Homeಕರ್ನಾಟಕಮಹೇಶ್ ಜೋಶಿ ಸರ್ವಾಧಿಕಾರ ನಡೆಗೆ ಕಸಾಪ ಸದಸ್ಯರಿಂದಲೇ ವಿರೋಧ

ಮಹೇಶ್ ಜೋಶಿ ಸರ್ವಾಧಿಕಾರ ನಡೆಗೆ ಕಸಾಪ ಸದಸ್ಯರಿಂದಲೇ ವಿರೋಧ

- Advertisement -
- Advertisement -

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಶಿ ಅವರು ವಿಶ್ವ ಮಹಿಳಾ ದಿನಾಚರಣೆಯ ದಿನದಂದು ದೂರದರ್ಶನದ ಸಹಾಯಕ ನಿರ್ದೇಶಕಿ ನಿರ್ಮಲಾ ಎಲಿಗಾರ್ ಅವರನ್ನು ಕಸಾಪ ಸದಸ್ಯತ್ವದಿಂದ ಅಮಾನತು ಮಾಡುವ ಮೂಲಕ ಸರ್ವಾಧಿಕಾರತ್ವ ಪ್ರದರ್ಶಿಸಿದ್ದಾರೆ. ಅಧ್ಯಕ್ಷ ಜೋಶಿ ಅವರ ಈ ನಡೆಗೆ ಕಸಾಪ ಸದಸ್ಯರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.

ಹಾವೇರಿಯಲ್ಲಿ ನಡೆದ 8ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಮಲಾ ಸಿ. ಎಲಿಗಾರ್ ಅವರು, ವಸತಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಪರಿಷತ್ತಿನ ಅಧ್ಯಕ್ಷರೊಂದಿಗೆ ಬಹಿರಂಗವಾಗಿಯೇ ಮಾತಿನ ಚಕಮಕಿ ನಡೆಸಿದ್ದರು. ಅಷ್ಟೇ ಅಲ್ಲದೇ ದೂರದರ್ಶನದಲ್ಲಿ ಕಸಾಪ ವಿರುದ್ಧ ಒಂದು ನಿಮಿಷದ ಮೌನಾಚರಣೆ ಮಾಡಿದ್ದರು. ಇದು ಮಹೇಶ್ ಜೋಶಿಯವರ ಕಣ್ಣು ಕೆಂಪಾಗಲು ಕಾರಣವಾಗಿದೆ.

ಜೋಶಿ ನೇತೃತ್ವದ ಕಸಾಪ ಕಾರ್ಯಕಾರಿ ಸಮಿತಿಯು, ‘ಪರಿಷತ್ತಿನ ಘನತೆ ಗೌರವ ಮತ್ತು ಧ್ಯೇಯೋದೇಶಗಳಿಗೆ ವಿರುದ್ಧವಾಗಿ ಅವರು ನಡೆದುಕೊಂಡಿದ್ದಾರೆ’ ಎಂದು ಪರಿಷತ್ತಿನ ನಿಯಮ 8) 7) ಅಡಿಯಲ್ಲಿನ ಅಧಿಕಾರ ಬಳಸಿ ನಿರ್ಮಲಾ ಸಿ. ಎಲಿಗಾರ್ ಅವರ ಕಸಾಪ ಸದಸ್ಯತ್ವವನ್ನು ಅಮಾನತುಗೊಳಿಸಿದೆ. ಇದೇ ವೇಳೆ 2022ನೇ ಸಾಲಿನಲ್ಲಿ ನಿರ್ಮಲಾ ಎಲಿಗಾ‌ರ್‌ ಅವರಿಗೆ ನೀಡಲಾಗಿದ್ದ ‘ಪಂಕಜಶ್ರೀ ಸಾಹಿತ್ಯ ಪ್ರಶಸ್ತಿ’ಯನ್ನೂ ಹಿಂಪಡೆದಿದ್ದಾರೆ.

ಏಕಾಏಕಿ ಸದ್ಯಸತ್ವದ ಅಮಾನತು ಮತ್ತು ಪ್ರಶಸ್ತಿ ಹಿಂಪಡೆಯುವಿಕೆಯು ಕಸಾಪ ಇತಿಹಾಸದಲ್ಲಿ ಎಂದೂ ನಡೆದಿರಲಿಲ್ಲ. ಕಳೆದ ಒಂದು ವರ್ಷದಿಂದ ಹಲವು ನಡೆಗಳಲ್ಲಿ ವಿವಾದಕ್ಕೀಡಾಗಿರುವ ಕಸಾಪ, ಹೊಸ ವಿವಾದವನ್ನು ಹುಟ್ಟುಹಾಕಿದೆ. ಇದು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಲೋಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅಧ್ಯಕ್ಷ ಮಹೇಶ್ ಜೋಶಿ ಅವರ ಈ ಸರ್ವಾಧಿಕಾರ ನಡೆಗೆ ಕಸಾಪ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ: ಮಹಿಳಾ ದಿನಾಚರಣೆಯಂದು ನಿರ್ಮಲಾ ಎಲಿಗಾರ್ ಕಸಾಪ ಸದಸ್ಯತ್ವ ರದ್ದು: ಮಹೇಶ ಜೋಶಿಯಿಂದ ಸರ್ವಾಧಿಕಾರತ್ವ ಪ್ರದರ್ಶನ

ಈ ಬಗ್ಗೆ ಕಸಾಪ ಸದಸ್ಯರಾದ ಪುರುಷೋತ್ತಮ ಬಿಳಿಮಲೆಯವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಹೀಗೇಕೆ ಮಾಡುತ್ತಿದೆ? ಎಂದು ಪ್ರಶ್ನಿಸಿದ್ದಾರೆ. “ದೂರದರ್ಶನದ ಹಿರಿಯ ಅಧಿಕಾರಿ ನಿರ್ಮಲಾ ಎಲಿಗಾರ್ ಅವರು ಹಾವೇರಿ ಸಮ್ಮೇಳನದಲ್ಲಿ ತಮಗಾದ ತೊಂದರೆಗಳನ್ನು ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸಿರುವುದನ್ನು ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅದು ಪ್ರಜಾಪ್ರಭುತ್ವ ನಮಗೆ ಕೊಟ್ಟಿರುವ ಹಕ್ಕು. ಇದನ್ನು ಉಪಯೋಗಿಸಿಕೊಂಡು ನಾವು ಹಲವರು ನಮ್ಮದೇ ರೀತಿಯಲ್ಲಿ ಪ್ರತಿಭಟಿಸಿದ್ದೇವೆ” ಎಂದಿದ್ದಾರೆ.

“ಸುಮಾರು 15 ವರ್ಷಗಳಿಂದ ವೈಯಕ್ತಿಕವಾಗಿ ಗೊತ್ತಿರುವ ನನ್ನನ್ನು ಜೋಶಿ ಅವರು ʼಪೆಂಡಾಲ್‌ ಹಾಕಿಸುವʼ ಮಟ್ಟಕ್ಕೆ ಇಳಿಸಿದ್ದಾರೆ. ಬೌದ್ದಿಕ ಚರ್ಚೆಗಳಲ್ಲಿ ವಿಶ್ವಾಸ ಇರುವ ನಾನು ಅದನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಲಿಲ್ಲ. ಅಧಿಕಾರ ಗೆಳೆತನವನ್ನು ಮರೆಸಿಬಿಡುವುದು ನನಗೇನೂ ಹೊಸತಲ್ಲ. ಆದರೆ ಈಗ ಕಸಾಪವು ನಿರ್ಮಲಾ ಎಲಿಗಾರ್ ಅವರ ಮೇಲೆ ಕ್ರಮ ಕೈಗೊಂಡಿದೆ. ಅವರ ಸದಸ್ಯತ್ವವನ್ನು ಅಮಾನತಿನಲ್ಲಿರಿಸಿದೆ. ಅವರಿಗೆ ನೀಡಲಾದ ಪ್ರಶಸ್ತಿಯನ್ನು ಹಿಂದೆಗೆದುಕೊಳ್ಳಲಾಗಿದೆ. ಇವು ಸರಿಯಾದ ಕ್ರಮಗಳಲ್ಲ. ಕಾರಣ ಕೂಡಲೇ ಅಮಾನತು ಕ್ರಮವನ್ನು ಹಿಂತೆಗೆದುಕೊಳ್ಳಬೇಕಾಗಿ ನಾನು ನನ್ನ ಗೆಳೆಯರಾದ ಕಸಾಪ ಅಧ್ಯಕ್ಷರನ್ನು ಕೋರಿಕೊಳ್ಳುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

“ನಮ್ಮನ್ನೆಲ್ಲ ಬೆಳೆಸಿದ ಸಂಸ್ಥೆಯೊಂದು ಈಗ ಹಿಡಿಯುತ್ತಿರುವ ಹಾದಿಯನ್ನು ನೋಡಿ ಸಿಟ್ಟು ಬರುತ್ತಿಲ್ಲ, ಬದಲು ವಿಷಾದವಾಗುತ್ತಿದೆ. ಕನ್ನಡದ ದೊಡ್ಡ ದೊಡ್ಡ ಸಾಹಿತಿಗಳೇ ಮೌನವಾಗಿರುವಾಗ ನನ್ನಂಥ ಹೊರನಾಡಿನವನಿಗೇಕೆ ಈ ಕೆಲಸ! ಬಹುಶ: ನಾವೇ ಮರ್ಯಾದೆಯಿಂದ ಹೊರಬರುವುದು ಸರಿಯೆಂದು ತೋರುತ್ತದೆ” ಎಂದು ಬಿಳಿಮಲೆ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಮತ್ತೋರ್ವ ಕ.ಸಾ.ಪ. ಆಜೀವ ಸದಸ್ಯ ಹಾಗೂ ಹಿರಿಯ ಪತ್ರಕರ್ತರಾದ ಸಂಗಮೇಶ ಮೆಣಸಿನಕಾಯಿ ಅವರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, “ಪ್ರಜಾಪ್ರಭುತ್ವದ ವಿರುದ್ಧ ಕ.ಸಾ.ಪ.?” ಎಂದು ಪ್ರಶ್ನೆ ಮಾಡಿದ್ದಾರೆ. “‘ಡಾ. ನಿರ್ಮಲಾ ಎಲಿಗಾರ್‌ ಅವರಿಗೆ ಹಾವೇರಿ ಸಾಹಿತ್ಯ ಸಮ್ಮೇಳನದ ಘಟನೆಯಿಂದ ಎದುರಿಸಬೇಕಾಗಬಹುದಾದ ಪ್ರತೀಕಾರದ ಬಗ್ಗೆ ಎಚ್ಚರಿಸಿದ್ದೆ. ನಾವಂದುಕೊಂಡಂತೆ ಪರೋಕ್ಷ ಸೇಡು ತೀರಿಸಿಕೊಳ್ಳುತ್ತಿಲ್ಲ, ಬದಲಿಗೆ ಪ್ರತ್ಯಕ್ಷ ಸೇಡಿಗೇ ಮುಂದಾಗಿದ್ದಾರೆ ನಾಡೋಜರು!” ಎಂದು ಟೀಕಿಸಿದ್ದಾರೆ.

“ಅಷ್ಟಕ್ಕೂ ಆಜೀವ ಸದಸ್ಯತ್ವದಿಂದ ಮತ್ತು ಘೋಷಿತ ಪ್ರಶಸ್ತಿಯಿಂದ ಕೈಬಿಡುವಂಥ ತಪ್ಪು ನೀವೇನು (ನಿರ್ಮಲಾ ಎಲಿಗಾರ) ಮಾಡಿದ್ದೀರೋ ನಾನರಿಯೆ. ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಘಟನೆ ವೇಳೆ ಹಾಜರಿದ್ದ ನನ್ನ ಆತ್ಮೀಯರು ಹೇಳುವ ಪ್ರಕಾರ ನೀವು ನಿಮಗಾಗಿಯೇ, ಅಂದರೆ ದೂರದರ್ಶನದ ಸಿಬ್ಬಂದಿಗಾಗಿ ಮೀಸಲಾಗಿದ್ದ ಸೌಲಭ್ಯವನ್ನು ಕೇಳಿದ್ದೀರಿ. ಸೂಕ್ತ ಸ್ಪಂದನೆ ಸಿಗದಿದ್ದಾಗ ಏರಿದ ದನಿಯಲ್ಲಿ ಪ್ರಶ್ನಿಸಿದ್ದೀರಿ. ವಿಡಿಯೊ ನೋಡಿದಾಗ ಅವರೂ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಗೋಚರಿಸುತ್ತದೆ. ‘ಹಲೋ ಹೌ ಆರ್ ಯೂ…’ ಅಂತ ಬೇರೆ ಯಾರಿಗೋ ವಿಶ್ ಮಾಡುತ್ತ ಪಲಾಯನಗೈದಿದ್ದಾರೆ.”

”ಒಂದಂತೂ ಖುಷಿ-ನೇರವಾಗಿ ಅದೇ ಘಟನೆಯನ್ನು ಉಲ್ಲೇಖಿಸಿ, ‘ಶಿಸ್ತುಕ್ರಮ’ ಕೈಗೊಂಡು, ತಮ್ಮ ‘ಬುದ್ಧಿಮತ್ತೆ’ ಪ್ರದರ್ಶಿಸಿದ್ದಾರೆ! ಇಲ್ಲಿ ಸಮ್ಮೇಳನದ ವರದಿಗೆ ತೆರಳುವ ಪತ್ರಕರ್ತರು, ಕ.ಸಾ.ಪ. ಬೆಂಗಳೂರಿನ ಎಲ್ಲ ಆಜೀವ ಸದಸ್ಯರು, ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲ ಕನ್ನಡಾಭಿಮಾನಿಗಳು ಎಚ್ಚೆತ್ತುಕೊಳ್ಳಬೇಕಾದ ಕೆಲವು ಅಂಶಗಳಿವೆ” ಎಂದು ಉಲ್ಲೇಖಿಸಿದ್ದಾರೆ.

* ನೀವು (ನಿರ್ಮಲಾ) ಸೂಕ್ತ ಸೌಲಭ್ಯ ಪ್ರಶ್ನಿಸಿ, ‘ಪರಿಷತ್ತಿನ ಗೌರವಕ್ಕೆ ಚ್ಯುತಿ’ ತಂದಿದ್ದು ದೂರದರ್ಶನದ ಅಧಿಕಾರಿಯಾಗಿ! ಒಂದು ವೇಳೆ ನೀವು ಕ.ಸಾ.ಪ. ಆಜೀವ ಸದಸ್ಯರಲ್ಲದೇ ಇದ್ದಿದ್ದರೆ, ಕ.ಸಾ.ಪ. ಯಾವ ಕ್ರಮ ಜರುಗಿಸುತ್ತಿತ್ತೋ ಏನೋ?

* ನಿಮಗೆ ಪ್ರಶಸ್ತಿ ಘೋಷಣೆ ಆಗಿದ್ದು ಸಾಹಿತಿ ನಿರ್ಮಲಾ ಅವರಿಗೆ. ನೀವು ‘ಪರಿಷತ್ತಿನ ಗೌರವಕ್ಕೆ ಚ್ಯುತಿ’ ತಂದದ್ದು ದೂರದರ್ಶನದ ಅಧಿಕಾರಿಯಾಗಿ! ಹಾಗಾಗಿ ಪರಿಷತ್ತಿನ ಯಾವ ನಿಯಮಾವಳಿ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ? ಕ.ಸಾ.ಪ.ದ ಪ್ರತಿಯೊಬ್ಬ ಪದಾಧಿಕಾರಿ ಈ ಬಗ್ಗೆ ಸ್ಪಷ್ಟನೆ ಕೊಡಬೇಕು.

* ಇನ್ನು ಮುಂದೆ ಸಮ್ಮೇಳನದ ವರದಿಗೆ ಬರುವ ಎಲ್ಲ ಪತ್ರಕರ್ತರು ಕ.ಸಾ.ಪ.ದ ಆಜೀವ ಸದಸ್ಯತ್ವ ಹೊಂದಿರಲೇಬೇಕೆಂಬ ನಿಯಮ ಬರಬಹುದು. ಸಮ್ಮೇಳನದಲ್ಲಿ ಕಂಡುಬರುವ ನ್ಯೂನತೆಗಳನ್ನು ಪ್ರಶ್ನಿಸಿದರೆ, ವರದಿ ಮಾಡಿದರೆ ಕ್ರಮ ಕೈಗೊಳ್ಳಲು ಬೇಕಲ್ಲ?

* ಇನ್ನು ಮುಂದೆ ಸಮ್ಮೇಳನದ ವರದಿಗೆ ಬರುವ ಪತ್ರಕರ್ತರೆಲ್ಲ ನಿರ್ಮಲಾ ಅವರಂತೆ ಕ.ಸಾ.ಪ.ದ ಯಾವುದಾದರೊಂದು ಪ್ರಶಸ್ತಿ ಪಡೆದಿರಲೇಬೇಕೆಂಬ ನಿಯಮ ಜಾರಿಯಾಗಬಹುದು. ಪ್ರಶ್ನಿಸಿದರೆ ವಾಪಸ್ ಪಡೆಯಲು ಬೇಕಲ್ಲ?

* ಸಮ್ಮೇಳನಕ್ಕೆ ಬರುವ ಎಲ್ಲ ಕನ್ನಡಾಭಿಮಾನಿಗಳಿಗೂ ಇಂಥದೇ ನಿಯಮಗಳು ಪ್ರತ್ಯಕ್ಷ/ಪರೋಕ್ಷವಾಗಿ ಜಾರಿಯಾಗಬಹುದು. ಶಿಸ್ತು ಕ್ರಮ ಜರುಗಿಸಲು ಬೇಕಲ್ಲ?

ಈ ಮೇಲಿನ ತಕರಾರುಗಳನ್ನು ಸಂಗಮೇಶ ಅವರು ಎತ್ತಿದ್ದಾರೆ.

“ಒಟ್ಟಿನಲ್ಲಿ ಕ.ಸಾ.ಪ. ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧ ದಿಕ್ಕಿನಲ್ಲಿ ಹೊರಟಿರುವ ದಿಟ್ಟ ಸಂಕೇತವಿದು.
ಏನೇ ಇರಲಿ ಮೇಡಂ, ನೀವು ಕ.ಸಾ.ಪ. ಅಧ್ಯಕ್ಷರ ಅಹಂ ಅಷ್ಟೇ ಅಲ್ಲ, ನಿಮ್ಮ ಮಾಜಿ ಮೇಲಧಿಕಾರಿಯ ಅಹಂ ಅನ್ನೂ ಕೆಣಕಿದ್ದೀರಿ. ಇನ್ನೂ ಹುಷಾರಾಗಿ ಇರಬೇಕು. ನಿಮ್ಮೊಂದಿಗೆ ನಮ್ಮಂಥವರು ನೈತಿಕವಾಗಿ ಮಾತ್ರ ಜೊತೆಗಿರಲು ಸಾಧ್ಯ” ಎಂದು ಸಂಗಮೇಶ ಮೆಣಸಿನಕಾಯಿ ಅವರು ನಿರ್ಮಲಾ ಎಲಿಗಾರ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಮುಂದುವರೆದು ಕಸಾಪವನ್ನು ತರಾಟೆಗೆ ತಗೆದುಕೊಂಡಿರುವ ಸಂಗಮೇಶ್ ಅವರು, “ನಿರ್ಮಲಾ ಅವರ ಯಾವ ತಪ್ಪಿಗೆ ಯಾವ ಶಿಕ್ಷೆ ಕೊಡಬೇಕು ಎಂಬ ಪ್ರಾಥಮಿಕ ಜ್ಞಾನವೂ ಕ.ಸಾ.ಪ.ದಲ್ಲಿ ಇದ್ದಂತಿಲ್ಲ. ಅಂತೆಯೇ ಎರಡು ತಿಂಗಳು ತಲೆ ಕೆರೆದುಕೊಂಡು ಆಜೀವ ಸದಸ್ಯತ್ವ ಮತ್ತು ಘೋಷಿತ ಪ್ರಶಸ್ತಿಯಿಂದ ಕೈಬಿಟ್ಟು ಸೇಡು ತೀರಿಸಿಕೊಳ್ಳಲಾಗಿದೆ. ಇದು ಪಕ್ಕಾ ಪುರುಷ ಅಹಂ, ಯಜಮಾನಿಕೆಯ ಬುದ್ಧಿಯೇ ಸರಿ. ಈ ಶಿಕ್ಷೆ ವಿಧಿಸಿರುವ ಕ.ಸಾ.ಪ. ಪದಾಧಿಕಾರಿಗಳಿಗೆ ಒಂದು ಪ್ರಶ್ನೆ. ಸಮ್ಮೇಳನದ ಪೆಂಡಾಲ್ ಹಾಕಲು ಬರುವ ಹುಡುಗ, ‘ಪೆಂಡಾಲ್ ಹಾಕಲು ಸ್ಥಳವೇ ಇಲ್ಲ, ಎಲ್ಲಿ ಹಾಕಲಿ?’ ಅಂತ ಕೇಳಿದರೆ ಅವನ ಆಜೀವ ಸದಸ್ಯತ್ವ ರದ್ದು ಮಾಡ್ತೀರಾ? ಈಗ ಅಂಥದೇ ಕೆಲಸ ಮಾಡಿದ್ದೀರಿ. ಕೂಡಲೇ ಸರಿಯಾಗಿ ಓದಿಕೊಂಡಿರುವ ಒಬ್ಬ ಕಾನೂನು ಸಲಹೆಗಾರನನ್ನು ನೇಮಿಸಿಕೊಳ್ಳಿ” ಎಂದು ಅವರು ಸಲಹೆ ನೀಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...