Homeಮುಖಪುಟಹಿನ್ನೋಟ 2020: ಕೊರೊನಾ ನಿಯಂತ್ರಣದ ನಡುವೆಯೂ ಪ್ರತಿಭಟಿಸಿದ ಜಗತ್ತು

ಹಿನ್ನೋಟ 2020: ಕೊರೊನಾ ನಿಯಂತ್ರಣದ ನಡುವೆಯೂ ಪ್ರತಿಭಟಿಸಿದ ಜಗತ್ತು

- Advertisement -
- Advertisement -

2020 ಇನ್ನೇನು ಮುಗಿಯಲಿದೆ. ಜಗತ್ತಿಗೆ ಇದು ಐತಿಹಾಸಿಕ ಸಂಗತಿಯಾಗಿ ಉಳಿದುಕೊಳ್ಳಲಿದೆ. ಅನ್ಯಾಯಯುತ ಕಾಯ್ದೆಗಳ ವಿರುದ್ಧದ ಪ್ರತಿಭಟನೆಗಳು ನಮ್ಮ ರಾಜಕೀಯ ಕಲ್ಪನೆಯನ್ನು ಪ್ರಭಾವಿಸುತ್ತಿರುವ ಈ ಸಂದರ್ಭದಲ್ಲಿ ನಾವು ಭಾರತೀಯರು ಪೂರ್ತಿ ಒಂದು ಸುತ್ತು ಹಾಕಿ ಅಲ್ಲಿಗೇ ಬಂದು ನಿಂತಿದ್ದೇವೆ. ಈ ಹೋರಾಟಗಳಲ್ಲಿ ನಾವು ಏಕಾಂಗಿಯಲ್ಲ. ವಿವಿಧ ಹೋರಾಟಗಳಲ್ಲಿ ನಿರತವಾಗಿರುವ ಜಾಗತಿಕ ಸಮುದಾಯದ ಭಾಗವಾಗಿದ್ದೇವೆ ನಾವು.

ಅರಬ್ ಹೋರಾಟದಿಂದ (ಅರಬ್ ವಸಂತದಿಂದ) 2019ರವರೆಗೆ ಜಗತ್ತು ಹೊಸ ತಲೆಮಾರಿನ ಅನೇಕ ಹೋರಾಟಗಳಿಗೆ ಸಾಕ್ಷಿಯಾಗಿತ್ತು. ಬದಲಾವಣೆಗೆ ಆಗ್ರಹಿಸುವ ಮತ್ತು ಪ್ರಭುತ್ವಕ್ಕೆ ಪ್ರತಿಕ್ರಿಯಿಸುವ ಈ ಹೋರಾಟಗಳು ಸ್ವಯಂಪ್ರೇರಿತವಾಗಿದ್ದು, ನಾಯಕರಹಿತ ಆದರೆ ಸಾಮೂಹಿಕ ನಾಯಕತ್ವದ ಗುಣಲಕ್ಷಣಗಳನ್ನು ಹೊಂದಿರುವುದು ಇವುಗಳ ಸಾಮಾನ್ಯ ಲಕ್ಷಣವಾಗಿದೆ. ಸಂಪತ್ತಿನ ಅಸಮಾನತೆ, ಕಲ್ಯಾಣ ಕಾರ್ಯಕ್ರಮಗಳ ಹಿಂತೆಗೆತ, ಪ್ರಭುತ್ವದ ಭ್ರಷ್ಟಾಚಾರ, ಪ್ರಜಾತಾಂತ್ರಿಕ ಹೊಣೆಗಾರಿಕೆಯ ಕೊರತೆ ಈ ಹೋರಾಟ-ಪ್ರತಿಭಟನೆಗಳ ಕೇಂದ್ರ ವಿಷಯಗಳಾಗಿದ್ದು, ನಡೆದದ್ದೇ ಮಾರ್ಗ ಎಂಬುದಕ್ಕೆ ತಡೆಯಾಗಿದೆ. ಸಾಕಷ್ಟು ವೈವಿಧ್ಯಮಯವಾದ ಒಂದು ಹೊಸ ಬಗೆಯ ರಾಜಕೀಯ ಪ್ರಜ್ಞೆಯು ಜಾಗೃತಗೊಳ್ಳುತ್ತಿರುವುದನ್ನು ಈ ಪ್ರತಿಭಟನೆಗಳು ಪ್ರತಿನಿಧಿಸುತ್ತವೆ. ಇವುಗಳಲ್ಲಿ ಕೆಲವು ಪ್ರತಿಗಾಮಿಯಾಗಿದ್ದರೆ, ಹೆಚ್ಚು ಪ್ರಗತಿಶೀಲವಾಗಿದ್ದವು. ಕೆಲವು ಪ್ರತಿಭಟನೆಗಳು ಕಾಯ್ದೆಗಳ ರದ್ದತಿಗಾಗಿ ಆಗ್ರಹಿಸಿದ್ದರೆ, ಇನ್ನು ಕೆಲವು ದೇಶದ ಸಂವಿಧಾನವನ್ನು ಕಿತ್ತು ಹಾಕುವುದಕ್ಕಾಗಿ-ಬದಲಿಸುವುದಕ್ಕಾಗಿ ನಡೆದವು. ಇನ್ನು ಕೆಲವು, ದೇಶ ಸಾಗುತ್ತಿರುವ ದಿಕ್ಕಿನ ವಿರುದ್ಧದ ನಿರಾಶೆಯ ಅಭಿವ್ಯಕ್ತಿಯಾಗಿದ್ದವು.

2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಈ ಹೋರಾಟಗಳು ಹೊಸ ಸವಾಲುಗಳನ್ನು ಎದುರಿಸಿದವು. ಸಾರ್ವಜನಿಕ ಸಭೆಗಳ ನಿಷೇಧವು, ಪ್ರತಿಭಟನೆಗಳನ್ನು ತಡೆಯಲು ಪ್ರಭುತ್ವಕ್ಕೆ ಪರವಾನಗಿ ನೀಡಿದಂತಾಗಿತ್ತು. ಸಾಂಕ್ರಾಮಿಕದ ಮೊದಲ ಅಲೆಯ ಸಂದರ್ಭದಲ್ಲಿ, ಜಗತ್ತಿನಾದ್ಯಂತ ಚಳವಳಿಗಳು ಆನ್‌ಲೈನ್ ಸಭೆ, ಟ್ವಿಟರ್ ಕ್ಯಾಂಪೇನ್ ಮತ್ತು ವೆಬಿನಾರ್‌ಗಳಂತಹ ಆನ್‌ಲೈನ್ ಸ್ವರೂಪಕ್ಕೆ ಬದಲಿಸಿಕೊಂಡು ಮುಂದುವರೆದವು.

ನಿಕರಾಗುವಾ ಮತ್ತು ಲೆಬನಾನ್‌ನಂತಹ ದೇಶಗಳಲ್ಲಿ, ಕಲ್ಯಾಣ ಕಾರ್ಯಕ್ರಮಗಳ ಕೊರತೆಯು ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿತು. ನೈಜೀರಿಯಾ, ಅಮೆರಿಕ ಮತ್ತು ಕೊಲಂಬಿಯಾದಂತಹ ದೇಶಗಳಲ್ಲಿ, ಸಾಂಕ್ರಾಮಿಕದ ಸಂದರ್ಭದಲ್ಲೂ ಅನಿಯಂತ್ರಿತ ಪೊಲೀಸ್ ಬಲಪ್ರಯೋಗ ಪ್ರತಿಭಟನೆಗಳ ಕೇಂದ್ರ ವಸ್ತುವಾಗಿತ್ತು. ಸುಡಾನ್, ಚಿಲಿ ಮತ್ತು ಅಲ್ಜಿರಿಯಾದಂತಹ ದೇಶಗಳಲ್ಲಿ ಸಂವಿಧಾನ ಬದಲಾವಣೆಯ ವಿಷಯವಾಗಿ ಪ್ರತಿಭಟನೆಗಳು ನಡೆದವು. ಬೊಲಿವಿಯಾ, ಕಿರ್ಗಿಸ್ತಾನ್ ಮತ್ತು ಪೆರುನಂತಹ ದೇಶಗಳಲ್ಲಿ ಚುನಾವಣಾ ಪ್ರಕ್ರಿಯೆಯನ್ನು ತಿರುಚುವುದರ ವಿರುದ್ಧ ಪ್ರತಿಭಟನೆಗಳು ನಡೆದವು. ನೈಜಿರಿಯಾ, ಭಾರತ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿ ಸಾಂಕ್ರಾಮಿಕದ ಸಂದರ್ಭದಲ್ಲಿ ಜನವಿರೋಧಿ ಕಾನೂನುಗಳಿಗೆ ಅಂಗೀಕಾರ ಮಾಡಿದ್ದರ ವಿರುದ್ಧ ಚಳವಳಿಗಳು ನಡೆಯುತ್ತಿವೆ.

ಬಹುಪಾಲು ಸಾಮೂಹಿಕ ಪ್ರತಿಭಟನೆಗಳು ಪ್ರಭುತ್ವಕ್ಕೆ ನೀಡಿದ ಪ್ರತಿಕ್ರಿಯೆಯಾಗಿದ್ದವು. ಕೆಲವು ಪ್ರತಿಗಾಮಿಯಾಗಿದ್ದವು, ಕೆಲವು ಪ್ರಗತಿಶೀಲವಾಗಿದ್ದವು, ಆದರೆ ಎಲ್ಲವೂ ಪ್ರಭುತ್ವದೊಂದಿಗಿನ ಅಸಮಾಧಾನದ ಅಭಿವ್ಯಕ್ತಿಯೇ ಆಗಿದ್ದವು. ಉಗ್ರ ರಾಷ್ಟ್ರೀಯವಾದದ ಬೆಳವಣಿಗೆಯ ಜೊತೆಜೊತೆಗೇ ಪ್ರಭುತ್ವದ ಮೇಲಿನ ಅಸಮಾಧಾನವು ಹೊರಹೊಮ್ಮಿತು. ಮೂಲದಲ್ಲಿ ಜನರು ಮತ್ತು ಪ್ರಭುತ್ವದ ನಡುವೆ ಸಾಮಾಜಿಕ ಒಪ್ಪಂದವನ್ನು ಪ್ರತಿನಿಧಿಸುವ ರಾಷ್ಟ್ರೀಯತೆಯು ಜಗತ್ತಿನ ಜನತೆಯನ್ನು ನಿರಾಶೆಗೊಳಿಸುತ್ತಿದೆ. ಪರ್ಯಾಯದ ಸಾಧ್ಯತೆ ಗೋಚರಿಸದ ಕಾರಣ ಜನರು ಈ ಬಗೆಯ ಪ್ರತಿಭಟನೆಗಳಲ್ಲಿ ತೊಡಗಿದ್ದಾರೆ. ಪ್ರಭುತ್ವವು ಜನರನ್ನು ವಿಫಲಗೊಳಿಸುತ್ತಿದೆ ಎಂದು ಹೇಳುತ್ತಿರುವ ಜನರು, ತಮ್ಮ ದೇಶದ ಜೊತೆಗಿನ ಸಾಮಾಜಿಕ ಒಪ್ಪಂದದ ಮಾದರಿಗಳನ್ನು ಪ್ರಶ್ನಿಸುತ್ತಿದ್ದಾರೆ. ರಾಷ್ಟ್ರ-ಪ್ರಭುತ್ವವು ತಮ್ಮ ಸಾಮಾಜಿಕ ವ್ಯವಸ್ಥೆಯನ್ನು ಒತ್ತಾಯಪೂರ್ವಕವಾಗಿ ಜಾರಿಗೊಳಿಸಬೇಕೆಂದು ಪ್ರತಿಗಾಮಿಗಳು ಒತ್ತಾಯಿಸಿದರೆ, ಪ್ರಗತಿಪರರು ಪ್ರಭುತ್ವದಿಂದ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವಕ್ಕಾಗಿ ಆಗ್ರಹಿಸುತ್ತಿದ್ದಾರೆ. ಬಹುಪಾಲು ದೇಶಗಳಲ್ಲಿ ಇವುಗಳ ನಡುವಿನ ಗೆರೆ ಮಸುಕಾಗಿದೆ.

ಇದೇ ಸಂದರ್ಭದಲ್ಲಿ, 2020ರಲ್ಲಿನ ಪ್ರತಿಭಟನೆಗಳ ಕುರಿತ ಪ್ರಶ್ನೆಗಳು ನಮ್ಮನ್ನು ಕಾಡತೊಡಗುತ್ತವೆ. ಪ್ರತಿಭಟನೆಗಳು ಕೆಲವೊಮ್ಮೆ ಪ್ರತಿಗಾಮಿಯಾಗಿರಬಹುದು ಆದರೆ ಬಹುತೇಕ ಕಡೆಗಳಲ್ಲಿ ಜನಪರವಾದ ಪ್ರತಿಭಟನೆಗಳೇ ನಡೆದಿರುವುದು ಮುಖ್ಯವಾಗಿದೆ. ಅಮೆರಿಕದಲ್ಲಿ ಜನಾಂಗೀಯ ಹಿಂಸೆಯ ವಿರುದ್ಧ ಸಾಮೂಹಿಕ ಪ್ರತಿಭಟನೆಗಳು ನಡೆದವು. ಸಾಂಕ್ರಾಮಿಕದ ಸಂದರ್ಭದಲ್ಲಿ ಬಡವರ ಸುರಕ್ಷತೆಗಾಗಿ ಆರೋಗ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳ ಜಾರಿಗೆ ಒತ್ತಾಯಿಸಿಯೂ ಪ್ರತಿಭಟನೆಗಳು ನಡೆದವು. ಬೊಲಿವಿಯದಂತಹ ದೇಶಗಳಲ್ಲಿ ಆಡಳಿತವನ್ನು ಕಿತ್ತೆಸೆದಿದ್ದನ್ನು ನಾವು ನೋಡಿದ್ದೇವೆ. ಪ್ರತಿಭಟನೆಗಳು, ಅದರಲ್ಲೂ ಮುಖ್ಯವಾಗಿ, ಭ್ರಷ್ಟಾಚಾರದ ವಿರುದ್ಧ ವೃತ್ತಿಪರ ಮಧ್ಯಮವರ್ಗಗಳು ನಡೆಸುತ್ತಿರುವ ಪ್ರತಿಭಟನೆಗಳು ಸಂಶಯಾಸ್ಪದವಾಗಿವೆ. ಅವು ಸಾಮಾನ್ಯವಾಗಿ ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟ ದುರ್ಬಲ ಸಮುದಾಯಗಳ ವಿರೋಧಿಯಾಗಿವೆ. ಇನ್ನು ವಿವಿಧ ದೇಶಗಳಲ್ಲಿ ಅಲ್ಲಿನ ಗಣ್ಯರ ಮತ್ತು ಸಿರಿವಂತರ ಹಿತಾಸಕ್ತಿಗಳನ್ನು ಕಾಪಾಡಲು ಪ್ರತಿಭಟನೆಗಳ ಕವರೇಜ್ ಮಾಡಲಾಗುತ್ತಿದೆ. ವಿವಿಧ ದೇಶಗಳ ತುಳಿತಕ್ಕೊಳಗಾದ ಜನರು ಒಂದು ಸಮಾನ ಹೋರಾಟವನ್ನು ಕಾಣಲು ಇದು ಸಾಕಷ್ಟು ಅವಕಾಶವನ್ನು ನೀಡಲಾರದು. ಆದರೆ ಇದು ಈ ಪ್ರತಿಭಟನೆಗಳ ಸಾರ್ಥಕತೆಯ ಬಗ್ಗೆ ನಾವು ಸಂಶಯಿಸಲು ಕಾರಣವಾಗಬಾರದು. ಪ್ರಗತಿಶೀಲ ಹೋರಾಟಗಳ ಮೂಲಕ ಪ್ರತಿಗಾಮಿ ಪ್ರತಿಭಟನೆಗಳನ್ನು ಯಶಸ್ವಿಯಾಗಿ ಎದುರಿಸಬಹುದು.

2021ಕ್ಕೆ ಕಾಲಿಡುತ್ತಿದ್ದರೂ ಇನ್ನೂ ಸಾಂಕ್ರಾಮಿಕ ಪಿಡುಗು ತೊಲಗಿಲ್ಲ. ಕೋವಿಡ್‌ನ ಹೊಸ ಸ್ವರೂಪ ಮತ್ತು ಹೊಸ ಅಲೆಗಳ ಬಗ್ಗೆ ಆತಂಕಗಳಿವೆ. ಜಗತ್ತಿನಾದ್ಯಂತ ಪ್ರತಿಭಟನೆಗಳು ಈ ಅಪಾಯಕ್ಕೆ ಹೊಂದಿಕೊಳ್ಳುವ ಸಾಹಸ ಮಾಡುತ್ತಿವೆ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳಿದ್ದರೆ, ಪ್ರತಿಭಟನೆಗಳು ಸಾಂಕ್ರಾಮಿಕ ಹರಡುವಿಕೆಗೆ ಕಾರಣವಾಗುವುದಿಲ್ಲ ಎಂದು ಅಮೆರಿಕದಲ್ಲಿ ಅಧ್ಯಯನವೊಂದು ದೃಢೀಕರಿಸಿದೆ. ಹೀಗಿದ್ದೂ, ಸಾರ್ವಜನಿಕ ಸಭೆಗಳನ್ನು ತಡೆಯಲು ಪ್ರಭುತ್ವವು ಈಗಲೂ ಒಂದು ನೈತಿಕ ನ್ಯಾಯಸಮ್ಮತತೆಯನ್ನು ಹೊಂದಿದೆ ಎಂಬಂತೆ ನಡೆದುಕೊಳ್ಳುತ್ತಿದೆ.

2021ರ ಆಗಮನವನ್ನು ನಿರೀಕ್ಷಿಸುತ್ತಿರುವಂತೆಯೇ, ಹೊಸ ಪ್ರಜಾತಾಂತ್ರಿಕ ಪ್ರಕ್ರಿಯೆಯ ಬಹುಮುಖ್ಯ ಭಾಗವಾಗಿ ಪ್ರತಿಭಟನೆಗಳು ಇನ್ನಷ್ಟು ಹೆಚ್ಚಲಿವೆ. ನಾವು ಮುಂದಕ್ಕೆ ಚಲಿಸಿದಂತೆ, ಯಾರಿಗಾಗಿ ಪ್ರತಿಭಟನೆಗಳು, ಪ್ರತಿಭಟನೆ ಮಾಡಲು ಯಾರಿಗೆ ಸಮ್ಮತಿಸಬೇಕು, ಯಾವುದಕ್ಕಾಗಿ ಪ್ರತಿಭಟಿಸಲು ನಮಗೆ ಅನುಮತಿಯಿದೆ- ಇಂತಹ ಪ್ರಶ್ನೆ ಗಳನ್ನು ಕೇಳಲು ಆರಂಭಿಸಬಹುದು. ಆದರೆ, ಪ್ರಭುತ್ವದ ಅಧಿಕಾರದ ಮೇಲೆ ನಿಗಾ ಇಡಲು, ಪ್ರತಿರೋಧ ತೋರಲು ಈ ಪ್ರತಿಭಟನೆಗಳು ಬಹುಮುಖ್ಯ ಎಂಬುದನ್ನು ಇನ್ನು ಮುಂದೆ ಪ್ರಶ್ನಿಸಲಾಗದು.

ಅನುವಾದ: ಮಲ್ಲನಗೌಡರ್

ಕಿಶೋರ್ ಗೋವಿಂದ

ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಕಂಗಾನಾ ಮುಂಬೈಗೆ ಮರಳಿದ್ದಾರೆಂದು ಎನ್‌‌ಸಿಬಿಗೆ ನೆನಪಿಸಿದ ಕಾಂಗ್ರೆಸ್- ಕಾರಣವೇನು ಗೊತ್ತೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...