Homeಅಂಕಣಗಳುಚುನಾವಣಾ ಅಕ್ರಮ ತಡೆಯುವ ವಿಧಾನ ಸರಿಯಿದೆಯೇ?

ಚುನಾವಣಾ ಅಕ್ರಮ ತಡೆಯುವ ವಿಧಾನ ಸರಿಯಿದೆಯೇ?

- Advertisement -
- Advertisement -

ಚುನಾವಣಾ ಆಯೋಗ ಪೋಲೀಸ್ ಇಲಾಖೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲವೂ ಚುನಾವಣಾ ಭ್ರಷ್ಟಾಚಾರ ತಡೆಯುವುದರಲ್ಲಿ ಸೋತಿವೆ. ಇಲ್ಲವೇ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗೆ ಸಹಾಯಕವಾಗಿವೆ ಎಂದು ಖಚಿತವಾಗಿ ಹೇಳಬಹುದು.

ನಾನು ನನ್ನ ಅನುಭವದಿಂದ ಈ ಗುರುತರ ಆಪಾದನೆಯನ್ನು ಮಾಡುತ್ತಿದ್ದೇನೆ. ದಿವಂಗತ ಪ್ರಭಾಕರ ರೆಡ್ಡಿ ಮತ್ತು ನಾನು ಕೂಡಿಕೊಂಡು ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಚಿಸಿದ್ದೆವು. ನಾವು ಒಮ್ಮೆ ರಾಜ್ಯದ ಚುನಾವಣಾ ಆಯೋಗದ ಕಚೇರಿ ಮುಂದೆ ಧರಣಿ ನಡೆಸಿದೆವು. ಆ ನಂತರ ಒಂದು ಡಿಮ್ಯಾಂಡ್ ಅವರ ಮುಂದಿಟ್ಟೆವು. ಡಿಮ್ಯಾಂಡ್ ಇದು – ನೀವು ಚುನಾವಣೆ ಸಮಯದಲ್ಲಿ ಇಷ್ಟು ಬ್ಯಾರಲ್ ಮದ್ಯ ಹಿಡಿದೆವು, ಇಷ್ಟು ಕೋಟಿ ಸಾಗಿಸುತ್ತಿದ್ದ ಹಣ ಜಪ್ತಿ ಮಾಡಿದೆವು, ಸೀರೆ-ಪಂಚೆ ಸಾವಿರ ಗಟ್ಟಲೆ ಹಿಡಿದೆವು, ಚಿನ್ನ-ಬೆಳ್ಳಿ ಸಾಮಾನು ಹಿಡಿದೆವು ಎಂದು ಚುನಾವಣೆ ಮುಗಿಯುವವರೆಗೆ ಪತ್ರಿಕೆಗೆ ವರದಿ ಮಾಡುತ್ತೀರಿ. ಆದರೆ ಮುಂದೆ ಹಿಡಿದ ಹಣ, ಮದ್ಯ, ಜವಳಿ, ಚಿನ್ನ-ಬೆಳ್ಳಿ ಸಾಮಾನುಗಳು ಏನಾದವು? ಎಲ್ಲಿ ಹೋದವು, ಹಿಡಿದವರನ್ನು ನ್ಯಾಯಾಲಯದ ಮುಂದೆ ನಿಲ್ಲಿಸಿದಿರಾ? ನೀವು ಹಿಡಿದವರಲ್ಲಿ ಎಷ್ಟು ಜನಕ್ಕೆ ಏನು ಶಿಕ್ಷೆಯಾಗಿದೆ? ಯಾವುದನ್ನೂ ನೀವು ಪ್ರಕಟಿಸುವುದಿಲ್ಲ. ಹಿಡಿದ ಎಲ್ಲ ಹಣ, ಮದ್ಯ ಇತರ ಸಾಮಗ್ರಿಗಳು ನಿಮ್ಮ ಮನೆಗಳಲ್ಲಿದೆಯೇ? ಖಜಾನೆಯಲ್ಲಿದೆಯೇ? ನ್ಯಾಯಾಲಯದ ವಶದಲ್ಲಿದೆಯೇ? ಪೋಲೀಸ್ ಠಾಣೆಗಳಲ್ಲಿದೆಯೇ? ಒಂದೂ ಗೊತ್ತಾಗುವುದಿಲ್ಲ. ಆದ್ದರಿಂದ ಪ್ರತಿ ಒಂದು ಸಾರಿ ಸಾರ್ವತ್ರಿಕ ಚುನಾವಣೆಗಳು ನಡೆದಾಗಲೂ ಈ ಕುರಿತು ಒಂದು ಶ್ವೇತ ಪತ್ರ ಹೊರಡಿಸಿ ಎಂದು ಪಟ್ಟು ಹಿಡಿದೆವು.

ಚುನಾವಣಾ ಕಚೇರಿಯವರು ಚುನಾವಣಾ ಸಂದರ್ಭದಲ್ಲಿ ಹಿಡಿಯಲಾದ ಎಲ್ಲವನ್ನೂ ನಾವು ಪೋಲೀಸರ ವಶಕ್ಕೆ ಕೊಡುತ್ತೇವೆ. ಅವರೇ ಕೇಸುಗಳನ್ನು ಹಾಕುತ್ತಾರೆ. ನಾನು ಎಲ್ಲಾ ಎಸ್‌ಪಿಗಳಿಗೆ ಪತ್ರ ಬರೆದು ನಿಮಗೆ ನೀವು ಕೇಳಿರುವ ಎಲ್ಲಾ ವಿವರಗಳನ್ನು ಕೊಡಲು ತಿಳಿಸುತ್ತೇನೆ ಎಂದು ಹೇಳಿ ಜವಾಬ್ದಾರಿಯಿಂದ ಜಾರಿಕೊಂಡರು. ನಾಲ್ಕಾರು ತಿಂಗಳ ಮೇಲೆ ನಮಗೆ ಎರಡು ಜಿಲ್ಲೆಗಳ ಎಸ್‌ಪಿಗಳಿಂದ ‘ನಮ್ಮ ಜಿಲ್ಲೆಯಲ್ಲಿ ಇಂತಹ ಪ್ರಸಂಗಗಳು ನಡೆದೇ ಇಲ್ಲ’ ಎಂಬ ಉತ್ತರ ಬಂದಿತ್ತು. ಉಳಿದ ಜಿಲ್ಲೆಗಳ ಯಾವ ಎಸ್‌ಪಿಯೂ ಉತ್ತರ ನೀಡುವ ಗೋಜಿಗೆ ಹೋಗಲಿಲ್ಲ. ಪೋಲೀಸ್ ವರಿಷ್ಠರ ಕಚೇರಿಗೆ ಹೋಗಿ ಅವರಿಗೆ ಎಸ್‌ಪಿಗಳ ಬೇಜವಬ್ದಾರಿಯುತ ಮೌನದ ಬಗೆಗೆ ತಿಳಿಸಿದೆವು.

ಮಾತುಕತೆಯೆಲ್ಲ ಆದಮೇಲೆ ಅವರು ತಿಳಿಸಿದ್ದು ಹೀಗೆ;- ‘ಚುನಾವಣೆಯ ಸಂದರ್ಭದಲ್ಲಿ ವಶಪಡಿಸಿಕೊಳ್ಳುವ ಎಲ್ಲಾ ಹಣವನ್ನು ಖಜಾನೆಗೆ ಕಟ್ಟಲಾಗುತ್ತದೆ, ಮದ್ಯವನ್ನು ನಾಶ ಮಾಡಲಾಗುತ್ತದೆ. ಆದರೆ ಇತರ ವಸ್ತುಗಳ ಬಗೆಗೆ ನಮಗೆ ಮಾಹಿತಿ ಇಲ್ಲ’ ಎಂದರು. ಜಪ್ತಿಯಾದ ಉಳಿಕೆ ಸಾಮಾನುಗಳು ಏನಾದವು? ಅದನ್ನು ಹೊಂದಿದ್ದವರ ಮೇಲೆ ಖಟ್ಲೆ ಹೂಡಲಾಯಿತೆ? ಅವರಿಗೆ ಶಿಕ್ಷೆ ಆಯಿತೆ? ಅವರು ಯಾವ ಅಭ್ಯರ್ಥಿಗಾಗಿ ಹಣ ತೆಗೆದುಕೊಂಡು ಹೋಗುತ್ತಿದ್ದರು? ಅಭ್ಯರ್ಥಿಯನ್ನು ನ್ಯಾಯಾಲಯದ ಮುಂದೆ ನಿಲ್ಲಿಸಲಾಯಿತೆ? ಅವರಿಗಾದ ಶಿಕ್ಷೆ ಏನು? ಇದರ ಮಾಹಿತಿಯನ್ನು ಯಾರೂ ಒದಗಿಸಲಿಲ್ಲ.

ಅಂದರೆ ಚುನಾವಣೆಯ ಸಂದರ್ಭದಲ್ಲಿ ಯಾವತ್ತೂ ನಡೆಯುವ ಪ್ರಹಸನ ಇದು. ಚುನಾವಣಾ ಆಯೋಗ ಚುನಾವಣೆಯ ಸಂದರ್ಭದಲ್ಲಿ ನಡೆಯುವ ದುರ್ವ್ಯವಹಾರಗಳನ್ನು ತಡೆಗಟ್ಟುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕೆ? ಚುನಾವಣಾ ಆಯೋಗಕ್ಕೆ, ಪೋಲಿಸರಿಗೆ, ಚುನಾವಣಾಧಿಕಾರಿಗಳಿಗೆ ನಿಜವಾಗಿ ಚುನಾವಣೆಯನ್ನು ಪರಿಶುದ್ಧಗೊಳಿಸಬೇಕೆಂಬ ಕಾತರವಿದ್ದಿದ್ದರೆ ಅವರು ಇಷ್ಟು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರಲಿಲ್ಲ. ಚುನಾವಣೆಯನ್ನು ಸುಧಾರಿಸಬೇಕೆಂಬ ಉತ್ಕಟೇಚ್ಛೆ ಇವರಿಗೆಲ್ಲ ಇದ್ದಿದ್ದರೆ ಈ ಎಲ್ಲಾ ಬಗೆಯ ಭ್ರಷ್ಟಾಚಾರವನ್ನು ತಡೆಗಟ್ಟಲು ಅವರು ಆದ್ಯತೆ ನೀಡುತ್ತಿದ್ದರು. ಅವರೆಲ್ಲ ಕಾಟಾಚಾರಕ್ಕೆ, ಜನರ ಕಣ್ಣಿಗೆ ಮಣ್ಣೆರಚುವುದಕ್ಕೆ ಕಾಟಾಚಾರದ ತಪಾಸಣೆ ಮಾಡುತ್ತಾರೆ. ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಹಾಗೂ ಪೋಲೀಸರ ಬೇಜವಾಬ್ದಾರಿತನ ಒಂದು ವರವಾಗಿ ಪರಿಣಮಿಸಿದೆ.

ನಾನು ಈ ಬಗೆಗೆ ಚುನಾವಣಾ ಆಯೋಗಕ್ಕೆ, ಒಂದು ಪತ್ರ ಬರೆದಿದ್ದೆ. ಅವರು ಆ ಪತ್ರಕ್ಕೆ ಉತ್ತರ ನೀಡುವ ಸೌಜನ್ಯವನ್ನು ತೋರಲಿಲ್ಲ.

ಚುನಾವಣಾ ಪದ್ದತಿಯಲ್ಲಿ ರೂಢಮೂಲ ಬದಲಾವಣೆಗಳನ್ನು ತರಬೇಕೆಂದು ನ್ಯಾ.ತಾರ್ಕುಂಡೆಯವರು ಮೊದಲುಗೊಂಡು ನೂರಾರು ಮಂದಿ ಸಲಹೆಗಳನ್ನು ನೀಡಿದ್ದಾರೆ. ಚುನಾವಣೆಯಲ್ಲಿ ಸುಧಾರಣೆ ಚುನಾವಣಾ ಆಯೋಗಕ್ಕೂ ಬೇಕಾಗಿಲ್ಲ, ಸರ್ಕಾರಕ್ಕೂ ಬೇಕಾಗಿಲ್ಲ. ಪಾರ್ಲಿಮೆಂಟ್ ಸದಸ್ಯರಿಗೆ ಈ ಸುಧಾರಣೆ ಆದರೆ ತಮಗೆ ಅಸ್ತಿತ್ವವಿಲ್ಲದೆ ಹೋಗುವುದೆಂಬ ಭಯವಿರುವುದರಿಂದ ಅವರು ಮೌನವನ್ನವಲಂಬಿಸುತ್ತಾರೆ.

ಶೇಷನ್ ಚುನಾವಣಾ ಆಯೋಗದ ಅಧ್ಯಕ್ಷರಾಗಿದ್ದಾಗ ಈಗ ಇರುವ ಕಾಯ್ದೆಗಳನ್ನೇ ಬಳಸಿಕೊಂಡು ಚುನಾವಣೆಯ ಅನೇಕ ಅಕ್ರಮಗಳನ್ನು ತಡೆದರು. ಪಾರ್ಲಿಮೆಂಟ್ ಸದಸ್ಯರಿಗೆ ಸರ್ಕಾರಗಳಿಗೆ ನಡುಕ ಹುಟ್ಟಿಸಿದ್ದರು. ಶೇಷನ್‌ರವರಾದ ಮೇಲೆ ಅಧಿಕಾರಕ್ಕೆ ಬಂದ ಯಾವ ಚುನಾವಣಾ ಆಯೋಗದ ಸದಸ್ಯರಿಗೂ ಶೇಷನ್‌ರವರ ಗಟ್ಸ್ ಇಲ್ಲವಾದ್ದರಿಂದ ಬದಲಾಗಿದ್ದ ಚುನಾವಣಾ ಪದ್ಧತಿ, ರಿವರ್ಸ್ಗೇರ್ ಹೊಡೆಯಿತು. ಅಪ್ಪ ಹಾಕಿದ ಆಲದಮರಕ್ಕೇ ನೇಣು ಹಾಕಿಕೊಳ್ಳುತ್ತಿದ್ದಾರೆ, ಶೇಷನ್ ನಂತರ ಬಂದ ಚುನಾವಣಾ ಆಯೋಗದ ಸದಸ್ಯರು.

ಸರ್ಕಾರ ನಡೆಸುವವರು ಯಾವ ಪಕ್ಷದವರಾದರೂ ಸರಿಯೇ ಚುನಾವಣೆಗೆ ಸ್ವಲ್ಪ ಮೊದಲು ತಮ್ಮ ಮಾತನ್ನು ಕೇಳುವ ಎಸ್‌ಪಿಗಳನ್ನು, ಜಿಲ್ಲಾಧಿಕಾರಿಗಳನ್ನು ತಮಗೆ ಬೇಕಾದ ಜಿಲ್ಲೆಗೆ ವರ್ಗಾಯಿಸುತ್ತಾರೆ. ಮುಖ್ಯವಾಗಿ ಎಸ್‌ಪಿಯ ಜವಾಬ್ದಾರಿ ಅವರ ಅಧೀನದ ಎಲ್ಲಾ ಠಾಣೆಗಳಿಗೂ ಫರ್ಮಾನು ನೀಡುವುದು. ಇಷ್ಟನೇ ನಂಬರ್ ಕಾರು ಅಥವಾ ಟ್ಯಾಕ್ಸಿ ನಮ್ಮ ಜಿಲ್ಲೆಗೆ ಬಂದರೆ ಅದರ ತಂಟೆಗೆ ಹೋಗಬಾರದು. ಚುನಾವಣೆ ಸಮಯದಲ್ಲಿ ಅವರು ಹಣ ತರಲಿ, ಏನೇ ತರಲಿ ಅದರ ತನಿಖೆ ಮಾಡಬಾರದು.

ಟ್ಯಾಕ್ಸಿಯಲ್ಲಿ ಮೈಸೂರಿಗೆ ಹೋಗುವಾಗ ಆ ಟ್ಯಾಕ್ಸಿ ಡ್ರೈವರ್ ತನ್ನ ಘನಂದಾರಿ ಕೆಲಸ ಕುರಿತು ನನಗೆ ಹೇಳಿದ ನನ್ನ ಹತ್ತಿರ ಹಣ ಕೊಟ್ಟು ಕಳಿಸುತ್ತಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲೂ ನನ್ನನ್ನು ತಡೆದು ಕಾರು ತಪಾಸಣೆ ಮಾಡುವ ಕೆಲಸ ನಡೆಯುವುದಿಲ್ಲ. ಅಲ್ಲಿಗೆ ಚುನಾವಣೆಗೆ ಸ್ವಲ್ಪ ಮೊದಲು ವರ್ಗಾವಣೆಯಾಗಿರುವಾಗ ಎಸ್‌ಪಿ ಎಲ್ಲಾ ಠಾಣೆಗಳಿಗೂ ನನ್ನ ಟ್ಯಾಕ್ಸಿ ಹಿಡಿಯದಂತೆ ತಾಕೀತು ಮಾಡಿರುತ್ತಾರೆ. ನಾನು ಆ ಸಂದರ್ಭದಲ್ಲಿ ನಾಲ್ಕಾರು ಸಲ ಜಿಲ್ಲಾ ಕೇಂದ್ರಗಳಿಗೆ ಹಣ ತೆಗೆದುಕೊಂಡು ಹೋಗಿ ತಲುಪಿಸಬೇಕಾಗುತ್ತದೆ ಎಂದು ಹೆಮ್ಮೆಯಿಂದ ಹೇಳಿದೆ.

ಈ ಲೇಖನ ಬರೆದ ಉದ್ದೇಶ ಇಷ್ಟೇ;- ಪ್ರತಿ ಒಂದು ಸಾರ್ವತ್ರಿಕ ಚುನಾವಣೆ ನಡೆದ ಒಂದು ವರ್ಷದ ಒಳಗೆ ಚುನಾವಣಾ ಆಯೋಗ ಒಂದು ಶ್ವೇತ ಪತ್ರ ಹೊರಡಿಸಿ ಅದನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಆ ಶ್ವೇತ ಪತ್ರದಲ್ಲಿ ಆ ವರ್ಷ ನಡೆದ ಚುನಾವಣೆ ಸಂದರ್ಭದಲ್ಲಿ ಆಗಿರುವ ಹಣಕಾಸಿನ ಇತರೆ ಸಾಮಗ್ರಿಗಳ ಸಾಗಾಣಿಕೆಯ ದಂಧೆಯಲ್ಲಿ ಸಿಕ್ಕಿಬಿದ್ದವರು ಯಾರು? ಯಾವ ಅಭ್ಯರ್ಥಿಗಾಗಿ ಆ ಹಣ ಸಾಗಾಣಿಕೆಯಾಯಿತು. ಅವರಿಗೆ ಶಿಕ್ಷೆ ಆಯಿತೇ ಮುಂತಾದ ವಿವರಗಳನ್ನು ಪ್ರಕಟಿಸಬೇಕು. ಮತದಾರರಿಗೆ ಇದು ಗೊತ್ತಾದರೆ ಅವರು ಜಾಗೃತರಾಗುತ್ತಾರೆ. ಚುನಾವಣೆಗೆ ನಿಲ್ಲುವ ಕ್ರಿಮಿನಲ್‌ಗಳ ಸಂಖ್ಯೆ ಇಳಿಮುಖವಾಗುತ್ತದೆ. ಚುನಾವಣಾ ಆಯೋಗ ಇದರ ಜೊತೆ ಜೊತೆಗೇ ಚುನಾವಣಾ ಪದ್ಧತಿಯಲ್ಲಿ ರೂಢಮೂಲ ಬದಲಾವಣೆ ಮಾಡಿದರೆ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...