Homeಚಳವಳಿಮಾಧುಸ್ವಾಮಿಗೆ ಕಾನೂನಿನ ಪಾಠ ಹೇಳಿಕೊಡಬೇಕಿದೆ ; ಹೋರಾಟಗಾರ್ತಿಯರ ಆಕ್ರೋಶ

ಮಾಧುಸ್ವಾಮಿಗೆ ಕಾನೂನಿನ ಪಾಠ ಹೇಳಿಕೊಡಬೇಕಿದೆ ; ಹೋರಾಟಗಾರ್ತಿಯರ ಆಕ್ರೋಶ

ಕ್ಷಮೆಯಲ್ಲಿ ಮುಗಿದುಹೋಗಬೇಕಿದ್ದ ಪ್ರಕರಣವನ್ನು ಅವರೇ ದೊಡ್ಡದು ಮಾಡುತ್ತಿದ್ದಾರೆ. ಇದರಿಂದ ನಾನು ಕುಗ್ಗುವುದಿಲ್ಲ. ಪ್ರಾಮಾಣಿಕವಾಗಿ ಹೋರಾಟ ಮುಂದುವರೆಸುತ್ತೇನೆ. ನಮ್ಮ ರೈತಸಂಘದ ಹಿರಿಯರೊಂದಿಗೆ ಸಭೆ ನಡೆಸಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ನಳಿನಿ ತಿಳಿಸಿದ್ದಾರೆ.

- Advertisement -
- Advertisement -

ರೈತ ಹೋರಾಟಗಾರ್ತಿಯೊಂದಿಗೆ ಅನುಚಿತವಾಗಿ ವರ್ತಿಸಿ ತೀವ್ರ ಖಂಡನೆಗೆ ಒಳಗಾಗಿದ್ದ ಸಣ್ಣ ನೀರಾವರಿ ಮತ್ತು ಕಾನೂನು ಸಚಿವ ಮಾಧುಸ್ವಾಮಿಯವರು ತನ್ನ ತಪ್ಪಿಗೆ ಕ್ಷಮೆ ಕೇಳುತ್ತಲೇ ನಳಿನಿ ವಿರುದ್ಧ ಮತ್ತಷ್ಟು ಆರೋಪಗಳನ್ನು ಮಾಡಿ ವಿವಾದವನ್ನು ಮುಂದುವರೆಸಿದ್ದಾರೆ.

ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು “ಆಯಮ್ಮ ನನ್ನನ್ನ ಟೆಂಪ್ಟ್ ಮಾಡಿದ್ದಾರೆ, ಒಬ್ಬ ಮಂತ್ರಿ ಅವರ ಊರಿಗೆ ಹೋಗಿ ಸುಮ್ಮನೆ ಬೈಸಿಕೊಂಡು ಬರುವುದಕ್ಕಾಗುತ್ತದೆಯೇ? ಆಯಮ್ಮನಿಗೆ ಅದೇನಾಗಿತ್ತೊ ಗೊತ್ತಿಲ್ಲ. ಆಯಮ್ಮ ಬಹುಶಃ ಅದೇ ರೀತಿ ಬೆಳೆದುಕೊಂಡಬಂದಿರಬಹುದು. ಈಯಮ್ಮನ ನೇಚರ್‌ ಅಂತದ್ದು ಎಂದು ಸ್ಥಳೀಯವಾಗಿ ಹೇಳಿದ್ದಾರೆ” ಎಂದು ಆರೋಪಿಸಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಮಹಿಳಾ ಮತ್ತು ರೈತ ಹೋರಾಟಗಾರರನ್ನು ಮಾತನಾಡಿಸಿತು. ಅವರ ಪ್ರತಿಕ್ರಿಯೆಗಳು ಈ ಕೆಳಗಿನಂತವೆ.

ಒಬ್ಬ ಮಹಿಳೆಯ ಎದುರು “ನಾನು ಬಹಳ ಕೆಟ್ಟ ಮನುಷ್ಯ” ಎಂದರೆ ಏನರ್ಥ? : ನಂದಿನಿ ಜಯರಾಂ ಪ್ರಶ್ನೆ

“ಮೊದಲನೆಯದಾಗಿ ನಳಿನಿಯಂತಹ ಹೆಣ್ಣು ಮಕ್ಕಳು ಸಾಮಾಜಿಕ ಹೋರಾಟಕ್ಕೆ ಬರುವುದೇ ದೊಡ್ಡದು. ಅದಕ್ಕಾಗಿ ಅವಳನ್ನು ಅಭಿನಂದಿಸಬೇಕು. ಎರಡನೇಯದಾಗಿ ಅವರೂರಿಗೆ ಬಂದಾಗ ಅವರೂರಿನ ಸಮಸ್ಯೆಯನ್ನೇ ಅವಳು ಕೇಳಿದ್ದಾಳೆ. ಈ ಮೊದಲು ಆ ಕೆರೆ ನೀರು ಹಂಚಿಕೆ ಸಂಬಂಧಿಸಿದಂತೆ ಹೋರಾಟ ಮಾಡಿ ಯಶಸ್ಸು ಕಂಡಿದ್ದಾರೆ. ಈಗ ಒತ್ತುವರಿ ಸಮಸ್ಯೆ ಗಮನಕ್ಕೆ ಬಂದಾಗ ಅದನ್ನು ಪ್ರಶ್ನಿಸಿದ್ದಾರೆ. ಆಗ ಮಾಧುಸ್ವಾಮಿಯವರು ಆ ಪ್ರಶ್ನೆಯನ್ನು ಫ್ಯೂಡಲ್‌ ಮನಸ್ಥಿತಿಯಿಂದ ನೋಡಿದ್ದಾರೆ.

ಅಷ್ಟು ಚಿಕ್ಕ ಹುಡುಗಿ ಪ್ರಶ್ನೆ ಮಾಡಿರುವುದು ಮತ್ತು ಹುಡುಗಿಯೊಬ್ಬಳು ಸಾರ್ವಜನಿಕವಾಗಿ ಪ್ರಶ್ನೆ ಮಾಡಿರುವುದನ್ನು ತಡೆದುಕೊಳ್ಳಲು ಮಾಧುಸ್ವಾಮಿಯವರಿಗೆ ಆಗಿಲ್ಲ. ಅದಕ್ಕಾಗಿ ಅವರು ಪದೇ ಪದೇ ಅವಳ ಮಾತಿನ ಧಾಟಿ ಸರಿಯಿಲ್ಲ ಅನ್ನುತ್ತಾರಲ್ಲ, ಅವರು ಸಾರ್ವಜನಿಕವಾಗಿ ಮುಚ್ಚು ಬಾಯಿ ರ್‍ಯಾಸ್ಕಲ್ ಎನ್ನುವ ಧಾಟಿ ಸರಿಯೇ? ಒಬ್ಬ ಹೆಣ್ಣು ಮಗಳಿಗೆ ನಾನು ಕೆಟ್ಟ ಮನುಷ್ಯ ಗೊತ್ತಿಲ್ಲ ನಿನಗೆ ಎಂದರೆ ಅರ್ಥವೇನು? ಇದು ಬಹಿರಂಗ ಬೆದರಿಕೆಯಲ್ಲವೇ?

ನಂದಿನಿ ಜಯರಾಂ

ರೈತಸಂಘ ಮಾಧುಸ್ವಾಮಿಯವರ ನಡೆಯನ್ನು ತೀವ್ರವಾಗಿ ಖಂಡಿಸುತ್ತದೆ. ಕ್ಷಮೆ ಕೇಳಿದರೆಂದು ನಾವು ಸುಮ್ಮನಾಗಿದ್ದೆವು. ಆದರೆ ಅವರು ತಮ್ಮ ಹೇಳಿಕೆಗಳನ್ನು ಬದಲಿಸುತ್ತಿರುವುದನ್ನು ನೋಡಿದರೆ ಕ್ಷಮೆ ಅವರ ಮನಸ್ಸಿನಿಂದ ಬಂದಿಲ್ಲ, ಬದಲಿಗೆ ತಮ್ಮ ಮೇಲಿನ ದಾಳಿಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಕ್ಷಮೆ ಕೇಳಿದ್ದಾರೆಂಬುದು ಅರಿವಿಗೆ ಬರುತ್ತದೆ. ಒಂದು ಕಡೆ ಸಂಸ್ಕೃತಿಯ ಬಗ್ಗೆ ಮಾತನಾಡುವ ಅವರು ಇಲ್ಲಿ ನಾಲಿಗೆ ಹರಿಯಬಿಡುತ್ತಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.

ನಂದಿನಿ ಜಯರಾಂ, ರೈತ ಮುಖಂಡರು,

ಕರ್ನಾಟಕ ರಾಜ್ಯ ರೈತ ಸಂಘ, ಕೆ.ಆರ್‌ ಪೇಟೆ.

ತಾನೊಬ್ಬ ಕೆಟ್ಟ ಮನುಷ್ಯ ಎಂಬುದನ್ನು ತೋರಿಸಿದ್ದಾರೆ. – ಗೀತಾ.ವಿ

ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ನಮ್ಮ ಕೋಲಾರದಲ್ಲಿ ಮಹಿಳಾ ರೈತ ಮುಖಂಡರುಗಳಿಗೆ ಬಾಯಿ ಮಚ್ಚು ರ್‍ಯಾಸ್ಕಲ್‌ ಎಂದು‌ ಕೆಟ್ಟ ಭಾಷೆಯಲ್ಲಿ ಬೈದು ತಾನೊಬ್ಬ ಕೆಟ್ಟ ಮನುಷ್ಯ ಎಂದು ಬೆರಳು ತೋರಿಸಿ ಹೇಳುತ್ತಿರುವುದು ಇದೊಂದು ಖಂಡನೀಯ ವರ್ತನೆ. ಯಾವ ವ್ಯಕ್ತಿಯೂ ಈ ರೀತಿ ನಡೆದುಕೊಳ್ಳಬಾರದು. ಅದರಲ್ಲಿಯೂ ಜನಪ್ರತಿನಿಧಿಗಳು ಶಾಸಕರು, ಸಚಿವರು‌ ಅದರಲ್ಲಿಯೂ ಕಾನೂನು ಸಚಿವರಾಗಿ ಕನಿಷ್ಟ ಸಾಮಾನ್ಯ ಪ್ರಜ್ಞೆಯಿಲ್ಲದೇ ನಾಲಿಗೆ ಹರಿಬಿಟ್ಟಿದ್ದು ಅಕ್ಷಮ್ಯ. ಸಾಲದ್ದಕ್ಕೆ ಸ್ಥಳದಲ್ಲಿ ಇದ್ದ ಪುರುಷ ಪೋಲೀಸ್ ಆಕೆಯನ್ನು ತಳ್ಳಿಕೊಂಡು ಹೋಗುತ್ತಿರುವುದೂ ಕಾಣುತ್ತಿದೆ. ಇದೂ ಆಕ್ಷೇಪಾರ್ಹ ಸಂಗತಿಯೇ.

ಗೀತಾ.ವಿ

ಕನಿಷ್ಟ ಸಾಮಾನ್ಯ ಜ್ಞಾನವಿಲ್ಲದವರು ಸಚಿವರಾಗಿರುವುದು ತರವಲ್ಲ. ಅದರಲ್ಲಿಯೂ ಕಾನೂನು ಸಚಿವರಾಗಿರುವುದಂತೂ ಸುತರಾಂ ಸರಿಯಲ್ಲ. ಇವರ‌ ಮನೋಧರ್ಮ ಮನುಧರ್ಮದ ಭಾಗವೇ ಆಗಿದೆ. ಮಹಿಳೆಯರ ಬಗ್ಗೆ ಕೂಡ ಕನಿಷ್ಟ ಗೌರವವಿಲ್ಲದ ಇವರು ಕಾನೂನು ಸಚಿವರಾಗಿ‌ ಮುಂದುವರೆಯಲು ಅರ್ಹರಲ್ಲವೆಂದೇ ಬಾವಿಸಬೇಕು. ನಾವು ಇದನ್ನು ಖಂಡಿಸುತ್ತೇವೆ.

ಗೀತಾ.ವಿ, ಉಪಾಧ್ಯಕ್ಷರು
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿ.

ಪ್ರಶ್ನೆ ಮತ್ತು ನ್ಯಾಯ ಈ ಎರಡು ಪದಗಳಿಂದ ಬಿಜೆಪಿಯವರು ಬಹಳ ದೂರ. – ಗೌರಿ

ಮಂತ್ರಿಗಳಿಗೆ ಮೊದಲು ಸಂವಿಧಾನದ ಬಗ್ಗೆ, ಕಾನೂನಿನ ತರಬೇತಿ ಕೊಡುವುದನ್ನು ಕಡ್ಡಾಯ ಮಾಡಬೇಕು. ಸಾಮಾನ್ಯ ಜ್ಞಾನ ಇಲ್ಲದ ಇಂತಹವರು ಮಂತ್ರಿಗಳಾದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಹಿಳಾ ಹೋರಾಟಗಾರ್ತಿ ನಳಿನಿ ಏನೂ ತಪ್ಪಾಗಿ ಮಾತನಾಡಿಲ್ಲ. ಸಮಾಧಾನವಾಗಿಯೇ ಸಮಸ್ಯೆಯನ್ನು ಹೇಳುತ್ತಿದ್ದಾಳೆ. ಅದನ್ನು ಮಂತ್ರಿಗೆ ಕೇಳಿಸಿಕೊಳ್ಳಲು ಸಾಧ್ಯವಿಲ್ಲವೆಂದಾದರೆ ಅದು ಯಾರ ತಪ್ಪು?

ಗೌರಿ

ಪ್ರಶ್ನೆ ಮತ್ತು ನ್ಯಾಯ ಈ ಎರಡು ಪದಗಳಿಂದ ಬಿಜೆಪಿಯವರು ಬಹಳ ದೂರ. ಹಾಗಾಗಿ ಯಾರಾದರೂ ಪ್ರಶ್ನಿಸಿದರೆ ಕೆಂಡಾಮಂಡಲವಾಗುತ್ತಾರೆ. ಇದರಿಂದ ಆ ಮಂತ್ರಿಯ ಮನೆಯ ಹೆಣ್ಣು ಮಕ್ಕಳ ಸ್ಥಾನ ಏನು ಎಂಬುದು ತಿಳಿಯುತ್ತದೆ. ಜನರ ಸಮಸ್ಯೆಗಳನ್ನು ಇವರ ಗಮನಕ್ಕೆ ತರದೆ ಇನ್ಯಾರ ಹತ್ತಿರ ಹೇಳಬೇಕು. ಆ ಮಹಿಳೆ ಹಾಗೆ ಅಂತ ಅವಳ ನಡತೆಯನ್ನು ತೇಜೋವಧೆ ಮಾಡುವ ಮಾಧುಸ್ವಾಮಿಯವರು ಮಂತ್ರಿಯ ಸ್ಥಾನದಲ್ಲಿ ಉಳಿಯಲೂ ಅನರ್ಹರು. ಒಂದು ಕಡೆ ಮಹಿಳೆಯರನ್ನು ದೇವಿಗೆ ಹೋಲಿಸುವುದು ಮತ್ತೊಂದು ಕಡೆ ಅವಕಾಶ ಸಿಕ್ಕಾಗೆಲ್ಲಾ ಅವರನ್ನ ಕೀಳು ಮಟ್ಟದಲ್ಲಿ ನಡಸಿಕೂಳ್ಳುವುದೇ ಇವರ ಸಂಸ್ಕೃತಿ.  ಮೊದಲು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಮಹಿಳೆಯರ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಉಳಿದ ಜನಪ್ರತಿನಿಧಿಗಳಿಗೂ ಇದು ಪಾಠವಾಗಲಿ.

ಗೌರಿ, ರಾಜ್ಯಸಮಿತಿ ಸದಸ್ಯರು

ಕರ್ನಾಟಕ ಜನಶಕ್ತಿ.

ಹೋರಾಟ ಮುಂದುವರೆಸುತ್ತೇನೆ – ನಳಿನಿ

ರೈತಸಂಘದವರು ಅಂತ ಗೊತ್ತಿರಲಿಲ್ಲ ಎಂದು ಹೇಳಿ ಇಂದು ಬೆಳಿಗ್ಗೆ ಮಾಧುಸ್ವಾಮಿಯವರು ಕ್ಷಮೆ ಕೇಳಿದ್ದರು. ಆದರೆ ಮತ್ತೆ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ನನ್ನ ವಿರುದ್ಧವೇ ಆರೋಪ ಮಾಡಿದ್ದಾರೆ. ನಾನು ಜೋರುದನಿಯಲ್ಲಿ ಮಾತನಾಡಿದ್ದೇನೆ ಎಂದು ಅವರು ಆರೋಪಿಸಿದ್ದಾರೆ. ನಾನು ನನ್ನ ಹಕ್ಕನ್ನು ಕೇಳಿದ್ದೇನೆಯೇ ಹೊರತು ಮತ್ತೇನಲ್ಲ ಎಂಬುದನ್ನು ಅವರು ಮರೆಯಬಾರದು. ಅವರು ಪೊಲೀಸರ ಮಾತುಗಳನ್ನು ಕೇಳುವುದನ್ನು ಬಿಟ್ಟು ಜಿಲ್ಲಾಡಳಿತದಲ್ಲಿ ನನ್ನ ಬಗ್ಗೆ ಕೇಳಲಿ.

ನಳಿನಿ
ನಳಿನಿ

ಒಮ್ಮೆ ತಪ್ಪು ಮಾಡಿದ ಅವರು ಇಂದು ನನ್ನ ಮೇಲೆ ಕೆಟ್ಟದಾಗಿ ಮಾತನಾಡಿ ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದಾರೆ.  ಕ್ಷಮೆಯಲ್ಲಿ ಮುಗಿದುಹೋಗಬೇಕಿದ್ದ ಪ್ರಕರಣವನ್ನು ಅವರೇ ದೊಡ್ಡದು ಮಾಡುತ್ತಿದ್ದಾರೆ. ಇದರಿಂದ ನಾನು ಕುಗ್ಗುವುದಿಲ್ಲ. ಪ್ರಾಮಾಣಿಕವಾಗಿ ಹೋರಾಟ ಮುಂದುವರೆಸುತ್ತೇನೆ. ನಮ್ಮ ರೈತಸಂಘದ ಹಿರಿಯರೊಂದಿಗೆ ಸಭೆ ನಡೆಸಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.

ನಳಿನಿ, ಜಿಲ್ಲಾಧ್ಯಕ್ಷೆ

ಕರ್ನಾಟಕ ರಾಜ್ಯ ರೈತ ಸಂಘ, ಕೋಲಾರ.


ಇದನ್ನೂ ಓದಿ: ಮಾಧುಸ್ವಾಮಿಯವರನ್ನು ಪ್ರಶ್ನಿಸಿದ ನಳಿನಿ ಯಾರು? ಅವರು ಯಾವಾಗಲೂ ಹಾಗೇನಾ? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...