Homeಮುಖಪುಟಇದುವರೆಗೂ ಯಾವುದೇ ಲವ್‌ ಜಿಹಾದ್‌ ನಡೆದಿಲ್ಲವೆಂದ ಮೋದಿ ಸರ್ಕಾರ : ಇದು ಬಿಜೆಪಿ V/S ಬಿಜೆಪಿಯ...

ಇದುವರೆಗೂ ಯಾವುದೇ ಲವ್‌ ಜಿಹಾದ್‌ ನಡೆದಿಲ್ಲವೆಂದ ಮೋದಿ ಸರ್ಕಾರ : ಇದು ಬಿಜೆಪಿ V/S ಬಿಜೆಪಿಯ ಕದನ..

ಮತಕ್ಕಾಗಿ ಮನಬಂದಂತೆ ಲವ್‌ ಜಿಹಾದ್‌ ಬಳಸುವ ಬಿಜೆಪಿ ಸಂಸತ್ತಿನಲ್ಲಿ ಕಾನೂನಿನಡಿಯಲ್ಲಿ ಈ ಪದವನ್ನು ವ್ಯಾಖ್ಯಾನಿಸಲಾಗಿಲ್ಲ, ಈ ಕುರಿತು ತನಿಖೆ ಸಹ ನಡೆದಿಲ್ಲ ಎಂದು ಒಪ್ಪಿಕೊಂಡಿದೆ.

- Advertisement -
- Advertisement -

ಲವ್‌ ಜಿಹಾದ್‌ ನಡೆಯುತ್ತಿದೆ ಎಂದು ಆರೋಪಿಸಿ ಈ ಹಿಂದೆ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಅಲ್ಲಲ್ಲಿ ಗಲಾಟೆ ಮಾಡಿರುವುದು, ಗಲಭೆ ಎಬ್ಬಿಸಿರುವುದನ್ನು ನೀವು ಗಮನಿಸಿರುತ್ತೀರಿ.. ಆದರೆ ಅದು ಈಗ ಬಿಜೆಪಿ ವಿರುದ್ಧದ ಬಿಜೆಪಿ ಹೋರಾಟವಾಗಿ ಮಾರ್ಪಾಟಾಗಿದೆ. ಗೊಂದಲವಾಗುತ್ತಿದೆಯೇ? ಈ ಲೇಖನ ಓದಿ.

ಫೆಬ್ರವರಿ 4 ರಂದು, ಮೋದಿ ಸರ್ಕಾರವು ಸಂಸತ್ತಿನಲ್ಲಿ ಲವ್‌ ಜಿಹಾದ್‌ ವಿಷಯದ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಇದು ದೇಶಾದ್ಯಂತ ಬಿಜೆಪಿಯ ವಾಕ್ಚಾತುರ್ಯಕ್ಕೆ ವಿರುದ್ಧವಾಗಿದೆ.

ಬಿಜೆಪಿ ಮುಖಂಡ ಮತ್ತು ಗೃಹ ವ್ಯವಹಾರಗಳ ಸಚಿವ ಜಿ. ಕಿಶನ್ ರೆಡ್ಡಿ ಅವರು ‘ಲವ್ ಜಿಹಾದ್ ’ಎಂಬ ಪದವನ್ನು ಈಗಿರುವ ಯಾವುದೇ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ. ಅಲ್ಲದೇ ಇದುವರೆಗೂ ‘ಲವ್ ಜಿಹಾದ್’ ಪ್ರಕರಣವನ್ನು ಯಾವುದೇ ಕೇಂದ್ರ ಏಜೆನ್ಸಿಗಳು ವರದಿ ಮಾಡಿಲ್ಲ” ಎಂದು ಲೋಕಸಭೆಗೆ ತಿಳಿಸಿದರು.

ಇದಲ್ಲದೆ, “ಸಂವಿಧಾನದ 25 ನೇ ವಿಧಿಯು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಒಳಪಟ್ಟು ಧರ್ಮವನ್ನು ಪ್ರಚಾರ ಮಾಡಲು, ಅಭ್ಯಾಸ ಮಾಡಲು ಮತ್ತು ಪ್ರಚಾರ ಮಾಡಲು ಸ್ವಾತಂತ್ರ್ಯವನ್ನು ಒದಗಿಸುತ್ತದೆ. ಕೇರಳ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ಈ ಅಭಿಪ್ರಾಯವನ್ನು ಎತ್ತಿಹಿಡಿದಿವೆ.”

ಕೇರಳದ ಕಾಂಗ್ರೆಸ್ ಸಂಸದ ಬೆನ್ನಿ ಬೆಹಾನನ್ ಅವರು ಸದನದಲ್ಲಿ ಕೇಳಿದ ಪ್ರಶ್ನೆಗೆ ರೆಡ್ಡಿ ಉತ್ತರಿಸುತ್ತಿದ್ದರು.

ಆದರೆ ಇಲ್ಲಿ ವಿಷಯವೆಂದರೆ, ಸಂಸತ್ತಿನೊಳಗೆ ಬಿಜೆಪಿ ಹೇಳಿದ್ದು, ಬಿಜೆಪಿ ಹೊರಗೆ ಹೇಳುವುದಕ್ಕಿಂತ ಬಹಳ ಭಿನ್ನವಾಗಿದೆ ಅಲ್ಲವೇ?

ಸಂಸತ್ತಿನ ಹೊರಗೆ ಬಿಜೆಪಿ ವರಸೆ ಹೀಗಿದೆ.
ಉದಾಹರಣೆಗೆ, ಸಂಸತ್ತಿನಲ್ಲಿ ಬಿಜೆಪಿ ಸರ್ಕಾರದ ಹೇಳಿಕೆಯ ಒಂದು ದಿನದ ನಂತರ ಬಿಜೆಪಿ ಹೀಗೆ ಹೇಳಿದೆ.

ಬಿಜೆಪಿ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯ ಪಿ.ಕೆ.ಕೃಷ್ಣದಾಸ್, “ಲವ್ ಜಿಹಾದ್” ಎಂಬ ಪದವನ್ನು ಈಗಿರುವ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ ಆದರೆ ಈ ಲವ್ ಜಿಹಾದ್ ಕೇರಳದಲ್ಲಿ ನಡೆಯುತ್ತಿದೆ ಎಂಬುದು ಸತ್ಯ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಗೃಹ ಸಚಿವಾಲಯವನ್ನು ಒತ್ತಾಯಿಸಿದರು.

ಸ್ಪಷ್ಟವಾಗಿ ಹೇಳುವುದಾದರೆ, ಬಿಜೆಪಿ ‘ಲವ್ ಜಿಹಾದ್’ ಎಂದು ಉಲ್ಲೇಖಿಸುತ್ತಿರುವುದು ಭಾರತದಲ್ಲಿ ಹಿಂದೂಗಳ ವಿರುದ್ಧ ಭಾರಿ ಪಿತೂರಿ ನಡೆಯುತ್ತಿದೆ ಎಂಬ ಸಿದ್ಧಾಂತವಾಗಿದೆ. ಇದರಲ್ಲಿ ಮುಸ್ಲಿಂ ಪುರುಷರು ಮುಸ್ಲಿಮೇತರ ಸಮುದಾಯಗಳ ಮಹಿಳೆಯರನ್ನು ಪ್ರೀತಿಸುವ ನಾಟಕವಾಡಿ, ಮದುವೆಯಾಗಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಆಮಿಷವೊಡ್ಡುತ್ತಿದ್ದಾರೆ.

‘ಲವ್ ಜಿಹಾದ್’ ಪದದ ಬಿಜೆಪಿಯ ಚತುರ ಬಳಕೆಯ ಇತರ ಕೆಲವು ಉದಾಹರಣೆಗಳು ಇಲ್ಲಿವೆ. ಹಾಗಾದರೆ ಅವರು ಸಂಸತ್ತಿನಲ್ಲಿ ವ್ಯಾಖ್ಯಾನಿಸಲು ಸಾಧ್ಯವಾಗದಿದ್ದರೆ, ಅವರು ಅದನ್ನು ಖಂಡಿತವಾಗಿಯೂ ಎಲ್ಲೆಡೆಯೂ ಬಳಸಬಹುದೇ?

ಚುನಾವಣಾ ವಿಷಯ ಯಾವುದು: ಉತ್ತರ- ‘ಲವ್ ಜಿಹಾದ್!’
ಫೆಬ್ರವರಿ 2017 ರಲ್ಲಿ, ಉತ್ತರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಯೋಗಿ ಆದಿತ್ಯನಾಥ್, “ಕೈರಾನಾದಿಂದ ಹಿಂದೂಗಳು ವಲಸೆ ಹೋಗುತ್ತಿರುವುದು ಮತ್ತು ಲವ್ ಜಿಹಾದ್ ಮತದಾನದ ಮೇಲೆ ಪ್ರಾಬಲ್ಯ ಸಾಧಿಸುತ್ತದೆ” ಎಂದು ಹೇಳಿದ್ದರು.

ಸಿಎಎ ವಿರೋಧಿ ಪ್ರತಿಭಟನೆಯನ್ನು ಟೀಕಿಸುವುದು ಹೇಗೆ? ಉತ್ತರ – ‘ಲವ್ ಜಿಹಾದ್!’

2020ರ ಜನವರಿಯಲ್ಲಿ, ಸಿಎಎ ವಿರೋಧಿ ಪ್ರತಿಭಟನೆಗಳನ್ನು ಟೀಕಿಸುವಾಗ ಕೇರಳ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಅವರು ‘ಲವ್ ಜಿಹಾದ್’ ನ ಪದವನ್ನು ಎಳೆದುತಂದರು. “ಕಾಂಗ್ರೆಸ್, ಸಿಪಿಎಂ ಮತ್ತು ಜಿಹಾದಿ ಸಂಘಟನೆಗಳು ಇತರ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಕ್ರಿಶ್ಚಿಯನ್, ಹಿಂದೂ, ಬೌದ್ಧ ಸದಸ್ಯರಿಗೆ ಸಾಮಾಜಿಕ ನ್ಯಾಯ ಒದಗಿಸುವುದನ್ನು ವಿರೋಧಿಸುತ್ತಿವೆ. ಆದರೆ ಲವ್ ಜಿಹಾದ್ ಬೆಂಬಲಿಸುತ್ತಾರೆ” ಎಂದು ಅವರು ಹೇಳಿದ್ದರು.

ಮಗಳು ಕಾಣೆಯಾಗಿದ್ದಾಳೆ ಏನು ಹೇಳುವುದು? ಉತ್ತರ- ‘ಲವ್ ಜಿಹಾದ್!’
ಸಮುದಾಯಗಳ ನಡುವೆ ದ್ವೇಷವನ್ನು ಹುಟ್ಟುಹಾಕಿದ್ದಾರೆ ಎಂದು ಆರೋಪಿಸಿ 2019ರ ಅಕ್ಟೋಬರ್‌ನಲ್ಲಿ ಬಿಜೆಪಿ ಮುಖಂಡ ಸುರೇಂದ್ರ ನಾಥ್ ಸಿಂಗ್ ಅವರ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು. ಏಕೆಂದರೆ ಆತ  ತನ್ನ ಮಗಳ ನಾಪತ್ತೆಯಾಗಿದ್ದನ್ನು ‘ಲವ್ ಜಿಹಾದ್’ ಗೆ ಲಿಂಕ್ ಮಾಡಿದ್ದರು. ಈ ಪ್ರಕರಣದಲ್ಲಿ ಭೋಪಾಲ್ ಶಾಸಕ ಮತ್ತು ಕಾಂಗ್ರೆಸ್ ಮುಖಂಡ ಆರಿಫ್ ಮಸೂದ್ ಪಾತ್ರವಿದೆ ಎಂದು ಹೇಳಿಕೊಂಡಿದ್ದರು. ಆದರೆ ವಿಚಾರಣೆ ನಡೆದಾಗ ಎಲ್ಲಾ ಸುಳ್ಳು ಎಂದು ಸಾಬೀತಾಯಿತು.

ಮುಸ್ಲಿಮರು ಹಸುಗಳನ್ನು ಸಾಕುತ್ತಾರೆಯೇ? ‘ಲವ್ ಜಿಹಾದ್!’

ಜುಲೈ 2019 ರಲ್ಲಿ ಬಿಜೆಪಿ ನಾಯಕ ರಂಜಿತ್ ಬಹದ್ದೂರ್ ಶ್ರೀವಾಸ್ತವ ವಿವಾದಾತ್ಮಕ ಹೇಳಿಕೆಯಲ್ಲಿ ಮುಸ್ಲಿಮರಿಗೆ ಸೇರಿದ ಹಸುಗಳನ್ನು ಯಾವುದೇ ಬೆಲೆ ತೆತ್ತಾದರೂ ಸರಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ. ಮುಸ್ಲಿಮರು ಹಸುಗಳನ್ನು ಸಾಕುವುದು ಕೂಡ “ಲವ್ ಜಿಹಾದ್” ಎಂದು ಅವರು ಹೇಳಿದರು.

ಜ್ಞಾಪನೆ: ಲೋಕಸಭೆಯಲ್ಲಿ ಲವ್‌ ಜಿಹಾದ್‌ ಬಗ್ಗೆ ಮೋದಿ ಸರ್ಕಾರ ಏನು ಹೇಳಿದೆ
ಇಷ್ಟೆಲ್ಲಾ ಘಟನೆಗಳಾದ ಮೇಲೆ ಕೇರಳದ ಕಾಂಗ್ರೆಸ್ ಸಂಸದ ಬೆನ್ನಿ ಬೆಹಾನನ್ ಅವರು ಲೋಕಸಭೆಯಲ್ಲಿ ಮೋದಿ ಸರ್ಕಾರಕ್ಕೆ ಕೇಳಿದ ಪ್ರಶ್ನೆಗಳು ಇಲ್ಲಿವೆ.

(ಎ) ಕೇರಳದಲ್ಲಿ ಲವ್ ಜಿಹಾದ್ ಪ್ರಕರಣವಿಲ್ಲ ಎಂದು ಕೇರಳ ಹೈಕೋರ್ಟ್‌ನ ವೀಕ್ಷಣೆಯ ಬಗ್ಗೆ ಸರ್ಕಾರಕ್ಕೆ ತಿಳಿದಿದೆಯೇ?

(ಬಿ) ಹಾಗಿದ್ದರೆ, ಅದರ ವಿವರಗಳೇನು? ಮತ್ತು

(ಸಿ) ಕಳೆದ ಎರಡು ವರ್ಷಗಳಲ್ಲಿ ಯಾವುದೇ ಕೇಂದ್ರ ಏಜೆನ್ಸಿಗಳು ಕೇರಳದಿಂದ ಲವ್ ಜಿಹಾದ್ ಪ್ರಕರಣವನ್ನು ವರದಿ ಮಾಡಿವೆಯೇ? ಹಾಗಿದ್ದಲ್ಲಿ, ಅದರ ವಿವರಗಳನ್ನು ನೀಡಿ.

ಈ ಪ್ರಶ್ನೆಗಳಿಗೆ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಅವರ ಸಂಪೂರ್ಣ ಪ್ರತಿಕ್ರಿಯೆ ಇಲ್ಲಿದೆ.

ಸಂವಿಧಾನದ 25 ನೇ ವಿಧಿಯು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಒಳಪಟ್ಟು ಧರ್ಮವನ್ನು ಅಭ್ಯಾಸ ಮಾಡಲು ಮತ್ತು ಪ್ರಚಾರ ಮಾಡಲು ಸ್ವಾತಂತ್ರ್ಯವನ್ನು ಒದಗಿಸುತ್ತದೆ. ಕೇರಳ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ಈ ಅಭಿಪ್ರಾಯವನ್ನು ಎತ್ತಿಹಿಡಿದಿವೆ.

‘ಲವ್ ಜಿಹಾದ್’ ಎಂಬ ಪದವನ್ನು ಈಗಿರುವ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ. ‘ಲವ್ ಜಿಹಾದ್’ ಪ್ರಕರಣವನ್ನು ಯಾವುದೇ ಕೇಂದ್ರ ಏಜೆನ್ಸಿಗಳು ವರದಿ ಮಾಡಿಲ್ಲ.

ಆದರೆ, ಕೇರಳದಿಂದ ಅಂತರ್ ಧರ್ಮ -ನಂಬಿಕೆಯ ವಿವಾಹಗಳನ್ನು ಒಳಗೊಂಡ ಎರಡು ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ಮಾಡಿದೆ.

ಬಿಜೆಪಿ ಸರ್ಕಾರ ಹೇಳಿದ್ದರ ಬಗ್ಗೆ ಬಿಜೆಪಿಗೆ ಒಂದು ಸ್ನೇಹಪೂರ್ವಕ ಜ್ಞಾಪನೆ

ಕೃಪೆ: ದಿ ಕ್ವಿಂಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...