Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಹೊಲಸು ಚುನಾವಣಾ ಆಯೋಗದ ನೀತಿಗೆ ಇತಿಶ್ರೀ ಹಾಡಬೇಡವೇ? - ಎಚ್.ಎಸ್ ದೊರೆಸ್ವಾಮಿ

ಹೊಲಸು ಚುನಾವಣಾ ಆಯೋಗದ ನೀತಿಗೆ ಇತಿಶ್ರೀ ಹಾಡಬೇಡವೇ? – ಎಚ್.ಎಸ್ ದೊರೆಸ್ವಾಮಿ

ಈ ದುರವಸ್ಥೆಯಿಂದ ಪಾರಾಗಲು ಇರುವುದು ಒಂದೇ ದಾರಿ. ಜನತಾ ಆಂದೋಲನವೊಂದನ್ನು ದೀರ್ಘಾವಧಿ ಹೋರಾಟಕ್ಕೆ ಅಣಿಮಾಡಬೇಕು. ಇದಕ್ಕೆ ಎಲ್ಲ ಸಂಘಟನೆಯವರೂ ಕೈಜೋಡಿಸಬೇಕು.

- Advertisement -
- Advertisement -

ಯಾಕೆ ನಮ್ಮ ಸಾಮಾಜಿಕ ಕಾರ್ಯಕರ್ತರು, ಆಯ್ದ ಕೆಲ ರಾಜಕೀಯ ನಾಯಕರು, ರಾಜಕೀಯ ಸಿದ್ಧಾಂತಿಗಳು, ಕಾರ್ಮಿಕ ಸಂಘಟನೆಗಳು ನಮ್ಮ ದುಷ್ಟ ಚುನಾವಣಾ ಪದ್ಧತಿಯನ್ನು ರದ್ದುಮಾಡಲು ಸರ್ಕಾರದ ಮೇಲೆ, ಚುನಾವಣಾ ಆಯೋಗದ ಮೇಲೆ ಒತ್ತಡ ತರಲು ಮನಸ್ಸು ಮಾಡಿಲ್ಲ? ಅವರಿಗೆಲ್ಲ ಈಗಿನ ಚುನಾವಣಾ ಪದ್ಧತಿ ವಾಕರಿಕೆ ಹುಟ್ಟುಸುತ್ತಿಲ್ಲವೇ? ಎಲ್ಲ ರಾಜಕೀಯ ಪಕ್ಷಗಳೂ ಮತದಾರರನ್ನು ಭ್ರಷ್ಟರನ್ನಾಗಿ ಪರಿವರ್ತಿಸಿರುವುದು ನಿಮಗೆ ತಿಳಿದಿಲ್ಲವೇ? ಪಾರ್ಲಿಮೆಂಟ್ ಸದಸ್ಯರು ಮತ್ತು ಕಾರ್ಪೊರೆಟ್‌ಗಳ ನಡುವೆ ಒಂದು ಅನೈತಿಕ ಸಂಬಂಧ ಇರುವುದು ನಿಮಗೆ ತಿಳಿಯದ ವಿಚಾರವೇ? ಸರ್ಕಾರಗಳಲ್ಲಿ ಪದೇಪದೇ ಹಗರಣಗಳು ನಡೆಯುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಈ ಹಗರಣಗಳನ್ನು ಪದೇಪದೇ ಹೊರಹಾಕುವ ನೀವು ಅದನ್ನು ತಡೆಗಟ್ಟಲು ಚುನಾವಣಾ ಆಯೋಗದ ಮೇಲೆ ಏಕೆ ಒತ್ತಡ ತರುತ್ತಿಲ್ಲ? ಪ್ರತಿಯೊಬ್ಬ ಶಾಸಕ ಮತ್ತು ಪಾರ್ಲಿಮೆಂಟ್ ಸದಸ್ಯ ತಾನು ಚುನಾವಣೆ ವೇಳೆಗೆ ತನ್ನ ಸಂಪತ್ತು ಹಿಂದಿನದಕ್ಕಿಂತ ಶೇಕಡ ನೂರರಿಂದ ಶೇಕಡ ೫೦೦ಪಟ್ಟು ಹೆಚ್ಚಿರುವುದಾಗಿ ಘೋಷಿಸುತ್ತಾನೆ. ಅದು ಯಾವ ಯಾವ ಬಾಬಿತ್ತಿನಿಂದ ಬಂತು ಎಂದು ಚುನಾವಣಾ ಆಯೋಗ ಕೇಳುತ್ತಿಲ್ಲ. ಅದು ಅವರ ಕರ್ತವ್ಯವಲ್ಲವೇ?

ಅಮೀನ್‌ಮಟ್ಟು ಪ್ರಜಾವಾಣಿ ಪತ್ರಿಕೆಯಲ್ಲಿದ್ದಾಗ ಒಂದು ಚುನಾವಣೆಯ ಸಮೀಕ್ಷೆ ನಡೆಸುತ್ತಾರೆ. ಅವರು ಹೇಳುತ್ತಾರೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ಪಾಳೇಗಾರ ಶಾಸಕರ ಸುಪರ್ದಿನಲ್ಲಿದೆ ಎಂದು. ಹುಕ್ಕೇರಿ ಕತ್ತಿ ಸಹೋದರರು, ಗೋಕಾಕಿನ ಜಾರಕಿಹೊಳಿ ಸಹೋದರರು, ಪ್ರಭಾಕರ್ ಕೋರೆ, ಪ್ರಕಾಶ್ ಹುಕ್ಕೇರಿ ಈ ಸಿಂಡಿಕೇಟಿನ ಇತರ ಸದಸ್ಯರು ಎಂಬುದನ್ನು ವರದಿ ಮಾಡಿದ್ದಾರೆ. ಇವರೆಲ್ಲ ತಮ್ಮ ಉದ್ಯಮ ಮತ್ತು ರಾಜಕೀಯ ಸಾಮ್ರಾಜ್ಯ ರಕ್ಷಣೆಗಾಗಿ ರಾಜಕೀಯ ’ಸಿಂಡಿಕೇಟ್ ಕಟ್ಟಿಕೊಂಡಿದ್ದಾರೆ. ಜಾತ್ಯತೀತವಾದ ಪಕ್ಷಾತೀತವಾದದ ಸಿಂಡಿಕೇಟ್ ಇದು. ಈ ಸಿಂಡಿಕೇಟ್ ಯಾವ ದಾಖಲೆಯಲ್ಲೂ ಇಲ್ಲ. ಯಾರ ಕಣ್ಣಿಗೂ ಬೀಳುವುದಿಲ್ಲ. ಗ್ರಾಮಪಂಚಾಯ್ತಿಯಿಂದ ಲೋಕಸಭೆವರೆಗೆ, ಸಹಕಾರಿ ಬ್ಯಾಂಕಿನಿಂದ ಹಾಲಿನ ಸೊಸೈಟಿವರೆಗೆ ನಡೆಯುವ ಎಲ್ಲ ಚುನಾವಣೆಯಲ್ಲೂ ಇವರ ಕೈವಾಡವಿದೆ. ಉಮೇಶ್ ಕತ್ತಿ ಸಹೋದರರು ಕಳೆದ ಐದು ಚುನಾವಣೆಗಳಲ್ಲಿ ಐದು ಬೇರೆ ಬೇರೆ ಪಾರ್ಟಿಗಳಿಂದ ಗೆದ್ದು ಬಂದಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವರ ಹಿಕ್ಮತ್‌ನಿಂದ ಒಟ್ಟು 363 ಕ್ಷೇತ್ರಗಳಲ್ಲಿ 196 ಕ್ಷೇತ್ರಗಳು ಇವರ ಪಾಲಾಗಿದೆ. ಈ ಕ್ಷೇತ್ರಗಳಲ್ಲಿ ಬೇರೆ ಬೇರೆ ಪಕ್ಷಗಳ ಶಾಸಕರಿದ್ದಾರೆ. ತಮ್ಮ ಪಕ್ಷದ ಶಾಸಕರೇ ಇಲ್ಲ. ಈ ಕ್ಷೇತ್ರಗಳಲ್ಲಿ ಪಕ್ಷೇತರರೆಲ್ಲ ಕತ್ತಿಯವರ ಹಸ್ತಕರು.

ರಾಜಕೀಯ ವಿರೋಧಿಗಳನ್ನು ನಿರ್ನಾಮ ಮಾಡುವುದು, ಜನತೆಯ ಪಾಲುಗಾರಿಕೆ ಇರುವ ಎಲ್ಲ ಸಂಸ್ಥೆಗಳ ಮೇಲೆ ನಿಯಂತ್ರಣ, ಪಕ್ಷಾತೀತವಾಗಿ ರಾಜಕೀಯ ನಾಯಕರೊಡನೆ ಹೊಂದಾಣಿಕೆ ಇದು ಇವರ ಹುನ್ನಾರದ ವೈಖರಿ. ಇವರ ಹುನ್ನಾರ ಎಲ್ಲರಿಗೂ ಗೊತ್ತಿದ್ದರೂ ಜನ ಅಸಹಾಯಕರಾಗಿದ್ದಾರೆ. ಈ ಗುಲಾಮಗಿರಿಯಿಂದ ಪಾರಾಗಲು ಜನ ಕುದುರೆ ಏರಿಬರುವ ನಾಯಕನೊಬ್ಬನಿಗಾಗಿ ಕಾಯುತ್ತಿದ್ದಾರೆ ಎನ್ನುತ್ತಾರೆ ಮಟ್ಟು. ರಿಪಬ್ಲಿಕ್ ಆಫ ಬಳ್ಳಾರಿ ಇದ್ದ ಹಾಗೆ ಇವರದೂ ಒಂದು ರಿಪಬ್ಲಿಕ್.

ಇವು ಒಂದು ವರ್ಷದ ಚುನಾವಣೆಯಲ್ಲಿ ಬೆಳಕಿಗೆ ಬಂದಿರುವ ಅಪರಾಧಗಳು. ಇವೆಲ್ಲ ಬೆಂಗಳೂರೊಂದರಲ್ಲಿ ನಡೆದಿರುವವು.
1) ವಾರೆಂಟನ್ನು 597 ಜನರ ಮೇಲೆ ಜಾರಿ ಮಾಡಲಾಯಿತು. ಇದರ ಪೈಕಿ 570 ಬೆಂಗಳೂರು ನಗರ ಜಿಲ್ಲೆಯಲ್ಲಿ.
2) ಎಲೆಕ್ಷನ್ ಕೋಡ್ ನಿರ್ಲಕ್ಷ್ಯ ಮಾಡಿದ್ದಕ್ಕಾಗಿ 1010 ಜನರ ಮೇಲೆ ನಾನ್‌ಬೈಲಬಲ್ ವಾರಂಟ್.
3) 492 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಯಿತು.
5) 3221 ಚೀಲ ಅಕ್ಕಿ, 18 ಚೀಲ ಮೈದಾಹಿಟ್ಟು, 123 ಚೀಲ ತೊಗರಿಬೇಳೆ, 34 ಚೀಲ ಬೆಲ್ಲ, 100 ಪ್ಯಾಕೆಟ್ ಅಡಿಗೆ ಎಣ್ಣೆ: ಇದರ ಅಂದಾಜು ಬೆಲೆ 26.44 ಲಕ್ಷರೂ. ಮಹದೇವಪುರದ ಚುನಾವಣಾ ಕ್ಷೇತ್ರದ ಒಂದು ಗೋಡಾನ್‌ನಲ್ಲಿ ಇವೆಲ್ಲವನ್ನೂ ಇಡಲಾಗಿತ್ತು.
5) 500 ಚೀಲ ಅಕ್ಕಿಯ ಅಂದಾಜು ಬೆಲೆ 5 ಲಕ್ಷ; ಬ್ಯಾಟರಾಯನಪುರ ಚುನಾವಣಾ ಕ್ಷೇತ್ರದ ಒಂದು ತೋಟದಲ್ಲಿ ಇಡಲಾಗಿತ್ತು.

ಕಳೆದ ಚುನಾವಣೆಯ ಸಂದರ್ಭದಲ್ಲಿ 11 ಏಪ್ರಿಲ್ 2019 ರವರೆಗೆ 6.35 ಕೋಟಿ ರೂ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಎರಡು ದಿನನ ಕಾರ್ಯಾಚರಣೆಯಲ್ಲಿ ಟಿ.ನರಸಿಪುರದ ಬಳಿ 5 ಲಕ್ಷ ರೂ, ಬೆಳಗಾವಿಯಲ್ಲಿ 7 ಲಕ್ಷ ರೂ, ಚಿತ್ರದುರ್ಗದ ಬಳಿ 3.5 ಲಕ್ಷ ರೂ, ಅಥಣಿ ತಾಲೂಕಿನಲ್ಲಿ 20 ಲಕ್ಷ ರೂ, ನೇಸರ್ಗಿಯಲ್ಲಿ ಒಂದು ಕೋಟಿ ರೂ, ಬಾಗಲಕೋಟೆಯಲ್ಲಿ 21 ಲಕ್ಷ ರೂ ವಶಪಡಿಸಿಕೊಳ್ಳಲಾಯಿತು. ಬೆಳಗಾವಿಯಲ್ಲಿ ಖೊಟ್ಟಿ ನಂಬರ್ ಪ್ಲೇಟ್ ಹಾಕಿದ್ದ ಕಾರಿನಲ್ಲಿ 1 ಕೋಟಿ ರೂ ಪತ್ತೆಯಾಯಿತು. ಈ ಹಣಕ್ಕೆ ಸಂಬಂಧಪಟ್ಟ ಯಾವುದೇ ದಾಖಲೆ ಅವರಲ್ಲಿರಲಿಲ್ಲ.

ಇದು 2-3ಜಿಲ್ಲೆಗಳಲ್ಲಿ ನಡೆದಿರುವ ಪ್ರಕರಣಗಳು ಇಡೀ ಭಾರತದಲ್ಲಿ ಇಂಥದು ಎಷ್ಟು ಪ್ರಕರಣಗಳು ನಡೆದಿರಬಹುದು. ಈ ಅಪರಾಧಿಗಳಲ್ಲಿ ಯಾರಿಗೂ ಶಿಕ್ಷೆಯಾದ ಸುದ್ದಿ ಹೊರಬಂದೆ ಇಲ್ಲ. 60 ವರ್ಷಗಳಿಂದ ಚುನಾವಣಾ ಆಯೋಗ ಇದನ್ನು ಗಮನಿಸಿಯೇ ಇಲ್ಲ. ಚುನಾವಣೆಯಿಂದ ಚುನಾವಣೆಗೆ ಭ್ರಷ್ಟಾಚಾರ ಹೆಚ್ಚುತ್ತಲೇ ಹೋಗುತ್ತಿದೆ. ಚುನಾವಣಾ ಆಯೋಗ ನಿದ್ರ್ರಾವಸ್ಥೆಯಲ್ಲಿದೆಯೇ, ಮರಣಶಯ್ಯೆಯಲ್ಲಿದೆಯೋ ಗೊತ್ತಿಲ್ಲ. ಜನಪ್ರತಿನಿಧಿಗಳು ಆಡಿದ್ದೇ ಆಟ. ಕರ್ನಾಟಕದಲ್ಲಿ ಹತ್ತಾರು ಸಾವಿರ ಹೋರಾಟ ಸಂಸ್ಥೆಗಳಿದ್ದರೂ ಅವುಗಳಿಗೆ ಚುನಾವಣಾ ಭ್ರಷ್ಟಾಚಾರ ತಾರಕಕ್ಕೇರಿದೆ ಎಂಬ ಆತಂಕವಿಲ್ಲ. ಅಂದ ಮೇಲೆ ಈ ದುಷ್ಟಪದ್ಧತಿ ಮುಂದುವರಿದುಕೊಂಡು ಹೋಗಲಿ ಎಂದು ಹತಾಶರಾಗಿಬಿಟ್ಟಿದ್ದೀರಾ ಎಂದು ಕೇಳಬೇಕಿದೆ.

ಲೋಕಪಾಲ್ ಮಸೂದೆಯಲ್ಲೂ ಚುನಾವಣಾ ಪದ್ಧತಿಯನ್ನು ಶುದ್ಧಗೊಳಿಸುವ ಪ್ರಸ್ತಾಪ ಇಲ್ಲ.
ಅಡ್ವಾನಿ ಮತ್ತು ಇಂದ್ರಜಿತ್ ಗುಪ್ತಾ ಕೂಡಿ ಬರೆದ ಚುನಾವಣಾ ಸುಧಾರಣೆ ವರದಿ ಕಸದ ಬುಟ್ಟಿ ಸೇರಿದೆ. 6 ವರ್ಷ ರಾಜ್ಯಭಾರ ಮಾಡಿದ ಬಿಜೆಪಿಯಾಗಲಿ, ಗೃಹಮಂತ್ರಿಯಾಗಿದ್ದ ಅಡ್ವಾನಿಯಾಗಲಿ ಚುನಾವಣಾ ಸುಧಾರಣೆ ಬಗೆಗೆ ತುಟಿಕ್‌ಪಿಟಕ್ ಎನ್ನಲಿಲ್ಲ.

ಈ ಚುನಾವಣೆಗಳಲ್ಲಿ ಬಡವರು, ಮಧ್ಯಮವರ್ಗದವರು ಉಮೇದುದಾರರಾಗಲು ಸಾಧ್ಯವೇ ಇಲ್ಲ. ಸಂಸತ್‌ನಲ್ಲಿ 1996ರಲ್ಲಿ ಅಪರಾಧ ಮಾಡಿರುವವರ ಸಂಖ್ಯೆ ಶೇ.10 ಇದ್ದದ್ದು 2009ಕ್ಕೆ ಶೇ.30ರಷ್ಟಾಯಿತು. ಈಗ ಬಹುಶಃ ಅದು ಶೇ.50 ಆಗಿರಬಹುದು. ವಾಣಿಜ್ಯ ಸಂಸ್ಥೆಯವರು ಹಾಗೂ ಪಾರ್ಲಿಮೆಂಟ್ ಮತ್ತು ಶಾಸನ ಸಭೆಗಳ ಸದಸ್ಯರ ನಡುವಣ ಹೊಂದಾಣಿಕೆಯಿಂದಾಗಿ ಜನಪ್ರತಿನಿಧಿಗಳ ಆಸ್ತಿ ಚುನಾವಣೆಯಿಂದ ಚುನಾವಣೆಗೆ ನೂರುಪಟ್ಟು ಮತ್ತು ಸಾವಿರಪಟ್ಟು ಹೆಚ್ಚಿದೆ.

ಆದ್ದರಿಂದ ಈ ದುರವಸ್ಥೆಯಿಂದ ಪಾರಾಗಲು ಇರುವುದು ಒಂದೇ ದಾರಿ. ಜನತಾ ಆಂದೋಲನವೊಂದನ್ನು ದೀರ್ಘಾವಧಿ ಹೋರಾಟಕ್ಕೆ ಅಣಿಮಾಡಬೇಕು. ಇದಕ್ಕೆ ಎಲ್ಲ ಸಂಘಟನೆಯವರೂ ಕೈಜೋಡಿಸಬೇಕು.

ಚುನಾವಣಾ ಪದ್ಧತಿಯನ್ನು ಆಮೂಲಾಗ್ರವಾಗಿ ಬದಲಾಯಿಸದೆ ಇದ್ದರೆ ಮುಂದೆ ಕೋಟ್ಯಾಧಿಪತಿಗಳು, ಭ್ರಷ್ಟರು, ಕ್ರಿಮಿನಲ್‌ಗಳು, ಕೊಲೆಗಡುಕರು ಇವರೇ ಆಳಲು ಬರುತ್ತಾರೆ ಎಂಬುದು ತಿಳಿದಿರಲಿ.


ಇದನ್ನೂ ಓದಿ: ಬಹುಜನ ಭಾರತ: ಇತಿಹಾಸದ ಕಟಕಟೆಯಲ್ಲಿ ಅರುಣ್ ಮಿಶ್ರ ಎಂಬ ನ್ಯಾಯಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...