‘ಎಂಟಿ’ ಎಂದೇ ಖ್ಯಾತರಾಗಿದ್ದ ಜ್ಞಾನಪೀಠ ಪುರಸ್ಕೃತ ಮಲಯಾಳಂ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ ಬುಧವಾರ ಕೋಝಿಕ್ಕೋಡ್ನಲ್ಲಿ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಕಳೆದ ವಾರ ಹೃದಯಾಘಾತಕ್ಕೊಳಗಾಗಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಐದು ದಿನಗಳಿಂದ ಅವರು ಗಂಭೀರ ಸ್ಥಿತಿಯಲ್ಲಿದ್ದರು. ಮಲಯಾಳಂ ಸಾಹಿತ್ಯ ದಿಗ್ಗಜ
ಬುಧವಾರ ಸಂಜೆ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಹಿರಿಯ ಚಿತ್ರ ಸಾಹಿತಿ ‘ಎಂಟಿ’ ಅವರಿಗೆ ಗೌರವ ಸೂಚಕವಾಗಿ ರಾಜ್ಯ ಸರ್ಕಾರ ಎರಡು ದಿನಗಳ ಶೋಕಾಚರಣೆ ಘೋಷಿಸಿದೆ. ಜ್ಞಾನಪೀಠ, ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 3 ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು, 7 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (ಚಿತ್ರಕಥೆಗಾಗಿ 4) 21 ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಅವರಿಗೆ ದಕ್ಕಿವೆ. ಮಲಯಾಳಂ ಸಾಹಿತ್ಯ ದಿಗ್ಗಜ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆಧುನಿಕ ಮಲಯಾಳಂ ಸಾಹಿತ್ಯದಲ್ಲಿ ಬಹುಮುಖ ಬರಹಗಾರರಾದ ಎಂಟಿ ಅವರು ಸುಮಾರು ಹತ್ತು ಕಾದಂಬರಿಗಳು ಮತ್ತು 15 ಕ್ಕೂ ಹೆಚ್ಚು ಸಣ್ಣ ಕಥೆಗಳು ಮತ್ತು ಮಕ್ಕಳ ಸಾಹಿತ್ಯವನ್ನು ಬರೆದಿದ್ದಾರೆ. ಅವರು ಸುಮಾರು 54 ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದಾರೆ ಮತ್ತು ಆರು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಎಂಟಿ ಅವರಿಗೆ 1995 ರಲ್ಲಿ ಜ್ಞಾನಪೀಠ ಮತ್ತು 2005 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಅವರು ನಾಲ್ಕು ಬಾರಿ ಅತ್ಯುತ್ತಮ ಚಿತ್ರಕಥೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಚಲನಚಿತ್ರ ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಗಳಿಗಾಗಿ ಅವರನ್ನು ಇತ್ತೀಚೆಗೆ ಕೇರಳ ಸರ್ಕಾರವು ಗೌರವಿಸಿತ್ತು.
ಪಾಲಕ್ಕಾಡ್ ಜಿಲ್ಲೆಯ ಪಟ್ಟಾಂಬಿ ಸಮೀಪದ ಕೂಡಲ್ಲೂರು ಗ್ರಾಮದಲ್ಲಿ ಜನಿಸಿದ ಎಂಟಿ ರಸಾಯನಶಾಸ್ತ್ರ ಶಾಲೆಯ ಶಿಕ್ಷಕರಾಗಿದ್ದರು. ಅವರು ತಮ್ಮ ಪ್ರಶಸ್ತಿ ವಿಜೇತ ಕೃತಿ ‘ನಾಲುಕೆಟ್ಟು’ ಮೂಲಕ ಬರಹಗಾರರಾಗಿ ಜನಪ್ರಿಯರಾಗಿದ್ದರು. ಈ ಕೃತಿ 1958 ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಭೀಮಸೇನನ ದೃಷ್ಟಿಕೋನದಿಂದ ಮಹಾಭಾರತದ ಕಥೆಯನ್ನು ಮರುಸೃಷ್ಟಿಸಿದ್ದ ‘ರಂಡಾಂ ವಳಂ’ (‘ಎರಡನೇ ತಿರುವು’) ಎಂಟಿಯವರ ವ್ಯಾಪಕ ಮೆಚ್ಚುಗೆ ಪಡೆದ ಕೃತಿಯಾಗಿದೆ. ಈ ಕಾದಂಬರಿಯನ್ನು ಆಧರಿಸಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ದೊಡ್ಡ ಬಜೆಟ್ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದರಾದರೂ, ಎಂಟಿ ಮತ್ತು ಚಲನಚಿತ್ರ ನಿರ್ಮಾಪಕರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಅದು ಸ್ಥಗಿತಗೊಂಡಿತ್ತು.
ಅವರ ‘ಒರು ವಡಕ್ಕನ್ ವೀರಗಾಥ’, ‘ಕಡವು’, ‘ಸದಯಂ’ ಮತ್ತು ‘ಪರಿಣಯಂ’ ಚಿತ್ರಗಳ ಚಿತ್ರಕಥೆಗಳು ಅತ್ಯುತ್ತಮ ಚಿತ್ರಕಥೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿವೆ. ಎಂಟಿ ಅವರು ಮಾತೃಭೂಮಿ ಪ್ರಕಾಶನದ ನಿಯತಕಾಲಿಕಗಳ ವಿಭಾಗದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತ ಎಂಟಿ ಅವರು ಪ್ರಮೀಳಾ ಅವರನ್ನು ಮೊದಲಿಗೆ ಮದುವೆಯಾಗಿದ್ದರು, ನಂತರ ಅವರು ಕಲಾಮಂಡಲಂ ಸರಸ್ವತಿ ಅವರನ್ನು ವಿವಾಹವಾದರು. ಅವರು ಪುತ್ರಿಯರಾದ ಸಿತಾರಾ ಮತ್ತು ಅಶ್ವತಿಯನ್ನೂ ಅವರು ಅಗಲಿದ್ದಾರೆ.
ಇದನ್ನೂ ಓದಿ: ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಚೆನ್ನೈ ಪೊಲೀಸರಿಂದ ತನಿಖೆ
ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಚೆನ್ನೈ ಪೊಲೀಸರಿಂದ ತನಿಖೆ


