Homeಮುಖಪುಟ'ಬುದ್ಧನ ಕೆಫೆ'ಯಲ್ಲಿ 'ಪ್ರೀತಿ ವಿಸ್ತಾರತೆ'ಯ ಸಂದೇಶ ಸಾರುವ 'ಲವ್ ಅಂಡ್ ಲೆಟ್ ಲವ್' ಕಿರುಚಿತ್ರ

‘ಬುದ್ಧನ ಕೆಫೆ’ಯಲ್ಲಿ ‘ಪ್ರೀತಿ ವಿಸ್ತಾರತೆ’ಯ ಸಂದೇಶ ಸಾರುವ ‘ಲವ್ ಅಂಡ್ ಲೆಟ್ ಲವ್’ ಕಿರುಚಿತ್ರ

- Advertisement -
- Advertisement -

‘ಹೆಣ್ಣು, ಗಂಡು, ಅಥವಾ ಸಲಿಂಗಿ ಎಂಬ ಭೇದವೇ ಇಲ್ಲದೆ, ಮನುಷ್ಯರಾದ ನಾವೆಲ್ಲರೂ ಪ್ರೀತಿಗಾಗಿ ಹಂಬಲಿಸುತ್ತೇವೆ. ಹೆಣ್ಣಿಗೆ ಗಂಡಿನ ಪ್ರೀತಿಯ ಅಗತ್ಯವಿದೆ, ಹಾಗೆಯೇ ಗಂಡಿಗೆ ಹೆಣ್ಣಿನ ಪ್ರೀತಿಯ ಅಗತ್ಯವಿದೆ’ ಇವು ಕನ್ನಡದ ಖ್ಯಾತ ಲೇಖಕಿ ಎಚ್.ಎಸ್. ಶ್ರೀಮತಿ ಅವರು ತಮ್ಮ ‘ಬಾರಯ್ಯ ಮಮ ಬಂಧು’ ಎಂಬ ಅನುವಾದಿತ ಕೃತಿಗೆ ಬರೆದ ಸಾಲು.. ಹೀಗೆ ಹಲವರು, ಪ್ರೀತಿಯ ಹಲವು ರೀತಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ನೀವು, ನಿಮ್ಮತನ, ಇಡೀ ವಿಶ್ವದಲ್ಲಿರುವ ಯಾರಾದರೂ ನಿಮ್ಮ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಅರ್ಹರು’ ಎನ್ನುತ್ತಾನೆ ಇಡೀ ಜಗತ್ತಿಗೆ ಪ್ರೀತಿಯ ಕಾರುಣ್ಯವನ್ನು ಹಂಚಿದ ಗೌತಮ ಬುದ್ಧ. ‘ಕೆಫೆ ಬುದ್ಧ’ದಲ್ಲಿ ಕೊನೆಗೊಳ್ಳುವ ‘ಲವ್ ಅಂಡ್ ಲೆಟ್ ಲವ್’ ಕಿರುಚಿತ್ರ ಕೂಡ ಇದೇ ಸಂದೇಶವನ್ನು, ಯಾವುದೇ ಸಂಭಾಷಣೆ ಇಲ್ಲದೆ ಪ್ರೀತಿ ಭಾಷೆಯಾದ ಮೌನದಲ್ಲೇ ಹೇಳುತ್ತದೆ.

ತಮಿಳಿನ ಖ್ಯಾತ ಅಂಬೇಡ್ಕರ್‌ವಾದಿ ನಿರ್ದೇಶಕ ಪಾ. ರಂಜಿತ್ ಅವರು ತಮ್ಮ ನೀಲಂ ಸಂಸ್ಥೆ ಮೂಲಕ ಹಲವು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಚಿತ್ರ ನಿರ್ಮಾಣ, ಸಂಗೀತ ತಂಡ, ಕಿರುಚಿತ್ರ, ಪತ್ರಿಕೆ ಮುದ್ರಣ ಸೇರಿದಂತೆ ಹಲವು ಮಾಧ್ಯಮಗಳ ಮೂಲಕ ಅಂಬೇಡ್ಕರ್ ಮತ್ತು ಬುದ್ಧನ ಸಂದೇಶಗಳನ್ನು ಪ್ರಚಾರ ಮಾಡುತ್ತಿದ್ದಾರೆ. ತಮಿಳಿನ ‘ನಚ್ಚತ್ತಿರಮ್ ನಗರ್ಗಿರದು’ ಸಿನಿಮಾ ಮೂಲಕ ಪ್ರೀತಿಯ ವಿಸ್ತಾರತೆಯನ್ನು ಚರ್ಚಿಸಿದ್ದ ರಂಜಿತ್, ಇದೀಗ ‘ಲವ್ ಅಂಡ್ ಲೆಟ್ ಲವ್’ ಕಿರು ಚಿತ್ರವನ್ನು ನೋಡುಗರ ಮುಂದಿಟ್ಟಿದ್ದಾರೆ.

‘ಪ್ರೀತಿ ಎಂದರೆ ಹೆಣ್ಣು ಮತ್ತು ಗಂಡಿನ ನಡುವೆ ಮಾತ್ರ, ಅದರಲ್ಲೂ ಅವಿವಾಹಿತರ ನಡುವೆ ಇದ್ದರೆ ಮಾತ್ರ ಪ್ರೀತಿ ಪವಿತ್ರವಾದದದ್ದು’ ಎಂಬ ಭಾರತೀಯ ಚಲನಚಿತ್ರಗಳ ನಡುವೆ, ಪ್ರೀತಿ ವಿಸ್ತಾರತೆಯನ್ನು ಸಾರುವ ‘ಲವ್ ಅಂಡ್ ಲೆಟ್ ಲವ್’ ಕಿರುಚಿತ್ರ ಈ ಕಾಲಕ್ಕೆ ಮಾಡಲೇಬೇಕಾಗಿದ್ದ ಸಿನಿಮಾವಾಗಿದೆ. ಪ್ರೀತಿಗೆ ಯಾವುದೇ ಗಡಿ ಇಲ್ಲ, ಅದು ವಯಸ್ಕರು, ವಯೋವೃದ್ಧರು, ಯುವಕ-ಯುವತಿಯರು, ಸಮಾನ ಲಿಂಗಿಗಳಲ್ಲಿ ಅರಳುವ ಸಹಜ ಕ್ರಿಯೆ ಎಂಬುದನ್ನು ಚಿತ್ರ ಸಾರಿ ಹೇಳುತ್ತದೆ.

7 ನಿಮಿಷ, 47 ಸೆಕೆಂಡ್ ಅವಧಿಯ ಇಡೀ ಸಿನಿಮಾದಲ್ಲಿ ಒಂದೇ ಒಂದು ಸಂಭಾಷಣೆ ಇಲ್ಲ.. ನವಿರಾದ ಹಿನ್ನೆಲೆ ಸಂಗೀತ ಮತ್ತು ಕಣ್ಣ ಭಾಷೆಯೇ ನೋಡುಗರಿಗೆ ಎಲ್ಲವನ್ನೂ ತಲುಪಿಸುತ್ತವೆ. ಕ್ಯಾಮೆರಾ ಕೆಲಸವೂ ಕಥೆಗೆ ಪೂರಕವಾಗಿದ್ದು, ಸಿನಿಮಾದಲ್ಲಿ ಕಾಣಿಸುವ ಬಣ್ಣವು ಕಣ್ಣಿಗೆ ಮುದ ನೀಡುತ್ತದೆ. ತಾವು ಅಂದುಕೊಂಡಿದ್ದನ್ನು ತೆರೆಗೆ ತರುವಲ್ಲಿ ನಿರ್ದೇಶಕರಾದ ಶೈಲಜಾ ಪಡಿಂಡಾಲ ಯಶಸ್ವಿಯಾಗಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಭಾಗವಾಗಿರುವ ‘ಕ್ವೀರ್‌’ ಜಗತ್ತನ್ನು ‘ನಾನು ಲೇಡೀಸ್’ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ಅವರು, ‘ಲವ್ ಅಂಡ್ ಲೆಟ್ ಲವ್’ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

ನಿರ್ದೇಶಕರಾದ ಶೈಲಜಾ ಪಡಿಂಡಾಲ

ಪ್ರೀತಿಯನ್ನ ಅಧಿಕಾರವಾಗಲ್ಲದೆ, ಬಂಧವಾಗಿ ಮಾತ್ರವಲ್ಲದೆ ಬೆಳಕಾಗಿ, ಬಿಡುಗಡೆಗಾಗಿ ಎದುರು ನೋಡುವವರೇ ಹೆಚ್ಚು. ಇದೇ ಸ್ವತಂತ್ರವನ್ನು ಮುಕ್ತತೆಯನ್ನು ಹೇಳುವ ಕಿರು ಚಿತ್ರ ‘ಪ್ರೀತಿಸಿ ಮತ್ತು ಪ್ರೀತಿಸಲು ಬಿಡಿ’. ಪ್ರೇಮವೆನ್ನುವುದು ಸರಪಳಿಯಾಗದೇ ರೆಕ್ಕೆಯಾಗಬೇಕೆಂಬುದು ಎಲ್ಲಾ ಪ್ರೇಮಿಗಳ, ಮನುಷ್ಯರ ಕನಸು. ಆದರೆ ಸಮಾಜದ ಕಟ್ಟಲೆಗಳು ಪ್ರೇಮವನ್ನ ಸಂಕುಚಿತ ಚೌಕಟ್ಟುಗಳಿಗೆ ಒಳಪಡಿಸಿ, ಅದನ್ನು ಮುಕ್ತವಾಗಿ ಬಿಡದೇ ಬಂಧನವಾಗಿಸಿದೆ. ಇಲ್ಲಿ ಪ್ರೇಮಕ್ಕೆ ನೂರಾರು ಅಡೆತಡೆಗಳಿವೆ. ಧರ್ಮ, ಜಾತಿ, ಬಣ್ಣ, ವಯಸ್ಸು ಇನ್ನೂ ಏನೇನೋ. ಆದರೆ, ಪ್ರತಿಯೊಬ್ಬರು ತಮ್ಮಾಳದಲ್ಲಿ ಚಡಪಡಿಸುವುದು ಎದುರು ನೋಡುವುದು ಈ ಚೌಕಟ್ಟುಗಳನ್ನು ಮೀರಿಕೊಂಡ ಪ್ರೇಮಿಗಾಗಿಯೇ ಈ ಭಾವಕ್ಕೆ ಬೇಧ ವಿಲ್ಲ. ನೈಸರ್ಗಿಕವಾಗಿ ಅರಳುವ ಪ್ರೀತಿಯನ್ನು ಅದರ ಪಾಡಿಗೆ ಬಿಡಿ ಎಂಬ ಪ್ರಬಲ ಸಂದೇಶವನ್ನು ಈ ಸಿನಿಮಾ ಮೌನದಲ್ಲೇ ಕೂಗಿ ಹೇಳಿದೆ.

‘ಲವ್ ಅಂಡ್ ಲೆಟ್ ಲವ್‌’ ಚಿತ್ರದಲ್ಲಿ ಮಗಳ ಪಾತ್ರವು ಆಕೆ ಕೇವಲ ಲೆಸ್ಬಿಯನ್ ಎಂಬುದಲ್ಲ. ಅವಳ ಗುರುತು ಅವಳು ಕೇವಲ ಸಲಿಂಗಕಾಮಿ ಎಂದು ಅಲ್ಲ.. ಅವಳು ಓದುವ ಪುಸ್ತಕಗಳು ಅವಳ ಪಾತ್ರದ ಆಳವನ್ನು ನಿಖರವಾಗಿ ಹೇಳುತ್ತದೆ. ಅವಳು ಕ್ರಾಂತಿಕಾರಿ ವರ್ಣಚಿತ್ರಗಾರ್ತಿ ಫ್ರಿಡಾವನ್ನು ಆರಾಧಿಸುವ ಕಲಾವಿದೆ.

ಆಕೆಯ ದಿ ಡಾಟರ್, ಮ್ಯಾಕ್ಸಿಮ್ ಗೋರ್ಕಿ, ಔರ್ಡೆ ಲಾರ್ಡ್ ಅವರಂತಹ ಕಾದಂಬರಿಕಾರರು ಮತ್ತು ರಾಜಕೀಯ ಕಾರ್ಯಕರ್ತರನ್ನು ಆರಾಧಿಸುತ್ತಾಳೆ. ರಿಚರ್ಡ್ ಡಾಕಿನ್ಸ್ ಬರೆದಿರುವ SELFISH GENE ಪುಸ್ತಕವಿದೆ, ಆ ಪುಸ್ತಕವು ಮಾನವ ಧರ್ಮ ಮತ್ತು ದೇವರನ್ನು ಪ್ರಶ್ನಿಸುತ್ತದೆ.. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಾತಿ ವಿನಾಶದ ಪುಸ್ತಕವೂ ಇದೆ, ಈ ಪುಸ್ತಕಗಳು ಅವಳು ಚಿತ್ರದಲ್ಲಿ ಕ್ರಾಂತಿಕಾರಿ ಏನಾದರೂ ಮಾಡಲಿದ್ದಾಳೆಂದು ಸೂಚಿಸುತ್ತವೆ.

ಮತ್ತೊಂದು ಕಡೆ ಅವಳ ತಾಯಿಗೆ ಪುಸ್ತಕಗಳಲ್ಲಿ ಆಸಕ್ತಿಯಿಲ್ಲ; ವಾಸ್ತವವಾಗಿ ಅವರು ಇನ್ನೂ ತನ್ನ ಹಿಂದಿನ ನೆನಪಿನಲ್ಲಿ ದಿನಕಳೆಯುತ್ತಿದ್ದಾರೆ. ಹೀಗಾಗಿ, ಅವರ ಕೋಣೆಯಲ್ಲಿ ಅವರ ಹಳೆಯ ಚಿತ್ರಗಳನ್ನು ಹೊಂದಿದ್ದಾರೆ. ತನ್ನ ಮಗಳು ಚಿಕ್ಕವಳಿದ್ದಾಗ ರಚಿಸಿದ ರೇಖಾಚಿತ್ರವನ್ನು ಅವರು ಪ್ರೀತಿಯಿಂದ ರೂಪಿಸಿದ್ದಾರೆ, ಇದು ಅವರ ಮಗಳು ತನ್ನ ಜೀವನದ ಅಮೂಲ್ಯ ಅಂಶವಾಗಿದೆ ಎಂದು ತೋರಿಸುತ್ತದೆ.

ಸಮಾಜಕ್ಕೆ ವಿರುದ್ಧವಾದುದನ್ನು ಒಪ್ಪಿಕೊಳ್ಳುವ ಕಲಿಕೆಯು ತನ್ನ ಮಗಳಂತೆ ತಾಯಿಗೆ ಪುಸ್ತಕಗಳನ್ನು ಓದುವುದರಿಂದ ಬಂದಿಲ್ಲ. ಆದರೆ, ಆಕೆಯ ನಿಜ ಜೀವನದ ಅನುಭವದಿಂದ ಹಲವಾರು ಪಾಠ ಕಲಿತಿದ್ದಾರೆ. ಸಿಂಗಲ್ ಪೇರೆಂಟ್ ಆದ ಆಕೆಯು ತನ್ನ ಮಗಳನ್ನು ಬೆಳೆಸುವ ಪ್ರಯಾಣದಲ್ಲಿ ಬಹುಶಃ ಪಿತೃಪ್ರಧಾನ ಸಮಾಜದ ವಿರುದ್ಧ ಹೋರಾಡಿದ್ದಾಳೆ.

ಪ್ರೇಮಿಗಳ ದಿನದಂದು ಮನೆಯಿಂದ ಹೊರಡುವ ಮೊದಲು ತಾಯಿ ಮತ್ತು ಮಗಳು ತಬ್ಬಿಕೊಂಡಾಗ, ಅವರು ಸ್ನೇಹಿತರಂತೆ ಸಮಾನ ಸಂಬಂಧವನ್ನು ಹಂಚಿಕೊಳ್ಳುತ್ತಾರೆ. ಅವರದ್ದು ಪರಂಪರಾಗತವಾಗಿ ಬಂದ ಪೋಷಕರು-ಮಗಳ ಸಂಬಂಧವಲ್ಲ ಎಂಬುದನ್ನು ಸೂಚಿಸುತ್ತದೆ… ಒಳಗೊಳ್ಳುವಿಕೆಯ ಸಂಪೂರ್ಣ ತಿಳುವಳಿಕೆಯಿಂದ ಇದು ಸಾಧ್ಯ ಮತ್ತು ಅಂತಹ ವಾತಾವರಣದಲ್ಲಿ ಮಾತ್ರ ಪ್ರಗತಿಯು ಅರಳಬಹುದು ಎಂಬುದನ್ನು ಈ ದೃಶ್ಯ ಹೇಳುತ್ತದೆ. ತನ್ನ ಮಗುವನ್ನು ಒಂಟಿ ಪೋಷಕರಾಗಿ ಬೆಳೆಸುವಲ್ಲಿ ತಾಯಿಯ ಹೋರಾಟವು ಬಹುಶಃ ಮುಂದಿನ ಪೀಳಿಗೆಯು ತನ್ನ ಪೀಳಿಗೆಗೆ ಹೊಂದಿದ್ದ ಹಿಂಜರಿಕೆಯ ಸಂಪ್ರದಾಯಗಳಿಂದ ಬಳಲಬಾರದು ಎಂಬ ಪ್ರಗತಿಪರ ದೃಷ್ಟಿಕೋನವನ್ನು ನೀಡಿದೆ.

ಬುದ್ಧ ಕೆಫೆಯಲ್ಲಿ ತಾಯಿಯು ತನ್ನ ಸ್ನೇಹಿತನನ್ನು ಭೇಟಿಯಾದಾಗ, ಅವನು ಗಾರ್ಕಿಯ ಪುಸ್ತಕವನ್ನು ಓದುವುದನ್ನು ಸಹ ಕಾಣಬಹುದು. ಗಾರ್ಕಿಯ ಅತ್ಯಾಸಕ್ತಿಯ ಓದುಗನೂ ಆಗಿರುವ ಆತ ತನ್ನ ಮಗಳಿಗೆ ಒಳ್ಳೆಯ ತಂದೆಯಾಗಬಹುದು ಎಂಬುದನ್ನು ಹೇಳಲು ‘ರೂಪಕವಾಗಿ’ ಬಳಸಲಾಗಿದೆ.

ತಾಯಿ ಮತ್ತು ಮಗಳ ಪ್ರೇಮ ವಿಧಾನದಲ್ಲಿ ಭಿನ್ನವಾಗಿದ್ದರೂ, ಅವರಿಬ್ಬರೂ ತಮ್ಮ ಸಂಗಾತಿಗಳನ್ನು ಭೇಟಿಯಾಗಲು ಬುದ್ಧ ಕೆಫೆಗೆ ತೆರಳುತ್ತಾರೆ. ಬುದ್ಧ ಜಾತಿ ಹಾಗೂ ಸಾಮಾಜಿಕ ಕಟ್ಟುಪಾಡುಗಳನ್ನು ವಿರೋಧಿಸಿ ಮೊದಲ ರಾಜ! ಜಾತಿ ಬಂಡಾಯವಾದಾಗ ಮಾತ್ರ ಸಮಾಜದಲ್ಲಿ ವಿಮೋಚನೆಯ ಬೆಳವಣಿಗೆಯಾಗುತ್ತದೆ.
ಜಾತಿ, ಬಂಡವಾಳಶಾಹಿ ಮತ್ತು ಪಿತೃಪ್ರಭುತ್ವವು ಪರಸ್ಪರ ಸಂಬಂಧ ಹೊಂದಿದೆಯೆಂದರೆ, ಈ ಅಂಶಗಳನ್ನು ಬಂಡಾಯ ಮಾಡದೆ, ಮಹಿಳೆಯರಿಗೆ, ತುಳಿತಕ್ಕೊಳಗಾದವರಿಗೆ ಮತ್ತು ವಿಲಕ್ಷಣರಿಗೆ ಯಾವುದೇ ವಿಮೋಚನೆ ಇಲ್ಲ ಎಂದು ಹೇಳುತ್ತಾನೆ.

‘ಲವ್ ಅಂಡ್ ಲೆಟ್ ಲವ್’ ಚಿತ್ರದ ಕೊನೆಯ ದೃಶ್ಯ

ಬುದ್ಧ ಕೆಫೆಯಲ್ಲಿ ತನ್ನ ಸ್ನೇಹಿತನ್ನು ಭೇಟಿಯಾಗಲು ಬರುವ ತಾಯಿಯು, ಮಗಳನ್ನು ಆಕೆಯ ಸಲಿಂಗಿ ಸ್ನೇಹಿತೆಯೊಂದಿಗೆ ನೋಡಿ ಆತಂಕಕ್ಕೀಡಾಗುತ್ತಾಳೆ; ತಾನು ಹಿಡಿದಿದ್ದ ಸಂಗಾತಿಯ ಕೈ ಸಡಿಲಿಸುತ್ತಾಳೆ. ಕೆಲವೇ ಹೊತ್ತಿನಲ್ಲಿ ಆಕೆ ಇಬ್ಬರನ್ನು ತನ್ನ ಬಳಿಗೆ ಕರೆದು, ಅವರ ಪ್ರೀತಿಗೆ ಕಣ್ಣಿನಲ್ಲೆ ಸಮ್ಮತಿಸುತ್ತಾಳೆ. ಚಿತ್ರವು ಪರಸ್ಪರ ಒಪ್ಪಿಕೊಳ್ಳಲು ಹೆಚ್ಚಿನ ನಾಟಕವಿಲ್ಲದೆ, ಕಣ್ಣಸನ್ನೆಯ ಸಂತೋಷದಲ್ಲಿ ಕೊನೆಗೊಳ್ಳುತ್ತದೆ.

ಮಗಳಾಗಿ ಪಾತ್ರ ನಿರ್ವಹಿಸಿರುವ ಚೈತ್ರಾ ಜೆ. ಆಚಾರ್‌, ತಾಯಿಯಾಗಿ ಕೈಲಾಸಂ ಗೀತಾ ಸಹಜವಾಗಿ ನಟಿಸಿದ್ದಾರೆ. ಮಾಲಿನಿ ಮತ್ತು ಬೈಜು ಬುದ್ಧ ಕೆಫೆಯಲ್ಲಿ ಕಾಣಿಸಿಕೊಂಡು ಇಷ್ಟವಾಗುತ್ತಾರೆ. ‘ಪ್ರೀತಿಯೇ ಭಾಷೆ’ಯಾಗಿರುವುದರಿಂದ ಚಿತ್ರವು ಎಲ್ಲ ಭಾಷೆಯ ಜನರನ್ನು ತಲುಪುವುದಕ್ಕೆ ಸಹಕಾರಿಯಾಗಿದೆ; ಸಂಭಾಷಣೆ ಬಳಸದೆ ಸಂದೇಶ ನೀಡಿರುವುದು ಚಿತ್ರದ ಹೆಚ್ಚುಗಾರಿಕೆ ಎನ್ನಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...