Homeಮುಖಪುಟ’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು

’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು

- Advertisement -
- Advertisement -

ಭಾರತೀಯ ಸಿನಿಮಾ ಉದ್ದಿಮೆಯಲ್ಲಿ ಹಿಂದಿ ಚಿತ್ರರಂಗ ಬಿಟ್ಟರೆ ಹೆಚ್ಚು ವಹಿವಾಟು ಇರುವುದು ತೆಲುಗು ಸಿನಿಮಾಗಳಿಗೆ. ಒಂದು ಕಾಲಕ್ಕೆ ಭಾರತದಲ್ಲೇ ಅತಿಹೆಚ್ಚು ಚಿತ್ರಮಂದಿರಗಳನ್ನು ಹೊಂದಿದ ರಾಜ್ಯ ಆಂಧ್ರಪ್ರದೇಶ. ಸಿನಿಮಾ ನಾಯಕನಟರನ್ನು ತೀವ್ರತೆಯಲ್ಲಿ ಅಭಿಮಾನಿಸುವುದು ಕೂಡ ಇದೇ ತೆಲುಗು ಸಿನಿಮಾ ರಂಗದಲ್ಲಿ. ಇಷ್ಟು ಮಾತ್ರವಾಗಿದ್ದರೆ ಹೆಚ್ಚು ಅಪಾಯವಿಲ್ಲ, ಆದರೆ ಈ ಅಭಿಮಾನ ಜಾತಿ ಆಧಾರಿತವಾಗಿರುವುದು ಕೂಡ ತೆಲುಗು ಸಿನಿಮಾರಂಗ ಸಮಾಜದ ಸ್ವಾಸ್ಥ್ಯವನ್ನು ಇನ್ನಷ್ಟು ಹದಗೆಡಿಸಿದೆ. ತಮ್ಮ ಜಾತಿಯ ನಾಯಕನ ನಟನ ಸಿನಿಮಾ ಯಶಸ್ಸುಗಳಿಸಬೇಕು ಎಂದು ಅಭಿಮಾನಿಗಳು ಅವರ ಸಿನಿಮಾಗಳನ್ನು ವಿಜೃಂಭಿಸುವ ಉದಾಹರಣೆಗಳು ಕೂಡ ಚರ್ಚೆಯಾಗಿದೆ. ಅಲ್ಲದೆ ತೆಲುಗು ಚಿತ್ರರಂಗ ಕುಟುಂಬ ಸದಸ್ಯರಿಂದ
ಆವರಿಸಿಕೊಂಡಿರುವುದು ಕೂಡ ಸಮಸ್ಯೆಯನ್ನು ಬಿಗಡಾಯಿಸಿ, ಪಿತ್ರಾರ್ಜಿತ ಜಹಾಗೀರುದಾರಿಕೆಯನ್ನಾಗಿಸಿದೆ. ಇನ್ನು ಹಲವು ಸಿನಿಮಾಗಳಲ್ಲಿ ಚಿತ್ರಿತವಾಗುವ ಕಥೆಗಳು ಕೂಡ ಇದೇ ಪಾಳೆಗಾರಿಕೆ ಮನಸ್ಥಿತಿಯವೇ. ಈ ರೀತಿಯ ಪಾಳೆಗಾರಿಕೆ ಮನಸ್ಥಿತಿಯನ್ನು ಕೇವಲ ಸಿನಿಮಾದಲ್ಲಷ್ಟೇ ಅಲ್ಲ ಸಿನಿಮಾ ನಾಯಕ ನಟರ ಸಾರ್ವಜನಿಕ ನಡವಳಿಕೆಯಲ್ಲಿ ಪ್ರತಿಬಿಂಬವಾಗುವುದನ್ನು ಕೂಡ ಕಾಣಬಹುದು.

ಈ ಪರಿಯಾಗಿ ಬಹುತೇಕ ಜಡ್ಡುಗಟ್ಟಿದ ಫ್ಯೂಡಲ್ ತೆಲುಗು ಚಿತ್ರ ರಂಗದಲ್ಲಿ ಶೇಖರ್ ಕಮ್ಮುಲ ತಮ್ಮ ’ಲವ್ ಸ್ಟೋರಿ’ ಸಿನಿಮಾ ಮೂಲಕ ತೆಲುಗು ಸಿನಿಮಾ ಪ್ರೇಕ್ಷಕರಿಗೆ ಹೊಸ ಕಣ್ಣೋಟವೊಂದನ್ನು ನೀಡಿದ್ದಾರೆ. ಇದು ಆಶ್ಚರ್ಯಕ್ಕಿಂತ ಖುಷಿಯ ಸಂಗತಿ. ಈ ಹಿಂದೆ ಸುಕುಮಾರ್ ನಿರ್ದೇಶಿಸಿದ ’ರಂಗಸ್ಥಳಂ’ ಸಿನಿಮಾದಲ್ಲಿ ಜಾತಿ ಕುರಿತಾದ ವಿಷಯವನ್ನು ಡೀಲ್ ಮಾಡಿದ್ದರಾದರೂ, ಅದು ಜಾತಿ ಕುರಿತಾದ ಅಸಮಾನತೆ, ದಬ್ಬಾಳಿಕೆಯ, ಕ್ರೌರ್ಯ ಇಂತಹ ಮೂಲಭೂತ ಸಂಗತಿಗಳು ಸಮುದಾಯದ ಹಿನ್ನಲೆಯಲ್ಲಿ ಪ್ರೇಕ್ಷಕನಿಗೆ ದಾಟಿದ್ದಕ್ಕಿಂತ, ವ್ಯಕ್ತಿಯೊಬ್ಬನ ಖಾಸಗಿ ಪ್ರತೀಕಾರವಾಗಿ ಸಿಕ್ಕಿತ್ತು.

ಲವ್ ಸ್ಟೋರಿ

ಲವ್ ಸ್ಟೋರಿ ಸಿನಿಮಾದಲ್ಲಿ ಎರಡು ಸಂಗತಿಗಳನ್ನು ಸಮಾನಾಂತರವಾಗಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಒಂದು ನಮ್ಮ ಸಮಾಜದಲ್ಲಿರುವ ಜಾತಿ ವ್ಯವಸ್ಥೆ. ಮತ್ತೊಂದು ಫ್ಯೂಡಲ್ ಜಾತಿಯ ಪುರುಷ ಪ್ರಧಾನ ಕೌಟಂಬಿಕ ವ್ಯವಸ್ಥೆ ಒಳಗೆ ಹೆಣ್ಣಿನ ಬಗೆಗಿನ ದೃಷ್ಟಿಕೋನ. ದಲಿತ ಸಮುದಾಯದ ರೇವಂತ್ ಕಥಾನಾಯಕ, ಫ್ಯೂಡಲ್ ಸಮುದಾಯದ ಮೊನಿಕಾ ನಾಯಕಿ, ಕಥಾನಾಯಕನ ತಾಯಿ ಮನಮ್ಮ ಮತ್ತು ಕಥಾನಾಯಕಿಯ ಚಿಕ್ಕಪ್ಪ ನರಸಿಂಹಂ. ಈ ನಾಲ್ಕು ಪ್ರಧಾನ ಪಾತ್ರಗಳು. ಗಂಡನನ್ನು ಕಳೆದುಕೊಂಡ ಮನಮ್ಮ ಜಾತಿ ಅವಮಾನಗಳಿಂದ ಬೇಸತ್ತು ತನ್ನದೇ ಒಂದು ತುಂಡು ಭೂಮಿ ಹೊಂದುವುದು ಮತ್ತು ಆ ಮೂಲಕ ತನ್ನ ಅಸ್ತಿತ್ವ ಮತ್ತು ಸ್ವಾಭಿಮಾನವನ್ನು ಉಳಿಸಿಕೊಳ್ಳುವುದನ್ನು ಛಲಬಿಡದೆ ಸಾಧಿಸಿದ್ದಾಳೆ.

ತನ್ನ ಮಗನಿಗೆ ಬಾಲ್ಯದಿಂದಲೂ ಈ ಜಾತಿ ತಾರತಮ್ಯದ ಸೂಕ್ಷ್ಮಗಳು ಹೇಗಿರುತ್ತವೆ ಅನ್ನೋದನ್ನ ಹೇಳುತ್ತಿರುತ್ತಾಳೆ. ಈ ನಾಲ್ಕರಲ್ಲಿ ಮಾನಮ್ಮನದು ಬಹಳ ಗಟ್ಟಿಯಾದ ಮತ್ತು ವೈಚಾರಿಕವಾಗಿ ಸ್ಪಷ್ಟತೆ ಇರುವ ಪಾತ್ರ. ಅದೇ ರೀತಿ ಮಗ ರೇವಂತ್ ತನ್ನದೇ ಒಂದು ಸ್ವ ಉದ್ಯೋಗ/ಉದ್ಯಮದಿಂದ ಜೀವನ ರೂಪಿಸಿಕೊಳ್ಳಲು ಹಳ್ಳಿಯಿಂದ ನಗರಕ್ಕೆ ಬಂದು ಹೆಣಗುತ್ತಿದ್ದಾನೆ. ಕಥಾನಾಯಕಿ ಕೂಡ ತನ್ನ ಚಿಕ್ಕಪ್ಪನ ಯಜಮಾನಿಕೆಯಿಂದ ಬೇಸತ್ತು ಸ್ವಂತ ಉದ್ಯೋಗ ಮಾಡಿ ಜೀವನ ರೂಪಿಸಿಕೊಳ್ಳಲು ನಗರಕ್ಕೆ ಬಂದಿದ್ದಾಳೆ. ಇನ್ನು ಇವಳ ಚಿಕ್ಕಪ್ಪ ಹಳ್ಳಿಯಲ್ಲಿ ಬಡವರ ಜಮೀನನ್ನು ಕಬ್ಜ ಮಾಡುವುದು, ತನ್ನದೇ ಅಣ್ಣನ ಕುಡಿತದ ಚಟವನ್ನು ಮೂದಲಿಸಿ, ಅದೇ ಕಾರಣಕ್ಕೆ ಕುಟುಂಬದ ಮೇಲೆ ಯಜಮಾನಿಕೆ ಸಾಧಿಸುವುದನ್ನು ಮಾಡುತ್ತಿರುತ್ತಾನೆ. ಮೊನಿಕ ನಗರಕ್ಕೆ ಬಂದರೂ ಇವನು ಬೆಂಬಿಡದ ಭೂತದಂತೆ ಕಾಡುತ್ತಿರುತ್ತಾನೆ.

ನಿರ್ದೇಶಕ ಶೇಖರ್ ಸಿನಿಮಾದಲ್ಲಿ ಹೇಳಬೇಕಂದಿರುವ ಆಶಯ ಮೆಚ್ಚುವಂತದ್ದು. ಆದರೆ ಅದನ್ನು ಕಟ್ಟಿಕೊಡುವಲ್ಲಿ ಕೆಲವು ಕಡೆ ಎಡವಿ ನಿರೂಪಣೆ ದುರ್ಬಲವಾಗಿದೆ. ತಮ್ಮ ಅಲೋಚನೆಗೆ ಪೂರಕವಾಗಿ ದೃಶ್ಯಗಳನ್ನು ಒಟ್ಟು ಬಂಧದಲ್ಲಿ ಕಟ್ಟಿಕೊಡಲು ಸಾಧ್ಯವಾಗಿಲ್ಲ. ಪಾತ್ರಗಳಲ್ಲಿ ಕನ್ಸಿಸ್ಟಿನ್ಸಿ ಕೂಡ ಕಾಣೆಯಾಗಿದೆ.

ಸಿನಿಮಾದ ಕೊನೆಗೆ ಕಥಾನಾಯಕನನ್ನು ರೆಬಲ್ ಮಾಡುವ ಸಲುವಾಗಿ ಮಾನಮ್ಮನ ಪಾತ್ರ ಇದ್ದಕ್ಕಿಂದ್ದಂತೆ ದುರ್ಬಲವಾಗಿಬಿಡುತ್ತದೆ. ಇನ್ನು ನಗರದಲ್ಲಿಯೂ ಇರುವ ಜಾತಿ ತಾರತಮ್ಯವನ್ನು ಕಟ್ಟಿಕೊಡುವ ಬಹಳ ದೊಡ್ಡ ಅವಕಾಶವನ್ನು ನಿರ್ದೇಶಕ ಕೈಚೆಲ್ಲಿದ್ದಾರೆ. ಸಿನಿಮಾದ ಮೊದಲಾರ್ಧ ನಾಯಕ ಮತ್ತು ನಾಯಕಿ ನಡುವೆ ಉಂಟಾಗುವ ಸ್ನೇಹ, ಆನಂತರ ಅದು ಪ್ರೀತಿಯಾಗಿ ಬೆಳಯುವುದಕ್ಕಷ್ಟೇ ಮೀಸಲಾಗಿದೆ. ಸಿನಿಮಾದ ಪ್ರಾರಂಭದಲ್ಲಿ ಮಾನಮ್ಮ ತನ್ನ ಮಗನಿಗೆ ಜಾತಿ ತಾರತಮ್ಯದ ಕುರಿತು ಹೇಳುವ ಮಾತುಗಳು ನಿರೂಪಣೆಯಲ್ಲಿ ವ್ಯಕ್ತವಾಗಿದ್ದು ಬಿಟ್ಟರೆ, ಮಧ್ಯಂತರದವರೆಗೂ ಆ ತಾರತಮ್ಯವನ್ನು ಕಟ್ಟಿಕೊಡುವ ದೃಶ್ಯಗಳು ಬರುವುದೇ ಇಲ್ಲ. ಮಧ್ಯಂತರದ ನಂತರ, ನಾಯಕ ಮತ್ತು ನಾಯಕಿ ನಡೆಸುವ ಡ್ಯಾನ್ಸ್ ಕ್ಲಾಸ್‌ನಲ್ಲಿ ಕಲಿಯುತ್ತಿರುವ ಮೇಲ್ಜಾತಿ/ಶ್ರೀಮಂತ ಹುಡುಗಿ ಮತ್ತು ತಳ ಸಮುದಾಯದ/ಬಡ ಹುಡುಗನ ನಡುವಿನ ಪ್ರೀತಿ ಮರ್ಯಾದಾ ಹತ್ಯೆಯಲ್ಲಿ ಕೊನೆಯಾಗುವ ದೃಶ್ಯದೊಂದಿಗೆ ಕಥೆ ಒಂದಷ್ಟು ತೀವ್ರತೆ ಪಡೆಯುತ್ತದೆ. ನಾಯಕ ತನ್ನ ತಾಯಿಗೆ ಈ ವಿಚಾರ ತಿಳಿಸಿದಾಗ ತಾಯಿ ಮಾನಮ್ಮಳಿಗೆ ತನ್ನ ಮಗನ ಪ್ರೀತಿಗಿಂತ ತನ್ನ ಸ್ವಾಭಿಮಾನ ಮುಖ್ಯವಾಗುತ್ತದೆ. ಮಗನ ಭವಿಷ್ಯಕ್ಕಾಗಿ ತಾನು ಪೈಸೆಪೈಸೆ ಕೂಡಿಸಿ ಕೊಂಡುಕೊಂಡ ಜಮೀನನ್ನು ಮಾರುವ ಮಾನಮ್ಮ, ಈ ವಿಚಾರದಲ್ಲಿ ಮಾತ್ರ ಮಗನಿಗೆ ಷರತ್ತೊಂದನ್ನು ವಿಧಿಸುತ್ತಾಳೆ. ನಿನ್ನ ಪ್ರೀತಿಸಿದ ಹುಡುಗಿ ಮನೆಯವರು ನನ್ನ ಜಾತಿ ಪರಿಗಣಿಸದೆ ಸಮಾನವಾಗಿ ಸ್ವೀಕರಿಸಿದ್ದಾದರೆ ನಾನು ಈ ಮದುವೆಗೆ ಸಿದ್ಧ ಎಂದು ಹೇಳುತ್ತಾಳೆ. ಈ ಪ್ರಯತ್ನಕ್ಕೆ ಮುಂದಾಗುವ ನಾಯಕ ಸೋಲುತ್ತಾನೆ.

ಶೇಖರ್ ಕಮ್ಮುಲ, ಫ್ಯೂಡಲ್ ಜಾತಿಯ ಕುಟುಂಬದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯವನ್ನು ಕಟ್ಟಿಕೊಟ್ಟಷ್ಟು ತೀವ್ರವಾಗಿ ಜಾತಿ ತಾರತಮ್ಯವನ್ನು ಕಟ್ಟಿಕೊಟ್ಟಿಲ್ಲ ಎಂಬ ಭಾವನೆ ಕೂಡ ಕೊನೆಗೆ ಉಳಿದುಕೊಳ್ಳುತ್ತದೆ. (ಕಥಾ ನಾಯಕಿ ಪಾತ್ರದಲ್ಲಿ ನಟಿಸಿದ ಸಾಯಿ ಪಲ್ಲವಿ ಅವರ ಜನಪ್ರಿಯತೆಯ ಕಾರಣಕ್ಕೂ ಇದು ಇರಬಹುದು). ಆದರೆ ತೆಲುಗು ಸಿನಿಮಾರಂಗದಲ್ಲಿ ಇಷ್ಟಾದರೂ ಚರ್ಚೆಮಾಡುವ ಮಾನವೀಯ ನೆಲೆಯಲ್ಲಿ ಚಲನಚಿತ್ರ ನಿರ್ದೇಶಿಸುವವರು ಇದ್ದಾರಲ್ಲ ಅನ್ನುವ ಕಾರಣಕ್ಕೆ ಶೇಖರ್ ಕಮ್ಮುಲ ಅಭಿನಂದನೀಯ.

ನಟಿಸುವ ಪಾತ್ರಕ್ಕೆ ಜೀವ ತುಂಬುವ ಸಾಯಿ ಪಲ್ಲವಿ

ನಟಿ ಸಾಯಿ ಪಲ್ಲವಿ ದಕ್ಷಿಣ ಸಿನಿಮಾ ಪ್ರೇಕ್ಷಕರಿಗೆ ಹೆಚ್ಚು ಪರಿಚಯವಾಗಿದ್ದು ಮಲೆಯಾಳಂ ಭಾಷೆಯ ’ಪ್ರೇಮಂ’ ಸಿನಿಮಾ ಮೂಲಕ. ’ಮಲರ್’ ಪಾತ್ರದಲ್ಲಿ ಅಷ್ಟು ಸಹಜವಾಗಿ ನಟಿಸಿದ ಸಾಯಿ ಪಲ್ಲವಿ ಇವತ್ತಿಗೂ ಸಿನಿಮಾ ಪ್ರೇಕ್ಷಕರಿಗೆ ’ಮಲರ್’. ತಾವು ನಟಿಸಿದ ಸರಿಸುಮಾರು ಎಲ್ಲ ಸಿನಿಮಾಗಳಲ್ಲಿ ಕಥಾ ನಾಯಕನ ಪಾತ್ರಕ್ಕಿಂತ ಸಾಯಿ ಪಲ್ಲವಿ ನಟಿಸಿದ ಪಾತ್ರ ಹೆಚ್ಚು ಮನಸ್ಸಿನಲ್ಲಿ ಉಳಿಯುತ್ತದೆ. ಲವ್ ಸ್ಟೋರಿ ಸಿನಿಮಾದಲ್ಲಿಯೂ ಹಲವು ಕೊರತೆಗಳಿದ್ದರೂ, ಸಾಯಿ ಪಲ್ಲವಿ ತೆರೆಯ ಮೇಲೆ ಕಾಣಿಸುವ ದೃಶ್ಯಗಳಿಂದ ಈ ಕೊರತೆಗಳನ್ನು ಮರೆಯುವಂತೆ ಪ್ರೇಕ್ಷಕನನ್ನು ತನ್ನ ನಟನೆಯೆಡಗೆ ಎಳೆದುಕೊಳ್ಳುತ್ತಾರೆ.

ನಿರ್ದೇಶಕ ಶೇಖರ್ ಕಮ್ಮುಲ

ದ್ರಾವಿಡ ಭಾಷೆಗಳ ಬಗ್ಗೆ ಓದುವಾಗ ತೆಲುಗು ಭಾಷೆಯಲ್ಲಿ ಸ್ತ್ರೀವಾಚಕಗಳನ್ನು ಹೇಗೆ ಸಂಬೋಧಿಸಲಾಗುತ್ತದೆ ಎಂಬುದು ಸೋಜಿಕವೆನಿಸಿತ್ತು. ಸ್ತ್ರೀವಾಚಕಗಳನ್ನು ’ಅದಿ’, ’ಇದಿ’ (ಅದು, ಇದು) ಎಂದು ವಸ್ತುಗಳ ರೀತಿ ಸಂಬೋಧಿಸಲಾಗುತ್ತದೆ (ಕರ್ನಾಟಕದಲ್ಲಿಯೂ ಈ ಬಳಕೆಯನ್ನು ಹಲವೆಡೆ ಕಾಣಬಹುದು). ತೆಲುಗು ಸಮಾಜಕ್ಕೆ
ಇದನ್ನು ಸಾಮಾನ್ಯೀಕರಿಸಲು ನನ್ನ ಅಧ್ಯಯನದ ಕೊರತೆಯಿದ್ದರೂ, ತೆಲುಗು ಸಿನಿಮಾ ಮತ್ತು ತೆಲುಗು ಸಿನಿಮಾರಂಗ ನಿಸ್ಸಂಶಯವಾಗಿ ಪುರುಷಪ್ರಧಾನವಾದದ್ದು ಎನ್ನಬಹುದು (ಕನ್ನಡ ಚಿತ್ರರಂಗವನ್ನೂ ಸೇರಿದಂತೆ, ಬಹುತೇಕ ಭಾರತೀಯ ಚಿತ್ರರಂಗಗಳಿಗೂ ಇದು ಅನ್ವಯಿಸುತ್ತದೆ). ಇಲ್ಲಿ ಕಥಾನಾಯಕಿ ಪಾತ್ರ ಸೃಷ್ಟಿ ಮಾಡೋದೇ ಕಥಾನಾಯಕನ ಹಿರೋಹಿಸಂನ್ನು ವಿಜೃಂಭಿಸುವುದಕ್ಕೆ. ಇದಕ್ಕೆ ಉದಾಹರಣೆಗಳು ದಂಡಿಯಾಗಿ ಸಿಗುತ್ತವೆ. ಬಹುಸಂಖ್ಯಾತ ಪ್ರಧಾನಧಾರೆಯ ತೆಲುಗು ಸಿನಿಮಾಗಳನ್ನು ಗಮನಿಸಿದರೆ ಒಂದು ಗಟ್ಟಿಯಾದ ಮಹಿಳಾ ಪಾತ್ರ ಸಿಗುವುದೂ ಕಷ್ಟ. ಹೆಣ್ಣು ಪಾತ್ರಗಳಿಗೆ ಅಲ್ಲಿ ಹೆಚ್ಚು ಸ್ಪೇಸ್ ಇಲ್ಲವೇ ಇಲ್ಲ.

ಶೇಖರ್ ಕಮ್ಮುಲ ಸಿನಿಮಾಗಳು ಇದಕ್ಕೆ ಅಪವಾದ ಎನ್ನಬಹುದು. ತಮ್ಮ ಮೊದಲ ಸಿನಿಮಾ ’ಆನಂದ್’ನಿಂದ ’ಗೋದಾವರಿ’, ’ಹ್ಯಾಪಿಡೇಸ್’, ’ಲೀಡರ್’, ’ಫಿದಾ’ ಈ ಎಲ್ಲಾ ಸಿನಿಮಾಗಳಲ್ಲೂ ಸಾಂಪ್ರದಾಯಿಕ ಗಂಡು ನೋಟವನ್ನು ಪ್ರಶ್ನೆ ಮಾಡಿದ, ಹೆಣ್ಣಿನ ಸ್ವತಂತ್ರ ಅಲೋಚನೆಗೆ ಒತ್ತಾಸೆಯಾದ ಮತ್ತು ಅಂತಹ ಪಾತ್ರಗಳಿಗೆ ಹೆಚ್ಚು ಅವಕಾಶ ಕೊಟ್ಟಿದ್ದನ್ನು ಕಾಣಬಹುದು. ಸಾಯಿ ಪಲ್ಲವಿ ನಟಿಸಿದ ’ಫಿದಾ’ದಲ್ಲಿ ಕಥಾ ನಾಯಕಿ ಮದುವೆ ಆದ ಮೇಲೆ ಗಂಡನ ಮನೆಗೆ ಏಕೆ ಹೋಗಬೇಕು, ಅವಳು ತನ್ನ ಹೆತ್ತವರ ಬಳಿ ಇರುವುದು ಅನಿವಾರ್ಯ ಅದಾಗ ಗಂಡನೇ ನನ್ನ ಬಳಿ ಏಕೆ ಬಂದಿರಬಾರದು ಎಂದು ಪ್ರಶ್ನಿಸುತ್ತಾಳೆ. ಶೇಖರ್ ಕಮ್ಮುಲ ಸಿನಿಮಾಗಳನ್ನ ಸ್ತ್ರೀವಾದದ ಆಳವಾದ ವಿಮರ್ಶೆಗೆ ಒಳಪಡಿಸಿದರೆ ಅಲ್ಲೂ ಸಾಕಷ್ಟು ಕೊರತೆಗಳು. ಮೇಲ್ಪದರದ ಗ್ರಹಿಕೆಗಳು, ಪೂರ್ವಗ್ರಹಗಳು ಎಲ್ಲವೂ ಬಹಳಷ್ಟು ಸಿಗುತ್ತವೆ. ಉದಾಹರಣೆಗೆ ಲವ್ ಸ್ಟೋರಿ ಸಿನಿಮಾವನ್ನೆ ನೋಡುವುದಾದರೆ, ತನ್ನ ಮನೆಯವರ ವಿರೋಧದಿಂದ ದುಡಿಯಲು ನಗರಕ್ಕೆ ಹೋಗುವ ನಾಯಕಿ ಸಂಪಾದಿಸಿದ ಹಣವನ್ನು ನೀಡುವುದು ಕುಡುಕ ಮತ್ತು ಬೇಜವ್ದಾರಿ ತಂದೆಗೆ. ಕಥಾ ನಾಯಕಿಗೆ ಯಾವ ಯಜಮಾನಿಕೆಯಿಂದ ಉಸಿರುಗಟ್ಟಿರುತ್ತದೊ ಅದೇ ಯಜಮಾನಿಕೆಯನ್ನು ಪೋಷಿಸುತ್ತದೆ ಈ ದೃಶ್ಯ. ಈ ತರಹದ ದೃಶ್ಯಗಳು ಶೇಖರ್ ಅವರ ಎಲ್ಲಾ ಸಿನಿಮಾಗಳಲ್ಲೂ ಸಾಮಾನ್ಯವಾಗಿ ಇರುತ್ತವೆ. ಆದರೆ, ಬಹಳ ನೇರಾನೇರ ಪುರುಷ ಯಜಮಾನಿಕೆ ಮತ್ತು Misogynyಗಳನ್ನು ಸಮಾಜದ ಮೌಲ್ಯಗಳು ಎಂದು ಪ್ರದರ್ಶನ ಮಾಡುವ ತೆಲುಗು ಸಿನಿಮಾಗಳ ನಡುವೆ ಶೇಖರ್ ಮಾನವೀಯವಾಗಿ ಕಾಣಿಸುತ್ತಾರೆ.

ತಮಿಳು ಚಿತ್ರರಂಗದಲ್ಲಿ ಪ ರಂಜಿತ್, ಮಾರಿ ಸೆಲ್ವರಾಜ್‌ರಂತಹ ನಿರ್ದೇಶಕರು ಜಾತಿ ಶೋಷಣೆಯ ವಿಷಯಗಳ ಚಲನಚಿತ್ರಗಳನ್ನು ನಿರ್ದೇಶಿಸಿ ಯಶಸ್ವಿಯಾದ ಉದಾಹರಣೆಗಳಿಂದ ಅಕ್ಕಪಕ್ಕದ ರಾಜ್ಯದಲ್ಲಿಯೂ ಹಲವು ನಿರ್ದೇಶಕರಿಗೆ ಇದು ಸ್ಫೂರ್ತಿಯಾಗಿರಬಹುದು. ಶೇಖರ್ ಲವ್ ಸ್ಟೋರಿಯತಂಹ ಸಿನಿಮಾಗಳನ್ನು ಹೆಚ್ಚೆಚ್ಚು ಮಾಡಲಿ. ಅವುಗಳು ಇನ್ನಷ್ಟು ಆಳವಾದ ಅಧ್ಯಯನಗಳಿಂದ, ಒಳನೋಟಗಳಿಂದ ಕೂಡಿ, ದೃಶ್ಯ ಮಾಧ್ಯಮದ ಸಾಧ್ಯತೆಯನ್ನು ಹೆಚ್ಚು ದುಡಿಸಿಕೊಂಡು ಇನ್ನಷ್ಟು ತೀವ್ರವಾಗಿ ಬೆಳ್ಳಿಪರದೆ ಮೇಲೆ ಪ್ರದರ್ಶನಗೊಳ್ಳಲಿ, ಇವು ತೆಲುಗು ಸಿನಿಮಾ ಇಂಡಸ್ಟ್ರಿಗೆ ಮಾದರಿಯಾಗಲಿ.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ


ಇದನ್ನೂ ಓದಿ: ವೈಚಾರಿಕತೆಯನ್ನು ಕಡೆಗಣಿಸಿ ಅಬ್ಬರಿಸುವ ಜನಪ್ರಿಯ ನಟರ ಸಿನಿಮಾದಾಚೆಗಿನ ವಿಚಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೆಲಸದ ಅವಧಿ ಬಳಿಕ ಯಾವುದೇ ಕರೆಗಳು, ಇಮೇಲ್‌ಗಳಿಗೆ ಉತ್ತರಿಸಬೇಕಿಲ್ಲ : ಸಂಪರ್ಕ ಕಡಿತ ಹಕ್ಕು ಮಸೂದೆ ಹೇಳುವುದೇನು?

ದೇಶದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಉದ್ಯೋಗಿಗಳ ಮೇಲೆ ಅತೀವ ಕೆಲಸದ ಹೊರೆಯನ್ನು ಹೇರಿ ಅವರ ಖಾಸಗಿ ಜೀವನವನ್ನು ಕಿತ್ತುಕೊಳ್ಳುವ ಮೂಲಕ ಮಾನಸಿಕ ಒತ್ತಡಕ್ಕೆ ತಳ್ಳುತ್ತಿರುವ ಪರಿಸ್ಥಿತಿ ಗಂಭೀರ ಹಂತಕ್ಕೆ ತಲುಪಿದೆ. ಅದಾಗ್ಯೂ ಕೆಲ ಕಾರ್ಪೋರೇಟ್‌...

ಯುದ್ಧ ವಿರೋಧಿ ವಾಟ್ಸಾಪ್ ಸ್ಟೇಟಸ್ : ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ದಲಿತ ಪ್ರಾಧ್ಯಾಪಕಿ ವಜಾ

ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ವೇಳೆ ಯುದ್ಧ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಲೋರಾ ಶಾಂತಕುಮಾರ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಎಸ್‌ಆರ್‌ಎಂನ ಆಂತರಿಕ ಸಮಿತಿಯ ವರದಿಯು ಲೋರಾ...

ಗಾಝಾದಲ್ಲಿ ಕದನ ವಿರಾಮ : ಎರಡು ವರ್ಷಗಳ ಬಳಿಕ ಬೆಥ್ಲೆಹೆಮ್‌ನಲ್ಲಿ ಮರುಕಳಿಸಿದ ಕ್ರಿಸ್‌ಮಸ್ ಸಂಭ್ರಮ

ಗಾಝಾದಲ್ಲಿ ಕದನ ವಿರಾಮ ಜಾರಿಯಾಗಿರುವ ಹಿನ್ನೆಲೆ, ಎರಡು ವರ್ಷಗಳ ನಂತರ ಈ ಬಾರಿ ಯೇಸು ಕ್ರಿಸ್ತನ ಜನ್ಮಸ್ಥಳ ಜೆರುಸಲೇಂನ ಬೆಥ್ಲೆಹೆಮ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮಾಚರಣೆ ಮರುಕಳಿಸಿದೆ. ಶನಿವಾರ (ಡಿಸೆಂಬರ್ 6) ಬೆಥ್ಲೆಹೆಮ್‌ನ ಮ್ಯಾಂಗರ್ ಸ್ಕ್ವೇರ್‌ನಲ್ಲಿರುವ ಚರ್ಚ್...

ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟು : ಜೆಪಿಸಿ ವಿಚಾರಣೆ ಕೋರಿ ಪ್ರಧಾನಿಗೆ ಪತ್ರ ಬರೆದ ಸಂಸದ ಜಾನ್ ಬ್ರಿಟ್ಟಾಸ್

ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯದಿಂದ ಉಂಟಾದ ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟಿನ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವಿಚಾರಣೆ ಅಥವಾ ನ್ಯಾಯಾಂಗ ತನಿಖೆ ಮಾಡಿಸುವಂತೆ ಕೋರಿ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಪ್ರಧಾನಿ...

ಒಳಮೀಸಲಾತಿ : ಶೇ.17ರ ಪ್ರಮಾಣದಲ್ಲೇ ಮುಂದುವರಿಯಲು ಸರ್ಕಾರ ತೀರ್ಮಾನ?

ಒಳಮೀಸಲಾತಿಗೆ ಸಂಬಂಧಿಸಿದಂತೆ ಉಂಟಾಗಿರುವ ಕಗ್ಗಂಟನ್ನು ಎದುರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಶೇಕಡ 17ರ ಮೀಸಲಾತಿ ಪ್ರಮಾಣದಲ್ಲೇ ಮುಂದುವರಿಯಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಶನಿವಾರ ಸಂಜೆ (ಡಿಸೆಂಬರ್ 6) ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ...

ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

ಉತ್ತರ ಗೋವಾದ ನೈಟ್‌ ಕ್ಲಬ್‌ವೊಂದರಲ್ಲಿ ಶನಿವಾರ (ಡಿಸೆಂಬರ್ 6) ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಸಿಬ್ಬಂದಿಯಾಗಿದ್ದು,...

ಮೈಸೂರು| ಒಳಮೀಸಲಾತಿ ಹೋರಾಟ ಹತ್ತಿಕ್ಕಲು ನಿಷೇಧಾಜ್ಞೆ ಹೇರಿದ ಕಾಂಗ್ರೆಸ್ ಸರ್ಕಾರ

ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ' ನಡೆಸುತ್ತಿದ್ದ ಹೋರಾಟಕ್ಕೆ ಜಿಲ್ಲಾ ಪೊಲೀಸರು ಅನುಮತಿ ನಿರಾಕರಿಸಿದ್ದು, ಸಿದ್ದರಾಮನಹುಂಡಿಯಿಂದ ಮೈಸೂರಿಗೆ ಇಂದು ಪಾದಯಾತ್ರೆ ಆರಂಭಿಸಿದ ಹೋರಾಟಗಾರರನ್ನು...

‘ನಕಲಿ ಬ್ಯಾಂಕ್ ಗ್ಯಾರಂಟಿ’ ಪ್ರಕರಣ : ರಿಲಯನ್ಸ್ ಪವರ್, ಇತರ ಸಂಸ್ಥೆಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ

ರಿಲಯನ್ಸ್ ಪವರ್ ಕಂಪನಿಯು ಭಾರತೀಯ ಸೌರಶಕ್ತಿ ನಿಗಮಕ್ಕೆ (ಎಸ್‌ಇಸಿಐ) ಟೆಂಡರ್ ಪಡೆಯಲು ಸಲ್ಲಿಸಿದ 68 ಕೋಟಿ ರೂಪಾಯಿಗಳ ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಪವರ್ ಲಿಮಿಟೆಡ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ...

ಉತ್ತರ ಪ್ರದೇಶ| ಬಾಬರಿ ಮಸೀದಿ ಮೇಲಿನ ದಾಳಿಗೆ 33 ವರ್ಷ; ಅಯೋಧ್ಯೆ-ವಾರಣಾಸಿಯಲ್ಲಿ ಬಿಗಿ ಭದ್ರತೆ

ಬಾಬರಿ ಮಸೀದಿ ಧ್ವಂಸವಾಗಿ 33ನೇ ವರ್ಷ ತುಂಬುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಜಾಗರೂಕರಾಗಿದ್ದು, ಎಲ್ಲಾ ಮಾರ್ಗಗಳಲ್ಲಿ ವಾಹನಗಳ ಸಂಪೂರ್ಣ ತಪಾಸಣೆ ನಡೆಸುತ್ತಿವೆ. ಈ ಕುರಿತು...

ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ: ‘ಡಿಕೆ’ ಸಹೋದರರಿಗೆ ಇಡಿ-ದೆಹಲಿ ಪೊಲೀಸರಿಂದ ಸಮನ್ಸ್

ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗಳಿಗೆ ನೀಡಿದ ದೇಣಿಗೆಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೈಗೊಂಡಿರುವ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯವು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು...