ಮೋದಿ ಸರ್ಕಾರ ಭಾರತವನ್ನು ತೊಂದರೆಗಳ ಪ್ರಪಾತಕ್ಕೆ ತಳ್ಳಿದೆ ಆದರೆ ಕೇಂದ್ರ ಸರ್ಕಾರ ಮತ್ತು ಮಾಧ್ಯಮಗಳು ’ಸಬ್ ಚಂಗಾಸಿ’ (ಎಲ್ಲವು ಚೆನ್ನಾಗಿದೆ) ಎಂದು ಹೇಳುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ದ ನಿರಂತರವಾಗಿ ಮಾತನಾಡುತ್ತಿರುವ ರಾಹುಲ್ ಗಾಂಧಿ ಇಂದು ವ್ಯಂಗ್ಯವಾಗಿ ಸರ್ಕಾರ ಮತ್ತು ಮಾಧ್ಯಮಗಳ ವಿರುದ್ದ ದಾಳಿಮಾಡಿದ್ದಾರೆ. “ಕೊರೊನಾ ವಿರುದ್ಧ ಮೋದಿ ಸರ್ಕಾರದ ‘ಯೋಜಿತ ಹೋರಾಟ’ವು ಭಾರತವನ್ನು ತೊಂದರೆಗಳ ಪ್ರಪಾತಕ್ಕೆ ತಳ್ಳಿತು” ಎಂದಿರುವ ರಾಹುಲ್ ಗಾಂಧಿ, ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ.
ಇದನ್ನೂ ಓದಿ: BJP ಗೆಲುವಿಗೆ ಫೇಸ್ಬುಕ್ ಕೆಲಸ: ತನಿಖೆಗೆ ರಾಹುಲ್ ಗಾಂಧಿ ಆಗ್ರಹ
ಜಿಡಿಪಿಯಲ್ಲಿ 24% ಐತಿಹಾಸಿಕ ಇಳಿತ, 12 ಕೋಟಿ ಉದ್ಯೋಗಗಳ ನಷ್ಟ, 15.5 ಲಕ್ಷ ಕೋಟಿ ಹೆಚ್ಚುವರಿ ಸಾಲಗಳು, ಕೊರೊನಾ ಸೋಂಕಿನಿಂದ ವಿಶ್ವದಲ್ಲೇ ಅತ್ಯಂತ ಹೆಚ್ಚು ದೈನಂದಿನ ಸಾವುಗಳು ಎಂಬ ಅಂಶಗಳನ್ನು ಉಲ್ಲೇಖಿಸಿದ ಅವರು, “ಆದರೆ ಕೇಂದ್ರ ಸರ್ಕಾರ ಮತ್ತು ಮಾಧ್ಯಮಗಳು ಮಾತ್ರ ’ಸಬ್ ಚಂಗಾಸಿ’ ಎಂದು ಹೇಳುತ್ತಿದೆ” ಎಂದು ಹೇಳಿದ್ದಾರೆ.
कोविड के ख़िलाफ़ मोदी सरकार की 'सुनियोजित लड़ाई' ने भारत को मुसीबतों की खाई में धकेल दिया:
1. GDP में 24% की ऐतिहासिक कमी
2. 12 करोड़ नौकरियाँ खोयीं
3. 15.5 लाख करोड़ अतिरिक्त तनावग्रस्त क़र्ज़
4. विश्व में कोविड के सर्वाधिक दैनिक केस-मौतेंलेकिन GOI व मीडिया कहें ‘सब चंगा सी’।
— Rahul Gandhi (@RahulGandhi) September 12, 2020
ಕೇಂದ್ರ ಕೊರೊನಾ ಸೋಂಕನ್ನು ನಿರ್ವಹಿಸುತ್ತಿರುವ ರೀತಿಯನ್ನು ರಾಹುಲ್ ಗಾಂಧಿ ನಿರಂತರವಾಗಿ ಟೀಕಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ, “ನಾನು ಫಬ್ರವರಿಯಲ್ಲೇ ಕೊರೊನಾ ಸುನಾಮಿ ರೀತಿ ಬರುತ್ತದೆ, ತಯಾರಾಗಿರಿ ಎಂದು ಹೇಳಿದ್ದೆ, ಆದರೆ ಸರ್ಕಾರ ನನ್ನನ್ನು ತಮಾಷೆ ಮಾಡಿತ್ತು” ಎಂದು ಹೇಳಿದ್ದರು.
मोदी जी सिर्फ़ अपने चंद "मित्रों" की बात सुनते है और उनका विकास करते है।
आज देश का युवा मोदी जी से अपने हक़ का रोज़गार और उज्ज्वल भविष्य माँग रहा है पर मोदी जी चुप हैं। युवाओं की समस्याओं को अनदेखा किया जा रहा है।
#SpeakUpForJobs pic.twitter.com/rY3srei6nP
— Rahul Gandhi (@RahulGandhi) September 10, 2020
ಅಷ್ಟೇ ಅಲ್ಲದೆ ಸೆಪ್ಟೆಂಬರ್ 6 ರಂದು ತನ್ನ ಸರಣಿ ವಿಡಿಯೋ ಕಾರ್ಯಕ್ರಮದಲ್ಲಿ ”ಜಿಎಸ್ಟಿಯ ದೋಷಪೂರಿತ ಅನುಷ್ಠಾನವು ಆರ್ಥಿಕತೆಯನ್ನು ನಾಶಪಡಿಸಿದೆ, ಇದು ಆರ್ಥಿಕತೆಯಲ್ಲಿರುವ ಅಸಂಘಟಿತ ವಲಯಕ್ಕೆ ಎರಡನೇ ದೊಡ್ಡ ಹೊಡೆತವಾಗಿದೆ” ಎಂದು ರಾಹುಲ್ ಆರೋಪಿಸಿದ್ದರು.
ಇದನ್ನೂ ಓದಿ: ದೋಷಪೂರಿತ ಜಿಎಸ್ಟಿ ದೇಶದ ಆರ್ಥಿಕತೆಯನ್ನು ನಾಶಮಾಡಿದೆ: ರಾಹುಲ್ ಗಾಂಧಿ