Homeಕರ್ನಾಟಕಮಹೇಶ್ ಜೋಶಿ ಸರ್ವಾಧಿಕಾರ ನಡೆಗೆ ಕಸಾಪ ಸದಸ್ಯರಿಂದಲೇ ವಿರೋಧ

ಮಹೇಶ್ ಜೋಶಿ ಸರ್ವಾಧಿಕಾರ ನಡೆಗೆ ಕಸಾಪ ಸದಸ್ಯರಿಂದಲೇ ವಿರೋಧ

- Advertisement -
- Advertisement -

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಶಿ ಅವರು ವಿಶ್ವ ಮಹಿಳಾ ದಿನಾಚರಣೆಯ ದಿನದಂದು ದೂರದರ್ಶನದ ಸಹಾಯಕ ನಿರ್ದೇಶಕಿ ನಿರ್ಮಲಾ ಎಲಿಗಾರ್ ಅವರನ್ನು ಕಸಾಪ ಸದಸ್ಯತ್ವದಿಂದ ಅಮಾನತು ಮಾಡುವ ಮೂಲಕ ಸರ್ವಾಧಿಕಾರತ್ವ ಪ್ರದರ್ಶಿಸಿದ್ದಾರೆ. ಅಧ್ಯಕ್ಷ ಜೋಶಿ ಅವರ ಈ ನಡೆಗೆ ಕಸಾಪ ಸದಸ್ಯರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.

ಹಾವೇರಿಯಲ್ಲಿ ನಡೆದ 8ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಮಲಾ ಸಿ. ಎಲಿಗಾರ್ ಅವರು, ವಸತಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಪರಿಷತ್ತಿನ ಅಧ್ಯಕ್ಷರೊಂದಿಗೆ ಬಹಿರಂಗವಾಗಿಯೇ ಮಾತಿನ ಚಕಮಕಿ ನಡೆಸಿದ್ದರು. ಅಷ್ಟೇ ಅಲ್ಲದೇ ದೂರದರ್ಶನದಲ್ಲಿ ಕಸಾಪ ವಿರುದ್ಧ ಒಂದು ನಿಮಿಷದ ಮೌನಾಚರಣೆ ಮಾಡಿದ್ದರು. ಇದು ಮಹೇಶ್ ಜೋಶಿಯವರ ಕಣ್ಣು ಕೆಂಪಾಗಲು ಕಾರಣವಾಗಿದೆ.

ಜೋಶಿ ನೇತೃತ್ವದ ಕಸಾಪ ಕಾರ್ಯಕಾರಿ ಸಮಿತಿಯು, ‘ಪರಿಷತ್ತಿನ ಘನತೆ ಗೌರವ ಮತ್ತು ಧ್ಯೇಯೋದೇಶಗಳಿಗೆ ವಿರುದ್ಧವಾಗಿ ಅವರು ನಡೆದುಕೊಂಡಿದ್ದಾರೆ’ ಎಂದು ಪರಿಷತ್ತಿನ ನಿಯಮ 8) 7) ಅಡಿಯಲ್ಲಿನ ಅಧಿಕಾರ ಬಳಸಿ ನಿರ್ಮಲಾ ಸಿ. ಎಲಿಗಾರ್ ಅವರ ಕಸಾಪ ಸದಸ್ಯತ್ವವನ್ನು ಅಮಾನತುಗೊಳಿಸಿದೆ. ಇದೇ ವೇಳೆ 2022ನೇ ಸಾಲಿನಲ್ಲಿ ನಿರ್ಮಲಾ ಎಲಿಗಾ‌ರ್‌ ಅವರಿಗೆ ನೀಡಲಾಗಿದ್ದ ‘ಪಂಕಜಶ್ರೀ ಸಾಹಿತ್ಯ ಪ್ರಶಸ್ತಿ’ಯನ್ನೂ ಹಿಂಪಡೆದಿದ್ದಾರೆ.

ಏಕಾಏಕಿ ಸದ್ಯಸತ್ವದ ಅಮಾನತು ಮತ್ತು ಪ್ರಶಸ್ತಿ ಹಿಂಪಡೆಯುವಿಕೆಯು ಕಸಾಪ ಇತಿಹಾಸದಲ್ಲಿ ಎಂದೂ ನಡೆದಿರಲಿಲ್ಲ. ಕಳೆದ ಒಂದು ವರ್ಷದಿಂದ ಹಲವು ನಡೆಗಳಲ್ಲಿ ವಿವಾದಕ್ಕೀಡಾಗಿರುವ ಕಸಾಪ, ಹೊಸ ವಿವಾದವನ್ನು ಹುಟ್ಟುಹಾಕಿದೆ. ಇದು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಲೋಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅಧ್ಯಕ್ಷ ಮಹೇಶ್ ಜೋಶಿ ಅವರ ಈ ಸರ್ವಾಧಿಕಾರ ನಡೆಗೆ ಕಸಾಪ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ: ಮಹಿಳಾ ದಿನಾಚರಣೆಯಂದು ನಿರ್ಮಲಾ ಎಲಿಗಾರ್ ಕಸಾಪ ಸದಸ್ಯತ್ವ ರದ್ದು: ಮಹೇಶ ಜೋಶಿಯಿಂದ ಸರ್ವಾಧಿಕಾರತ್ವ ಪ್ರದರ್ಶನ

ಈ ಬಗ್ಗೆ ಕಸಾಪ ಸದಸ್ಯರಾದ ಪುರುಷೋತ್ತಮ ಬಿಳಿಮಲೆಯವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಹೀಗೇಕೆ ಮಾಡುತ್ತಿದೆ? ಎಂದು ಪ್ರಶ್ನಿಸಿದ್ದಾರೆ. “ದೂರದರ್ಶನದ ಹಿರಿಯ ಅಧಿಕಾರಿ ನಿರ್ಮಲಾ ಎಲಿಗಾರ್ ಅವರು ಹಾವೇರಿ ಸಮ್ಮೇಳನದಲ್ಲಿ ತಮಗಾದ ತೊಂದರೆಗಳನ್ನು ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸಿರುವುದನ್ನು ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅದು ಪ್ರಜಾಪ್ರಭುತ್ವ ನಮಗೆ ಕೊಟ್ಟಿರುವ ಹಕ್ಕು. ಇದನ್ನು ಉಪಯೋಗಿಸಿಕೊಂಡು ನಾವು ಹಲವರು ನಮ್ಮದೇ ರೀತಿಯಲ್ಲಿ ಪ್ರತಿಭಟಿಸಿದ್ದೇವೆ” ಎಂದಿದ್ದಾರೆ.

“ಸುಮಾರು 15 ವರ್ಷಗಳಿಂದ ವೈಯಕ್ತಿಕವಾಗಿ ಗೊತ್ತಿರುವ ನನ್ನನ್ನು ಜೋಶಿ ಅವರು ʼಪೆಂಡಾಲ್‌ ಹಾಕಿಸುವʼ ಮಟ್ಟಕ್ಕೆ ಇಳಿಸಿದ್ದಾರೆ. ಬೌದ್ದಿಕ ಚರ್ಚೆಗಳಲ್ಲಿ ವಿಶ್ವಾಸ ಇರುವ ನಾನು ಅದನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಲಿಲ್ಲ. ಅಧಿಕಾರ ಗೆಳೆತನವನ್ನು ಮರೆಸಿಬಿಡುವುದು ನನಗೇನೂ ಹೊಸತಲ್ಲ. ಆದರೆ ಈಗ ಕಸಾಪವು ನಿರ್ಮಲಾ ಎಲಿಗಾರ್ ಅವರ ಮೇಲೆ ಕ್ರಮ ಕೈಗೊಂಡಿದೆ. ಅವರ ಸದಸ್ಯತ್ವವನ್ನು ಅಮಾನತಿನಲ್ಲಿರಿಸಿದೆ. ಅವರಿಗೆ ನೀಡಲಾದ ಪ್ರಶಸ್ತಿಯನ್ನು ಹಿಂದೆಗೆದುಕೊಳ್ಳಲಾಗಿದೆ. ಇವು ಸರಿಯಾದ ಕ್ರಮಗಳಲ್ಲ. ಕಾರಣ ಕೂಡಲೇ ಅಮಾನತು ಕ್ರಮವನ್ನು ಹಿಂತೆಗೆದುಕೊಳ್ಳಬೇಕಾಗಿ ನಾನು ನನ್ನ ಗೆಳೆಯರಾದ ಕಸಾಪ ಅಧ್ಯಕ್ಷರನ್ನು ಕೋರಿಕೊಳ್ಳುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

“ನಮ್ಮನ್ನೆಲ್ಲ ಬೆಳೆಸಿದ ಸಂಸ್ಥೆಯೊಂದು ಈಗ ಹಿಡಿಯುತ್ತಿರುವ ಹಾದಿಯನ್ನು ನೋಡಿ ಸಿಟ್ಟು ಬರುತ್ತಿಲ್ಲ, ಬದಲು ವಿಷಾದವಾಗುತ್ತಿದೆ. ಕನ್ನಡದ ದೊಡ್ಡ ದೊಡ್ಡ ಸಾಹಿತಿಗಳೇ ಮೌನವಾಗಿರುವಾಗ ನನ್ನಂಥ ಹೊರನಾಡಿನವನಿಗೇಕೆ ಈ ಕೆಲಸ! ಬಹುಶ: ನಾವೇ ಮರ್ಯಾದೆಯಿಂದ ಹೊರಬರುವುದು ಸರಿಯೆಂದು ತೋರುತ್ತದೆ” ಎಂದು ಬಿಳಿಮಲೆ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಮತ್ತೋರ್ವ ಕ.ಸಾ.ಪ. ಆಜೀವ ಸದಸ್ಯ ಹಾಗೂ ಹಿರಿಯ ಪತ್ರಕರ್ತರಾದ ಸಂಗಮೇಶ ಮೆಣಸಿನಕಾಯಿ ಅವರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, “ಪ್ರಜಾಪ್ರಭುತ್ವದ ವಿರುದ್ಧ ಕ.ಸಾ.ಪ.?” ಎಂದು ಪ್ರಶ್ನೆ ಮಾಡಿದ್ದಾರೆ. “‘ಡಾ. ನಿರ್ಮಲಾ ಎಲಿಗಾರ್‌ ಅವರಿಗೆ ಹಾವೇರಿ ಸಾಹಿತ್ಯ ಸಮ್ಮೇಳನದ ಘಟನೆಯಿಂದ ಎದುರಿಸಬೇಕಾಗಬಹುದಾದ ಪ್ರತೀಕಾರದ ಬಗ್ಗೆ ಎಚ್ಚರಿಸಿದ್ದೆ. ನಾವಂದುಕೊಂಡಂತೆ ಪರೋಕ್ಷ ಸೇಡು ತೀರಿಸಿಕೊಳ್ಳುತ್ತಿಲ್ಲ, ಬದಲಿಗೆ ಪ್ರತ್ಯಕ್ಷ ಸೇಡಿಗೇ ಮುಂದಾಗಿದ್ದಾರೆ ನಾಡೋಜರು!” ಎಂದು ಟೀಕಿಸಿದ್ದಾರೆ.

“ಅಷ್ಟಕ್ಕೂ ಆಜೀವ ಸದಸ್ಯತ್ವದಿಂದ ಮತ್ತು ಘೋಷಿತ ಪ್ರಶಸ್ತಿಯಿಂದ ಕೈಬಿಡುವಂಥ ತಪ್ಪು ನೀವೇನು (ನಿರ್ಮಲಾ ಎಲಿಗಾರ) ಮಾಡಿದ್ದೀರೋ ನಾನರಿಯೆ. ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಘಟನೆ ವೇಳೆ ಹಾಜರಿದ್ದ ನನ್ನ ಆತ್ಮೀಯರು ಹೇಳುವ ಪ್ರಕಾರ ನೀವು ನಿಮಗಾಗಿಯೇ, ಅಂದರೆ ದೂರದರ್ಶನದ ಸಿಬ್ಬಂದಿಗಾಗಿ ಮೀಸಲಾಗಿದ್ದ ಸೌಲಭ್ಯವನ್ನು ಕೇಳಿದ್ದೀರಿ. ಸೂಕ್ತ ಸ್ಪಂದನೆ ಸಿಗದಿದ್ದಾಗ ಏರಿದ ದನಿಯಲ್ಲಿ ಪ್ರಶ್ನಿಸಿದ್ದೀರಿ. ವಿಡಿಯೊ ನೋಡಿದಾಗ ಅವರೂ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಗೋಚರಿಸುತ್ತದೆ. ‘ಹಲೋ ಹೌ ಆರ್ ಯೂ…’ ಅಂತ ಬೇರೆ ಯಾರಿಗೋ ವಿಶ್ ಮಾಡುತ್ತ ಪಲಾಯನಗೈದಿದ್ದಾರೆ.”

”ಒಂದಂತೂ ಖುಷಿ-ನೇರವಾಗಿ ಅದೇ ಘಟನೆಯನ್ನು ಉಲ್ಲೇಖಿಸಿ, ‘ಶಿಸ್ತುಕ್ರಮ’ ಕೈಗೊಂಡು, ತಮ್ಮ ‘ಬುದ್ಧಿಮತ್ತೆ’ ಪ್ರದರ್ಶಿಸಿದ್ದಾರೆ! ಇಲ್ಲಿ ಸಮ್ಮೇಳನದ ವರದಿಗೆ ತೆರಳುವ ಪತ್ರಕರ್ತರು, ಕ.ಸಾ.ಪ. ಬೆಂಗಳೂರಿನ ಎಲ್ಲ ಆಜೀವ ಸದಸ್ಯರು, ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲ ಕನ್ನಡಾಭಿಮಾನಿಗಳು ಎಚ್ಚೆತ್ತುಕೊಳ್ಳಬೇಕಾದ ಕೆಲವು ಅಂಶಗಳಿವೆ” ಎಂದು ಉಲ್ಲೇಖಿಸಿದ್ದಾರೆ.

* ನೀವು (ನಿರ್ಮಲಾ) ಸೂಕ್ತ ಸೌಲಭ್ಯ ಪ್ರಶ್ನಿಸಿ, ‘ಪರಿಷತ್ತಿನ ಗೌರವಕ್ಕೆ ಚ್ಯುತಿ’ ತಂದಿದ್ದು ದೂರದರ್ಶನದ ಅಧಿಕಾರಿಯಾಗಿ! ಒಂದು ವೇಳೆ ನೀವು ಕ.ಸಾ.ಪ. ಆಜೀವ ಸದಸ್ಯರಲ್ಲದೇ ಇದ್ದಿದ್ದರೆ, ಕ.ಸಾ.ಪ. ಯಾವ ಕ್ರಮ ಜರುಗಿಸುತ್ತಿತ್ತೋ ಏನೋ?

* ನಿಮಗೆ ಪ್ರಶಸ್ತಿ ಘೋಷಣೆ ಆಗಿದ್ದು ಸಾಹಿತಿ ನಿರ್ಮಲಾ ಅವರಿಗೆ. ನೀವು ‘ಪರಿಷತ್ತಿನ ಗೌರವಕ್ಕೆ ಚ್ಯುತಿ’ ತಂದದ್ದು ದೂರದರ್ಶನದ ಅಧಿಕಾರಿಯಾಗಿ! ಹಾಗಾಗಿ ಪರಿಷತ್ತಿನ ಯಾವ ನಿಯಮಾವಳಿ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ? ಕ.ಸಾ.ಪ.ದ ಪ್ರತಿಯೊಬ್ಬ ಪದಾಧಿಕಾರಿ ಈ ಬಗ್ಗೆ ಸ್ಪಷ್ಟನೆ ಕೊಡಬೇಕು.

* ಇನ್ನು ಮುಂದೆ ಸಮ್ಮೇಳನದ ವರದಿಗೆ ಬರುವ ಎಲ್ಲ ಪತ್ರಕರ್ತರು ಕ.ಸಾ.ಪ.ದ ಆಜೀವ ಸದಸ್ಯತ್ವ ಹೊಂದಿರಲೇಬೇಕೆಂಬ ನಿಯಮ ಬರಬಹುದು. ಸಮ್ಮೇಳನದಲ್ಲಿ ಕಂಡುಬರುವ ನ್ಯೂನತೆಗಳನ್ನು ಪ್ರಶ್ನಿಸಿದರೆ, ವರದಿ ಮಾಡಿದರೆ ಕ್ರಮ ಕೈಗೊಳ್ಳಲು ಬೇಕಲ್ಲ?

* ಇನ್ನು ಮುಂದೆ ಸಮ್ಮೇಳನದ ವರದಿಗೆ ಬರುವ ಪತ್ರಕರ್ತರೆಲ್ಲ ನಿರ್ಮಲಾ ಅವರಂತೆ ಕ.ಸಾ.ಪ.ದ ಯಾವುದಾದರೊಂದು ಪ್ರಶಸ್ತಿ ಪಡೆದಿರಲೇಬೇಕೆಂಬ ನಿಯಮ ಜಾರಿಯಾಗಬಹುದು. ಪ್ರಶ್ನಿಸಿದರೆ ವಾಪಸ್ ಪಡೆಯಲು ಬೇಕಲ್ಲ?

* ಸಮ್ಮೇಳನಕ್ಕೆ ಬರುವ ಎಲ್ಲ ಕನ್ನಡಾಭಿಮಾನಿಗಳಿಗೂ ಇಂಥದೇ ನಿಯಮಗಳು ಪ್ರತ್ಯಕ್ಷ/ಪರೋಕ್ಷವಾಗಿ ಜಾರಿಯಾಗಬಹುದು. ಶಿಸ್ತು ಕ್ರಮ ಜರುಗಿಸಲು ಬೇಕಲ್ಲ?

ಈ ಮೇಲಿನ ತಕರಾರುಗಳನ್ನು ಸಂಗಮೇಶ ಅವರು ಎತ್ತಿದ್ದಾರೆ.

“ಒಟ್ಟಿನಲ್ಲಿ ಕ.ಸಾ.ಪ. ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧ ದಿಕ್ಕಿನಲ್ಲಿ ಹೊರಟಿರುವ ದಿಟ್ಟ ಸಂಕೇತವಿದು.
ಏನೇ ಇರಲಿ ಮೇಡಂ, ನೀವು ಕ.ಸಾ.ಪ. ಅಧ್ಯಕ್ಷರ ಅಹಂ ಅಷ್ಟೇ ಅಲ್ಲ, ನಿಮ್ಮ ಮಾಜಿ ಮೇಲಧಿಕಾರಿಯ ಅಹಂ ಅನ್ನೂ ಕೆಣಕಿದ್ದೀರಿ. ಇನ್ನೂ ಹುಷಾರಾಗಿ ಇರಬೇಕು. ನಿಮ್ಮೊಂದಿಗೆ ನಮ್ಮಂಥವರು ನೈತಿಕವಾಗಿ ಮಾತ್ರ ಜೊತೆಗಿರಲು ಸಾಧ್ಯ” ಎಂದು ಸಂಗಮೇಶ ಮೆಣಸಿನಕಾಯಿ ಅವರು ನಿರ್ಮಲಾ ಎಲಿಗಾರ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಮುಂದುವರೆದು ಕಸಾಪವನ್ನು ತರಾಟೆಗೆ ತಗೆದುಕೊಂಡಿರುವ ಸಂಗಮೇಶ್ ಅವರು, “ನಿರ್ಮಲಾ ಅವರ ಯಾವ ತಪ್ಪಿಗೆ ಯಾವ ಶಿಕ್ಷೆ ಕೊಡಬೇಕು ಎಂಬ ಪ್ರಾಥಮಿಕ ಜ್ಞಾನವೂ ಕ.ಸಾ.ಪ.ದಲ್ಲಿ ಇದ್ದಂತಿಲ್ಲ. ಅಂತೆಯೇ ಎರಡು ತಿಂಗಳು ತಲೆ ಕೆರೆದುಕೊಂಡು ಆಜೀವ ಸದಸ್ಯತ್ವ ಮತ್ತು ಘೋಷಿತ ಪ್ರಶಸ್ತಿಯಿಂದ ಕೈಬಿಟ್ಟು ಸೇಡು ತೀರಿಸಿಕೊಳ್ಳಲಾಗಿದೆ. ಇದು ಪಕ್ಕಾ ಪುರುಷ ಅಹಂ, ಯಜಮಾನಿಕೆಯ ಬುದ್ಧಿಯೇ ಸರಿ. ಈ ಶಿಕ್ಷೆ ವಿಧಿಸಿರುವ ಕ.ಸಾ.ಪ. ಪದಾಧಿಕಾರಿಗಳಿಗೆ ಒಂದು ಪ್ರಶ್ನೆ. ಸಮ್ಮೇಳನದ ಪೆಂಡಾಲ್ ಹಾಕಲು ಬರುವ ಹುಡುಗ, ‘ಪೆಂಡಾಲ್ ಹಾಕಲು ಸ್ಥಳವೇ ಇಲ್ಲ, ಎಲ್ಲಿ ಹಾಕಲಿ?’ ಅಂತ ಕೇಳಿದರೆ ಅವನ ಆಜೀವ ಸದಸ್ಯತ್ವ ರದ್ದು ಮಾಡ್ತೀರಾ? ಈಗ ಅಂಥದೇ ಕೆಲಸ ಮಾಡಿದ್ದೀರಿ. ಕೂಡಲೇ ಸರಿಯಾಗಿ ಓದಿಕೊಂಡಿರುವ ಒಬ್ಬ ಕಾನೂನು ಸಲಹೆಗಾರನನ್ನು ನೇಮಿಸಿಕೊಳ್ಳಿ” ಎಂದು ಅವರು ಸಲಹೆ ನೀಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...