Homeಮುಖಪುಟ’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು

’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು

- Advertisement -
- Advertisement -

ಭಾರತೀಯ ಸಿನಿಮಾ ಉದ್ದಿಮೆಯಲ್ಲಿ ಹಿಂದಿ ಚಿತ್ರರಂಗ ಬಿಟ್ಟರೆ ಹೆಚ್ಚು ವಹಿವಾಟು ಇರುವುದು ತೆಲುಗು ಸಿನಿಮಾಗಳಿಗೆ. ಒಂದು ಕಾಲಕ್ಕೆ ಭಾರತದಲ್ಲೇ ಅತಿಹೆಚ್ಚು ಚಿತ್ರಮಂದಿರಗಳನ್ನು ಹೊಂದಿದ ರಾಜ್ಯ ಆಂಧ್ರಪ್ರದೇಶ. ಸಿನಿಮಾ ನಾಯಕನಟರನ್ನು ತೀವ್ರತೆಯಲ್ಲಿ ಅಭಿಮಾನಿಸುವುದು ಕೂಡ ಇದೇ ತೆಲುಗು ಸಿನಿಮಾ ರಂಗದಲ್ಲಿ. ಇಷ್ಟು ಮಾತ್ರವಾಗಿದ್ದರೆ ಹೆಚ್ಚು ಅಪಾಯವಿಲ್ಲ, ಆದರೆ ಈ ಅಭಿಮಾನ ಜಾತಿ ಆಧಾರಿತವಾಗಿರುವುದು ಕೂಡ ತೆಲುಗು ಸಿನಿಮಾರಂಗ ಸಮಾಜದ ಸ್ವಾಸ್ಥ್ಯವನ್ನು ಇನ್ನಷ್ಟು ಹದಗೆಡಿಸಿದೆ. ತಮ್ಮ ಜಾತಿಯ ನಾಯಕನ ನಟನ ಸಿನಿಮಾ ಯಶಸ್ಸುಗಳಿಸಬೇಕು ಎಂದು ಅಭಿಮಾನಿಗಳು ಅವರ ಸಿನಿಮಾಗಳನ್ನು ವಿಜೃಂಭಿಸುವ ಉದಾಹರಣೆಗಳು ಕೂಡ ಚರ್ಚೆಯಾಗಿದೆ. ಅಲ್ಲದೆ ತೆಲುಗು ಚಿತ್ರರಂಗ ಕುಟುಂಬ ಸದಸ್ಯರಿಂದ
ಆವರಿಸಿಕೊಂಡಿರುವುದು ಕೂಡ ಸಮಸ್ಯೆಯನ್ನು ಬಿಗಡಾಯಿಸಿ, ಪಿತ್ರಾರ್ಜಿತ ಜಹಾಗೀರುದಾರಿಕೆಯನ್ನಾಗಿಸಿದೆ. ಇನ್ನು ಹಲವು ಸಿನಿಮಾಗಳಲ್ಲಿ ಚಿತ್ರಿತವಾಗುವ ಕಥೆಗಳು ಕೂಡ ಇದೇ ಪಾಳೆಗಾರಿಕೆ ಮನಸ್ಥಿತಿಯವೇ. ಈ ರೀತಿಯ ಪಾಳೆಗಾರಿಕೆ ಮನಸ್ಥಿತಿಯನ್ನು ಕೇವಲ ಸಿನಿಮಾದಲ್ಲಷ್ಟೇ ಅಲ್ಲ ಸಿನಿಮಾ ನಾಯಕ ನಟರ ಸಾರ್ವಜನಿಕ ನಡವಳಿಕೆಯಲ್ಲಿ ಪ್ರತಿಬಿಂಬವಾಗುವುದನ್ನು ಕೂಡ ಕಾಣಬಹುದು.

ಈ ಪರಿಯಾಗಿ ಬಹುತೇಕ ಜಡ್ಡುಗಟ್ಟಿದ ಫ್ಯೂಡಲ್ ತೆಲುಗು ಚಿತ್ರ ರಂಗದಲ್ಲಿ ಶೇಖರ್ ಕಮ್ಮುಲ ತಮ್ಮ ’ಲವ್ ಸ್ಟೋರಿ’ ಸಿನಿಮಾ ಮೂಲಕ ತೆಲುಗು ಸಿನಿಮಾ ಪ್ರೇಕ್ಷಕರಿಗೆ ಹೊಸ ಕಣ್ಣೋಟವೊಂದನ್ನು ನೀಡಿದ್ದಾರೆ. ಇದು ಆಶ್ಚರ್ಯಕ್ಕಿಂತ ಖುಷಿಯ ಸಂಗತಿ. ಈ ಹಿಂದೆ ಸುಕುಮಾರ್ ನಿರ್ದೇಶಿಸಿದ ’ರಂಗಸ್ಥಳಂ’ ಸಿನಿಮಾದಲ್ಲಿ ಜಾತಿ ಕುರಿತಾದ ವಿಷಯವನ್ನು ಡೀಲ್ ಮಾಡಿದ್ದರಾದರೂ, ಅದು ಜಾತಿ ಕುರಿತಾದ ಅಸಮಾನತೆ, ದಬ್ಬಾಳಿಕೆಯ, ಕ್ರೌರ್ಯ ಇಂತಹ ಮೂಲಭೂತ ಸಂಗತಿಗಳು ಸಮುದಾಯದ ಹಿನ್ನಲೆಯಲ್ಲಿ ಪ್ರೇಕ್ಷಕನಿಗೆ ದಾಟಿದ್ದಕ್ಕಿಂತ, ವ್ಯಕ್ತಿಯೊಬ್ಬನ ಖಾಸಗಿ ಪ್ರತೀಕಾರವಾಗಿ ಸಿಕ್ಕಿತ್ತು.

ಲವ್ ಸ್ಟೋರಿ

ಲವ್ ಸ್ಟೋರಿ ಸಿನಿಮಾದಲ್ಲಿ ಎರಡು ಸಂಗತಿಗಳನ್ನು ಸಮಾನಾಂತರವಾಗಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಒಂದು ನಮ್ಮ ಸಮಾಜದಲ್ಲಿರುವ ಜಾತಿ ವ್ಯವಸ್ಥೆ. ಮತ್ತೊಂದು ಫ್ಯೂಡಲ್ ಜಾತಿಯ ಪುರುಷ ಪ್ರಧಾನ ಕೌಟಂಬಿಕ ವ್ಯವಸ್ಥೆ ಒಳಗೆ ಹೆಣ್ಣಿನ ಬಗೆಗಿನ ದೃಷ್ಟಿಕೋನ. ದಲಿತ ಸಮುದಾಯದ ರೇವಂತ್ ಕಥಾನಾಯಕ, ಫ್ಯೂಡಲ್ ಸಮುದಾಯದ ಮೊನಿಕಾ ನಾಯಕಿ, ಕಥಾನಾಯಕನ ತಾಯಿ ಮನಮ್ಮ ಮತ್ತು ಕಥಾನಾಯಕಿಯ ಚಿಕ್ಕಪ್ಪ ನರಸಿಂಹಂ. ಈ ನಾಲ್ಕು ಪ್ರಧಾನ ಪಾತ್ರಗಳು. ಗಂಡನನ್ನು ಕಳೆದುಕೊಂಡ ಮನಮ್ಮ ಜಾತಿ ಅವಮಾನಗಳಿಂದ ಬೇಸತ್ತು ತನ್ನದೇ ಒಂದು ತುಂಡು ಭೂಮಿ ಹೊಂದುವುದು ಮತ್ತು ಆ ಮೂಲಕ ತನ್ನ ಅಸ್ತಿತ್ವ ಮತ್ತು ಸ್ವಾಭಿಮಾನವನ್ನು ಉಳಿಸಿಕೊಳ್ಳುವುದನ್ನು ಛಲಬಿಡದೆ ಸಾಧಿಸಿದ್ದಾಳೆ.

ತನ್ನ ಮಗನಿಗೆ ಬಾಲ್ಯದಿಂದಲೂ ಈ ಜಾತಿ ತಾರತಮ್ಯದ ಸೂಕ್ಷ್ಮಗಳು ಹೇಗಿರುತ್ತವೆ ಅನ್ನೋದನ್ನ ಹೇಳುತ್ತಿರುತ್ತಾಳೆ. ಈ ನಾಲ್ಕರಲ್ಲಿ ಮಾನಮ್ಮನದು ಬಹಳ ಗಟ್ಟಿಯಾದ ಮತ್ತು ವೈಚಾರಿಕವಾಗಿ ಸ್ಪಷ್ಟತೆ ಇರುವ ಪಾತ್ರ. ಅದೇ ರೀತಿ ಮಗ ರೇವಂತ್ ತನ್ನದೇ ಒಂದು ಸ್ವ ಉದ್ಯೋಗ/ಉದ್ಯಮದಿಂದ ಜೀವನ ರೂಪಿಸಿಕೊಳ್ಳಲು ಹಳ್ಳಿಯಿಂದ ನಗರಕ್ಕೆ ಬಂದು ಹೆಣಗುತ್ತಿದ್ದಾನೆ. ಕಥಾನಾಯಕಿ ಕೂಡ ತನ್ನ ಚಿಕ್ಕಪ್ಪನ ಯಜಮಾನಿಕೆಯಿಂದ ಬೇಸತ್ತು ಸ್ವಂತ ಉದ್ಯೋಗ ಮಾಡಿ ಜೀವನ ರೂಪಿಸಿಕೊಳ್ಳಲು ನಗರಕ್ಕೆ ಬಂದಿದ್ದಾಳೆ. ಇನ್ನು ಇವಳ ಚಿಕ್ಕಪ್ಪ ಹಳ್ಳಿಯಲ್ಲಿ ಬಡವರ ಜಮೀನನ್ನು ಕಬ್ಜ ಮಾಡುವುದು, ತನ್ನದೇ ಅಣ್ಣನ ಕುಡಿತದ ಚಟವನ್ನು ಮೂದಲಿಸಿ, ಅದೇ ಕಾರಣಕ್ಕೆ ಕುಟುಂಬದ ಮೇಲೆ ಯಜಮಾನಿಕೆ ಸಾಧಿಸುವುದನ್ನು ಮಾಡುತ್ತಿರುತ್ತಾನೆ. ಮೊನಿಕ ನಗರಕ್ಕೆ ಬಂದರೂ ಇವನು ಬೆಂಬಿಡದ ಭೂತದಂತೆ ಕಾಡುತ್ತಿರುತ್ತಾನೆ.

ನಿರ್ದೇಶಕ ಶೇಖರ್ ಸಿನಿಮಾದಲ್ಲಿ ಹೇಳಬೇಕಂದಿರುವ ಆಶಯ ಮೆಚ್ಚುವಂತದ್ದು. ಆದರೆ ಅದನ್ನು ಕಟ್ಟಿಕೊಡುವಲ್ಲಿ ಕೆಲವು ಕಡೆ ಎಡವಿ ನಿರೂಪಣೆ ದುರ್ಬಲವಾಗಿದೆ. ತಮ್ಮ ಅಲೋಚನೆಗೆ ಪೂರಕವಾಗಿ ದೃಶ್ಯಗಳನ್ನು ಒಟ್ಟು ಬಂಧದಲ್ಲಿ ಕಟ್ಟಿಕೊಡಲು ಸಾಧ್ಯವಾಗಿಲ್ಲ. ಪಾತ್ರಗಳಲ್ಲಿ ಕನ್ಸಿಸ್ಟಿನ್ಸಿ ಕೂಡ ಕಾಣೆಯಾಗಿದೆ.

ಸಿನಿಮಾದ ಕೊನೆಗೆ ಕಥಾನಾಯಕನನ್ನು ರೆಬಲ್ ಮಾಡುವ ಸಲುವಾಗಿ ಮಾನಮ್ಮನ ಪಾತ್ರ ಇದ್ದಕ್ಕಿಂದ್ದಂತೆ ದುರ್ಬಲವಾಗಿಬಿಡುತ್ತದೆ. ಇನ್ನು ನಗರದಲ್ಲಿಯೂ ಇರುವ ಜಾತಿ ತಾರತಮ್ಯವನ್ನು ಕಟ್ಟಿಕೊಡುವ ಬಹಳ ದೊಡ್ಡ ಅವಕಾಶವನ್ನು ನಿರ್ದೇಶಕ ಕೈಚೆಲ್ಲಿದ್ದಾರೆ. ಸಿನಿಮಾದ ಮೊದಲಾರ್ಧ ನಾಯಕ ಮತ್ತು ನಾಯಕಿ ನಡುವೆ ಉಂಟಾಗುವ ಸ್ನೇಹ, ಆನಂತರ ಅದು ಪ್ರೀತಿಯಾಗಿ ಬೆಳಯುವುದಕ್ಕಷ್ಟೇ ಮೀಸಲಾಗಿದೆ. ಸಿನಿಮಾದ ಪ್ರಾರಂಭದಲ್ಲಿ ಮಾನಮ್ಮ ತನ್ನ ಮಗನಿಗೆ ಜಾತಿ ತಾರತಮ್ಯದ ಕುರಿತು ಹೇಳುವ ಮಾತುಗಳು ನಿರೂಪಣೆಯಲ್ಲಿ ವ್ಯಕ್ತವಾಗಿದ್ದು ಬಿಟ್ಟರೆ, ಮಧ್ಯಂತರದವರೆಗೂ ಆ ತಾರತಮ್ಯವನ್ನು ಕಟ್ಟಿಕೊಡುವ ದೃಶ್ಯಗಳು ಬರುವುದೇ ಇಲ್ಲ. ಮಧ್ಯಂತರದ ನಂತರ, ನಾಯಕ ಮತ್ತು ನಾಯಕಿ ನಡೆಸುವ ಡ್ಯಾನ್ಸ್ ಕ್ಲಾಸ್‌ನಲ್ಲಿ ಕಲಿಯುತ್ತಿರುವ ಮೇಲ್ಜಾತಿ/ಶ್ರೀಮಂತ ಹುಡುಗಿ ಮತ್ತು ತಳ ಸಮುದಾಯದ/ಬಡ ಹುಡುಗನ ನಡುವಿನ ಪ್ರೀತಿ ಮರ್ಯಾದಾ ಹತ್ಯೆಯಲ್ಲಿ ಕೊನೆಯಾಗುವ ದೃಶ್ಯದೊಂದಿಗೆ ಕಥೆ ಒಂದಷ್ಟು ತೀವ್ರತೆ ಪಡೆಯುತ್ತದೆ. ನಾಯಕ ತನ್ನ ತಾಯಿಗೆ ಈ ವಿಚಾರ ತಿಳಿಸಿದಾಗ ತಾಯಿ ಮಾನಮ್ಮಳಿಗೆ ತನ್ನ ಮಗನ ಪ್ರೀತಿಗಿಂತ ತನ್ನ ಸ್ವಾಭಿಮಾನ ಮುಖ್ಯವಾಗುತ್ತದೆ. ಮಗನ ಭವಿಷ್ಯಕ್ಕಾಗಿ ತಾನು ಪೈಸೆಪೈಸೆ ಕೂಡಿಸಿ ಕೊಂಡುಕೊಂಡ ಜಮೀನನ್ನು ಮಾರುವ ಮಾನಮ್ಮ, ಈ ವಿಚಾರದಲ್ಲಿ ಮಾತ್ರ ಮಗನಿಗೆ ಷರತ್ತೊಂದನ್ನು ವಿಧಿಸುತ್ತಾಳೆ. ನಿನ್ನ ಪ್ರೀತಿಸಿದ ಹುಡುಗಿ ಮನೆಯವರು ನನ್ನ ಜಾತಿ ಪರಿಗಣಿಸದೆ ಸಮಾನವಾಗಿ ಸ್ವೀಕರಿಸಿದ್ದಾದರೆ ನಾನು ಈ ಮದುವೆಗೆ ಸಿದ್ಧ ಎಂದು ಹೇಳುತ್ತಾಳೆ. ಈ ಪ್ರಯತ್ನಕ್ಕೆ ಮುಂದಾಗುವ ನಾಯಕ ಸೋಲುತ್ತಾನೆ.

ಶೇಖರ್ ಕಮ್ಮುಲ, ಫ್ಯೂಡಲ್ ಜಾತಿಯ ಕುಟುಂಬದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯವನ್ನು ಕಟ್ಟಿಕೊಟ್ಟಷ್ಟು ತೀವ್ರವಾಗಿ ಜಾತಿ ತಾರತಮ್ಯವನ್ನು ಕಟ್ಟಿಕೊಟ್ಟಿಲ್ಲ ಎಂಬ ಭಾವನೆ ಕೂಡ ಕೊನೆಗೆ ಉಳಿದುಕೊಳ್ಳುತ್ತದೆ. (ಕಥಾ ನಾಯಕಿ ಪಾತ್ರದಲ್ಲಿ ನಟಿಸಿದ ಸಾಯಿ ಪಲ್ಲವಿ ಅವರ ಜನಪ್ರಿಯತೆಯ ಕಾರಣಕ್ಕೂ ಇದು ಇರಬಹುದು). ಆದರೆ ತೆಲುಗು ಸಿನಿಮಾರಂಗದಲ್ಲಿ ಇಷ್ಟಾದರೂ ಚರ್ಚೆಮಾಡುವ ಮಾನವೀಯ ನೆಲೆಯಲ್ಲಿ ಚಲನಚಿತ್ರ ನಿರ್ದೇಶಿಸುವವರು ಇದ್ದಾರಲ್ಲ ಅನ್ನುವ ಕಾರಣಕ್ಕೆ ಶೇಖರ್ ಕಮ್ಮುಲ ಅಭಿನಂದನೀಯ.

ನಟಿಸುವ ಪಾತ್ರಕ್ಕೆ ಜೀವ ತುಂಬುವ ಸಾಯಿ ಪಲ್ಲವಿ

ನಟಿ ಸಾಯಿ ಪಲ್ಲವಿ ದಕ್ಷಿಣ ಸಿನಿಮಾ ಪ್ರೇಕ್ಷಕರಿಗೆ ಹೆಚ್ಚು ಪರಿಚಯವಾಗಿದ್ದು ಮಲೆಯಾಳಂ ಭಾಷೆಯ ’ಪ್ರೇಮಂ’ ಸಿನಿಮಾ ಮೂಲಕ. ’ಮಲರ್’ ಪಾತ್ರದಲ್ಲಿ ಅಷ್ಟು ಸಹಜವಾಗಿ ನಟಿಸಿದ ಸಾಯಿ ಪಲ್ಲವಿ ಇವತ್ತಿಗೂ ಸಿನಿಮಾ ಪ್ರೇಕ್ಷಕರಿಗೆ ’ಮಲರ್’. ತಾವು ನಟಿಸಿದ ಸರಿಸುಮಾರು ಎಲ್ಲ ಸಿನಿಮಾಗಳಲ್ಲಿ ಕಥಾ ನಾಯಕನ ಪಾತ್ರಕ್ಕಿಂತ ಸಾಯಿ ಪಲ್ಲವಿ ನಟಿಸಿದ ಪಾತ್ರ ಹೆಚ್ಚು ಮನಸ್ಸಿನಲ್ಲಿ ಉಳಿಯುತ್ತದೆ. ಲವ್ ಸ್ಟೋರಿ ಸಿನಿಮಾದಲ್ಲಿಯೂ ಹಲವು ಕೊರತೆಗಳಿದ್ದರೂ, ಸಾಯಿ ಪಲ್ಲವಿ ತೆರೆಯ ಮೇಲೆ ಕಾಣಿಸುವ ದೃಶ್ಯಗಳಿಂದ ಈ ಕೊರತೆಗಳನ್ನು ಮರೆಯುವಂತೆ ಪ್ರೇಕ್ಷಕನನ್ನು ತನ್ನ ನಟನೆಯೆಡಗೆ ಎಳೆದುಕೊಳ್ಳುತ್ತಾರೆ.

ನಿರ್ದೇಶಕ ಶೇಖರ್ ಕಮ್ಮುಲ

ದ್ರಾವಿಡ ಭಾಷೆಗಳ ಬಗ್ಗೆ ಓದುವಾಗ ತೆಲುಗು ಭಾಷೆಯಲ್ಲಿ ಸ್ತ್ರೀವಾಚಕಗಳನ್ನು ಹೇಗೆ ಸಂಬೋಧಿಸಲಾಗುತ್ತದೆ ಎಂಬುದು ಸೋಜಿಕವೆನಿಸಿತ್ತು. ಸ್ತ್ರೀವಾಚಕಗಳನ್ನು ’ಅದಿ’, ’ಇದಿ’ (ಅದು, ಇದು) ಎಂದು ವಸ್ತುಗಳ ರೀತಿ ಸಂಬೋಧಿಸಲಾಗುತ್ತದೆ (ಕರ್ನಾಟಕದಲ್ಲಿಯೂ ಈ ಬಳಕೆಯನ್ನು ಹಲವೆಡೆ ಕಾಣಬಹುದು). ತೆಲುಗು ಸಮಾಜಕ್ಕೆ
ಇದನ್ನು ಸಾಮಾನ್ಯೀಕರಿಸಲು ನನ್ನ ಅಧ್ಯಯನದ ಕೊರತೆಯಿದ್ದರೂ, ತೆಲುಗು ಸಿನಿಮಾ ಮತ್ತು ತೆಲುಗು ಸಿನಿಮಾರಂಗ ನಿಸ್ಸಂಶಯವಾಗಿ ಪುರುಷಪ್ರಧಾನವಾದದ್ದು ಎನ್ನಬಹುದು (ಕನ್ನಡ ಚಿತ್ರರಂಗವನ್ನೂ ಸೇರಿದಂತೆ, ಬಹುತೇಕ ಭಾರತೀಯ ಚಿತ್ರರಂಗಗಳಿಗೂ ಇದು ಅನ್ವಯಿಸುತ್ತದೆ). ಇಲ್ಲಿ ಕಥಾನಾಯಕಿ ಪಾತ್ರ ಸೃಷ್ಟಿ ಮಾಡೋದೇ ಕಥಾನಾಯಕನ ಹಿರೋಹಿಸಂನ್ನು ವಿಜೃಂಭಿಸುವುದಕ್ಕೆ. ಇದಕ್ಕೆ ಉದಾಹರಣೆಗಳು ದಂಡಿಯಾಗಿ ಸಿಗುತ್ತವೆ. ಬಹುಸಂಖ್ಯಾತ ಪ್ರಧಾನಧಾರೆಯ ತೆಲುಗು ಸಿನಿಮಾಗಳನ್ನು ಗಮನಿಸಿದರೆ ಒಂದು ಗಟ್ಟಿಯಾದ ಮಹಿಳಾ ಪಾತ್ರ ಸಿಗುವುದೂ ಕಷ್ಟ. ಹೆಣ್ಣು ಪಾತ್ರಗಳಿಗೆ ಅಲ್ಲಿ ಹೆಚ್ಚು ಸ್ಪೇಸ್ ಇಲ್ಲವೇ ಇಲ್ಲ.

ಶೇಖರ್ ಕಮ್ಮುಲ ಸಿನಿಮಾಗಳು ಇದಕ್ಕೆ ಅಪವಾದ ಎನ್ನಬಹುದು. ತಮ್ಮ ಮೊದಲ ಸಿನಿಮಾ ’ಆನಂದ್’ನಿಂದ ’ಗೋದಾವರಿ’, ’ಹ್ಯಾಪಿಡೇಸ್’, ’ಲೀಡರ್’, ’ಫಿದಾ’ ಈ ಎಲ್ಲಾ ಸಿನಿಮಾಗಳಲ್ಲೂ ಸಾಂಪ್ರದಾಯಿಕ ಗಂಡು ನೋಟವನ್ನು ಪ್ರಶ್ನೆ ಮಾಡಿದ, ಹೆಣ್ಣಿನ ಸ್ವತಂತ್ರ ಅಲೋಚನೆಗೆ ಒತ್ತಾಸೆಯಾದ ಮತ್ತು ಅಂತಹ ಪಾತ್ರಗಳಿಗೆ ಹೆಚ್ಚು ಅವಕಾಶ ಕೊಟ್ಟಿದ್ದನ್ನು ಕಾಣಬಹುದು. ಸಾಯಿ ಪಲ್ಲವಿ ನಟಿಸಿದ ’ಫಿದಾ’ದಲ್ಲಿ ಕಥಾ ನಾಯಕಿ ಮದುವೆ ಆದ ಮೇಲೆ ಗಂಡನ ಮನೆಗೆ ಏಕೆ ಹೋಗಬೇಕು, ಅವಳು ತನ್ನ ಹೆತ್ತವರ ಬಳಿ ಇರುವುದು ಅನಿವಾರ್ಯ ಅದಾಗ ಗಂಡನೇ ನನ್ನ ಬಳಿ ಏಕೆ ಬಂದಿರಬಾರದು ಎಂದು ಪ್ರಶ್ನಿಸುತ್ತಾಳೆ. ಶೇಖರ್ ಕಮ್ಮುಲ ಸಿನಿಮಾಗಳನ್ನ ಸ್ತ್ರೀವಾದದ ಆಳವಾದ ವಿಮರ್ಶೆಗೆ ಒಳಪಡಿಸಿದರೆ ಅಲ್ಲೂ ಸಾಕಷ್ಟು ಕೊರತೆಗಳು. ಮೇಲ್ಪದರದ ಗ್ರಹಿಕೆಗಳು, ಪೂರ್ವಗ್ರಹಗಳು ಎಲ್ಲವೂ ಬಹಳಷ್ಟು ಸಿಗುತ್ತವೆ. ಉದಾಹರಣೆಗೆ ಲವ್ ಸ್ಟೋರಿ ಸಿನಿಮಾವನ್ನೆ ನೋಡುವುದಾದರೆ, ತನ್ನ ಮನೆಯವರ ವಿರೋಧದಿಂದ ದುಡಿಯಲು ನಗರಕ್ಕೆ ಹೋಗುವ ನಾಯಕಿ ಸಂಪಾದಿಸಿದ ಹಣವನ್ನು ನೀಡುವುದು ಕುಡುಕ ಮತ್ತು ಬೇಜವ್ದಾರಿ ತಂದೆಗೆ. ಕಥಾ ನಾಯಕಿಗೆ ಯಾವ ಯಜಮಾನಿಕೆಯಿಂದ ಉಸಿರುಗಟ್ಟಿರುತ್ತದೊ ಅದೇ ಯಜಮಾನಿಕೆಯನ್ನು ಪೋಷಿಸುತ್ತದೆ ಈ ದೃಶ್ಯ. ಈ ತರಹದ ದೃಶ್ಯಗಳು ಶೇಖರ್ ಅವರ ಎಲ್ಲಾ ಸಿನಿಮಾಗಳಲ್ಲೂ ಸಾಮಾನ್ಯವಾಗಿ ಇರುತ್ತವೆ. ಆದರೆ, ಬಹಳ ನೇರಾನೇರ ಪುರುಷ ಯಜಮಾನಿಕೆ ಮತ್ತು Misogynyಗಳನ್ನು ಸಮಾಜದ ಮೌಲ್ಯಗಳು ಎಂದು ಪ್ರದರ್ಶನ ಮಾಡುವ ತೆಲುಗು ಸಿನಿಮಾಗಳ ನಡುವೆ ಶೇಖರ್ ಮಾನವೀಯವಾಗಿ ಕಾಣಿಸುತ್ತಾರೆ.

ತಮಿಳು ಚಿತ್ರರಂಗದಲ್ಲಿ ಪ ರಂಜಿತ್, ಮಾರಿ ಸೆಲ್ವರಾಜ್‌ರಂತಹ ನಿರ್ದೇಶಕರು ಜಾತಿ ಶೋಷಣೆಯ ವಿಷಯಗಳ ಚಲನಚಿತ್ರಗಳನ್ನು ನಿರ್ದೇಶಿಸಿ ಯಶಸ್ವಿಯಾದ ಉದಾಹರಣೆಗಳಿಂದ ಅಕ್ಕಪಕ್ಕದ ರಾಜ್ಯದಲ್ಲಿಯೂ ಹಲವು ನಿರ್ದೇಶಕರಿಗೆ ಇದು ಸ್ಫೂರ್ತಿಯಾಗಿರಬಹುದು. ಶೇಖರ್ ಲವ್ ಸ್ಟೋರಿಯತಂಹ ಸಿನಿಮಾಗಳನ್ನು ಹೆಚ್ಚೆಚ್ಚು ಮಾಡಲಿ. ಅವುಗಳು ಇನ್ನಷ್ಟು ಆಳವಾದ ಅಧ್ಯಯನಗಳಿಂದ, ಒಳನೋಟಗಳಿಂದ ಕೂಡಿ, ದೃಶ್ಯ ಮಾಧ್ಯಮದ ಸಾಧ್ಯತೆಯನ್ನು ಹೆಚ್ಚು ದುಡಿಸಿಕೊಂಡು ಇನ್ನಷ್ಟು ತೀವ್ರವಾಗಿ ಬೆಳ್ಳಿಪರದೆ ಮೇಲೆ ಪ್ರದರ್ಶನಗೊಳ್ಳಲಿ, ಇವು ತೆಲುಗು ಸಿನಿಮಾ ಇಂಡಸ್ಟ್ರಿಗೆ ಮಾದರಿಯಾಗಲಿ.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ


ಇದನ್ನೂ ಓದಿ: ವೈಚಾರಿಕತೆಯನ್ನು ಕಡೆಗಣಿಸಿ ಅಬ್ಬರಿಸುವ ಜನಪ್ರಿಯ ನಟರ ಸಿನಿಮಾದಾಚೆಗಿನ ವಿಚಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾರ್ವತ್ರಿಕ ಮುಷ್ಕರ | ಕೆಲ ರಾಜ್ಯಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತ; ಬ್ಯಾಂಕಿಂಗ್, ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ 'ಕಾರ್ಮಿಕ, ರೈತ ವಿರೋಧಿ ಹಾಗೂ ಕಾರ್ಪೊರೇಟ್ ಪರ ನೀತಿಗಳ' ವಿರುದ್ಧ ಕಾರ್ಮಿಕ ಸಂಘಟನೆಗಳು ಗುರುವಾರ (ಫೆ.12) ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರದಿಂದ ವಿವಿಧ ರಾಜ್ಯಗಳಲ್ಲಿ ಜನ ಜೀವನ...

ಅದಾನಿ ಮಾನನಷ್ಟ ಪ್ರಕರಣದಲ್ಲಿ ಪತ್ರಕರ್ತ ರವಿ ನಾಯರ್‌ಗೆ ಶಿಕ್ಷೆ: ‘ಇದು ಪತ್ರಿಕಾ ಸ್ವಾತಂತ್ರ್ಯಕ್ಕೆ ಹೊಡೆತ’ ಎಂದ ಪತ್ರಕರ್ತರ ಸಂಘಟನೆಗಳು

ಅದಾನಿ ಎಂಟರ್‌ಪ್ರೈಸಸ್ ದಾಖಲಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ತನಿಖಾ ಪತ್ರಕರ್ತ ರವಿ ನಾಯರ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿರುವುದನ್ನು ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಮತ್ತು ಹಲವಾರು ಪತ್ರಿಕಾ ಸಂಸ್ಥೆಗಳು...

‘ನಾವು ಯಾರನ್ನೂ ನಿಂದಿಸಿಲ್ಲ’: ಚೇಂಬರ್ ‘ದುರ್ವರ್ತನೆ’ ಆರೋಪಕ್ಕೆ ಪ್ರಿಯಾಂಕಾ ಗಾಂಧಿ ಸ್ಪಷ್ಟನೆ 

ನವದೆಹಲಿ: ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಯಲ್ಲಿ ತಮ್ಮ ಪಕ್ಷದ ಸಂಸದರು "ಅನುಚಿತವಾಗಿ ವರ್ತಿಸಿದ್ದಾರೆ" ಎಂದು ಆರೋಪಿಸಿದಾಗ, ಅವರನ್ನು ಬೆಂಬಲಿಸಿದ್ದೇನೆ ಎಂದು ಹೇಳಿದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂಸದೀಯ ವ್ಯವಹಾರಗಳ...

‘ಭಾರತಕ್ಕೆ ಮರಳಲು ಇದು ಕೊನೆಯ ಅವಕಾಶ’: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್‌ ಎಚ್ಚರಿಕೆ

ಭಾರತದ ಹೊರಗೆ ಇರುವ ಉದ್ಯಮಿ ವಿಜಯ್ ಮಲ್ಯ ನ್ಯಾಯಾಲಯದ ಪ್ರಕ್ರಿಯೆಗಳಿಂದ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಗಂಭೀರವಾಗಿ ಪರಿಗಣಿಸಿರುವ ಬಾಂಬೆ ಹೈಕೋರ್ಟ್, ಅವರಿಗೆ ಭಾರತಕ್ಕೆ ಮರಳಲು “ಒಂದು ಕೊನೆಯ ಅವಕಾಶ” ನೀಡಿದೆ. ಒಂದು ವೇಳೆ...

ಕೆಲಸದ ಸ್ಥಳದಲ್ಲಿ ಜಾತಿ ತಾರತಮ್ಯದ ಬಗ್ಗೆ ರಾಜ್ಯಸಭೆಯಲ್ಲಿ ಖರ್ಗೆ ಕಳವಳ; ಒಡಿಶಾ ಅಂಗನವಾಡಿ ಘಟನೆ ಉಲ್ಲೇಖ

ಕೆಲಸದ ಸ್ಥಳಗಳಲ್ಲಿ ಆಗುತ್ತಿರುವ ಜಾತಿ ತಾರತಮ್ಯದ ಕುರಿತು ರಾಜ್ಯಸಭೆಯಲ್ಲಿ ಗುರುವಾರ (ಫೆ.12) ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು. ಒಡಿಶಾದ ಅಂಗನವಾಡಿಯೊಂದರಲ್ಲಿ ದಲಿತ ಮಹಿಳೆ ತಯಾರಿಸಿದ ಆಹಾರವನ್ನು...

ಕರ್ನಾಟಕ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ...

‘ಆಕೆಯ ಜೀವ ಮುಖ್ಯ’: ಅಮೆರಿಕದ ಪೊಲೀಸ್ ಅಧಿಕಾರಿ ವೇಗದ ಚಾಲನೆಯಿಂದ ಸಾವನ್ನಪ್ಪಿದ ಭಾರತೀಯ ವಿದ್ಯಾರ್ಥಿನಿಯ ಕುಟುಂಬಕ್ಕೆ 260 ಕೋಟಿ ಪರಿಹಾರ

2023 ರಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಚಾಲನೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಡಿಕ್ಕಿ ಹೊಡೆದ ಕಾರಣ ಸಾವನ್ನಪ್ಪಿದ ಭಾರತದ 23 ವರ್ಷದ ಪದವೀಧರ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ ಸಿಯಾಟಲ್ ನಗರವು...

ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ನಿಲುವಳಿ ಸೂಚನೆ ಸಲ್ಲಿಕೆ; ಸಂಸತ್ ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹ

ಲೋಕಸಭೆ ಅಧಿವೇಶನದಲ್ಲಿ ಗುರುವಾರ (ಫೆ.12) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಿಲುವಳಿ ಸೂಚನೆ ಸಲ್ಲಿಸಿದ್ದು, ಅವರ ಸಂಸತ್ತಿನ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿದೆ. ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ನಿಶಿಕಾಂತ್...

ಕಾನ್ಪುರ ಲ್ಯಾಂಬೋರ್ಗಿನಿ ಅಪಘಾತ: ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಪುತ್ರ ಶಿವಂ ಮಿಶ್ರಾ ಬಂಧನ

2026 ಫೆಬ್ರವರಿ 8, ಭಾನುವಾರದಂದು ವಿಐಪಿ ರಸ್ತೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದ ಹೈ ಪ್ರೊಫೈಲ್ ಲ್ಯಾಂಬೋರ್ಗಿನಿ ಅಪಘಾತಕ್ಕೆ ಸಂಬಂಧಿಸಿದಂತೆ ಸ್ಥಳೀಯ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು...

ಫೆಬ್ರವರಿ 12 ರಂದು ಭಾರತ್ ಬಂದ್| ಹಲವು ರಾಜ್ಯಗಳಲ್ಲಿ ಬಂದ್ ಗೆ ಪೂರ್ಣ ಬೆಂಬಲ: ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಫೆಬ್ರವರಿ 12, ಗುರುವಾರ ಸಾರ್ವತ್ರಿಕ ಮುಷ್ಕರಕ್ಕೆ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಕರೆ ನೀಡಿದೆ. ಕರ್ನಾಟಕದಲ್ಲಿಯೂ ಕಾರ್ಮಿಕ ಸಂಘಟನೆಗಳು ಮುಷ್ಕರವನ್ನು ನಡೆಸುತ್ತಿವೆ. ಕೇಂದ್ರ ಸರ್ಕಾರದ 4...