas 9 ಪರಿಣಾಮಕಾರಿಯಾಗಿ ಉಪಯೋಗಿಸಬಹುದಾಗಿದೆ ಎಂಬುದು ವಿಜ್ಞಾನಿಗಳ ವಾದ. ಕಳೆದ ಮಾರ್ಚನಲ್ಲಿ ಒರೆಗಾನ್ ಹೆಲ್ತ್ & ಸೈನ್ಸ್ ವಿಶ್ವವಿದ್ಯಾನಿಲಯದಲ್ಲಿ, ವ್ಯಕ್ತಿಯೊಬ್ಬನಲ್ಲಿ ಜೀನ್ ವ್ಯತ್ಯಯದಿಂದ ಉಂಟಾಗಿದ್ದ ಕುರುಡನ್ನು ಇದೆ Crispar-Cas 9 ಬಳಸಿ, ನ್ಯೂನತೆಯುಳ್ಳ DNAಗಳನ್ನು ಕತ್ತರಿಸಿ, ಸರಿಪಡಿಸಿದ್ದಾರೆ. ಅದಾಗ್ಯೂ Crispar-Cas 9 ಇನ್ನೂ ವೈದ್ಯಕೀಯ ಕ್ಷೇತ್ರದಲ್ಲಿ ಪ್ರ್ರಾಯೋಗಿಕವಾಗಿಯೇ ಬಳಸಲಾಗುತ್ತಿದೆ. ಇದರ ಸಾಧಕ ಭಾಧಕಗಳ ಬಗ್ಗೆ ವೈದ್ಯಕೀಯ ಲೋಕದಲ್ಲಿ ಹಲವು ಚರ್ಚೆಗಳಾಗುತ್ತಿವೆ.

ಸೌರ ಮಂಡಲದ ಹೊರಗಿನಿಂದ ಬಂದ ಮೊದಲ ಸಂದೇಶ

ಭೂಮಿಯನ್ನು ಹೊರತುಪಡಿಸಿ, ಇಲ್ಲಿಯವರೆಗೂ ಜೀವವಿರುವ ಯಾವುದೇ ಗ್ರಹ ಪತ್ತೆಯಾಗಿಲ್ಲ. ಆದರೆ, ಅಂತಹ ಗ್ರಹವನ್ನು ಕಂಡುಹಿಡಿಯುವುದಕ್ಕೆ ಮತ್ತು ಅನ್ಯಗ್ರಹದ ಜೀವಿಗಳ ಜೊತೆಗೆ ಸಂಪರ್ಕ ಸಾಧಿಸಲು ಮನುಷ್ಯ ಪ್ರಯತ್ನಿಸುತ್ತಲೇ ಇದ್ದಾನೆ. ಇದಕ್ಕಂತಲೇ, ಹಲವು ದೊಡ್ಡ ದೊಡ್ಡ ರೇಡಿಯೋ ದೂರದರ್ಶಕಗಳನ್ನು ಭೂಮಿಯ ಮೇಲೆ ಮತ್ತು ಆಕಾಶದಲ್ಲಿಯೂ ಹಾರಿಸಿ ಅದರ ಮುಖಾಂತರ ಪ್ರತಿದಿನ ಅಧ್ಯಯನಗಳನ್ನು ನಡೆಸುತ್ತಲೇ ಇದ್ದಾನೆ. ಈ ರೇಡಿಯೋ ದೂರದರ್ಶಕಗಳಿಂದ ನಮ್ಮ ಮಾಹಿತಿಯನ್ನು (ಭೂಮಿಯ ಬಗ್ಗೆ, ಭೂಮಿಯಲ್ಲಿರುವ ಜೀವರಾಶಿಯ ಬಗ್ಗೆ ಮತ್ತು ಸೌರಮಂಡಲದ ಬಗ್ಗೆ…) ಆಕಾಶಕ್ಕೆ ಕಳುಹಿಸುತ್ತಲೇ ಇದ್ದೇವೆ ಹಾಗೂ ಅನ್ಯಗ್ರಹ ಜೀವಿಗಳು ಕಳುಹಿಸಬಹುದಾದ ಸಂದೇಶವನ್ನು/ ಸಂಕೇತಗಳನ್ನು ಗ್ರಹಿಸಿ ಭೇದಿಸಲು ಪ್ರಯತ್ನಿಸುತ್ತಿದ್ದೇವೆ. ಆದರೂ, ಇಲ್ಲಿಯವರೆಗೂ ಯಾವುದೇ ಒಂದು ಸಂದೇಶವೂ ಬಂದಿರಲಿಲ್ಲ. ಇತ್ತೀಚೆಗೆ ಅಂದರೆ, ಡಿಸೆಂಬರ್ 16ರಂದು Astronomy & Astrophysics ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ, ಸೌರ ಮಂಡಲದಿಂದ ಆಚೆ ಇರುವ ಅನ್ಯಗ್ರಹದಿಂದ ಬಂದ ಒಂದು ಸಂದೇಶವನ್ನು ಸ್ವೀಕರಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದು ಅನ್ಯ ಗ್ರಹಗಳಲ್ಲಿ ಜೀವಿಗಳನ್ನು ಹುಡುಕುವ ನಮ್ಮ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಗ್ಗೆ ಮುಂದಿನ ವರ್ಷದಲ್ಲಿ ಹಲವು ಮಾಹಿತಿಗಳು ನಮಗೆ ಸಿಗಲಿವೆ ಎನ್ನಬಹುದೇನೋ!

ಅಧಿವಾಹಕತೆ

ಅಧಿವಾಹಕತೆ ಎಂದರೆ superconductivity. ಸಾಮಾನ್ಯವಾಗಿ ವಿದ್ಯುತ್, ವಾಹಕದಲ್ಲಿ ಚಲಿಸಿದಾಗ ಪ್ರತಿರೋಧ ಇರುತ್ತೆ. ಇದನ್ನು ರೋಧ (resistance)ಎಂದು ಕರೆಯುತ್ತೇವೆ. ಈ ರೋಧದಿಂದ ವಿದ್ಯುತ್ ಶಕ್ತಿಯ ನಷ್ಟ ಹೆಚ್ಚಿರುತ್ತದೆ. ಆದರೆ, ಅಧಿವಾಹಕಗಳಲ್ಲಿ ಇಂತಹ ರೋಧ ಇರುವುದಿಲ್ಲ. ಅಂದರೆ, ಅಧಿವಾಹಕಗಳಲ್ಲಿ ವಿದ್ಯುತ್ ಶಕ್ತಿಯ ನಷ್ಟ ಸೊನ್ನೆ. ಇಂತಹ ಹಲವು ಅಧಿವಾಹಕಗಳನ್ನು ನಾವು ಈಗಾಗಲೇ ಉಪಯೋಗಿಸುತ್ತಿದ್ದೇವೆ. ಆದರೆ ಇವೆಲ್ಲವೂ ಕಾರ್ಯನಿರ್ವಹಿಸಲು ನಿಯಂತ್ರಿತ ಅಂದರೆ ಅತಿಶೀತ ತಾಪಮಾನ ಅಗತ್ಯ ಮತ್ತು ಇದರ ವೆಚ್ಚವು ಅತಿಹೆಚ್ಚು. ಹಾಗಾಗಿ, ಕೊಠಡಿ ತಾಪಮಾನದಲ್ಲಿ (room temperature) ಕಾರ್ಯನಿರ್ವಸಬಲ್ಲ ಅಧಿವಾಹಕಗಳ ಅನ್ವೇಷಣೆ ಹೆಚ್ಚು ಅಗತ್ಯವಿತ್ತು. ಈ ನಿಟ್ಟಿನಲ್ಲಿ, ರೊಚೆಸ್ಟ್‌ರ್ ಮತ್ತು ನಾವೇಡಾ ವಿಶ್ವವಿದ್ಯಾನಿಲಯದ ಸಂಶೋಧಕರು ಕಾರ್ಬೊನೇಸಿಯಸ್ ಸಲ್ಫರ್ ಹೈಡ್ರೈಡ್ ವಸ್ತುವಿನಿಂದ ಅಧಿವಾಹಕವನ್ನು ತಯಾರಿಸಿದ್ದಾರೆ. ಇದು ಕೊಠಡಿ ತಾಪಮಾನದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. ಇದು, ಮುಂದಿನ ದಿನಗಳಲ್ಲಿ ನಾವು ಊಹಿಸಲೂ ಅಸಾಧ್ಯವಾದ ತಂತ್ರಜ್ಞಾನಗಳಿಗೆ ಮುನ್ನುಡಿಯಾಗಬಹುದೇನೊ!

2020ರ ಅಂತ್ಯಕ್ಕೆ ನಾವು ಬಂದು ನಿಂತಿದ್ದೇವೆ. ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದಿದ್ದರೂ, 2020ರಲ್ಲಿ ಸೂಕ್ಷ್ಮ ವೈರಾಣು ಜಗತ್ತು ಜನರ ಬದುಕನ್ನೇ ಬದಲಾಯಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

ಕೋವಿಡ್ ನಂತರದ ದಿನನಿತ್ಯದ ಬದುಕು ಹಲವು ಬದಲಾವಣೆಗಳನ್ನು ಕಾಣುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕೋವಿಡ್-19ರ ಲಸಿಕೆಗೆ ಸಂಬಂಧಿಸಿದಂತೆ ರಾಜಕೀಯ ಲಾಭಕ್ಕಾಗಿ ಪೈಪೋಟಿಗೆ ಇಳಿದವರಂತೆ ದಿನಕ್ಕೊಂದು ಹೇಳಿಕೆಗಳನ್ನು ಎಸೆಯುವ ಜಗತ್ತಿನ ರಾಜಕಾರಣಿಗಳ ಜೊತೆಗೆ, ವೈಜ್ಞಾನಿಕವಾಗಿ ಅವಿರತ ಸಂಶೋಧನೆಗಳನ್ನು ನಡೆಸುತ್ತಿರುವ ವಿಜ್ಞಾನಿಗಳ ಗುಂಪು ಮತ್ತು ಸಂಸ್ಥೆಗಳು ಜಗತ್ತಿನಲ್ಲಿವೆ. ಅವರ ಕಾರ್ಯ ಸಾಗುತ್ತಲೇ ಇದೆ. ಲಸಿಕೆಗೆ ನಾವು ಎಷ್ಟು ಹತ್ತಿರ ಇದ್ದೇವೆ, ಎಷ್ಟು ದೂರವಿದ್ದೇವೆ ಎಂಬುದನ್ನು ಇಂದಿನ ಕಲ್ಮಷಯುಕ್ತ ಮಾಧ್ಯಮದ ಮೂಲಕ ನಾವು ತಿಳಿಯಲು ಸಾಧ್ಯವಿಲ್ಲ. ಆದರೆ, ಭಾರತವೂ ಸೇರಿದಂತೆ ಜಗತ್ತಿನ ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರ್ರಾಯೋಗಿಕವಾಗಿ ಉಪಯೋಗಿಸುತ್ತಿರುವ ಲಸಿಕೆಗಳು ಪರಿಣಾಮಕಾರಿಯಾಗಿ ಫಲಿತಾಂಶ ತೋರುತ್ತಿದ್ದರು, ಲಸಿಕೆಯ ಎಲ್ಲಾ ಪರೀಕ್ಷೆಗಳನ್ನು ಮಾಡಿಮುಗಿಸಲು ಇನ್ನೂ ಹೆಚ್ಚು ಸಮಯ ಬೇಕಾಗಬಹುದೇನೊ.

ಇರಲಿ, ಕೋವಿಡ್-19ರ ಮುನ್ನೆಚರಿಕೆಯೊಂದಿಗೆ, ಮುಂದಿನ ವರ್ಷ ಇನ್ನು ಹೆಚ್ಚು ವೈಜ್ಞಾನಿಕ ಚಿಂತನೆಗಳು, ಚಟುವಟಿಕೆಗಳು ಮತ್ತು ಸಂಶೋಧನೆಗಳಿಗೆ ಸಾಕ್ಷಿಯಾಗಬಹುದು ಎಂಬ ನಿರೀಕ್ಷೆಯೊಂದಿಗೆ ಅದಕ್ಕೆ ಅಗತ್ಯವಾದ ಕುತೂಹಲವನ್ನು ಕಾಪಿಟ್ಟುಕೊಂಡು 2021ನ್ನು ಬರಮಾಡಿಕೊಳ್ಳುವ.


ಇದನ್ನೂ ಓದಿ: ಆಕಾಶ ವೀಕ್ಷಣೆ ಮಾರ್ಗದರ್ಶಿ: ಅನಂತದಿಂ.. ದಿಗಂತದಿಂ.. ನೋಡೆ ನೋಡೆ ಮೂಡಿತೊಂದು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...