Homeಮುಖಪುಟಹಿನ್ನೋಟ 2020: ಕೊರೊನಾ ನಿಯಂತ್ರಣದ ನಡುವೆಯೂ ಪ್ರತಿಭಟಿಸಿದ ಜಗತ್ತು

ಹಿನ್ನೋಟ 2020: ಕೊರೊನಾ ನಿಯಂತ್ರಣದ ನಡುವೆಯೂ ಪ್ರತಿಭಟಿಸಿದ ಜಗತ್ತು

- Advertisement -
- Advertisement -

2020 ಇನ್ನೇನು ಮುಗಿಯಲಿದೆ. ಜಗತ್ತಿಗೆ ಇದು ಐತಿಹಾಸಿಕ ಸಂಗತಿಯಾಗಿ ಉಳಿದುಕೊಳ್ಳಲಿದೆ. ಅನ್ಯಾಯಯುತ ಕಾಯ್ದೆಗಳ ವಿರುದ್ಧದ ಪ್ರತಿಭಟನೆಗಳು ನಮ್ಮ ರಾಜಕೀಯ ಕಲ್ಪನೆಯನ್ನು ಪ್ರಭಾವಿಸುತ್ತಿರುವ ಈ ಸಂದರ್ಭದಲ್ಲಿ ನಾವು ಭಾರತೀಯರು ಪೂರ್ತಿ ಒಂದು ಸುತ್ತು ಹಾಕಿ ಅಲ್ಲಿಗೇ ಬಂದು ನಿಂತಿದ್ದೇವೆ. ಈ ಹೋರಾಟಗಳಲ್ಲಿ ನಾವು ಏಕಾಂಗಿಯಲ್ಲ. ವಿವಿಧ ಹೋರಾಟಗಳಲ್ಲಿ ನಿರತವಾಗಿರುವ ಜಾಗತಿಕ ಸಮುದಾಯದ ಭಾಗವಾಗಿದ್ದೇವೆ ನಾವು.

ಅರಬ್ ಹೋರಾಟದಿಂದ (ಅರಬ್ ವಸಂತದಿಂದ) 2019ರವರೆಗೆ ಜಗತ್ತು ಹೊಸ ತಲೆಮಾರಿನ ಅನೇಕ ಹೋರಾಟಗಳಿಗೆ ಸಾಕ್ಷಿಯಾಗಿತ್ತು. ಬದಲಾವಣೆಗೆ ಆಗ್ರಹಿಸುವ ಮತ್ತು ಪ್ರಭುತ್ವಕ್ಕೆ ಪ್ರತಿಕ್ರಿಯಿಸುವ ಈ ಹೋರಾಟಗಳು ಸ್ವಯಂಪ್ರೇರಿತವಾಗಿದ್ದು, ನಾಯಕರಹಿತ ಆದರೆ ಸಾಮೂಹಿಕ ನಾಯಕತ್ವದ ಗುಣಲಕ್ಷಣಗಳನ್ನು ಹೊಂದಿರುವುದು ಇವುಗಳ ಸಾಮಾನ್ಯ ಲಕ್ಷಣವಾಗಿದೆ. ಸಂಪತ್ತಿನ ಅಸಮಾನತೆ, ಕಲ್ಯಾಣ ಕಾರ್ಯಕ್ರಮಗಳ ಹಿಂತೆಗೆತ, ಪ್ರಭುತ್ವದ ಭ್ರಷ್ಟಾಚಾರ, ಪ್ರಜಾತಾಂತ್ರಿಕ ಹೊಣೆಗಾರಿಕೆಯ ಕೊರತೆ ಈ ಹೋರಾಟ-ಪ್ರತಿಭಟನೆಗಳ ಕೇಂದ್ರ ವಿಷಯಗಳಾಗಿದ್ದು, ನಡೆದದ್ದೇ ಮಾರ್ಗ ಎಂಬುದಕ್ಕೆ ತಡೆಯಾಗಿದೆ. ಸಾಕಷ್ಟು ವೈವಿಧ್ಯಮಯವಾದ ಒಂದು ಹೊಸ ಬಗೆಯ ರಾಜಕೀಯ ಪ್ರಜ್ಞೆಯು ಜಾಗೃತಗೊಳ್ಳುತ್ತಿರುವುದನ್ನು ಈ ಪ್ರತಿಭಟನೆಗಳು ಪ್ರತಿನಿಧಿಸುತ್ತವೆ. ಇವುಗಳಲ್ಲಿ ಕೆಲವು ಪ್ರತಿಗಾಮಿಯಾಗಿದ್ದರೆ, ಹೆಚ್ಚು ಪ್ರಗತಿಶೀಲವಾಗಿದ್ದವು. ಕೆಲವು ಪ್ರತಿಭಟನೆಗಳು ಕಾಯ್ದೆಗಳ ರದ್ದತಿಗಾಗಿ ಆಗ್ರಹಿಸಿದ್ದರೆ, ಇನ್ನು ಕೆಲವು ದೇಶದ ಸಂವಿಧಾನವನ್ನು ಕಿತ್ತು ಹಾಕುವುದಕ್ಕಾಗಿ-ಬದಲಿಸುವುದಕ್ಕಾಗಿ ನಡೆದವು. ಇನ್ನು ಕೆಲವು, ದೇಶ ಸಾಗುತ್ತಿರುವ ದಿಕ್ಕಿನ ವಿರುದ್ಧದ ನಿರಾಶೆಯ ಅಭಿವ್ಯಕ್ತಿಯಾಗಿದ್ದವು.

2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಈ ಹೋರಾಟಗಳು ಹೊಸ ಸವಾಲುಗಳನ್ನು ಎದುರಿಸಿದವು. ಸಾರ್ವಜನಿಕ ಸಭೆಗಳ ನಿಷೇಧವು, ಪ್ರತಿಭಟನೆಗಳನ್ನು ತಡೆಯಲು ಪ್ರಭುತ್ವಕ್ಕೆ ಪರವಾನಗಿ ನೀಡಿದಂತಾಗಿತ್ತು. ಸಾಂಕ್ರಾಮಿಕದ ಮೊದಲ ಅಲೆಯ ಸಂದರ್ಭದಲ್ಲಿ, ಜಗತ್ತಿನಾದ್ಯಂತ ಚಳವಳಿಗಳು ಆನ್‌ಲೈನ್ ಸಭೆ, ಟ್ವಿಟರ್ ಕ್ಯಾಂಪೇನ್ ಮತ್ತು ವೆಬಿನಾರ್‌ಗಳಂತಹ ಆನ್‌ಲೈನ್ ಸ್ವರೂಪಕ್ಕೆ ಬದಲಿಸಿಕೊಂಡು ಮುಂದುವರೆದವು.

ನಿಕರಾಗುವಾ ಮತ್ತು ಲೆಬನಾನ್‌ನಂತಹ ದೇಶಗಳಲ್ಲಿ, ಕಲ್ಯಾಣ ಕಾರ್ಯಕ್ರಮಗಳ ಕೊರತೆಯು ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿತು. ನೈಜೀರಿಯಾ, ಅಮೆರಿಕ ಮತ್ತು ಕೊಲಂಬಿಯಾದಂತಹ ದೇಶಗಳಲ್ಲಿ, ಸಾಂಕ್ರಾಮಿಕದ ಸಂದರ್ಭದಲ್ಲೂ ಅನಿಯಂತ್ರಿತ ಪೊಲೀಸ್ ಬಲಪ್ರಯೋಗ ಪ್ರತಿಭಟನೆಗಳ ಕೇಂದ್ರ ವಸ್ತುವಾಗಿತ್ತು. ಸುಡಾನ್, ಚಿಲಿ ಮತ್ತು ಅಲ್ಜಿರಿಯಾದಂತಹ ದೇಶಗಳಲ್ಲಿ ಸಂವಿಧಾನ ಬದಲಾವಣೆಯ ವಿಷಯವಾಗಿ ಪ್ರತಿಭಟನೆಗಳು ನಡೆದವು. ಬೊಲಿವಿಯಾ, ಕಿರ್ಗಿಸ್ತಾನ್ ಮತ್ತು ಪೆರುನಂತಹ ದೇಶಗಳಲ್ಲಿ ಚುನಾವಣಾ ಪ್ರಕ್ರಿಯೆಯನ್ನು ತಿರುಚುವುದರ ವಿರುದ್ಧ ಪ್ರತಿಭಟನೆಗಳು ನಡೆದವು. ನೈಜಿರಿಯಾ, ಭಾರತ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿ ಸಾಂಕ್ರಾಮಿಕದ ಸಂದರ್ಭದಲ್ಲಿ ಜನವಿರೋಧಿ ಕಾನೂನುಗಳಿಗೆ ಅಂಗೀಕಾರ ಮಾಡಿದ್ದರ ವಿರುದ್ಧ ಚಳವಳಿಗಳು ನಡೆಯುತ್ತಿವೆ.

ಬಹುಪಾಲು ಸಾಮೂಹಿಕ ಪ್ರತಿಭಟನೆಗಳು ಪ್ರಭುತ್ವಕ್ಕೆ ನೀಡಿದ ಪ್ರತಿಕ್ರಿಯೆಯಾಗಿದ್ದವು. ಕೆಲವು ಪ್ರತಿಗಾಮಿಯಾಗಿದ್ದವು, ಕೆಲವು ಪ್ರಗತಿಶೀಲವಾಗಿದ್ದವು, ಆದರೆ ಎಲ್ಲವೂ ಪ್ರಭುತ್ವದೊಂದಿಗಿನ ಅಸಮಾಧಾನದ ಅಭಿವ್ಯಕ್ತಿಯೇ ಆಗಿದ್ದವು. ಉಗ್ರ ರಾಷ್ಟ್ರೀಯವಾದದ ಬೆಳವಣಿಗೆಯ ಜೊತೆಜೊತೆಗೇ ಪ್ರಭುತ್ವದ ಮೇಲಿನ ಅಸಮಾಧಾನವು ಹೊರಹೊಮ್ಮಿತು. ಮೂಲದಲ್ಲಿ ಜನರು ಮತ್ತು ಪ್ರಭುತ್ವದ ನಡುವೆ ಸಾಮಾಜಿಕ ಒಪ್ಪಂದವನ್ನು ಪ್ರತಿನಿಧಿಸುವ ರಾಷ್ಟ್ರೀಯತೆಯು ಜಗತ್ತಿನ ಜನತೆಯನ್ನು ನಿರಾಶೆಗೊಳಿಸುತ್ತಿದೆ. ಪರ್ಯಾಯದ ಸಾಧ್ಯತೆ ಗೋಚರಿಸದ ಕಾರಣ ಜನರು ಈ ಬಗೆಯ ಪ್ರತಿಭಟನೆಗಳಲ್ಲಿ ತೊಡಗಿದ್ದಾರೆ. ಪ್ರಭುತ್ವವು ಜನರನ್ನು ವಿಫಲಗೊಳಿಸುತ್ತಿದೆ ಎಂದು ಹೇಳುತ್ತಿರುವ ಜನರು, ತಮ್ಮ ದೇಶದ ಜೊತೆಗಿನ ಸಾಮಾಜಿಕ ಒಪ್ಪಂದದ ಮಾದರಿಗಳನ್ನು ಪ್ರಶ್ನಿಸುತ್ತಿದ್ದಾರೆ. ರಾಷ್ಟ್ರ-ಪ್ರಭುತ್ವವು ತಮ್ಮ ಸಾಮಾಜಿಕ ವ್ಯವಸ್ಥೆಯನ್ನು ಒತ್ತಾಯಪೂರ್ವಕವಾಗಿ ಜಾರಿಗೊಳಿಸಬೇಕೆಂದು ಪ್ರತಿಗಾಮಿಗಳು ಒತ್ತಾಯಿಸಿದರೆ, ಪ್ರಗತಿಪರರು ಪ್ರಭುತ್ವದಿಂದ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವಕ್ಕಾಗಿ ಆಗ್ರಹಿಸುತ್ತಿದ್ದಾರೆ. ಬಹುಪಾಲು ದೇಶಗಳಲ್ಲಿ ಇವುಗಳ ನಡುವಿನ ಗೆರೆ ಮಸುಕಾಗಿದೆ.

ಇದೇ ಸಂದರ್ಭದಲ್ಲಿ, 2020ರಲ್ಲಿನ ಪ್ರತಿಭಟನೆಗಳ ಕುರಿತ ಪ್ರಶ್ನೆಗಳು ನಮ್ಮನ್ನು ಕಾಡತೊಡಗುತ್ತವೆ. ಪ್ರತಿಭಟನೆಗಳು ಕೆಲವೊಮ್ಮೆ ಪ್ರತಿಗಾಮಿಯಾಗಿರಬಹುದು ಆದರೆ ಬಹುತೇಕ ಕಡೆಗಳಲ್ಲಿ ಜನಪರವಾದ ಪ್ರತಿಭಟನೆಗಳೇ ನಡೆದಿರುವುದು ಮುಖ್ಯವಾಗಿದೆ. ಅಮೆರಿಕದಲ್ಲಿ ಜನಾಂಗೀಯ ಹಿಂಸೆಯ ವಿರುದ್ಧ ಸಾಮೂಹಿಕ ಪ್ರತಿಭಟನೆಗಳು ನಡೆದವು. ಸಾಂಕ್ರಾಮಿಕದ ಸಂದರ್ಭದಲ್ಲಿ ಬಡವರ ಸುರಕ್ಷತೆಗಾಗಿ ಆರೋಗ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳ ಜಾರಿಗೆ ಒತ್ತಾಯಿಸಿಯೂ ಪ್ರತಿಭಟನೆಗಳು ನಡೆದವು. ಬೊಲಿವಿಯದಂತಹ ದೇಶಗಳಲ್ಲಿ ಆಡಳಿತವನ್ನು ಕಿತ್ತೆಸೆದಿದ್ದನ್ನು ನಾವು ನೋಡಿದ್ದೇವೆ. ಪ್ರತಿಭಟನೆಗಳು, ಅದರಲ್ಲೂ ಮುಖ್ಯವಾಗಿ, ಭ್ರಷ್ಟಾಚಾರದ ವಿರುದ್ಧ ವೃತ್ತಿಪರ ಮಧ್ಯಮವರ್ಗಗಳು ನಡೆಸುತ್ತಿರುವ ಪ್ರತಿಭಟನೆಗಳು ಸಂಶಯಾಸ್ಪದವಾಗಿವೆ. ಅವು ಸಾಮಾನ್ಯವಾಗಿ ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟ ದುರ್ಬಲ ಸಮುದಾಯಗಳ ವಿರೋಧಿಯಾಗಿವೆ. ಇನ್ನು ವಿವಿಧ ದೇಶಗಳಲ್ಲಿ ಅಲ್ಲಿನ ಗಣ್ಯರ ಮತ್ತು ಸಿರಿವಂತರ ಹಿತಾಸಕ್ತಿಗಳನ್ನು ಕಾಪಾಡಲು ಪ್ರತಿಭಟನೆಗಳ ಕವರೇಜ್ ಮಾಡಲಾಗುತ್ತಿದೆ. ವಿವಿಧ ದೇಶಗಳ ತುಳಿತಕ್ಕೊಳಗಾದ ಜನರು ಒಂದು ಸಮಾನ ಹೋರಾಟವನ್ನು ಕಾಣಲು ಇದು ಸಾಕಷ್ಟು ಅವಕಾಶವನ್ನು ನೀಡಲಾರದು. ಆದರೆ ಇದು ಈ ಪ್ರತಿಭಟನೆಗಳ ಸಾರ್ಥಕತೆಯ ಬಗ್ಗೆ ನಾವು ಸಂಶಯಿಸಲು ಕಾರಣವಾಗಬಾರದು. ಪ್ರಗತಿಶೀಲ ಹೋರಾಟಗಳ ಮೂಲಕ ಪ್ರತಿಗಾಮಿ ಪ್ರತಿಭಟನೆಗಳನ್ನು ಯಶಸ್ವಿಯಾಗಿ ಎದುರಿಸಬಹುದು.

2021ಕ್ಕೆ ಕಾಲಿಡುತ್ತಿದ್ದರೂ ಇನ್ನೂ ಸಾಂಕ್ರಾಮಿಕ ಪಿಡುಗು ತೊಲಗಿಲ್ಲ. ಕೋವಿಡ್‌ನ ಹೊಸ ಸ್ವರೂಪ ಮತ್ತು ಹೊಸ ಅಲೆಗಳ ಬಗ್ಗೆ ಆತಂಕಗಳಿವೆ. ಜಗತ್ತಿನಾದ್ಯಂತ ಪ್ರತಿಭಟನೆಗಳು ಈ ಅಪಾಯಕ್ಕೆ ಹೊಂದಿಕೊಳ್ಳುವ ಸಾಹಸ ಮಾಡುತ್ತಿವೆ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳಿದ್ದರೆ, ಪ್ರತಿಭಟನೆಗಳು ಸಾಂಕ್ರಾಮಿಕ ಹರಡುವಿಕೆಗೆ ಕಾರಣವಾಗುವುದಿಲ್ಲ ಎಂದು ಅಮೆರಿಕದಲ್ಲಿ ಅಧ್ಯಯನವೊಂದು ದೃಢೀಕರಿಸಿದೆ. ಹೀಗಿದ್ದೂ, ಸಾರ್ವಜನಿಕ ಸಭೆಗಳನ್ನು ತಡೆಯಲು ಪ್ರಭುತ್ವವು ಈಗಲೂ ಒಂದು ನೈತಿಕ ನ್ಯಾಯಸಮ್ಮತತೆಯನ್ನು ಹೊಂದಿದೆ ಎಂಬಂತೆ ನಡೆದುಕೊಳ್ಳುತ್ತಿದೆ.

2021ರ ಆಗಮನವನ್ನು ನಿರೀಕ್ಷಿಸುತ್ತಿರುವಂತೆಯೇ, ಹೊಸ ಪ್ರಜಾತಾಂತ್ರಿಕ ಪ್ರಕ್ರಿಯೆಯ ಬಹುಮುಖ್ಯ ಭಾಗವಾಗಿ ಪ್ರತಿಭಟನೆಗಳು ಇನ್ನಷ್ಟು ಹೆಚ್ಚಲಿವೆ. ನಾವು ಮುಂದಕ್ಕೆ ಚಲಿಸಿದಂತೆ, ಯಾರಿಗಾಗಿ ಪ್ರತಿಭಟನೆಗಳು, ಪ್ರತಿಭಟನೆ ಮಾಡಲು ಯಾರಿಗೆ ಸಮ್ಮತಿಸಬೇಕು, ಯಾವುದಕ್ಕಾಗಿ ಪ್ರತಿಭಟಿಸಲು ನಮಗೆ ಅನುಮತಿಯಿದೆ- ಇಂತಹ ಪ್ರಶ್ನೆ ಗಳನ್ನು ಕೇಳಲು ಆರಂಭಿಸಬಹುದು. ಆದರೆ, ಪ್ರಭುತ್ವದ ಅಧಿಕಾರದ ಮೇಲೆ ನಿಗಾ ಇಡಲು, ಪ್ರತಿರೋಧ ತೋರಲು ಈ ಪ್ರತಿಭಟನೆಗಳು ಬಹುಮುಖ್ಯ ಎಂಬುದನ್ನು ಇನ್ನು ಮುಂದೆ ಪ್ರಶ್ನಿಸಲಾಗದು.

ಅನುವಾದ: ಮಲ್ಲನಗೌಡರ್

ಕಿಶೋರ್ ಗೋವಿಂದ

ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಕಂಗಾನಾ ಮುಂಬೈಗೆ ಮರಳಿದ್ದಾರೆಂದು ಎನ್‌‌ಸಿಬಿಗೆ ನೆನಪಿಸಿದ ಕಾಂಗ್ರೆಸ್- ಕಾರಣವೇನು ಗೊತ್ತೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...