Homeಅಂಕಣಗಳುಪ್ರಬುದ್ಧ ಸಮುದಾಯದ ಅಭೂತಪೂರ್ವ ಚಳವಳಿ ಮತ್ತು ಬೇಜವಾಬ್ದಾರಿ ಎಳಸು ಹುಡುಗಿಯ ‘ಅಪಾಯಕಾರಿ ಘೋಷಣೆ’

ಪ್ರಬುದ್ಧ ಸಮುದಾಯದ ಅಭೂತಪೂರ್ವ ಚಳವಳಿ ಮತ್ತು ಬೇಜವಾಬ್ದಾರಿ ಎಳಸು ಹುಡುಗಿಯ ‘ಅಪಾಯಕಾರಿ ಘೋಷಣೆ’

- Advertisement -
- Advertisement -

ಮೂರು ವಾರಗಳ ಹಿಂದೆ ಇದೇ ಪುಟದಲ್ಲಿ ‘ನಿರೀಕ್ಷಿತ ಕೀಳು ಮಟ್ಟದ ನಡವಳಿಕೆ ಮತ್ತು ಅನಿರೀಕ್ಷಿತ ಪ್ರಬುದ್ಧತೆ’ ಎಂಬ ಬರಹವನ್ನು ಬರೆಯಲಾಗಿತ್ತು. ದೆಹಲಿ ಚುನಾವಣೆಯ ಹಿನ್ನೆಲೆಯಲ್ಲಿ ದೊಡ್ಡ ಸ್ಥಾನದಲ್ಲಿರುವವರೇ ಇಲ್ಲಿ ಬಟನ್ ಒತ್ತಿದರೆ ಅಲ್ಲಿ ಷಾಕ್ ಹೊಡೆಯಬೇಕು; ಅಲ್ಲಿ ಧರಣಿ ಕೂತಿರುವವರು ರೇಪ್ ಮಾಡುವವರು ಇತ್ಯಾದಿ ಮಾತುಗಳನ್ನು ಶಹೀನ್‍ಬಾಗ್‍ನ ಧರಣಿಯ ಬಗ್ಗೆ ಆಡಿದ್ದರು. ಅದೇ ಸಂದರ್ಭದಲ್ಲಿ ತಮ್ಮತ್ತ ಗುಂಡು ಹಾರಿಸಿದರೂ ಪ್ರಚೋದನೆಗೊಳಗಾಗದೇ ರಾಷ್ಟ್ರಧ್ವಜ ಹಾಗೂ ಸಂವಿಧಾನ ಹಿಡಿದು ಶಾಂತಿಯುತ ಹೋರಾಟವನ್ನು ದೇಶದೆಲ್ಲೆಡೆ ಮಾಡುತ್ತಿದ್ದ ಸಮುದಾಯದ ಪ್ರಬುದ್ಧತೆ ಎದ್ದು ಕಾಣುತ್ತಿತ್ತು.

ಆದರೆ ಇಂದಿನ ಸಂದರ್ಭ ಇನ್ನೂ ಅಪಾಯಕಾರಿಯಾಗಿ ಪರಿವರ್ತನೆಯಾಗಿದೆ. ಬೆಂಗಳೂರಿನಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚಾಗಿದ್ದ ಸಮಾವೇಶವೊಂದರಲ್ಲಿ ಅಮೂಲ್ಯ ಎಂಬ ಎಳೆಯ ಹುಡುಗಿಯ ಮಾತುಗಳು ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಿದೆ. ‘ಆಕೆ ಏನನ್ನೋ ಹೇಳಲು ಹೊರಟಿದ್ದಳು, ವಿಶ್ವಮಾನವ ಸಂದೇಶ ಸಾರಲು ಹೊರಟಿದ್ದಳು, ಅದನ್ನು ಅರ್ಥ ಮಾಡಿಕೊಳ್ಳಲು ನಾಲ್ಕು ದಿನದ ಹಿಂದಿನ ಆಕೆಯ ಫೇಸ್‍ಬುಕ್ ಪೋಸ್ಟ್ ನೋಡಬೇಕು, ಆಕೆಯ ಮೇಲೆ ದೇಶದ್ರೋಹದ ಕೇಸನ್ನು ದಾಖಲಿಸಿರುವುದೇ ತಪ್ಪು’ ಇವೆಲ್ಲವೂ ನಿಜ. ಆದರೆ ಇಷ್ಟೇ ನಿಜವಲ್ಲ.

ಮೂರು ವಾರಗಳ ಹಿಂದೆ ಬರೆದಂತೆ ದೇಶದ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವು ತೋರಿದ ಪ್ರಬುದ್ಧತೆಯು ಆಳುವವರನ್ನು ಕಂಗಾಲಾಗಿಸಿತ್ತು. ಅದು ತಾನು ಬಳಸಿಕೊಳ್ಳಬಹುದಾದ ಅಸ್ತ್ರವೊಂದನ್ನು ಹುಡುಕುತ್ತಿತ್ತು. ಆ ಅಸ್ತ್ರವನ್ನು ಆ ಸಮುದಾಯ ಕೊಡಲಿಲ್ಲ. ಬದಲಿಗೆ ತಾನಂದುಕೊಂಡಿದ್ದನ್ನು ಹೇಗೆ ಜನರಿಗೆ ತಲುಪಿಸಬೇಕು ಎಂಬುದರ ಕನಿಷ್ಠ ಪ್ರಜ್ಞೆ ಇಲ್ಲದ ಒಂದು ಎಳಸು ಹುಡುಗಿ ತಪ್ಪಾದ ಜಾಗದಲ್ಲಿ ತಪ್ಪಾದ ಮಾತುಗಳನ್ನು ಆಡಿದಳು. ಆ ಮೂಲಕ ಇದನ್ನೇ ಬಯಸುತ್ತಿದ್ದವರಿಗೆ ಅಸ್ತ್ರವನ್ನು ಒದಗಿಸಿದಳು.

ಯಾರು ಇದನ್ನು ಬಯಸುತ್ತಿದ್ದರೋ ಅವರು ಪಾಕಿಸ್ತಾನವನ್ನು ನಿರಂತರವಾಗಿ ಬಳಸಿಕೊಳ್ಳುತ್ತಾ ಬಂದಿರುವವರು. ಪಾಕಿಸ್ತಾನದಲ್ಲಿ ಆಳುವ ಎಲ್ಲರಿಗೂ ಕಾಶ್ಮೀರ ಹಾಗೂ ಭಾರತ ನಿರಂತರವಾಗಿ ರೊಚ್ಚಿಗೆಬ್ಬಿಸುವ ಅಸ್ತ್ರಗಳಾಗಿ ಬಳಕೆಯಾಗುತ್ತಾ ಬಂದಿದೆ. ಇಲ್ಲಿಯೂ ಅಂತಹ ಒಂದು ವರ್ಗವಿದೆ. ಇಲ್ಲಿ ಅಂತಹದ್ದೇನೂ ನಡೆಯದಿದ್ದಲ್ಲಿ ತಾವೇ ಪಾಕಿಸ್ತಾನದ ಧ್ವಜ ಹಾರಿಸುವವರು ಅವರು. ವಿಜಾಪುರ ಜಿಲ್ಲೆಯ ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿ ಸಿಕ್ಕಿಕೊಂಡ ಪರಶುರಾಮ ವಾಘ್ಮೋರೆ ನಂತರ ಗೌರಿ ಲಂಕೇಶರ ಹತ್ಯೆಯ ಪ್ರಮುಖ ಆರೋಪಿಯಾದ ಎಂಬುದನ್ನು ನಾವು ಮರೆಯಲಾಗದು. ಆತ ಶ್ರೀರಾಮಸೇನೆಯವನು ಎಂಬ ಆರೋಪ ಬಂದಾಗ, ಆತ ಆರೆಸ್ಸೆಸ್ಸಿನವನು ಎಂದು ಖಚಿತ ಪಡಿಸಿದ್ದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್!

ಇದರ ಹೊಣೆಯನ್ನು ಯಾರು ಹೊರಬೇಕು? ಅಮೂಲ್ಯಳೂ ಹೊರಬೇಕು. ಅದೇ ರೀತಿಯಲ್ಲಿ ಅಪ್ರಬುದ್ಧವಾಗಿ ಆಲೋಚಿಸುವ, ದೇಶದ ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ನಾವು ಅನುಭವದ ಮಾತನ್ನೂ ಕೇಳಬೇಕು ಎಂಬ ಎಚ್ಚರವಿಲ್ಲದ ಇನ್ನೂ ಹಲವರು ಇದ್ದಾರೆ ಅವರೆಲ್ಲರೂ ಹೊರಬೇಕು. ಆಕೆಗಿರುವ ಎನರ್ಜಿ ಮತ್ತು ಅನ್ಯಾಯವನ್ನು ಯಾವ ರೀತಿಯಿಂದಲಾದರೂ ಪ್ರತಿಭಟಿಸಬೇಕು ಎಂಬ ಉಮೇದನ್ನಷ್ಟೇ ನೋಡಿ, ಬಹಿರಂಗ ಸಭೆಗಳಲ್ಲಿ ಮಾತನಾಡಲು ಪ್ರೇರೇಪಿಸಿದವರೂ ಹೊರಬೇಕು. ಯುವಜನರನ್ನು ಪ್ರೋತ್ಸಾಹಿಸಬೇಕು ಎಂಬುದು ಸರಿಯಾದರೂ, ಗರಿಷ್ಠ ಮಿತಿಗಳನ್ನು ಮೀರುವವರನ್ನು ತಲೆ ಮೇಲೆ ಹೊತ್ತುಕೊಳ್ಳಬಾರದು ಎಂಬುದೂ ಇದರಿಂದ ಕಲಿಯಬೇಕಾದ ಪಾಠವಾಗಿದೆ.

ಅದೇನೇ ಇರಲಿ, ಇದನ್ನು ಬಳಸಿಕೊಂಡು ಇಡೀ ಚಳವಳಿಯನ್ನೇ ದಮನ ಮಾಡಲು ಹೊರಟಿರುವ ಸರ್ಕಾರದ ಹುನ್ನಾರದ ವಿರುದ್ಧ ಎಲ್ಲರೂ ಎದ್ದು ನಿಲ್ಲಬೇಕಿದೆ. ಚಳವಳಿ ಇದುವರೆಗೆ ನಡೆಸಿರುವ ಸಾವಿರಾರು ಕಾರ್ಯಕ್ರಮಗಳಲ್ಲಿ ತೋರಿದ ಪ್ರಬುದ್ಧತೆಯು ಸರ್ಕಾರಕ್ಕೆ ಕಷ್ಟ ತಂದಿತ್ತು ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಚಳವಳಿಯ ಸಂದರ್ಭದಲ್ಲಿ ನಡೆದ ಒಂದು ಬಿಡಿ ಅಪ್ರಬುದ್ಧತೆಯನ್ನು ಇಟ್ಟುಕೊಂಡು ದಮನಕಾಂಡ ಹರಿಬಿಡಲು ಸರ್ಕಾರ ಸಜ್ಜಾಗಿದೆ. ಇದನ್ನು ಈ ಚಳವಳಿ ಹೇಗೆ ಎದುರಿಸುತ್ತದೆ ಎಂಬುದು ಅದರ ಪ್ರಬುದ್ಧತೆಯನ್ನು ಒರೆಗೆ ಹಚ್ಚಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...